ಸೋಮವಾರ, ಮಾರ್ಚ್ 6, 2017

ಕನ್ನಡ ಸಾಹಿತ್ಯ ಪ್ರಶ್ನೊತ್ತರ

*Kannada GK*

🔴 ಸಂಗ್ರಹ :- ದ್ವಿತೀಯ ಪಿಯುಸಿ ಇತಿಹಾಸ.

1) ಮಹಾಭಾಷ್ಯ ಕೃತಿಯ ಕರ್ತೃ ಯಾರು?
  ಪಾಣಿನಿ.

2) ಜೈನ ಧರ್ಮದ ಎರಡು ಧಾರ್ಮಿಕ ಗ್ರಂಥಗಳು ಯಾವುವು?
  ಅಂಗ ಮತ್ತು ಉಪಾಂಗ.

3) "ಶಿಲಪ್ಪಾದಿಗಾರಂ" ಯಾವ ಭಾಷೆಯಲ್ಲಿದೆ?
  ತಮಿಳು.

4) "ಕರುನಾಡರ್" ಎಂದು ಉಲ್ಲೇಖವಿರುವುದು ಯಾವ ಗ್ರಂಥದಲ್ಲಿ?
  ಶಿಲಪ್ಪಾದಿಗಾರಂ.

5) ನಾಣ್ಯಶಾಸ್ತ್ರ ಎಂದರೆ ......
  ನಾಣ್ಯಗಳ ಅಧ್ಯಯನ.

6) ಶಾಸನಗಳ ಅಧ್ಯಯನವೇ ....         ಶಾಸನಶಾಸ್ತ್ರ.

7) ರವಿಕಿರ್ತಿ ರಚಿಸಿದ ಶಾಸನ ಯಾವುದು?
  ಐಹೊಳೆ ಶಾಸನ.

8) ಬಾರ್ಬೋಸಾ ಯಾವ ದೇಶದವನು?
  ಪ್ರೋರ್ಚಗಲ್.

9) "ಜಿಯಾಗ್ರಫಿ" ಗ್ರಂಥ ಕರ್ತೃ ಯಾರು?
  ಟಾಲಮಿ.

10) ಪ್ಯಾಲಿಯೋಲಿಥಿಕ್ ಏಜ್ ಎಂದರೆ?
  ಹಳೆಯ ಶಿಲಾಯುಗ.

11) ಯಾವ ಭಾಷೆಯಲ್ಲಿ ಮಹೆಂಜೊದಾರೋ ಅಂದರೆ ಸತ್ತವರ ದಿಬ್ಬ?
  ಸಿಂಧೀ.

12) "ಅಂಲಗೀರ್ ಪುರ" ಯಾವ ರಾಜ್ಯದಲ್ಲಿದೆ?
  ಉತ್ತರಪ್ರದೇಶ.

13) ಆರ್ಯರು ಟಿಬೆಟ್ ಮೂಲದವರು ಎಂದವರು ಯಾರು?
  ಸ್ವಾಮಿ ದಯಾನಂದ ಸರಸ್ವತಿ.

14) ವಿದ್ ಎಂದರೆ .....
  ಜ್ಞಾನ ಎಂದರ್ಥ.

15) ಋಗ್ವೇದದ ಕಾಲದಲ್ಲಿ ಆರ್ಯರು ಎಲ್ಲಿ ವಾಸಿಸುತ್ತಿದ್ದರು?
  ಹಳ್ಳಿಗಳಲ್ಲಿ.

16) ಜೈನ ಧರ್ಮದ ಪವಿತ್ರ ಚಿಹ್ನೆ ಯಾವುದು?
  ಸ್ವಸ್ತಿಕ್.

17) ಆಸ್ತೆಯ ಎಂದರೆ .......
  ಕಳ್ಳತನ ಮಾಡದಿರುವುದು.

18) ಬೌದ್ಧ ಧರ್ಮದ ಸ್ಥಾಪಕ ಯಾರು?
  ಗೌತಮ ಬುದ್ಧ.

19) ದಿಗಂಬರರು ಎಂದರೆ ಯಾರು?
  ಮಹಾವೀರನ ಅನುಯಾಯಿಗಳು.(ನಿರ್ವಸ್ತ್ರಧಾರಿಗಳು)

20) ಬುದ್ಧನನ್ನು ಏಷಿಯಾದ ಬೆಳಕು ಎಂದು ಕರೆದವರು ಯಾರು?
  ಎಡ್ವಿನ್ ಅರ್ನಾಲ್ಡ್.

21) 3 ನೇ ಬೌದ್ಧ ಸಮ್ಮೇಳನ ನಡೆದ ಸ್ಥಳ ಯಾವುದು?
  ಪಾಟಲೀಪುತ್ರ.

22) ದೀಪವಂಶ ಮತ್ತು ಮಹಾವಂಶ ಎನ್ನುವವು .....
  ಸಿಲೋನಿನ ಕೃತಿಗಳು.

23) ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಿಂಗರಾಮೇಶ್ವರ ಯಾವ ಜಿಲ್ಲೆಯಲ್ಲಿವೆ?
  ಚಿತ್ರದುರ್ಗ.

24) ಮೆಗಾಸ್ಥನಿಸ್ ಯಾವ ದೇಶದ ರಾಯಭಾರಿ?
  ಗ್ರೀಕ್.

25) "ಗಾಥಸಪ್ತಸತಿ" ಎಂಬ ಕೃತಿಯನ್ನು ರಚಿಸಿದವನು ಯಾರು?
  ಹಾಲ.

26) ಗಾಥಸಪ್ತಸತಿ ಯಾವ ಭಾಷೆಯಲ್ಲಿದೆ?
  ಪ್ರಾಕೃತ.

27) ಹಾಲ ಶಾತವಾಹನರ ಎಷ್ಟನೇ ದೊರೆ?
  17 ನೇ.

28) ಕುಶಾನರ ಅತ್ಯಂತ ಶ್ರೇಷ್ಠ ದೊರೆ ಯಾರು?
  ಕಾನಿಷ್ಕ.

29) ಕಾನಿಷ್ಕನ ರಾಜಧಾನಿ ಯಾವುದಾಗಿತ್ತು?
  ಪುರುಷಪುರ.

30) ಪುರುಷಪುರದ ಇಂದಿನ ಹೆಸರೇನು?
  ಪೇಷಾವರ.

31) ಗಾಂಧಾರ ಎಂಬ ಸ್ಥಳ ಯಾವ ರಾಷ್ಟ್ರದಲ್ಲಿದೆ?
  ಆಪ್ಘಾನಿಸ್ತಾನ.

32) ದೇವಿಚಂದ್ರ ಗುಪ್ತಂ ಕೃತಿಯ ಕರ್ತೃ ಯಾರು?
  ವಿಶಾಖದತ್ತ.

33) ಸಮುದ್ರ ಗುಪ್ತ ಯಾವ ಸಂತತಿಯ ದೊರೆ?
  ಗುಪ್ತ.

34) ಸಮುದ್ರಗುಪ್ತನ ದಂಡನಾಯಕ ಯಾರು?
  ಹರಿಸೇನ.

35) ಹರಿಸೇನ ಯಾರ ಆಸ್ಥಾನದ ಕವಿ?
  ಸಮುದ್ರಗುಪ್ತ.

36) ಅಸ್ಸಾಂನ ಹಳೆಯ ಹೆಸರೇನು?
  ಕಾಮರೂಪ.

37) ಫಾಹಿಯಾನ ಒಬ್ಬ ------ ಯಾತ್ರಿಕ.
  ಚೀನಾ.

38) ಅಮರಕೋಶ ಕೃತಿಯ ಕರ್ತೃ ಯಾರು?
  ಅಮರಸಿಂಹ.

