ಗುರುವಾರ, ಮಾರ್ಚ್ 30, 2017

ಅನಿಲ್ ದಿವಾನ್ ನಿಧನ (ಕಾವೇರಿ ಜಲವಿವಾದದ ವಕೀಲ)

ಅನಿಲ್ ದಿವಾನ್‌ ನಿಧನ

ನವದೆಹಲಿ:  ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಅನಿಲ್‌ ದಿವಾನ್‌ (87) ಸೋಮವಾರ ಬೆಳಿಗ್ಗೆ ಇಲ್ಲಿನ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು.
  ಕಾವೇರಿ, ಕೃಷ್ಣಾ ಮತ್ತು ಮಹಾದಾಯಿ ಜಲವಿವಾದಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಕರ್ನಾಟಕದ ಪರ ವಾದ ಮಂಡಿಸುವ ಕಾನೂನು ತಂಡದಲ್ಲಿದ್ದ ಅನಿಲ್‌ ದಿವಾನ್‌ ಅವರಿಗೆ ಪತ್ನಿ ಸ್ಮಿತಾ, ಪುತ್ರರಾದ ಶ್ಯಾಂ, ವಿವೇಕ್‌ ಹಾಗೂ ಪುತ್ರಿ ಡಾ.ಗೌರಿ ಇದ್ದಾರೆ. ಸಂಜೆ ಅಂತ್ಯಕ್ರಿಯೆ ನೆರವೇರಿತು.   ಕಾನೂನು ತಜ್ಞರಾಗಿದ್ದ ದಿವಾನ್‌ ಕಳೆದ ವಾರವಷ್ಟೇ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು. ಭಾರತೀಯ ವಕೀಲರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು, ಸೆಂಟರ್‌ ಫಾರ್‌ ಪಬ್ಲಿಕ್‌ ಇಂಟರಸ್ಟ್‌ ಲಿಟಿಗೇಷನ್‌ ಎಂಬ ಸ್ವಯಂ ಸೇವಾ ಸಂಸ್ಥೆ ಆರಂಭಿಸಿದ್ದರಲ್ಲದೆ, ಪೀಪಲ್ಸ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟೀಸ್‌ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