ಸೋಮವಾರ, ಡಿಸೆಂಬರ್ 24, 2018

ವಿಶ್ವ ಆರ್ಥಿಕ ವೇದಿಕೆ

ವಿಶ್ವ ಆರ್ಥಿಕ ವೇದಿಕೆ

ವಿಶ್ವ ಆರ್ಥಿಕ ವೇದಿಕೆ (ವರ್ಲ್ಡ್‌ ಇಕನಾಮಿಕ್‌ ಫೋರಮ್‌-WEF ) ಎಂಬುದು ಜಿನಿವಾ-ಮೂಲದ, ಲಾಭಗಳಿಕೆಯ ಉದ್ದೇಶವಿಲ್ಲದ ಒಂದು ಪ್ರತಿಷ್ಠಾನವಾಗಿದ್ದು, ಸ್ವಿಜರ್‌ಲೆಂಡ್‌‌‌ನ ದಾವೋಸ್‌‌ನಲ್ಲಿ ನಡೆಯುವ ತನ್ನ ವಾರ್ಷಿಕ ಸಭೆಯಿಂದಾಗಿ ಸುಪರಿಚಿತವಾಗಿದೆ; ಆರೋಗ್ಯ ಮತ್ತು ಪರಿಸರ-ಸಂಬಂಧಿ ವಿಷಯಗಳೂ ಸೇರಿದಂತೆ, ವಿಶ್ವವು ಎದುರಿಸುತ್ತಿರುವ ಅತ್ಯಂತ ಜರೂರಾದ ಸಮಸ್ಯೆಗಳ ಕುರಿತು ಚರ್ಚಿಸಲು, ವ್ಯವಹಾರ ವಲಯದ ಅಗ್ರಗಣ್ಯ ನಾಯಕರು, ಅಂತರರಾಷ್ಟ್ರೀಯ ರಾಜಕೀಯ ನಾಯಕರು, ಆಯ್ದ ಬುದ್ಧಿಜೀವಿಗಳು ಮತ್ತು ಪತ್ರಕರ್ತರನ್ನು ಒಂದೆಡೆ ಸೇರಿಸುವ ವಾರ್ಷಿಕ ಸಭೆ ಇದಾಗಿದೆ. ಸಭೆಗಳು ಮಾತ್ರವೇ ಅಲ್ಲದೇ, ಸಂಶೋಧನಾ ವರದಿಗಳ ಒಂದು ಸರಣಿಯನ್ನೇ WEF ರೂಪಿಸುತ್ತದೆ ಮತ್ತು ವಲಯ-ಉದ್ದೇಶಿತ ಉಪಕ್ರಮಗಳಲ್ಲಿ ತನ್ನ ಸದಸ್ಯರನ್ನು ತೊಡಗಿಸುತ್ತದೆ.[೧] ಚೀನಾದಲ್ಲಿ "ಹೊಸ ಚಾಂಪಿಯನ್ನರ ವಾರ್ಷಿಕ ಸಭೆ"ಯನ್ನೂ (ಆನ್ಯುಯಲ್‌ ಮೀಟಿಂಗ್‌ ಆಫ್‌ ದಿ ನ್ಯೂ ಚಾಂಪಿಯನ್ಸ್‌) WEF ಸಂಘಟಿಸುತ್ತದೆ ಹಾಗೂ ವರ್ಷದಾದ್ಯಂತವೂ ಪ್ರಾದೇಶಿಕ ಸಭೆಗಳ ಒಂದು ಸರಣಿಯನ್ನು ಆಯೋಜಿಸುತ್ತದೆ. 2008ರಲ್ಲಿ ನಡೆದ ಆ ಪ್ರಾದೇಶಿಕ ಸಭೆಗಳಲ್ಲಿ, ಯುರೋಪ್‌ ಮತ್ತು ಮಧ್ಯ ಏಷ್ಯಾ, ಪೂರ್ವ ಏಷ್ಯಾ, ರಷ್ಯಾ CEO ದುಂಡುಮೇಜಿನ ಪರಿಷತ್ತು, ಆಫ್ರಿಕಾ, ಮಧ್ಯ ಪ್ರಾಚ್ಯ ಇವುಗಳ ಕುರಿತಾದ ಸಭೆಗಳು, ಮತ್ತು ಲ್ಯಾಟಿನ್‌ ಅಮೆರಿಕಾದ ಕುರಿತಾದ ವಿಶ್ವ ಆರ್ಥಿಕ ವೇದಿಕೆ ಇವೆಲ್ಲವೂ ಸೇರಿದ್ದವು. 2008ರಲ್ಲಿ ಇದು ದುಬೈನಲ್ಲಿ "ಸಮಿಟ್‌ ಆನ್‌ ದಿ ಗ್ಲೋಬಲ್‌ ಅಜೆಂಡಾ" ಎಂಬ ಶೃಂಗಸಭೆಯನ್ನು ಪ್ರಾರಂಭಿಸಿತು.

World Economic Forum ಸ್ಥಾಪನೆ1971ಶೈಲಿNon-profit organizationLegal statusFoundationHeadquartersColognySswitzerland

ಕ್ಲೌಸ್‌ ಮಾರ್ಟಿನ್‌ ಷ್ವಾಬ್‌ ಎಂಬ ಓರ್ವ ಜರ್ಮನ್‌-ಸಂಜಾತ ವ್ಯವಹಾರ-ವಿಷಯದ ಪ್ರಾಧ್ಯಾಪಕನಿಂದ 1971ರಲ್ಲಿ WEF ಸಂಸ್ಥಾಪಿಸಲ್ಪಟ್ಟಿತು. ಈತ ಜಿನಿವಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದ.[೨] ಇದಕ್ಕೆ ಮೂಲತಃ ಯುರೋಪಿಯನ್‌ ಮ್ಯಾನೇಜ್‌ಮೆಂಟ್‌ ಫೋರಮ್‌ ಎಂಬ ಹೆಸರಿಡಲಾಗಿತ್ತು. ನಂತರ 1987ರಲ್ಲಿ ಇದು ತನ್ನ ಹೆಸರನ್ನು ವಿಶ್ವ ಆರ್ಥಿಕ ವೇದಿಕೆ (ವರ್ಲ್ಡ್‌ ಇಕನಾಮಿಕ್‌ ಫೋರಮ್‌) ಎಂಬುದಾಗಿ ಬದಲಾಯಿಸಿಕೊಂಡಿತು. ಅಷ್ಟೇ ಅಲ್ಲ, ಅಂತರರಾಷ್ಟ್ರೀಯ ಘರ್ಷಣೆಗಳನ್ನು ಪರಿಹರಿಸುವುದಕ್ಕಾಗಿ ವೇದಿಕೆಯೊಂದರ ಒದಗಿಸುವಿಕೆಯನ್ನು ಒಳಗೊಳ್ಳಲೆಂದು ತನ್ನ ದೃಷ್ಟಿಕೋನವನ್ನು ಮತ್ತಷ್ಟು ವಿಸ್ತರಿಸಲು ಅದು ಬಯಸಿತು.

1971ರ ಬೇಸಿಗೆಯಲ್ಲಿ, ದಾವೋಸ್‌ ಕಾಂಗ್ರೆಸ್‌ ಸೆಂಟರ್‌‌‌ನಲ್ಲಿ ಆಯೋಜಿಸಲಾದ ಮೊದಲ ಐರೋಪ್ಯ ವ್ಯವಸ್ಥಾಪನಾ ವಿಚಾರ ಸಂಕಿರಣಕ್ಕೆ (ಯುರೋಪಿಯನ್‌ ಮ್ಯಾನೇಜ್‌ಮೆಂಟ್‌ ಸಿಂಪೋಜಿಯಂ) ಪಾಶ್ಚಾತ್ಯ ಐರೋಪ್ಯ ಸಂಸ್ಥೆಗಳಿಗೆ ಸೇರಿದ 444 ಕಾರ್ಯನಿರ್ವಹಣಾಧಿಕಾರಿಗಳನ್ನು ಷ್ವಾಬ್‌ ಆಹ್ವಾನಿಸಿದ; ಐರೋಪ್ಯ ಆಯೋಗ ಮತ್ತು ಐರೋಪ್ಯ ಕೈಗಾರಿಕಾ ಸಂಘಗಳ ಆಶ್ರಯದ ಅಡಿಯಲ್ಲಿ ಆಯೋಜಿಸಲ್ಪಟ್ಟಿದ್ದ ಈ ವಿಚಾರ ಸಂಕಿರಣದಲ್ಲಿ, US ವ್ಯವಸ್ಥಾಪನಾ ಪರಿಪಾಠಗಳಿಗೆ ಐರೋಪ್ಯ ಸಂಸ್ಥೆಗಳನ್ನು ಪರಿಚಯಿಸಲು ಷ್ವಾಬ್‌ ಬಯಸಿದ್ದ. ಆಗ ಅವನು WEF ಸಂಘಟನೆಯನ್ನು ಜಿನಿವಾ ಮೂಲದ ಒಂದು ಲಾಭಗಳಿಕೆಯ ಉದ್ದೇಶವಿಲ್ಲದ ಸಂಘಟನೆಯಾಗಿ ಸಂಸ್ಥಾಪಿಸಿದ. ಅಷ್ಟೇ ಅಲ್ಲ, ಯುರೋಪಿನ ವ್ಯವಹಾರ ವಲಯದ ನಾಯಕರು ತಮ್ಮ ವಾರ್ಷಿಕ ಸಭೆಗಳನ್ನು ಪ್ರತಿ ವರ್ಷದ ಜನವರಿಯಲ್ಲಿ ದಾವೋಸ್‌ನಲ್ಲಿ ನಡೆಸುವಂತೆ ಅವರನ್ನು ಸೆಳೆದ.[೩]

ಎಲ್ಲಾ ಹಿತಾಸಕ್ತಿಗಳನ್ನೂ ಪರಿಗಣನೆಗೆ ತೆಗೆದುಕೊಂಡು ಮುನ್ನಡೆಯುವ ವ್ಯವಸ್ಥಾಪಕರ ಮೇಲೆ ಸಾಂಸ್ಥಿಕ ಯಶಸ್ಸು ಆಧರಿಸಿರುವ "ಹೂಡಿಕೆದಾರ" ವ್ಯವಸ್ಥಾಪನಾ ವಿಧಾನವನ್ನು ಷ್ವಾಬ್‌ ಅಭಿವೃದ್ಧಿಪಡಿಸಿದ: ಷೇರುದಾರರು, ಗಿರಾಕಿಗಳು ಮತ್ತು ಗ್ರಾಹಕರು ಮಾತ್ರವೇ ಅಲ್ಲದೆ, ಸರ್ಕಾರಗಳನ್ನೂ ಒಳಗೊಂಡಂತೆ, ಸಂಸ್ಥೆಯು ನೆಲೆಗೊಂಡಿರುವ ಸಮುದಾಯಗಳು ಹಾಗೂ ಸಂಸ್ಥೆಯ ಉದ್ಯೋಗಿಗಳನ್ನೂ ಪರಿಗಣನೆಗೆ ತೆಗೆದುಕೊಳ್ಳುವುದು ಈ ವ್ಯವಸ್ಥಾಪನಾ ವಿಧಾನದ ಪರಿಕಲ್ಪನೆಯಾಗಿತ್ತು.[೪] ಬ್ರೆಟನ್‌ ವುಡ್ಸ್‌‌ನ ನಿಶ್ಚಿತ ವಿನಿಮಯದರದ ಕಾರ್ಯವಿಧಾನದ ಕುಸಿತ ಹಾಗೂ ಅರಬ್‌-ಇಸ್ರೇಲಿನ ಯುದ್ಧವನ್ನು ಒಳಗೊಂಡಂತೆ, 1973ರಲ್ಲಿ ನಡೆದ ಘಟನೆಗಳಿಂದಾಗಿ ವಾರ್ಷಿಕ ಸಭೆಯು ತನ್ನ ಗಮನವನ್ನು ವ್ಯವಸ್ಥಾಪನಾ ವಿಷಯದಿಂದ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳವರೆಗೆ ವಿಸ್ತರಿಸಬೇಕಾಗಿ ಬಂತು; ಮತ್ತು 1974ರ ಜನವರಿಯಲ್ಲಿ ರಾಜಕೀಯ ನಾಯಕರು ಮೊದಲ ಬಾರಿಗೆ ದಾವೋಸ್‌ಗೆ ಆಹ್ವಾನಿಸಲ್ಪಟ್ಟರು.[೫]

1992ರ ಜನವರಿಯಲ್ಲಿ, ದಾವೋಸ್‌ನಲ್ಲಿ ಆಯೋಜಿಸಲ್ಪಟ್ಟಿದ್ದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಫ್ರೆಡೆರಿಕ್‌ ಡಿ ಕ್ಲರ್ಕ್‌ ಮತ್ತು ನೆಲ್ಸನ್‌‌ ಮಂಡೇಲಾ ಪರಸ್ಪರ ಕೈಕುಲುಕುತ್ತಿರುವುದು.

2009ರ ಜನವರಿಯಲ್ಲಿನ ವಿಶ್ವ ಆರ್ಥಿಕ ವೇದಿಕೆಯಲ್ಲಿ ಜಪಾನೀ ಪ್ರಧಾನಮಂತ್ರಿ ಟಾರೋ ಅಸೋ

ಕ್ಲೌಸ್‌ ಷ್ವಾಬ್‌, ಸಂಸ್ಥಾಪಕ ಮತ್ತು ಕಾರ್ಯಕಾರಿ ಸಭಾಪತಿ, ವಿಶ್ವ ಆರ್ಥಿಕ ವೇದಿಕೆ.

ವರ್ಷಗಳು ಉರುಳುತ್ತಾ ಹೋದಂತೆ, ದಾವೋಸ್‌ನ್ನು ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವುದಕ್ಕಾಗಿರುವ ಒಂದು ತಟಸ್ಥ ವೇದಿಕೆಯಾಗಿ ರಾಜಕೀಯ ನಾಯಕರು ಬಳಸಲು ಶುರುಮಾಡಿದರು. ಗ್ರೀಸ್‌ ಮತ್ತು ಟರ್ಕಿದೇಶಗಳು 1988ರಲ್ಲಿ ದಾವೋಸ್‌ ಘೋಷಣೆಗೆ (ದಾವೋಸ್‌ ಡಿಕ್ಲರೇಷನ್‌) ಸಹಿಹಾಕಿದವು; ಯುದ್ಧದ ಅಂಚಿನಿಂದ ಹಿಮ್ಮೆಟ್ಟುವಲ್ಲಿ ಇದು ಅವರಿಗೆ ನೆರವಾಯಿತು. 1992ರಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ, ನೆಲ್ಸನ್‌‌ ಮಂಡೇಲಾ ಮತ್ತು ಮುಖ್ಯಸ್ಥ ಮಂಗೊಸುಥು ಬುಥೆಲೆಜಿ ಈ ಇಬ್ಬರನ್ನು ದಕ್ಷಿಣ ಆಫ್ರಿಕಾದ ಅಧ್ಯಕ್ಷ F. W. ಡಿ ಕ್ಲರ್ಕ್‌ ಭೇಟಿಯಾದ; ಇದು ದಕ್ಷಿಣ ಆಫ್ರಿಕಾದ ಹೊರಗಿನ ಅವರ ಮೊದಲ ಜಂಟಿ ಕಾಣಿಸುವಿಕೆಯಾಗಿತ್ತು. 1994ರ ವಾರ್ಷಿಕ ಸಭೆಯಲ್ಲಿ, ಇಸ್ರೇಲಿನ ವಿದೇಶಾಂಗ ಸಚಿವ ಷಿಮೋನ್‌ ಪೆರೆಸ್‌ ಮತ್ತು PLO ಸಭಾಪತಿ ಯಾಸರ್‌‌ ಅರಾಫತ್‌‌ಇಬ್ಬರೂ ಗಾಜಾ ಮತ್ತು ಜೆರಿಕೊ ಕುರಿತಾದ ಒಂದು ಕರಡು ಒಪ್ಪಂದಕ್ಕೆ ಮುಂದಾದರು.[೬] 2008ರಲ್ಲಿ, ಉತ್ಪಾದಕ ಬಂಡವಾಳ ನೀತಿಯ ಕುರಿತಾಗಿ ಬಿಲ್‌ ಗೇಟ್ಸ್‌ ಒಂದು ವಿಷಯ ಮಂಡನಾತ್ಮಕ ಉಪನ್ಯಾಸವನ್ನು ನೀಡಿದ. ಉತ್ಪಾದಕ ಬಂಡವಾಳ ನೀತಿ ಎಂಬುದು ಬಂಡವಾಳ ನೀತಿಯ ಒಂದು ಸ್ವರೂಪವಾಗಿದ್ದು, ಇದು ಲಾಭಗಳನ್ನು ಹುಟ್ಟುಹಾಕುವುದರ ಜೊತೆಗೆ ಪ್ರಪಂಚದಲ್ಲಿ ಕಂಡುಬರುವ ಅನ್ಯಾಯಗಳು ಅಥವಾ ಪಕ್ಷಪಾತಗಳನ್ನೂ ಪರಿಹರಿಸುತ್ತದೆ; ಇದನ್ನು ನೆರವೇರಿಸುವುದಕ್ಕಾಗಿ, ಬಡವರ ಅಗತ್ಯಗಳಿಗೆ ಉತ್ತಮ ರೀತಿಯಲ್ಲಿ ಗಮನ ಹರಿಸಲು ಅದು ಮಾರುಕಟ್ಟೆಯ ಬಲಗಳನ್ನು ಬಳಸಿಕೊಳ್ಳುತ್ತದೆ.[೭][೮]

ಸಂಘಟನೆ

ಸ್ವಿಜರ್‌ಲೆಂಡ್‌ನ ಜಿನಿವಾದ ಕಲೋನಿ ಎಂಬಲ್ಲಿ WEF ತನ್ನ ಕೇಂದ್ರಕಾರ್ಯಾಲಯವನ್ನು ಹೊಂದಿದೆ. 2006ರಲ್ಲಿ, ಚೀನಾದ ಬೀಜಿಂಗ್‌‌‌‌‌ನಲ್ಲಿ, ಹಾಗೂ ನ್ಯೂಯಾರ್ಕ್‌ ನಗರದಲ್ಲಿ ಇದು ಪ್ರಾದೇಶಿಕ ಕಚೇರಿಗಳನ್ನು ತೆರೆಯಿತು. ಸದಾ ನಿಷ್ಪಕ್ಷಪಾತಿಯಾಗಿರಲು ಹೆಣಗಾಡುವ ಈ ಸಂಘಟನೆಯು ಯಾವುದೇ ರಾಜಕೀಯ, ಪಕ್ಷಾವಲಂಬಿ ಅಥವಾ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅಂಟಿಕೊಂಡಿಲ್ಲ. "ಪ್ರಪಂಚದ ಸ್ಥಿತಿಗತಿಯನ್ನು ಸುಧಾರಿಸುವೆಡೆಗೆ ಸಂಘಟನೆಯು ಬದ್ಧತೆಯನ್ನು ಹೊಂದಿದೆ"[೯], ಮತ್ತು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯೊಂದಿಗೆ ವೀಕ್ಷಕ ಸ್ಥಾನಮಾನವನ್ನು ಹೊಂದಿದೆ. ಸಂಘಟನೆಯ ಮೇಲ್ವಿಚಾರಣೆಯನ್ನು ಸ್ವಿಸ್‌ ಒಕ್ಕೂಟದ ಸರ್ಕಾರವು ನೋಡಿಕೊಳ್ಳುತ್ತದೆ. ಪ್ರತಿಷ್ಠಾನ ಮಂಡಳಿಯು ಇದರ ಅತ್ಯುನ್ನತ ಆಡಳಿತ ಘಟಕವಾಗಿದ್ದು, 22 ಸದಸ್ಯರನ್ನು ಅದು ಒಳಗೊಂಡಿದೆ; ಹಿಂದಿನ ಬ್ರಿಟಿಷ್‌ಪ್ರಧಾನಮಂತ್ರಿ ಟೋನಿ ಬ್ಲೇರ್‌‌ ಮತ್ತು ಜೋರ್ಡಾನ್‌‌ನ ರಾಣಿ ರಾನಿಯಾ ಈ ಸದಸ್ಯರಲ್ಲಿ ಸೇರಿದ್ದಾರೆ.

