ಭಾನುವಾರ, ಫೆಬ್ರವರಿ 19, 2023

ಐಎಎಸ್‌, ಕೆಎಸ್‌ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಪ್ರಚಲಿತ ವಿದ್ಯಮಾನ ‘ಭಾಷಿಣಿ’– ಕೃತಕ ಬುದ್ಧಿಮತ್ತೆ ಆಧಾರಿತ ಭಾಷಾಂತರ ವೇದಿಕೆ ಕುರಿತ ಮಾಹಿತಿ ಇಲ್ಲಿದೆ.

ಗುಜರಾತಿನ ಗಾಂಧಿನಗರದಲ್ಲಿ ಕಳೆದ ವರ್ಷ ನಡೆದ ‘ಡಿಜಿಟಲ್ ಇಂಡಿಯಾ ಸಪ್ತಾಹ 2022’ ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಡಿಜಿಟಲ್ ಇಂಡಿಯಾ ಭಾಷಿಣಿ’ ಯನ್ನು ಉದ್ಘಾಟಿಸಿದರು.

ಡಿಜಿಟಲ್ ಇಂಡಿಯಾ ಭಾಷಿಣಿ

ಇದು ಭಾರತೀಯ ಭಾಷೆಗಳಲ್ಲಿ ಜ್ಞಾನ ಹಂಚುವಿಕೆಯ ಡಿಜಿಟಲ್ ಭಾಷಾಂತರ ವೇದಿಕೆ. ಇದು ಇಂಟರ್ನೆಟ್ ಮತ್ತು ಡಿಜಿಟಲ್ ಸೇವೆಗಳಿಗೆ ಎಲ್ಲಾ ಭಾರತೀಯ ಭಾಷೆಗಳಲ್ಲಿ ಸುಲಭ ಪ್ರವೇಶಾವಕಾಶ ನೀಡುತ್ತದೆ. ಅಲ್ಲದೇ, ಧ್ವನಿ ಆಧಾರದಲ್ಲಿಯೂ ಮಾಹಿತಿಯನ್ನು ಗ್ರಹಿಸುತ್ತದೆ. ಈ‌ ಮೂಲಕ ಬಹುತೇಕ ಎಲ್ಲಾ ಭಾರತೀಯ ಭಾಷೆಗಳಲ್ಲಿ ಮಾಹಿತಿ ಹಂಚಿಕೆ ಮತ್ತು ಬರಹ ಕಾರ್ಯಗಳನ್ನು ಸುಲಭವಾಗಿಸಲು ಪ್ರಯತ್ನಿಸುತ್ತದೆ.

ಭಾಷಿಣಿ (ಭಾಷಾ ಇಂಟರ್ಫೇಸ್ ಫಾರ್ ಇಂಡಿಯಾ)

* ಡಿಜಿಟಲ್ ಇಂಡಿಯಾ ಭಾಷಿಣಿ, ಭಾರತದ ಕೃತಕ ಬುದ್ಧಿಮತ್ತೆ ಆಧಾರಿತ ಭಾಷಾಂತರ ವೇದಿಕೆ. ಇದು ‘ಭಾಷಾದಾನ್’ ಎಂಬ (ಜನರಿಂದಲೇ ಜ್ಞಾನವನ್ನು ಕ್ರೋಡೀಕರಿಸುವ ಮೂಲಕ ಅದನ್ನು ಬೆಳೆಸುವುದು) ಉಪಕ್ರಮದ ಮೂಲಕ ಬಹುಭಾಷೆಗಳ ಡೇಟಾಗಳ ಸೆಟ್‌ಗಳನ್ನು ನಿರ್ಮಿಸಲು ಭಾರತದ ನಾಗರಿಕರ ತೊಡಗಿಸಿಕೊಳ್ಳುವಿಕೆಯನ್ನು ಸಕ್ರಿಯಗೊಳಿಸುತ್ತದೆ.

