ಗುರುವಾರ, ಫೆಬ್ರವರಿ 1, 2018

ಬಜೆಟ್ ಸಂಬಂಧಿತ ಟರ್ಮ್ಸ್ ಗಳ ವಿವರಣೆ

ಈ ಲೇಖನದ ಮೂಲಕ ಬಜೆಟ್ ಸಂಬಂಧಿತ ಪ್ರಮುಖ ಟರ್ಮ್ಸ್ (Terms) ಗಳ ಬಗ್ಗೆ ವಿವರಿಸಲಾಗುತ್ತಿದೆ.

ಇವುಗಳಲ್ಲಿ ಅತ್ಯಂತ ಪ್ರಮುಖವಾದ ಕಡತವೆಂದರೆ ವಾರ್ಷಿಕ ಹಣಕಾಸು ಹೇಳಿಕೆ (Annual Financial Statement). ಅಂದು ಈ ಪದಗಳೆಂದರೇನು? ಇವುಗಳ ಮಹತ್ವವೇನು ಎಂದೆಲ್ಲಾ ತಿಳಿದುಕೊಳ್ಳಲು ಸಮಯವಿರುವುದಿಲ್ಲ. ಹಾಗಾಗಿ ಬಜೆಟ್ ಗೂ ಮುಂಚಿತವಾಗಿಯೇ ಈ ವಿಷಯಗಳನ್ನು ಅರಿತಿರುವ ಮೂಲಕ ಬಜೆಟ್ ನಲ್ಲಿ ನೀಡಲಾಗುವ ವಿವರಗಳನ್ನು ಇನ್ನಷ್ಟು ಸ್ಪಷ್ಟವಾಗಿ ಅರಿತುಕೊಳ್ಳಲು ಸಾಧ್ಯ.

ಭಾರತ ಸಂವಿಧಾನದ 112 ನೇ ವಿಧಿಯ ಪ್ರಕಾರ ಪ್ರತಿ ವರ್ಷವೂ ಸರ್ಕಾರ ಹಣಕಾಸು ವರ್ಷದ (ಪ್ರತಿ ಏಪ್ರಿಲ್ ಒಂದರಿಂದ ಮರುವರ್ಷದ ಮಾರ್ಚ್ 31ರವರೆಗೆ) ಆದಾಯ ಮತ್ತು ಖರ್ಚುಗಳ ಲೆಕ್ಕಾಚಾರವನ್ನು ಸಂಸತ್ತಿಗೆ ಒದಗಿಸಬೇಕು. ಒಂದು ವರ್ಷದ ಎಲ್ಲಾ ಖರ್ಚುಗಳ ವಿವರಗಳಿರುವ ಈ ವರದಿಯನ್ನೇ ವಾರ್ಷಿಕ ಆರ್ಥಿಕ ಹೇಳಿಕೆ ಎಂದು ಕರೆಯಲಾಗುತ್ತದೆ.

ಈ ವರದಿ ಸುಮಾರು ಹತ್ತು ಪುಟಗಳಷ್ಟಿರುತ್ತದೆ. ಒಟ್ಟು ವರದಿಯನ್ನು ಮೂರು ಭಾಗಗಳಲ್ಲಿ ವಿಂಗಡಿಸಲಾರುತ್ತದೆ. ಮೊದಲನೆಯದಾಗಿ ಏಕೀಕೃತ ನಿಧಿ, ಎರಡನೆಯದಾಗಿ ಆಕಸ್ಮಿಕ ನಿಧಿ ಹಾಗೂ ಅಂತಿಮವಾಗಿ ಸಾರ್ವಜನಿಕ ನಿಧಿ. ಈ ಮೂರೂ ನಿಧಿಗಳಿಗೆ ಹಿಂದಿನ ವರ್ಷ ಪಡೆದ ಮೊತ್ತ ಮತ್ತು ಈ ಮೊತ್ತವನ್ನು ಹೇಗೆ ಬಳಸಿಕೊಳ್ಳಲಾಯಿತು ಎಂಬುದನ್ನು ವಿತ್ತ ಸಚಿವರು ವಿವರವಾಗಿ ತಿಳಿಸುತ್ತಾರೆ.

ಸರ್ಕಾರದ ಎಲ್ಲಾ ನಿಧಿಗಳ ಪೈಕಿ ಈ ನಿಧಿ ಅತ್ಯಂತ ಮುಖ್ಯವಾಗಿದೆ. ಸರ್ಕಾರದ ಒಟ್ಟಾರೆ ಆದಾಯ, ಪಡೆದ ಹಣಸಹಾಯ ಹಾಗೂ ಭಾರತದ ಏಕೀಕೃತ ನಿಧಿಗೆ ಸರ್ಕಾರವೇ ನೀಡಿದ ಸಾಲಗಳ ಪಾವತಿಗಳು ಇದರಲ್ಲಿ ಒಳಗೊಂಡಿರುತ್ತವೆ. ಈ ನಿಧಿಯಿಂದ ಆಕಸ್ಮಿಕ ನಿಧಿ ಅಥವಾ ಸಾರ್ವಜನಿಕ ಖಾತೆಯಿಂದ ಕೆಲವು ವಿನಾಯಿತಿ ಪಡೆದ ವಸ್ತುಗಳಿಗೆ ಭರಿಸುವ ಖರ್ಚುಗಳನ್ನು ಹೊರತುಪಡಿಸಿ ಸರ್ಕಾರದ ಉಳಿದ ಎಲ್ಲಾ ಖರ್ಚುಗಳನ್ನು ಭರಿಸಲಾಗುತ್ತದೆ. ಆದರೆ ಈ ನಿಧಿಯಿಂದ ಖರ್ಚು ಮಾಡುವ ಯಾವುದೇ ಹಣಕ್ಕೆ ಸಂಸತ್ತಿನ ಅನುಮೋದನೆ ಅಗತ್ಯವಾಗಿರುತ್ತದೆ.

ಹೆಸರೇ ತಿಳಿಸುವಂತೆ ಈ ನಿಧಿಯನ್ನು ತುರ್ತು, ಆಕಸ್ಮಿಕ ಅಥವಾ ಊಹಿಸದೇ ಎದುರಾಗುವ ಖರ್ಚುಗಳನ್ನು ಭರಿಸಲು ಬಳಸಲಾಗುತ್ತದೆ. ಈ ನಿಧಿಯಲ್ಲಿ ಸುಮಾರು ಐನೂರು ಕೋಟಿ ರೂಪಾಯಿಗಳನ್ನು ಸದಾ ಸಿದ್ಧವಾಗಿ ಇರಿಸಿರಲಾಗಿದ್ದು ಕೇವಲ ರಾಷ್ಟ್ರಪತಿಗಳು ಮಾತ್ರ ಈ ನಿಧಿಯನ್ನು ಖರ್ಚು ಮಾಡಲು ಅನುಮತಿ ನೀಡುವ ಅರ್ಹತೆ ಹೊಂದಿದ್ದಾರೆ. ಅಲ್ಲದೇ ಈ ನಿಧಿಯಿಂದ ಹಣವನ್ನು ಬಳಸಿಕೊಳ್ಳುವ ಯೋಜನೆಗಳಿಗೆ ಸಂಸತ್ತಿನ ಅನುಮೋದನೆಯೂ ಅಗತ್ಯವಿರುತ್ತದೆ ಹಾಗೂ ತುರ್ತು ಪರಿಸ್ಥಿತಿ ಸುಧಾರಿಸಿದ ತಕ್ಷಣ ಏಕೀಕೃತ ನಿಧಿಯಿಂದ ಈ ಮೊತ್ತವನ್ನು ಹಿಂದಿರುಗಿಸಿ ಒಟ್ಟು ಮೊತ್ತವನ್ನು ಹಾಗೇ ಉಳಿಸಿಕೊಳ್ಳುವಂತೆ ಮಾಡಲಾಗುತ್ತದೆ.

ಈ ನಿಧಿಯಲ್ಲಿ ಸರ್ಕಾರ ಒಂದು ಬ್ಯಾಂಕಿನಂತೆ ಕಾರ್ಯನಿರ್ವಹಿಸುತ್ತದೆ ಹಾಗೂ ಹಲವು ಕಡೆಗಳಿಂದ ಹಣದ ಹರಿವು ಒಳಬರುವಂತೆ ನೋಡಿಕೊಳ್ಳುತ್ತದೆ. ಉದಾಹರಣೆಗೆ ಪ್ರಾವಿಡೆಂಟ್ ಫಂಡ್, ಸಣ್ಣ ಉಳಿತಾಯ ಇತ್ಯಾದಿ. ಈ ನಿಧಿ ವಾಸ್ತವವಾಗಿ ಸರ್ಕಾರದ ಆಧೀನದಲ್ಲಿರುತ್ತದೆಯೋ ಹೊರತು ಇದು ಸರ್ಕಾರದ ಸ್ವತ್ತಲ್ಲ, ಸಾರ್ವಜನಿಕರದ್ದು. ಅಲ್ಲದೇ ಸಮಯಕ್ಕೆ ಸರಿಯಾಗಿ ಸಾರ್ವಜನಿಕರ ಅಗತ್ಯ ಪೂರೈಸಲು ಈ ನಿಧಿಯನ್ನು ಆಯಾ ಮೊತ್ತದ ಮಾಲಿಕರಿಗೆ ಹಿಂದಿರುಗಿಸಲೂಬೇಕಾಗುತ್ತದೆ. ಇದೇ ಕಾರಣಕ್ಕಾಗಿ ಈ ನಿಧಿಯಿಂದ ಹಣವನ್ನು ಖರ್ಚು ಮಾಡಲು ಸಂಸತ್ತಿನ ಅನುಮೋದನೆಯ ಅಗತ್ಯವಿಲ್ಲ.