2009ರಲ್ಲಿ ನಡೆದ ಐದು-ದಿನಗಳ ವಾರ್ಷಿಕ ಸಭೆಯ ಅವಧಿಯಲ್ಲಿ, 91 ದೇಶಗಳಿಗೆ ಸೇರಿದ 2,500ಕ್ಕೂ ಹೆಚ್ಚಿನ ಸಹಭಾಗಿಗಳು ದಾವೋಸ್‌‌ನಲ್ಲಿ ಜಮಾವಣೆಗೊಂಡಿದ್ದರು. ಅವರ ಪೈಕಿ ಸುಮಾರು 75%ನಷ್ಟು (1,170) ಮಂದಿ ವ್ಯವಹಾರ ವಲಯದ ನಾಯಕರಾಗಿದ್ದು, ವಿಶ್ವದ ಅಗ್ರಗಣ್ಯ ಕಂಪನಿಗಳ ಪೈಕಿ ಸಂಘಟನೆಯಲ್ಲಿ ಸದಸ್ಯತ್ವ ಪಡೆದಿದ್ದ 1,000 ಕಂಪನಿಗಳಿಗೆ ಸೇರಿದ್ದ ಸದಸ್ಯರ ವಲಯದಿಂದ ಅವರು ಪ್ರಧಾನವಾಗಿ ಬಂದವರಾಗಿದ್ದರು. ಇವರೆಲ್ಲರ ಜೊತೆಗೆ, ಸಾರ್ವಜನಿಕ ವಲಯದಲ್ಲಿ ಪ್ರಸಿದ್ಧರಾಗಿದ್ದ 219 ವ್ಯಕ್ತಿಗಳೂ ಸಹ ಸಹಭಾಗಿಗಳಲ್ಲಿ ಸೇರಿದ್ದರು; ಸಂಸ್ಥಾನ ಅಥವಾ ಸರ್ಕಾರದ 40 ಮುಖ್ಯಸ್ಥರು, 64 ಸಂಪುಟ ಸಚಿವರು, ಅಂತರರಾಷ್ಟ್ರೀಯ ಸಂಘಟನೆಗಳ 30 ಮುಖ್ಯಸ್ಥರು ಅಥವಾ ಹಿರಿಯ ಅಧಿಕಾರಿಗಳು ಹಾಗೂ 10 ರಾಯಭಾರಿಗಳೂ ಈ ಸಹಭಾಗಿಗಳಲ್ಲಿ ಸೇರಿದ್ದರು. 432ಕ್ಕೂ ಹೆಚ್ಚಿನ ಸಹಭಾಗಿಗಳು ನಾಗರಿಕ ಸಮಾಜದಿಂದ ಬಂದವರಾಗಿದ್ದರು; ಸರ್ಕಾರೇತರ ಸಂಘಟನೆಗಳಿಗೆ ಸೇರಿದ 32 ಮುಖ್ಯಸ್ಥರು ಅಥವಾ ಪ್ರತಿನಿಧಿಗಳು, ಮಾಧ್ಯಮ-ವಲಯದ 225 ನಾಯಕರು, ಶೈಕ್ಷಣಿಕ ಸಂಸ್ಥೆಗಳು ಮತ್ತು ಚಿಂತಕರ ಚಾವಡಿಗಳಿಗೆ ಸೇರಿದ್ದ 149 ನಾಯಕರು, ವಿಭಿನ್ನ ಧಾರ್ಮಿಕ ನಂಬಿಕೆಗಳಿಗೆ ಸೇರಿದ್ದ 15 ಧಾರ್ಮಿಕ ನಾಯಕರು ಹಾಗೂ 11 ಒಕ್ಕೂಟ ನಾಯಕರು ಈ ಸಹಭಾಗಿಗಳಲ್ಲಿ ಸೇರಿದ್ದರು.[೧೦]

ಸದಸ್ಯತ್ವ

WEF ಸಂಘಟನೆಗೆ ಅದರ 1000 ಸದಸ್ಯ ಕಂಪನಿಗಳು ಧನಸಹಾಯ ಮಾಡಿದ್ದವು. ಅವುಗಳಲ್ಲಿ ಒಂದಾಗಿದ್ದ ಜಾಗತಿಕ ಉದ್ಯಮವೊಂದು ವಿಶಿಷ್ಟ ಕಂಪನಿ ಎನಿಸಿಕೊಂಡಿದ್ದು, ಐದು ಶತಕೋಟಿ ಡಾಲರುಗಳಿಗೂ ಹೆಚ್ಚಿನ ವಹಿವಾಟನ್ನು ಅದು ಹೊಂದಿತ್ತು; ಆದರೂ ಸಹ, ಇಂಥ ಸದಸ್ಯ ಕಂಪನಿಯು ತಾನು ಮಾಡುತ್ತಿರುವ ಕೈಗಾರಿಕೆ ಮತ್ತು ಹಾಗೂ ನೆಲೆಗೊಂಡಿರುವ ಪ್ರದೇಶದ ಅನುಸಾರ ಬದಲಾಗುತ್ತ ಹೋಗುತ್ತದೆ ಎಂಬುದು ಗಮನಾರ್ಹ. ಇದರ ಜೊತೆಗೆ, ಈ ಉದ್ಯಮಗಳು ತಮ್ಮ ಕೈಗಾರಿಕಾ ವಲಯದಲ್ಲಿನ ಮತ್ತು/ಅಥವಾ ದೇಶದ ವ್ಯಾಪ್ತಿಯೊಳಗಿನ ಅಗ್ರಗಣ್ಯ ಕಂಪನಿಗಳ ಪೈಕಿ ಸ್ಥಾನವನ್ನು ಪಡೆದಿರುತ್ತವೆ ಮತ್ತು ತಮ್ಮ ಕೈಗಾರಿಕೆ ಮತ್ತು/ಅಥವಾ ಪ್ರದೇಶದ ಭವಿಷ್ಯಕ್ಕೆ ಆಕಾರನೀಡುವಲ್ಲಿ ಒಂದು ಅಗ್ರಗಣ್ಯ ಪಾತ್ರವನ್ನು ವಹಿಸುತ್ತವೆ. 2005ರ ವೇಳೆಗೆ ಇದ್ದಂತೆ, ಪ್ರತಿ ಸದಸ್ಯ ಕಂಪನಿಯೂ CHF 42,500ನಷ್ಟಿರುವ ವಾರ್ಷಿಕ ಸದಸ್ಯತ್ವದ ಒಂದು ಮೂಲಶುಲ್ಕವನ್ನು ಹಾಗೂ CHF 18,000ನಷ್ಟಿರುವ ವಾರ್ಷಿಕ ಸಭೆಯ ಶುಲ್ಕವನ್ನು ಪಾವತಿಸುತ್ತದೆ; ದಾವೋಸ್‌ನಲ್ಲಿ ನಡೆಯುವ ವಾರ್ಷಿಕ ಸಭೆಯಲ್ಲಿ ಸದರಿ ಸದಸ್ಯ ಕಂಪನಿಯ CEOನ ಪಾಲ್ಗೊಳ್ಳುವಿಕೆಯನ್ನು ಈ ಶುಲ್ಕವು ಒಳಗೊಂಡಿರುತ್ತದೆ. ಕೈಗಾರಿಕಾ ಪಾಲುದಾರರು ಮತ್ತು ಕಾರ್ಯತಂತ್ರದ ಪಾಲುದಾರರು ಕ್ರಮವಾಗಿ CHF 250,000 ಮತ್ತು CHF 500,000ನಷ್ಟು ಶುಲ್ಕವನ್ನು ಪಾವತಿಸುತ್ತಾರೆ; ವೇದಿಕೆಯ ಉಪಕ್ರಮಗಳಲ್ಲಿ ಒಂದು ಮಹತ್ತರವಾದ ಪಾತ್ರವನ್ನು ವಹಿಸಲು ಇದು ಅವರಿಗೆ ಅವಕಾಶ ನೀಡುತ್ತದೆ.[೧೧][೧೨]

ಇದರ ಜೊತೆಗೆ, ಈ ಉದ್ಯಮಗಳು ತಮ್ಮ ಕೈಗಾರಿಕಾ ವಲಯ ಮತ್ತು/ಅಥವಾ ದೇಶದ ವ್ಯಾಪ್ತಿಯೊಳಗಿನ ಅಗ್ರಗಣ್ಯ ಕಂಪನಿಗಳ ಪೈಕಿ ಸ್ಥಾನವನ್ನು ಪಡೆಯುತ್ತವೆ (ದಶಲಕ್ಷಗಟ್ಟಲೆ US ಡಾಲರುಗಳಲ್ಲಿರುವ ವಹಿವಾಟನ್ನು ಇದು ಸಾಮಾನ್ಯವಾಗಿ ಆಧರಿಸಿರುತ್ತದೆ; ಹಣಕಾಸಿನ ಸಂಸ್ಥೆಗಳಿಗೆ ಸಂಬಂಧಿಸಿ ಹೇಳುವುದಾದರೆ, ಸ್ವತ್ತುಗಳ ಮೇಲೆ ಮಾನದಂಡಗಳು ಆಧರಿಸಿರುತ್ತವೆ) ಮತ್ತು ವೇದಿಕೆಯ ಆಯ್ಕೆ ಸಮಿತಿಯಿಂದ ತೀರ್ಮಾನಿಸಲ್ಪಟ್ಟಂತೆ, ತಮ್ಮ ಕೈಗಾರಿಕೆ ಮತ್ತು/ಅಥವಾ ಪ್ರದೇಶದ ಭವಿಷ್ಯಕ್ಕೆ ಆಕಾರನೀಡುವಲ್ಲಿ ಒಂದು ಅಗ್ರಗಣ್ಯ ಪಾತ್ರವನ್ನು ಅವು ವಹಿಸುತ್ತವೆ.

ಒಂದು ವ್ಯಾಪಕ ಶ್ರೇಣಿಯಲ್ಲಿರುವ ವ್ಯವಹಾರ ವಲಯಗಳಿಂದ ಕೈಗಾರಿಕಾ ಪಾಲುದಾರರು ಬರುತ್ತಾರೆ. ನಿರ್ಮಾಣ, ವಾಯುಯಾನ, ತಂತ್ರಜ್ಞಾನ, ಪ್ರವಾಸೋದ್ಯಮ, ಆಹಾರ ಮತ್ತು ಪಾನೀಯ, ಎಂಜಿನಿಯರಿಂಗ್‌, ಮತ್ತು ಹಣಕಾಸಿನ ಸೇವೆಗಳು ಈ ವಲಯಗಳಲ್ಲಿ ಸೇರಿರುತ್ತವೆ. ತಮ್ಮ ಉದ್ದೇಶಿತ ಕೈಗಾರಿಕಾ ವಲಯಕ್ಕೆ ಬಹುಪಾಲು ತೊಂದರೆಯುಂಟುಮಾಡುವ ಜಾಗತಿಕ ಸಮಸ್ಯೆಗಳ ಕುರಿತಾಗಿ ಈ ಕಂಪನಿಗಳು ಜಾಗರೂಕವಾಗಿರುತ್ತವೆ.

ದಾವೋಸ್‌ನಲ್ಲಿನ ವಾರ್ಷಿಕ ಸಭೆ

ಯುನೈಟೆಡ್‌ ಕಿಂಗಡಂನ ಅಂದಿನ ಪ್ರಧಾನಮಂತ್ರಿ ಗೋರ್ಡಾನ್‌ ಬ್ರೌನ್‌, ಮತ್ತು ಜೋರ್ಡಾನ್‌ನ ರಾಣಿ ರಾನಿಯಾ

2007ರ ಜನವರಿ 25ರಂದು ಸ್ವಿಜರ್‌ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ 2007ರ ವಾರ್ಷಿಕ ಸಭೆಯಲ್ಲಿ, 'ರೂಲ್ಸ್‌ ಫಾರ್‌ ಎ ಗ್ಲೋಬಲ್‌ ನೈಬರ್‌ಹುಡ್‌ ಇನ್‌ ಎ ಮಲ್ಟಿಕಲ್ಚರಲ್‌ ವರ್ಲ್ಡ್‌' ಎಂಬ ಶೀರ್ಷಿಕೆಯ ಕಾರ್ಯಕ್ಷೇತ್ರದ ಅಧಿವೇಶನದ ಸಂದರ್ಭದಲ್ಲಿ ಸೆರೆಹಿಡಿಯಲಾದ, ಇರಾನ್‌ ಅಧ್ಯಕ್ಷ ಮೊಹಮ್ಮದ್‌ ಖಟಾಮಿಯ (1997-2005) ಚಿತ್ರ.

ದಾವೋಸ್‌ನ[೧೩] ಸ್ವಿಸ್‌ ಆಲ್ಪೈನ್‌‌ ವಿಹಾರಧಾಮದಲ್ಲಿ ಪ್ರತಿ ವರ್ಷದ ಜನವರಿ ತಿಂಗಳ ಅಂತ್ಯದಲ್ಲಿ ಆಯೋಜಿಸಲ್ಪಡುವ, ಆಹ್ವಾನವಿದ್ದವರಿಗೆ-ಮಾತ್ರವೇ ಪ್ರವೇಶವಿರುವ ವಾರ್ಷಿಕ ಸಭೆಯು WEFನ ಪ್ರಧಾನ ಕಾರ್ಯಕ್ರಮವಾಗಿದೆ. ತನ್ನ 1000 ಸದಸ್ಯ ಕಂಪನಿಗಳಿಗೆ ಸೇರಿದ CEOಗಳನ್ನು ಮಾತ್ರವೇ ಅಲ್ಲದೇ, ಆಯ್ದ ರಾಜಕಾರಣಿಗಳನ್ನು, ವಿದ್ವನ್ಮಂಡಲಗಳು, NGOಗಳು, ಧಾರ್ಮಿಕ ನಾಯಕರು ಮತ್ತು ಮಾಧ್ಯಮಗಳಿಗೆ ಸೇರಿದ ಪ್ರತಿನಿಧಿಗಳನ್ನು ಒಟ್ಟಾಗಿ ಸೇರಿಸುವ ಕೆಲಸವನ್ನು ಈ ಕಾರ್ಯಕ್ರಮವು ಮಾಡುತ್ತದೆ.[೧೪] ಐದು-ದಿನದ ಕಾರ್ಯಕ್ರಮಕ್ಕಾಗಿ ಸುಮಾರು 2200 ಸಹಭಾಗಿಗಳು ಜಮಾವಣೆಯಾಗುತ್ತಾರೆ ಮತ್ತು ಅಧಿಕೃತ ಕಾರ್ಯಸೂಚಿಯಲ್ಲಿರುವ ಸುಮಾರು 220 ವಿಚಾರ ಸಂಕಿರಣಗಳಿಗೆ ಹಾಜರಾಗುತ್ತಾರೆ. ಜಾಗತಿಕ ಕಾಳಜಿಯ ಪ್ರಮುಖ ಸಮಸ್ಯೆಗಳು (ಅಂತರರಾಷ್ಟ್ರೀಯ ಘರ್ಷಣೆಗಳು, ಬಡತನ ಮತ್ತು ಪರಿಸರೀಯ ಸಮಸ್ಯೆಗಳಂಥವು) ಮತ್ತು ಸಂಭವನೀಯ ಪರಿಹಾರೋಪಾಯಗಳ ಸುತ್ತಲೂ ಚರ್ಚೆಗಳು ಗಮನಹರಿಸುತ್ತವೆ.[೧] ಒಟ್ಟಾರೆಯಾಗಿ ಹೇಳುವುದಾದರೆ, ಆನ್‌ಲೈನ್‌‌, ಮುದ್ರಣ ಮಾಧ್ಯಮ, ರೇಡಿಯೋ ಮತ್ತು TV ಮಾಧ್ಯಮಗಳಿಗೆ ಸೇರಿದ ಸುಮಾರು 500 ಪತ್ರಕರ್ತರು ಇಲ್ಲಿ ಪಾಲ್ಗೊಳ್ಳುತ್ತಾರೆ ಹಾಗೂ ಅಧಿಕೃತ ಕಾರ್ಯಸೂಚಿಯಲ್ಲಿರುವ ಎಲ್ಲಾ ವಿಚಾರ ಸಂಕಿರಣಗಳಿಗೆ ಅವರಿಗೆ ಪ್ರವೇಶಾವಕಾಶವನ್ನು ಒದಗಿಸಲಾಗುತ್ತದೆ; ಅಧಿಕೃತ ಕಾರ್ಯಸೂಚಿಯ ಪೈಕಿಯ ಕೆಲವೊಂದನ್ನು ಅಂತರ್ಜಾಲದಲ್ಲಿಯೂ ಪ್ರಸಾರ ಮಾಡಲಾಗುತ್ತದೆ.[೧೫]

ದಾವೋಸ್‌ನಲ್ಲಿ ನಡೆಯುವ ಎಲ್ಲಾ ಸರ್ವಸದಸ್ಯರ ಚರ್ಚೆಗಳು ಯುಟ್ಯೂಬ್‌‌‌ನಲ್ಲೂ[೧೬] ಲಭ್ಯವಿರುತ್ತವೆ; ಸಂಬಂಧಿತ ಚಿತ್ರಗಳು ಫ್ಲಿಕರ್‌‌[೧೭] ತಾಣದಲ್ಲಿ ಉಚಿತವಾಗಿ ಲಭ್ಯವಿದ್ದರೆ, ಪ್ರಮುಖ ಉಲ್ಲೇಖಗಳು ಟ್ವಿಟ್ಟರ್‌‌ ತಾಣದಲ್ಲಿ ಲಭ್ಯವಿರುತ್ತವೆ.[೧೮] 2007ರಲ್ಲಿ,

ಮೈಸ್ಪೇಸ್‌‌[೧೯] ಮತ್ತು ಫೇಸ್‌ಬುಕ್‌‌ನಂಥ ಸಾಮಾಜಿಕ ಮಾಧ್ಯಮಗಳ ವೇದಿಕೆಗಳಲ್ಲಿ WEF ಪುಟಗಳನ್ನು ತೆರೆಯಿತು.[೨೦] 2009ರ ವಾರ್ಷಿಕ ಸಭೆಯಲ್ಲಿ, ಯುಟ್ಯೂಬ್‌ನಲ್ಲಿನ [೨೧][೨೨] ದಾವೋಸ್‌ ಚರ್ಚೆಗಳಲ್ಲಿ ಭಾಗವಹಿಸಲು ವೇದಿಕೆಯು ಜನಸಾಮಾನ್ಯರನ್ನು ಆಹ್ವಾನಿಸಿತು. ಇದರಿಂದಾಗಿ ಓರ್ವ ಬಳಕೆದಾರನಿಗೆ ವಾರ್ಷಿಕ ಸಭೆಯಲ್ಲಿ ಖುದ್ದಾಗಿ ಭಾಗವಹಿಸಲು ಅವಕಾಶ ಕಲ್ಪಿಸಿದಂತಾಯಿತು. 2008ರಲ್ಲಿ, ಯೂಟ್ಯೂಬ್‌ನಲ್ಲಿ[೨೩] ಆಯೋಜಿಸಲಾದ ದಾವೋಸ್‌ ಪ್ರಶ್ನೆಯ ವ್ಯವಸ್ಥೆಯು, ದಾವೋಸ್‌ನಲ್ಲಿ ಜಮಾವಣೆಗೊಂಡ ವಿಶ್ವ ನಾಯಕರೊಂದಿಗೆ ಯುಟ್ಯೂಬ್‌ ಬಳಕೆದಾರರು ಪರಸ್ಪರ ಸಂವಹಿಸುವುದಕ್ಕೆ ಅವಕಾಶ ನೀಡಿತು; ಕಾಂಗ್ರೆಸ್‌ ಸೆಂಟರ್‌ನಲ್ಲಿನ ಯುಟ್ಯೂಬ್‌ ವಿಡಿಯೋ ಕೇಂದ್ರವೊಂದರಿಂದ ಉತ್ತರಿಸಲು ಸದರಿ ವಿಶ್ವ ನಾಯಕರಿಗೆ ಉತ್ತೇಜನ ದೊರಕಿದಂತಾಯಿತು.[೨೪] 2008ರಲ್ಲಿ, ಕ್ವಿಕ್‌[೨೫] ಮತ್ತು ಮೊಗಲಸ್‌[೨೬] ಎಂಬ ಮಾಧ್ಯಮಗಳಲ್ಲಿ ಪತ್ರಿಕಾಗೋಷ್ಠಿಗಳು ನೇರಪ್ರಸಾರವಾದವು ಹಾಗೂ ಭಾಷಣಕಾರರಿಗೆ ಯಾರುಬೇಕಾದರೂ ಪ್ರಶ್ನೆಗಳನ್ನು ಕೇಳಲು ಈ ವ್ಯವಸ್ಥೆಯು ಅವಕಾಶ ಕಲ್ಪಿಸಿಕೊಟ್ಟಿತು. 2006 ಮತ್ತು 2007ರಲ್ಲಿ, ಸೆಕೆಂಡ್‌ ಲೈಫ್‌‌ ತಾಣದಲ್ಲಿನ ರಾಯಿಟರ್ಸ್‌‌‌‌‌ನ ಶ್ರೋತೃವಿಭಾಗದಲ್ಲಿ ಆಯ್ದ ಸಹಭಾಗಿಗಳನ್ನು ಸಂದರ್ಶಿಸಲಾಯಿತು, ಮತ್ತು ಮುಕ್ತಾಯದ ವಿಚಾರ ಸಂಕಿರಣವನ್ನು ಬಿತ್ತರಿಸಲಾಯಿತು.[೨೭]

