ಗುರುವಾರ, ಮಾರ್ಚ್ 30, 2017

ಸ್ಟೇಝಿಲ್ಲಾ ಸಹಸ್ಥಾಪಕ ವಸುಪಾಲ್

ಸ್ಟೇಝಿಲ್ಲಾ ಸಹಸ್ಥಾಪಕ ವಸುಪಾಲ್ ಬಂಧನ ಖಂಡಿಸಿ ರಾಜನಾಥ್‌ಗೆ ಪ್ರಮುಖ ಟೆಕ್ ಉದ್ಯಮಿಗಳ ಪತ್ರ

ಹೊಸದಿಲ್ಲಿ,ಮಾ.20: ಸ್ಟೇಝಿಲ್ಲಾ ಸಹಸ್ಥಾಪಕ ಯೋಗೇಂದ್ರ ವಸುಪಾಲ್ ಅವರನ್ನು ಬಂಧಿಸಿರುವ ವಿಧಾನದ ಬಗ್ಗೆ ಕಳವಳ ವ್ಯಕ್ತಪಡಿಸಿ ಪೇಟಿಎಮ್‌ನ ವಿಜಯ ಶೇಖರ ಶರ್ಮಾ, ಓಲಾ ಕ್ಯಾಬ್ಸ್‌ನ ಭವಿಷ್ ಅಗರವಾಲ್ ಮತ್ತು ಮಾಜಿ ಇನ್ಫೋಸಿಸ್ ನಿರ್ದೇಶಕ ಟಿ.ವಿ.ಮೋಹನದಾಸ ಪೈ ಸೇರಿದಂತೆ ಪ್ರಮುಖ ತಂತ್ರಜ್ಞಾನ ಕ್ಷೇತ್ರದ ಉದ್ಯಮಿಗಳು ಮತ್ತು ಸ್ಟಾರ್ಟ್ ಅಪ್‌ಗಳ ಸ್ಥಾಪಕರು ಗೃಹಸಚಿವ ರಾಜನಾಥ ಸಿಂಗ್ ಅವರಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.

'ಹೆಲ್ಪ್-ಯೋಗಿ-ಡಾಟ್ ಕಾಮ್' ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪತ್ರಕ್ಕೆ ಎಕ್ಜೋಟೆಲ್‌ನ ಶಿವಕುಮಾರ ಗಣೇಶನ್,ಕ್ಲೌಡ್ ಚೆರ್ರಿಯ ವಿನೋದ್ ಮುತ್ತುಕೃಷ್ಣನ್ ಸೇರಿದಂತೆ 73 ಉದ್ಯಮಿಗಳು ಸಹಿ ಹಾಕಿದ್ದಾರೆ.

ನಾವೆಲ್ಲ ಒಂದು ಸಮುದಾಯವಾಗಿ ಒಂದಾಗಿದ್ದೇವೆ ಮತ್ತು 'ಸ್ಟಾರ್ಟ್ ಅಪ್ ಇಂಡಿಯಾ ಸ್ಟಾಂಡ್ ಅಪ್ ಇಂಡಿಯಾ 'ಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯಲ್ಲಿ ನಂಬಿಕೆಯಿರಿಸಿದ್ದೇವೆ.
ವಿವಾದ ಕುರಿತು ಮುಕ್ತ ಮತ್ತು ನ್ಯಾಯಸಮ್ಮತ ತನಿಖೆ ನಡೆಯಬೇಕು ಎಂದು ನಮ್ಮ ಸಮುದಾಯ ಕರೆ ನೀಡುತ್ತಿದೆ ಮತ್ತು ಈ ದೇಶದ ಕಾನೂನುಗಳನ್ನು ಬುಡಮೇಲುಗೊಳಿಸಲು ಯಾವುದೇ ಅಧಿಕಾರ ದುರುಪಯೋಗವನ್ನು ಬಲವಾಗಿ ವಿರೋಧಿಸಿತ್ತೇವೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಈ ವಿಷಯವನ್ನು ಪರಿಶೀಲಿಸುವಂತೆ ಮತ್ತು ಯೋಗಿ (ವಸುಪಾಲ್)ಯವರಿಗೆ ತ್ವರಿತ ನ್ಯಾಯ ದೊರೆಯುವಂತೆ ನೋಡಿಕೊಳ್ಳಬೇಕೆಂದು ನಾವು ನಿಮ್ಮನ್ನು ವಿನಮ್ರವಾಗಿ ಕೋರುತ್ತಿದ್ದೇವೆ ಎಂದು ಪತ್ರವು ಹೇಳಿದೆ.

ಹೋಮ್‌ಸ್ಟೇಗಳ ಆನ್‌ಲೈನ್ ತಾಣ ಸ್ಟೇಝಿಲ್ಲಾದ ಸಿಇಒ ಆಗಿರುವ ವಸುಪಾಲ್ ಅವರನ್ನು ಜಿಗ್‌ಸಾ ಅಡ್ವೈರ್ಟಿಸಿಂಗ್‌ಗೆ ಹಣ ಪಾವತಿಸದ ವಿವಾದದಲ್ಲಿ ಕಳೆದ ವಾರ ಚೆನ್ನೈನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