39) ಮಧುರೈ ಪಾಂಡ್ಯರು ಯಾವ ಸಾಹಿತ್ಯವನ್ನು ಪೋಷಿಸಿದರು?
  ಸಂಘಂ ಸಾಹಿತ್ಯ.

40) ತಕ್ಕೋಳಂ ಕಾಳಗ ನಡೆದದ್ದು ಯಾವಾಗ?
  ಸಾ.ಶ. 949 ರಲ್ಲಿ.

41) ತಕ್ಕೋಳಂ ಕಾಳಗ ಯಾರ ಯಾರ ನಡುವೆ ನಡೆಯಿತು?
  ಚೋಳರು ಮತ್ತು ರಾಷ್ಟ್ರಕೂಟರು.

42) ರಾಜರಾಜೇಶ್ವರ ದೇವಾಲಯ ಎಲ್ಲಿದೆ?
  ತಂಜಾವೂರಿನಲ್ಲಿದೆ.

43) ರಾಜರಾಜೇಶ್ವರ ದೇವಾಲಯದ ಮತ್ತೊಂದು ಹೆಸರೇನು?
  ಬೃಹದೇಶ್ವರ.

44) ರಾಜರಾಜೇಶ್ವರ ದೇವಾಲಯ ಕಟ್ಟಿಸಿದವನು ಯಾರು?
  ಒಂದನೇ ರಾಜರಾಜಚೋಳ.

45) ರಾಜರಾಜೇಶ್ವರ ದೇವಾಲಯವನ್ನು ಒಂದನೇ ರಾಜರಾಜಚೋಳ ಕಟ್ಟಿಸಿದ್ದು ಯಾವಾಗ?
* ಸಾ.ಶ. 1009 ರಲ್ಲಿ.

ವ್ಯಾಕರಣ ಗ್ರಂಥಗಳು: ಕವಿರಾಜಮಾರ್ಗ ಮುಖ್ಯವಾಗಿ ಅಲಂಕಾರ ಗ್ರಂಥ ವಾದರೂ ಕನ್ನಡ ಭಾಷೆ, ಉಪಭಾಷೆ, ವ್ಯಾಕರಣಕ್ಕೆ ಸಂಬಂದಿsಸಿದ ಅನೇಕ ಸ್ವಾರಸ್ಯವಾದ ಸಂಗತಿಗಳನ್ನು ಇದರಲ್ಲಿ ಹೇಳಿದೆ. ರನ್ನ (ಸು.993), ನಯಸೇನರು (ಸು.1112) ವ್ಯಾಕರಣಗಳನ್ನು ಬರೆದಿರುವರೆಂಬ ಊಹೆ ಇದ್ದರೂ ಅವರ ಕೃತಿಗಳು ನಮಗೆ ಉಪಲಬ್ಧವಿಲ್ಲ. ಎರಡನೆಯ ನಾಗವರ್ಮ (ಸು.1042) ಈಗ ತಿಳಿದಮಟ್ಟಿಗೆ ಮೊಟ್ಟ ಮೊದಲ ವ್ಯಾಕರಣಕಾರ. ಇವನ ಕಾವ್ಯಾವಲೋಕನ ಪ್ರಧಾನವಾಗಿ ಅಲಂಕಾರಶಾಸ್ತ್ರ ಗ್ರಂಥವಾಗಿದ್ದರೂ ಮೊದಲನೆಯ ಅಧ್ಯಾಯ ಶಬ್ದಸ್ಮೃತಿಯನ್ನು ವ್ಯಾಕರಣಕ್ಕೆ ಮೀಸಲಾಗಿಟ್ಟಿದ್ದಾನೆ. ಇವನ ಭಾಷಾಭೂಷಣ ಸಂಸ್ಕೃತ ಭಾಷೆಯಲ್ಲಿರುವ ಕನ್ನಡ ವ್ಯಾಕರಣ. ಸೂತ್ರ ವೃತ್ತಿಗಳು ಸಂಸ್ಕೃತದಲ್ಲಿವೆ. ಉದಾಹರಣೆಗಳನ್ನು ಪುರ್ವಕವಿಗಳ ಕನ್ನಡ ಗ್ರಂಥಗಳಿಂದ ಕೊಟ್ಟಿದ್ದಾನೆ. ಕೇಶಿರಾಜನ (ಸು.1260) ಶಬ್ದಮಣಿದರ್ಪಣ ಹಳಗನ್ನಡದ ಶ್ರೇಷ್ಠ ಗ್ರಂಥಗಳಲ್ಲೊಂದು. ಇದರಲ್ಲಿ ಶಬ್ದಸ್ಮೃತಿಯಲ್ಲಿರುವಂತೆಯೇ ಸೂತ್ರಗಳು ಕಂದಪದ್ಯದಲ್ಲಿವೆ. ಆದರೆ ತನ್ನ ಸೂತ್ರಗಳಿಗೆ ತಾನೇ ಗದ್ಯದಲ್ಲಿ ವೃತ್ತಿಯನ್ನು ಬರೆದು, ಬೇರೆ ಕಡೆಗಳಿಂದ ಲಕ್ಷ್ಯಗಳನ್ನು ಉದಾಹರಿಸಿದ್ದಾನೆ. ಶಬ್ದಮಣಿದರ್ಪಣಕ್ಕೆ ಲಿಂಗಣಾರಾಧ್ಯ, ನಿಟ್ಟೂರು ನಂಜಯ್ಯ (ಸು.1725) ಇವರು ಟೀಕೆ ಬರೆದಿದ್ದಾರೆ. ಭಟ್ಟಾಕಳಂಕನ (ಸು.1604) ಶಬ್ದಾನುಶಾಸನ ಭಾಷಾಭೂಷಣದಂತೆಯೇ ಸಂಸ್ಕೃತದಲ್ಲಿರುವ ಕನ್ನಡ ಪ್ರೌಢವ್ಯಾಕರಣ. ಈತ ತನ್ನ ಕೃತಿಗೆ ಸಂಸ್ಕೃತದಲ್ಲಿ ಭಾಷಾಮಂಜರಿ ಎಂಬ ವೃತ್ತಿಯನ್ನೂ ಮಂಜರೀ ಮಕರಂದವೆಂಬ ವ್ಯಾಖ್ಯಾನವನ್ನೂ ಬರೆದಿದ್ದಾನೆ. 19ನೆಯ ಶತಮಾನದ ಅನೇಕ ಪಾದ್ರಿಗಳು, ಐರೋಪ್ಯ ಮತ್ತು ದೇಶೀಯ ವಿದ್ವಾಂಸರು ಕನ್ನಡ ಭಾಷೆಗೆ ವ್ಯಾಕರಣಗಳನ್ನು ಬರೆದರು. ರೆ.ಕೇರಿಯವರ ಎ ಗ್ರಾಮರ್ ಆಫ್ ದಿ ಕರ್ನಾಟಕ ಲ್ಯಾಂಗ್ವೇಜ್ (1817), ಜಿ.ಎಂ.ಮೆಕೆರಲ್ ಅವರ ಗ್ರಾಮರ್ ಆಫ್ ದಿ ಕರ್ನಾಟಕ ಲ್ಯಾಂಗ್ವೇಜ್ (1820), ಶ್ರೀರಂಗಪಟ್ಟಣದ ಕೃಷ್ಣಮಾಚಾರ್ಯರ ಹೊಸಗನ್ನಡ ನುಡಿಗನ್ನಡಿ (1838), ಥಾಮಸ್ ಹಡ್ಸನ್ ಅವರ ವ್ಯಾಕರಣ (1859), ಸಿ.ಕ್ಯಾಂಪ್ಬೆಲ್ ಅವರ ಕನ್ನಡ ವ್ಯಾಕರಣಸಾರ, ಧೋಂಡೊ ಮುಳಬಾಗಿಲ ಅವರ ನುಡಿಗಟ್ಟು (1892), ವೆಂಕಟರಂಗೋಕಟ್ಟಿ ಯವರ ಕನ್ನಡ ಲಘುವ್ಯಾಕರಣ (1880), ಆರ್.ರಘುನಾಥರಾಯರ ಕರ್ನಾಟಕ ಭಾಷಾ ವ್ಯಾಕರಣೋಪನ್ಯಾಸ ಮಂಜರಿ (1894), ಬಿ.ಮಲ್ಲಪ್ಪನವರ ಶಬ್ದಾದರ್ಶ (1890)