ಸಹಭಾಗಿಗಳು

2009ರಲ್ಲಿನ ವಿಶ್ವ ಆರ್ಥಿಕ ವೇದಿಕೆಯಲ್ಲಿ ಅಧ್ಯಕ್ಷ ಗ್ಲೋರಿಯಾ ಮ್ಯಾಕಪಾಗಲ್‌-ಅರೊಯೊ

2008ರಲ್ಲಿ, ಸಾರ್ವಜನಿಕ ವಲಯದಲ್ಲಿ ಪ್ರಸಿದ್ಧರಾಗಿರುವ ಸುಮಾರು 250 ವ್ಯಕ್ತಿಗಳು (ಸಂಸ್ಥಾನ ಅಥವಾ ಸರ್ಕಾರದ ಮುಖ್ಯಸ್ಥರು, ಸಂಪುಟ ಸಚಿವರುರಾಯಭಾರಿಗಳು, ಅಂತರರಾಷ್ಟ್ರೀಯ ಸಂಘಟನೆಯ ಮುಖ್ಯಸ್ಥರು ಅಥವಾ ಹಿರಿಯ ಅಧಿಕಾರಿಗಳು) ವಾರ್ಷಿಕ ಸಭೆಯಲ್ಲಿ ಭಾಗವಹಿಸಿದರು. ಅವರುಗಳೆಂದರೆ: ಅಬ್ದೌಲಯೆ ವಾಡೆ, ಅಬ್ದುಲ್ಲಾಹ್‌ ಅಹ್ಮದ್‌ ಬದಾವಿ, ಆಲ್ವರೊ ಉರಿಬೆ ವೇಲೆಜ್‌, ಆಂಡರ್ಸ್‌‌ ಫೋಗ್‌ ರಾಸ್‌ಮುಸ್ಸೆನ್‌, ಬಾನ್‌ ಕಿ-ಮೂನ್‌, ಕಾಂಡೊಲೀಜಾ ರೈಸ್‌, ಫೆರೆಂಕ್‌ ಗ್ಯುರ್ಕ್‌ಸ್ಯಾನಿ, ಫ್ರಾಂಕೋಯಿಸ್‌ ಫಿಲ್ಲಾನ್‌, ಗ್ಲೋರಿಯಾ ಮ್ಯಾಕಪಾಗಲ್‌ ಅರೊಯೊ, ಗೋರ್ಡಾನ್‌ ಬ್ರೌನ್‌, ಹಮಿದ್‌ ಕರ್ಜಾಯಿ, ಇಲ್ಹಾಮ್‌ ಆಲಿಯೆವ್‌, ಜಾನ್‌ ಪೀಟರ್‌ ಬಾಲ್ಕೆನೆಂಡೆ, ಲೀ ಬೋಲಿಂಗರ್‌, ಲೀ ಹ್ಸಿಯೆನ್‌ ಲೂಂಗ್‌, ಪರ್ವೆಜ್‌ ಮುಷರಫ್‌, ಜೋರ್ಡಾನ್‌‌ನ ರಾಣಿ ರಾನಿಯಾ, ರುಥ್‌ ಸಿಮನ್ಸ್‌‌, ಸಲಾಮ್‌ ಫಯ್ಯಾದ್‌, ಸಾಲಿ ಬೆರಿಷಾ, ಸೆರ್ಝ್‌ ಸರ್ಗ್‌ಸ್ಯಾನ್‌, ಷಿಮೋನ್‌ ಪೆರೆಸ್‌, ಟುಕುಫು ಝುಬೆರಿ, ಉಮಾರು ಮೂಸಾ ಯರ್‌‌'ಅದುವಾ, ವಾಲ್ಡಾಸ್‌ ಅದಮ್‌ಕುಸ್‌, ಯಾಸುವೊ ಫುಕುಡಾ, ವಿಕ್ಟರ್‌‌ A. ಯಶ್‌ಚೆಂಕೊ ಮತ್ತು ಝೆಂಗ್‌ ಪೀಯಾನ್‌.[೨೮]

‌‌ಅಲ್‌ ಗೋರ್, ಬಿಲ್‌ ಕ್ಲಿಂಟನ್‌ಬಿಲ್‌ ಗೇಟ್ಸ್‌, ಮೈಕೇಲ್‌ ವೋಲ್ಫ್‌, ಬೊನೊ, ಪಾಲೋ ಕೊಯೆಲ್ಹೊ ಮತ್ತು ಟೋನಿ ಬ್ಲೇರ್‌‌ ಇವರೇ ಮೊದಲಾದವರೂ ಸಹ ದಾವೋಸ್‌ ವಾರ್ಷಿಕ ಸಭೆಯ ನಿಯತವಾದ ಹಾಜರಿದಾರರಾಗಿದ್ದಾರೆ. ಹಿಂದಿನ ಹಾಜರಿದಾರರಲ್ಲಿ ಇವರೆಲ್ಲ ಸೇರಿದ್ದಾರೆ: ಏಂಜೆಲಾ ಮೆರ್ಕೆಲ್‌, ಡ್ಮಿಟ್ರಿ ಮೆಡ್‌ವೆಡೆವ್‌, ಹೆನ್ರಿ ಕಿಸಿಂಜರ್‌‌, ನೆಲ್ಸನ್‌‌ ಮಂಡೇಲಾ, ರೇಮಂಡ್‌ ಬ್ಯಾರೆ, ಜೂಲಿಯನ್‌ ಲಾಯ್ಡ್‌‌ ವೆಬ್ಬರ್‌‌ ಮತ್ತು ಯಾಸರ್‌‌ ಅರಾಫತ್‌‌.

ಅಮೆರಿಕಾದ ಸ್ಯಾಮ್ಯುಯೆಲ್‌ ಹಂಟಿಂಗ್ಟನ್‌ ಎಂಬ ಓರ್ವ ವಿದ್ವಾಂಸ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳುವ ಸಹಭಾಗಿಗಳನ್ನು "ದಾವೋಸ್‌ ಮ್ಯಾನ್‌" ಎಂಬುದಾಗಿ ಸಾಮೂಹಿಕವಾಗಿ ವರ್ಣಿಸಿದ; ಸಂಪೂರ್ಣವಾಗಿ ಅಂತರರಾಷ್ಟ್ರೀಯರೆಂಬುದಾಗಿ ತಮ್ಮನ್ನು ತಾವು ಕಂಡುಕೊಳ್ಳುವ ಸದಸ್ಯರನ್ನು ಹೊಂದಿರುವ, ಜಾಗತಿಕ ಮಟ್ಟದ ಒಂದು ಉತ್ಕೃಷ್ಟ ಸಮೂಹವನ್ನು ಉಲ್ಲೇಖಿಸಲೆಂದು ಅವನು ಈ ವಿವರಣೆಯನ್ನು ನೀಡಿದ.[೨೯][೩೦]

ಹೊಸ ಚಾಂಪಿಯನ್ನರ ವಾರ್ಷಿಕ ಸಭೆ

2007ರಲ್ಲಿ, ಹೊಸ ಚಾಂಪಿಯನ್ನರ ವಾರ್ಷಿಕ ಸಭೆಯನ್ನು (ಇದಕ್ಕೆ ಬೇಸಿಗೆಯ ದಾವೋಸ್‌ ಎಂದೂ ಕರೆಯಲಾಗುತ್ತದೆ) WEF ಹುಟ್ಟುಹಾಕಿತು. ಚೀನಾದಲ್ಲಿ ವಾರ್ಷಿಕವಾಗಿ ಆಯೋಜಿಸಲ್ಪಡುವ ಈ ಸಭೆಯು ಡೇಲಿಯನ್‌ ಮತ್ತು ಟಿಯಾಂಜಿನ್‌ ನಡುವಣ ಪರ್ಯಾಯವಾಗಿ ಬದಲಾಗುತ್ತಿರುತ್ತದೆ. ಜಾಗತಿಕ ಬೆಳವಣಿಗೆಯ ಕಂಪನಿಗಳು ಎಂಬುದಾಗಿ ವೇದಿಕೆಯಿಂದ ಕರೆಯಲ್ಪಟ್ಟಿರುವ ಕಂಪನಿಗಳ 1,500 ಪ್ರಭಾವಿ ಹೂಡಿಕೆದಾರರನ್ನು ಈ ಸಭೆಯು ಒಟ್ಟಾಗಿ ಸೇರಿಸುತ್ತದೆ. ಪ್ರಧಾನವಾಗಿ ಚೀನಾಭಾರತರಷ್ಯಾಮೆಕ್ಸಿಕೊ, ಮತ್ತು ಬ್ರೆಜಿಲ್‌‌‌ನಂಥ ಕ್ಷಿಪ್ರವಾಗಿ ಬೆಳೆಯುತ್ತಿರುವ, ಅಭಿವೃದ್ಧಿಶೀಲ ದೇಶಗಳಿಗೆ ಈ ಪ್ರಭಾವಿ ಹೂಡಿಕೆದಾರರು ಸೇರಿದ್ದು, ಅಭಿವೃದ್ಧಿಹೊಂದಿದ ದೇಶಗಳಿಗೆ ಸೇರಿದ ಕ್ಷಿಪ್ರ ಬೆಳವಣಿಗೆಯ ಹೂಡಿಕೆದಾರರೂ ಇವರೊಂದಿಗೆ ಸೇರಿಕೊಳ್ಳುತ್ತಾರೆ ಎಂಬುದು ಗಮನಾರ್ಹ ಅಂಶ. ಮುಂದಿನ ಪೀಳಿಗೆಯ ಜಾಗತಿಕ ನಾಯಕರು, ವೇಗವಾಗಿ-ಬೆಳೆಯುತ್ತಿರುವ ಪ್ರದೇಶಗಳು, ಸ್ಪರ್ಧಾತ್ಮಕ ನಗರಗಳು ಹಾಗೂ ಭೂಮಂಡಲದೆಲ್ಲೆಡೆ ವ್ಯಾಪಿಸಿರುವ ತಂತ್ರಜ್ಞಾನದ ಪಥನಿರ್ಮಾಪಕರನ್ನೂ ಸಹ ಈ ಸಭೆಯು ತನ್ನಲ್ಲಿ ತೊಡಗಿಸಿಕೊಳ್ಳುತ್ತದೆ.[೩೧][೩೨] ಪ್ರತಿ ವಾರ್ಷಿಕ ಸಭೆಯಲ್ಲೂ ಮುಖ್ಯಸ್ಥನಾದ ವೆನ್‌ ಜಿಯಾಬಾವೊ ಸರ್ವಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡುತ್ತಾನೆ.

ಪ್ರಾದೇಶಿಕ ಸಭೆಗಳು

ಪ್ರತಿ ವರ್ಷವೂ ಹತ್ತು ಪ್ರಾದೇಶಿಕ ಸಭೆಗಳು ನಡೆಯುತ್ತವೆ. ಸಾಂಸ್ಥಿಕ ವ್ಯವಹಾರದ ನಾಯಕರು, ಸ್ಥಳೀಯ ಸರ್ಕಾರದ ನಾಯಕರು ಮತ್ತು NGOಗಳ ನಡುವೆ ನಿಕಟ ಸಂಪರ್ಕವು ಏರ್ಪಡುವಲ್ಲಿ ಇವು ನೆರವಾಗುತ್ತವೆ. ಆಫ್ರಿಕಾಪೂರ್ವ ಏಷ್ಯಾಲ್ಯಾಟಿನ್‌ ಅಮೆರಿಕಾ ಮತ್ತು ಮಧ್ಯ ಪ್ರಾಚ್ಯದೇಶಗಳಲ್ಲಿ ಸಭೆಗಳು ಆಯೋಜಿಸಲ್ಪಟ್ಟಿವೆ. ಅತಿಥೇಯ ದೇಶಗಳ ಸಂಯೋಜನೆಯು ವರ್ಷದಿಂದ ವರ್ಷಕ್ಕೆ ಬದಲಾಗುತ್ತದೆಯಾದರೂ, ಚೀನಾ ಮತ್ತು ಭಾರತ ದೇಶಗಳು ಹಿಂದಿನ ದಶಕದಲ್ಲಿ ಸಭೆಗಳನ್ನು ಸುಸಂಗತವಾಗಿ ಆಯೋಜಿಸಿವೆ.[೩೩]

ಯುವ ಜಾಗತಿಕ ನಾಯಕರು

ನಾಳಿನ ಜಾಗತಿಕ ನಾಯಕರಿಗೆ ಉತ್ತರಾಧಿಕಾರಿಗಳು ಎನಿಸಿಕೊಂಡಿರುವ ಯುವ ಜಾಗತಿಕ ನಾಯಕರ ಸಮುದಾಯವನ್ನು 2005ರಲ್ಲಿ WEF ಸ್ಥಾಪಿಸಿತು. ವಿಶ್ವದೆಲ್ಲೆಡೆ ಇರುವ 40 ವರ್ಷ ವಯೋಮಾನದ ನಾಯಕರು ಹಾಗೂ ಅಸಂಖ್ಯಾತ ಕಾರ್ಯವಿಧಾನಗಳು ಮತ್ತು ವಲಯಗಳಿಗೆ ಸೇರಿದ ನಾಯಕರನ್ನು ಇದು ಒಳಗೊಂಡಿದೆ. 2030ರಲ್ಲಿ ವಿಶ್ವವು ಹೇಗಿರಬಹುದು ಎಂಬುದನ್ನು ಕಂಡುಕೊಳ್ಳುವುದರ ಕಲ್ಪನಾದೃಷ್ಟಿಗೆ ಸಂಬಂಧಿಸಿದ ಕ್ರಿಯಾಯೋಜನೆಯೊಂದರ ಸೃಷ್ಟಿಯಾದ 2030ರ ಉಪಕ್ರಮದಲ್ಲಿ ಸದರಿ ನಾಯಕರು ತೊಡಗಿಸಿಕೊಂಡಿದ್ದಾರೆ. ಯುವ ಜಾಗತಿಕ ನಾಯಕರ ಪೈಕಿ ಇವರೆಲ್ಲರೂ ಸೇರಿದ್ದಾರೆ[೩೪] ಷಾಯ್‌ ಅಗಾಸ್ಸಿ, ಅನೌಶೇಷ್‌ ಅನ್ಸಾರಿ, ಮಾರಿಯಾ ಕನ್ಸ್ಯೂಯೆಲೊ ಅರೌಜೊ, ಲೆರಾ ಔವೆರ್‌ಬಾಕ್‌, ಫತ್ಮಿರ್‌ ಬೆಸಿಮಿ, ಇಯಾನ್‌ ಬ್ರೆಮ್ಮರ್‌‌, ಸೆರ್ಜೆ ಬ್ರಿನ್‌, ಟೈಲರ್‌ ಬ್ರೂಲೆ, ಪ್ಯಾಟ್ರಿಕ್‌ ಚಪ್ಪಾಟ್ಟೆ, ಒಲಾಫರ್‌‌ ಎಲಿಯಾಸನ್‌, ರೋಜರ್‌‌ ಫೆಡೆರರ್‌‌, ಜೆನ್ಸ್‌ ಮಾರ್ಟಿನ್‌ ಸ್ಕಿಬ್‌ಸ್ಟೆಡ್‌, ರಾಹುಲ್‌ ಗಾಂಧಿ, ಕೆನ್ನೆತ್‌ ಗ್ರಿಫಿನ್‌, ಕೆಲ್ಲಿ ಚೆನ್‌, ಸ್ಕಾಟ್‌ J. ಫ್ರೀಡ್‌ಹೀಮ್‌, ನಾರ್ವೆಯ ಯುವರಾಜ ಹಾಕೋನ್‌, ಅಬ್ದುಲ್‌‌ಸಲಾಮ್‌ ಹಯ್‌ಕಾಲ್‌, ಸಿಲ್ವಾನ ಕೊಚ್‌-ಮೆಹ್ರಿನ್‌, ಇರ್ಷಾದ್‌ ಮಂಜಿ, ಬೆಲ್ಜಿಯಂನ ರಾಜಕುಮಾರಿ ಮಥಿಲ್ಡೆ, ಆದಿತ್ಯ ಮಿತ್ತಲ್‌, ಯುವಿನ್‌ ನಾಯ್ಡು, ಗೇವಿನ್‌ ನ್ಯೂಸಮ್‌, ಲ್ಯಾರಿ ಪೇಜ್‌, ಲೆವಿಸ್‌ ಗೋರ್ಡಾನ್‌ ಪ್ಯೂಗ್‌, ಫಿಲಿಪೈನ್ಸ್‌‌‌ನ ಸೆನೆಟ್‌ ಸದಸ್ಯ ಮಾರ್‌ ರೋಕ್ಸಾಸ್‌, ಕ್ರಿಸ್ಟೋಫರ್‌‌ ಸ್ಕ್ಲಾಫರ್‌‌, ಅನೂಷ್ಕಾ ಶಂಕರ್‌, ಪ್ರೇಮಲ್‌ ಷಾ, ಜೋಷ್‌ ಸ್ಪಿಯರ್‌, ಪೀಟರ್‌ ಥಿಯೆಲ್‌, ಜಿಮ್ಮಿ ವೇಲ್ಸ್‌, ಮತ್ತು ನಿಕ್ಲಾಸ್‌ ಜೆನ್‌ಸ್ಟ್ರೋಮ್‌. ವಾರ್ಷಿಕ ಆಧಾರದ ಮೇಲೆ ಹೊಸ ಸದಸ್ಯರನ್ನು ಆರಿಸಲಾಗುತ್ತದೆ ಮತ್ತು ಯುವ ಜಾಗತಿಕ ನಾಯಕರ ವೇದಿಕೆಯು 1111 ಸದಸ್ಯರನ್ನು ಹೊಂದಲಿದೆ.[೩೫][೩೬][೩೭]

ಸಾಮಾಜಿಕ ಉದ್ಯಮಶೀಲರು

ಷ್ವಾಬ್‌ ಫೌಂಡೇಷನ್‌ ಫಾರ್‌ ಸೋಷಿಯಲ್‌ ಎಂಟ್ರಪ್ರೆನರ್‌ಷಿಪ್‌[೩೮] ಸಂಸ್ಥೆಯೊಂದಿಗಿನ ನಿಕಟ ಸಹಯೋಗದಲ್ಲಿ, ವಿಶ್ವದ ಅಗ್ರಗಣ್ಯ ಸಾಮಾಜಿಕ ಉದ್ಯಮಶೀಲರು ಅಭಿವೃದ್ಧಿಪಡಿಸಿದ ಮಾದರಿಗಳನ್ನು WEF ಸಂಘಟನೆಯು 2000ನೇ ಇಸವಿಯಿಂದಲೂ ಪ್ರವರ್ತಿಸುತ್ತಾ ಬಂದಿದೆ. ಸಮಾಜಗಳನ್ನು ಮುಂದಕ್ಕೆ ತರುವಲ್ಲಿ ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತಾಗಿ ಗಮನ ಹರಿಸುವಲ್ಲಿ, ಸಾಮಾಜಿಕ ಉದ್ಯಮಶೀಲರ ಪಾತ್ರವು ಒಂದು ಪ್ರಮುಖ ಅಂಶವಾಗಿದೆ ಎಂಬುದನ್ನು WEF ಎತ್ತಿ ತೋರಿಸುತ್ತದೆ.[೩೯][೪೦] ವೇದಿಕೆಯ ಪ್ರಾದೇಶಿಕ ಸಭೆಗಳು ಮತ್ತು ವಾರ್ಷಿಕ ಸಭೆಗಳಲ್ಲಿ ಭಾಗವಹಿಸಲು ಆಯ್ದ ಸಾಮಾಜಿಕ ಉದ್ಯಮಶೀಲರಿಗೆ ಆಹ್ವಾನವು ದೊರೆಯುತ್ತದೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಅಲ್ಲಿ ಭೇಟಿಮಾಡುವ ಅವಕಾಶವು ಅವರಿಗೆ ಲಭ್ಯವಾಗುತ್ತದೆ. ಉದಾಹರಣೆಗೆ, 2003ರ ವಾರ್ಷಿಕ ಸಭೆಯಲ್ಲಿ ಜೆರೂ ಬಿಲಿಮೋರಿಯಾ ಎಂಬಾಕೆಗೆ ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ ಉಪ ಮಹಾ-ಕಾರ್ಯದರ್ಶಿಯಾದ ರಾಬರ್ಟೋ ಬ್ಲೋಸಿಸ್‌‌ ಎಂಬಾತನನ್ನು ಭೇಟಿಮಾಡುವ ಅವಕಾಶ ದೊರೆಯಿತು; ಈ ಮುಖಾಮುಖಿ ಭೇಟಿಯಿಂದಾಗಿ ಚೈಲ್ಡ್‌ ಹೆಲ್ಪ್‌ಲೈನ್‌ ಇಂಟರ್‌ನ್ಯಾಷನಲ್‌ ಎಂಬ ಆಕೆಯ ಸಂಘಟನೆಗೆ ಸಂಬಂಧಿಸಿದಂತೆ ಒಂದು ಪ್ರಮುಖ ಪಾಲುದಾರಿಕೆಯು ರೂಪುಗೊಳ್ಳಲು ಸಾಧ್ಯವಾಯಿತು.[೪೧]

ಸಂಶೋಧನಾ ವರದಿಗಳು

ಒಂದು ಚಿಂತಕರ ಚಾವಡಿಯಾಗಿಯೂ WEF ಸೇವೆ ಸಲ್ಲಿಸುತ್ತದೆ, ಹಾಗೂ ವೇದಿಕೆಯ ಸಮುದಾಯಗಳಿಗೆ ಕಾಳಜಿ ಮತ್ತು ಪ್ರಾಮುಖ್ಯತೆಯ ವಿಷಯಗಳಾಗಿ ಪರಿಣಮಿಸಿರುವ ಸಮಸ್ಯೆಗಳ ಕುರಿತಾಗಿ ಗಮನಹರಿಸುವ ಒಂದು ವ್ಯಾಪಕ ಶ್ರೇಣಿ ವರದಿಗಳನ್ನು ಅದು ಪ್ರಕಟಿಸುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಸ್ಪರ್ಧಾತ್ಮಕತೆ, ಜಾಗತಿಕ ಅಪಾಯಗಳು ಮತ್ತು ಭವಿಷ್ಯದ ಘಟನಾವಳಿಗಳ ಕುರಿತಾದ ಚಿಂತನೆಯಂಥ ಕ್ಷೇತ್ರಗಳಲ್ಲಿ ಪ್ರಸ್ತುತತೆಯ ವರದಿಗಳನ್ನು ರೂಪಿಸುವುದರ ಕುರಿತಾಗಿ ಕಾರ್ಯತಂತ್ರದ ಅಂತರ್ದೃಷ್ಟಿಯ ತಂಡಗಳು ಗಮನಹರಿಸುತ್ತವೆ.

