ಶುಕ್ರವಾರ, ಮಾರ್ಚ್ 31, 2017

ಚೋಮನದುಡಿ ಕಥೆಯ ಸಾರಾಂಶ

ಕಥೆಯ ಸಾರಾಂಶ:
ಚೋಮ ಮತ್ತು ಅವನ ಕುಟುಂಬ ಭೋಗನ ಹಳ್ಳಿಯಲ್ಲಿ ನೆಲೆಸಿರುತ್ತಾರೆ. ಅವನ ಮಕ್ಕಳು ಚನಿಯ, ಗುರುವ, ಕಾಳ, ನೀಲ ಮತ್ತು ಬೆಳ್ಳಿ.. ಚೋಮನಿಗೆ ಬಹಳ ಇಷ್ಟವಾದ ವಸ್ತುಗಳು ಎರಡು, ಒಂದು ದುಡಿ ಮತ್ತೊಂದು ಸೇಂದಿ(ಹೆಂಡ). ಇವೆರಡೂ ಇಲ್ಲದೆ ಅವನಿಗೆ ಜೀವನ ನಡೆಸಲು ಬಹಳ ಕಷ್ಟ. ಅವನು ಜೀವನದಲ್ಲಿ ನೊಂದಾಗ ದುಡಿಯನ್ನು ಬಾರಿಸಿ ತನ್ನ ನೋವನ್ನು ನೀಗಿಕೊಳ್ಳುವನು. ಚೋಮನ ಹೆಂಡತಿ ಈಗಾಗಲೆ ತೀರಿಕೊಂಡಿರುತ್ತಾಳೆ. ಚೋಮ ಸಂಕಪ್ಪಯ್ಯನವರ ಬಳಿ ಕೆಲಸ ಮಾಡುತ್ತಿರುವುದಾಗಿಯೂ ಹಾಗೂ ಮಕ್ಕಳು ಹೊರೆ-ಸೊಪ್ಪನ್ನು ತರುವುದರಿಂದಾಗಿಯೂ ಅವರಿಗೆ ಎರಡು ಪಾವು ಅಕ್ಕಿ ಮತ್ತು ಐದು ಪಾವು ಭತ್ತ ದೊರೆಯುತ್ತಿರುತ್ತದೆ. ಮನೆಯಲ್ಲಿ ಬಾಡು ಎಂಬ ನಾಯಿಯೂ ಇರುತ್ತದೆ. ಹೀಗೆ ಎಲ್ಲ ಕಷ್ಟಗಳ ನಡುವೆ ಅವರು ಜೀವನ ನಡೆಸುತ್ತಿರುತ್ತಾರೆ.
ಮನುಷ್ಯನಿಗೆ ಆಸೆ ಅನ್ನುವುದು ಸಹಜ. ಚೋಮನಿಗೂ ಹೀಗೊಂದು ಆಸೆ ಇತ್ತು. ಅದು ಆತ ಬೇಸಾಯಗಾರನಾಗಬೇಕೆಂದು. ಅವನ ಬಳಿ ಎರಡು ಎತ್ತುಗಳೂ ಸಹ ಇದ್ದವು. ಆದರೆ ಕಡು ಬಡತನದಿಂದಾಗಿ ಅವನ ಬಳಿ ಬೇಸಾಯಕ್ಕಾಗಿ ಇದ್ದ ತುಂಡು ಭೂಮಿಯನ್ನು ಸಂಕಪ್ಪಯ್ಯನ ಬಳಿ ಅಡ ಇಟ್ಟಿರುತ್ತಾನೆ. ಸಾಲ ತೀರಿಸಿ ಭೂಮಿಯನ್ನು ಮತ್ತೆ ಪಡೆಯಲು ಸಂಕಪ್ಪ ಯ್ಯನ ಬಳಿಯೇ ಜೀತಗಾರನಾಗಿ ಸೇರಿಕೊಂಡಿರುತ್ತಾನೆ. ಆ ದಿನಗಳಲ್ಲಿ ಕೀಳು ಜಾತಿಗೆ ಸೇರಿದವರು ವ್ಯವಸಾಯ ಮಾಡುವುದನ್ನು ನಿಷೇಧಿಸಿದ್ದರು. ಆದರೆ ಅವನಿಗಿದ್ದ ಬಲವಾದ ಆಸೆಯಿಂದ ಹಲವಾರು ಕಷ್ಟಗಳ ನಡುವೆಯೂ ಜೀವನ ನಡೆಸುತ್ತಿದ್ದ.
ಚೋಮ ಬಹಳ ವರ್ಷಗಳ ಹಿಂದೆ ಕಾಫಿ ತೋಟದಲ್ಲಿ ಕೆಲಸ ಮಾಡಲು ಹೋಗಿರುತ್ತಾನೆ. ಆಗ ಆತ ಮಾಡಿದ್ದ ೪-೫.ರೂ ಸಲ ಈಗ ೨೦.ರೂ ಆಗಿದೆ ಎಂದು ಅದಕ್ಕಾಗಿ ಅವನನ್ನು ಅರಸುತ್ತಾ ತೋಟದ ದೊರೆಗಳು ಕಳುಹಿಸಿ ಕೊಟ್ಟಿದ್ದ ಮನ್ವೇಲ ಸಾಹೇಬ ಬರುತ್ತಾನೆ. ತೋಟಗಳಲ್ಲಿ ಕೆಲಸ ಮಾಡುವುದು ಸುಲಭವಲ್ಲ, ಎಷ್ಟೇ ಬೆವರು ಸುರಿಸಿದರೂ ಅವರ ಕೈಗೆ ಹಣ ಬರುವುದು ಆಣೆಗಳ ರೂಪದಲ್ಲಿ ಮಾತ್ರ. ಅದಕ್ಕಾಗಿ ಅವರು ಮಾಡುವ ಸಾಲ ಎಂದಿಗೂ ತೀರುವಂತಿಲ್ಲ.
ಹೀಗಿರುವಾಗ ವಿಧಿ ಇಲ್ಲದೆ ತನ್ನ ಇಬ್ಬರು ಮಕ್ಕಳಾದ ಚನಿಯ ಮತ್ತು ಗುರುವನನ್ನು ತೋಟದ ಕೆಲಸಕ್ಕೆಂದು ಕಳುಹಿಸಿಕೊಡಲು ನಿರ್ಣಯಿಸುತ್ತಾನೆ. ಅವರು ಅಲ್ಲಿಗೆ ಹೋಗಲು ಬಹಳಷ್ಟು ತೊಂದರೆಗಳ್ನ್ನು ಅನುಭವಿಸಬೇಕಾಗುತ್ತದೆ. ಅಲ್ಲಿಗೆ ಹೋಗಿಯೂ ಸಹ ಅವರು ನಾನಾ �
[31/03 11:01 pm] ‪+91 96860 19177‬: ಅನುಭವಿಸಬೇಕಾಗುತ್ತದೆ. ಅಲ್ಲಿಗೆ ಹೋಗಿಯೂ ಸಹ ಅವರು ನಾನಾ ವಿಧವಾದ ಕಷ್ಟಗಳನ್ನು ಅನುಭವಿಸುತ್ತಾರೆ. ಇತ್ತ ಚೋಮ ಮತ್ತು ಇತರರಿಗೂ ಅವರನ್ನು ಬಿಟ್ಟು ಇರುವ ಮನಸ್ಸಿಲ್ಲ. ಅಲ್ಲಿಗೆ ಹೋದ ಅವರು ತಮ್ಮ ಸಹ ಆಳುಗಳ ಜೊತೆ ಸೇರಿ ಅವರ ಅಪ್ಪನಂತೆಯೆ ಹೆಂಡ ಕುಡಿಯುವುದನ್ನೂ ಕಲಿಯುತ್ತಾರೆ. ಹೆಂಡಕ್ಕೆ ದಾಸರಾಗಿ ಅವರು ದುಡಿಯುವ ಹಣವನ್ನು ಅದಕ್ಕಾಗಿ ಸುರಿಯಲು ಪ್ರಾರಂಭಿಸುವರು. ಹೀಗಾಗಿ ಅಪ್ಪನ ಸಾಲ ತೀರಿಸಲು ಹೋಗಿ ಇನ್ನೂ ಹೆಚ್ಚಿನ ಸಲ ಮಾಡುವಂತಾಯಿತು. ಇದೆಲ್ಲ ಸಾಲದಂತೆ ಗುರುವ ಅಲ್ಲಿ ಮಾರಿ ಎಂಬ ಹುಡುಗಿಯನ್ನು ಇಷ್ಟ ಪಡುತ್ತಾನೆ. ಆ ಹುಡುಗಿ ಇಗರ್ಜಿಯವಳು. ಆದರೆ ಇತ್ತ ಚೋಮ ತನ್ನ ಮಕ್ಕಳು ತನ್ನ ಸಾಲ ತೀರಿಸಲು ಹೋಗಿದ್ದಾರೆ, ಅವರನ್ನು ಒಂದು ಮನೆಯವರನ್ನಾಗಿ ಮಾಡಬೇಕೆಂದು ಕನಸು ಕಾಣುತ್ತಿರುತ್ತಾನೆ.