* ಇದು ರಾಷ್ಟ್ರೀಯ ಭಾಷಾ ಅನುವಾದ ಮಿಷನ್‌ನ ಒಂದು ಭಾಗವಾಗಿದ್ದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ರೂಪಿಸಿದ ಉಪಕ್ರಮವಾಗಿದೆ.

ಡಿಜಿಟಲ್ ಇಂಡಿಯಾ ಭಾಷಿಣಿಯ ಗುರಿ: ಈ ಯೋಜನೆಯು ಭಾರತೀಯ ನಾಗರಿಕರನ್ನು ಅವರ ಮಾತೃಭಾಷೆ ಅಥವಾ ಆಡುಭಾಷೆಗಳಲ್ಲಿ ದೇಶದ ಡಿಜಿಟಲ್ ಜಗತ್ತಿಗೆ ಸಂಪರ್ಕಿಸುವುದು. ಈ ಮೂಲಕ ಅವರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ಇದು ಜನಸಾಮಾನ್ಯರು ಸುಲಭವಾಗಿ ಡಿಜಿಟಲ್ ಲೋಕ ಪ್ರವೇಶಿಸಲು ಕಾರಣವಾಗುತ್ತದೆ.

ಭಾಷಿಣಿ ವೇದಿಕೆ ಒಂದು ಸಂಪೂರ್ಣ ಡಿಜಿಟಲ್ ಪರಿಸರ ವ್ಯವಸ್ಥೆಯಾಗಿ ರೂಪುಗೊಂಡು, ಸರ್ಕಾರವನ್ನು ಡಿಜಿಟಲೀಕರಣಗೊಳಿಸುವತ್ತಲೂ ಒಂದು ಬೃಹತ್ ಹೆಜ್ಜೆಯಾಗಿದೆ.

ಕೃತಕ ಬುದ್ಧಿಮತ್ತೆ ಮತ್ತು ಇತರ ಉದಯೋನ್ಮುಖ ತಂತ್ರಜ್ಞಾನಗಳ ಶಕ್ತಿ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ಮೂಲಕ ಈ ವೇದಿಕೆಯು ನಾಗರಿಕರಿಗೆ ಎಲ್ಲಾ ರೀತಿಯ ಸೇವೆಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಮಾತ್ರವಲ್ಲ, ಭಾರತದ ಎಲ್ಲಾ ಭಾಷೆಗಳಿಗೆ ಅನ್ವಯವಾಗುವಂತೆ ರಾಷ್ಟ್ರೀಯ ಸಾರ್ವಜನಿಕ ಡಿಜಿಟಲ್ ವೇದಿಕೆ ನಿರ್ಮಿಸುವ ಗುರಿಯನ್ನೂ ಭಾಷಿಣಿ ಹೊಂದಿದೆ.

ಭಾಷಿಣಿಯು ಸಾರ್ವಜನಿಕರ ಆಸಕ್ತಿಗೆ ಪೂರಕವಾಗಿ, ಆಡಳಿತ ಮತ್ತು ನೀತಿ, ವಿಜ್ಞಾನ ಮತ್ತು ತಂತ್ರಜ್ಞಾನ ಮುಂತಾದ ನಿರ್ದಿಷ್ಟ ವಿಷಯಗಳ ಬಗೆಗಿನ ಸಾಕಷ್ಟು ಮಾಹಿತಿಗಳನ್ನು, ಎಲ್ಲಾ ಭಾರತೀಯ ಭಾಷೆಗಳಲ್ಲಿ ಅಂತರ್ಜಾಲದಲ್ಲಿ ಲಭ್ಯವಾಗಿಸುವ ಗುರಿ ಹೊಂದಿದೆ. ಈ‌ ಮೂಲಕ ನಾಗರಿಕರು ತಮ್ಮ ಮಾತೃಭಾಷೆಯಲ್ಲಿ ಇಂಟರ್ನೆಟ್ ಬಳಸಲು ಭಾಷಿಣಿ ಉತ್ತೇಜಿಸುತ್ತದೆ.