ಮೇಲೆ ವಿವರಿಸಿದ ಎಲ್ಲಾ ನಿಧಿಗಳಿಗೂ ಸರ್ಕಾರ ಆಯಾ ವರ್ಷದ ಖರ್ಚುವೆಚ್ಚಗಳ ಲೆಕ್ಕಾಚಾರವನ್ನು ತಿಳಿಸಬೇಕಾಗುತ್ತದೆ. ಈ ಎಲ್ಲಾ ನಿಧಿಗಳಿಗೆ ಸಂದಾಯವಾಗುವ ಮೊತ್ತವನ್ನು ಆದಾಯ (revenue) ಎನ್ನುವ ಬದಲು ಪಾವತಿ (receipts) ಅಥವಾ ನಿಧಿ ಪಾವತಿ (funds received) ಎಂದು ಕರೆಯಲಾಗುತ್ತದೆ. ಬಜೆಟ್ ನಲ್ಲಿ ಆದಾಯ ಎನ್ನುವ ಪದಕ್ಕೆ ಬೇರೆಯೇ ವ್ಯಾಖ್ಯಾನವಿದೆ.

ಸಂವಿಧಾನದಲ್ಲಿ ತಿಳಿಸಿರುವಂತೆ ಆದಾಯ ಹಾಗೂ ಪಾವತಿಗಳನ್ನು ಅದಾಯ ಖಾತೆ ಹಾಗೂ ಇತರ ಖರ್ಚುಗಳೆಂದು ಬಜೆಟ್ ನಲ್ಲಿ ವಿಂಗಡಿಸಿಯೇ ತೋರಿಸಬೇಕಾಗುತ್ತದೆ. ಆದ್ದರಿಂದ ಎಲ್ಲಾ ಪಾವತಿಗಳನ್ನು, ಉದಾಹರಣೆಗೆ ಏಕೀಕೃತ ನಿಧಿ, ಆದಾಯ ಬಜೆಟ್ (revenue account) ಹಾಗೂ ಕ್ಯಾಪಿಟಲ್ ಬಜೆಟ್ (capital account) ಎಂದು ವರ್ಗೀಕರಿಸಿ ಇವುಗಳಲ್ಲಿ ಆದಾಯರಹಿತ ಪಾವತಿ ಹಾಗೂ ಖರ್ಚುಗಳೂ ಒಳಗೊಂಡಿರುವಂತೆ ನೋಡಿಕೊಳ್ಳಲಾಗುತ್ತದೆ. ಆದಾಯ ಬಜೆಟ್ ಹಾಗೂ ಕ್ಯಾಪಿಟಲ್ ಬಜೆಟ್ ಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ಆದಾಯ ಪಾವತಿ, ಆದಾಯದ ಖರ್ಚು, ಕ್ಯಾಪಿಟಲ್ ಪಾವತಿ ಹಾಗೂ ಕ್ಯಾಪಿಟಲ್ ಖರ್ಚುಗಳ ಬಗ್ಗೆ ಸರಿಯಾದ ಮಾಹಿತಿ ಹೊಂದಿರುವುದು ಅವಶ್ಯವಾಗಿದೆ.

ಸಾಮಾನ್ಯವಾಗಿ ಆದಾಯ ಮತ್ತು ಆಸ್ತಿಗಳ ಸೃಷ್ಟಿಗೆ ಒಳಪಡದ ಎಲ್ಲಾ ಆದಾಯ ಮತ್ತು ವೆಚ್ಚಗಳನ್ನು ಆದಾಯ ಖಾತೆಯಲ್ಲಿ ಸೇರಿಸಲಾಗುತ್ತದೆ. ಪಾವತಿಯ ವಿಷಯ ಬಂದಾಗ ಇದರಲ್ಲಿ ತೆರಿಗೆ ಪ್ರಮುಖ ಪಾತ್ರ ವಹಿಸುತ್ತದೆ. ಖರ್ಚುಗಳ ವಿಷಯ ಬಂದಾಗ ಯಾವ ಖರ್ಚಿನಲ್ಲಿ ಆಸ್ತಿಯನ್ನು ಗಳಿಸಲು ಸಾಧ್ಯವಿಲ್ಲವೋ ಈ ಖರ್ಚನ್ನು ಅದಾಯ ವೆಚ್ಚ ಎಂದು ಕರೆಯಲಾಗುತ್ತದೆ. ಸರ್ಕಾರಿ ನೌಕರರ ವೇತನ, ಸಬ್ಸಿಡಿ ಹಾಗೂ ಬಡ್ಡಿಗೆ ನೀಡಲಾಗುವ ಮೊತ್ತ ಎಲ್ಲವನ್ನೂ ಒಟ್ಟಾರೆಯಾಗಿ ಆದಾಯ ವೆಚ್ಚ ಎಂದು ಕರೆಯಲಾಗುತ್ತದೆ.

ಒಂದು ಆಸ್ತಿಯನ್ನು ಖರೀದಿಸಬಲ್ಲ ಆದಾಯ ಅಥವಾ ಆಸ್ತಿಯನ್ನು ಕರಗಿಸಬಲ್ಲ ವೆಚ್ಚಗಳನ್ನು ಕ್ಯಾಪಿಟಲ್ ಅಥವಾ ಬಂಡವಾಳ ಖಾತೆಗೆ ಸೇರಿಸಲಾಗುತ್ತದೆ. ಉದಾಹರಣೆಗೆ ಹಿಂದೆ ಮಾರುತಿ ಸಂಸ್ಥೆಯಲ್ಲಿ ಹೂಡಿದಂತೆ ಒಂದು ವೇಳೆ ಸರ್ಕಾರವೇ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳಲ್ಲಿ ಶೇರುಗಳನ್ನು ಮಾರಿದರೆ (ಕೆಟ್ಟ ಬಂಡವಾಳ) ಇದರ ಪರಿಣಾಮವಾಗಿ ಆಸ್ತಿಯನ್ನು ಮಾರುವ ಪರಿಣಾಮ ಎದುರಿಸಬೇಕಾಗುತ್ತದೆ. ಈ ಮಾರಾಟದಿಂದ ಲಭ್ಯವಾದ ಮೊತ್ತ ಕ್ಯಾಪಿಟಲ್ ಖಾತೆಗೆ ಜಮಾ ಆಗುತ್ತದೆ. ಇನ್ನೊಂದು ಕಡೆಯಿಂದ, ಒಂದು ವೇಳೆ ಸರ್ಕಾರವೇ ಇತರರಿಗೆ ಸಾಲವನ್ನು ನೀಡಿ ಇದಕ್ಕೆ ಬಡ್ಡಿಯನ್ನು ಪಡೆಯುವ ಬಯಕೆ ಹೊಂದಿದ್ದರೆ ಈ ಖರ್ಚು ಸಹಾ ಕ್ಯಾಪಿಟಲ್ ಖಾತೆಯಲ್ಲಿ ಸೇರಿಸಲ್ಪಡುತ್ತದೆ.

ಈ ಎಲ್ಲಾ ನಿಧಿಗಳ ಕುರಿತು ಸರ್ಕಾರ ಒಂದು ಆದಾಯ ಬಜೆಟ್ (ಆದಾಯ ಪಾವತಿ ಹಾಗೂ ಆದಾಯ ವೆಚ್ಚಗಳ ವಿವರಗಳನ್ನು ಒಳಗೊಂಡಿರುತ್ತದೆ) ಹಾಗೂ ಒಂದು ಕ್ಯಾಪಿಟಲ್ ಬಜೆಟ್ (ಕ್ಯಾಪಿಟಲ್ ಪಾವತಿ ಹಾಗೂ ಕ್ಯಾಪಿಟಲ್ ವೆಚ್ಚ) ಅನ್ನು ತಯಾರಿಸಬೇಕಾಗುತ್ತದೆ. ಇದರಲ್ಲಿ ಅಕಸ್ಮಿಕ ನಿಧಿ, ಇದರ ಹೆಸರೇ ಸೂಚಿಸುವಂತೆ ಬಜೆಟ್ ನಲ್ಲಿ ಇದರ ಪಾತ್ರ ಮುಖ್ಯವಾಗಿಲ್ಲ. ಸಾರ್ವಜನಿಕ ಖಾತೆ ಇಲ್ಲಿ ಅತಿ ಮುಖ್ಯವಾಗಿದ್ದು ಇದರಲ್ಲಿ ಉಳಿತಾಯದ ಎಷ್ಟು ಮೊತ್ತ ಸಂಗ್ರಹವಾಗಿದೆ ಹಾಗೂ ಈ ಮೊತ್ತವನ್ನು ಹೇಗೆ ಬಳಸಬಹುದು ಎಂದು ಪರಿಗಣಿಸಲಾಗುತ್ತದೆ. ಆದರೆ ಬಜೆಟ್ ನ ದೃಷ್ಟಿಯಿಂದಲ್ಲ. ಆದರೆ ಎಲ್ಲಾ ನಿಧಿಗಳ ಒಟ್ಟು ಮೊತ್ತ ಬಜೆಟ್ ಗೆ ಮುಖ್ಯವಾಗಿದೆ.