ಕಾಫಿ ತೋಟದಲ್ಲಿ ನಡೆಯುತ್ತಿರುವ ವಿಷಯವನ್ನು ತಿಳಿಯದ ಚೋಮ ಧನಿಗಳ ಬಳಿ ಕೆಲಸಕ್ಕೆ ಹೋಗುವಾಗ ತನಗೊಂದು ಸಣ್ಣ ಭೂಮಿಯನ್ನು ಕೊಡುವಂತೆ ಕೇಳಿಕೊಳ್ಳುತ್ತಾನೆ. ಆದರೆ ಧಣಿಗಳು ಒಪ್ಪಿದರೂ, ಧಣಿಗಳ ವಯಸ್ಸಾದ ತಾಯಿ ಅದಕ್ಕೆ ಒಪ್ಪುವುದಿಲ್ಲ. ಅವರಿಗೆ ಕೊಡುವ ಮನಸ್ಸಿದ್ದರೂ ಅವರ ತಾಯಿಯ ಮನಸ್ಸನ್ನು ನೋಯಿಸಲು ಇಷ್ಟ ಪಡದೆ ಚೋಮನಿಗೆ ಭೂಮಿ ಕೊಡಲು ನಿರಾಕರಿಸಿ ಬಿಡುತ್ತಾನೆ. ಅವರ ಪ್ರಕಾರ ಕೆಳ ವರ್ಗದ ಜನರು ವ್ಯವಸಾಯ ಮಾಡುವಂತಿಲ್ಲ. ಅದು ಹಿಂದಿನಿಂದಲೂ ಬಂದಿರುವ ಆಚಾರವಂತೆ. ಕೀಳು ವರ್ಗದವರು ವ್ಯವಸಾಯ ಮಾಡಿದರೆ ಮೇಲ್ವರ್ಗದವರಿಗೆ ಅವಮಾನವಲ್ಲವೇ? ಎಂಬುದು ಆಕೆಯ ವಾದವಾಗಿತ್ತು. ಹೀಗಾಗಿ ಸಂಕಪ್ಪಯ್ಯನವರಿಗೆ ಇಷ್ಟವಿದ್ದರೂ ತಾಯಿಯ ಮಾತು ಮೀರುವಂತಿರಲ್ಲಿಲ್ಲ. ಇದನ್ನೆಲ್ಲಾ ಕೇಳಿದ ಚೋಮನ ಮನಸ್ಸ್ಸು ನೋವಿನಿಂದ ತುಂಬಿತ್ತು. ಆ ದಿನವೆಲ್ಲಾ ತನ್ನ ಧಣಿಯ ಹೊಲವನ್ನು ಎತ್ತುಗಳನ್ನು ಹೊಡೆಯುತ್ತಾ ಸಮ ಮಾಡುತ್ತಾನೆ.
[31/03 11:01 pm] ‪+91 96860 19177‬: ಇಷ್ಟು ಹೊತ್ತಿಗಾಗಲೆ ಗುರುವ ಮಾರಿಯ ಪ್ರೇಮಲೋಕದಲ್ಲಿ ತೇಲಿಯಾಡುತಿದ್ದ. ವರ್ಷಕ್ಕೊಮ್ಮೆ ಬರುವ ಜಾತ್ರೆಗಾಗಿ ಹುಡುಗರಿಬ್ಬರೂ ವಾಪಸ್ ಊರಿಗೆ ತೆರಳ ಬೇಕಿತ್ತು. ಆದರೆ ಗುರುವ ಮಾರಿಯವರ ಕುಟುಂಬದೊಂದಿಗೆ ಪರಾರಿಯಾದ ಕಾರಣ, ಚನಿಯನು ಮಾತ್ರ ಊರಿಗೆ ಹೊರಟು ಬಂದ. ಎಲ್ಲರೂ ಜಾತ್ರೆಯ ಸಂಭ್ರಮದಲ್ಲಿದ್ದರೆ ಚೋಮನ ಮನಸ್ಸಿನಲ್ಲಿ ಕಾರ್ಕತ್ತಲೇ ಮೂಡಿತ್ತು. ಅವರ್ಯಾರಿಗೂ ಜಾತ್ರೆಯ ಸಂತಸವಿರಲಿಲ್ಲ. ಇದ್ದ ಕಷ್ಟಗಳು ಸಾಲದೆಂಬಂತೆ, ಚನಿಯನು ಆ ಬೆಟ್ಟ ಪ್ರದೇಶದಲ್ಲಿದ್ದೂ, ಅನಾರೋಗ್ಯಕ್ಕೆ ಒಳಗಾಗ ಬೇಕಾಯಿತು. ಬೆಳ್ಳಿಯು ಎಷ್ಟೇ ಪ್ರಯತ್ನಿಸಿದರೂ ಅವಳಿಂದ ಅದು ಸಾಧ್ಯವಾಗಲಿಲ್ಲ. ಕೊನೆಗೂ ಚನಿಯನು ಅನಾರೋಗ್ಯದ ಕಾರಣದಿಂದಾಗಿ ಸಾಯುವ ಪರಿಸ್ಥಿತಿ ಬಂತು. ಒಂದೇ ಸಮನೆ ದುಃಖದ ಮಹಾಪೂರವನ್ನೇ ಚೋಮನ ಕುಟುಂಬ ಅನುಭವಿಸಬೇಕಾಯಿತು. ಒಂದೇ ಕಾಲದಲ್ಲಿ ಎರಡೂ ಮಕ್ಕಳನ್ನು ಕಳೆದುಕೊಂಡ ಚೋಮನು ದುಡಿಯನ್ನು ಬಾರಿಸುವುದನ್ನಲ್ಲದೆ ಬೇರೆ ಏನನ್ನೂ ಮಾಡಲು ಸಾಧ್ಯವಾಗಲ್ಲಿಲ್ಲ. ಹೀಗಿರುವಾಗಲೇ ಧನಿಗಳು ಚೋಮನನ್ನು ಮಳೆಗಾಲ ಬಂದಿದೆ ನನಗೆ ನಿನ್ನ ಎತ್ತುಗಳನ್ನು ಮಾರಿಬಿಡು ಎಂದರು. ಇದರಿಂದ ಮತ್ತಷ್ಟು ಸಿಟ್ಟಿಗೇರಿದ ಚೋಮ ಚೆನ್ನಾಗಿ ಹೆಂಡವನ್ನು ಕುಡಿದು ತಾನು ದುಡಿ ಬಾರಿಸುತ್ತಾ ತನ್ನ ಸಣ್ಣದಾದ ಎರಡೂ ಮಕ್ಕಳನ್ನೂ ಅದರ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಹೊಡೆದು ಬಡೆಯತ್ತಾನೆ. ಆಗ ಬೆಳ್ಳಿ ಅವರನ್ನು ರಕ್ಷಿಸುತ್ತಾಳೆ. ಚೋಮನ ಸಿಟ್ಟು ಇನ್ನೂ ಕಡಿಮೆ ಆಗುವುದಿಲ್ಲ. ಕೊನೆಗೆ ತನಗೆ ಆ ಎತ್ತುಗಳಿಂದ ವ್ಯವಸಾಯ ಮಾಡಲು ಸಾಧ್ಯವಿಲ್ಲವೆಂದು, ಅದು ಪರರಿಗೂ ದೊರಕಬಾರದೆಂದು ಆ ಎತ್ತುಗಳ ಕಾಲು ಮುರಿಯುತ್ತಾನೆ. ನಂತರ ಬೆಳ್ಳಿ ಧಣಿಗಳ ಬಳಿ ಮಾತನಾಡಿ ಅಪ್ಪನಿಗೆ ಬುದ್ಧಿ ಕಲಿಸುವಂತೆ ನಿರ್ಣಯಿಸುತ್ತಾಳೆ.
[31/03 11:01 pm] ‪+91 96860 19177‬: ಹಾಗೆಂದು ಯೋಚಿಸಿ ಮನೆಗೆ ತೆರಳಿದ ಬೆಳ್ಳಿಗೆ ಆಶ್ಚರ್ಯವೆಂದರೆ ಅವರ ಮನೆಗೆ ನೆಂಟರು ಬಂದಿದ್ದರು. ಅವಳು ಹಲವು ದಿನಗಳಿಂದ ಕೂಡಿಟ್ಟಿದ್ದ ಗೆಣಸು ಅಕ್ಕಿ ಎಲ್ಲವೂ ಖಾಲಿಯಾಗ ತೊಡಗಿತು. ಚೋಮನು ಎಲ್ಲವನ್ನೂ ಮರೆತು ಅವರೊಂದಿಗೆ ಸಂತಸದಿಂದ ಕಾಲಕಳೆಯತ್ತಾನೆ. ಅವರೊಂದಿಗೆ ಬೇಟೆಗೆ ಹೋಗಿ ಮೊಲಗಳನ್ನು ತಂದು ತಿಂದು,ಕುಡಿದು ಕುಪ್ಪಳಿಸುತ್ತಾರೆ. ಯಾರದೋ ಮನೆಯಲ್ಲಿ ಎಮ್ಮೆ ಸತ್ತರೆ ಅದನ್ನೂ ತಿಂದು, ಮನೆಯ ಮುಂದೆ ಬೆಂಕಿಯನ್ನು ಹಾಕಿಕೊಂಡು ಕುಣಿದು ಕುಪ್ಪಳಿಸುತ್ತಾರೆ. ಕೆಲವು ದಿನಗಳ ನಂತರ ಅವರೂ ಹೊರಟರು. ಆದರೆ ಈಗ ಚೋಮನ ಎದುರಿನಲ್ಲಿದ್ದ ಮತ್ತೊಂದು ಸವಾಲೆಂದರೆ ಮತ್ತೆ ಮನ್ವೇಲನು ಬಂದಾಗ ಅವನೊಂದಿಗೆ ಯಾರನ್ನಾದರು ಕರೆದುಕೊಂಡು ಹೋಗುತ್ತಾನೆ. ಆದರೆ ಹೋಗಲಿಕ್ಕೆ ಯಾರಿದ್ದಾರೆ? ಎಂಬುದು. ಕೊನೆಗೆ ಮುದಿ ತಂದೆಯನ್ನು ಕಷ್ಟಗಳ ಪಾಲು ಮಾಡಲು ಇಷ್ಟವಿಲ್ಲದೆ ಕೊನೆಗೆ ಬೆಳ್ಳಿಯೇ ಮನ್ವೇಲನ ಕೂಡ ಹೊರಡುವಂತೆ ನಿಶ್ಚಯವಾಯಿತು. ಇಷ್ಟವಿಲ್ಲದ ಮನಸ್ಸು ಹಾಗೂ ಮನ್ವೇಲನ ಒತ್ತಡದಿಂದಾಗಿ ಚೋಮನೂ ಅವಳನ್ನು ಕಣ್ಣೀರಿನಿಂದ ಬೀಳ್ಕೊಡಬೇಕಾಗಿ ಬಂತು.
