ಗುರುವಾರ, ಮಾರ್ಚ್ 30, 2017

ಬಿಕ್ಷಾಟನೆ ಕೊನೆಗಾಣಿಸಲು ರಾಜ್ಯ ಸರ್ಕಾರ ಚಿಂತನೆ

ಭಿಕ್ಷಾಟನೆ ಕೊನೆಗಾಣಿಸಲು ರಾಜ್ಯ ಸರ್ಕಾರ ಚಿಂತನೆ

ಬೆಂಗಳೂರು,ಮಾ.20– ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಲವೆಡೆ ಹೆಚ್ಚುತ್ತಿರುವ ಭಿಕ್ಷಾಟನೆಯನ್ನು ಕೊನೆಗಾಣಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಸಚಿವ ಎಚ್.ಆಂಜನೇಯ ವಿಧಾನಸಭೆಯಲ್ಲಿ ಹೇಳಿದರು.   ಪ್ರಶ್ನೋತ್ತರ ಅವಧಿಯಲ್ಲಿ ವಿಧಾನಪರಿಷತ್ ಸದಸ್ಯೆ ಜಯಮಾಲಾ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಭಿಕ್ಷುಕರು ಅನಾಥ ಮಕ್ಕಳನ್ನು ವಾಮಮಾರ್ಗದಲ್ಲಿ ಕರೆತಂದು ಭಿಕ್ಷಾಟನೆಗೆ ದೂಡುತ್ತಾರೆ. ಕಾನೂನಿನ ಪ್ರಕಾರ ಭಿಕ್ಷಾಟನೆ ನಿಷೇಧವಿದ್ದು, ಅದು ಸಮರ್ಪಕವಾಗಿ ಅನುಷ್ಠಾನವಾಗಿಲ್ಲ ಎಂದು ವಿಷಾದಿಸಿದರು.

1975 ಕರ್ನಾಟಕ ಭಿಕ್ಷಾಟನಾ ಅಧಿನಿಯಮ ಜಾರಿಯಲ್ಲಿರುವ ಸೆಕ್ಷನ್ 4 ಪ್ರಕಾರ 14 ವರ್ಷ ತುಂಬಿದ ಪುರುಷ ಮತ್ತು ಮಹಿಳೆಯನ್ನು ಭಿಕ್ಷಾಟನೆಗೆ ದೂಡುವುದು ಶಿಕ್ಷಾರ್ಹ ಅಪರಾಧ. ಅಂಥವರನ್ನು ಬಂಧಿಸಿ ನಿರಾಶ್ರಿತ ಠಾಣೆಗಳಲ್ಲಿ ಇಡಲಾಗುವುದು ಎಂದರು.
  ತಾಯಿ ಮತ್ತು ಮಗುವನ್ನು ಒಮ್ಮೆ ಬಂಧಿಸಿದರೆ ನಿರಾಶ್ರಿತ ಪರಿಹಾರ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಇಡಲಾಗುತ್ತಿಲ್ಲ. ಇಂತಹ ಕಡೆ ಬೇರ್ಪಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