ಓರ್ವ ಉದ್ಯಮಿ ತನ್ನ ಉದ್ಯೋಗಿಗಳಿಗೆ ವೇತನದ ಹೊರತಾಗಿ ನೀಡುವ ಭಕ್ಷೀಸು ಮೊದಲಾದ ಹೆಚ್ಚುವರಿ ಮೊತ್ತಕ್ಕೆ ವಿಧಿಸುವ ತೆರಿಗೆಯನ್ನು ಫ್ರಿಂಜ್ ಟ್ಯಾಕ್ಸ್ ಎಂದು ಕರೆಯಲಾಗುತ್ತದೆ. ಈ ವೆಚ್ಚವನ್ನು 2005-06 ರ ಬಜೆಟ್ ನಲ್ಲಿ ಪ್ರಸ್ತುತಪಡಿಸಿ ಪ್ರಾರಂಭಿಸಲಾಗಿತ್ತು. ಏಕೆಂದರೆ ಎಷ್ಟೋ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಹೆಚ್ಚುವರಿ ಭಕ್ಷೀಸುಗಳನ್ನು ನೀಡುವ ಹೆಸರಿನಲ್ಲಿ ತಮ್ಮ ಕ್ಲಬ್ ವೆಚ್ಚಗಳನ್ನು ಸಾಮಾನ್ಯವಾದ ವ್ಯಾಪಾರದ ವೆಚ್ಚಗಳು ಎಂದಾಗಿ ಪರಿವರ್ತಿಸಿಕೊಳ್ಳುತ್ತಿದ್ದುದು ಕಂಡುಬಂದಿತ್ತು. ಈ ಮೂಲಕ ತೆರಿಗೆ ನೀಡುವುದರಿಂದ ತಪ್ಪಿಸಿಕೊಳ್ಳುತ್ತಿದ್ದರು. ಆದರೆ ಈಗ ಈ ಬಗೆಯ ವೆಚ್ಚಗಳಿಗೂ ಸಂಸ್ಥೆಗಳು FBT ಎಂಬ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ಒಂದು ಆಸ್ತಿ (ಶೇರು ಅಥವಾ ಕಟ್ಟಡ) ಮಾರಿದಾಗ ಇದರಲ್ಲಿ ಲಾಭವೂ ಆಗಬಹುದು, ನಷ್ಟವೂ ಆಗಬಹುದು. ಈ ಆಸ್ತಿಯನ್ನು ಎಷ್ಟು ಕಾಲ ಮಾಲಿಕತ್ವ ವಹಿಸಿದ್ದರು ಎಂಬ ಮಾಹಿತಿಯನ್ನು ಆಧರಿಸಿ ಈ ವಹಿವಾಟಿನಲ್ಲಿ ಲಭಿಸಿದ ಲಾಭ/ನಷ್ಟಗಳನ್ನು ಅಲ್ಪವಾಧಿ ಅಥವಾ ದೀರ್ಘಾವಧಿಯ ಕ್ಯಾಪಿಟಲ್ ಲಾಭ/ನಷ್ಟ ಎಂದು ಕರೆಯಲಾಗುತ್ತದೆ. 2004-05ರ ಬಜೆಟ್ ನಲ್ಲಿ ಸರ್ಕಾರ ದೀರ್ಘಾವಧಿಯ ಕ್ಯಾಪಿಟಲ್ ಆದಾಯ ತೆರಿಗೆಯನ್ನು ರದ್ದು ಮಾಡಿತು (ಈ ಶೇರುಗಳನ್ನು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಹೊಂದಿರುವುದು ಅವಶ್ಯ) ಆದರೆ ಇದರ ಬದಲಿಗೆ STT ಎಂಬ ತೆರಿಗೆಯನ್ನು ಪ್ರಾರಂಭಿಸಿತು. ಇದೊಂದು ವಹಿವಾಟಿಗೆ ಸಂಬಂಧಿಸಿದ ತೆರಿಗೆಯಾಗಿದ್ದು ಇದರಲ್ಲಿ ಹೂಡಿಕೆದಾರ ತನ್ನ ಶೇರುಗಳ ವಿಲೇವಾರಿಯಲ್ಲಿ ಹೂಡಿದ ಹಣದ ಮೇಲೆ ಚಿಕ್ಕ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

2005-06 ರ ಬಜೆಟ್ ನಲ್ಲಿ ಈ ತೆರಿಗೆಯನ್ನು ಪ್ರಾರಂಭಿಸಲಾಯಿತು. ಬ್ಯಾಂಕಿನಿಂದ ಒಂದು ನಿರ್ದಿಷ್ಟ ಮೊತ್ತಕ್ಕೂ ಹೆಚ್ಚಿನ ಹಣವನ್ನು ಒಂದು ದಿನದಲ್ಲಿ ನಗದು ರೂಪದಲ್ಲಿ ಪಡೆಯಬೇಕಾದರೆ ಒಂದು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಈ ತೆರಿಗೆಯ ಉದ್ದೇಶವೆಂದರೆ ಕಪ್ಪು ಹಣವನ್ನು ನಿಯಂತ್ರಿಸುವುದು ಹಾಗೂ ದೊಡ್ಡ ಮೊತ್ತದ ಹಣದ ವಿಲೇವಾರಿಯ ವಿವರಗಳನ್ನು ಕಲೆಹಾಕುವುದಾಗಿದೆ.

ಇದು ಆಮದುಗಳ ಮೇಲೆ ವಿಧಿಸುವ ತೆರಿಗೆಯಾಗಿದೆ. ಈ ತೆರಿಗೆಯ ಮೂಲಕ ಸರ್ಕಾರಕ್ಕೆ ಆದಾಯ ತರುವುದು ಮೊದಲ ಆದ್ಯತೆಯಾಗಿದೆ. ಆದರೆ ಇದೇ ಸಮಯದಲ್ಲಿ ಸ್ಥಳೀಯ ಕೈಗಾರಿಕೆಗಳನ್ನು ಕಾಪಾಡುವುದೂ ಆಗಿದೆ (ಉದಾಹರಣೆಗೆ ಕೃಷಿ, ವಾಹನ ಉತ್ಪಾದನೆ). ಈ ನಿಟ್ಟಿನಲ್ಲಿ ವಿದೇಶೀಯರು ತಮ್ಮ ಉತ್ಪನ್ನಗಳನ್ನು ನಮ್ಮ ದೇಶದಲ್ಲಿ ಕಡಿಮೆ ಬೆಲೆಯಲ್ಲಿ ಮಾರಲು ಸಾಧ್ಯವಾಗದೇ ಇರುವ ಮೂಲಕ ದೇಸೀ ಕೈಗಾರಿಕೆಗಳಿಗೆ ಬೆಂಬಲ ನೀಡಿದಂತಾಗುತ್ತದೆ.

ಇದು ಭಾರತದಲ್ಲಿಯೇ ತಯಾರಾದ ವಸ್ತುಗಳಿಗೆ ಸರ್ಕಾರ ವಿಧಿಸುವ ತೆರಿಗೆಯಾಗಿದೆ.
ಸೇವಾ ತೆರಿಗೆ (Service Tax)
ಸೇವೆಗಳ ಮೇಲೆ ವಿಧಿಸುವ ತೆರಿಗೆಯನ್ನು ಸೇವಾ ತೆರಿಗೆ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಟೆಲಿಫೋನ್ ಬಿಲ್ ನ ಮೊತ್ತದಲ್ಲಿ ಈ ತೆರಿಗೆ ಒಳಗೊಂಡಿರುತ್ತದೆ.