ಕೊನೆಗೆ ಬೆಳ್ಳಿಯ ತೋಟದ ಯಾತ್ರೆ ಸಾಗಿತು. ಅವಳಿಗೂ ಆ ಕಷ್ಟವನ್ನು ಅನುಭವಿಸುವ ಪರಿಸ್ಥಿತಿ ಬಂತು. ಅವಳೊಂದಿಗೆ ನೀಲನೂ ಹೊರಟಿದ್ದ. ಅಲ್ಲಿ ಅವರಿಗೆ ಉಳಿಯಲು ವ್ಯವಸ್ಥೆ ಆಯಿತು. ನೀಲನು ಅನಾರೋಗ್ಯಕ್ಕೆ ಒಳಗಾದ ಕಾರಣ ಅವಳಿಗೆ ಬರುತ್ತಿದ್ದ ಹಣವನ್ನು ಅವನ ಔಷಧಿಯನ್ನು ಖರೀದಿಸಲು ಸಾಲುತಿತ್ತೇ ಹೊರೆತು ಸಾಲ ತೀರಿಸಲು ಆಗುತ್ತಿರಲಿಲ್ಲ. ಹೀಗಾಗಿ ಮನ್ವೇಲನ ಒತ್ತಡದ ಮೇರೆಗೆ ಅವನ ಮನೆಯಲ್ಲಿ ಕೆಲಸ ಮಾಡಲು ಒಪ್ಪಿಕೊಂಡಳು. ಆದರೆ ಅಲ್ಲಿ ನಡೆದದ್ದೆ ಬೇರೆಯದ್ದೊಂದು ವಿಷಯ. ಹೆಂಡತಿ ಮನೆಯಲ್ಲಿಲ್ಲದ ಕಾರಣ ಅವನಲ್ಲಿನ ಕಾಮ ಪ್ರೇರಣೆ ಹಾಗೂ ಕಾಯದ ದೌರ್ಬಲ್ಯ ಅವಳನ್ನು ಆತನ ಕಾಮದ ದಾಸಿಯನ್ನಾಗಿ ಮಾಡಿತು.
[31/03 11:01 pm] ‪+91 96860 19177‬: ಅವರಿಬ್ಬರ ನಡುವಿನ ಸಂಬಂಧ ಎಲ್ಲರಿಗೂ ತಿಳಿಯಲಾರಂಭವಾಯಿತು. ಅವಳ ಮೇಲೆ ದೊರೆಗಳಿಗೂ ಆಸೆಯಾಯಿತು. ಕೊನೆಗೆ ಮನ್ವೇಲನು ಅವಳನ್ನು ಅವನ ಬಳಿಯೂ ಕಳುಹಿಸಿ ಕೊಟ್ಟನು. ಹಣದ ಆಸೆ ಅವಳನ್ನು ಈ ರೀತಿಯ ಕೆಲಸವನ್ನೂ ಮಾಡದೆ ಬಿಡಲಿಲ್ಲ. ಕೊನೆಗೆ ಮನ್ವೇಲನು ಅವಳನ್ನು ಅಲ್ಲಿಂದ ಪಾರು ಮಾಡುವನು. ಅವಳು ವಾಪಸ್ಸ್ಸು ಮನೆಗೆ ತೆರಳಿದ ಕಾರಣ ಚೋಮನಿಗೆ ಹಿಡಿಸಲಾರದಷ್ಟು ಸಂತೋಷ. ನನ್ನ ಗಂಡು ಮಕ್ಕಳು ಮಾಡಲಾರದ ಕೆಲಸ ತನ್ನ ಮಗಳು ಮಾಡಿದ್ದಾಳೆಂದು ಅವನ ಸಂಭ್ರಮ. ಆದರೆ ಪಾಪ ಚೋಮನಿಗೆ ತನ್ನ ಮಗಳು ಆತನ ಸಾಲ ತೀರಿಸಿದ ಬಗೆ ತಿಳಿಯದು. ಮತ್ತೆ ಊರಿನ ಜಾತ್ರೆ ಬಂದೇ ಬಂತು. ಬೆಳ್ಳಿ ತನಗೆ ಮನ್ವೇಲನು ಕೊಟ್ಟಿರುವ ಸೀರೆ ಉಟ್ಟು ಜಾತ್ರೆಗೆ ಹೋಗುತ್ತಾಳೆ. ಆದರೆ ಅಲ್ಲಿ ಮನ್ವೇಲನೂ ಬಂದಿರುವುದನ್ನು ಕಂಡು ಭಯದಿಂದ ಮನೆಗೆ ತೆರಳಿದಳು. ಅತ್ತ ಚೋಮ ತನ್ನ ಮಗಳಿಗೆ ತಕ್ಕ ವರನನ್ನು ಹುಡುಕುತ್ತಿದ್ದನು. ನಂತರ ಆ ಸಂತಸದಲ್ಲಿಯೇ ಗೆಳೆಯರೊಡನೆ ಕುಣಿದು ಹರ್ಷಿಸುತ್ತಿದ್ದ.
ಮರುದಿನ ತನ್ನ ಮಕ್ಕಳಿಗೆ ಸ್ನಾನ ಮಾಡಿಸಲೆಂದು ಕೆರೆಯ ಬಳಿ ಹೋದಾಗ ಅಲ್ಲಿ ನೀಲ ನೀರಿನಲ್ಲಿ ಮುಳುಗಿ ಹೋಗುತ್ತಿರುತ್ತಾನೆ. ಚೋಮ ಆ ಸಮಯದಲ್ಲಿ ಅಲ್ಲಿ ಇರುವುದಿಲ್ಲ. ಕಾಳ ಇನ್ನೂ ಚಿಕ್ಕವ, ಆದರೆ ಅಲ್ಲಿಯ ದಡೆಯ ಮೇಲಿನ ಜನರು ಅವನನ್ನು ಕಾಪಾಡಬಹುದಾಗಿತ್ತು. ಆದರೆ ಅವರು ಮೇಲ್ವರ್ಗದವರು ಹಾಗು ನೀಲ ಕೆಳ ವರ್ಗದವನು ಎಂಬ ಒಂದೇ ಒಂದು ಕಾರಣ ಅವರನ್ನು ನೀಲನನ್ನು ಮೂಟ್ಟಬಾರದೆಂದು ಕಟ್ಟು ಹಾಕಿತ್ತು. ಇಲ್ಲದಿದ್ದಲ್ಲಿ ನೀಲ ಉಳಿಯುತ್ತಿದ್ದ. ಹೀಗೆ ಚೋಮನಿಗೆ ಒಂದರ ನಂತರ ಮತ್ತೊಂದು ಹೃದಯ ಹಿಂಡುವ ಕಷ್ಟಗಳು ಕಾದಿರುತ್ತಿದ್ದವು. ಮರುದಿನ ಮನ್ವೇಲನು ಅವರ ಮನೆಗೆ ಬರುತ್ತಾನೆ. ಆತ ಅವರ ಕ್ಷೇಮ ಸಮಾಚಾರ ತಿಳಿದು ಗುರುವನ ಬಗ್ಗೆ ತಿಳಿಸುತ್ತಾನೆ. ಜೀವನದಲ್ಲಿ ಎಲ್ಲವನ್ನು ಕಳೆದು ಕೊಂಡು ಸಾಧಿಸುವುದಾದರೂ ಏನು? ಹೋಗಿ ನಿನ್ನ ಮಗನನ್ನು ವಾಪಸ್ಸು ಕರೆತಾ ಎಂದು ಆತನಿಗೆ ಮನ್ವೇಲನು ಸಲಹೆ ನೀಡುತ್ತಾನೆ. ಅದರಿಂದಾಗಿ ತಾನೂ ಮತ ಪರಿವರ್ತಿಸಿ ಕೊಳ್ಳುವುದಾಗಿ ನಿರ್ಧರಿಸುತ್ತಾನೆ. ನಾಳೆ ಬೆಳಿಗ್ಗೆ ತನ್ನ ಮಗನ ಬಳಿ ಹೋಗುವುದಾಗಿ ಅವನನ್ನು ಕರೆತರುವುದಾಗಿ ಚರ್ಚಿಸಿರುತ್ತಾರೆ.