ಪ್ರಮುಖ ಅಂಶಗಳು:

* ಉದ್ಯಮವಲಯ, ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಸ್ಟಾರ್ಟ್ ಅಪ್ ಗಳಿಗೆ ತಮ್ಮ ಎಲ್ಲಾ ಕೊಡುಗೆಗಳನ್ನು ‘ಭಾಷಿಣಿ ವೇದಿಕೆ’ಯೊಳಗೆ ತರುವಂತೆ ದೊಡ್ಡ ನೆಟ್‌ವರ್ಕ್‌ ಅನ್ನು ರೂಪಿಸಲು ಭಾಷಿಣಿಯು ಸರ್ಕಾರವನ್ನು ಪ್ರೇರೇಪಿಸುತ್ತದೆ.

* ಯಾವುದೇ ಜ್ಞಾನಾಧಾರಿತ ವಿಷಯಗಳಿಗೆ ಸಾರ್ವತ್ರಿಕ ಪ್ರವೇಶ ಒದಗಿಸಲು ಭಾಷಿಣಿ ರಾಷ್ಟ್ರೀಯ ಡಿಜಿಟಲ್ ಸಾರ್ವಜನಿಕ ವೇದಿಕೆಯನ್ನು ಅಭಿವೃದ್ಧಿಪಡಿಸುತ್ತದೆ. ಈ ಮೂಲಕ ಜ್ಞಾನ ಆಧಾರಿತ ಸಮಾಜದ ಸೃಷ್ಟಿಗೆ ಕಾರಣವಾಗುತ್ತದೆ. ಇಲ್ಲಿ ಮಾಹಿತಿಯು ಮುಕ್ತ ಮತ್ತು ಸುಲಭವಾಗಿ ಲಭ್ಯವಿರುತ್ತದೆ.

* ನಾಗರಿಕರಿಗೆ ಬಳಸಲು ಸುಲಭವಾಗುವ ರೀತಿಯಲ್ಲಿ‌ ಈ ವೇದಿಕೆ ರೂಪಿಸಲಾಗಿದೆ. ಜನ ಸಮೂಹಕ್ಕೆ ಈ ವೇದಿಕೆಯ ಮೂಲಕ ಅವರ ಇಷ್ಟದ ಭಾಷೆಗಳಿಗೆ ಕೊಡುಗೆ ನೀಡಲು ಭಾಷಿಣಿಯು ಪ್ರೇರೇಪಿಸುತ್ತದೆ. ಸಾಮಾನ್ಯ ನಾಗರಿಕರು ಈ ಉಪಕ್ರಮದ ಪ್ರಧಾನ ಫಲಾನುಭವಿಗಳಾಗುತ್ತಾರೆ.

* ಭಾಷಣಿಯು ಸಂಪನ್ಮೂಲಗಳನ್ನು ಬಳಸುವ ಹೊಸ ಅಪ್ಲಿಕೇಶನ್‌ಗಳನ್ನು ರಚಿಸಲು ಸ್ಟಾರ್ಟ್‌ ಅಪ್‌ ಗಳನ್ನು ಪ್ರೋತ್ಸಾಹಿಸುತ್ತದೆ.

ಚಿತ್ರ ಕೃಪೆ:bhashini.gov.in

ಭಾಷಾದಾನ್:

* ಭಾಷಾದಾನ್ ಎನ್ನುವುದು ಭಾಷಿಣಿ ಯೋಜನೆಯ ಭಾಗವಾಗಿ ಭಾರತದ ಜನಸಮೂಹ ನಿರ್ಮಿತ ಭಾಷೆಗಳ ಬೆಳವಣಿಗೆಯ ನಿಟ್ಟಿನಲ್ಲಿ ಹೊರತಂದ ಉಪಕ್ರಮ. ವ್ಯಕ್ತಿಯು ತನ್ನ ಸ್ವಂತ ಭಾಷೆಯನ್ನು ಡಿಜಿಟಲ್ ರೂಪದಲ್ಲಿ ಉತ್ಕೃಷ್ಟಗೊಳಿಸಲು, ದತ್ತಾಂಶದ ಮುಕ್ತ ಭಂಡಾರ ನಿರ್ಮಾಣಕ್ಕೆ ಸಹಾಯ ಮಾಡಲು ನಾಗರಿಕರನ್ನು ಆಹ್ವಾನಿಸುತ್ತದೆ.