ತೀ.ನಂ.ಶ್ರೀ

ತೀ.ನಂ.ಶ್ರೀ. ಅವರ ಹೊಸಗನ್ನಡ ವ್ಯಾಕರಣ ಮುಂತಾದ ವ್ಯಾಕರಣ ಗ್ರಂಥಗಳು ಪ್ರಕಟವಾಗಿವೆ.

ಅಲಂಕಾರಶಾಸ್ತ್ರ: ಶ್ರೀ ವಿಜಯನ (ಸು.850) ಕವಿರಾಜಮಾರ್ಗ ಕನ್ನಡದಲ್ಲಿ ಉಪಲಬ್ಧವಾದ ಅತ್ಯಂತ ಪ್ರಾಚೀನ ಅಲಂಕಾರ ಗ್ರಂಥ. ಇದು ದಂಡಿಯ ಕಾವ್ಯಾದರ್ಶದ ಮಾದರಿಯಲ್ಲಿ ರಚಿತವಾಗಿದೆ. ಇದರಲ್ಲಿ ಮೂರು ಅಧ್ಯಾಯವಿದೆ. ಕಾವ್ಯಕ್ಕೆ ಸೌಂದರ್ಯವನ್ನು ತಂದುಕೊಡುವ ಎಲ್ಲವÆ ಅಲಂಕಾರವೆಂದು ಇವನ ಅಬಿsಪ್ರಾಯ. ರಸಗಳಲ್ಲಿ ಇವನು ಶಾಂತವನ್ನು ಹೇಳಿರುವುದು ಗಮನಾರ್ಹವಾಗಿದೆ. ಈ ಗ್ರಂಥದಲ್ಲಿ ಕನ್ನಡ ನಾಡು, ನುಡಿಗಳ ಬಗ್ಗೆ, 850ಕ್ಕಿಂತ ಹಿಂದಿನ ಕನ್ನಡ ಸಾಹಿತ್ಯದ ಬಗ್ಗೆ, ಅನೇಕ ಕಾವ್ಯ ಪ್ರಕಾರಗಳ ಬಗ್ಗೆ ಹಲವು ಸ್ವಾರಸ್ಯಕರವಾದ ಹೇಳಿಕೆಗಳಿವೆ. ಎರಡನೆಯ ನಾಗವರ್ಮನ ಕಾವ್ಯಾವಲೋಕನದಲ್ಲಿ (ಸು.1042) ಐದು ಪರಿಚ್ಫೇದಗಳಿದ್ದು ಕೊನೆಯ ನಾಲ್ಕು ಅಲಂಕಾರ ಶಾಸ್ತ್ರಕ್ಕೆ ಮೀಸಲಾಗಿವೆ. ಇವನು ವಾಮನ, ರುದ್ರಟ, ಭಾಮಹ, ದಂಡಿ ಮುಂತಾದ ಸಂಸ್ಕೃತ ಅಲಂಕಾರಿಕರಿಂದ ವಿಷಯ ಸಂಗ್ರಹಿಸಿದ್ದಾನೆ. ಕವಿಸಮಯದ ಭಾಗಕ್ಕೆ ರಾಜಶೇಖರನಿಗೆ ಋಣಿಯಾಗಿರುವಂತೆ ತೋರುತ್ತದೆ. ಈತ ಧ್ವನಿಯ ಮಾತೆತ್ತಿದ್ದರೂ ಅದೂ ಒಂದು ಅಲಂಕಾರ ಎಂದಿದ್ದಾನೆ. ಕವಿಕಾಮನ ಶೃಂಗಾರರತ್ನಾಕರ (ಸು.1200) ರಸದ ವಿಷಯವನ್ನು ವಿಸ್ತಾರವಾಗಿ ಪ್ರತಿ ಪಾದಿಸುವ ಮೊದಲ ಕನ್ನಡ ಗ್ರಂಥ. ರಸಮೇ ಮೊದಲ್ ಕವಿತೆಗೆ ಎಂದೀತ ಹೇಳಿದ್ದಾನೆ. ಮಾಧವನ ಮಾಧವಾಲಂಕಾರ ಸಂಸ್ಕೃತ ಕಾವ್ಯಾದರ್ಶದ ಸರಳಾನುವಾದ. ಸಾಳ್ವನ ರಸರತ್ನಾಕರದಲ್ಲಿ (ಸು.1550) ವಿಸ್ತಾರವಾದ ರಸದ ಪ್ರತಿಪಾದನೆ ಇದೆ. ಇವನ ಇನ್ನೊಂದು ಗ್ರಂಥ ಶಾರದಾವಿಲಾಸದಲ್ಲಿ ಧ್ವನಿಯ ಬಗ್ಗೆ ಮೊತ್ತಮೊದಲು ವಿಸ್ತೃತ ಚರ್ಚೆ ದೊರೆಯುತ್ತದೆ. ಚಿಕ್ಕದೇವರಾಜ ಒಡೆಯರ ಕಾಲದಲ್ಲಿದ್ದ ತಿರುಮಲಾರ್ಯ ತನ್ನ ಅಪ್ರತಿಮವೀರಚರಿತದಲ್ಲಿ ಶಬ್ದಾಲಂಕಾರ, ಅರ್ಥಾಲಂಕಾರಗಳ ವಿವರಣೆಗಳನ್ನಿತ್ತಿದ್ದಾನೆ. ಜಾಯೇಂದ್ರ (1734) ಅಪ್ಪಯ್ಯ ದೀಕ್ಷಿತನ ಸಂಸ್ಕೃತ ಕುವಲಯಾನಂದವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾನೆ. ಇವನ ಇನ್ನೊಂದು ಸ್ವಕೃತಿ ರಸಮಂಜರಿಯಲ್ಲಿ ನಾಯಕ, ನಾಯಿಕೆಯರ ಪ್ರಭೇದಗಳನ್ನು ವಿವರಿಸಲಾಗಿದೆ. ತಿಮ್ಮ ತನ್ನ ನವರಸಾಲಂಕಾರದಲ್ಲಿ (ಸು.1600 ಗ್ರಂಥ ಪ್ರಕಟವಾಗಿಲ್ಲ) ಮುಖ್ಯವಾಗಿ ಪುರ್ವಗ್ರಂಥಗಳಿಂದ, ಅದರಲ್ಲೂ ವಿಶೇಷವಾಗಿ ಸಾಳ್ವನ ರಸರತ್ನಾಕರ ಮತ್ತು ಕವಿಕಾಮನ ಶೃಂಗಾರ ರತ್ನಾಕರಗಳಿಂದ ರಸಲಕ್ಷಣಗಳನ್ನು ಇದ್ದಕ್ಕಿದ್ದಂತೆ ಎತ್ತಿಕೊಂಡು ಸಂಕಲನ ಗ್ರಂಥವೆನ್ನುವ  ಅದರಲ್ಲೂ ವಿಶೇಷವಾಗಿ ಸಾಳ್ವನ ರಸರತ್ನಾಕರ ಮತ್ತು ಕವಿಕಾಮನ ಶೃಂಗಾರ ರತ್ನಾಕರಗಳಿಂದ ರಸಲಕ್ಷಣಗಳನ್ನು ಇದ್ದಕ್ಕಿದ್ದಂತೆ ಎತ್ತಿಕೊಂಡು ಸಂಕಲನ ಗ್ರಂಥವೆನ್ನುವ ರೀತಿಯಲ್ಲಿ ಬರೆದಿದ್ದಾನೆ. ಇದರ ಒಂದು ಗಮನಾರ್ಹ ವೈಶಿಷ್ಟ್ಯವೆಂದರೆ ಕೇವಲ ಚಂಪುಕಾವ್ಯದ ಉದಾಹರಣೆಗಳನ್ನು ಕೊಡದೆ ಎರಡು ಷಟ್ಪದಿ ಹಾಗೂ ಒಂದು ತ್ರಿಪದಿಯನ್ನು ಉದಾಹರಿಸಿರುವುದು. ಅಳಿಯ ಲಿಂಗರಾಜನ ನರಪತಿಚರಿತ (ಸು.1867) ಶಬ್ದಾಲಂಕಾರ, ಅರ್ಥಾಲಂಕಾರಗಳನ್ನು ಹೇಳುವಲ್ಲಿ ಸಂಸ್ಕೃತ ಕುವಲಯಾನಂದವನ್ನು ಅನುಸರಿಸಿದೆ. ಅದೇ ಶತಮಾನದ ಉತ್ತರಾರ್ಧದಲ್ಲಿದ್ದ ಚಾವಲಿರಾಮಸ್ವಾಮಿಶಾಸ್ತ್ರಿಗಳ ‘ಕರ್ನಾಟಕ ಛಂದೋಲಂಕಾರ ಸಾಹಿತ್ಯ ಲಕ್ಷಣ ಸಂಗ್ರಹ’ ಛಂದಸ್ಸು ಹಾಗೂ ಅಲಂಕಾರ ಶಾಸ್ತ್ರಗಳ ಕೈಪಿಡಿಯಾಗಿದೆ. ಕನ್ನಡ ಕೈಪಿಡಿ, ತೀ.ನಂ.ಶ್ರೀಕಂಠಯ್ಯ ನವರ ಭಾರತೀಯ ಕಾವ್ಯಮೀಮಾಂಸೆ, ಕೆ.ಕೃಷ್ಣಮೂರ್ತಿಯವರ ಕನ್ನಡದಲ್ಲಿ ಕಾವ್ಯತತ್ತ್ವ, ದ.ರಾ.ಬೇಂದ್ರೆಯವರ ಸಾಹಿತ್ಯ ಮತ್ತು ವಿಮರ್ಶೆ, ಕುವೆಂಪು ಅವರ ರಸೋ ವೈ ಸಃ, ಡಿ.ವಿ.ಜಿ. ಅವರ ಸಾಹಿತ್ಯಶಕ್ತಿ, ವಿ.ಸೀ. ಅವರ ಸಾಹಿತ್ಯ ಸಂಪ್ರದಾಯ ಮತ್ತು ಹೊಸ ಮಾರ್ಗ, ಬಿ.ಎಚ್.ಶ್ರೀಧರ ಅವರ ಕಾವ್ಯಸೂತ್ರ ಜಿ.ಎಸ್.ಶಿವರುದ್ರಪ್ಪ ಅವರ ಕಾವ್ಯಾರ್ಥಚಿಂತನೆ ಎಚ್.ತಿಪ್ಪೇರುದ್ರಸ್ವಾಮಿ ಯವರ ತೌಲನಿಕಕಾವ್ಯಮೀಮಾಂಸೆ ಮುಂತಾದ ಗ್ರಂಥಗಳಲ್ಲಿ ಕನ್ನಡ ಕಾವ್ಯಮೀಮಾಂಸೆಗೆ ಸಂಬಂದಿsಸಿದಂತೆ ಸಾಕಷ್ಟು ಸಾಮಗ್ರಿ ಚರ್ಚಿತವಾಗಿದೆ