ಸ್ಪಷ್ಟವಾಗಿ ಹೇಳಬೇಕೆಂದರೆ ಜನತೆಗೆ ಭಾರಿಯಾಗಿ ಪರಿಣಮಿಸುವ ಹಾಗೂ ಇವರ ಆದಾಯದ ಮೇಲೆ ನೇರವಾಗಿ ಅವಲಂಬಿಸಿರುವ ಯಾವುದೇ ತೆರಿಗೆಗಳು ಪ್ರತ್ಯಕ್ಷ ತೆರಿಗೆಗಳಾಗುತ್ತವೆ. ಉದಾಹರಣೆಗೆ ಆದಾಯ ಹಾಗೂ ಆಸ್ತಿ ತೆರಿಗೆ. ಉದ್ಯಮ ಹಾಗೂ ವ್ಯಕ್ತಿಗಳ ವೈಯಕ್ತಿಯ ಆದಾಯದ ಮೇಲೆ ಆದಾಯ ತೆರಿಗೆ ವಿಧಿಸಲಾಗುತ್ತದೆ. ಅಲ್ಲದೇ FBT, STT ಹಾಗೂ BCTT ತೆರಿಗೆಗಳೂ ಪ್ರತ್ಯಕ್ಷ ತೆರಿಗೆಗಳಾಗಿವೆ.

ಈ ತೆರಿಗೆಯನ್ನು ವ್ಯಕ್ತಿಯ ಮೇಲೆ ನೇರವಾಗಿ ಹೇರಲಾಗುವುದಿಲ್ಲ. ಬದಲಿಗೆ ಇತರ ರೂಪಗಳಲ್ಲಿ ಸಂಗ್ರಹಿಸಲಾಗುತ್ತದೆ. ಕಸ್ಟಮ್ಸ್, ಅಬಕಾರಿ ಹಾಗೂ ಸೇವಾ ತೆರಿಗೆಗಳು ಪರೋಕ್ಷ ತೆರಿಗೆಗಳಾಗುತ್ತವೆ.
ಪರೋಕ್ಷ ತೆರಿಗೆಗಳು ಎಲ್ಲರಿಗೂ ಸಮಾನವಾಗಿದ್ದು ಇದರ ಹೊರೆ ಬಡವರೂ ಶ್ರೀಮಂತರೂ ಏಕಸಮಾನವಾಗಿ ಹೊರಬೇಕಾಗುತ್ತದೆ. ಇದೇ ಕಾರಣಕ್ಕೆ ಭಾರತ ಸರ್ಕಾರ ಹೆಚ್ಚಿನ ತೆರಿಗೆಯನ್ನು ಪ್ರತ್ಯಕ್ಷ ತೆರಿಗೆಯ ರೂಪದಲ್ಲಿಯೇ ಪಡೆಯಲು ಹೆಚ್ಚಿನ ಅಸ್ಥೆ ವಹಿಸುತ್ತದೆ.

2018-19ನೇ ಸಾಲಿನ ಬಜೆಟ್ ಮುಖ್ಯಾಂಶಗಳು

2018-19 ನೇ ಸಾಲಿನ ಬಜೆಟ್ ನ ಮುಖ್ಯಾಂಶಗಳು

►ವಡೋದರಾದಲ್ಲಿ ರೈಲ್ವೆ ವಿವಿ ಸ್ಥಾಪನೆ

►ಬಿಟೆಕ್ ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿ ಸ್ಕಾಲರ್ ಶಿಪ್

►20 ಲಕ್ಷ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯೋಜನೆ

►ಗ್ರಾಮೀಣ ಪ್ರದೇಶದಲ್ಲಿ ಬ್ಲ್ಯಾಕ್ ಬೋರ್ಡ್ ಬದಲು ಡಿಜಿಟಲ್ ಬೋರ್ಡ್ ಗೆ ಕ್ರಮ

►ಪ್ರತಿ ವರ್ಷ 1000 ಬಿಟೆಕ್ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಪಿ ಹೆಚ್ ಡಿ ಮಾಡಲು ಉತ್ತೇಜನ ಬುಡಕಟ್ಟು

►ವಿದ್ಯಾರ್ಥಿಗಳಿಗೆ ಏಕಲವ್ಯ ವಸತಿ ಶಾಲೆ ಯೋಜನೆ

►ರೈತರ ಸಾಲಗಳಿಗಾಗಿ 11 ಲಕ್ಷ ಕೋಟಿ ಅನುದಾನ

►ನ್ಯಾಷನಲ್ ಹೆಲ್ತ್ ಪಾಲಿಸಿ ಮೂಲಕ ಅತ್ಯುತ್ತಮ ಆರೋಗ್ಯ ಸೇವೆ

►ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಗೆ 30 ಸಾವಿರ ಕೋಟಿ

►ರಾಷ್ಟ್ರೀಯ ಹೆಲ್ತ್ ಪಾಲಿಸಿ ಮೂಲಕ ರೋಗಿಗಳಿಗೆ ಉಚಿತ ಚಿಕಿತ್ಸೆ

►ಗ್ರಾಮಾಂತರ ಬಜಾರ್-ಇ ನಿರ್ಮಿಸಲು ಯೋಜನೆ

►2022 ವೇಳೆಗೆ ಮನೆ ಇಲ್ಲದವರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ಸ್ವಂತ ಮನೆ ನಿರ್ಮಾಣ ಮಾಡಲು ಯೋಜನೆ

►2018-19 ರಲ್ಲಿ ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಾಣ

►8 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್ ಪೂರೈಕೆ

►42 ಮೆಗಾ ಫುಡ್ ಪಾರ್ಕ್ ಪ್ರಾರಂಭ

►ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಲೆ ನೀಡಲು ನಿರ್ಧಾರ

►ಎಪಿಎಂಸಿ ಉನ್ನತೀಕರಣಕ್ಕೆ 2,000 ಕೋಟಿ

► ಖಾದಿ ಗ್ರಾಮೋದ್ಯಮಕ್ಕೆ 200 ಕೋಟಿ ಅನುದಾನ

►ಆಪರೇಷನ್ ಗ್ರೀನ್ ಗೆ 500 ಕೋಟಿ ರೂ ಮೀಸಲು

►ರೈತರ ಅನುಕೂಲಕ್ಕೆ 22 ಸಾವಿರ ಮಾರುಕಟ್ಟೆ

►ಬಿದಿರು ಬೆಳೆಗೆ 12,090 ಕೋಟಿ ರೂ ವಿಶೇಷ ಅನುದಾನ

►ಟೊಮ್ಯಾಟೋ, ಈರುಳ್ಳಿ, ಆಲೂಗಡ್ಡೆ ಕೃಷಿಗೆ 500 ಕೋಟಿ ರೂ ಅನುದಾನ ಘೋಷಣೆ

►ಜಿಲ್ಲೆಗಳಿಗೆ ವಿಶೇಷ ಕ್ಲಸ್ಟರ್ ಪದ್ಧತಿ

►ಮೀನುಗಾರಿಕೆ ಸೇರಿದಂತೆ ಅಕ್ವಾಕಲ್ಚರ್ ಮೂಲಸೌಕರ್ಯ ಅಭಿವೃದ್ಧಿಗೆ 10 ಸಾವಿರ ಕೋಟಿ

►2017-18 ರಲ್ಲಿ 27.5 ಟನ್ ಆಹಾರ ಉತ್ಪಾದನೆ

►ಮಾರ್ಚ್ ವೇಳೆಗೆ 470 ಎಪಿಎಂಸಿಗಳು ಇ-ನಾಮ್ ಗೆ ಕನೆಕ್ಟ್

►ಕೃಷಿ ಉಗ್ರಾಣ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ಕ್ರಮ ಸಾವಯವ ಕೃಷಿಗೆ ಹೆಚ್ಚು ಉತ್ತೇಜನ,

►ಸುಮಾರು 1000 ಹೆಕ್ಟೆರ್ ಪ್ರದೇಶದಲ್ಲಿ ಸಾವಯವ ಕೃಷಿಗೆ ಒತ್ತು

►ರೈತರಿಗೆ ತಮ್ಮ ಬೆಳೆ ಬೆಲೆ ನಿಗದಿ ಸ್ವಾತಂತ್ರ್ಯ

►ಆಹಾರ ಸಂಸ್ಕರಣೆಗಾಗಿ ನೀಡುವ ಅನುದಾನ ಹೆಚ್ಚಳ

►ನೇರ ನಗದು ವರ್ಗಾವಣೆ ಮೂಲಕದ ಪಾರದರ್ಶಕತೆ.

►ಬಡವರಿಗಾಗಿ ಜನರಿಕ್ ಔಷಧ ಕೇಂದ್ರಗಳ ಸ್ಥಾಪನೆ.

►ಒಂದೇ ದಿನದಲ್ಲಿ ಪಾಸ್ ಪೋರ್ಟ್ ನೀಡಿಕೆಗೆ ಕ್ರಮ.

►ಆರೋಗ್ಯ ಭಾಗ್ಯಕ್ಕಾಗಿ 50 ಕೋಟಿ ಜನಕ್ಕೆ ತಲಾ 5 ಲಕ್ಷ

►ಹೆಲ್ತ್ ಸೆಂಟರ್ ಗೆ 1200 ಕೊಟಿ ಮೀಸಲು

►ಒಂದೂವರೆ ಲಕ್ಷ ಹೆಲ್ತ್ ಆ್ಯಂಡ್ ವೆಲ್ ನೆಸ್ ಸೆಂಟರ್ ನಿರ್ಮಾಣ

►ವಿಶ್ವದ ಅತಿದೊಡ್ಡ ಸರಕಾರಿ ಆರೋಗ್ಯ ಯೋಜನೆ ಮೋದಿ ಕೇರ್ ಆರೋಗ್ಯ ಬಾಗ್ಯ ಯೊಜನೆ ಘೊಷಣೆ

►24 ಹೊಸ ಮೆಡಿಕಲ್ ಕಾಲೇಜುಗಳ ಸ್ಥಾಪನೆ

►10 ಕೋಟಿ ಬಡ ಕುಟಂಬಗಳಿಗೆ ಆರೋಗ್ಯ ಭಾಗ್ಯ ಯೋಜನೆ

►ಮೂರು ಸಂಸತ್ ಕ್ಷೇತ್ರಗಳಲ್ಲಿ ಕನಿಷ್ಟ ಒಂದು ಮೆಡಿಕಲ್ ಕಾಲೇಜು ನಿರ್ಮಾಣ

►ಟಿಬಿ ರೋಗಿಗಳ ಪೌಷ್ಟಿಕಾಂಶಕ್ಕೆ 600 ಕೋಟಿ

►ಪ್ರತಿ ಕುಟುಂಬಕ್ಕೆ ಆರೋಗ್ಯ ಯೋಜನೆ- 5 ಲಕ್ಷದವರೆಗೆ ಆಸ್ಪತ್ರೆ ವೆಚ್ಚ ಭರಿಸಲಾಗುವುದು

►18 ಹೊಸ ಐಐಟಿ, ಎನ್ ಐಟಿ ಘೋಷಣೆ

►ಎಲ್ಲಾ ಬಡ ಕುಟುಂಬಗಳಿಗೆ ಅಪಘಾತವಿಮೆ ಘೋಷಣೆ

►ಸಣ್ಣ ಮತ್ತು ಮಧ್ಯಮ ಕೈಗಾರಿಕೆಗೆ ತೆರಿಗೆ ಹೊಣೆ ಇಳಿಕೆ

►4 ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ನೀಡುವ ಗುರಿ

►ಪರಿಪೂರ್ಣ ಮತ್ತು ಡಿಜಿಟಲ್ ಶಿಕ್ಷಣಕ್ಕೆ ಒತ್ತು

►ಪ್ರಧಾನ ಮಂತ್ರಿ ಮುದ್ರಾ ಯೋಜನೆಗೆ 10.30 ಕೋಟಿ

►ಸಾಮಾಜಿಕ ಭದ್ರತೆಗೆ 9975 ಕೋಟಿ ರೂ.

►ಹೆರಿಗೆ ರಜೆ 24 ವಾರದಿಂದ 26 ವಾರಗಳಿಗೆ ಹೆಚ್ಚಳ

►ಕ್ಷಯರೋಗ ಚಿಕಿತ್ಸೆಗೆ 500 ಕೋಟಿ ರೂ. ಮೀಸಲು

►ಕೃಷಿ ಉತ್ಪನ್ನಗಳ ರಫ್ತಿಗೆ ಮುಕ್ತ ಅವಕಾಶ

►70 ಲಕ್ಷ  ಉದ್ಯೋಗ ಸೃಷ್ಟಿ

►ಸ್ಮಾರ್ಟ್ ಸಿಟಿ ಗೆ 99 ನಗರಗಳ ಆಯ್ಕೆ

►ಮೂಲಭೂತ ಸೌಕರ್ಯಕ್ಕೆ 50 ಲಕ್ಷ ಕೋಟಿ ಮೀಸಲು

►ಉಜ್ವಲ್ ಯೋಜನೆಯಡಿ ಪ್ರಧಾನಮಂತ್ರಿ ಉಚಿತ ಎಲ್ ಪಿಜಿ ಗ್ಯಾಸ್

►ಎಸ್ ಸಿ, ಎಸ್ ಟಿ ಅಭಿವೃದ್ಧಿಗೆ 1 ಲಕ್ಷ 5 ಸಾವಿರ ಕೋಟಿ ರೂ ಅನುದಾನ

►ಪ್ರವಾಸೋದ್ಯಮ ಉತ್ತೇಜನಕ್ಕೆ ನೂತನ ರಸ್ತೆ ನಿರ್ಮಾಣ

►ಈ ವರ್ಷ ಮತ್ತೆ 100 ಸ್ಮಾರ್ಟ್ ಸಿಟಿ ನಿರ್ಮಾಣದ ಗುರಿ

►ಸ್ಮಾರ್ಟ್ ಸಿಟಿಗೆ 2.4 ಲಕ್ಷ ಕೋಟಿ ಅನುದಾನ

►ಲಡಾಕ್ ವಲಯದಲ್ಲಿ ಸುರಂಗ ನಿರ್ಮಾಣ

►ಚಿಕ್ಕ, ಅತಿ ಚಿಕ್ಕ ಮಧ್ಯಮ ಗಾತ್ರದ ಉದ್ಯಮಕ್ಕೆ 3794 ಕೋಟಿ ಮೀಸಲು

►ಸಾರ್ವಜನಿಕ ಹೂಡಿಕೆಗೆ ಒತ್ತು ಟೆಕ್ಸ್ ಟೈಲ್ಸ್ ಉದ್ಯಮಕ್ಕೆ 7 ಸಾವಿರ ಕೋಟಿ ಮೀಸಲು

►ಮುದ್ರಾ ಯೋಜನೆಗೆ 3 ಲಕ್ಷ ಕೋಟಿ ರೂ ಮೀಸಲು

►ಆಯುಷ್ಮಾನ್ ಭಾರತ್ ಹೊಸ ಯೋಜನೆ ಜಾರಿಗೆ

►ನಮಾಮಿ ಗಂಗಾ ಯೋಜನೆಗೆ ಹೆಚ್ಚಿನ ಆದ್ಯತೆ

►ಗಂಗಾ ತಟದಲ್ಲಿನ ಗ್ರಾಮಗಳಲ್ಲಿ ಸ್ವಚ್ಛತೆಗಾಗಿ ಹೆಚ್ಚಿನ ಆದ್ಯತೆ

►16730 ಕೋಟಿ ರೂ ವೆಚ್ಚದಲ್ಲಿ ಗ್ರಾಮೀಣ ಶೌಚಾಲಯ ನಿರ್ಮಾಣ

►ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಮುಂದಿನ ವರ್ಷದಲ್ಲಿ ಬಡವರಿಗಾಗಿ 2 ಕೋಟಿ ಹೆಚ್ಚುವರಿ ಶೌಚಾಲಯ ನಿರ್ಮಿಸುವ ಗುರಿ

►ನಮಾಮಿ ಗಂಗೆ ಯೋಜನೆಗೆ ಹೆಚ್ಚಿನ ಆಧ್ಯತೆ

►16730 ಕೋಟಿ ವೆಚ್ಚದಲ್ಲಿ ಗಂಗಾನದಿ ತಡದಲ್ಲಿನ ಗ್ರಾಮಗಳಲ್ಲಿ ಶೌಚಾಲಾಯ ನಿರ್ಮಾಣ

►ಜೀವನ ಸುಧಾರಿಸಲು ವಿಶೇಷ ಅನುದಾನ ಘೋಷಣೆ

►ಹೆಲ್ತ್ ವೆಲ್ ನೆಸ್ ಸ್ಕೀಂ ಗಾಗಿ 1200 ಕೋಟಿ ರೂ ಅನುದಾನ

►ಯೋಜನೆಯಡಿ 50 ಕೋಟಿ ಅನುದಾನ ಮುಂದುವರಿಗೆ 600 ಕೋಟಿ ಟಿಬಿ ರೋಗಿಗಳಿಗೆ ತಲಾ 500 ವೆಚ್ಚದಲ್ಲಿ ಚಿಕಿತ್ಸೆ

►ದೆಹಲಿಯ ವಾಯು ಮಾಲಿನ್ಯ ನಿಜಕ್ಕೂ ಕಳವಳಕಾರಿ. ಇದಕ್ಕಾಗಿ ದೆಹಲಿ, ಹರ್ಯಾಣ, ಪಂಜಾಬ್, ಉತ್ತರ

►ಪ್ರದೇಶದಲ್ಲಿ ಮಾಲಿನ್ಯ ಕಡಿಮೆ ಮಾಡಲು ವಿಶೇಷ ಯೋಜನೆಗಳನ್ನು ಆರಂಭ.

►ಬಡವರಿಗೆ ಉಚಿತ ಔಷಧಿ ದೊರಕಿಸಲು 12,000 ಕೋಟಿ ರುಪಾಯಿ ನಿಗದಿ

►ಬಡವರಿಗೆ ಉಚಿತ ಡಯಾಲಿಸಿಸ್

►ನ್ಯಾಷನಲ್ ಹೆಲ್ತ್ ಪಾಲಿಸಿ ಮೂಲಕ ಅತ್ಯುತ್ತಮ ಆರೋಗ್ಯ ಸೇವೆ

►ಮೊಬೈಲ್. ಟಿವಿ ದುಬಾರಿ, ಅಬಕಾರಿ ಸುಂಕ ಶೇ.15ರಷ್ಟು ಏರಿಕೆ

►ಭಾರತ ಏರ್ಪೋರ್ಟ್ ಪ್ರಾಧಿಕಾರದಡಿಯಲ್ಲಿ 124 ವಿಮಾನ ನಿಲ್ದಾಣಗಳಿದ್ದು, ಇದನ್ನು 5 ಪಟ್ಟು ಹೆಚ್ಚಿಸಲಾಗುವುದು

ಮತ್ತು ಪ್ರತಿವರ್ಷ 1 ಬಿಲಿಯನ್ ಟ್ರಿಪ್ ಗುರಿ

►ವೈದ್ಯಕೀಯ ವಿನಾಯಿತಿ ಮಿತಿ ಸೆಕ್ಷನ್ 80ರ ಅಡಿಯಲ್ಲಿ ಹಿರಿಯ ನಾಗರಿಕರಿಗೆ ವಿನಾಯಿತಿ ಮಿತಿ 10 ಸಾವಿರದಿಂದ 50 ಸಾವಿರ ರೂಗಳಿಗೆ ಏರಿಕೆ

►ವೈದ್ಯಕೀಯ ವಿಮೆ 30 ಸಾವಿರದಿಂದ 50 ಸಾವಿರ ರೂ ಗೆ ಏರಿಕೆ,

►ಹಿರಿಯ ನಾಗರಿಕರಿಗೆ 1 ಲಕ್ಷರೂ ವರೆಗೂ ಏರಿಕೆ

►ತೆರಿಗೆ ಸ್ಲಾಬ್ ಗಳಲ್ಲಿ ಯಾವುದೇ ಬದಲಾವಣೆ ಇಲ್ಲ.

►2.5ಲಕ್ಷ ವರಿಗೆನ ಆದಾಯಕ್ಕೆ ಯಾವುದೇ ರೀತಿಯ ತೆರಿಗೆ ಇಲ್ಲ.

►2.5ರಿಂದ 5 ಲಕ್ಷ ವರಗಿನ ಆದಾಯಕ್ಕೆ ಶೇ.5ರಷ್ಟು ತೆರಿಗೆ

►5 ಲಕ್ಷದಿಂದ 10 ಲಕ್ಷ ವರೆಗೆ ಶೇ.20ರಷ್ಟು ಮತ್ತು 10 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆ.

►40 ಸಾವಿರ ರೂವರೆಗಿನ ಸ್ಟ್ಯಾಂಡರ್ಡ್ ಡಿಡಕ್ಷನ್ ಶೀಘ್ರ ಜಾರಿ.

►ಈ ವರ್ಷ ಜಿಎಸ್ ಟಿ 12 ತಿಂಗಳ ಬದಲಿಗೆ 11 ತಿಂಗಳಿಗೇ ಪಾವತಿ

►ವಾರ್ಷಿಕ 250 ಕೋಟಿ ವಹಿವಾಟು ನಡೆಸಿದ ಕಾರ್ಪೋರೇಟ್ ಸಂಸ್ಥೆಗಳ ತೆರಿಗೆ ಕಡಿತ

►5 ಲಕ್ಷ ಹಳ್ಳಿಗಳಲ್ಲಿ ವೈಫೈ ಸೌಲಭ್ಯ.

►ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಮುಂದಿನ ವರ್ಷದಲ್ಲಿ ಬಡವರಿಗಾಗಿ 2 ಕೋಟಿ ಹೆಚ್ಚುವರಿ ಶೌಚಾಲಯ ನಿರ್ಮಿಸುವ ಗುರಿ ಹೊಂದಿದ್ದೇವೆ.

►14 ಸರ್ಕಾರಿ ಕಂಪೆನಿಗಳು ಷೇರುಮಾರುಕಟ್ಟೆಗೆ ಪ್ರವೇಶ.

►ಸಮಗ್ರ ಬಂಗಾರ ನೀತಿ ಜಾರಿ. ಚಿನ್ನ ನಗದೀಕರಣ ವ್ಯವಸ್ಥೆಯಲ್ಲಿ ಬದಲಾವಣೆ.

►ಎಲ್ಲಾ ಜಿಲ್ಲೆಗಳಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ

►ಉದ್ಯೋಗಾಕಾಂಕ್ಷಿಗಳಿಗೆ ಆಧಾರ್ ಮಾದರಿಯ 16 ಅಂಕಿಗಳ ಸಂಖ್ಯೆ

►ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರ ಸಂಬಳ ಹೆಚ್ಚಳ

►ಬಂಡವಾಳ ಹಿಂತೆಗೆತದಲ್ಲಿ ಗುರಿ ಮೀರಿದ ಸಾಧನೆ

►ದೇಶದೆಲ್ಲೆಡೆ ಇರುವ ಬ್ರಾಡ್ ಗೇಜ್ ಮಾರ್ಗ ಉನ್ನತೀಕರಣ

►ರಕ್ಷಣಾ ಇಲಾಖೆಗೆ 2 ಶಸ್ತ್ರಾಸ್ತ್ರ ನಿರ್ಮಾಣ ಕಾರಿಡಾರ್, ಖಾಸಗಿ ಹೂಡಿಕೆ

►ಮುಂಬೈ ಸ್ಥಳೀಯ ರೈಲು ಅಭಿವೃದ್ಧಿಗಾಗಿ 11 ಸಾವಿರ ಕೋಟಿ ದೇಶದೆಲ್ಲೆಡೆ ಇರುವ ಬ್ರಾಡ್ ಗೇಜ್ ಗಳ ಉನ್ನತೀಕರಣ

►1 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಹೈ ಸ್ಪೀಡ್ ಇಂಟರ್ ನೆಟ್ ಸಂಪರ್ಕ

►ಐಐಟಿ ಚೆನ್ನೈ ನಲ್ಲಿ 5 ಜಿ ಅಧ್ಯಯನ ಕೇಂದ್ರ

►5 ಕೋಟಿ ಗ್ರಾಮೀಣ ನಾಗರಿಕರಿಗೆ 5 ಲಕ್ಷ ಆಸ್ಪತ್ರೆಗಳ ನಿರ್ಮಾಣ

►ಮುಂಬೈ ನಲ್ಲಿ ಲೋಕಲ್ ಟ್ರೈನ್ ಮಾರ್ಗ 90 ಕಿಮೀ ಹೆಚ್ಚಳ

►ಕ್ರಿಪ್ಟೋ ಕರೆನ್ಸಿಗೆ ಕಾನೂನು ಮಾನ್ಯತೆ ಇಲ್ಲ

►700 ಲೊಕೋಮೋಟಿವ್ ಗಳ ನಿರ್ಮಾಣ 600 ರೈಲ್ವೆ ನಿಲ್ದಾಣಗಳ ಅಭಿವೃದ್ಧಿ

►ಸಬ್ ಅರ್ಬನ್ ರೈಲು ಯೋಜನೆಗೆ ಒಟ್ಟು 40 ಸಾವಿರ ಕೋಟಿ ಬೆಂಗಳೂರು ಸಬ್ ಅರ್ಬರನ್ ರೈಲು ಯೋಜನೆಗೆ 17 ಸಾವಿರ ಕೋಟಿ

►ಭಾರತ್ ಮಾಲಾ ಯೋಜನೆಯಡಿ 35 ಸಾವಿರ ಕಿಮೀ ಮೇಲ್ದರ್ಜೆಗೆ

►1 ಲಕ್ಶ 48 ಸಾವಿರದ 500 ಕೋಟಿ ರೂ ರೈಲ್ವೆಗೆ ಅನುದಾನ

Budget 2018-19 Question & answers

1 February 2018: The Current Affairs Quizzes section of Jagranjosh aims to help every competitive exam aspirant to revise the day at ease. The day’s updated quizzes cover the Union Budget 2018-19.

1. The Union government in its budget 2018 has proposed to launch a restructured mission with an outlay of Rs 1290 crore to promote which sector?
a) Handloom
b) Bamboo
c) Traditional Craft
d) Rural Development

2. Which among the following state governments does not qualify for the special scheme that the government is going to introduce to tackle air pollution?
a) Uttar Pradesh 
b) Delhi 
c) Punjab
d) Haryana

3. How much fund has the Union Government allocated for its new ‘Operation Green’ mission ?
a) 1000 crore
b) 680 crore
c) 500 crore
d) 1300 crore

4. The Union government has proposed to extend the reach of Ujjwala Yojana to how many poor women in 2018-19?
a) 4 crore 
b) 10 crore
c) 8 crore
d) 6 crore

5. The Indian Railways is planning to re-develop how many major railway stations in 2018?
a) 400
b) 540
c) 730
d) 600

6. The government would be setting up an institute to train manpower for high-speed railway project in which city?
a) Ahmedabad
b) Surat 
c) Pune
d) Vadodara 

7. What is the salary of President as per Union Budget 2018?
a) Rs 5 lakh
b) Rs 4 lakh
c) Rs 3 lakh
d) Rs 2 lakh

8. As per Union Budget 2018, the Customs duty on mobile phones and parts of televisions will be increased to what per cent?
a) 20 per cent
b) 25 per cent
c) 30 per cent
d) 35 per cent

9. What was the total fiscal expenditure of the Union Government in 2017-18 as per Union Budget 2018?
a) Rs 21.47 lakh crore
b) Rs 21.57 lakh crore
c) Rs 21.67 lakh crore
d) Rs 21.77 lakh crore

10. As per Union Budget 2018, senior citizens will now be able to claim benefit of deduction of what amount in case of critical illnesses?
a) Rs 50000 
b) Rs 75000
c) Rs 100000
d) Rs 125000

11. Which scheme will be launched this year as per Budget 2018 to improve the Health Sector of the country?
a) Rashtriya Swasthya Bima Yojana
b) National Health Policy 2018
c) Ayushman Bharat
d) National Health Protection Scheme

12. As per Budget 2018, which three firms will be merged and then listed?
a) UTI, Oriental Insurance and National Insurance
b) LIC, Bharti AXA and United Insurance
c) General Insurance, Max Bupa and UTI
d) None of the above

ANSWERS

1. (b) Bamboo
The Union Government in its Budget 2018 has proposed to launch a restructured bamboo mission with a fund of Rs 1290 crore to promote bamboo sector in a holistic manner.

2. (a) Uttar Pradesh 
The Government is going to introduce a special scheme to support the state governments of Haryana, Punjab and Delhi to address air pollution and to subsidise machinery required for in-situ management of crop residue.

3. (c) Rs 500 crore
The Union government plans to launch ‘Operation Green’ with a corpus of Rs 500 crore. It will promote Farmer Producers Organizations (FPOs), agri-logistics, processing facilities and professional management. 

4. (c) 8 crore 
The Lower and Middle Class have been the focus of the NDA Government during the last three years. The government had launched Ujjwala Yojana earlier to make poor women free from the smoke of wood. Though initially, their target was to provide free LPG connections to about 5 crore poor women, the government has now proposed to increase the target to 8 crore poor women.

5. (d) 600 
The Indian Railways is planning to re- develop 600 major railway stations. All stations with more than 25000 footfall will have escalators. All the stations will also be equipped with high-speed wifi.

6. (d) Vadodara 
The Union government had previously laid the foundation of the high-speed bullet Mumbai-Ahmedabad train. An institute would be set up in Vadodara in Gujarat to train the manpower for the high-speed railway project. 

7. (a) Rs 5 lakh
Emoluments will revised for the President to Rs 5 lakh, Rs 4 lakh for Vice-President and Rs 3.5 lakh per month for Governors. Emoluments to MPs will be refixed with effect from April 1, 2018.

8. (a) 20 per cent
The Union Finance Minister Arun Jaitley on 1 February 2018 presented the Union Budget 2018 in the parliament. As per the Budget, Customs duty on mobile phones and parts of televisions will be increased to 20 per cent from 15 per cent. Customs duty on raw cashew will be reduced from 5 per cent to 2.5 per cent.

9. (b) Rs 21.57 lakh crore
The Union Finance Minister Arun Jaitley on 1 February 2018 presented the Union Budget 2018 in the parliament. In the independent India, this is the 88th budget and the fifth of the Modi Government. The total expenditure of the Union government is Rs 21.57 lakh crore.

10. (c) Rs 100000
This year budget proposes a standard deduction of Rs 40000 for transport and medical reimbursements. All senior citizens will now be able to claim benefit of a deduction of Rs 50000 for any medical expenditure and can claim deduction of Rs 100000  for critical illnesses.

11. (d) National Health Protection Scheme
National Health Protection Scheme will be launched to cover 10 crore poor and vulnerable families. Under this, up to Rs 5 lakh will be provided to each family per year in secondary and tertiary care institutions. This scheme will have 50 crore beneficiaries.

12. (a) UTI, Oriental Insurance and National Insurance
As per Union Budget 2018, the Union government will recapitalise public sector banks to help them lend an additional Rs 5 lakh crore. Unit Trust of India, Oriental Insurance and National Insurance will be merged and then listed.

42 ನೇ ಸ್ಥಾನಕ್ಕೆ ಕುಸಿದ ಜಾಗತಿಕ ಪ್ರಜಾಪ್ರಭುತ್ವ ಸೂಚಿ


ಹೊಸದಿಲ್ಲಿ,ಜ.31: ಹೆಚ್ಚುತ್ತಿರುವ ಮಡಿವಂತಿಕೆಯ ಧಾರ್ಮಿಕ ಸಿದ್ಧಾಂತಗಳು, ಗೋರಕ್ಷಕರ ಹಾವಳಿ ಹಾಗೂ ಅಲ್ಪಸಂಖ್ಯಾತರು ಮತ್ತು ಇತರ ಭಿನ್ನಾಭಿಪ್ರಾಯಗಳ ಧ್ವನಿಗಳ ನಡುವೆ ವಾರ್ಷಿಕ ಜಾಗತಿಕ ಪ್ರಜಾಪ್ರಭುತ್ವ ಸೂಚಿಯಲ್ಲಿ ಭಾರತವು 32ನೇ ಸ್ಥಾನದಿಂದ 42ಕ್ಕೆ ಕುಸಿದಿದೆ.

ಬ್ರಿಟನ್ನ ಪ್ರತಿಷ್ಠಿತ ಮಾಧ್ಯಮ ಸಮೂಹ 'ದಿ ಇಕನಾಮಿಸ್ಟ್ ಗ್ರೂಪ್'ನ ಸಂಶೋಧನಾ ಮತ್ತು ವಿಶ್ಲೇಷಣಾ ವಿಭಾಗವಾಗಿರುವ 'ಇಕನಾಮಿಸ್ಟ್ ಇಂಟೆಲಿಜೆನ್ಸ್ ಯೂನಿಟ್(ಇಐಯು)' ಸಿದ್ಧಪಡಿಸಿರುವ ಈ ಸೂಚಿಯಲ್ಲಿ ನಾರ್ವೆ ಮತ್ತೊಮ್ಮೆ ಅಗ್ರಸ್ಥಾನದಲ್ಲಿದ್ದು, ಐಸ್ಲ್ಯಾಂಡ್ ಮತ್ತು ಸ್ವೀಡನ್ ನಂತರದ ಸ್ಥಾನಗಳಲ್ಲಿವೆ. ಕಳೆದ ವರ್ಷ 32ನೇ ಸ್ಥಾನದಲ್ಲಿದ್ದ ಭಾರತವು ಈ ವರ್ಷ 42ನೇ ಸ್ಥಾನಕ್ಕೆ ಜಾರಿದ್ದು, 'ದೋಷಪೂರಿತ ಪ್ರಜಾಪ್ರಭುತ್ವ'ಗಳ ವರ್ಗಕ್ಕೆ ಸೇರಿಸಲ್ಪಟ್ಟಿದೆ.

ಜಾಗತಿಕ ಪ್ರಜಾಪ್ರಭುತ್ವ ಸೂಚಿಯಲ್ಲಿ ಚುನಾವಣಾ ಪ್ರಕ್ರಿಯೆ ಮತ್ತು ಬಹುತ್ವ, ನಾಗರಿಕ ಸ್ವಾತಂತ್ರ್ಯಗಳು, ಸರಕಾರದ ಕಾರ್ಯವೈಖರಿ, ರಾಜಕೀಯ ಸಹಭಾಗಿತ್ವ ಮತ್ತು ರಾಜಕೀಯ ಸಂಸ್ಕೃತಿ ಈ ಐದು ವರ್ಗಗಳ ಆಧಾರದಲ್ಲಿ 165 ಸ್ವತಂತ್ರ ರಾಷ್ಟ್ರಗಳು ಮತ್ತು ಎರಡು ಪ್ರದೇಶಗಳಿಗೆ ಸ್ಥಾನಗಳನ್ನು ನೀಡಲಾಗುತ್ತದೆ. ಪಟ್ಟಿಯನ್ನು ಸಂಪೂರ್ಣ ಪ್ರಜಾಪ್ರಭುತ್ವ, ದೋಷಪೂರಿತ ಪ್ರಜಾಪ್ರಭುತ್ವ, ಮಿಶ್ರ ಆಡಳಿತ ವ್ಯವಸ್ಥೆ ಮತ್ತು ನಿರಂಕುಶ ಪ್ರಭುತ್ವ ಹೀಗೆ ನಾಲ್ಕು ವರ್ಗಗಳಲ್ಲಿ ವಿಭಾಗಿಸಲಾಗಿದೆ.

21ನೇ ಸ್ಥಾನದಲ್ಲಿರುವ ಅಮೆರಿಕದ ಜೊತೆಗೆ ಜಪಾನ್, ಇಟಲಿ, ಫ್ರಾನ್ಸ್, ಇಸ್ರೇಲ್, ಸಿಂಗಾಪುರ ಮತ್ತು ಹಾಂಗ್ಕಾಂಗ್ಗಳೂ ದೋಷಪೂರಿತ ಪ್ರಜಾಪ್ರಭುತ್ವಗಳ ಗುಂಪಿನಲ್ಲಿ ಸೇರಿವೆ.

ನ್ಯೂಝಿಲ್ಯಾಂಡ್ ಮತ್ತು ಡೆನ್ಮಾರ್ಕ್ ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿದ್ದರೆ ಐರ್ ಲ್ಯಾಂಡ್, ಕೆನಡಾ, ಆಸ್ಟ್ರೇಲಿಯಾ, ಫಿನ್ಲ್ಯಾಂಡ್ ಮತ್ತು ಸ್ವಿಝರ್ ಲ್ಯಾಂಡ್ ಮೊದಲ ಹತ್ತು ಸ್ಥಾನಗಳಲ್ಲಿರುವ ಇತರ ರಾಷ್ಟ್ರಗಳಾಗಿವೆ.

ಕೇವಲ 19 ಅಗ್ರರಾಷ್ಟ್ರಗಳನ್ನು 'ಸಂಪೂರ್ಣ ಪ್ರಜಾಪ್ರಭುತ್ವಗಳು' ಎಂದು ವರ್ಗೀಕರಿಸಲಾಗಿದೆ. ಪಾಕಿಸ್ತಾನ(110ನೇ ಸ್ಥಾನ), ಬಾಂಗ್ಲಾದೇಶ(92), ನೇಪಾಳ(94)ಮತ್ತು ಭೂತಾನ(99) ಮಿಶ್ರ ಆಡಳಿತ ವ್ಯವಸ್ಥೆಯ ವರ್ಗಕ್ಕೆ ಸೇರಿಸಲ್ಪಟ್ಟಿವೆ.

ಚೀನಾ(139), ಮ್ಯಾನ್ಮಾರ್(120), ರಷ್ಯಾ(135) ಮತ್ತು ವಿಯೆಟ್ನಾಂ(140) 'ನಿರಂಕುಶ ಪ್ರಭುತ್ವಗಳು' ಎಂದು ಹೆಸರಿಸಲ್ಪಟ್ಟಿರುವ ಗುಂಪಿನಲ್ಲಿವೆ.

ಉತ್ತರ ಕೊರಿಯಾ(167) ಪಟ್ಟಿಯಲ್ಲಿ ಅತ್ಯಂತ ಕೊನೆಯ ಸ್ಥಾನದಲ್ಲಿದ್ದು, ಸಿರಿಯಾ(166) ಒಂದು ಸ್ಥಾನ ಮೇಲಿದೆ.

ಕಾರಂಜ್ ಜಲಂತಾರ್ಗಾಮಿ ಅರ್ಪಣೆ.

ಮುಂಬೈ: ಸಂಸ್ಕೃತ ಶ್ಲೋಕ, ಯಜುರ್ವೇದ ಮಂತ್ರ ಪಠಣ ಹಾಗೂ ಸಾಂಪ್ರದಾಯಿಕ ಪೂಜೆ ಬಳಿಕ ಸ್ಕಾರ್ಪೀನ್ ಸರಣಿಯ ಮೂರನೇ ಜಲಾಂತರ್ಗಾಮಿ ನೌಕೆ 'ಕಾರಂಜ್' ಬುಧವಾರ ಲೋಕಾರ್ಪಣೆಗೊಂಡಿತು.

ಇಲ್ಲಿನ ಮಜಗಾಂವ್ ಹಡಗುಕಟ್ಟೆಯಲ್ಲಿ ನೌಕಾದಳದ ಮುಖ್ಯಸ್ಥ ಸುನೀಲ್ ಲಾಂಬಾ ಅವರು ಜಲಾಂತರ್ಗಾಮಿಯನ್ನು ಉದ್ಘಾಟಿಸಿದರು. ಕಾರ್ಯಾಚರಣೆಗೂ ಮುನ್ನ ಸಮುದ್ರ ಹಾಗೂ ಬಂದರುಗಳಲ್ಲಿ ವಿವಿಧ ಪರೀಕ್ಷೆ ಹಾಗೂ ಕಠಿಣ ಪ್ರಯೋಗಗಳಿಗೆ ಇದನ್ನು ಒಳಪಡಿಸಲಾಗುತ್ತದೆ.

ಮಜಗಾಂವ್ ಹಡಗುಕಟ್ಟೆಯಲ್ಲಿ ಒಟ್ಟು ಆರು ಸಬ್ಮೆರಿನ್ಗಳನ್ನು ನಿರ್ಮಿಸಲಾಗುತ್ತಿದೆ. ಫ್ರಾನ್ಸ್ನ ಡಿಸಿಎನ್‌ಎಸ್ ಹಡಗು ನಿರ್ಮಾಣ ಸಂಸ್ಥೆಯ ಸಹಯೋಗದಲ್ಲಿ ಇವು ತಯಾರಾಗುತ್ತಿವೆ.

ಈ ಮೊದಲು 'ಕಾರಂಜ್' ಹೆಸರಿನ ನೌಕೆಯು 1971ರ ಯುದ್ಧದಲ್ಲಿ ಭಾಗಿಯಾಗಿತ್ತು.

1969ರಿಂದ ಒಟ್ಟು 34 ವರ್ಷಗಳ ಕಾಲ ಸೇವೆ ಸಲ್ಲಿಸಿ, 2003ರಲ್ಲಿ ಕಾರ್ಯಾಚರಣೆ ಸ್ಥಗಿತೊಗಳಿಸಿತ್ತು.

ಐಎನ್‌ಎಸ್ ಕಲ್ವರಿ

ಸ್ಕಾರ್ಪೀನ್ ಸರಣಿಯ ಮೊದಲ ಜಲಾಂತರ್ಗಾಮಿ ಡಿ.14, 2017ರಂದು ಕಾರ್ಯಾಚರಣೆ ಆರಂಭ

ಐಎನ್‌ಎಸ್ ಖಾಂಡೇರಿ

2017ರ ಜನವರಿ 12ರಂದು ಉದ್ಘಾಟನೆಗೊಂಡಿದ್ದ ಸ್ಕಾರ್ಪೀನ್ ಸರಣಿಯ ಎರಡನೇ ಜಲಾಂತರ್ಗಾಮಿಯು ಇದೇ ವರ್ಷಾಂತ್ಯದಲ್ಲಿ ಕಾರ್ಯಾಚರಣೆಗೆ ಸಿದ್ಧವಾಗಲಿದೆ.

***

ವೈಶಿಷ್ಟ್ಯತೆಗಳು:

* ಶಬ್ದಶೋಧಕಗಳಿಂದಲೂ (ಸೋನಾರ್) ಪತ್ತೆಯಾಗದಂತೆ ರಕ್ಷಿಸುವ ಅತ್ಯಾಧುನಿಕ ತಂತ್ರಜ್ಞಾನ

* ಕಡಿಮೆ ಮಟ್ಟದ ವಿಕಿರಣ ಶಬ್ದ

* ನೀರನ್ನು ಸುಲಭವಾಗಿ ಸೀಳಿಕೊಂಡು ಹೋಗುವಂತೆ ನೌಕೆಯ ವಿನ್ಯಾಸ

* ನಿಖರ ಮಾರ್ಗದರ್ಶಿ ಶಸ್ತ್ರಾಸ್ತ್ರ ಬಳಸಿ ವೈರಿಪಡೆ ಮೇಲೆ ದಾಳಿ ನಡೆಸುವ ಸಾಮರ್ಥ್ಯ

* ಟಾರ್ಪೆಡೊಗಳು ಮತ್ತು ನೌಕೆ ನಿರೋಧಕ ಕ್ಷಿಪಣಿ ವ್ಯವಸ್ಥೆ

* ನೌಕೆಗೆ ಆಗಬಹುದಾದ ಹಾನಿ ತಡೆಗಟ್ಟುವ ರಹಸ್ಯ ವ್ಯವಸ್ಥೆ

* ಬಹುತೇಕ ಜಲಾಂತರ್ಗಾಮಿಗಳಲ್ಲಿ ಇಲ್ಲದ ವಿಶೇಷತೆಗಳನ್ನು ಹೊಂದಿದೆ

*ತರಬೇತಿ ಮತ್ತು ಪ್ರಮಾಣೀಕರಣ ಪ್ರಕ್ರಿಯೆಯಲ್ಲಿ ಸಂಪೂರ್ಣ ಸ್ವಾವಲಂಬನೆ