* ಭಾರತೀಯ ಭಾಷೆಗಳಲ್ಲಿ ದೊಡ್ಡ ಡೇಟಾ ಸೆಟ್‌(ಸಮಗ್ರ ಮಾಹಿತಿ ಭಂಡಾರ)ಗಳನ್ನು ರಚಿಸುವುದು ಇದರ ಗುರಿಯಾಗಿದೆ. ಈ ಮೂಲಕ ಸಮಾಜವನ್ನು ಇನ್ನಷ್ಟು ಉತ್ತಮಗೊಳಿಸುವ ಸಲುವಾಗಿ ಉತ್ಪನ್ನಗಳು ಅಥವಾ ಸೇವೆಗಳನ್ನು ರಚಿಸಲು ಕೃತಕ ಬುದ್ಧಿಮತ್ತೆಯ ಮಾದರಿಗಳಿಗೆ (AI Mode*s) ತರಬೇತಿ ನೀಡಲು ಈ ಮಾಹಿತಿಗಳನ್ನು ಬಳಸಬಹುದು. ಈ ವೇದಿಕೆಗೆ ಯಾವುದೇ ಸಾಮಾನ್ಯ ವ್ಯಕ್ತಿಗಳೂ ಕೊಡುಗೆ ನೀಡಬಹುದು.

ಭಾಷಾದಾನ್ ವರ್ಗಗಳು:

ಸುನೊ ಇಂಡಿಯಾ: ಯಾವುದೇ ವ್ಯಕ್ತಿ ತಾನು ಆಲಿಸಿದ ಆಡಿಯೊಗಳನ್ನು ಬರಹರೂಪಕ್ಕಿಳಿಸುವ ಮೂಲಕ ಅಥವಾ ಇತರರು ಬರೆದಿರುವ ಪಠ್ಯವನ್ನು ಮೌಲ್ಯೀಕರಿಸುವ ಮೂಲಕ ತಮ್ಮ ಭಾಷೆಯನ್ನು ಮತ್ತಷ್ಟು ಶ್ರೀಮಂತ ಗೊಳಿಸಬಹುದು.

ಬೋಲೊ ಇಂಡಿಯಾ: ಬರೆದಿರುವ ವಾಕ್ಯಗಳನ್ನು ಧ್ವನಿರೂಪದಲ್ಲಿ ಮುದ್ರಿಸುವ ಮೂಲಕ ಆ ಭಾಷೆಯನ್ನು ತನ್ನದೇ ಆದ ಉಚ್ಛಾರಣಾ ರೀತಿಯೊಂದಿಗೆ (Accent)ಬಳಸುವುದು ಹೇಗೆಂದು ತಿಳಿಸಿ ತನ್ನ ಭಾಷೆಯನ್ನು ಶ್ರೀಮಂತ ಗೊಳಿಸಬಹುದು. ಅದಾಗಲೇ ರೆಕಾರ್ಡ್ ಮಾಡಿದ ಆಡಿಯೊಗಳನ್ನೂ ಮತ್ತಷ್ಟು ಮೌಲ್ಯೀಕರಿಸಬಹುದು.

ಲಿಖೊ ಇಂಡಿಯಾ: ಇರುವ ಪಠ್ಯವನ್ನು ತಮ್ಮ ಭಾಷೆಗಳಿಗೆ ಅನುವಾದಿಸುವ ಮೂಲಕ ತಮ್ಮ ಕೊಡುಗೆಗಳನ್ನು ನೀಡಬಹುದು ಮತ್ತು ಬೇರೆಯವರ ಭಾಷಾಂತರಗಳನ್ನು ಕೂಡಾ ಮೌಲ್ಯೀಕರಿಸಬಹುದು.