ನಿಘಂಟುಗಳು: ರನ್ನನ ರನ್ನಕಂದ ಈಗ ದೊರೆತಿರುವ ಮೊದಲ ನಿಘಂಟು. ಹಳಗನ್ನಡದ ಶಬ್ದಗಳಿಗೆ ಅರ್ಥ ಹೇಳುವ ಈ ಕೃತಿಯ 11 ಕಂದ ಪದ್ಯಗಳು ಮಾತ್ರ ದೊರಕಿವೆ. ಕೇಶಿರಾಜನ ಶಬ್ದಮಣಿದರ್ಪಣ ವ್ಯಾಕರಣ ಗ್ರಂಥವಾದರೂ ಅದರಲ್ಲಿ ಅನೇಕ ಅಪುರ್ವ ಪದಗಳಿಗೆ ಅರ್ಥವನ್ನು ಕೊಡಲಾಗಿದೆ. ಸು.1400ರಲ್ಲಿ ರಚಿತವಾದ ಗದ್ಯರೂಪದ ಕರ್ನಾಟಕ ಶಬ್ದಸಾರ, ಸುಮಾರು ಅದೇ ಕಾಲದ ಕರ್ನಾಟಕ ನಿಘಂಟುವಿನಲ್ಲಿ ಕಂದ, ವೃತ್ತಗಳಲ್ಲಿ ಅನೇಕ ಕನ್ನಡ ಪದಗಳಿಗೆ ಅರ್ಥ ಹೇಳಿದೆ. ಲಿಂಗಮಂತ್ರಿಯ ಕಬ್ಬಿಗರ ಕೈಪಿಡಿ (ಸು.1530) ವಾರ್ಧಕ ಷಟ್ಪದಿ ರೂಪವಾದ ಪ್ರಸಿದ್ಧ ನಿಘಂಟು. ಶೃಂಗಾರ ಕವಿಯ (ಸು.1600) ಕರ್ನಾಟಕ ಸಂಜೀವನದಲ್ಲಿ ಕುಳಕ್ಷಳ ಶಬ್ದಗಳಿಗೆ, ಸೂರ್ಯಕವಿಯ (ಸು.1640) ಕವಿ ಕಂಠಹಾರದಲ್ಲಿ ಹಳಗನ್ನಡ ಪದಗಳಿಗೆ ಅರ್ಥವಿವರಣೆ ಬಂದಿದೆ. 2ನೆಯ ನಾಗವರ್ಮನ ಅಬಿsಧಾನ ವಸ್ತುಕೋಶ, 2ನೆಯ ಮಂಗರಾಜನ ಅಬಿsನವ ನಿಘಂಟು (ಸು.1398), ಕರ್ತೃ ಗೊತ್ತಿಲ್ಲದ ಶಬ್ದರತ್ನಾಕರ (ಸು.1600), ಚೆನ್ನಕವಿಯ ನಾನಾರ್ಥ ಕಂದ (ಸು.1600), ದೇಮೋತ್ತಮನ ನಾನಾರ್ಥರತ್ನಾಕರ (ಸು.1600), ಏಕಾಕ್ಷರ ನಿಘಂಟು ಇತ್ಯಾದಿಗಳಲ್ಲಿ ಸಂಸ್ಕೃತ ಪದಗಳಿಗೆ ಅರ್ಥ ಹೇಳಿದೆ. ಹಲಾಯುಧನ ಸಂಸ್ಕೃತ ಅಬಿsಧಾನ ರತ್ನಮಾಲಾ, ಅಮರಕೋಶ ಇವುಗಳಿಗೆ ಕನ್ನಡ ಟೀಕೆಗಳು ದೊರೆಯುತ್ತವೆ. ಅಮೃತನಂದಿಯ ಅಕಾರಾದಿ ವೈದ್ಯ ನಿಘಂಟು (ಸು.1300), ಕರ್ತೃ ಗೊತ್ತಿಲ್ಲದ ಧನ್ವಂತರೀಯ ನಿಘಂಟು (ಸು.1500), ಇಂದ್ರ ದೀಪಿಕಾ ನಿಘಂಟು, ಮದನಾರಿ ವೈದ್ಯ ನಿಘಂಟು - ಇವುಗಳಲ್ಲಿ ವೈದ್ಯಕ್ಕೆ ಸಂಬಂದಿsಸಿದ ಸಂಸ್ಕತ ಪದಗಳಿಗೆ ಅರ್ಥ ಹೇಳಿದೆ. ಚತುರಾಸ್ಯ ಬೊಮ್ಮರಸನ ಚತುರಾಸ್ಯ ನಿಘಂಟು (ಸು.1450), ವಿರಕ್ತ ತೋಂಟದಾರ್ಯನ ಕರ್ನಾಟಕ ಶಬ್ದಮಂಜರಿ (ಸು.1560) ಇವುಗಳಲ್ಲಿ ದೇಶ್ಯ, ತತ್ಸಮ, ತದ್ಭವ ಶಬ್ದಗಳಿಗೆ ಅರ್ಥ ಹೇಳಿದೆ. ಕರ್ನಾಟಕ ಶಬ್ದಮಂಜರಿಗೆ ನಾಲ್ಕು ಬೇರೆ ಬೇರೆ ಟೀಕೆಗಳು ದೊರೆಯುತ್ತವೆ. ಕರ್ತೃ ತಿಳಿಯದ ಭಾರತ ನಿಘಂಟು (ಸು.1600) ಎಂಬ ಕೃತಿಯಲ್ಲಿ ಕುಮಾರವ್ಯಾಸ ಭಾರತದಲ್ಲಿನ ದೇಶ್ಯ ಶಬ್ದಗಳಿಗೆ 67 ಕಂದಪದ್ಯಗಳಲ್ಲಿ ಅರ್ಥ ಹೇಳಿದೆ. ಮುಮ್ಮಡಿ ಕೃಷ್ಣರಾಜನ ಚಾಮುಂಡಿಕಾ ಲಘು ನಿಘಂಟು (ಸು.1848) ಎಂಬ ಕೃತಿಯಲ್ಲಿ ದೇವತೆಗಳು ಮೊದಲಾದವರು ಹಸ್ತದಲ್ಲಿ ಧರಿಸುವ ಆಯುಧಗಳು, ಹಸ್ತ ವಿಶೇಷಗಳು, ಮೃಗನಾಮಾವಳಿ ಇವುಗಳಿಗೆ ಸಂಬಂದಿsಸಿದ ಸಂಸ್ಕೃತ ಶಬ್ದಗಳಿಗೆ ಪ್ರತಿಪದ ಕನ್ನಡ ಟೀಕನ್ನು ಕೊಟ್ಟಿದೆ. 19ನೆಯ ಶತಮಾನದ