ಸ್ಪರ್ಧಾತ್ಮಕತೆಯ ತಂಡ ವು ವಾರ್ಷಿಕ ಆರ್ಥಿಕ ವರದಿಗಳ ಒಂದು ಶ್ರೇಣಿಯನ್ನು ರೂಪಿಸುತ್ತದೆ (ಅವರಣಗಳಲ್ಲಿರುವುದು ಮೊದಲು ಪ್ರಕಟಿಸಲ್ಪಟ್ಟ ವರ್ಷ): ಜಾಗತಿಕ ಸ್ಪರ್ಧಾತ್ಮಕತೆಯ ವರದಿಯು (1979) ದೇಶಗಳು ಮತ್ತು ಆರ್ಥಿಕತೆಗಳ ಸ್ಪರ್ಧಾತ್ಮಕತೆಯನ್ನು ಅಳೆಯುತ್ತದೆ; ಜಾಗತಿಕ ಮಾಹಿತಿ ತಂತ್ರಜ್ಞಾನದ ವರದಿಯು (2001) ಅವುಗಳ IT ಸನ್ನದ್ಧತೆಯನ್ನು ಆಧರಿಸಿ ಅವುಗಳ ಸ್ಪರ್ಧಾತ್ಮಕತೆಯನ್ನು ಮೌಲ್ಯಮಾಪನ ಮಾಡುತ್ತದೆ; ಜಾಗತಿಕ ಲಿಂಗ ಅಂತರದ ವರದಿಯು (2005) ಪುರುಷರು ಮತ್ತು ಮಹಿಳೆಯರ ನಡುವಿನ ಅಸಮಾನತೆಯ ವಿಷಮಾವಸ್ಥೆಯ ಪ್ರದೇಶಗಳನ್ನು ಅವಲೋಕಿಸುತ್ತದೆ; ಜಾಗತಿಕ ಅಪಾಯಗಳ ವರದಿಯು (2006) ಪ್ರಮುಖವಾದ ಜಾಗತಿಕ ಅಪಾಯಗಳ ಕುರಿತು ಮೌಲ್ಯಮಾಪನ ಮಾಡುತ್ತದೆ; ಜಾಗತಿಕ ಪರ್ಯಟನೆ ಮತ್ತು ಪ್ರವಾಸೋದ್ಯಮದ ವರದಿಯು (2007) ಪರ್ಯಟನೆ ಮತ್ತು ಪ್ರವಾಸೋದ್ಯಮದ ಸ್ಪರ್ಧಾತ್ಮಕತೆಯನ್ನು ಅಳೆಯುತ್ತದೆ ಮತ್ತು ಜಾಗತಿಕ ವ್ಯಾಪಾರವನ್ನು ಅನುವುಗೊಳಿಸುವ ವರದಿಯು (2008) ರಾಷ್ಟ್ರಗಳ ನಡುವಿನ ವ್ಯಾಪಾರವನ್ನು ಸರಾಗಗೊಳಿಸುವ, ಬೃಹತ್‌‌ ಸಂಖ್ಯೆಯಲ್ಲಿರುವ ಕ್ರಮಗಳ ಒಂದು ದೇಶಾದ್ಯಂತದ ವಿಶ್ಲೇಷಣೆಯನ್ನು ಸಾದರಪಡಿಸುತ್ತದೆ.[೪೨]

ಜಾಗತಿಕ ವ್ಯಾಪ್ತಿಯನ್ನು ಹೊಂದಿವೆ ಎಂಬುದಾಗಿ ಪರಿಗಣಿಸಲ್ಪಟ್ಟಿರುವ, ವಿಭಿನ್ನ-ಕೈಗಾರಿಕಾ ಪ್ರಸ್ತುತತೆಯನ್ನು ಹೊಂದಿರುವ, ಅನಿಶ್ಚಿತವಾಗಿರುವ, 10 ಶತಕೋಟಿ US$ಗೂ ಹೆಚ್ಚಿನ ಪ್ರಮಾಣದ ಆರ್ಥಿಕ ಹಾನಿಯನ್ನು ಉಂಟುಮಾಡುವ ಸಾಮರ್ಥ್ಯ ಹೊಂದಿರುವ, ಮಾನವಕುಲಕ್ಕೆ ಬೃಹತ್ತಾದ ಸಂಕಟವನ್ನು ತಂದೊಡ್ಡಬಲ್ಲ ಸಾಮರ್ಥ್ಯ ಹೊಂದಿರುವ ಹಾಗೂ ತಗ್ಗಿಸುವಿಕೆಗೆ ಸಂಬಂಧಿಸಿದಂತೆ ಒಂದು ಬಹು-ಹೂಡಿಕೆದಾರ ವಿಧಾನವನ್ನು ಬಯಸುವ ಅಪಾಯಗಳನ್ನು ನಿರ್ಣಯಿಸುವ ವಾರ್ಷಿಕ ವರದಿಯೊಂದನ್ನು ಗ್ಲೋಬಲ್‌ ರಿಸ್ಕ್‌ ನೆಟ್‌ವರ್ಕ್‌ ರೂಪಿಸುತ್ತದೆ.[೪೩]

ಓದುಗರ ಊಹೆಗಳಿಗೆ ಸವಾಲೊಡ್ಡಲೆಂದು, ಆಧಾರವಾಗಿರುವ ನಿರ್ಣಾಯಕ ಅಂಶಗಳ ಕುರಿತಾಗಿ ಜಾಗೃತಿ ಮೂಡಿಸಲೆಂದು ಹಾಗೂ ಭವಿಷ್ಯದ ಕುರಿತಾದ ತಾಜಾ ಚಿಂತನೆಯನ್ನು ಉತ್ತೇಜಿಸಲೆಂದು ವಿನ್ಯಾಸಗೊಳಿಸಲಾದ, ಪ್ರಾದೇಶಿಕ, ಕೈಗಾರಿಕಾ-ಉದ್ದೇಶಿತ ಮತ್ತು ಸಮಸ್ಯೆ-ಉದ್ದೇಶಿತ ವರದಿಗಳ ಒಂದು ಶ್ರೇಣಿಯನ್ನು ಭವಿಷ್ಯದ ಚಿಂತನೆಗಳ ಯೋಜನಾತಂಡವು ಅಭಿವೃದ್ಧಿಪಡಿಸುತ್ತದೆ.[೪೪] 2008–2009ರ ಜಾಗತಿಕ ಹಣಕಾಸಿನ ಬಿಕ್ಕಟ್ಟಿನ ಸನಿಹದ- ಮತ್ತು ದೀರ್ಘಾವಧಿಯ ಸಂಭವನೀಯ ಪ್ರಭಾವಗಳ ಕುರಿತಾದ ಒಂದು ಪ್ರಮುಖ ಪ್ರಕಟಣೆಯಾದ ದಿ ಫ್ಯೂಚರ್‌ ಆಫ್‌ ದಿ ಗ್ಲೋಬಲ್‌ ಫೈನಾನ್ಷಿಯಲ್‌ ಸಿಸ್ಟಮ್‌: ಎ ನಿಯರ್‌-ಟರ್ಮ್‌ ಔಟ್‌ಲುಕ್‌ ಅಂಡ್‌ ಲಾಂಗ್‌-ಟರ್ಮ್‌ ಸಿನೆರಿಯೋಸ್‌ಹಾಗೂ ಪಿಂಚಣಿ ಮತ್ತು ಆರೋಗ್ಯ ರಕ್ಷಣೆಯ ಧನಸಹಾಯದ ಮೇಲೆ ಜನಸಂಖ್ಯಾಶಾಸ್ತ್ರದ ವರ್ಗಾವಣೆಗಳ ಪ್ರಭಾವದ ಕುರಿತಾದ ಭವಿಷ್ಯದ ಚಿಂತನೆಗಳನ್ನು ಒಳಗೊಂಡಿರುವ "ಫೈನಾನ್ಸಿಂಗ್‌ ಡೆಮೋಗ್ರಾಫಿಕ್‌ ಷಿಫ್ಟ್ಸ್‌: ಪೆನ್ಷನ್‌ ಅಂಡ್‌ ಹೆಲ್ತ್‌ಕೇರ್‌ ಸಿನೆರಿಯೋಸ್‌ ಟು 2030" ಎಂಬ ಪ್ರಕಟಣೆಯನ್ನು ಇತ್ತೀಚಿನ ವರದಿಗಳು ಒಳಗೊಂಡಿವೆ.

ಉಪಕ್ರಮಗಳು

ಜಾಗತಿಕ ಆರೋಗ್ಯದ ಉಪಕ್ರಮ (ಗ್ಲೋಬಲ್‌ ಹೆಲ್ತ್‌ ಇನಿಷಿಯೆಟಿವ್‌-GHI) ಎಂಬ ಪರಿಕಲ್ಪನೆಗೆ 2002ರಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಕೋಫಿ ಅನ್ನಾನ್‌ ಚಾಲನೆ ನೀಡಿದ. HIV/AIDS, TB, ಮಲೇರಿಯಾದಂಥ ಕಾಯಿಲೆಗಳು ಮತ್ತು ಆರೋಗ್ಯ ವ್ಯವಸ್ಥೆಗಳನ್ನು ನಿಭಾಯಿಸಲು ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳಲ್ಲಿ ವ್ಯವಹಾರದ-ಅಸ್ತಿತ್ವಗಳನ್ನು ತೊಡಗಿಸುವುದು GHIನ ನಿಶ್ಚಿತಗುರಿಯಾಗಿದೆ.

2008ರ ನವೆಂಬರ್‌‌ನಲ್ಲಿ ನವದೆಹಲಿಯಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ 'ಭಾರತದ ಆರ್ಥಿಕ ಶೃಂಗಸಭೆ'ಯಲ್ಲಿ ಹೆನ್ರಿ ಕಿಸಿಂಜರ್‌‌

2003ರಲ್ಲಿ ನಡೆದ ವಾರ್ಷಿಕ ಸಭೆಯ ಸಂದರ್ಭದಲ್ಲಿ ಪ್ರಾರಂಭಿಸಲ್ಪಟ್ಟ ಜಾಗತಿಕ ಶಿಕ್ಷಣದ ಉಪಕ್ರಮವು (ಗ್ಲೋಬಲ್‌ ಎಜುಕೇಷನ್‌ ಇನಿಷಿಯೆಟಿವ್‌-GEI) ಅಂತರರಾಷ್ಟ್ರೀಯ IT ಕಂಪನಿಗಳು ಮತ್ತು ಜೋರ್ಡಾನ್‌, ಈಜಿಪ್ಟ್‌ ಮತ್ತು ಭಾರತ ದೇಶಗಳ ಸರ್ಕಾರಗಳನ್ನು ಒಂದೆಡೆ ಸೇರಿಸಿದ್ದು, ಇದು ತರಗತಿಯ ಕೊಠಡಿಗಳಲ್ಲಿ ಹೊಸ PC ಯಂತ್ರಾಂಶವು ಬಳಕೆಗೆ ಬರಲು ಹಾಗೂ ಇ-ಕಲಿಕೆಯಲ್ಲಿ ಹೆಚ್ಚಿನ ಸ್ಥಳೀಯ ಶಿಕ್ಷಕರು ತರಬೇತಿ ಪಡೆಯುವಂತಾಗಲು ಕಾರಣವಾಗಿದೆ. ಮಕ್ಕಳ ಜೀವನಕ್ರಮಗಳ ಮೇಲೆ ಇದು ಒಂದು ನಿಜವಾದ ಪ್ರಭಾವವನ್ನು ಹೊಂದಿದೆ. ಆರೋಹಣೀಯ ಮತ್ತು ಊರ್ಜಿತವಾಗಬಲ್ಲ ಲಕ್ಷಣವನ್ನು ಹೊಂದಿರುವ GEI ಮಾದರಿಯು, ರ್ವಾಂಡಾ ಸೇರಿದಂತೆ ಇತರ ದೇಶಗಳಲ್ಲಿ ಒಂದು ಶೈಕ್ಷಣಿಕ ನೀಲನಕಾಶೆಯಾಗಿ ಬಳಸಲ್ಪಡುತ್ತಿದೆ.

ಹವಾಮಾನ ಬದಲಾವಣೆ ಮತ್ತು ನೀರಿಗೆ ಸಂಬಂಧಿಸಿದ ವಿಷಯಗಳನ್ನು ಪರಿಸರೀಯ ಉಪಕ್ರಮವು ಒಳಗೊಳ್ಳುತ್ತದೆ. 2005ರಲ್ಲಿ ಗ್ಲೆನೀಗಲ್ಸ್‌ನಲ್ಲಿ ನಡೆದ G8 ಶೃಂಗಸಭೆಯಲ್ಲಿ ಹವಾಮಾನ ಬದಲಾವಣೆಯ ಕುರಿತಾದ ಗ್ಲೆನೀಗಲ್ಸ್‌ ಮಾತುಕತೆಯ ಅಡಿಯಲ್ಲಿ, ವಿಶ್ವ ಆರ್ಥಿಕ ವೇದಿಕೆಯೊಂದಿಗೆ UK ಸರ್ಕಾರವು ಮಾತನಾಡುತ್ತಾ, ಹಸಿರುಮನೆ ಅನಿಲದ ಹೊರಸೂಸುವಿಕೆಗಳ ತಗ್ಗಿಸುವಿಕೆಗೆ ಸಂಬಂಧಿಸಿದಂತೆ ಶಿಫಾರಸುಗಳನ್ನು ಅಭಿವೃದ್ಧಿಪಡಿಸಲು ವ್ಯವಹಾರ ಸಮುದಾಯದೊಂದಿಗಿನ ಒಂದು ಮಾತುಕತೆಯನ್ನು ಸುಗಮಗೊಳಿಸುವಂತೆ ಕೇಳಿಕೊಂಡಿತು. CEOಗಳ ಒಂದು ಜಾಗತಿಕ ಸಮೂಹದಿಂದ ಅಂಗೀಕರಿಸಲ್ಪಟ್ಟ ಈ ಶಿಫಾರಸುಗಳನ್ನು, ಮುಂದೆ 2008ರ ಜುಲೈನಲ್ಲಿ ಟೋಕಿಯೋ/ಹೊಕಾಯ್ಡೊದಲ್ಲಿ ಆಯೋಜಿಸಲ್ಪಟ್ಟ G8 ಶೃಂಗಸಭೆಯ ನಾಯಕರ ಮುಂದೆ ಸಾದರಪಡಿಸಲಾಯಿತು.[೪೫][೪೬]

ದಕ್ಷಿಣ ಆಫ್ರಿಕಾ ಮತ್ತು ಭಾರತದಲ್ಲಿ ನೀರಿನ ನಿರ್ವಹಣೆಯ ಕುರಿತಾಗಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳನ್ನು ಅಭಿವೃದ್ಧಿಪಡಿಸಲೆಂದು, ನೀರಿಗೆ ಸಂಬಂಧಿಸಿದ ಉಪಕ್ರಮವು ವಿಭಿನ್ನ ಹೂಡಿಕೆದಾರರನ್ನು ಒಂದೆಡೆ ಸೇರಿಸುತ್ತದೆ. ಅಭಿವೃದ್ಧಿ ಮತ್ತು ಸಹಕಾರಕ್ಕಾಗಿ ಮೀಸಲಾದ ಸ್ವಿಸ್‌ ಸಂಸ್ಥೆಯಾದ ಆಲ್ಕಾನ್‌ ಇಂಕ್‌., USAID ಇಂಡಿಯಾ, UNDP ಇಂಡಿಯಾ, ಭಾರತೀಯ ಕೈಗಾರಿಕಾ ಒಕ್ಕೂಟ (ಕಾನ್ಫೆಡರೇಷನ್‌ ಆಫ್‌ ಇಂಡಿಯನ್‌ ಇಂಡಸ್ಟ್ರಿ-CII), ರಾಜಾಸ್ಥಾನದ ಸರ್ಕಾರ ಹಾಗೂ NEPAD ಬಿಸಿನೆಸ್‌ ಫೌಂಡೇಷನ್‌ ಇವೇ ಆ ಹೂಡಿಕೆದಾರ ಸಂಸ್ಥೆಗಳಾಗಿವೆ.

ಭ್ರಷ್ಟಾಚಾರದ ವಿರುದ್ಧ ಸೆಣಸುವ ಒಂದು ಪ್ರಯತ್ನವಾಗಿ ಪಾರ್ಟ್‌ನರಿಂಗ್‌ ಎಗೇನ್ಸ್ಟ್‌ ಕರಪ್ಷನ್‌ ಇನಿಷಿಯೆಟಿವ್‌ (PACI) ಎಂಬ ಉಪಕ್ರಮಕ್ಕೆ, 2004ರ ಜನವರಿಯಲ್ಲಿ ದಾವೋಸ್‌ನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಎಂಜಿನಿಯರಿಂಗ್‌ ಮತ್ತು ನಿರ್ಮಾಣ, ಶಕ್ತಿ ಮತ್ತು ಲೋಹಗಳು ಹಾಗೂ ಗಣಿಗಾರಿಕೆ ಉದ್ಯಮಗಳಿಗೆ ಸೇರಿದ CEOಗಳು ಚಾಲನೆ ನೀಡಿದರು. PACI ಎಂಬುದು ಪ್ರಾಯೋಗಿಕ ಅನುಭವ ಮತ್ತು ದ್ವಂದ್ವದ ಸನ್ನಿವೇಶಗಳ ಕುರಿತಾದ ಸಮಾನಸ್ಕಂದ ವಿಷಯಗಳ ವಿನಿಮಯಕ್ಕೆ ಸಂಬಂಧಿಸಿದ ಒಂದು ವೇದಿಕೆಯಾಗಿದೆ. ಸುಮಾರು 140 ಕಂಪನಿಗಳು ಇದಕ್ಕೆ ಸಹಿಹಾಕಿವೆ.[೪೭]

ಪ್ರಶಸ್ತಿಗಳು

ತಂತ್ರಜ್ಞಾನದ ಪಥನಿರ್ಮಾಪಕರ ಕಾರ್ಯಸೂಚಿ

ಹೊಸ ತಂತ್ರಜ್ಞಾನಗಳನ್ನು ವಿನ್ಯಾಸಗೊಳಿಸುತ್ತಿರುವ ಮತ್ತು ಅಭಿವೃದ್ಧಿಪಡಿಸುತ್ತಿರುವ ವಿಶ್ವದಾದ್ಯಂತದ ಕಂಪನಿಗಳನ್ನು, ತಂತ್ರಜ್ಞಾನದ ಪಥನಿರ್ಮಾಪಕರ ಕಾರ್ಯಸೂಚಿಯು ಗುರುತಿಸುತ್ತದೆ. ಪ್ರತಿ ವರ್ಷವೂ 30-50 ಕಂಪನಿಗಳಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ. 2008ರ ವೇಳೆಗೆ ಇದ್ದಂತೆ, ಇಂಥ 391 ಕಂಪನಿಗಳು ಗುರುತಿಸಲ್ಪಟ್ಟಿವೆ. ಈ ಪ್ರಶಸ್ತಿಯನ್ನು ಮೊದಲಿಗೆ 2003ರಲ್ಲಿ ನೀಡಲಾಯಿತು.