ಅದಿರುಗಳು

*ಅದಿರುಗಳು*

*👉ತಾಮ್ರದ ಅದಿರುಗಳು*
ಪ್ಲೆರೈಟ್ಸ್- CuFrS2
ಗ್ಲಾನ್ಸ್- Cu2S
ಕ್ಯ್ರುಪ್ರೈಟ್- Cu2O
ಮೆಲಕೈಟ್- CuCo3cu( OH)2
ಅಜುರೈಟ್- 2cuco3cu(OH)2

*👉ಕಬ್ಬಿಣದ ಅದಿರುಗಳು*
ಹೆಮಟೈಟ್- Fe2O3
ಮ್ಯಾಗ್ನೆಟಿಕ್- Fe3O4
ಲಿಮೊನೈಟ್- Fe2O3H2O
ಸೈಡ್ ರೈಟ್- FeCO3

*👉ಸೋಡಿಯಂ ಅದಿರುಗಳು*
ರಾಕ್ ಸಾಲ್ಟ್ - Nacl
ಬೋರಾಕ್ಸ್+ Na2B401oH20
ಚೈಲ್ ಸಾಲ್ಟ್- NaN03

*👉ಮೆಗ್ನೀಸಿಯಂ ಅದಿರುಗಳು*
ಮಾಗ್ನಸೈಟ್- MgCO3
ಡೋಮೋಮೈಟ್- CaCO3MgCO3
ಕಾರ್ನ್ ಲೈಟ್- KCl2mgCl26H3O
ಎಪ್ಸ್ಂ ಸಾಲ್ಟ್- mgSO47H20

ಕರ್ನಾಟಕದ ಪ್ರಚಲಿತ ವಿದ್ಯಮಾನ


೧) ಕರ್ನಾಟಕದ ಐ4 ನೀತಿ

ಕರ್ನಾಟಕದಾದ್ಯಂತ 2ನೇ ಮತ್ತು 3ನೇ ದರ್ಜೆಯ ನಗರಗಳಲ್ಲಿ ಹೊಸ ಐಟಿ ಮತ್ತು ಇತರೆ ಜ್ಞಾನಾಧಾರಿತ ವಲಯಗಳು ತಮ್ಮ ಕಾರ್ಯಕ್ಷೇತ್ರವನ್ನು ಸ್ಥಾಫಿಸಲು ಪ್ರೋತ್ಸಾಹಗಳನ್ನು ನೀಡಲು ಹೊಸ ಮಾಹಿತಿ ತಂತ್ರಜ್ಞಾನ ಐ4 ನೀತಿಯನ್ನು ಕರ್ನಾಟಕ ಸರ್ಕಾರವು ಜಾರಿಗೆ ತಂದಿದೆ.

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಐಟಿ/ಐಟಿಇಎಸ್/ಸ್ಟಾರ್ಟ್ ಅಪ್ಸ್/ ಇತರೆ ಜ್ಞಾನಾಧಾರಿತ ಉದ್ದಿಮೆಗಳ ಪ್ರಸ್ತಾವನೆಗಳನ್ನು ಅಂಗೀಕರಿಸುವ ಏಕ ಗವಾಕ್ಷಿ ಸಂಸ್ಥೆಯಾಗಿರುತ್ತದೆ.

ಐ4 ನೀತಿಯ ಪ್ರಮುಖ ಅಂಶಗಳು

• ಉದ್ಯೋಗ ಆಧಾರಿತ ಪ್ರೋತ್ಸಾಹಕವಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳು ಹೊರಭಾಗದಲ್ಲಿ ಭೂ ಮಂಜೂರಾತಿ ಮಾಡುವುದು.

• ಐಟಿ, ಐಟಿಇಎಸ್, ಅನಿಮೇಷನ್/ಜ್ಞಾನಾಧಾರಿತ ಉದ್ದಿಮೆಗಳಿಗೆ ರಿಯಾಯಿತಿ ದರದಲ್ಲಿ ಭೂ ಮಂಜೂರಾತಿ.

• ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಹೊರಭಾಗದಲ್ಲಿ ಹೂಡಿಕೆಗಾಗಿ ಉದ್ಯೋಗ ಸೃಷ್ಟಿ.

• ಅಭಿವೃದ್ಧಿಯನ್ನು 2 ಮತ್ತು 3ನೇ ದರ್ಜೆ ನಗರಗಳಿಗೆ ವಿಸ್ತರಿಸಲು ಆದ್ಯತೆ ನೀಡುವುದು.

• ನೇರ ಅಂತಿಮ ಬಳಕೆದಾರರಿಗೆ ಮಾತ್ರ ಪ್ರೋತ್ಸಾಹ ದೊರಕಿಸುವುದು.

• ಪ್ರತಿ 1000 ಉದ್ಯೋಗ ಸೃಷ್ಟಿಗೆ 1 ಎಕರೆ ದರದಲ್ಲಿ ಭೂಮಿಯನ್ನು ಮಂಜೂರು ಮಾಡುವುದು.

• ಸ್ಥಳವನ್ನು ಆಧರಿಸಿ ಸ್ಟಾರ್ಟ್ ಅಪ್ ಕಂಪನಿಗಳಿಗೆ ಇಂಟರ್ನೆಟ್‍ನೊಂದಿಗೆ ಪ್ಲಗ್ ಮತ್ತು ಪ್ಲೇ ಸ್ಥಳಕ್ಕಾಗಿ ರಿಯಾಯಿತಿ ದರದಲ್ಲಿ ಭೂಮಿಯನ್ನು ಒದಗಿಸಲಾಗುವುದು.

• ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಐಟಿ/ಐಟಿಇಎಸ್/ ಸ್ಟಾರ್ಟ್ ಅಪ್ಸ್/ಇತರೆ ಜ್ಞಾನಾಧಾರಿತ ಉದ್ದಿಮೆಗಳು ಸಾರ್ವಜನಿಕ ಸೇವಾ ಉದ್ಯಮಗಳಿಗೆ ಸರಿಸಮವಾಗಿ ಪರಿಗಣಿಸಲಾಗುವುದು.

• 5 ವರ್ಷಗಳವರೆಗೆ ಐಟಿ / ಐಟಿಇಎಸ್/ ಸ್ಟಾರ್ಟ್ ಅಪ್ಸ್/ ಇತರೆ ಜ್ಞಾನಾಧಾರಿತ ಉದ್ದಿಮೆಗಳಿಗೆ 1964ರ ಕರ್ನಾಟಕ ಕೈಗಾರಿಕ ಉದ್ಯೋಗ (ನಿಲುವು ಆದೇಶಗಳು) ನಿಯಮಗಳಿಂದ ವಿನಾಯಿತಿ ನೀಡಲಾಗಿದೆ.