19ನೆಯ ಶತಮಾನದಿಂದೀಚೆಗೆ ಅನೇಕ ಪಾದ್ರಿಗಳು, ದೇಶೀಯ ವಿದ್ವಾಂಸರು ನಿಘಂಟುಗಳನ್ನು ಬರೆದಿದ್ದಾರೆ. ಅವುಗಳಲ್ಲಿ ರೆವರೆಂಡ್ ಎಫ್. ಕಿಟ್ಟೆಲರ ಕನ್ನಡ-ಇಂಗ್ಲಿಷ್ ನಿಘಂಟು (1832) ಅತ್ಯಂತ ಶ್ರೇಷ್ಠವಾದುದು. ಕನ್ನಡದ ಪ್ರೌಢ ವಿದ್ಯಾರ್ಥಿಗಳಿಗೆ ಪಂಡಿತರಿಗೆ ವಿದ್ವಾಂಸರಿಗೆ ಇದು ಇಂದಿಗೂ ಮಾರ್ಗದರ್ಶಿಯಾಗಿದೆ. ಇದರಲ್ಲಿ ಕನ್ನಡ ಪದಗಳಿಗೆ ಸಂವಾದಿಯಾದ ಇತರ ದ್ರಾವಿಡ ಭಾಷೆಯ ಪದಗಳನ್ನು ಕೊಟ್ಟಿರುವುದಲ್ಲದೆ, ಸಂಸ್ಕೃತ ಮತ್ತು ತದ್ಭವ ಪದಗಳಿಗೆ ಅರ್ಥವನ್ನು ಕೊಟ್ಟಿದೆ. ಸಾಧ್ಯವಾದಷ್ಟು ಕಡೆ ಪ್ರಯೋಗಗಳನ್ನು ಸೂಚಿಸಿದೆ. 20ನೆಯ ಶತಮಾನದಲ್ಲಿಯೂ ಅನೇಕ ನಿಘಂಟುಗಳು ರಚಿತವಾಗಿವೆ. ಶಿವರಾಮ ಕಾರಂತರ ಸಿರಿಗನ್ನಡ ಅರ್ಥಕೋಶ (ಸು.1940) ಚೆ.ಎ.ಕವಲಿ ಯವರ ಸಚಿತ್ರ ಕನ್ನಡ-ಕನ್ನಡ ಕಸ್ತೂರೀ ಕೋಶ (1957)- ಆರ್.ಎಸ್.ರಾಮರಾವ್ ಅವರ ಕನ್ನಡ-ಕನ್ನಡ-ಇಂಗ್ಲಿಷ್ ನಿಘಂಟು ಮುಂತಾದುವನ್ನು ಇಲ್ಲಿ ಹೆಸರಿಸಬಹುದು.
ಒಬ್ಬ ಕವಿಯನ್ನು ಕುರಿತಂತೆ ಅವನು ಉಪಯೋಗಿಸುವ ಪದಗಳಿಗೆ ಅರ್ಥ ವಿವರಣೆ ಕೊಡುವ ನಿಘಂಟುಗಳೂ ಕನ್ನಡದಲ್ಲಿ ರಚಿತವಾಗಿವೆ. ಅವುಗಳಲ್ಲಿ ಕುಮಾರವ್ಯಾಸ ನಿಘಂಟು ಹೆಸರಿಸಬಹುದಾದ್ದು.
ಈಗ ಪ್ರಕಟವಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು, ನಿಘಂಟು ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿದೆ. ಕನ್ನಡ ಭಾಷೆಯಲ್ಲಿನ ಎಲ್ಲ ತೆರನ ಸಾಹಿತ್ಯವನ್ನು ಈ ನಿಘಂಟುವಿನಲ್ಲಿ ಬಳಸಿಕೊಳ್ಳಲಾಗಿದೆ. ಹಲ್ಮಿಡಿ ಶಾಸನದಿಂದ (ಸು.450) ಹಿಡಿದು 18ನೆಯ ಶತಮಾನದ ವರೆಗಿನ ಪ್ರಕಟಿತ, ಅಪ್ರಕಟಿತ ಶಾಸನಗಳ ಸಾಮಗ್ರಿಯನ್ನೂ ಕವಿರಾಜಮಾರ್ಗದಿಂದ ಶ್ರೀ ರಾಮಾಯಣದರ್ಶನಂ ವರೆಗಿನ, ಇನ್ನೂ ಇತ್ತೀಚಿನ ಸಾಹಿತ್ಯ ಸಾಮಗ್ರಿಯನ್ನೂ ಕನ್ನಡದಲ್ಲಿ ಬಳಕೆಯಾಗಿರುವ, ಬಳಕೆಯಾಗುತ್ತಿರುವ ಎಲ್ಲ ಪದಗಳಿಗೂ ಭಾಷಾ ವಿಜ್ಞಾನದ ನಿಯಮಗಳಿಗನುಸಾರವಾಗಿ ಚಾರಿತ್ರಿಕ ವಿವರಣೆಯೊಂದಿಗೆ ಅರ್ಥವನ್ನು ಕೊಡಲಾಗಿದೆ. ಇದು ಪ್ರಧಾನವಾಗಿ ಕನ್ನಡ ನಿಘಂಟಾದರೂ ಕನ್ನಡ ಭಾಷೆಯಲ್ಲಿ ಸೇರಿ ಹೋಗಿರುವ ದೇಶ್ಯ, ತದ್ಭವ, ತತ್ಸಮ, ಅನ್ಯದೇಶ್ಯ ಮುಂತಾದ ಶಬ್ದಗಳೂ ಧಾರ್ಮಿಕ, ಲೌಕಿಕ, ವ್ಯಾವಹಾರಿಕ, ಪಾರಿಭಾಷಿಕ ಮುಂತಾದ ಶಬ್ದಗಳೂ ಇಲ್ಲಿ ಸೇರಿವೆ. ಯಾವುದಾದರೂ ಒಂದು ಶಬ್ದ ಅಪುರ್ವವಾಗಿದ್ದರೆ, ವಿಶೇಷಾರ್ಥವುಳ್ಳದ್ದಾಗಿದ್ದರೆ ಅಥವಾ ಶಾಸ್ತ್ರ ಪರಿಭಾಷೆಯಾಗಿದ್ದರೆ ಅದರ ಅರ್ಥವನ್ನು
ವಿಶೇಷಾರ್ಥವುಳ್ಳದ್ದಾಗಿದ್ದರೆ ಅಥವಾ ಶಾಸ್ತ್ರ ಪರಿಭಾಷೆಯಾಗಿದ್ದರೆ ಅದರ ಅರ್ಥವನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಉಚಿತವರಿತು ಪ್ರಯೋಗಗಳನ್ನು ಕೊಡಲಾಗುವುದು. ಪ್ರತಿಯೊಂದು ಶಬ್ದದ ಅರ್ಥ ನಿರ್ಣಯಕ್ಕೂ ಪ್ರಯೋಗಗಳನ್ನೇ ಮುಖ್ಯ ಆಧಾರವಾಗಿಟ್ಟು ಕೊಳ್ಳಲಾಗಿದೆ. ಪ್ರತಿಯೊಂದು ಮುಖ್ಯ ಶಬ್ದಕ್ಕೂ ನಿಷ್ಪತ್ತಿಯನ್ನು ಸೂಚಿಸಲಾಗಿದೆ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಜೀವಂತ ಪ್ರತೀಕದಂತಿರುವ ಚಾರಿತ್ರಿಕ ಕ್ರಮದ ಎಂಟು ಸಂಪುಟಗಳ ಈ ನಿಘಂಟು ಇಷ್ಟು ದೊಡ್ಡ ಪ್ರಮಾಣದಲ್ಲಿ ಈ ವಿಧದಲ್ಲಿ ರಚಿತವಾಗಿ ಪ್ರಕಟವಾಗುತ್ತಿರುವುದು (1995) ಇದೇ ಮೊದಲು.