ವಿಶ್ವದ ಸ್ಥಿತಿಗತಿಯನ್ನು ಸುಧಾರಿಸುವೆಡೆಗೆ ವಿಶ್ವ ಆರ್ಥಿಕ ವೇದಿಕೆಯು ಹೊಂದಿರುವ ಬದ್ಧತೆಗೆ ಅನುಸಾರವಾಗಿ, ತಂತ್ರಜ್ಞಾನದ ಪಥನಿರ್ಮಾಪಕರನ್ನು ಇದರ ಚಟುವಟಿಕೆಗಳೊಳಗೆ ಸಂಯೋಜಿಸಲಾಗಿದೆ; ಜಾಗತಿಕ ಕಾರ್ಯಸೂಚಿಯ ಕುರಿತಾದ ಭವಿಷ್ಯ-ಉದ್ದೇಶಿತ ಸಮಸ್ಯೆಗಳನ್ನು ಪೂರ್ವ ನಿಯಾಮಕವಾಗಿರುವ, ಪರಿವರ್ತನಶೀಲವಾಗಿರುವ ಮತ್ತು ಉದ್ಯಮಶೀಲತೆಯಿಂದ ಕೂಡಿದ ವಿಧಾನಗಳಲ್ಲಿ ಗುರುತಿಸುವ ಮತ್ತು ಅವುಗಳ ಕಡೆಗೆ ಗಮನ ಹರಿಸುವ ಉದ್ದೇಶವನ್ನು ಸದರಿ ಕಾರ್ಯಚಟುವಟಿಕೆಗಳು ಹೊಂದಿವೆ. ವಿಜ್ಞಾನಿಗಳು, ಶಿಕ್ಷಣ ತಜ್ಞರು, NGOಗಳು, ಮತ್ತು ವೇದಿಕೆಯ ಸದಸ್ಯರು ಹಾಗೂ ಪಾಲುದಾರರೊಂದಿಗೆ ಈ ಕಾರ್ಯನಿರ್ವಹಣಾಧಿಕಾರಿಗಳನ್ನು ಒಟ್ಟಾಗಿ ಸೇರಿಸುವುದರ ಮೂಲಕ, ತಂತ್ರಜ್ಞಾನಗಳನ್ನು ಹೇಗೆ ಬಳಸಿಕೊಳ್ಳಲು ಸಾಧ್ಯವಿದೆ ಎಂಬುದರ ಮೇಲೆ ಹೊಸಬೆಳಕು ಚೆಲ್ಲುವುದು ವೇದಿಕೆಯ ಉದ್ದೇಶವಾಗಿದೆ; ಉದಾಹರಣೆಗೆ, ಹೊಸ ಲಸಿಕೆಗಳನ್ನು ಕಂಡುಹಿಡಿಯುವುದು, ಆರ್ಥಿಕ ಬೆಳವಣಿಗೆಯನ್ನು ಸೃಷ್ಟಿಸುವುದು ಮತ್ತು ಜಾಗತಿಕ ಸಂವಹನೆಯನ್ನು ವರ್ಧಿಸುವುದು ಇವೆಲ್ಲವೂ ಇದರ ವ್ಯಾಪ್ತಿಯಲ್ಲಿ ಬರುತ್ತವೆ.[೪೮]

ನಿರಾಶ್ರಿತರ ಓಟ

UNHCR ಮತ್ತು ಕ್ರಾಸ್‌ರೋಡ್ಸ್‌ ಫೌಂಡೇಷನ್‌ ಎಂಬ ಹೆಸರಿನ ಹಾಂಗ್‌ಕಾಂಗ್‌ ಮೂಲದ ದತ್ತಿಸಂಸ್ಥೆಯ ಸಹ-ಆಯೋಜನೆಯಲ್ಲಿ ಹಮ್ಮಿಕೊಳ್ಳಲಾದ ನಿರಾಶ್ರಿತರ ಓಟವು, 2009ರಿಂದ ಮೊದಲ್ಗೊಂಡು ವಿಶ್ವ ಆರ್ಥಿಕ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಒಂದು ಅನುಕರಣೆಯಾಗಿದೆ. ಹಿಂಸೆಯ ಅಥವಾ ಕಿರುಕುಳದ ಕಾರಣದಿಂದಾಗಿ ತಮ್ಮ ಮನೆಗಳನ್ನು ಬಿಟ್ಟು ಓಡಿಹೋಗಬೇಕಾದ ಬಲವಂತಕ್ಕೆ ಒಳಗಾದ ಜನರು ಅನುಭವಿಸಿದ, ಬಾರಿಬಾರಿ ಭಯಗೊಳಿಸುವ ಅಗ್ನಿಪರೀಕ್ಷೆಯ ಆಕ್ಷಣದ ಒಂದು ಚಿತ್ರವನ್ನು ಇದು ಒದಗಿಸುತ್ತದೆ. ಉದ್ದೇಶವನ್ನು ಸಂಬಂಧಪಟ್ಟವರಿಗೆ ಮನವರಿಕೆ ಮಾಡಿಕೊಡಲೆಂದು WEFನಲ್ಲಿ ಅನನ್ಯ ಸ್ವರೂಪದ ಅನುಕರಣೆಯನ್ನು ಬಳಸಲಾಗುತ್ತಿದೆ; ನಿರಾಶ್ರಿತರ ಮತ್ತು ಆಂತರಿಕವಾಗಿ ಸ್ಥಳಾಂತರಿಸಲ್ಪಟ್ಟ ಜನರ ದುರವಸ್ಥೆಯನ್ನು ವಿಶ್ವದ ಅತ್ಯಂತ ಪ್ರಭಾವಿ ಜನರ ಪೈಕಿ ಕೆಲವರು ಅರ್ಥೈಸಿಕೊಳ್ಳುವುದಕ್ಕೆ ಹಾಗೂ ಅವನ್ನು ತಾದಾತ್ಮ್ಯಾನುಭವದಿಂದ ಗ್ರಹಿಸುವುದಕ್ಕೆ ನೆರವಾಗುವ ಮತ್ತು ಪೀಡಿತರಿಗೆ ನೆರವಾಗುವಲ್ಲಿ UNHCR ಹಮ್ಮಿಕೊಂಡಿರುವ ಪ್ರಯತ್ನಗಳಿಗೆ ಬೆಂಬಲ ಕೇಳುವ ಉದ್ದೇಶವನ್ನು ಈ ಅನುಕರಣೆಯು ಹೊಂದಿದೆ.[೪೯][೫೦]

ಟೀಕೆ

1990ರ ದಶಕದ ಅಂತ್ಯಭಾಗದಲ್ಲಿ, G7, ವಿಶ್ವ ಬ್ಯಾಂಕು, WTO, ಮತ್ತು IMFಗಳ ಜೊತೆಯಲ್ಲಿ WEF ಸಂಘಟನೆಯೂ ಸಹ ಜಾಗತೀಕರಣ-ವಿರೋಧಿ ಕ್ರಿಯಾವಾದಿಗಳಿಂದ ಭಾರೀ ಟೀಕೆಗೆ ಒಳಗಾಯಿತು. ಬಂಡವಾಳ ನೀತಿ ಮತ್ತು ಜಾಗತೀಕರಣಗಳು ಬಡತನವನ್ನು ಹೆಚ್ಚಿಸುತ್ತಿವೆ ಮತ್ತು ಪರಿಸರವನ್ನು ನಾಶಪಡಿಸುತ್ತಿವೆ ಎಂಬುದು ಈ ಕ್ರಿಯಾವಾದಿಗಳ ಸಮರ್ಥನೆಯಾಗಿತ್ತು. ಆಸ್ಟ್ರೇಲಿಯಾದ ಮೆಲ್ಬೋರ್ನ್‌‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಸಭೆಗೆ ಬರುತ್ತಿದ್ದ 200 ಪ್ರತಿನಿಧಿಗಳ ಸಾಗಣೆಗೆ ತಡೆಯೊಡ್ಡುವ ಮೂಲಕ, 1500 ಪ್ರದರ್ಶನಕಾರರು ಈ ಸಭೆಗೆ ಅಡ್ಡಿಪಡಿಸಿದರು.[೫೧]ಬೊನೊ ಎಂಬ ರಾಕ್‌ ಸಂಗೀತದ ಗಾಯಕನು ಸದರಿ ಸಭೆಯ ಕುರಿತು ಮಾತನಾಡುತ್ತಾ ಇದು "ಹಿಮದಲ್ಲಿ ಕೊಬ್ಬಿದ ಬೆಕ್ಕುಗಳು" ಆಯೋಜಿಸಿರುವ ಸಭೆ ಎಂಬುದಾಗಿ ಕುಹಕವಾಗಿ ಉಲ್ಲೇಖಿಸಿದ್ದರ ವಿರುದ್ಧ ಪ್ರತಿಭಟಿಸಲೆಂದು, ದಾವೋಸ್‌ನಲ್ಲಿ ಪ್ರತಿಭಟನೆಗಳು ಪದೇ ಪದೇ ಆಯೋಜಿಸಲ್ಪಟ್ಟವು; ನೋಡಿ: ಸ್ವಿಜರ್‌ಲೆಂಡ್‌ನಲ್ಲಿನ WEF-ವಿರೋಧಿ ಪ್ರತಿಭಟನೆಗಳು, ಜನವರಿ 2003.[೫೨]

ನೊವಾಮ್‌ ಚೋಮ್ಸ್‌ಕಿ ಎಂಬ ಅಮೆರಿಕಾದ ಓರ್ವ ಭಾಷಾಶಾಸ್ತ್ರಜ್ಞ ಮತ್ತು ಸಾರ್ವಜನಿಕ ಬುದ್ಧಿಜೀವಿಯ ಅಭಿಪ್ರಾಯದ ಅನುಸಾರ, ಹೂಡಿಕೆದಾರರು ಮತ್ತು ವಿಶೇಷ ಹಕ್ಕುಪಡೆದ ಗಣ್ಯರು ಅಥವಾ ವಿಶ್ವ ಆರ್ಥಿಕ ವೇದಿಕೆಯ ಕೆಲವೊಂದು ಸಹಭಾಗಿಗಳ ದೃಷ್ಟಿಕೋನದಲ್ಲಿ ಜಾಗತೀಕರಣ ಎಂಬುದು ಒಂದು ಪ್ರಚಾರ ಪರಿಭಾಷೆಯಾಗಿದೆ.

ಚೋಮ್ಸ್‌ಕಿಯು ಸಂದರ್ಶನವೊಂದರಲ್ಲಿ ಮಾತನಾಡುತ್ತಾ, "ಪ್ರಬಲವಾದ ಪ್ರಚಾರ ವ್ಯವಸ್ಥೆಗಳು "ಜಾಗತೀಕರಣ" ಎಂಬ ಶಬ್ದವನ್ನು ತಾವು ಒಲವು ತೋರುವ ಅಂತರರಾಷ್ಟ್ರೀಯ ಆರ್ಥಿಕ ಸಮಗ್ರೀಕರಣದ ಉದ್ದೇಶಿತ ರೂಪಾಂತರವನ್ನು ಉಲ್ಲೇಖಿಸಲೆಂದು ಮೀಸಲಿಟ್ಟಿವೆ; ಈ ರೂಪಾಂತರವು ಹೂಡಿಕೆದಾರರು ಮತ್ತು ಸಾಲದಾತರ, ಪ್ರಾಸಂಗಿಕವಾಗಿರುವ ಜನರ ಹಕ್ಕುಗಳಿಗೆ ವಿನಾಯಿತಿಯನ್ನು ನೀಡುತ್ತದೆ. ಈ ಬಳಕೆಯ ಅನುಸಾರ, ಮಾನವ ಜೀವಿಗಳ ಹಕ್ಕುಗಳಿಗೆ ವಿನಾಯಿತಿಯನ್ನು ನೀಡುವ ಅಂತರರಾಷ್ಟ್ರೀಯ ಸಮಗ್ರೀಕರಣದ ಒಂದು ವಿಭಿನ್ನ ಸ್ವರೂಪಕ್ಕೆ ಒಲವು ತೋರುವವರು 'ಜಾಗತಿಕತಾ-ವಿರೋಧಿ' ಎನಿಸಿಕೊಳ್ಳುತ್ತಾರೆ. ಅಸಹ್ಯ ಹುಟ್ಟಿಸುವ ಬಹುಪಾಲು ಕಾಮಿಸಾರ್‌‌ಗಳಿಂದ (ಸೋವಿಯೆಟ್‌ ಸರ್ಕಾರದಲ್ಲಿನ ಯಾವುದೇ ಇಲಾಖೆಯ ಮುಖ್ಯಾಧಿಕಾರಿಗಳು) ಬಳಸಲ್ಪಡುವ "ಸೋವಿಯೆಟ್‌-ವಿರೋಧಿ" ಎಂಬ ಪರಿಭಾಷೆಯ ರೀತಿಯಲ್ಲಿಯೇ, ಇದು ಭಿನ್ನಮತೀಯರನ್ನು ಉಲ್ಲೇಖಿಸಲೆಂದು ಇರುವ ಅಸಭ್ಯ ಪ್ರಚಾರವಾಗಿದೆ. ಇದು ಅಸಭ್ಯ ಮಾತ್ರವೇ ಅಲ್ಲದೇ ಹೆಡ್ಡತನದ ಪರಿಭಾಷೆಯೂ ಆಗಿದೆ. ಪ್ರಚಾರ ವ್ಯವಸ್ಥೆಯಲ್ಲಿ "ಜಾಗತೀಕರಣ-ವಿರೋಧಿ" ಎಂಬುದಾಗಿ ಕರೆಯಲ್ಪಡುವ ವಿಶ್ವ ಸಾಮಾಜಿಕ ವೇದಿಕೆಯ ಉದಾಹರಣೆಯನ್ನೇ ತೆಗೆದುಕೊಳ್ಳಿ- ಇದು ಅಪರೂಪದ ವಿನಾಯಿತಿಗಳನ್ನು ಹೊಂದಿರುವ ಮಾಧ್ಯಮಗಳು, ಶಿಕ್ಷಿತ ವರ್ಗಗಳು ಇತ್ಯಾದಿಗಳನ್ನು ಒಳಗೊಂಡಿರುವುದು ಕಂಡುಬರುತ್ತದೆ. WSF ಸಂಘಟನೆಯು ಜಾಗತೀಕರಣದ ಒಂದು ಮಾದರಿ ಉದಾಹರಣೆಯಾಗಿದೆ. ಸ್ಪರ್ಧಾತ್ಮಕ ವಿಶ್ವ ಆರ್ಥಿಕ ವೇದಿಕೆಯಲ್ಲಿ ಸಭೆ ಸೇರುವ ಅಥವಾ ಭೇಟಿಮಾಡುವ ಅತೀವವಾಗಿ ಸಂಕುಚಿತ ಸ್ವರೂಪದ, ಹೆಚ್ಚಿನ ವಿಶೇಷ ಹಕ್ಕುಪಡೆದ ಗಣ್ಯರ, ಮತ್ತು ಪ್ರಚಾರ ವ್ಯವಸ್ಥೆಯಿಂದ "ಜಾಗತೀಕರಣದ-ಪರ" ಎಂದು ಕರೆಯಲ್ಪಡುವವರ ಹೊರತಾಗಿಯೂ, ಇದು ವಿಶ್ವದ ಎಲ್ಲ ಭಾಗಗಳಿಗೂ ಸೇರಿದ ಬೃಹತ್‌‌ ಸಂಖ್ಯೆಯ ಜನರ, ಓರ್ವರು ಭಾವಿಸಬಹುದಾದ ಜೀವನದ ಎಲ್ಲ ಮೂಲೆಗಳಿಗೂ ಸೇರಿದ ಜನರ ಒಂದು ಜಮಾವಣೆಯಾಗಿದೆ. ಮಂಗಳಗ್ರಹದಿಂದ ಈ ಪ್ರಹಸನವನ್ನು ವೀಕ್ಷಿಸುತ್ತಿರುವ ಓರ್ವ ವೀಕ್ಷಕನು, ಶಿಕ್ಷಿತ ವರ್ಗಗಳ ವಿಕಟವರ್ತನೆಗಳನ್ನು ನೋಡುತ್ತಾ ನಗುವನ್ನು ನಿಯಂತ್ರಿಸಲಾಗದೆಯೇ ಕುಸಿದುಬೀಳುತ್ತಾನೆ" ಎಂದು ನುಡಿದ.

2000ನೇ ಇಸವಿಯ ಜನವರಿಯಲ್ಲಿ, 1,000 ಪ್ರತಿಭಟನಾಕಾರರು ದಾವೋಸ್‌ನ ಬೀದಿಗಳ ಮೂಲಕ ಮೆರವಣಿಗೆ ನಡೆಸಿದರು ಮತ್ತು ಸ್ಥಳೀಯ ಮೆಕ್‌ಡೊನಾಲ್ಡ್‌‌'ಸ್‌‌ ಉಪಾಹಾರ ಮಂದಿರದ ಕಿಟಕಿಯನ್ನು ಪುಡಿಮಾಡಿದರು.[೫೩] ದಾವೋಸ್‌ ಸುತ್ತಲೂ ವ್ಯವಸ್ಥೆಗೊಳಿಸಲಾಗಿರುವ ಬಿಗಿ ಭದ್ರತಾ ಕ್ರಮಗಳು ಪ್ರದರ್ಶನಕಾರರನ್ನು ಆಲ್ಪೈನ್‌‌ ವಿಹಾರಧಾಮದಿಂದ ದೂರದಲ್ಲಿ ಇರಿಸಿವೆ ಮತ್ತು ಬಹುಪಾಲು ಪ್ರತಿಭಟನೆಗಳನ್ನು ಈಗ ಝೂರಿಚ್‌, ಬರ್ನ್‌ ಅಥವಾ ಬೇಸೆಲ್‌‌ನಲ್ಲಿ ಹಮ್ಮಿಕೊಳ್ಳಲಾಗುತ್ತದೆ.[೫೪] ವೇದಿಕೆಯಿಂದ ಹಾಗೂ ಸ್ವಿಸ್‌ ಮಂಡಲದ ಪ್ರಾಧಿಕಾರ ಮತ್ತು ರಾಷ್ಟ್ರೀಯ ಪ್ರಾಧಿಕಾರಗಳಿಂದ ಹಂಚಿಕೊಳ್ಳಲ್ಪಟ್ಟಿರುವ ಭದ್ರತಾ ಕ್ರಮಗಳ ಕುರಿತಾದ ವೆಚ್ಚಗಳು, ಸ್ವಿಸ್‌ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪದೇಪದೇ ಟೀಕೆಗೆ ಒಳಗಾಗಿವೆ.[೫೫]

ದಾವೋಸ್‌ನಲ್ಲಿ 2003ರ ಜನವರಿಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಪ್ರಾರಂಭವಾಗಿ ಸ್ವಿಸ್‌ ಪ್ರಾಟಿಸ್ಟೆಂಟ್‌ ಚರ್ಚುಗಳ ಒಕ್ಕೂಟದ ಸಹ-ಸಂಘಟನೆಯಲ್ಲಿ ರೂಪುಗೊಂಡ ಓಪನ್‌ ಫೋರಮ್‌ ದಾವೋಸ್‌[೫೬] ಎಂಬ ಒಂದು ಅಭಿವ್ಯಕ್ತಿ-ವೇದಿಕೆಯನ್ನು ಸಮಾನಾಂತರವಾಗಿ ಆಯೋಜಿಸಲಾಯಿತು; ಜಾಗತೀಕರಣದ ಕುರಿತಾದ ಚರ್ಚೆಯನ್ನು ಜನಸಾಮಾನ್ಯರಿಗೂ ಮುಕ್ತವಾಗಿರಿಸುವ ಉದ್ದೇಶವನ್ನು ಇದು ಹೊಂದಿತ್ತು. ಅಗ್ರಗಣ್ಯ ರಾಜಕಾರಣಿಗಳು ಮತ್ತು ವ್ಯವಹಾರ ನಾಯಕರನ್ನು ಒಳಗೊಂಡಿರುವ ಸದರಿ ಮುಕ್ತ ವೇದಿಕೆಯನ್ನು ಪ್ರತಿ ವರ್ಷವೂ ಸ್ಥಳೀಯ ಪ್ರೌಢಶಾಲೆಯಲ್ಲಿ ಆಯೋಜಿಸಲಾಗುತ್ತದೆ ಮತ್ತು ಸಾರ್ವಜನಿಕ ವಲಯದ ಸದಸ್ಯರೆಲ್ಲರೂ ಇದರಲ್ಲಿ ಉಚಿತವಾಗಿ ಪಾಲ್ಗೊಳ್ಳಬಹುದಾಗಿದೆ.[೫೭][೫೮]

ವಾರ್ಷಿಕ ಸಭೆಯು "ಆಡಂಬರ ಮತ್ತು ಚರ್ವಿತ ಚರ್ವಣತೆಯ ಮಿಶ್ರಣ" ಎಂಬುದಾಗಿಯೂ ಹೀಯಾಳಿಸಲ್ಪಟ್ಟಿದೆ. ಅಷ್ಟೇ ಅಲ್ಲ, ಗಂಭೀರ ಅರ್ಥಶಾಸ್ತ್ರದ ವಿಷಯದಿಂದ ಆಚೆಗೆ ಹೊರಳುದಾರಿಯನ್ನು ತುಳಿಯುತ್ತಿರುವುದಕ್ಕಾಗಿ ಮತ್ತು ಅಲ್ಪಮಟ್ಟದಲ್ಲಿ ವಿಷಯದ ಅಗತ್ಯವನ್ನು ಈಡೇರಿಸುತ್ತಿರುವುದಕ್ಕಾಗಿಯೂ ಅದು ಟೀಕೆಗೂ ಒಳಗಾಗಿದೆ; ಅದರಲ್ಲೂ ನಿರ್ದಿಷ್ಟವಾಗಿ ಹೇಳುವುದಾದರೆ, ಅರ್ಥಶಾಸ್ತ್ರದಲ್ಲಿ ಅಲ್ಪ ಪರಿಣತಿಯನ್ನು ಹೊಂದಿರುವ ಅಥವಾ ಪರಿಣತಿಯನ್ನೇ ಹೊಂದಿಲ್ಲದ NGOಗಳು ವಾರ್ಷಿಕ ಸಭೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳುತ್ತಿರುವುದೂ ಸಹ ಟೀಕೆಗೆ ಒಳಗಾಗಿದೆ. ಪ್ರಮುಖರೆನಿಸಿಕೊಂಡಿರುವ ವ್ಯವಹಾರ-ವಲಯದ ಮತ್ತು ರಾಜಕೀಯ-ವಲಯದ ಪಾತ್ರಧಾರಿಗಳ ಜೊತೆಗೂಡಿಕೊಂಡು ಚೆನ್ನಾಗಿ ತಿಳಿದುಕೊಂಡಿರುವ ಪರಿಣಿತರೊಂದಿಗೆ ವಿಶ್ವದ ಆರ್ಥಿಕತೆಯ ಮೇಲೆ ಚರ್ಚೆಯೊಂದನ್ನು ನಡೆಸುವುದರ ಬದಲಿಗೆ, ದಾವೋಸ್‌ ಈಗ ವರ್ತಮಾನದ ಅಗ್ರಗಣ್ಯ ಮಾಧ್ಯಮದ ರಾಜಕೀಯ ಕಾರಣಗಳನ್ನು ಒಳಗೊಳ್ಳುತ್ತದೆ; ಜಾಗತಿಕ ಹವಾಮಾನ ಬದಲಾವಣೆ ಮತ್ತು ಆಫ್ರಿಕಾದಲ್ಲಿರುವ AIDS ಇದಕ್ಕೊಂದು ನಿದರ್ಶನವಾಗಿದೆ.