ದೇಖೊ ಇಂಡಿಯಾ: ನೋಡಿದ ಪಠ್ಯವನ್ನು ಟೈಪ್ ಮಾಡುವ ಮೂಲಕ ಅಥವಾ ಅದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಅಂಟಿಸುವ ಮೂಲಕ ಭಾಷೆಯನ್ನು ಶ್ರೀಮಂತ ಗೊಳಿಸಬಹುದು ಅಥವಾ ಚಿತ್ರವಿದ್ದರೆ ಅದಕ್ಕೆ ಹೆಸರು‌ ನೀಡಬಹುದು. ಇತರರು ಕೊಡುಗೆ ನೀಡಿದ ಚಿತ್ರಗಳನ್ನು ಸಹ ಮೌಲ್ಯೀಕರಿಸಬಹುದು.

ಭಾನುವಾರ, ಫೆಬ್ರವರಿ 12, 2023

ಮಾಧ್ಯಮಗಳು ಸಮಾಜ ರಕ್ಷಕರಾಗಲಿ: ಟೈಮ್ಸ್ ಸಾಹಿತ್ಯ ಉತ್ಸವದಲ್ಲಿ ಸಮೀರ್‌ಜೈನ್ ಅಭಿಮತ


samir jain10


Times Litfest-ಮಾಧ್ಯಮಗಳು ಸಮಾಜ ರಕ್ಷಕರಾಗಲಿ: ಟೈಮ್ಸ್ ಸಾಹಿತ್ಯ ಉತ್ಸವದಲ್ಲಿ ಸಮೀರ್‌ಜೈನ್ ಅಭಿಮತ

Edited by Ganesh Prasad Kumble | Vijaya Karnataka Web | Updated: 11 Feb 2023, 11:36 pm

ಮಾಧ್ಯಮಗಳು ಕೇವಲ ಕಾವಲುನಾಯಿಗಳಾಗಿದ್ದರಷ್ಟೇ ಸಾಲದು, ಅವು ಸಮಾಜ ರಕ್ಷಕರಾಗಿಯೂ ಕಾರ್ಯ ನಿರ್ವಹಿಸಬೇಕಿದೆ ಎಂದು ಟೈಮ್ಸ್ ಗ್ರೂಪ್ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಜೈನ್ ಅಭಿಪ್ರಾಯಪಟ್ಟಿದ್ದಾರೆ. ದಿಲ್ಲಿಯಲ್ಲಿ ನಡೆಯುತ್ತಿರುವ 7ನೇ ಟೈಮ್ಸ್ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಅವರು‘‘ನಾಯಿಯನ್ನು ಮನುಷ್ಯನ ಆತ್ಮೀಯ ಸ್ನೇಹಿತ ಎಂದು ಜನ ನಂಬಿದ್ದಾರೆ. ಹಾಗಂದು ಮಾಧ್ಯಮಗಳು ಕೇವಲ ಬೊಗಳುವ ನಾಯಿ ಆಗಿರಬಾರದು. ರಚನಾತ್ಮಕ ಕೆಲಸ ಮಾಡುವ ಮೂಲಕ ಪತ್ರಿಕೆ ಓದುವ ಜನರಲ್ಲಿ ಹೊಸ ಚಿಂತನೆ ಮೂಡಿಸುವಂತಿರಬೇಕು, ಓದುಗರಲ್ಲಿ ಸಂತೋಷದ ಭಾವನೆ ಉಂಟು ಮಾಡುವಂತಿರಬೇಕು ಎಂದು ಸಲಹೆ ನೀಡಿದ್ದಾರೆ.

 
samir jain10
ಸಮೀರ್ ಜೈನ್

ಹೈಲೈಟ್ಸ್‌:

  • ದಿಲ್ಲಿಯಲ್ಲಿ ನಡೆಯುತ್ತಿರುವ 7ನೇ ಟೈಮ್ಸ್ ಸಾಹಿತ್ಯ ಉತ್ಸವದಲ್ಲಿ ವಿದ್ಯಾರ್ಥಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಸಮೀರ್ ಜೈನ್
  • ಮಾಧ್ಯಮಗಳೇ ಕಾವಲುನಾಯಿಗಳಾಗಿದ್ದರಷ್ಟೇ ಸಾಲುವುದಿಲ್ಲ, ಅವು ಸಮಾಜ ರಕ್ಷಕರಾಗಿಯೂ ಕಾರ್ಯ ನಿರ್ವಹಿಸಬೇಕಿದೆ ಎಂದು ಅಭಿಪ್ರಾಯ
  • ಪತ್ರಿಕೆಗಳು ರಚನಾತ್ಮಕ ಕಾರ್ಯಗಳ ಮೂಲಕ ಓದುರಲ್ಲಿ ಹೊಸ ಚಿಂತನೆ ಮೂಡಿಸುವಂತಿರಬೇಕು, ಓದುಗರಲ್ಲಿ ಸಂತೋಷದ ಭಾವನೆ ಉಂಟು ಮಾಡುವಂತಿರಬೇಕು ಎಂದು ಸಲಹೆ
ಹೊಸದಿಲ್ಲಿ: ‘‘ಪ್ರಸ್ತುತ ದಿನಗಳಲ್ಲಿ ಮಾಧ್ಯಮಗಳು ಕೇವಲ ಕಾವಲುನಾಯಿ (ವಾಚ್‌ಡಾಗ್)ಗಳಾಗಿದ್ದರಷ್ಟೇ ಸಾಲದು, ಅವು ಸಮಾಜ ರಕ್ಷಕರ (ವಾಚ್‌ಗಾಡ್) ಪಾತ್ರವನ್ನೂ ನಿರ್ವಹಿಸಬೇಕಿದೆ,’’ ಎಂದು ಟೈಮ್ಸ್ ಗ್ರೂಪ್ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ (ವಿಸಿಎಂಡಿ) ಸಮೀರ್ ಜೈನ್ ಅಭಿಪ್ರಾಯಪಟ್ಟಿದ್ದಾರೆ.

ದಿಲ್ಲಿಯಲ್ಲಿ ಶನಿವಾರ ಆರಂಭವಾದ 7ನೇ ಟೈಮ್ಸ್ ಸಾಹಿತ್ಯ ಉತ್ಸವದಲ್ಲಿ ವಿದ್ಯಾರ್ಥಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಸಮೀರ್ ಜೈನ್,‘‘ಶ್ವಾನವನ್ನು ಮಾನವನ ಆತ್ಮೀಯ ಸ್ನೇಹಿತ ಎಂದು ಜನ ನಂಬಿದ್ದಾರೆ. ಹಾಗಂತ ಮಾಧ್ಯಮಗಳು ಕೇವಲ ಬೊಗಳುವ ನಾಯಿಯಾಗಿರಬಾರದು. ಕೇವಲ ಟೀಕೆ ಟಿಪ್ಪಣಿ ಮಾಡದೇ ರಚನಾತ್ಮಕ ಕೆಲಸ ಮಾಡುವ ಮೂಲಕ ಪತ್ರಿಕೆ ಓದುವ ಜನರಲ್ಲಿ ಹೊಸ ಚಿಂತನೆ ಮೂಡಿಸುವಂತಿರಬೇಕು, ಆ ಮೂಲಕ ಓದುಗರಲ್ಲಿ ಸಂತೋಷದ ಭಾವನೆ ಉಂಟು ಮಾಡುವಂತಿರಬೇಕು,’’ ಎಂದು ಹೇಳಿದರು.