ಛಂದೋಗ್ರಂಥಗಳು: ಒಂದನೆಯ ನಾಗವರ್ಮನ (ಸು.990) ಛಂದೋಬುಧಿ ದೊರೆತ ಛಂದೋಗ್ರಂಥಗಳಲ್ಲಿ ಪ್ರಾಚೀನವಾದುದು. ಆದರೆ ಇದಕ್ಕಿಂತ ಹಿಂದೆ 9ನೆಯ ಶತಮಾನದಲ್ಲಿ ಗುಣಗಾಂಕೀಯ ಎಂಬ ಛಂದೋಗ್ರಂಥವಿದ್ದಿತೆಂದು ಊಹಿಸಲು ಅವಕಾಶವಿದೆ. ಕವಿರಾಜಮಾರ್ಗದಲ್ಲಿ ಛಂದಸ್ಸಿಗೆ ಸಂಬಂದಿsಸಿದ ಅನೇಕ ಮುಖ್ಯ ಸಂಗತಿಗಳಿವೆ. ಆದರೂ ಛಂದೋಂಬುದಿs ಕನ್ನಡದ ಏಕೈಕ, ಅದಿsಕೃತ ಪ್ರಾಚೀನ ಲಕ್ಷಣಗ್ರಂಥ (ನೋಡಿ: ನಾಗವರ್ಮ I). ಜಯಕೀರ್ತಿಯ ಛಂದೋನುಶಾಸನ (ಏಳನೆಯ ಅಧ್ಯಾಯ), 3ನೆಯ ಸೋಮೇಶ್ವರನ ಮಾನಸೋಲ್ಲಾಸ, ಶಾಙರ್ಗ್‌ದೇವನ ಸಂಗೀತರತ್ನಾಕರ ಮುಂತಾದ ಸಂಸ್ಕೃತ ಗ್ರಂಥಗಳಲ್ಲಿ ಕನ್ನಡ ಛಂದಸ್ಸಿಗೆ ಸಂಬಂದಿsಸಿದ ಅನೇಕ ಸಂಗತಿಗಳು ಪ್ರತಿಪಾದಿತವಾಗಿವೆ. 2ನೆಯ ನಾಗವರ್ಮನ ಛಂದೋವಿಚಿತಿ ಎಂಬ ಗ್ರಂಥ ಉಪಲಬ್ಧವಿಲ್ಲ. ಈಶ್ವರಕವಿಯ (ಸು.1500) ಕವಿಜಿಹ್ವಾಬಂಧನ, ಗುಣಚಂದ್ರನ ಛಂದಸ್ಸಾರ (ಸು.1650), ಶಾಲ್ಯದ ಕೃಷ್ಣರಾಜನ ಷಟ್ಪ್ರತ್ಯಯ (1748), ವೀರಭದ್ರ ಕವಿಯ ನಂದಿ ಛಂದಸ್ಸು ಮುಂತಾದ ಛಂದೋಗ್ರಂಥಗಳಲ್ಲಿಯೂ ಕನ್ನಡ ಛಂದಸ್ಸಿನ ವಿಷಯಗಳು ಸ್ವಲ್ಪಮಟ್ಟಿಗೆ ನಿರೂಪಿತವಾಗಿವೆ.

