ಗುರುವಾರ, ಮಾರ್ಚ್ 30, 2017

ಉಪಹಾರ್ ಅಗ್ನಿ ದುರಂತ: ಗೋಪಾಲ್

ಉಪಹಾರ್‌ ಅಗ್ನಿ ದುರಂತ: ಗೋಪಾಲ್‌ ಅನ್ಸಾಲ್‌ ಶರಣು

ನವದೆಹಲಿ: ಉಪಹಾರ್‌ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿನಿಮಾ ಮಂದಿರದ ಮಾಲೀಕ ಗೋಪಾಲ್‌ ಅನ್ಸಾಲ್‌   ತಿಹಾರ್‌ ಜೈಲಿನ ಅಧಿಕಾರಿಗಳ ಎದುರು ಸೋಮವಾರ ಶರಣಾದರು.

ಶರಣಾಗಲು ಸಮಯ ನೀಡುವಂತೆ ಗೋಪಾಲ್‌ ಅನ್ಸಾಲ್‌ ಮಾಡಿರುವ ಮನವಿಯನ್ನು ಸುಪ್ರೀಂಕೋರ್ಟ್‌  ನಿರಾಕರಿಸಿತ್ತು. ಗೋಪಾಲ್‌ಗೆ ಒಂದು ವರ್ಷದ ಜೈಲು ಶಿಕ್ಷೆ ಬಾಕಿ ಇದೆ.

ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ಮತ್ತು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ ಹಾಗೂ ಸಂಜಯ್‌ ಕಿಶನ್‌ ಕೌಲ್‌ ಅವರನ್ನು ಒಳಗೊಂಡ ಪೀಠ ಕಾಲಾವಕಾಶ ನೀಡಲು ನಿರಾಕರಿಸಿತು.

ಉಪಹಾರ್‌ ಸಿನಿಮಾ ಮಂದಿರಲ್ಲಿ 1997ರ ಜೂನ್‌ 13ರಂದು ‘ಬಾರ್ಡರ್‌’ ಹಿಂದಿ ಸಿನಿಮಾ ಪ್ರದರ್ಶನದ ವೇಳೆ ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ 59 ಜನರು ಮೃತಪಟ್ಟು, ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