ವಿಶ್ವವಿದ್ಯಾಲಯಗಳ ಕುರಿತು ಪ್ರಸ್ತಾಪಿಸಿದ ಅವರು, ‘‘ವಿಶ್ವವಿದ್ಯಾಲಯಗಳು ಉದ್ಯೋಗ ಅರಸುವ ವಿದ್ಯಾರ್ಥಿಗಳನ್ನು ಸೃಷ್ಟಿಸುತ್ತಿವೆಯೇ ಹೊರತು ಅವರಲ್ಲಿ ತಾಂತ್ರಿಕ ಅಥವಾ ವೃತ್ತಿ ಕೌಶಲ್ಯ ತುಂಬುತ್ತಿಲ್ಲ. ವಿದ್ಯಾರ್ಥಿಗಳನ್ನು ಏಕ ಆಯಾಮದ ವ್ಯಕಿತ್ವ ಹೊಂದಿರುವ ವ್ಯಕ್ತಿಗಳಾಗಿ ಮಾತ್ರ ರೂಪಿಸುತ್ತಿವೆ,’’ ಎಂದು ವಿಷಾದಿಸಿದರು.

Times Litfest-ಯುವ ಓದುಗರಿಗೆ ಆಧ್ಯಾತ್ಮಿಕತೆ ಮಿಳಿತಗೊಂಡಿರುವ ಸಾಹಿತ್ಯ ಪಠ್ಯಗಳನ್ನು ಪರಿಚಯಿಸಬೇಕಿದೆ: ಟೈಮ್ಸ್ ಸಮೂಹದ ಉಪಾಧ್ಯಕ್ಷ ಸಮೀರ್ ಜೈನ್
ಟೈಮ್ಸ್ ಸಾಹಿತ್ಯೋತ್ಸವದ ಮೂಲಕ ನಾವು ಸಾಹಿತ್ಯವನ್ನು ಕೋಟ್ಯಂತರ ಜನರ ಬಳಿ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದೇವೆ. ಕಾರಣ ಪುಸ್ತಕಗಳನ್ನು ಕೋಟಿಗಟ್ಟಲೆ ಜನ ಓದಲಾರರು. ಅವುಗಳಲ್ಲಿನ ಸಾರಾಂಶವನ್ನು ಪತ್ರಿಕಾ ಸಾಹಿತ್ಯದ ಮೂಲಕ ಎಲ್ಲರಿಗೂ ತಲುಪಿಸಲು ಸಾಧ್ಯ ಸಮೀರ್ ಜೈನ್ ತಿಳಿಸಿದರು.

ಟೈಮ್ಸ್ ಫೆಸ್ಟ್ ಗೆ ಚಾಲನೆ ನೀಡಿದ ಅಶ್ನಿನಿ ವೈಷ್ಣವ್

ಉತ್ತಮ ಸಾಹಿತ್ಯ ಹಾಗೂ ಸಾಹಿತ್ಯದೊಂದಿಗೆ ಗುರುತಿಸಿಕೊಂಡ ಮಹನೀಯರ ವಿಚಾರಧಾರೆಗಳೊಂದಿಗೆ ದಿಲ್ಲಿಯಲ್ಲಿ ಟೈಮ್ಸ್ ಸಾಹಿತ್ಯೋತ್ಸವ ಶನಿವಾರ ಚಾಲನೆ ಪಡೆಯಿತು.

ಕೇಂದ್ರ ಎಲೆಕ್ಟ್ರಾನಿಕ್ಸ್ , ತಂತ್ರಜ್ಞಾನ, ಸಂಚಾರ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ವಿದ್ಯಾರ್ಥಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ‘‘ವಿದ್ಯಾರ್ಥಿಗಳು ವಿಜ್ಞಾನದೊಂದಿಗೆ ಸಾಹಿತ್ಯದ ಆಸಕ್ತಿಯನ್ನೂ ಬೆಳೆಸಿಕೊಳ್ಳಬೇಕು,’’ ಎಂದು ಕರೆ ನೀಡಿದರು.
ವಂದೇ ಭಾರತ್ ರೈಲನ್ನು ಉದಾಹರಿಸಿದ ಸಚಿವರು, ‘‘ಯುವ ಪೀಳಿಗೆ ಭವಿಷ್ಯದಲ್ಲಿ ಸಂಪೂರ್ಣ ಅಭಿವೃದ್ಧಿಗೊಂಡ ದೇಶದಲ್ಲಿ ವಾಸಿಸುವ ಅವಕಾಶ ಲಭಿಸುವ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ,’’ ಎಂದರು.