ವೈದ್ಯಶಾಸ್ತ್ರ: ಜಗದ್ದಳ ಸೋಮನಾಥನ ಕರ್ನಾಟಕ ಕಲ್ಯಾಣಕಾರಕ (ಸು.1175) ಈಗ ದೊರೆತಿರುವ ಮೊದಲನೆಯ ಕನ್ನಡ ಆಯುರ್ವೇದ ಗ್ರಂಥ. ಇದು ಪುಜ್ಯಪಾದನ ಸಂಸ್ಕೃತ ಕಲ್ಯಾಣಕಾರಕದ ಅನುವಾದ. ದೇವೇಂದ್ರಮುನಿ ಬಾಲಗ್ರಹ ಚಿಕಿತ್ಸೆ (ಸು.1200) ಎಂಬ ಗ್ರಂಥವನ್ನು ಬರೆದಿದ್ದಾನೆ. 1ನೆಯ ಮಂಗರಾಜನ ಖಗೇಂದ್ರಮಣಿದರ್ಪಣ (ಸು.1360) ಮುಖ್ಯವಾಗಿ ಒಂದು ವಿಷವೈದ್ಯಗ್ರಂಥ. ಇವನ ಗ್ರಂಥಕ್ಕೆ ಮೂಲ ಪುಜ್ಯಪಾದನ ವೈದ್ಯಗ್ರಂಥದ ಸ್ಥಾವರವಿಷಪ್ರಕ್ರಿಯೆ. ಕನ್ನಡದ ಇತರ ವೈದ್ಯಗ್ರಂಥಗಳು ಹೀಗಿವೆ: ಶ್ರೀಧರದೇವನ ವೈದ್ಯಾಮೃತ (ಸು.1500), ಸಾಳ್ವನ ವೈದ್ಯಸಾಂಗತ್ಯ (ಸು.1550), ಚೆನ್ನರಾಜನ ವೈದ್ಯಸಾರ ಸಂಗ್ರಹ (ಸು.1570), ನಂಜನಾಥ ಭೂಪಾಲನ ವೈದ್ಯಸಾರ ಸಂಗ್ರಹ (ಸು.1700), ವೀರರಾಜನ ಸಕಲವೈದ್ಯಸಂಹಿತಾ ಸಾರಾರ್ಣವ (ಸು.1700), ಬ್ರಹ್ಮನ ವೈದ್ಯಕಂದ (ಸು.1750), ತಿಮ್ಮರಾಜಗೌಡನ ಸ್ತ್ರೀವೈದ್ಯ (ಸು.1750). ಪಶುವೈದ್ಯ: ಕೀರ್ತಿವರ್ಮನ (ಸು.1100) ಗೋವೈದ್ಯ ಕನ್ನಡ ವೈದ್ಯ ಗ್ರಂಥಗಳಲ್ಲಿ ಅತ್ಯಂತ ಪ್ರಾಚೀನವಾದುದು. ಇದರಲ್ಲಿ ಗೋವುಗಳ ವ್ಯಾದಿsಗಳಿಗೆ ಔಷಧ, ಯಂತ್ರ ಕಟ್ಟುವುದು, ಬರೆಹಾಕುವುದು ಇತ್ಯಾದಿ ವಿಷಯಗಳನ್ನು ಹೇಳಿದೆ. ಅಬಿsನವಚಂದ್ರ (ಸು.1400) ಅಶ್ವಶಾಸ್ತ್ರವನ್ನು ಬರೆದ ಮೊದಲ ಕನ್ನಡ ಕೃತಿಕಾರ. ಈ ಕೃತಿಯಲ್ಲಿ ಕುದುರೆಗಳ ಸರ್ವಾಂಗ ಪರೀಕ್ಷೆ, ವರ್ಣ, ಸುಳಿ, ಹಲ್ಲಿನಿಂದ ವಯಸ್ಸನ್ನು ನಿರ್ಣಯಿಸುವುದು, ಚಿಕಿತ್ಸೆ ಇತ್ಯಾದಿ ವಿಷಯಗಳಿವೆ. ಬಾಚರಸನ ಅಶ್ವವೈದ್ಯ (ಸು.1500) ಕುದುರೆಗಳ ಕಾಯಿಲೆಗಳಿಗೆ ಸಂಬಂದಿsಸಿದ್ದು. ರಾಮಚಂದ್ರ (ಸು.1625) ಶಾಲಿಹೋತ್ರನ ಅಶ್ವಶಾಸ್ತ್ರವನ್ನು ಗದ್ಯದಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾನೆ. ಪದ್ಮಣಪಂಡಿತನು ಹಯಸಾರ ಸಮುಚ್ಚಯ (ಸು.1627) ಎಂಬ ಗ್ರಂಥವನ್ನು ಬರೆದಿದ್ದಾನೆ. ಗಂಗರ ದೊರೆ ಶಿವಮಾರನ ಗಜಾಷ್ಟಕ (8ನೆಯ ಶತಮಾನ) ಕನ್ನಡದ ಪ್ರಾಚೀನ ಗಜಶಾಸ್ತ್ರ ಗ್ರಂಥ. ಈ ಪುಟ್ಟಕೃತಿ (8 ಪದ್ಯ) ಉಪಲಬ್ಧವಾಗಿಲ್ಲದಿದ್ದರೂ ಒನಕೆವಾಡಾಗುವಷ್ಟು ಜನ ಪ್ರಿಯತೆಯನ್ನು ಪಡೆದಿತ್ತೆಂದು ಶಾಸನಗಳಿಂದ ತಿಳಿದುಬರುತ್ತದೆ. ವೀರಭದ್ರರಾಜ (ಸು.1600) ಪಾಲಕಾಪ್ಯನ ಹಸ್ತ್ಯಾಯುರ್ವೇದಕ್ಕೆ ಕನ್ನಡ ಟೀಕೆಯನ್ನು ಬರೆದಿದ್ದಾನೆ.