• ಐಟಿ/ಐಟಿಇಎಸ್/ಸ್ಟಾರ್ಟ್ ಅಪ್ಸ್/ ಅನಿಮೇಷನ್ / ಬಿಪಿಓ/ಇತರೆ ಜ್ಞಾನಾಧಾರಿತ ಉದ್ದಿಮೆಗಳನ್ನು ಸಾರ್ವಜನಿಕ ಸೇವಾ ಉದ್ಯಮಗಳಿಗೆ ಸರಸಮವಾಗಿ ಪರಿಗಣಿಸುವುದು.

• 2ನೇ ಮತ್ತು 3ನೇ ದರ್ಜೆ ನಗರಗಳಲ್ಲಿ ಹೊಸ ಉದ್ಯೋಗವನ್ನು ಸೃಷ್ಟಿಸುವ ಎಲ್ಲಾ ಉದ್ದಿಮೆಗಳಿಗೆ ಎರಡು ವರ್ಷಗಳವರೆಗೆ ಭವಿಷ್ಯ ನಿಧಿ/ನೌಕರರ ರಾಜ್ಯ ವಿಮಾ ಮೊತ್ತವನ್ನು ಪ್ರತಿ ಉದ್ಯೋಗಿಗೆ ಪ್ರತಿ ಮಾಸಿಕವಾಗಿ ರೂ. 2000ದಂತೆ ಮರುಪಾವತಿ ಮಾಡಲಾಗುವುದು.

• ಐಟಿ/ಐಟಿಇಎಸ್/ಇಎಂಎಸ್‍ಡಿ ಟೆಲಿಕಾಂ ಮುಂತಾದವುಗಳಲ್ಲಿ ನಿರುದ್ಯೋಗಿ ಯುವಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

೨) ಸಬಲ

ಭಾರತ ಸರ್ಕಾರವು ರಾಜೀವ್‍ಗಾಂಧಿ ಪ್ರಾಯಪೂರ್ವ ಬಾಲಕಿಯರ ಸಬಲೀಕರಣ ಅಥವಾ ಸಬಲ ಎಂಬ ಹೊಸ ಯೋಜನೆಯನ್ನು ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಟಾನಗೊಳಿಸುತ್ತಿದೆ.

ಇದು ಶೇ. 100ರಷ್ಟು ಕೇಂದ್ರ ಪುರಸ್ಕøತ ಯೋಜನೆಯಾಗಿದ್ದು, ಇದರ ಉದ್ದೇಶವು 11-18 ವರ್ಷದ ಪ್ರಾಯಪೂರ್ವ ಬಾಲಕಿಯರನ್ನು ಸಬಲರನ್ನಾಗಿ ಮಾಡುವುದು.

ಅವರ ಆರೋಗ್ಯ ಮತ್ತು ಪೌಷ್ಟಿಕ ಮಟ್ಟವನ್ನು ಹೆಚ್ಚಿಸುವುದು, ವಿವಿಧ ಕೌಶಲ್ಯಗಳು ಅಂದರೆ ಗೃಹ ಕೌಶಲ್ಯ, ಜೀವನಕೌಶಲ್ಯ, ವೃತ್ತಿ ತರಬೇತಿ ನೀಡಲಾಗುತ್ತಿದೆ.

2015-16ನೇ ಸಾಲಿನಲ್ಲಿ ರಊ. 57.88 ಲಕ್ಷಗಲ ಅನುದಾನವನ್ನು ಕೇಂದ್ರ ಸರ್ಕಾರವು ಒದಗಿಸಿದ್ದು, ಅದಕ್ಕೆ 50% ಪಾಲು ರಾಜ್ಯ ಸರ್ಕಾರವು ನೀಡಬೇಕಾಗಿರುವುದರಿಂದ ಜಿಲ್ಲೆಗಳಿಗೆ ಅನುದಾನ ಮರುಹಂಚಿಕೆಗೊಳಿಸಲಾಗಿರುವುದಿಲ್ಲ.

೩) ಇಂಧನ ಕ್ಷೇತ್ರದಲ್ಲಿ ಸಹಕಾರ: ಭಾರತಕ್ಕೆ ನೈಸರ್ಗಿಕ ಅನಿಲ ರಫ್ತು

ಭಾರತಕ್ಕೆ ನೈಸರ್ಗಿಕ ಅನಿಲ ರಫ್ತು ಮಾಡುವ ಪ್ರಸ್ತಾವಕ್ಕೆ ಸರ್ಕಾರ ಸಮ್ಮತಿ ಸೂಚಿಸುವ ಸಾಧ್ಯತೆ ಇದೆ ಎಂದು ಅಮೆರಿಕದ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತ–ಅಮೆರಿಕ ನಡುವಣ ದ್ವಿಪಕ್ಷೀಯ ಸಹಕಾರದಲ್ಲಿ ಇಂಧನ ಕ್ಷೇತ್ರ ಮಹತ್ವದ್ದಾಗಲಿದೆ ಎಂದೂ ಅವರು ಹೇಳಿದ್ದಾರೆ. ಮುಂದಿನ ವರ್ಷದ ಆರಂಭದ ವೇಳೆಗೆ ನೈಸರ್ಗಿಕ ಅನಿಲ ರಫ್ತು ಆರಂಭಗೊಳ್ಳುವ ನಿರೀಕ್ಷೆ ಇದೆ.

ಹವಾಮಾನ ಬದಲಾವಣೆಗೆ ಸಂಬಂಧಿಸಿ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಅವಧಿಯಲ್ಲಿ ಕೈಗೊಳ್ಳಲಾಗಿದ್ದ ನಿರ್ಧಾರಗಳನ್ನು ತೆಗೆದುಹಾಕುವ ಕಾರ್ಯಾಕಾರಿ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಸಹಿ ಹಾಕಲು ಮುಂದಾಗಿರುವ ಸಂದರ್ಭದಲ್ಲೇ ಈ ಹೇಳಿಕೆ ನೀಡಲಾಗಿದೆ.

ಹವಾಮಾನ ಬದಲಾವಣೆಗೆ ಸಂಬಂಧಿಸಿ ಪ್ಯಾರಿಸ್‌ ಒಪ್ಪಂದದಲ್ಲಿ ಕೈಗೊಳ್ಳಲಾಗಿರುವ ನಿರ್ಣಯಗಳ ಬಗ್ಗೆ ಟ್ರಂಪ್ ಆಡಳಿತ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಶುದ್ಧ ಇಂಧನ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿ ಭಾರತ ಸೇರಿ ಹಲವು ರಾಷ್ಟ್ರಗಳ ಜತೆಗಿನ ಸಹಕಾರದ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ಮಾತುಕತೆ ನಡೆಸಿದ್ದ ಪ್ರಧಾನ್:

ಅಮೆರಿಕದಿಂದ ನೈಸರ್ಗಿಕ ಅನಿಲ ಆಮದು ಮಾಡುವ ಬಗ್ಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವ ಧರ್ಮೇಂದ್ರ ಪ್ರಧಾನ್ ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಅಲ್ಲಿನ ಇಂಧನ ಸಚಿವ ರಿಕ್ ಪೆರ್ರಿ ಜತೆ ಚರ್ಚಿಸಿದ್ದರು.

ಇಂಧನ ಕ್ಷೇತ್ರದಲ್ಲಿ ಭಾರತ–ಅಮೆರಿಕ ನಡುವಣ ಸಹಕಾರ, ನೈಸರ್ಗಿಕ ಅನಿಲ, ತೈಲ ಬಾವಿ ಉದ್ಯಮದಲ್ಲಿ ಭಾರತದ ಹೂಡಿಕೆ ಮತ್ತಿತರ ವಿಷಯಗಳ ಬಗ್ಗೆಯೂ ಸಚಿವರು ಮಾತುಕತೆ ನಡೆಸಿದ್ದರು.

ಭಾರತದ ಕಂಪೆನಿಗಳಿಂದಲೇ ಎಚ್‌1ಬಿ ವೀಸಾ ಹೆಚ್ಚು ಬಳಕೆ

ಎಚ್‌1ಬಿ ವೀಸಾ ಅಡಿ ಉದ್ಯೋಗಿಗಳನ್ನು ನೇಮಿಸುವ ಭಾರತೀಯ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಅಮೆರಿಕದ ವಲಸೆ ವ್ಯವಸ್ಥೆಯಲ್ಲಿನ ಲೋಪದೊಂದಿಗೆ ಆಟವಾಡಿವೆ ಎಂದು ಅಮೆರಿಕ ಹಿರಿಯ ಸಂಸದ ಡರೆಲ್‌ ಇಸಾ ಆರೋಪಿಸಿದ್ದಾರೆ.

‘ಎಚ್‌1ಬಿ ವೀಸಾ ಯೋಜನೆಯ ಶೇ 75ರಷ್ಟು ಭಾಗವನ್ನು ಭಾರತೀಯರ ಮಾಲೀಕತ್ವದ ಮತ್ತು ಭಾರತೀಯ ಉದ್ಯೋಗಿಗಳೇ ಇರುವ ಕಂಪೆನಿಗಳು ಬಳಸಿಕೊಳ್ಳುತ್ತಿವೆ’ ಎಂದು ಅವರು ಹೇಳಿದ್ದಾರೆ.

ಉದ್ಯೋಗ ಮಾಡುತ್ತಿರುವವರ ಕನಿಷ್ಠ ವೇತನವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸುವ ಮಸೂದೆಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

೪) ಮನೆ ಬಾಡಿಗೆಗೂ ಜಿಎಸ್‌ಟಿ

ಭೂಮಿ ಗುತ್ತಿಗೆ ಕೊಡುವುದು, ಕಟ್ಟಡಗಳನ್ನು ಬಾಡಿಗೆಗೆ ನೀಡುವುದು   ಮತ್ತು ನಿರ್ಮಾಣ ಹಂತದಲ್ಲಿ ಇರುವ ಮನೆ ಖರೀದಿಗೆ ಪಾವತಿಸುವ ಕಂತುಗಳ ಮೇಲೆ  ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನ್ವಯಗೊಳ್ಳಲಿದೆ.

ಲೋಕಸಭೆಯ ಅನುಮೋದನೆಗಾಗಿ  ಮಾರ್ಚ್ ೨೮ರಂದು  ಮಂಡಿಸಿರುವ ಜಿಎಸ್‌ಟಿ ಪೂರಕ ಮಸೂದೆಗಳಲ್ಲಿ ಈ ವಿವರಗಳು ಅಡಕವಾಗಿವೆ.

ಮಸೂದೆಯಲ್ಲಿರುವ ಅಂಶಗಳೇನು?

ಕೇಂದ್ರ ಸರ್ಕಾರದ (ಸಿ–ಜಿಎಸ್‌ಟಿ) ಅನ್ವಯ, ಭೂಮಿಯ ಬಾಡಿಗೆ, ಗೇಣಿ, ಉಪಭೋಗ, ಭೂ ಸ್ವಾಧೀನ ಅನುಮತಿಯು ಸೇವಾ  ಪೂರೈಕೆಯಾಗಲಿದೆ.

ಜತೆಗೆ, ವಾಣಿಜ್ಯ, ಕೈಗಾರಿಕೆ ಅಥವಾ ವಸತಿ ಸಂಕೀರ್ಣವನ್ನು  ಭಾಗಶಃ ಇಲ್ಲವೆ ಪೂರ್ಣ ಪ್ರಮಾಣದಲ್ಲಿ ಬಾಡಿಗೆ ನೀಡುವುದು ಕೂಡ  ಹೊಸ ತೆರಿಗೆ ವ್ಯವಸ್ಥೆಯಡಿ ಸೇವೆಯ ಪೂರೈಕೆಯಾಗಿರಲಿದೆ.

ನಿರ್ಮಾಣ ಹಂತದಲ್ಲಿ ಇರುವ ಕಟ್ಟಡ ಹೊರತುಪಡಿಸಿ ಭೂಮಿ, ಕಟ್ಟಡ ಮಾರಾಟವು ಸರಕಿನ ಪೂರೈಕೆ ಅಥವಾ ಸೇವೆಯ ಪೂರೈಕೆ  ಎಂದು ಪರಿಗಣಿಸುವುದಿಲ್ಲ.ಹೀಗಾಗಿ ಇಂತಹ ವಹಿವಾಟಿಗೆ ಜಿಎಸ್‌ಟಿ ಅನ್ವಯವಾಗಲಾರದು.

ಭೂಮಿ ಮತ್ತು ಕಟ್ಟಡ ಮಾರಾಟ ವಹಿವಾಟು  ಹೊಸ ಪರೋಕ್ಷ ತೆರಿಗೆ ವ್ಯವಸ್ಥೆಯಾಗಿರುವ ಜಿಎಸ್‌ಟಿ   ವ್ಯಾಪ್ತಿಯಿಂದ ಹೊರಗೆ ಇರಲಿದೆ.   ಇಂತಹ ವಹಿವಾಟಿನ ಮೇಲೆ ಮುದ್ರಾಂಕ ಶುಲ್ಕ ವಿಧಿಸುವ ಸದ್ಯದ ವ್ಯವಸ್ಥೆ ಮುಂದುವರೆಯಲಿದೆ.

ಈ ಮೊದಲಿನ ಕರಡು ಮಸೂದೆಗಳಲ್ಲಿ ಇದ್ದ ಸರಕು ಮತ್ತು ಸೇವೆಗಳ ವ್ಯಾಖ್ಯಾನಕ್ಕೆ, ಈಗ ಮಂಡಿಸಿರುವ ಪೂರಕ ಮಸೂದೆಗಳು ಸ್ಪಷ್ಟನೆ ನೀಡಿವೆ.‘ಸದ್ಯಕ್ಕೆ ವಾಣಿಜ್ಯ ಮತ್ತು ಕೈಗಾರಿಕಾ ಘಟಕಗಳ ಬಾಡಿಗೆ ಮೇಲೆ ಸೇವಾ ತೆರಿಗೆ ವಿಧಿಸಲಾಗುತ್ತಿದೆ.

ಜಿಎಸ್‌ಟಿಯನ್ನು ವ್ಯಾಜ್ಯ ಮುಕ್ತಗೊಳಿಸಲು ಸರ್ಕಾರ ಸರ್ವ ಪ್ರಯತ್ನ ಮಾಡಬೇಕು’  ಎಂದು ತೆರಿಗೆ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಜಿಎಸ್‌ಟಿ ಜಾರಿಗೆ ಬರುತ್ತಿದ್ದಂತೆ, ಕೇಂದ್ರೀಯ ಅಬಕಾರಿ, ಸೇವಾ ತೆರಿಗೆ  ರಾಜ್ಯಗಳ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) , ತಯಾರಿಕಾ ಸರಕುಗಳ ಮೇಲಿನ ಪರೋಕ್ಷ ತೆರಿಗೆಗಳು ರದ್ದಾಗಲಿವೆ. ಆದರೆ, ವಿದ್ಯುತ್‌ ತೆರಿಗೆ ರದ್ದುಪಡಿಸಲು ಅವಕಾಶ ಇಲ್ಲ. ಹೀಗಾಗಿ ರಾಜ್ಯ ಸರ್ಕಾರಗಳು ಈ ತೆರಿಗೆ ವಿಧಿಸಬಹುದಾಗಿದೆ. ದೆಹಲಿ ರಾಜ್ಯ ಸರ್ಕಾರವು ಮನೆ, ಅಪಾರ್ಟ್‌ಮೆಂಟ್‌ಗಳ ಮೇಲೆ ವಿದ್ಯುತ್‌ ತೆರಿಗೆ ವಿಧಿಸಲು ವಿನಾಯ್ತಿ ನೀಡಿದೆ.  ವಾಣಿಜ್ಯ ಮತ್ತು ಕೈಗಾರಿಕಾ ಘಟಕಗಳ ಮೇಲೆ ತೆರಿಗೆ ವಿಧಿಸಲಾಗುತ್ತಿದೆ.

೫) ಕರ್ನಾಟಕದಲ್ಲಿ ದೇಶೀಯ ಪ್ರವಾಸಿಗರಿಗೆ ‘ಸುವರ್ಣ ರಥ’ದಲ್ಲಿ ವಿಶೇಷ ಪ್ಯಾಕೇಜ್

ಕರ್ನಾಟಕದ ಅತ್ಯಂತ ದುಬಾರಿ ರೈಲು ಗೋಲ್ಡನ್ ಚಾರಿಯಟ್(ಸುವರ್ಣ ರಥ)ನ ಪ್ರವಾಸ ದರದಲ್ಲಿ ಕಡಿತ ಮಾಡಿ  ಜನತೆಯ ಕೈಗೆಟಕುವಂತೆ ಮಾಡಲು ಪ್ರವಾಸೋದ್ಯಮ ಇಲಾಖೆ ವಾರಾಂತ್ಯದಲ್ಲಿ ದೇಶೀಯ ಪ್ರವಾಸಿಗರಿಗೆ ವಿಶೇಷ ಪ್ಯಾಕೇಜ್ ಸೇವೆ ಒದಗಿಸಲಿದೆ.

ಈ ನಡೆಗೆ ಕಾರಣವೇನು?

ವಾರಾಂತ್ಯದಲ್ಲಿ ಎರಡು ರಾತ್ರಿ ಮತ್ತು ಒಂದು ಹಗಲಿಗೆ ರೈಲಿನಲ್ಲಿ ಟಿಕೆಟ್ ಬುಕ್ ಮಾಡುವವರಿಗೆ ಪ್ರತಿ ವ್ಯಕ್ತಿಗೆ 30,000 ರೂಪಾಯಿ ದರ ವಿಧಿಸುತ್ತದೆ.

ದುಬಾರಿ ದರದಿಂದಾಗಿ ಸುವರ್ಣ ರಥದಲ್ಲಿ ಪ್ರವಾಸ ಮಾಡುವವರ ಸಂಖ್ಯೆ ಕಡಿಮೆ. ಹೀಗಾಗಿ ರೈಲ್ವೆ ಇಲಾಖೆಗೆ ಆಗುತ್ತಿರುವ ನಷ್ಟವನ್ನು ಮನಗಂಡಿರುವ ಪ್ರವಾಸೋದ್ಯಮ ಇಲಾಖೆ ಈ ಬಾರಿ ಬೇಸಿಗೆ ರಜೆಯಲ್ಲಿ ವಾರಾಂತ್ಯದ ದರವನ್ನು ಪ್ರಾಯೋಗಿಕ ಮಾದರಿಯಲ್ಲಿ ಜಾರಿಗೆ ತರುತ್ತಿದ್ದು, ಅದನ್ನು ಮುಂದುವರಿಸಿಕೊಂಡು ಹೋಗುವ ಯೋಜನೆಯಲ್ಲಿದೆ.

ಪರ್ಯಾಯ ವಾರಗಳಲ್ಲಿ ಎರಡು ಮಾರ್ಗಗಳಿಗೆ ಈ ದರ ಅನ್ವಯವಾಗುತ್ತದೆ.

ಬೆಂಗಳೂರಿನಿಂದ ಮೈಸೂರಿಗೆ ಶ್ರೀರಂಗಪಟ್ಟಣ ಮೂಲಕ ಮತ್ತು ಇನ್ನೊಂದು ಹಂಪಿಯನ್ನು ಒಳಗೊಂಡಿರುತ್ತದೆ.

ಮಾರ್ಚ್ ೨೯ರಂದು  ವಿಧಾನ ಪರಿಷತ್ತಿನಲ್ಲಿ ಈ ಸುದ್ದಿಯನ್ನು ಪ್ರಕಟಿಸಿದ ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ, ಪ್ರವಾಸದಲ್ಲಿ ಈ ದರದಲ್ಲಿ ಆಹಾರ ಮತ್ತು ವಸತಿ ಕೂಡ ಒಳಗೊಳ್ಳುತ್ತದೆ.

ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲು ಪ್ರವಾಸೋದ್ಯಮ ಇಲಾಖೆ ಜನತೆಗೆ ಈ ಅನುಕೂಲ ಮಾಡಿಕೊಡುತ್ತಿದೆ ಎಂದರು.

ನಮ್ಮ ಇಲಾಖೆಗೆ ಈ ಬಗ್ಗೆ ಜನರಿಂದ ಮಾಹಿತಿ ಕೇಳಿ ಕರೆಗಳು ಬರುತ್ತಿದ್ದು ಇದು ಯಶಸ್ವಿಯಾದರೆ ಮುಂದುವರಿಸಿಕೊಂಡು ಹೋಗುತ್ತೇವೆ ಎನ್ನುತ್ತಾರೆ ಕೆಎಸ್ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್.

ದಕ್ಷಿಣದ ಹೆಮ್ಮೆ ಎಂಬ ಪ್ರವಾಸ ಏಳು ರಾತ್ರಿಗಳದ್ದಾಗಿದ್ದು, ಪ್ರತಿ ವ್ಯಕ್ತಿಗೆ ಸುಮಾರು 1.8 ಲಕ್ಷ ಖರ್ಚಾಗುತ್ತದೆ. ಅದು ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಸಂಚರಿಸಲಿದೆ. ಈ ಸಂದರ್ಭದಲ್ಲಿ ಹೆಚ್ಚು ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ.ಕಳೆದ ಮೂರು ವರ್ಷಗಳಲ್ಲಿ ಸ್ವರ್ಣ ರಥದಲ್ಲಿ ವರ್ಷಕ್ಕೆ 10 ಟ್ರಿಪ್ ಮಾತ್ರ ಆಗಿದ್ದು ಇದರಿಂದ ಇಲಾಖೆಗೆ ಭಾರೀ ನಷ್ಟವುಂಟಾಗಿದೆ. ಕಳೆದ ವರ್ಷ ಶೇಕಡಾ 70ರಷ್ಟು ಸೀಟುಗಳು ಭರ್ತಿಯಾಗಿದ್ದವು. ಆದರೆ ಆದಾಯದಲ್ಲಿ ಭಾರೀ ಕುಸಿತ ಕಂಡುಬಂದಿದೆ.ವರ್ಷಕ್ಕೆ ಕನಿಷ್ಠ 26 ಟ್ರಿಪ್ ಗಳು ಆಗಬೇಕೆನ್ನುವುದು ಇಲಾಖೆಯ ಗುರಿಯಾಗಿದೆ ಎಂದು ಪುಷ್ಕರ್ ಹೇಳುತ್ತಾರೆ.

ರೈಲ್ವೆ ಮತ್ತು ಪ್ರವಾಸೋದ್ಯಮ ಇಲಾಖೆ ಮಧ್ಯೆ ಆದಾಯ ಹಂಚಿಕೆ ಮಾದರಿಯನ್ನು ಅನುಸರಿಸಿದರೆ ನಷ್ಟವನ್ನು ತಪ್ಪಿಸಬಹುದು. ಇದಕ್ಕಾಗಿ ರೈಲ್ವೆ ಇಲಾಖೆ ಜೊತೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು.

ಪ್ರಚಲಿತ ಸಾಮಾನ್ಯ ಜ್ಞಾನ

*💐 ಕನ್ನಡ ಸಾಮಾನ್ಯ ಜ್ಞಾನ 💐*

1) ವಿಶ್ವಸಂಸ್ಥೆ ಡಾ.ಬಿ.ಆರ್.ಅಂಬೇಡ್ಕರ್ ರವರ 125 ನೇ ಜನ್ಮದಿನೋತ್ಸವವನ್ನು ಯಾವ ದಿನ ಆಚರಿಸಿತು?
* ಏಪ್ರಿಲ್ 13,2015 ರಂದು.

2) ವಿಶ್ವದ ಮೊದಲ ಬಿಳಿ ಹುಲಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ?
* ಮಧ್ಯಪ್ರದೇಶ (ರೇವಾ ಜಿಲ್ಲೆಯ ಮುಕುಂದ್ ಪುರ).

3) 2016 ರ ಗ್ಲೋಬಲ್ ಇಂಡಿಯನ್ ಪ್ರಶಸ್ತಿ ಯಾರಿಗೆ ದೊರೆತಿದೆ?
* ಐಶ್ವರ್ಯ ರೈ ಬಚ್ಚನ್.

4) "ವಿಶ್ವ ಗ್ರಾಹಕರ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
* ಮಾರ್ಚ್ 15.

5) 2016 ರ ಹುಡ್ಕೋ ಪ್ರಶಸ್ತಿ ಯಾವ ಸಂಸ್ಥೆಗೆ ಲಭಿಸಿದೆ?
* ಬಿಎಂಟಿಸಿ.

6) "ಬಿಹಾರ್ ಟು ತಿಹಾರ್" ಪುಸ್ತಕದ ಕರ್ತೃ ಯಾರು?
* ಕನ್ಹಯಕುಮಾರ್.

7) "ನಾಗರಿಕ ಸೇವಾ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
* ಏಪ್ರಿಲ್ 21.

8) "ಚಾಯ ಪೇ ಚರ್ಚಾ" ಗೆ ಸಂಬಂಧಿಸಿದವರು ಯಾರು?
* ನರೇಂದ್ರ ಮೋದಿ.

9) "ಚನೇ ಪೇ ಚರ್ಚಾ" ಯಾರಿಗೆ ಸಂಬಂಧಿಸಿದೆ?
* ರಾಹುಲ್ ಗಾಂಧಿ.

10) 2016 ರ ಸಾಲಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಪಡೆದವರು ಯಾರು?
* ಎಸ್.ಚಿನ್ನಸ್ವಾಮಿ (ದಲಿತ ಚಿಂತಕ).

11) ರಾಜಸ್ಥಾನದ ಮಧ್ಯ ಮುಕ್ತ ಗ್ರಾಮ ಯಾವುದು?
* ರಾಜ್ಯಮಂದ್ ಜಿಲ್ಲೆಯ ಕಚ್ಚಾಬಾಲಿ.

12) ಪುದುಚೆರಿಯ ಲೆಫ್ಟಿನಂಟ್ ಗವರ್ನರ್ ಆಗಿ ಇತ್ತೀಚೆಗೆ ಆಯ್ಕೆಯಾದವರು ಯಾರು?
* ಕಿರಣ್ ಬೇಡಿ.

13) ರಾಜ್ಯ ಮಟ್ಟದ "ಬ್ರಾಡ್ ಬ್ಯಾಂಡ್" ಯೋಜನೆ ಆರಂಭಿಸಿದ ರಾಜ್ಯ ಯಾವುದು?
* ಆಂಧ್ರಪ್ರದೇಶ.

14) ಜಿ-7 ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ಎಲ್ಲಿ ನಡೆಯಿತು?
* ಜಪಾನಿನ ಹಿರೋಷಿಮಾದಲ್ಲಿ.

15) ದೇಶದ ಪ್ರಥಮ ಅಂಗವಿಕಲರ ಈಜುಕೊಳ ನಿರ್ಮಿಸಲು ಮುಂದಾಗಿರುವ ಕರ್ನಾಟಕದ ಜಿಲ್ಲೆ ಯಾವುದು?
* ಬೆಳಗಾವಿ.

16) ಕ್ರಿಕೆಟ್ ಆಟಕ್ಕೆ ಸಂಬಂಧಿಸಿದಂತೆ ಸಿಪಿಎಲ್ ಅನ್ನು ವಿವರಿಸಿ?
* ಕೆರಿಬಿಯನ್ ಪ್ರೀಮಿಯರ್ ಲೀಗ್.

17) 2017 ನೇ ಸಾಲಿನಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಎಷ್ಟು ತಲುಪುವ ನಿರೀಕ್ಷೆ ಇದೆ ಎಂದು ವಿಶ್ವಬ್ಯಾಂಕ್ ವರದಿ ಮಾಡಿದೆ?
* ಶೇ.7.7.

18) ಸರ್ಕಾರಿ ಜಾಹೀರಾತುಗಳ ಪರಿಶೀಲನೆಗಾಗಿ ಕೇಂದ್ರ ಸರ್ಕಾರ ನೇಮಿಸಿರುವ ಸಮಿತಿ ಯಾವುದು?
* ಬಿ.ಬಿ.ಟಂಡನ್ ಸಮಿತಿ.

19) ರಫೆಲ್ ನಡಾಲ್ ಯಾವ ದೇಶದವರು?
* ಸ್ಪೇನ್.

20) ಭಾರತದಲ್ಲಿ ಅತಿಹೆಚ್ಟು ಎಫ್ ಡಿ ಐ ಹೂಡಿಕೆ ಮಾಡಿದ ದೇಶ ಯಾವುದು?
* ಮಾರಿಷಸ್ (2-ಸಿಂಗಾಪುರ್, 3-ನೆದರ್ ಲ್ಯಾಂಡ್).

21) ಮೊಬೈಲ್ ಹ್ಯಾಂಡ್ ಸೆಟ್ ಉತ್ಪಾದಕ ಕಂಪನಿ "ಲಾವಾ ಕಂಪನಿಯ" ಬ್ರಾಂಡ್ ರಾಯಭಾರಿಯಾಗಿ ನೇಮಕವಾದವರು ಯಾರು?
* ಮಹೇಂದ್ರಸಿಂಗ್ ಧೋನಿ.

22) "ಕನೆಕ್ಟ್ ಕಾರ್ಗೋ 2016" ಪ್ರಶಸ್ತಿ ಪಡೆದ ಸಂಸ್ಥೆ ಯಾವುದು?
* ಕೆ.ಎಸ್.ಆರ್.ಟಿ.ಸಿ.

23) "ನಾಸ್ಕಾಂ" ಅಧ್ಯಕ್ಷರಾಗಿ ಇತ್ತೀಚೆಗೆ ನೇಮಕವಾದವರು ಯಾರು?
* ಸಿ.ಪಿ.ಗುರ್ನಾನಿ.

24) ವಿಶ್ವ ಚಾಂಪಿಯನ್ ಷಿಪ್ ನಲ್ಲಿ 5 ಬಾರಿ ಚಿನ್ನ ಗೆದ್ದಿರುವ ಭಾರತದ ಬಾಕ್ಸರ್ ಯಾರು?
* ಎಂ.ಸಿ.ಮೇರಿಕೋಮ್.

25) 'ಪೂರಂ ಉತ್ಸವ" ನಡೆಯುವ ತ್ರಿಶೂಲ್ ಎಂಬ ಸ್ಥಳ ಯಾವ ರಾಜ್ಯದಲ್ಲಿದೆ?
* ಕೇರಳ.

26) ಇತ್ತೀಚೆಗೆ ಹೃದಯನಾಥ ಪ್ರಶಸ್ತಿ ಪಡೆದ ವಿಶ್ವ ಚೆಸ್ ಚಾಂಪಿಯನ್ ಯಾರು?
* ವಿಶ್ವನಾಥನ್ ಆನಂದ್.

27) ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರದ ನೂತನ ಮುಖ್ಯಸ್ಥೆಯಾಗಿ ನೇಮಕವಾದವರು ಯಾರು?
* ಸುಷ್ಮಿತಾ ಪಾಂಡೆ.

28) "ಆಂಟಿಬಯೋಟಿಕ್ಸ್ ಆಫ್ ದ ಮೇನು" ಇದು ಯಾವ ದಿನದ ಧ್ಯೇಯ ವಾಕ್ಯ?
* ಗ್ರಾಹಕರ ದಿನ (ಮಾರ್ಚ್ 15, 2016).

29) "ಅಂತರರಾಷ್ಟ್ರೀಯ ಮಾನವ ಬಾಹ್ಯಾಕಾಶಯಾನ ದಿನ"ವನ್ನಾಗಿ ಯಾವಾಗ ಆಚರಿಸುತ್ತಾರೆ?
* ಏಪ್ರಿಲ್ 22.

30) "ಸಿಟಿಗೊಲ್ಡ್ ಕಾರ್ಪ್" ಯಾವ ದೇಶದ ಗಣಿ ಕಂಪನಿ?
* ಆಸ್ಟ್ರೇಲಿಯಾ.

31) ಜೀಕಾ ವೈರೆಸ್ ಜೈವಿಕ ಲಕ್ಷಣವನ್ನು ಸಂಶೋಧನೆ ಮಾಡಿದ ವಿಜ್ಞಾನಿಗಳ ತಂಡದಲ್ಲಿದ್ದ ಭಾರತದ ಮಹಿಳೆ ಯಾರು?
* ದೇವಿಕಾ ಸಿರೋಹಿ.

32) ಇತ್ತೀಚೆಗೆ "ಗ್ಲೋಬಲ್ ಮಿಸ್ ಇಂಡಿಯಾ-2016" ಎಲ್ಲಿ ನಡೆಯಿತು?
* ಗೋವಾ.

33) ತ್ರಿಪುರದ ರಾಜಧಾನಿ ಯಾವುದು?
ರವಿಕುಮಾರ.ಬಿ.ಸಾಸಲಮರಿ.
* ಅಗರ್ತಲ.

34) ಇಸ್ರೋದ ಪ್ರಸ್ತುತ ಅಧ್ಯಕ್ಷರು ಯಾರು?
* ಎ.ಎಸ್.ಕಿರಣ್ ಕುಮಾರ್.

35) ವಿಶ್ವದ ಅತ್ಯಂತ ತೆಳ್ಳಗಿನ ಲ್ಯಾಪ್ ಟ್ಯಾಪ್ ಅನ್ನು ಯಾವ ಸಂಸ್ಥೆ ಬಿಡುಗಡೆ ಮಾಡಿದೆ?
* ಹೆಚ್.ಪಿ. (10.4 ಎಂ.ಎಂ.ಗಾತ್ರ).

36) ಇತ್ತೀಚೆಗೆ ಯಾರ ಸಮಾಧಿಯ ಗೋಪುರದ ಸಂರಕ್ಷಣೆಗೆ ಚಿನ್ನದ ಕವಚವನ್ನು ಅಳವಡಿಸಲಾಗಿದೆ?
* ಹುಮಾಯುನ್.