ಗುರುವಾರ, ಮಾರ್ಚ್ 30, 2017

ನಿರ್ದಿಷ್ಟ ದಾಳಿ ನಾಯಕನಿಗೆ "ಕೀರ್ತಿ ಚಕ್ರ" ಪ್ರಧಾನ

ನಿರ್ದಿಷ್ಟ ದಾಳಿ ನಾಯಕನಿಗೆ 'ಕೀರ್ತಿ ಚಕ್ರ' ಪ್ರದಾನ

ನವದೆಹಲಿ: ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ನಿರ್ದಿಷ್ಟ ದಾಳಿಯ ನೇತೃತ್ವ ವಹಿಸಿದ್ದ ಮೇಜರ್ ರೋಹಿತ್ ಸೂರಿ ಅವರಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ‘ಕೀರ್ತಿ ಚಕ್ರ’ ಪ್ರದಾನ ಮಾಡಿದರು.

ಶಾಂತಿ ಕಾಲದಲ್ಲಿ ನಡೆಸುವ ಕಾರ್ಯಾಚರಣೆಗಳಲ್ಲಿ ಶೌರ್ಯ ಮೆರೆಯುವ ಯೋಧರಿಗೆ ನೀಡುವ ಎರಡನೆಯ ಅತ್ಯುನ್ನತ ಗೌರವ ಇದು.

ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ಅರುಣ್ ಜೇಟ್ಲಿ, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಪಾಲ್ಗೊಂಡಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