ಗ್ರಾಹಕರ ಸಂರಕ್ಷಣೆ 

ಗ್ರಾಹಕರ ಸಂರಕ್ಷಣೆ

ಈ ಲೇಖನವನ್ನು ವಿಕಿಪೀಡಿಯದ ಗುಣಮಟ್ಟ ಮಾನದಂಡಗಳಿಗೆ ಸರಿಹೊಂದುವಂತೆ ಚೊಕ್ಕಗೊಳಿಸಬೇಕಿದೆ. ಇದರಲ್ಲಿನ ನಿರ್ದಿಷ್ಟ ದೋಷ ಇಂತಿದೆ: ಭಾಷೆ ತಿದ್ದಬೇಕು. ವಿಕೀಕರಣ ಆಗಬೇಕು. ಕೊಂಡಿಗಳು ಬೇಕು.

ಆಧುನಿಕ ಮಾರುಕಟ್ಟೆ ಸಿದ್ಧಾಂತವು ಗ್ರಾಹಕನನ್ನು ಮಾರುಕಟ್ಟೆಯ 'ರಾಜ'ನೆಂದು ಪರಿಗಣಿಸಿದೆ. ಮಾರುಕಟ್ಟೆಯ ಎಲ್ಲಾ ಕಾರ್ಯಚಟುವಟಿಕೆಗಳು ಗ್ರಾಹಕನ ಅವಶ್ಯಕತೆಗಳು ಮತ್ತು ಅಭಿಲಾಷೆಗಳನ್ನು ತೃಪ್ತಿಪಡಿಸುವ ಉದ್ದೇಶವನ್ನು ಹೊಂದಿದೆ. ಆದರೆ, ವ್ಯವಹಾರಸಂಘಟನೆಗಳು ಹೆಚ್ಚುತ್ತಿರುವ ಪೈಪೋಟಿ, ಮಾರಾಟದ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಹಾಗೂ ಮಾರುಕಟ್ಟೆಯಲ್ಲಿ ತಮ್ಮ ಪಾಲನ್ನು ವೃದ್ಧಿಸಿಕೊಳ್ಳುವ ಉದ್ದೇಶದಿಂದ ಅನುಚಿತ ವ್ಯಾಪಾರ ಪದ್ಧತಿಗಳಾದ ಕಲಬೆರಕೆ, ಕಾಳಸಂತೆ ವ್ಯಾಪಾರ, ತಪ್ಪು ಮಾಹಿತಿ ನೀಡುವ ಜಾಹಿರಾತು, ಮುಂತಾದವುಗಳಿಂದ ಗ್ರಾಹಕರನ್ನು ವಂಚಿಸುತ್ತಿದ್ದು, ಅವನ ರಕ್ಷಣೆ ಅತ್ಯಗತ್ಯವಾಗಿದೆ. 'ಗ್ರಾಹಕನೇ ಎಚ್ಚರ' ಎಂಬ ಸಿದ್ಧಾಂತಕ್ಕೆ ಬದಲಾಗಿ 'ಮಾರಾಟಗಾರನೇ ಎಚ್ಚರ' ಎಂಬ ಸಿದ್ಧಾಂತವನ್ನು ಅಳವಡಿಸಿಕೊಳ್ಳಲಾಗಿದೆ. ಈ ಸಿದ್ಧಾಂತವು ಗ್ರಾಹಕನನ್ನು ವ್ಯವಹಾರ ಸಂಸ್ಥೆಗಳ ಅನುಚಿತ ವ್ಯಾಪಾರೀ ಪದ್ಧತಿಗಳಿಂದ ಹೇಗೆ ರಕ್ಷಿಸಲಾಗುತ್ತದೆ ಎಂಬುದರ ಬಗ್ಗೆ ಬೆಳಕನ್ನು ಚೆಲ್ಲುತ್ತದೆ.

ಗ್ರಾಹಕರು ಸಾಮಾನ್ಯವಾಗಿ ಭೇಟಿನೀಡುವ ಅಂಗಡಿ

ಗ್ರಾಹಕನ ಅರ್ಥ (Meaning of Consumer)

ಹಣವನ್ನು ಪಾವತಿಸಿ ಅಥವಾ ಪಾವತಿಸುವ ವಾಗ್ದಾನದ ಮೇರೆಗೆ ಸರಕು ಅಥವಾ ಸೇವೆಗಳನ್ನು ಸ್ವಂತ ಅಥವಾ ಅನ್ಯರ ಉಪಯೋಗಕ್ಕಾಗಿ ಖರೀದಿಸುವವನನ್ನು ಗ್ರಾಹಕಎಂದು ಕರೆಯುತ್ತಾರೆ. ಆದರೆ ವ್ಯವಹಾರ ಉದ್ದೇಶಗಳಿಗೆ (ಮರು ಮಾರಾಟ) ಸರಕು ಮತ್ತು ಸೇವೆಗಳನ್ನು ಖರೀದಿಸುವವನು ಗ್ರಾಹಕನಾಗುವುದಿಲ್ಲ.

ಗ್ರಾಹಕನ ವ್ಯಾಖ್ಯೆ (Definition of Consumer)

ಗ್ರಾಹಕ ಹಿತರಕ್ಷಣಾ ಕಾಯ್ದೆ ೧೯೮೬ರ  ಪ್ರಕಾರ ಗ್ರಾಹಕನೆಂದರೆ,

೧. ಹಣ ಪಾವತಿಸಿ ಅಥವಾ ಪಾವತಿಸುವ ವಾಗ್ದಾನದ ಅನ್ವಯ ಸ್ವಂತ ಉಪಯೋಗಕ್ಕಾಗಿ ಸರಕುಗಳನ್ನು ಖರೀದಿಸುವವ ಅಥವಾ ಬಾಡಿಗೆಗೆ ಪಡೆಯುವವ ಅಥವಾ ಯಾವುದೇ ಸೇವೆಗಳನ್ನು ಪಡೆಯುವವನು.

೨. ಖರೀದಿದಾರನ ಅಥವಾ ಮಾರಾಟಗಾರನ ಅಥವಾ ಬಾಡಿಗೆಗೆ ನೀಡುವವನ ಅನುಮತಿಯಿಂದ ಸರಕುಗಳನ್ನು ಉಪಯೋಗಿಸುವವ ಅಥವಾ ಸೇವೆಗಳನ್ನು ಪಡೆಯುವವನು.

೩. ಸ್ವಂತ ಉದ್ಯೋಗದ ಮೂಲಕ ಜೀವನ ನಿರ್ವಹಣೆಗಾಗಿ ಲಾರಿಕಾರುಆಟೋರಿಕ್ಷಾ ಮುಂತಾದ ವಾಹನಗಳನ್ನು ಖರೀದಿಸುವವ ಅಥವಾ ಯಾವುದೇ ಸೇವೆಯನ್ನು ಪಡೆಯುವವನು. thumbnail|left|ಸಾರ್ವಜನಿಕರು

ಗ್ರಾಹಕನ ಹಿತರಕ್ಷಣೆಯ ಅರ್ಥ (Meaning of Consumer Protection)

ಗ್ರಾಹಕನ ಹಿತರಕ್ಷಣೆ ಎಂದರೆ ಗ್ರಾಹಕನ ಭೌತಿಕಆರ್ಥಿಕಮತ್ತು ಇತರೆ ಹಿತಾಸಕ್ತಿಗಳನ್ನು ವ್ಯವಹಾರ ಸಂಸ್ಥೆಗಳ ಶೋಷಣೆಯಿಂದ ಶಾಸನಬದ್ಧ ಹಾಗೂ ಇತರೆ ವಿಧಾನಗಳಿಂದ ರಕ್ಷಿಸುವುದಾಗಿದೆ. ಸಾಮಾನ್ಯವಾಗಿ ಗ್ರಾಹಕನನ್ನು ತೂಕ ಮತ್ತು ಅಳತೆಯಲ್ಲಿ ಕೊರತೆ, ತಪ್ಪು ಮಾಹಿತಿಯ ಜಾಹೀರಾತು, ಕಡಿಮೆ ಗುಣಮಟ್ಟದ ಸರಕುಗಳು, ಕಲಬೆರಕೆ, ಕಾಳಸಂತೆ ವ್ಯಾಪಾರ, ಕೃತಕಅಭಾವ ಸೃಷ್ಟಿಸುವ, ಮಾರಾಟ ನಂತರದ ಸೇವೆಗಳನ್ನು ನಿರಾಕರಿಸುವ ಅಥವಾ ಮಾರಾಟ ಪಟ್ಟಿ ನೀಡದೇ ಶೋಷಿಸಲಾಗುತ್ತಿದೆ. ಸಂಕ್ಷಿಪ್ತವಾಗಿ ಗ್ರಾಹಕ ಹಿತರಕ್ಷಣೆ ಎಂದರೆ ಗ್ರಾಹಕನ ಹಕ್ಕುಗಳನ್ನು ರಕ್ಷಿಸುವುದು ಎಂದರ್ಥ.

ಗ್ರಾಹಕನ ಹಿತರಕ್ಷಣೆಯ ಪ್ರಾಮುಖ್ಯತೆ (Importance of Consumer Protection)

ಗ್ರಾಹಕನನ್ನು ಮಾರುಕಟ್ಟೆಯ 'ರಾಜ'ನೆಂದು ಪರಿಗಣಿಸಿದ್ದರೂ ವ್ಯಾಪಾರಿ ಸಂಸ್ಥೆಗಳು ನಿರಂತರವಾಗಿ ಅನುಚಿತ ವ್ಯಾಪಾರಿ ಪದ್ಧತಿಗಳಿಂದ ಅವನನ್ನು ಶೋಷಿಸುತ್ತಿವೆ. ಗ್ರಾಹಕನಲ್ಲಿ ಜಾಗೃತಿಯನ್ನು ಮೂಡಿಸಲು ಪ್ರತಿ ವರ್ಷ ಮಾರ್ಚ್ ೧೫ ರಂದು ಗ್ರಾಹಕನ ಹಕ್ಕುಗಳ ದಿನ ವೆಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.

ಗ್ರಾಹಕನ ಹಿತರಕ್ಷಣೆಯ ಪ್ರಾಮುಖ್ಯತೆಯನ್ನು ಗ್ರಾಹಕ ಮತ್ತು ವ್ಯಾಪಾರೀ ಸಂಸ್ಥೆಗಳ ದೃಷ್ಟಿಯಿಂದ ತಿಳಿಯಬಹುದು.

ಗ್ರಾಹಕರನ್ನು ಕೆಳಕಂಡ ಅಂಶಗಳ ಆಧಾರದ ಮೇಲೆ ರಕ್ಷಿಸುವುದು ಅವಶ್ಯಕವಾಗಿದೆ.

೧. ಗ್ರಾಹಕರ ಅಜ್ಞಾನ (Consumers ignorance)

ಗ್ರಾಹಕರು ಅನೇಕ ಸಂದರ್ಭಗಳಲ್ಲಿ ಅವಶ್ಯಕ ಜ್ಞಾನವನ್ನು ಹೊಂದಿಲ್ಲದಿರುವುದರಿಂದ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳುವಲ್ಲಿ ಅಥವಾ ವ್ಯಾಪಾರ ಸಂಸ್ಥೆಗಳ ಶೋಷಣೆಯ ವಿರುದ್ಧ ಧ್ವನಿ ಎತ್ತಲಾಗುತ್ತಿಲ್ಲ. ಆದುದರಿಂದ ಗ್ರಾಹಕರಿಗೆ ಸೂಕ್ತ ಶಿಕ್ಷಣ ಹಾಗೂ ಹಕ್ಕುಗಳ ಬಗ್ಗೆ ಮಾಹಿತಿಯನ್ನು ನೀಡುವುದರ ಮೂಲಕ ರಕ್ಷಿಸಬೇಕಾಗಿದೆ.

೨. ಅಸಂಘಟಿತ ಗ್ರಾಹಕರು (Unorganised Consumers)

ಗ್ರಾಹಕರು ಅಸಂಘಟಿತರಾಗಿರುವುದರಿಂದ ವ್ಯವಹಾರ ಸಂಸ್ಥೆಗಳು ಅವರನ್ನು ಶೋಷಿಸುತ್ತಿವೆ. ಆದುದರಿಂದ ಗ್ರಾಹಕರು ಶೋಷಣೆಯ ವಿರುದ್ಧ ಹೋರಾಡಲು ಸಂಘಟಿತರಾಗಬೇಕಾಗಿದೆ.

೩.ಗ್ರಾಹಕರ ಶೋಷಣೆ (Consumers' exploitataion)

ವ್ಯಾಪಾರ ಸಂಸ್ಥೆಗಳು ಅನುಚಿತ ವ್ಯಾಪಾರಿ ಪದ್ಧತಿಗಳಾದ ಕಲಬೆರಕೆ, ಕಾಳಸಂತೆ ವ್ಯಾಪಾರ, ತೂಕ ಮತ್ತು ಅಳತೆಯಲ್ಲಿ ಕೊರತೆ, ವಂಚನೆಯ ಜಾಹೀರಾತು, ಮುಂತಾದವುಗಳಿಂದ ಗ್ರಾಹಕನನ್ನು ಶೋಷಿಸುತ್ತಿರುವುದರಿಂದ ಗ್ರಾಹಕನ ಹಿತರಕ್ಷಣೆ ಅಗತ್ಯವಾಗಿದೆ.

ವ್ಯವಹಾರ ಸಂಸ್ಥೆಗಳ ದೃಷ್ಟಿಯಿಂದ ಗ್ರಾಹಕರ ಹಿತರಕ್ಷಣೆಯು ಈ ಕೆಳಕಂಡ ಅಂಶಗಳಿಂದ ಅತ್ಯಗತ್ಯವಾಗಿದೆ.

೧. ವ್ಯವಹಾರ ಸಂಸ್ಥೆಗಳ ದೀರ್ಘಾವಧಿ ಹಿತಾಸಕ್ತಿಗಾಗಿ (Long term interest of Business)

ವ್ಯವಹಾರ ಸಂಸ್ಥೆಗಳ ದೀರ್ಘಾವಧಿ ಹಿತಾಸಕ್ತಿಗಾಗಿ ಉತ್ತಮ ಗುಣಮಟ್ಟದ ಸರಕು ಮತ್ತು ಸೇವೆಗಳನ್ನು ನಿರಂತರವಾಗಿ ನ್ಯಾಯಬೆಲೆಯಲ್ಲಿ ಪೂರೈಸುವುದರ ಮೂಲಕ ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸಬೇಕಾಗಿದೆ.

೨.ಸಾಮಾಜಿಕ ಜವಾಬ್ದಾರಿ (Social Responsibility)

ವ್ಯವಹಾರ ಸಂಸ್ಥೆಗಳು ಗ್ರಾಹಕರ ಹಿತರಕ್ಷಣೆಯನ್ನು ಸಾಮಾಜಿಕ ಜವಾಬ್ದಾರಿಯನ್ನಾಗಿ ಒಪ್ಪಿಕೊಳ್ಳುವುದರ ಮೂಲಕ, ಅನುಚಿತ ವ್ಯಾಪಾರಿ ಪದ್ಧತಿಗಳನ್ನು ಸ್ವತಃ ನಿಯಂತ್ರಿಸಿಕೊಳ್ಳುವುದರ ಮೂಲಕ ಗ್ರಾಹಕರ ಹಿತರಕ್ಷಣೆಯನ್ನು ಕಾಪಾಡುತ್ತಿವೆ.

೩.ಸರ್ಕಾರದ ಮಧ್ಯಸ್ಥಿಕೆ (Government intervention)

ಸರ್ಕಾರ ಕಾಲಕಾಲಕ್ಕೆ ಶಾಸನಗಳನ್ನು ರೂಪಿಸುವುದರ ಮೂಲಕ ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುತ್ತಿದೆ. ಆದುದರಿಂದ ವ್ಯಾಪಾರಿ ಸಂಸ್ಥೆಗಳು ಸರ್ಕಾರದ ಕಾನೂನು ಕಟ್ಟಲೆಗಳನ್ನು ಪಾಲಿಸುವುದರ ಮೂಲಕ ಸ್ವಯಂಪ್ರೇರಣೆಯಿಂದ ಗ್ರಾಹಕರನ್ನು ರಕ್ಷಿಸುವುದು ಅನಿವಾರ್ಯವಾಗಿದೆ.

ಗ್ರಾಹಕರ ಹಿತರಕ್ಷಣಾ ಕಾಯ್ದೆ, ೧೯೮೬ (Consumer Protection Act, 1986)

ಈ ಕಾಯ್ದೆಯನ್ನು ಗ್ರಾಹಕರ ಹಿತಾಸಕ್ತಿಯನ್ನು ಸಂರಕ್ಷಿಸುವ ಉದ್ದೇಶದಿಂದ ೧೯೮೬ ರಲ್ಲಿ ಜಾರಿಗೆ ತರಲಾಯಿತು. ಇದು ದೋಷಪೂರಿತ ವಸ್ತುಗಳು, ಅತೃಪ್ತಿದಾಯಕ ಸೇವೆಗಳು, ಅನುಚಿತ ವ್ಯಾಪಾರಿ ಪದ್ಧತಿಗಳು ಹಾಗೂ ಇತರೆ ಶೋಷಣೆಯ ವಿರುದ್ಧ ಪರಿಣಾಮಕಾರಿ ರಕ್ಷಣೆಯನ್ನು ಗ್ರಾಹಕರಿಗೆ ನೀಡುವ ಉದ್ದೇಶವನ್ನು ಹೊಂದಿದೆ. ಈ ಕಾಯ್ದೆ ಸರಕು ಮತ್ತು ಸೇವೆಗಳ ವಿರುದ್ಧ ದೂರುಗಳಿದ್ದಲ್ಲಿ ಇತ್ಯರ್ಥಪಡಿಸಲು ಕಾಲಮಿತಿಯ ಷರತ್ತನ್ನು ವಿಧಿಸಿದೆ. ಈ ಕಾನೂನು ಶೀಘ್ರ ಹಾಗೂ ಮಿತವ್ಯಯಕಾರಿಯಾಗಿ ದೂರುಗಳನ್ನು ಇತ್ಯರ್ಥಪಡಿಸುವ ಉದ್ದೇಶವನ್ನು ಹೊಂದಿದೆ. ಗ್ರಾಹಕರ ಶೋಷಣೆಯ ವಿರುದ್ಧ ಕೇವಲ ಬಿಳಿಹಾಳೆಯಲ್ಲಿ ದೂರನ್ನು ಸಲ್ಲಿಸಬಹುದಾಗಿದೆ. ಈ ಕಾನೂನಿನನ್ವಯ ಜಿಲ್ಲಾರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗ್ರಾಹಕರ ದೂರುಗಳ ಪರಿಹಾರ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಹಾಗೂ ರಾಜ್ಯಮಟ್ಟದಲ್ಲಿ ಗ್ರಾಹಕ ಹಿತರಕ್ಷಣಾ ಮಂಡಳಿಗಳನ್ನು ಸ್ಥಾಪಿಸಲಾಗಿದೆ. ಈ ಮಂಡಳಿಗಳು ಗ್ರಾಹಕರಿಗೆ ಸೂಕ್ತ ಶಿಕ್ಷಣವನ್ನು ನೀಡುವುದರ ಮೂಲಕ ಅವರ ಹಿತರಕ್ಷಣೆಯನ್ನು ಕಾಪಾಡುತ್ತಿದೆ.

ಗ್ರಾಹಕರ ಹಕ್ಕುಗಳು (Rights of Consumers)

ಗ್ರಾಹಕರ ಹಿತರಕ್ಷಣಾ ಕಾಯ್ದೆಯ, ೧೯೮೬ ಅನ್ವಯ ಕೆಳಕಂಡ ಹಕ್ಕುಗಳು ಗ್ರಾಹಕರಿಗೆ ದೊರೆಯುತ್ತಿವೆ.[೯]

೧. ಸುರಕ್ಷತೆಯ ಹಕ್ಕು (Right to Safety)

ಗ್ರಾಹಕರ ಆರೋಗ್ಯ ಹಾಗೂ ಜೀವಕ್ಕೆ ಹಾನಿಯನ್ನುಂಟು ಮಾಡುವ ಉತ್ಪಾದನಾ ಮತ್ತು ಇತರೆ ನ್ಯೂನತೆಗಳನ್ನು ಹೊಂದಿರುವ ಆಹಾರ ವಸ್ತುಗಳು, ಔಷಧಿ, ವಿದ್ಯುತ್ ಉಪಕರಣಗಳು, ಗ್ಯಾಸ್ ಸಿಲಿಂಡರ್'ಗಳು, ಕುಕ್ಕರ್‌ಗಳಿಂದ ರಕ್ಷಣೆಯನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.

೨. ಮಾಹಿತಿ ಪಡೆಯುವ ಹಕ್ಕು (Right to be informed)

ಗ್ರಾಹಕರು ತಾವು ಖರೀದಿಸಲು ಇಚ್ಛಿಸುವ ಸರಕುಗಳ ಬಗ್ಗೆ ಅಂದರೆ ಸರಕಿನ ಪ್ರಮಾಣ, ಗುಣಮಟ್ಟ, ಬೆಲೆಉತ್ಪಾದನೆಹಾಗೂ ವಾಯಿದೆ ದಿನಾಂಕ ಮುಂತಾದವುಗಳ ಬಗ್ಗೆ ನೈಜ ಹಾಗೂ ಸಂಪೂರ್ಣ ಮಾಹಿತಿಯನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.