ಜ್ಯೋತಿಷ್ಯ, ಗಣಿತ, ಸೂಪ, ನೀತಿ, ವೃಷ್ಟಿ ಮತ್ತು ರತ್ನಶಾಸ್ತ್ರ: ಶ್ರೀಧರಾ ಚಾರ್ಯನ ಜಾತಕತಿಲಕ (ಸು.1049) ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ. ಇದರಲ್ಲಿ ಗ್ರಹಣಗಳು, ಮುಹೂರ್ತಗಳು, ಉತ್ಪಾತಗಳು ಮತ್ತು ಅವುಗಳ ಫಲಾಫಲಗಳು ಇತ್ಯಾದಿ ಸಂಗತಿಗಳು ನಿರೂಪಿತವಾಗಿವೆ. ಈತ ವರಾಹಮಿಹಿರನ ಬೃಹಜ್ಜಾತಕ ಮತ್ತು ಲಘುಜಾತಕಗಳು, ಕಲ್ಯಾಣವರ್ಮನ ಸಾರಾವಳಿ ಇತ್ಯಾದಿಗಳಿಂದ ವಿಷಯ ಸಂಗ್ರಹಸಿದ್ದಾನೆ. ಗಣಿತಶಾಸ್ತ್ರಕ್ಕೆ ಸಂಬಂದಿsಸಿದಂತೆ ರಾಜಾದಿತ್ಯ (ಸು.1190) ಕನ್ನಡದಲ್ಲಿ ವ್ಯವಹಾರಗಣಿತ, ಕ್ಷೇತ್ರಗಣಿತ, ವ್ಯವಹಾರರತ್ನ ಲೀಲಾವತಿ, ಚಿತ್ರಹಸುಗೆ, ಜೈನಗಣಿತ ಸೂತ್ರ ಟೀಕೋದಾಹರಣ ಎಂಬ ಗ್ರಂಥಗಳನ್ನು ಬರೆದಿದ್ದಾನೆ. ಆ ಕಾಲದ ಗಣಿತಶಾಸ್ತ್ರಕ್ಕೆ ಸಂಬಂಧಪಟ್ಟ ಎಲ್ಲ ವಿಷಯಗಳನ್ನು ತನ್ನ ಗ್ರಂಥದಲ್ಲಿ ಈತ ತಿಳಿಸಿದ್ದಾನೆ. ಭಾಸ್ಕರ (ಸು.1650) ಬೇಹಾರಗಣಿತವೆಂಬ ಕೃತಿಯನ್ನು ರಚಿಸಿರುವನು. ತಿಮ್ಮರಸನ ಕ್ಷೇತ್ರಗಣಿತ (ಸು.1700) ಹೊಲಗಳನ್ನು ಅಳೆಯುವ ಬೇರೆ ಬೇರೆ ಮಾನಗಳ ವಿವರಗಳನ್ನು ಕೊಡುವುದರಿಂದ ಒಂದು ಸ್ವಾರಸ್ಯ ಗ್ರಂಥವಾಗಿದೆ. ದೈವಜ್ಞವಲ್ಲಭ (ಸು.1700) ಮಹಾವೀರಾಚಾರ್ಯನ ಗಣಿತಕ್ಕೆ ಕನ್ನಡ ವ್ಯಾಖ್ಯಾನವನ್ನು ರಚಿಸಿದ್ದಾನೆ. ಬಾಲವೈದ್ಯದ ಚೆಲುವನ (ಸು.1785) ಕನ್ನಡ ಲೀಲಾವತಿಯಲ್ಲಿ ಸಾಧಾರಣ ಮತ್ತು ಕ್ಷೇತ್ರಗಣಿತ ಎರಡನ್ನೂ ನಿರೂಪಿಸಲಾಗಿದೆ. ಕನ್ನಡದಲ್ಲಿ ಅನೇಕ ಶಕುನ ಗ್ರಂಥಗಳು ರಚಿತವಾಗಿವೆ. ಶುಭಚಂದ್ರನ ನರಪಿಂಗಳಿ (ಸು.1500), ಲಕ್ಷಣಾಂಕನ ಶಕುನಸಾರ, ಚಾಕರಾಜನ ಶಕುನಪ್ರಪಂಚ, ಮಾಧವದೇವನ ನರಪಿಂಗಲಿ (ಸು.1650), ದೇವನ ಶಕುನಪ್ರಪಂಚ (ಸು.1725 ಉಪಲಬ್ದವಿಲ್ಲ) - ಇವು ಶಕುನ ಗ್ರಂಥಗಳಲ್ಲಿ ಮುಖ್ಯವಾದವು. ಸೂಪಶಾಸ್ತ್ರ ಗ್ರಂಥಗಳಲ್ಲಿ 3ನೆಯ ಮಂಗರಸನ ಸೂಪಶಾಸ್ತ್ರ (ಸು.1508) ಅತ್ಯಂತ ಪ್ರಸಿದ್ಧವಾದುದು. ಇದರಲ್ಲಿ ಹಲವಾರು ರೀತಿಯ ಅಡುಗೆಗಳ ಸ್ವಾರಸ್ಯಕರವಾದ ನಿರೂಪಣೆಯಿದೆ. ಇವನ ಸಮ್ಯಕ್ತ್ವ ಕೌಮುದಿ ಎಂಬ ಕಾವ್ಯದಲ್ಲಿ ಒಂದು ಭೋಜನಸಮಾರಂಭದ ವಿನೋದ ವರ್ಣನೆ ಇದೆ. 2ನೆಯ ಚಾವುಂಡರಾಯನ (ಸು.1025) ಲೋಕೋಪಕಾರ ಎಂಬ ಗ್ರಂಥದಲ್ಲಿ ಸೂಪಶಾಸ್ತ್ರ ಎಂಬ ಒಂದು ಪ್ರತ್ಯೇಕ ಅಧ್ಯಾಯವಿದ್ದು ಈ ಅಧ್ಯಾಯಕ್ಕೆ ಕನ್ನಡದಲ್ಲಿ ಒಂದು ಟೀಕೂ ದೊರೆಯುತ್ತದೆ. ದುರ್ಗಸಿಂಹನ ಪಂಚತಂತ್ರ (ಸು.1031) ಕಾವ್ಯ, ನೀತಿ ಇವೆರಡರ ಸಾರಭೂತ ಕೃತಿ. ವಸುಭಾಗಭಟ್ಟನ ಸಂಸ್ಕೃತ ಮೂಲ ಕನ್ನಡ ಪಂಚತಂತ್ರ

ದುರ್ಗಸಿಂಹನ ಪಂಚತಂತ್ರ (ಸು.1031) ಕಾವ್ಯ, ನೀತಿ ಇವೆರಡರ ಸಾರಭೂತ ಕೃತಿ. ವಸುಭಾಗಭಟ್ಟನ ಸಂಸ್ಕೃತ ಮೂಲ ಕನ್ನಡ ಪಂಚತಂತ್ರಕ್ಕೆ ಆಕರವೆಂದು ತಿಳಿದುಬರುತ್ತದೆ. ಇದರಲ್ಲಿ ಪ್ರಾಣಿಗಳ ಕಥೆಯ ಮೂಲಕ ರಾಜನೀತಿ ನಿರೂಪಣೆಗೊಂಡಿದೆ. ಚಿಕುಪಾಧ್ಯಾಯ (ಸು.1672) ಸಂಸ್ಕೃತ ಕಾಮಂದಕ ನೀತಿಗೆ ಗದ್ಯರೂಪವಾದ ಟೀಕೆಯೊಂದನ್ನು ಬರೆದಿದ್ದಾನೆ. ರಟ್ಟಕವಿಯ ರಟ್ಟಮತ (ಸು.1300) ವೃಷ್ಟಿಶಾಸ್ತ್ರಕ್ಕೆ ಸಂಬಂದಿsಸಿದ ಗ್ರಂಥ. ಇದರಲ್ಲಿ ಮಳೆಯ ಕುರುಹು, ಶಕುನಗಳು, ಬಿತ್ತುವುದು, ಭೂಜಲವನ್ನು ತೆಗೆಯುವುದು,ಕ್ಷಾಮ ಇತ್ಯಾದಿ ವಿಷಯಗಳಿವೆ. ಬಾಲವೈದ್ಯದ ಚೆಲುವನ ರತ್ನಶಾಸ್ತ್ರದಲ್ಲಿ ಬೇರೆ ಬೇರೆ ಜಾತಿಯ ರತ್ನಗಳು ಅವುಗಳ ಗುಣದೋಷಗಳು, ಕೃತ್ರಿಮರತ್ನದ ಲಕ್ಷಣ ಇತ್ಯಾದಿ ಸಂಗತಿಗಳಿವೆ.

*ಕಾವ್ಯ ಮಿಮಾಂಸೆಯ ಸಿದ್ಧಾಂತ ಪ್ರವರ್ತಕರು*

ಅಲಂಕಾರ ಸಿದ್ಧಾಂತ - ಭಾಮಹ

ಗುಣ ಸಿದ್ಧಾಂತ- ದಂಡಿ

ರೀತಿ ಸಿದ್ಧಾಂತ- ವಾಮನ

ಧ್ವನಿ ಸಿದ್ಧಾಂತ- ಆನಂದವರ್ಧನ

ವಕ್ರೋಕ್ತಿ ಸಿದ್ಧಾಂತ - ಕುತಂಕ

ರಸ ಸಿದ್ಧಾಂತ - ಭರತ

ಔಚಿತ್ಯ ಸಿದ್ಧಾಂತ - ಕ್ಷೇಮೇಂದ್ರ

ಉತ್ಪತ್ತಿವಾದ- ಭಟ್ಟ ಲೊಲ್ಲಟ

ವ್ಯಕ್ತಿ ವಾದ ,ಅನುಭೂತಿವಾದ- ಅಭಿನವಗುಪ್ತ

ಸಾಧಾರಣೀಕರಣ, ಭುಕ್ತಿವಾದ,ಭೋಗವಾದ- ಭಟ್ಟ ನಾಯಕ

ಅನುಮಿತವಾದ, ಚಿತ್ರತುರಗನ್ಯಾಯ - ಶ್ರೀ ಶಂಕುಕ

ಅಭಿಹಿತಾತ್ವಯವಾದಿಗಳು- ಆನಂದವರ್ಧನ,ಅಭಿನವಗುಪ್ತ, ಮಮ್ಮಟ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