Times Litfest
ಟೈಮ್ಸ್ ಗ್ರುಪ್ ಬಿಸಿನೆಸ್ ವಿಭಾಗದ ಮುಖ್ಯಸ್ಥ ಸಿ.ಕೆ. ಶರ್ಮಾ ಮಾತನಾಡಿ, ‘‘ಟೈಮ್ಸ್ ಸಾಹಿತ್ಯೋತ್ಸವ ಒಂದು ಆರಂಭಿಕ ಹಂತವಾಗಿದೆ. ಸಾಹಿತ್ಯ ಎಂಬುದು ಮಾನವನ ರಚನಾತ್ಮಕತೆಯ ಭಾವ. ‘ಒಂದು ಜಗತ್ತು, ಹಲವು ಶಬ್ದಗಳು’ ಎಂಬುದು ಈ ಬಾರಿಯ ಸಾಹಿತ್ಯೋತ್ಸವದ ಘೋಷವಾಕ್ಯವಾಗಿದೆ. ಹಲವು ಯೋಚನೆಗಳು, ಆಸಕ್ತಿಗಳು, ವಿಚಾರಗಳು, ಸವಾಲುಗಳು ಸೇರಿ ಸಂವಾದವಾಗುತ್ತದೆ ಎಂದರಲ್ಲದೆ ಸಾಹಿತ್ಯ ವಾಸ್ತವಿಕತೆಯಲ್ಲಿ ಲೀನವಾಗುತ್ತದೆ’’, ಎಂದು ಹೇಳಿದರು.
ಸಚಿವ ಅಶ್ವಿನಿಕುಮಾರ್ ವೈಷ್ಣವ್, ಸಮೀರ್ ಜೈನ್, ಟೈಮ್ಸ್ ಗ್ರೂಪ್ ನಿರ್ದೇಶಕರಾದ ಅತುಲ್ ಜೈನ್ ಅವರು ಟೈಮ್ಸ್ ಸಾಹಿತ್ಯೋತ್ಸವದ ಲೊಗೊ ಅನಾವರಣಗೊಳಿಸಿದರು.

ಉತ್ಸವದ ಮೊದಲ ದಿನದ ಮೊದಲ ಗೋಷ್ಠಿಯಲ್ಲಿ ‘ವೈ ಫಿಯರ್ ಎ ಧಾರ್ಮಿಕ್ ನೇಶನ್?’ ಕುರಿತು ಆರ್. ಜಗನ್ನಾಥ್, ಅಶ್ವಿನ್ ಸಾಂಘಿ, ಪವನ್ ವರ್ಮಾ, ಸುಧೀಂದ್ರ ಕುಲಕರ್ಣಿ ಮಾತನಾಡಿದರು. ‘ಈಸ್ ದಿಸ್ ಎ ಗುಡ್ ಟೈಮ್ ಬಿ ಕ್ಲೀಯರ್ ಇನ್ ಇಂಡಿಯಾ’, ‘ಹೌ ಮಚ್ ಮೈಥಾಲಜಿ ಈಸ್ ಪಾರ್ಟ್ ಆಫ್ ಹಿಸ್ಟರಿ’, ‘ಚೇಂಜಿಂಗ್ ಫೇಸ್ ಆಫ್ ಬುಕ್ಸ್’ ಇತ್ಯಾದಿ ವಿಷಯಗಳ ಕುರಿತು ಚರ್ಚೆಗಳು ನಡೆದವು. ಶಿವ ಖೋಡಾ ಅವರು ‘ಯೂ ಕ್ಯಾನ್ ಅಚೀವ್ ಮೋರ್’ ಕುರಿತು, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ‘ವೈ ಕಾಶ್ಮೀರ್ ಫೈಲ್ ಮ್ಯಾಟರ್ಸ್‌’ ಕುರಿತು ಮಾತನಾಡಿದರು.