೩. ಆಯ್ಕೆಯ ಹಕ್ಕು (Right to choose)

ಮಾರಾಟಗಾರ ನಿರ್ದಿಷ್ಟ ವಸ್ತುಗಳನ್ನು ಖರೀದಿಸುವಂತೆ ಒತ್ತಾಯಪೂರ್ವಕ ಕ್ರಮಗಳನ್ನು ಕೈಗೊಂಡರೂ ವೈವಿಧ್ಯಮಯ ಸರಕುಗಳಲ್ಲಿ ತಮ್ಮ ಅಗತ್ಯಕ್ಕನುಗುಣವಾದ ಸರಕುಗಳನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಗ್ರಾಹಕರು ಹೊಂದಿರುತ್ತಾರೆ.

೪. ಆಲಿಸುವ ಹಕ್ಕು (Right to be heard)

ಗ್ರಾಹಕರು ಶೋಷಣೆಗೆ ಒಳಗಾಗಿದ್ದಲ್ಲಿ ಅಥವಾ ಖರೀದಿಸಿದ ಸರಕು ಅಥವಾ ಸೇವೆಗಳಿಂದ ಅತೃಪ್ತಿಯನ್ನು ಹೊಂದಿದ್ದಲ್ಲಿ ಸಂಬಂಧಿಸಿದ ಗ್ರಾಹಕ ನ್ಯಾಯಾಲಯಕ್ಕೆ ದೂರನ್ನು ಸಲ್ಲಿಸುವ ಹಕ್ಕನ್ನು ಹೊಂದಿರುತ್ತಾರೆ. ಅದೇ ರೀತಿ ಅನೇಕ ವ್ಯವಹಾರ ಸಂಸ್ಥೆಗಳು ತಮ್ಮದೇ ಆದ ಸೇವಾ ಹಾಗೂ ಕುಂದುಕೊರತೆಗಳನ್ನು ನಿವಾರಿಸುವ ಕೇಂದ್ರಗಳನ್ನು ಸ್ಥಾಪಿಸುವುದರ ಮೂಲಕ ಗ್ರಾಹಕರ ಸಮಸ್ಯೆಯನ್ನು ಆಲಿಸುತ್ತಿವೆ.

೫. ಕುಂದುಕೊರತೆಗಳನ್ನು ನಿವಾರಿಸಿಕೊಳ್ಳುವ ಹಕ್ಕು (Right to seek Redressal)

ಗ್ರಾಹಕರು ತಾವು ಖರೀದಿಸಿದ ವಸ್ತುಗಳಲ್ಲಿ ದೋಷಗಳಿದ್ದಲ್ಲಿ ಅಥವಾ ಪಡೆಯುವ ಸೇವೆಗಳಲ್ಲಿ ನ್ಯೂನತೆಗಳಿದ್ದಲ್ಲಿ ಅವುಗಳಿಗೆ ಪರಿಹಾರಗಳನ್ನು ಬದಲಿ ವಸ್ತುಗಳನ್ನು ಪಡೆಯುವ ಅಥವಾ ದೋಷಗಳನ್ನು ನಿವಾರಿಸಿಕೊಳ್ಳುವ ಹಾಗೂ ಸರಕುಗಳ ಖರೀದಿಯಿಂದಾದ ನಷ್ಟವನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.

೬. ಗ್ರಾಹಕರ ಶಿಕ್ಷಣದ ಹಕ್ಕು (Right to educate)

ಗ್ರಾಹಕರು ಸರಕು ಮತ್ತು ಸೇವೆಗಳನ್ನು ಉಪಯೋಗಿಸುವ ಸಂದರ್ಭದಲ್ಲಿ ಸಂಪೂರ್ಣ ಜ್ಞಾನ ಹಾಗೂ ಪರಿಣಿತಿಯನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ. ಅದೇ ರೀತಿ ವ್ಯಾಪಾರಿ ಸಂಸ್ಥೆಗಳ ಅನುಚಿತ ವ್ಯಾಪಾರಿ ಪದ್ಧತಿಗಳಿಂದ ರಕ್ಷಣೆ ಪಡೆಯಲು ಸೂಕ್ತ ಕಾನೂನುಗಳು ಅಸ್ತಿತ್ವದಲ್ಲಿರುವುದರ ಬಗ್ಗೆ ಹಾಗೂ ತಮಗೆ ದೊರೆಯುವ ವಿವಿಧ ಹಕ್ಕುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.

ಮೇಲ್ಕಂಡ ಆರು ಹಕ್ಕುಗಳ ಜೊತೆಗೆ ವಿಶ್ವಸಂಸ್ಥೆಯು ಎರಡು ಪ್ರತ್ಯೇಕ ಹಕ್ಕುಗಳನ್ನು ನೀಡಿದೆ.

೧. ಮೂಲಭೂತ ಅವಶ್ಯಕತೆಗಳನ್ನು ಪಡೆಯುವ ಹಕ್ಕು (Right to possess basic needs)

ಪ್ರತಿಯೊಬ್ಬ ಗ್ರಾಹಕನು ಗೌರವಯುತ ಜೀವನ ನಿರ್ವಹಿಸಲು ಮೂಲಭೂತ ಅವಶ್ಯಕತೆಗಳಾದ ಆಹಾರ, ಕುಡಿಯುವ ನೀರು, ಉಡುಪು, ವಸತಿಆರೋಗ್ಯಶಿಕ್ಷಣಹಾಗೂ ನೈರ್ಮಲ್ಯಯುತ ವಾತಾವರಣವನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾನೆ.

೨. ಮಾಲಿನ್ಯಮುಕ್ತ ಪರಿಸರವನ್ನು ಪಡೆಯುವ ಹಕ್ಕು (Right to have Healthy Environment)

ಆರೋಗ್ಯಪೂರ್ಣ ವಾತಾವರಣವು ಮಾನವನ ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಈ ಹಕ್ಕಿನ ಅನ್ವಯ ಗುಣಮಟ್ಟದ, ಶಾಂತಿಯುತ ಹಾಗೂ ಮಾಲಿನ್ಯರಹಿತ ಪರಿಸರವನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾನೆ.

ಗ್ರಾಹಕರ ಜವಾಬ್ದಾರಿಗಳು (Consumer Responsibility)

ಗ್ರಾಹಕರು ತಾವು ಪಡೆಯುತ್ತಿರುವ ಹಕ್ಕುಗಳೊಂದಿಗೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಹಕ್ಕುಗಳು ಮತ್ತು ಜವಾಬ್ದಾರಿಗಳು ಒಂದೇ ನಾಣ್ಯದ ಎರಡು ಮೂಖಗಳಾಗಿವೆ. ಗ್ರಾಹಕರ ಜವಾಬ್ದಾರಿಗಳು ಕೆಳಕಂಡಂತಿವೆ:

೧. ಹಕ್ಕುಗಳ ಬಗ್ಗೆ ಜಾಗೃತಿ (Awareness of Rights)

ಗ್ರಾಹಕರು ಸರಕು ಮತ್ತು ಸೇವೆಗಳನ್ನು ಖರೀದಿಸುವ ಸಂದರ್ಭದಲ್ಲಿ ತಮಗೆ ದೊರೆಯುವ ಹಕ್ಕುಗಳಾದ ಸುರಕ್ಷತೆ, ಮಾಹಿತಿ ಪಡೆಯುವ ಹಾಗೂ ಇತರೆ ಹಕ್ಕುಗಳ ಬಗ್ಗೆ ಸಂಪೂರ್ಣ ಜಾಗೃತಿಯನ್ನು ಹೊಂದಿರಬೇಕು.

೨. ಗುಣಮಟ್ಟದ ಅರಿವು (Quality conscious)

ಗ್ರಾಹಕರು ತಾವು ಸರಕುಗಳನ್ನು ಖರೀದಿಸುವ ಸಂದರ್ಭದಲ್ಲಿ ಗುಣಮಟ್ಟ ನಿರ್ಧರಿಸಿದ ಬಿ.ಐ.ಎಸ್, ಅಗ್-ಮಾರ್ಕ್, ಹಾಲ್-ಮಾರ್ಕ್, ಇತ್ಯಾದಿಗಳ ಬಗ್ಗೆ ಅರಿವನ್ನು ಹೊಂದಿರಬೇಕು.

೩. ದೂರು ನೀಡಲು ಸಿದ್ಧರಿರಬೇಕು (Ready to lodge complaint)

ಗ್ರಾಹಕರು ತಾವು ಖರೀದಿಸಿದ ಸರಕು ಅಥವಾ ಸೇವೆಗಳಲ್ಲಿ ನ್ಯೂನತೆಗಳಿದ್ದಲ್ಲಿ ಅದರ ಮೌಲ್ಯವನ್ನು ಪರಿಗಣಿಸದೇ ಸಂಬಂಧಿಸಿದ ಗ್ರಾಹಕ ನ್ಯಾಯಾಲಯದಲ್ಲಿ ದೂರನ್ನು ಸಲ್ಲಿಸಬೇಕಾದ ಜವಾಬ್ದಾರಿಯನ್ನು ಹೊಂದಿರುತ್ತಾರೆ.

೪. ತಪ್ಪು ಜಾಹೀರಾತುಗಳಿಂದ ದಿಕ್ಕು ತಪ್ಪಬಾರದು (Not to be misled by false advertisements)

ಸಾಮಾನ್ಯವಾಗಿ ಉತ್ಪಾದಕ/ಮಾರಾಟಗಾರ ಜಾಹೀರಾತಿನಲ್ಲಿ ತಪ್ಪು ಮಾಹಿತಿಗಳನ್ನು ನೀಡುವುದರ ಮೂಲಕ ಸರಕುಗಳ ಗುಣಮಟ್ಟವನ್ನು ವಾಸ್ತವಕ್ಕಿಂತ ಹೆಚ್ಚಾಗಿದೆಯೆಂದು ಬಿಂಬಿಸುತ್ತಾನೆ. ಆದರೆ, ಗ್ರಾಹಕರು ನೈಜ ಗುಣವನ್ನು ಪರಿಶೀಲಿಸಿ, ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ತಪ್ಪು ಮಾಹಿತಿಯ ಜಾಹಿರಾತಿನಿಂದ ರಕ್ಷಣೆಯನ್ನು ಪಡೆಯುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.

೫. ನಗದು ರಶೀದಿಗಾಗಿ ಬೇಡಿಕೆ (Demand for Cash memo)

ಗ್ರಾಹಕರು ತಾವು ಖರೀದಿಸಿದ ಸರಕು ಮತ್ತು ಸೇವೆಗಳ ಪುರಾವೆಗಾಗಿ ನಗದು ರಶೀದಿಯನ್ನು ಕೇಳಿ ಪಡೆಯಬೇಕಾದ ಜವಾಬ್ದಾರಿಯನ್ನು ಹೊಂದಿರುತ್ತಾನೆ. ಖರೀದಿದಾರ ನಗದು ರಶೀದಿಯನ್ನು ಅಪೇಕ್ಷಿಸದೇ ಇದ್ದರೂ ಅದನ್ನು ನೀಡುವುದು ಮಾರಾಟಗಾರನ ಆದ್ಯ ಕರ್ತವ್ಯವಾಗಿರುತ್ತದೆ.

೬. ಜಾಗೃತ ಬಳಕೆದಾರ (Cautious Consumer)

ಗ್ರಾಹಕರು ತಾವು ಸರಕು ಮತ್ತು ಸೇವೆಗಳನ್ನು ಖರೀದಿಸುವ ಸಂದರ್ಭದಲ್ಲಿ ಅದರ ಸ್ವಭಾವ, ಬೆಲೆ, ತಯಾರಿಕೆಯ ಮತ್ತು ವಾಯಿದೆಯ ದಿನಾಂಕ, ಸರಕುಗಳನ್ನು ಉಪಯೋಗಿಸುವ ಬಗ್ಗೆ ನಿರ್ದೇಶನ ಮತ್ತು ಸರಕುಗಳನ್ನು ಉಪಯೋಗಿಸುವಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಯ ಬಗ್ಗೆ ಜಾಗರೂಕರಾಗಿರಬೇಕಾಗುತ್ತದೆ.

೭. ಸರಕುಗಳ ಆಯ್ಕೆ (Selection of Goods)

ಗ್ರಾಹಕರು ಕಾನೂನುಬದ್ಧ ಸರಕು ಮತ್ತು ಸೇವೆಗಳನ್ನು ಖರೀದಿಸಬೇಕು. ಕಳ್ಳಸಾಗಾಣಿಕೆ, ಕಾಳಸಂತೆಯ ಸರಕುಗಳನ್ನು ಖರೀದಿಸಬಾರದು.

೮. ಗ್ರಾಹಕ ಸಂಘಟನೆ (Consumer Organisation)

ಗ್ರಾಹಕರು ಉತ್ಪಾದಕ/ಮಾರಾಟಗಾರರ ಅನೈತಿಕ ವ್ಯಾಪಾರಿ ಪದ್ಧತಿಗಳಿಂದ ರಕ್ಷಣೆ ಪಡೆಯಲು ತಮ್ಮದೇ ಆದ ಗ್ರಾಹಕ ಸಂಘಟನೆಗಳನ್ನು ಸ್ಥಾಪಿಸಿಕೊಳ್ಳಬೇಕಾದ ಜವಾಬ್ದಾರಿಯನ್ನು ಹೊಂದಿರುತ್ತಾರೆ.

೯. ಪರಿಸರ ರಕ್ಷಣೆ (Protection of Environment)

ಗ್ರಾಹಕರು ಸಂಪನ್ಮೂಲಗಳನ್ನು ಅನುಪಯುಕ್ತಗೊಳಿಸದೇ ಪರಿಸರದ ಬಗ್ಗೆ ಗೌರವ ಹಾಗೂ ರಕ್ಷಣೆಯ ಜವಾಬ್ದಾರಿಯನ್ನು ಹೊಂದಿರುತ್ತಾರೆ.

೧೦. ಅವಸರದಲ್ಲಿ ಖರೀದಿಸಬಾರದು (Not to buy in hurry)

ಗ್ರಾಹಕರು ಅವಸರದಿಂದ ಯಾವುದೇ ಸರಕು ಮತ್ತು ಸೇವೆಯನ್ನು ಖರೀದಿಸಬಾರದು ಮತ್ತು ಖರೀದಿಸುವ ಸಂದರ್ಭದಲ್ಲಿ ಅವುಗಳ ಗುಣಮಟ್ಟ, ಪ್ರಮಾಣ, ಬೆಲೆ, ಖರೀದಿಯ ಸಮಯ ಮುಂತಾದವುಗಳ ಬಗ್ಗೆ ಸುದೀರ್ಘವಾಗಿ ಯೋಚಿಸಿ ಖರೀದಿಸಬೇಕಾದ ಜವಾಬ್ದಾರಿಯನ್ನು ಹೊಂದಿರುತ್ತಾನೆ.

ಯಾರು ದೂರನ್ನು ದಾಖಲಿಸಬಹುದು?

ಈ ಕೆಳಕಂಡ ವ್ಯಕ್ತಿಗಳು ಸಂಬಂಧಿಸಿದ ಗ್ರಾಹಕ ನ್ಯಾಯಾಲಯದಲ್ಲಿ ದೂರನ್ನು ದಾಖಲಿಸಬಹುದು.

೧. ಒಬ್ಬ ಗ್ರಾಹಕ

೨. ಯಾವುದೇ ನೊಂದಾಯಿತ ಗ್ರಾಹಕ ಸಂಘಟನೆ

೩. ಕೇಂದ್ರ ಅಥವಾ ಯಾವುದೇ ರಾಜ್ಯ ಸರ್ಕಾರ

೪. ಒಂದೇ ರೀತಿಯ ಹಿತಾಸಕ್ತಿಯನ್ನು ಹೊಂದಿರುವ ಒಬ್ಬ ಅಥವಾ ಅನೇಕ ಗ್ರಾಹಕರು, ಅಥವಾ

೫. ಗ್ರಾಹಕನ ವಾರಸುದಾರ (ಗ್ರಾಹಕನ ನಿಧನಾನಂತರ)

ದೂರಿನಲ್ಲಿರಬೇಕಾದ ಪ್ರಮುಖ ಅಂಶಗಳು

೧. ದೂರುದಾರರ ಹೆಸರು, ವಿಳಾಸ, ಮತ್ತು ದೂರಿನ ವಿವರ.

೨. ಎದುರು ಕಕ್ಷಿದಾರನ ಹೆಸರು, ವಿಳಾಸ, ಮತ್ತು ವಿವರ.

೩. ಯಾವ ಸಂದರ್ಭದಲ್ಲಿ ನ್ಯೂನ್ಯತೆ ಸಂಭಂದಿಸಿದೆ ಎಂಬುದರ ಬಗ್ಗೆ ಮಾಹಿತಿ

೪. ದೂರಿಗೆ ಸಂಭಂದಿಸಿದ ಮಾಹಿತಿಗಳನ್ನೊಳಗೊಂಡ ದಾಖಲೆಗಳು

೫. ದೂರುದಾರ ಅಪೇಕ್ಷಿಸುವ ಪರಿಹಾರದ ವಿಧಗಳು ಇತ್ಯಾದಿ.

ಗ್ರಾಹಕರ ದೂರುಗಳು ಪರಿಹಾರ ಸಂಸ್ಥೆಗಳು

ಗ್ರಾಹಕರ ಹಿತಾರಕ್ಷಣಾ ಕಾಯಿದೆ, ೧೯೮೬ ರ ಪ್ರಕಾರ ಮೂರು ಹಂತದ ಗ್ರಾಹಕರ ದೂರುಗಳ ಪರಿಹಾರ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶವಿದ್ದು ಜಿಲ್ಲಾ, ರಾಜ್ಯಹಾಗೂ ರಾಷ್ಟ್ರ ಮಟ್ಟದಲ್ಲಿ ಗ್ರಾಹಕರ ದೂರುಗಳನ್ನು ಸ್ವೀಕರಿಸಿ ಅವುಗಳಿಗೆ ಪರಿಹಾರ ನೀಡುವ ಕಾರ್ಯದಲ್ಲಿ ನಿರತರಾಗಿವೆ. ವಿವಿಧ ಗ್ರಾಹಕರ ದೂರುಗಳು ಪರಿಹಾರ ಸಂಸ್ಥೆಗಳು ಮತ್ತು ಅವುಗಳ ಲಕ್ಷಣಗಳು ಕೆಳಕಂಡಂತಿವೆ.

ಜಿಲ್ಲಾ ಗ್ರಾಹಕರ ದೂರುಗಳ ಪರಿಹಾರ ಸಂಸ್ಥೆ

ಜಿಲ್ಲಾ ವೇದಿಕೆಯನ್ನು ಜಿಲ್ಲೆಯಲ್ಲೂ ಗ್ರಾಹಕರ ಹಿತರಕ್ಷಣಾ ಕಾಯ್ದೆ ೧೯೮೬ ರ ಅನ್ವಯ ಸ್ಥಾಪಿಸಲಾಗಿದೆ. ಮತ್ತು ರಾಜ್ಯ ಸರ್ಕಾರ ಇಚ್ಚಿಸಿದಲ್ಲಿ ಹೆಚ್ಚುವರಿ ಜಿಲ್ಲಾ ವೇದಿಕೆಗಳನ್ನು ಪ್ರತಿ ಜಿಲ್ಲೆಯಲ್ಲಿ ಸ್ಥಾಪಿಸಬಹುದಾಗಿದೆ. ಜಿಲ್ಲಾ ವೇದಿಕೆಯ ಲಕ್ಷಣಗಳು ಕೆಳಕಂಡಂತಿವೆ.

ಸಂಯೋಜನೆ

ಜಿಲ್ಲಾ ವೇದಿಕೆಯ ಮೂರು ವ್ಯಕ್ತಿಗಳಿಂದ ಕೂಡಿದ್ದು ಅದರಲ್ಲಿ ಒಬ್ಬರು ಅಧ್ಯಕ್ಷರು ಹಾಗೂ ಇಬ್ಬರು ಸದಸ್ಯರಿರುತ್ತಾರೆ. ಇವರಲ್ಲಿ ಒಬ್ಬರು ಮಹಿಳಾ ಸದಸ್ಯರಿರಬೇಕು. ಇವರನ್ನು ರಾಜ್ಯ ಸರ್ಕಾರವು ಐದು ವರ್ಷಗಳ ಅವಧಿಗೆ ನೇಮಕ ಮಾಡುತ್ತಾರೆ.

ವಿದ್ಯಾರ್ಹತೆ

ಜಿಲ್ಲಾ ವೇದಿಕೆಯ ಅಧ್ಯಕ್ಷರು ಜಿಲ್ಲಾ ನ್ಯಾಯಾಧೀಶರಾಗಲು ಅಗತ್ಯವಾದ ವಿದ್ಯಾರ್ಹತೆಯನ್ನು ಹೊಂದಿರಬೇಕು. ಸದಸ್ಯರು ಪಧವೀಧರರಾಗಿದ್ದು ಶಿಕ್ಷಣ, ವ್ಯವಹಾರ, ವಾಣಿಜ್ಯ ಕ್ಷೇತ್ರದಲ್ಲಿ ಪರಿಣಿತಿಯನ್ನು ಹೊಂದಿದ ವ್ಯಕ್ತಿಗಳಾಗಿರಬೇಕು.

ಅಧಿಕಾರ

ಜಿಲ್ಲಾ ವೇದಿಕೆಯು ನಾಗರೀಕ ನ್ಯಾಯಾಲಯ (ಸಿವಿಲ್ ಕೋರ್ಟ್)ದ ಅಧಿಕಾರವನ್ನು ಹೊಂದಿದ್ದು ಯಾವುದೇ ದೂರನ್ನು ಸ್ವೀಕರಿಸಿ ವಿಚಾರಣೆಗೊಳಪಡಿಸುವ ಸಂಧರ್ಭದಲ್ಲಿ ನಿರ್ವಹಿಸಬೇಕಾದ ಎಲ್ಲಾ ಅಧಿಕಾರಗಳನ್ನು ಹೊಂದಿದೆ.

ವ್ಯಾಪ್ತಿ

ಜಿಲ್ಲಾ ವೇದಿಕೆಯು ಸರಕು ಅಥವಾ ಸೇವೆಗಳ ಮೌಲ್ಯ ಹಾಗೂ ಕೋರಲಾಗಿರುವ ಪರಿಹಾರದ ಮೊತ್ತ ರೂ.೨೦ ಲಕ್ಷ ಮೀರಿದ ದೂರುಗಳನ್ನು ಸ್ವೀಕರಿಸಿ ವಿಚಾರಣೆಗೊಳಪಡಿಸುವ ವ್ಯಾಪ್ತಿಯನ್ನು ಹೊಂದಿದೆ.

ದೂರು ನಿವಾರಣೆ ನಡವಳಿಕೆಗಳು

ದೂರನ್ನು ಸ್ವೀಕರಿಸಿದ ನಂತರ ವೇದಿಕೆಯು ಎದುರು ಕಕ್ಷಿದಾರನಿಗೆ ಸೂಚನೆ (ನೋಟೀಸು ) ನೀಡುವುದರ ಜೊತೆಗೆ ಅಗತ್ಯವಿದ್ದಲ್ಲಿ ದೂರಿನಲ್ಲಿರುವ ನ್ಯೂನತೆಯನ್ನು ದೃಢೀಕರಿಸುವ ಉದ್ದೇಶದಿಂದ ಮಾದರಿಯನ್ನು ಪ್ರಯೋಗಾಲಯಕ್ಕೆ ವಿಶ್ಲೇಷಣೆಗಾಗಿ ಕಳುಹಿಸಬಹುದು. ಎದುರು ಕಕ್ಷಿದಾರನು ಮಾರಾಟಗಾರ, ವಿತರಕ ಅಥವಾ ಉತ್ಪಾದಕನಾಗಿರಬಹುದು.

ಪರಿಹಾರ

ಪ್ರಯೋಗಾಲಯದ ವರದಿಯ ಆಧಾರದ ಮೇಲೆ ಸರಕುಗಳಲ್ಲಿರುವ ದೋಷಗಳು ದೃಢೀಕರಿಸಲ್ಪಟ್ಟಲ್ಲಿ ಅಥವಾ ಅನುಚಿತ ವ್ಯಾಪಾರಿ ಪದ್ದತಿಗಳನ್ನು ಅನುಸರಿಸಲಾಗಿದೆಯೆಂದು ವೇದಿಕೆಗೆ ಮನವರಿಕೆಯಾದಲ್ಲಿ ಎದುರು ಕಕ್ಷಿದಾರನಿಗೆ ಕೆಳಕಂಡಂತೆ ಆದೇಶಿಸಬಹುದು.

೧. ಸರಕಿನಲ್ಲಿರುವ ನ್ಯೂನತೆಯನ್ನು ನಿವಾರಿಸುವಂತೆ

೨. ಬದಲಿ ಸರಕನ್ನು ನೀಡುವಂತೆ

೩. ದೂರುದಾರ ಪಾವತಿಸಿರುವ ಸರಕಿನ ಮೌಲ್ಯವನ್ನು ಹಿಂದಿರುಗಿಸುವಂತೆ

೪. ಗ್ರಾಹಕನಿಗಿರುವ ನಷ್ಟವನ್ನು ತುಂಬಿಸಿಕೊಡುವಂತೆ ಅಥವಾ

೫. ಅನುಚಿತ ವ್ಯಾಪಾರಿ ಪದ್ದತಿಗಳನ್ನು ನಿಲ್ಲಿಸುವಂತೆ.

ಮೇಲ್ಮನವಿ

ಜಿಲ್ಲಾ ನ್ಯಾಯಾಲಯವು ನೀಡಿರುವ ಆದೇಶವು ಯಾವುದೇ ಕಕ್ಷಿದಾರನಿಗೆ ತೃಪ್ತಿಕರವಾಗದಿದ್ದಲ್ಲಿ ಜಿಲ್ಲಾ ವೇದಿಕೆಯ ಆದೇಶವಾದ ೩೦ ದಿನಗಳೊಳಗಾಗಿ ರಾಜ್ಯ ಸಮಿತಿಗೆ ಮೇಲ್ಮನವಿ ಸಲ್ಲಿಸಬಹುದು.

ರಾಜ್ಯ ಗ್ರಾಹಕರ ದೂರುಗಳ ಪರಿಹಾರ ಸಂಸ್ಥೆ.

೧. ಗ್ರಾಹಕರ ಹಿತಾರಕ್ಷಣಾ ಕಾಯಿದೆ, ೧೯೮೬ ರ ಪ್ರಕಾರ ಅನ್ವಯ ಸರ್ಕಾರವು ರಾಜ್ಯದ ರಾಜಧಾನಿಯಲ್ಲಿ ಆಯಾ ರಾಜ್ಯಕ್ಕೆ ಸೀಮಿತವಾಗಿ ಈ ಸಮಿತಿಯಲ್ಲಿ ರಚಿಸಿದೆ.ರಾಜ್ಯ ಸಮಿತಿಯ ಲಕ್ಷಣಗಳು ಕೆಳಕಂಡಂತಿವೆ.

ಸಂಯೋಜನೆ

ರಾಜ್ಯ ಸಮಿತಿಯು ಮೂರು ವ್ಯಕ್ತಿಗಳಿಂದ ಕೂಡಿದ್ದು ಅದರಲ್ಲಿ ಒಬ್ಬರು ಅಧ್ಯಕ್ಷರು ಹಾಗೂ ಇಬ್ಬರು ಸದಸ್ಯರಿರುತ್ತಾರೆ. ಇವರಲ್ಲಿ ಒಬ್ಬರು ಮಹಿಳಾ ಸದಸ್ಯರಿರಬೇಕು. ಇವರನ್ನು ರಾಜ್ಯ ಸರ್ಕಾರವು ಐದು ವರ್ಷಗಳ ಅವಧಿಗೆ ನೇಮಕ ಮಾಡುತ್ತದೆ.

ವಿದ್ಯಾರ್ಹತೆ

ರಾಜ್ಯ ಸಮಿತಿಯ ಅಧ್ಯಕ್ಷರು ಉಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳಿಗೆ ಅಗತ್ಯವಾದ ವಿದ್ಯಾರ್ಹತೆಯನ್ನು ಹೊಂದಿರಬೇಕು.ಸದಸ್ಯರು ಪಧವೀಧರರಾಗಿದ್ದು, ಅರ್ಥಶಾಸ್ತ್ರ, ವಾಣಿಜ್ಯಶಾಸ್ತ್ರ, ಕಾನೂನು, ಲೆಕ್ಕಶಾಸ್ತ್ರ, ರಾಜ್ಯಶಾಸ್ತ್ರ, ಸಾರ್ವಜನಿಕ ವ್ಯವಹಾರ ಮತ್ತು ಆಡಳಿತ ಜ್ಞಾನ ಹಾಗೂ ಅನುಭವವನ್ನು ಹೊಂದಿರಬೇಕು. ಹಾಗೂ ಯಾವುದೇ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ಸಾಮರ್ಥ್ಯವನ್ನು ಹೊಂದಿರಬೇಕು.

ವ್ಯಾಪ್ತಿ

ರಾಜ್ಯ ಸಮಿತಿಯು ಸರಕು ಅಥವಾ ಸೇವೆಗಳ ಮೌಲ್ಯ ಹಾಗೂ ಕೋರಲಾಗಿರುವ ಪರಿಹಾರದ ಮೊತ್ತ ರೂ.೨೦ ಲಕ್ಷಕ್ಕಿಂತ ಹೆಚ್ಚಾಗಿರುವ, ಆದರೆ ಒಂದು ಕೋಟಿಗಿಂತ ಕಡಿಮೆ ಇರುವ ದೂರುಗಳನ್ನು ಸ್ವೀಕರಿಸಿ ವಿಚಾರಣೆಗೊಳಪಡಿಸುವ ಮತ್ತು ಜಿಲ್ಲಾ ವೇದಿಕೆಗಳ ಆದೇಶದ ವಿರುದ್ಧ ಮೇಲ್ಮನವಿಯನ್ನು ಸ್ವೀಕರಿಸಿ ತೀರ್ಮಾನಿಸುವ ವ್ಯಾಪ್ತಿಯನ್ನು ಹೊಂದಿದೆ.

ದೂರು ನಿವಾರಣೆ ನಡವಳಿಕೆಗಳು

ದೂರನ್ನು ಸ್ವೀಕರಿಸಿದ ನಂತರ ರಾಜ್ಯ ಸಮಿತಿಯು ಎದುರು ಕಕ್ಷಿದಾರನಿಗೆ ಸೂಚನೆ (ನೋಟೀಸು ) ನೀಡುವುದರ ಜೊತೆಗೆ ಅಗತ್ಯವಿದ್ದಲ್ಲಿ ದೂರಿನಲ್ಲಿರುವ ನ್ಯೂನತೆಯನ್ನು ದೃಢೀಕರಿಸುವ ಉದ್ದೇಶದಿಂದ ಮಾದರಿಯನ್ನು ಪ್ರಯೋಗಾಲಯಕ್ಕೆ ವಿಶ್ಲೇಷಣೆಗಾಗಿ ಕಳುಹಿಸಬಹುದು..ಎದುರು ಕಕ್ಷಿದಾರನು ಮಾರಾಟಗಾರ, ವಿತರಕ ಅಥವಾ ಉತ್ಪಾದಕನಾಗಿರಬಹುದು.

ಪರಿಹಾರ

ಪ್ರಯೋಗಾಲಯದ ವರದಿಯ ಆಧಾರದ ಮೇಲೆ ಸರಕುಗಳಲ್ಲಿರುವ ದೋಷಗಳು ದೃಢೀಕರಿಸಲ್ಪಟ್ಟಲ್ಲಿ ಅಥವಾ ಅನುಚಿತ ವ್ಯಾಪಾರಿ ಪದ್ದತಿಗಳನ್ನು ಅನುಸರಿಸಲಾಗಿದೆಯೆಂದು ಸಮಿತಿಗೆ ಮನವರಿಕೆಯಾದಲ್ಲಿ ಎದುರು ಕಕ್ಷಿದಾರನಿಗೆ ಕಳಕಂಡಂತೆ ಆದೇಶಿಸಬಹುದು.

೧. ಸರಕಿನಲ್ಲಿರುವ ನ್ಯೂನತೆಯನ್ನು ನಿವಾರಿಸುವಂತೆ

೨. ಬದಲಿ ಸರಕನ್ನು ನೀಡುವಂತೆ

೩. ದೂರುದಾರ ಪಾವತಿಸಿರುವ ಸರಕಿನ ಮೌಲ್ಯವನ್ನು ಹಿಂದಿರುಗಿಸುವಂತೆ

೪. ಗ್ರಾಹಕನಿಗಿರುವ ನಷ್ಟವನ್ನು ತುಂಬಿಸಿಕೊಡುವಂತೆ ಅಥವಾ

೫. ಅನುಚಿತ ವ್ಯಾಪಾರಿ ಪದ್ದತಿಗಳನ್ನು ನಿಲ್ಲಿಸುವಂತೆ.

ಮೇಲ್ಮನವಿ

ರಾಜ್ಯ ಸಮಿತಿಯು ನೀಡಿರುವ ಆದೇಶವು ಯಾವುದೇ ಕಕ್ಷಿದಾರನಿಗೆ ತೃಪ್ತಿಕರವಾಗದಿದ್ದಲ್ಲಿ ಜಿಲ್ಲಾ ವೇದಿಕೆಯ ಆದೇಶವಾದ ೩೦ ದಿನಗಳೊಳಗಾಗಿ ರಾಷ್ಟ್ರ ಸಮಿತಿಗೆ ಮೇಲ್ಮನವಿ ಸಲ್ಲಿಸಬಹುದು.

ರಾಷ್ಟ್ರೀಯ ಗ್ರಾಹಕರ ವಿವಾದಗಳ ಪರಿಹಾರ ಸಂಸ್ಥೆ

ಗ್ರಾಹಕರ ಹಿತಾರಕ್ಷಣಾ ಕಾಯಿದೆ, ೧೯೮೬ ರ ಪ್ರಕಾರ ಅನ್ವಯ ಕೇಂದ್ರ ಸರ್ಕಾರವು ರಾಷ್ಟದ ರಾಜಧಾನಿಯಲ್ಲಿ ಸಂಪೂರ್ಣ ರಾಷ್ಟ್ರಕ್ಕೆ ಅನ್ವಯಿಸುವಂತೆ ಈ ಸಮಿತಿಯಲ್ಲಿ ರಚಿಸಿದೆ. ಇದರ ಲಕ್ಷಣಗಳು ಕೆಳಕಂಡಂತಿವೆ.

ಸಂಯೋಜನೆ

ರಾಷ್ಟ್ರ ಸಮಿತಿಯು ಐದು ವ್ಯಕ್ತಿಗಳಿಂದ ಕೂಡಿದ್ದು ಅದರಲ್ಲಿ ಒಬ್ಬರು ಅಧ್ಯಕ್ಷರು ಹಾಗೂ ಉಳಿದ ನಾಲ್ಕು ಜನ ಸದಸ್ಯರನ್ನು ಹೊಂದಿರುತ್ತದೆ. ಇವರಲ್ಲಿ ಒಬ್ಬರು ಮಹಿಳಾ ಸದಸ್ಯರಿರಬೇಕು.ಇವರಗಳನ್ನು ರಾಜ್ಯ ಸರ್ಕಾರವು ಐದು ವರ್ಷಗಳ ಅವಧಿಗೆ ನೇಮಕ ಮಾಡುತ್ತದೆ.

ವಿದ್ಯಾರ್ಹತೆ

ರಾಷ್ಟ್ರ ಸಮಿತಿಯ ಅಧ್ಯಕ್ಷರು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಿಗೆ ಅಗತ್ಯವಾದ ವಿದ್ಯಾರ್ಹತೆಯನ್ನು ಹೊಂದಿರಬೇಕು.ಸದಸ್ಯರು ಪಧವೀಧರರಾಗಿದ್ದು, ಅರ್ಥಶಾಸ್ತ್ರವಾಣಿಜ್ಯಶಾಸ್ತ್ರ, ಕಾನೂನು, ಲೆಕ್ಕಶಾಸ್ತ್ರರಾಜ್ಯಶಾಸ್ತ್ರಸಾರ್ವಜನಿಕವ್ಯವಹಾರ ಮತ್ತು ಆಡಳಿತ ಜ್ಞಾನ ಹಾಗೂ ಅನುಭವವನ್ನು ಹೊಂದಿರಬೇಕು. ಹಾಗೂ ಯಾವುದೇ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ಸಾಮರ್ಥ್ಯವನ್ನು ಹೊಂದಿರಬೇಕು.

ವ್ಯಾಪ್ತಿ

ರಾಷ್ಟ್ರ ಸಮಿತಿಯು ಸರಕು ಅಥವಾ ಸೇವೆಗಳ ಮೌಲ್ಯ ಹಾಗೂ ಕೋರಲಾಗಿರುವ ಪರಿಹಾರದ ಮೊತ್ತ ರೂ.ಒಂದು ಕೋಟಿಗಿಂತ ಹೆಚ್ಚಾಗಿರುವ ದೂರುಗಳನ್ನು ಸ್ವೀಕರಿಸಿ ವಿಚಾರಣೆಗೊಳಪಡಿಸುವ ಮತ್ತು ರಾಜ್ಯ ಸಮಿತಿಗಳ ಆದೇಶದ ವಿರುದ್ಧ ಮೇಲ್ಮನವಿಯನ್ನು ಸ್ವೀಕರಿಸಿ ತೀರ್ಮಾನಿಸುವ ವ್ಯಾಪ್ತಿಯನ್ನು ಹೊಂದಿದೆ.

ದೂರು ನಿವಾರಣೆ ನಡವಳಿಕೆಗಳು

ದೂರನ್ನು ಸ್ವೀಕರಿಸಿದ ನಂತರ ರಾಷ್ಟ್ರ ಸಮಿತಿಯು ಎದುರು ಕಕ್ಷಿದಾರನಿಗೆ ಸೂಚನೆ (ನೋಟೀಸು ) ನೀಡುವುದರ ಜೊತೆಗೆ ಅಗತ್ಯವಿದ್ದಲ್ಲಿ ದೂರಿನಲ್ಲಿರುವ ನ್ಯೂನತೆಯನ್ನು ದೃಢೀಕರಿಸುವ ಉದ್ದೇಶದಿಂದ ಮಾದರಿಯನ್ನು ಪ್ರಯೋಗಾಲಯಕ್ಕೆ ವಿಶ್ಲೇಷಣೆಗಾಗಿ ಕಳುಹಿಸಬಹುದು..ಎದುರು ಕಕ್ಷಿದಾರನು ಮಾರಾಟಗಾರ, ವಿತರಕ ಅಥವಾ ಉತ್ಪಾದಕನಾಗಿರಬಹುದು.

ಪರಿಹಾರ

ಪ್ರಯೋಗಾಲಯದ ವರದಿಯ ಆಧಾರದ ಮೇಲೆ ಸರಕುಗಳಲ್ಲಿರುವ ದೋಷಗಳು ದೃಢೀಕರಿಸಲ್ಪಟ್ಟಲ್ಲಿ ಅಥವಾ ಅನುಚಿತ ವ್ಯಾಪಾರಿ ಪದ್ದತಿಗಳನ್ನು ಅನುಸರಿಸಲಾಗಿದೆಯೆಂದು ಸಮಿತಿಗೆ ಮನವರಿಕೆಯಾದಲ್ಲಿ ಎದುರು ಕಕ್ಷಿದಾರನಿಗೆ ಕಳಕಂಡಂತೆ ಆದೇಶಿಸಬಹುದು.

೧. ಸರಕಿನಲ್ಲಿರುವ ನ್ಯೂನತೆಯನ್ನು ನಿವಾರಿಸುವಂತೆ

೨. ಬದಲಿ ಸರಕನ್ನು ನೀಡುವಂತೆ

೩. ದೂರುದಾರ ಪಾವತಿಸಿರುವ ಸರಕಿನ ಮೌಲ್ಯವನ್ನು ಹಿಂದಿರುಗಿಸುವಂತೆ

೪. ಗ್ರಾಹಕನಿಗಿರುವ ನಷ್ಟವನ್ನು ತುಂಬಿಸಿಕೊಡುವಂತೆ ಅಥವಾ

೫. ಅನುಚಿತ ವ್ಯಾಪಾರಿ ಪದ್ದತಿಗಳನ್ನು ನಿಲ್ಲಿಸುವಂತೆ.

ಮೇಲ್ಮನವಿ

ರಾಷ್ಟ್ರ ಸಮಿತಿಯು ನೀಡಿರುವ ಆದೇಶವು ಯಾವುದೇ ಕಕ್ಷಿದಾರನಿಗೆ ತೃಪ್ತಿಕರವಾಗದಿದ್ದಲ್ಲಿ ಜಿಲ್ಲಾ ವೇದಿಕೆಯ ಆದೇಶವಾದ ೩೦ ದಿನಗಳೊಳಗಾಗಿ ಸರ್ವೋಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದು.

ಗ್ರಾಹಕನಿಗೆ ದೊರೆಯುವ ಪರಿಹಾರಗಳು

ಗ್ರಾಹಕರ ಹಿತಾರಕ್ಷಣಾ ಕಾಯಿದೆ, ೧೯೮೬ ರ ಪ್ರಕಾರ ಶೋಷಿತ ಗ್ರಾಹಕನಿಗೆ ಕೆಳಕಂಡ ಪರಿಹಾರಗಳು ದೊರೆಯುತ್ತವೆ.

೧. ಸರಕಿನಲ್ಲಿರುವ ನ್ಯೂನತೆಯನ್ನು ನಿವಾರಿಸಿಕೋಳ್ಳುವ

೨. ಬದಲಿ ಸರಕನ್ನು ನೀಡುವಂತೆ

೩. ಸರಕಿನ ಮೌಲ್ಯವನ್ನು ವಾಪಸ್ಸು ಪಡೆಯುವ

೪. ನಷ್ಟ ಪರಿಹಾರವನ್ನು ಪಡೆಯುವ ಅಥವಾ

೫. ಅನುಚಿತ ವ್ಯಾಪಾರಿ ಪದ್ದತಿಗಳನ್ನು ನಿಲ್ಲಿಸುವ

೬. ಹಾನಿಕಾರಕ ಸರಕುಗಳನ್ನು ಮಾರಾಟ ಮಾಡುದಂತೆ ನಿರ್ಬಂಧ ಹೇರುವ

೭. ಹಾನಿಕಾರಕ ಸರಕುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಆದೇಶ.