ಶುಕ್ರವಾರ, ಜನವರಿ 4, 2019

ಭಾರತೀಯ ನೌಕಾ ಅಕಾಡೆಮಿ


ಭಾರತೀಯ ನೌಕಾ ಅಕಾಡೆಮಿ

ಎನ್ಎವಿಎಸಿ ಎಂದೂ ಸಹ ಕರೆಯಲಾಗುವ ಭಾರತೀಯ ನೌಕಾ ಅಕಾಡೆಮಿ ಎಳಿಯಾಲಾ (ಐಎನ್ಎ) (ಏಷ್ಯಾದ ಅತೀ ದೊಡ್ಡ ನೌಕಾ ಅಕಾಡೆಮಿ) ಯು ಭಾರತೀಯ ನೌಕಾಪಡೆಯ ಸುಸಜ್ಜಿತ ನೌಕಾ ತರಬೇತಿ ಕೇಂದ್ರವಾಗಿದೆ ಮತ್ತು ಇದು ದಕ್ಷಿಣ ಭಾರತದ ಕೇರಳ ರಾಜ್ಯದ ಕಣ್ಣೂರು (ಕಣ್ಣಾನೂರು) ಜಿಲ್ಲೆಯಲ್ಲಿದೆ. ಡಿಲ್ಲಿ ಪರ್ವತಗಳ ಶ್ರೇಣಿಗಳ ನಡುವೆ, ನಿರ್ಮಲವಾದ ಕವ್ವಾಯಿ ಹಿನ್ನೀರು ಮತ್ತು ವೈಭವಯುಕ್ತ ಅರೇಬಿಯನ್ ಸಮುದ್ರದ ತಟದಲ್ಲಿ ನೆಲೆಸಿರುವ ಎನ್ಎವಿಎಸಿ ( ನೌಕಾ ಅಕಾಡೆಮಿಯ ಕಿರುನಾಮ)ವು ತನ್ನ ಆಕರ್ಷಕವಾದ ಮತ್ತು ನೆಮ್ಮದಿಯ ಪರಿಸರದಲ್ಲಿ ತರಬೇತಿಗಾಗಿ ಸಹಜ ಸುಂದರವಾದ ವಾತಾವರಣವನ್ನು ಒದಗಿಸುತ್ತದೆ. ಇಲ್ಲಿ ಭಾರತೀಯ ನೌಕಾ ಸೇನೆ ಮತ್ತು ಭಾರತೀಯ ಕರಾವಳಿ ರಕ್ಷಣಾ ಪಡೆಗೆ ಸೇರಲ್ಪಡುವ ಎಲ್ಲಾ ಅಧಿಕಾರಿಗಳಿಗೆ ವಿವಿಧ ವಿಭಾಗಗಳಲ್ಲಿ ಮೂಲಭೂತ ತರಬೇತಿಯನ್ನು ನೀಡಲಾಗುತ್ತದೆ. ಐಎನ್ಎ ಕಾರ್ಯನಿರ್ವಹಿಸಲು ನಿರ್ವಹಣಾ ಮತ್ತು ಸೈನ್ಯ ವ್ಯವಸ್ಥಾಪನಾ ಕಾರ್ಯಗಳಿಗೆ ಐಎನ್ಎಸ್ ಜಾಮೋರಿನ್ ಎನ್ನುವುದು ಮೂಲ ನೆಲೆಯ ಹಡಗು ಆಗಿರುತ್ತದೆ.

ಭಾರತೀಯ ನೌಕಾ ಅಕಾಡೆಮಿ (INA)ಸ್ಥಾಪನೆ೮ನೇ ಜನವರಿ ೨೦೦೯ಪ್ರಕಾರMilitary academies in Indiaಸ್ಥಳEzhimalaKeralaIndiaಆವರಣNaval base, ೨೫೦೦ acres

ಪ್ರಾಚೀನ ಮೂಷಿಕ ರಾಜರುಗಳ ರಾಜಧಾನಿಯಾಗಿದ್ದ ಈ ಭೂಶಿರದಲ್ಲಿ ಸುಮಾರು 2,500 acres (10 km2) ಪ್ರದೇಶದಲ್ಲಿ ಅಕಾಡೆಮಿಯು ವ್ಯಾಪಿಸಿದೆ. ಇದು ಪ್ರಾಚೀನ ಕೇರಳದಲ್ಲಿ ಪ್ರವರ್ಧಮಾನಪಡೆದ ಬಂದರು ಮತ್ತು ವ್ಯಾಪಾರದ ಕೇಂದ್ರವಾಗಿತ್ತು, ಹಾಗೂ ೧೧ ನೇ ಶತಮಾನ ಎಡಿ ಸಂದರ್ಭದಲ್ಲಿ ನಡೆದ ಚೋಳ-ಚೇರ ಯುದ್ಧದ ಸಂದರ್ಭದಲ್ಲಿ ಪ್ರಮುಖ ಯುದ್ಧಭೂಮಿಯಾಗಿತ್ತು.

'ಏಳಿಮಲ' ಎಂಬ ಹೆಸರು ಈ ಪ್ರದೇಶದ ಆಕಾಶದೆತ್ತರಕ್ಕೆ ವ್ಯಾಪಿಸಿರುವ ಏಳು ಪರ್ವತಗಳು ಎಂಬುದರಿಂದ ಉದ್ಭವವಾಗಿದೆ ಎಂದು ನಂಬಲಾಗಿದೆ, (ಮಲೆಯಾಳಂನಲ್ಲಿ ಏಳು ಅಂದರೆ ಏಳು ಮತ್ತು ಮಲಅಂದರೆ ಪರ್ವತ ). ಈ ಸ್ಥಳವು 'ಏಳಿಮಲೈ' ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತಿತ್ತು, ಇದರರ್ಥ 'ಇಲಿ ಪರ್ವತ' (ಮಲೆಯಾಳಂನಲ್ಲಿ 'ಎಲಿ' ಎಂದರೆ ಇಲಿ). ಮತ್ತೊಂದು ಐತಿಹ್ಯದ ಪ್ರಕಾರ ಈ ಹೆಸರು ಸೌಂದರ್ಯದ ಭೂಮಿ ಎಂಬ ಅರ್ಥವನ್ನು ನೀಡುವ 'ಎಳಿಲ್ ಮಲೈ' ಎಂಬ ಹೆಸರಿನಿಂದ ಉದ್ಭವವಾಗಿದೆ (ಏಳಿಲ್ ಅಂದರೆ ಸೌಂದರ್ಯ ). ಜನಪದ ನಂಬಿಕೆಗಳ ಪ್ರಕಾರ, ರಾಮಾಯಣದ ಯುದ್ಧದ ಸಂದರ್ಭದಲ್ಲಿ ಲಕ್ಷ್ಮಣನು ತೀವ್ರವಾಗಿ ಗಾಯಗೊಂಡು ಮೂರ್ಛೆಯಲ್ಲಿದ್ದಾಗ, ಅವನ ಚಿಕಿತ್ಸೆಗಾಗಿ ಲಂಕೆಗೆ ಹನುಮಂತನು ಮೃತ ಸಂಜೀವಿನಿ ಮತ್ತು ಇತರ ಗಿಡಮೂಲಿಕೆಗಳುಳ್ಳ ಪರ್ವತವನ್ನು ಕೊಂಡೊಯ್ಯುವಾಗ ಬಿದ್ದ 'ರಿಷಭಾದ್ರಿ' ಪರ್ವತದ ಭಾಗಗಳೇ ಈ ಏಳು ಪರ್ವತಗಳಾಗಿವೆ. ಇದನ್ನು ಸಮರ್ಥಿಸುವಂತೆ, ಈ ಪ್ರದೇಶದಲ್ಲಿ ಅಪರೂಪದ ಗಿಡಮೂಲಿಕೆಯ ಸಸ್ಯಗಳಿವೆ.

ನೌಕಾ ಅಕಾಡೆಮಿಯ ಮೂಲ ನೆಲೆಯ ಹಡಗು ಆದ ಐಎನ್ಎಸ್ ಜಾಮೋರಿನ್‌ಗೆ ಹೆಸರಾಂತ ಕುಂಜಾಲಿ ಮಾರಕ್ಕಾರ್ ಅವರುಗಳ ಮೇಲುಸ್ತುವಾರಿಯಲ್ಲಿದ್ದ ಬಲಶಾಲಿ ಯುದ್ಧಹಡಗುಗಳನ್ನು ಹೊಂದಿದ್ದ ಕೋಯಿಕ್ಕೋಡ್‌ನ ಜಾಮೋರಿನ್‌ಗಳ ಹೆಸರಿಡಲಾಗಿದೆ. ವಟಕರದ ಬಳಿಯಿರುವ ಕುಂಜಾಲಿ ಮಾರಕ್ಕಾರ್ ಅವರ ಪೂರ್ವಜರ ಮನೆಯಿರುವ ಇರಿಂಗಾಲ್ ಬಳಿ ನೌಕಾಪಡೆಯು ಸ್ಮಾರಕವೊಂದನ್ನು ಸಹ ನಿರ್ಮಾಣ ಮಾಡಿದೆ.

ಇತಿಹಾಸಸಂಪಾದಿಸಿ

೧೯೫೦ ರ ಮೊದಲಿನಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ(ಎನ್‌ಡಿಎ) ಅನ್ನು ಸ್ಥಾಪಿಸುವುದಕ್ಕೂ ಮೊದಲು, 'ಸಾಮಾನ್ಯ' ಪ್ರವೇಶ ಅಧಿಕಾರಿ ಕೆಡೆಟ್‌ಗಳು ರಾಯಲ್ ಆರ್ಮಿಯೊಂದಿಗೆ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನಾಲ್ಕು ವರ್ಷಗಳ ತರಬೇತಿಯನ್ನು ಪೂರ್ಣಗೊಳಿಸಿ ಭಾರತಕ್ಕೆ ಸಬ್ ಲೆಫ್ಟಿನೆಂಟ್‌ಗಳಾಗಿ ಹಿಂತಿರುಗುತ್ತಿದ್ದರು. ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್‌ಡಿಎ) ನಿಂದ ತರಬೇತಿಯನ್ನು ಪಡೆದು ಹೊರಬರುವ ನೌಕಾ ಕೆಡೆಟ್‌ಗಳು ಸೂಕ್ತ ಅಗತ್ಯತೆಗಳನ್ನು ಪೂರ್ಣಗೊಳಿಸುತ್ತಿಲ್ಲ ಎಂಬುದಾಗಿ ೧೯೬೦ ರ ಮೊದಲಿನಲ್ಲಿ ಕಂಡುಕೊಳ್ಳಲಾಯಿತು ಮತ್ತು ಈ ಕಾರಣದಿಂದ ಕೊಚ್ಚಿನ್‌ನಲ್ಲಿ ಅಕಾಡೆಮಿಯೊಂದನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ಈ ಪ್ರಕಾರವಾಗಿ ೧೯೬೯ ರ ಜನವರಿಯಲ್ಲಿ ನೌಕಾದಳದ ಅಕಾಡೆಮಿಯೊಂದನ್ನು ಸ್ಥಾಪಿಸಲಾಯಿತು ಮತ್ತು ಅಂತಿಮವಾಗಿ ಅದನ್ನು ಐಎನ್ಎಸ್ ಮಾಂಡೋವಿ (ಗೋವಾ)ಕ್ಕೆ ೧೯೮೬ ರಲ್ಲಿ ವರ್ಗಾಯಿಸಲಾಯಿತು. ಹೆಚ್ಚುತ್ತಿರುವ ತರಬೇತಿಯ ಕಾರ್ಯಭಾರವನ್ನು ಪೂರೈಸಲು ಹೊಸ ಖಾಯಂ ನೌಕಾ ಅಕಾಡೆಮಿಯನ್ನು ಸ್ಥಾಪಿಸಲು ಮಂಜೂರಾತಿಯನ್ನು ಪಡೆದುಕೊಳ್ಳಲು ನಿರ್ಧರಿಸಲಾಯಿತು. ಅದೇ ಪ್ರಕಾರವಾಗಿ, ಕರಾವಳಿ ರಕ್ಷಣಾ ಪಡೆಯವರಿಗೂ ಸಹ ನೌಕಾ ಸೇನೆಯವರೊಂದಿಗೆ ತರಬೇತಿಯನ್ನು ನೀಡಬೇಕಾಗಿತ್ತು.

ಹೊಸ ನೌಕಾ ಅಕಾಡೆಮಿಗಾಗಿ ಕಲ್ಪನಾತ್ಮಕ ಅಗತ್ಯತೆಗಳು ನೌಕಾಪ್ರಾವೀಣ್ಯ ಮತ್ತು ಮಾನವ ಚಲಿತ ನೌಕೆಯ ತರಬೇತಿಗಾಗಿ ಸಮುದ್ರ ಅಥವಾ ಸರೋವರಕ್ಕೆ ಹತ್ತಿರವಿರುವ, ರೈಲು ಮಾರ್ಗದ ತುದಿಯ ಆದರೂ ಪಟ್ಟಣದಿಂದ ದೂರವಿರುವ 100 acres (0.40 km2) ನ ಸ್ಥಳದ 'ಮಹತ್ವಪೂರ್ಣ'ವಾದ ಅಗತ್ಯತೆಗಳಿದ್ದವು. ನೌಕಾ ಬಂದರಿನಿಂದ ಕಡಿಮೆ ದೂರದೊಳಗೆ ಇರುವ ಮತ್ತು ಉಲ್ಲಾಸಕರವಾದ ಮತ್ತು ಮಧ್ಯಮ ಹವಾಗುಣವನ್ನು ಹೊಂದಿರುವ ಸ್ಥಳವು 'ಅಪೇಕ್ಷಣೀಯ"ಅಗತ್ಯತೆಗಳಾಗಿತ್ತು.

ಎಳಿಮಲದ ಆಯ್ಕೆ ಹೊಸ ನೌಕಾದಳದ ಅಕಾಡೆಮಿಗೆ ಪರಿಗಣಿಸಿದ ಸ್ಥಳಗಳೆಂದರೆ, ನೀಲಿಗಿರಿ ಬೆಟ್ಟಗಳಲ್ಲಿರುವ ವೆಲ್ಲಿಂಗ್ಟನ್ ಹತ್ತಿರದ ಅರುವಂಕಾಡು ಮತ್ತು ಪೈಕಾರಾ ಅಣೆಕಟ್ಟು ಸರೋವರ, ಪೂನಾ-ಕೊಲ್ಹಾಪುರ ರಸ್ತೆಯಲ್ಲಿರುವ ಲಾಯ್ಡ್ಸ್ ಅಣೆಕಟ್ಟು (ಭಾಟಘರ್), ಬೆಂಗಳೂರಿನ ಹತ್ತಿರದ ಹಸ್ಸೇರ್‌ಗೇಟ್ ಸರೋವರ, ಸೌರಾಷ್ಟ್ರ ತೀರದ ಪೋರಬಂದರ್, ಮದ್ರಾಸ್ ಹತ್ತಿರದ ಚೆಂಗಲಪೆಟ್ ಮತ್ತು ಕೇರಳ ತೀರದ ಎಳಿಮಲ. ೧೯೭೯ ರಲ್ಲಿ ನೌಕಾದಳದ ಅಕಾಡೆಮಿಯ ಖಾಯಂ ಅಗತ್ಯವನ್ನು ಸರ್ಕಾರವು ಒಪ್ಪಿತು. ಕೇರಳ ಸರ್ಕಾರವು ಉತ್ತರ ಕೇರಳದಲ್ಲಿರುವ ಉತ್ತರ ಕಣ್ಣೂರಿನ (ಕಣ್ಣಾನೂರು), ಎಳಿಮಲದಲ್ಲಿ ನೌಕಾದಳಕ್ಕೆ ೯೬೦ ಹೆಕ್ಟೇರುಗಳಷ್ಟು ಭೂಮಿಯನ್ನು ನೀಡಲು ಮುಂದೆ ಬಂದಿತು. ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು ,ನಿರ್ಮಾಣ ಕಾರ್ಯಕ್ಕೆ ನೀರು, ವಿದ್ಯುತ್, ಸಂಪರ್ಕ ಕಲ್ಪಿಸುವ ರಸ್ತೆಗಳು ಮತ್ತು ಸೇತುವೆಗಳು, ಹಡಗುಗಳ ಚಲನೆಗಾಗಿ ಕವ್ವಾಯಿ ಹಿನ್ನೀರು ನೀರನ್ನು ಅಗಲಗೊಳಿಸುವ ಕಾರ್ಯ (ಮಾನವ ಚಾಲಿತ ಹಡಗುಗಳ ತರಬೇತಿಗಾಗಿ), ಸವಕಳಿಯನ್ನು ತಪ್ಪಿಸಲು ಸಮುದ್ರ ಗೋಡೆಯ ನಿರ್ಮಾಣ, ಹತ್ತಿರದ ಪಯ್ಯನೂರು ರೈಲ್ವೇ ನಿಲ್ದಾಣದ ಅಭಿವೃದ್ಧೀಕರಣ ಹೀಗೆ ಇವೆಲ್ಲಾ ಕಾರ್ಯಗಳನ್ನು ನೌಕಾದಳಕ್ಕೆ ಯಾವುದೇ ವೆಚ್ಚವಿಲ್ಲದೇ ಕೇರಳ ಸರ್ಕಾರವು ಮಾಡಿಕೊಡಲು ಒಪ್ಪಿಗೆ ನೀಡಿತು. ೧೯೮೨ ರಲ್ಲಿ, ಸರ್ಕಾರವು ಎಳಿಮಲ ಬಳಿ ಜಾಗಕ್ಕೆ ಅನುಮೋದನೆ ನೀಡಿತು ಮತ್ತು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಿಕೆ ಮತ್ತು ಸಂತ್ರಸ್ಥರ ಪುನರ್ವಸತಿಯ ಸೌಕರ್ಯಗಳಿಗೆ ಮಧ್ಯಮ ಅವಧಿಯ ಸಾಲವನ್ನು ನೀಡಿತು.

ಪೌರಾಣಿಕ ಸಂಪರ್ಕ ಅರೇಬಿಯನ್ ಸಮುದ್ರದಕ್ಕೆ ಹೊಂದಿಕೊಂಡಂತಿರುವ ಡಿಲ್ಲಿ ಪರ್ವತದೊಂದಿಗಿನ ಎಳಿಮಲದ ಸ್ಥಳದ ಲಕ್ಷಣವು, ಪುರಾತನ ಕಾಲದಿಂದಲೂ ಹಲವಾರು ಪುರಾಣಕಥೆಗಳನ್ನು ರಚಿಸಲು ಸ್ಥಳೀಯ ಜನರಿಗೆ ಪ್ರೇರೇಪಣೆ ನೀಡಿದೆ. ರಾಮಾಯಣ ಸಂಪ್ರದಾಯದೊಂದಿಗೆ ಕೂಡಿಕೊಂಡಿರುವಂತಹುದು ಹೆಚ್ಚು ಜನಪ್ರಿಯವಾಗಿದೆ. ರಾಮ ಮತ್ತು ರಾವಣರ ನಡುವಿನ ಯುದ್ಧದ ಒಂದು ಘಟ್ಟದಲ್ಲಿ, ರಾಮನ ತಮ್ಮ ಲಕ್ಷ್ಮಣನನ್ನು ಒಳಗೊಂಡು ರಾಮನ ಹಲವಾರು ಸೈನಿಕರು ಸಾವನ್ನಪ್ಪುತ್ತಾರೆ. ತಲ್ಲಣಗೊಂಡ ರಾಮನು ವಾನರ ಸೇನೆಯಲ್ಲಿ ಹಿರಿಯನಾದ ಜಾಂಬವಂತನ ಸಲಹೆಯನ್ನು ಕೇಳುತ್ತಾನೆ. ಬಾಣಗಳನ್ನು ತೆಗೆಯಲು, ಗಾಯಗಳನ್ನು ವಾಸಿ ಮಾಡಲು ಮತ್ತು ಹೊಲಿಯಲು ಮತ್ತು ಅಂತಿಮವಾಗಿ ಸತ್ತವರಿಗೆ ಮರುಜೀವ ನೀಡಲು ಹಿಮಾಲಯದಿಂದ ನಾಲ್ಕು ವೈದ್ಯಕೀಯ ಗಿಡಮೂಲಿಕೆಗಳಾದ ಶಳ್ಯ ಕರಣಿ, ವಿಶಾಲ್ಯ ಕರಣಿ, ಸಂಧಾನ ಕರಣಿ ಮತ್ತು ಮೃತ ಸಂಜೀವಿನಿಯನ್ನು ತರಲು ನಿರ್ಧಾರವಾಗುತ್ತದೆ. ಈ ಗಿಡಮೂಲಿಕೆಗಳನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಹನುಮಂತನಿಗೆ ವಹಿಸಲಾಗುತ್ತದೆ ಮತ್ತು ಅವನು ಹಿಮಾಲಯಕ್ಕೆ ತೆರಳಲು ಸಿದ್ಧನಾಗುತ್ತಾನೆ. ಹಿಮಾಲಯವನ್ನು ತಲುಪಿದ ಬಳಿಕ, ಆಯುರ್ವೇದಿಯ ಗಿಡಮೂಲಿಕೆಗಳನ್ನು ಗುರುತಿಸಲು ತನಗೆ ಸಾಧ್ಯವಾಗುವುದಿಲ್ಲ ಎಂದು ಹನುಮಂತನು ಮನಗಾಣುತ್ತಾನೆ. ಆಗ ಅವನು ಮುಂದಿನ ಹಂತವಾಗಿ ಸಂಪೂರ್ಣ ರಿಷಭಾದ್ರಿ ಬೆಟ್ಟವನ್ನೇ ಕಿತ್ತುಗೊಂಡು ಮರಳಿ ಹೊರಡುತ್ತಾನೆ. ದಕ್ಷಿಣಾಭಿಮುಖವಾಗಿ ಹಿಂತಿರುಗುವಾಗ, ಸಮುದ್ರದ ಬಳಿ ಬೆಟ್ಟದ ತುಂಡು ಕೆಳಗೆ ಬೀಳುತ್ತದೆ ಮತ್ತು ಅದೇ ಎಳಿಮಲವಾಗಿದೆ. ಎಳಿಮಲದಲ್ಲಿ ಇಂದಿಗೂ ಸಹ ಅಪರೂಪವಾದ ಆಯುರ್ವೇದಿಯ ಗಿಡಮೂಲಿಕೆಗಳಿವೆ ಎಂದು ಸ್ಥಳೀಯರು ನಂಬಿದ್ದಾರೆ.

ಅಕಾಡೆಮಿಯ ಸ್ಥಾಪನೆ ಅಕಾಡೆಮಿಯ ಶಂಕುಸ್ಥಾಪನೆಯನ್ನು ಅಂದಿನ ಪ್ರಧಾನಮಂತ್ರಿಗಳಾಗಿದ್ದ ದಿವಂಗತ ರಾಜೀವ್ ಗಾಂಧಿಯವರು ೧೯೮೭ ರ ಜನವರಿ ೧೭ ರಂದು ಮಾಡಿದರು. ಅಕಾಡೆಮಿಯ ಮೂಲ ನೆಲೆಯಾದ ಐಎನ್ಎಸ್ ಜಾಮೋರಿನ್ ಅನ್ನು ೨೦೦೫ ರ ಏಪ್ರಿಲ್ ೬ ರಂದು ಆಗಿನ ಕೇರಳದ ಮುಖ್ಯಮಂತ್ರಿಗಳಾಗಿದ್ದ ಒಮನ್ ಚಾಂಡಿಯವರು ಪ್ರಾರಂಭಿಸಿದರು ಮತ್ತು ಈ ಮೂಲಕ ಎಳಿಮಲ ನೌಕಾ ಅಕಾಡೆಮಿ ಯೋಜನೆಯ ಹಂತ I ಪ್ರಾರಂಭವಾಯಿತು. ಪ್ರಾರಂಭಿಕವಾಗಿ ಈ ನೆಲೆಯು ಅಕಾಡೆಮಿಯ ನಿರ್ಮಾಣ ಮತ್ತು ಅದರ ತರಬೇತಿ ಮತ್ತು ಕಾರ್ಯನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಬೆಂಬಲಿಸಿತು. ಶಂಕುಸ್ಥಾಪನೆಯನ್ನು ನೆರವೇರಿಸಿದ ಸುಮಾರು ೨೨ ವರ್ಷಗಳ ಬಳಿಕ, ಭಾರತೀಯ ನೌಕಾ ಅಕಾಡೆಮಿ (ಐಎನ್ಎ), ಎಳಿಮಲ ಉದ್ಘಾಟನೆಗೆ ಸಿದ್ಧವಾಗಿತ್ತು. ೨೦೦೯ ರ ಜನವರಿ ೮ ರಂದು ಭಾರತದ ಪ್ರಧಾನಮಂತ್ರಿಗಳಾದ ಮನಮೋಹನ್ ಸಿಂಗ್ ಅವರು ಅಕಾಡೆಮಿಯನ್ನು ಉದ್ಘಾಟಿಸಿದರು. ೧೯೮೭ ರ ಜನವರಿ ೧೭ರಂದು ಆಗಿನ ಪ್ರಧಾನಿ ರಾಜೀವ್ ಗಾಂಧಿಯವರು ಶಂಕುಸ್ಥಾಪನೆ ಮಾಡಿದ್ದಾಗ ಅವರೊಂದಿಗಿದ್ದ ಈಗಿನ ರಕ್ಷಣಾ ಮಂತ್ರಿಗಳಾದ ಎ.ಕೆ.ಆಂಟನಿಯವರು ಸಹ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಯೋಜನೆಗೆ ಪ್ರಾರಂಭಿಕವಾಗಿ ರೂ ೧೬೬ ಕೋಟಿ ( ರೂ. ೧.೬೬ ಬಿಲಿಯನ್) ವೆಚ್ಚವಾಗುವುದೆಂದು ಅಂದಾಜಿಸಲಾಗಿತ್ತು. ೨೨ ವರ್ಷಗಳ ಬಳಿಕ ಯೋಜನೆಯು ಪೂರ್ಣಗೊಂಡಾಗ ಇದರ ವೆಚ್ಚವು ರೂ ೭೨೧ ಕೋಟಿ (ರೂ.೭.೨೧ ಬಿಲಿಯನ್) ಗೆ ತಲುಪಿತ್ತು.

ಸ್ಥಳಸಂಪಾದಿಸಿ

12°0′40″N 75°13′8″E / 12.01111°N 75.21889°E

ಭಾರತೀಯ ನೌಕಾ ಅಕಾಡೆಮಿ (ಐಎನ್ಎ), ಎಳಿಮಲವು ಭಾರತದ ಪಶ್ಚಿಮ ತೀರದ ಪರ್ಯಾಯ ದ್ವೀಪದಲ್ಲಿ ಕಣ್ಣೂರಿನಿಂದ (ಕಣ್ಣಾನೂರು) ನಿಂದ ೩೫ ಕಿಮೀ ಉತ್ತರಕ್ಕೆ ಮತ್ತು ಮಂಗಳೂರಿನಿಂದ ದಕ್ಷಿಣಕ್ಕೆ ೧೩೫ ಕಿಮೀ ದೂರದಲ್ಲಿ ನೆಲೆಸಿದೆ. ಹತ್ತಿರದ ರೈಲ್ವೇ ನಿಲ್ದಾಣವು ೧೦ ಕಿಮೀ ದೂರದಲ್ಲಿನ ಪಟ್ಟಣವಾದ ಪಯ್ಯನೂರಿನಲ್ಲಿದೆ. ಮಂಗಳೂರಿನಿಂದ ಕಣ್ಣೂರಿನ ನಡುವಿನ ರಾಷ್ಟ್ರೀಯ ಹೆದ್ದಾರಿ ೧೭ ರಲ್ಲಿ ಪಯ್ಯನೂರು ನೆಲೆಸಿದೆ.ಹತ್ತಿರದ ವಿಮಾನ ನಿಲ್ದಾಣವು ಭಾರತೀಯ ನೌಕಾ ಅಕಾಡೆಮಿಯಿಂದು ಸುಮಾರು ೧೪೫ ಕಿಮೀ ದೂರದಲ್ಲಿನ ಮಂಗಳೂರಿನಲ್ಲಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಅಕಾಡೆಮಿಯ ದಕ್ಷಿಣದಲ್ಲಿ ಸುಮಾರು ೧೫೦ ಕಿಮೀ ದೂರದಲ್ಲಿರುವ ಕೋಯಿಕೋಡ್‌ನಲ್ಲಿದೆ.

ಸಂಪರ್ಕಸಂಪಾದಿಸಿ

ಭಾರತೀಯ ನೌಕಾ ಅಕಾಡೆಮಿ (ಐಎನ್ಎ) ಯು ರೈಲು ಮತ್ತು ರಸ್ತೆಯಿಂದ ಉತ್ತಮವಾಗಿ ಸಂಪರ್ಕಿತವಾಗಿದೆ. ಹತ್ತಿರದ ರೈಲ್ವೇ ನಿಲ್ದಾಣವು ನೌಕಾದಳ ನೆಲೆಯಿಂದ ೧೨ ಕಿಮೀ ದೂರದಲ್ಲಿನ ಪಟ್ಟಣವಾದ ಪಯ್ಯನೂರಿನಲ್ಲಿದೆ. ಮಂಗಳೂರಿನಿಂದ ಕಣ್ಣೂರಿನ ನಡುವಿನ ರಾಷ್ಟ್ರೀಯ ಹೆದ್ದಾರಿ ೧೭ ರಲ್ಲಿ ಪಯ್ಯನೂರು ನೆಲೆಸಿದೆ. ಬ್ರಾಡ್‌ಗೇಜ್ ರೈಲ್ವೇ ಮಾರ್ಗವು ಪಯ್ಯನೂರು ಮತ್ತು ಮುಂಬಯಿ ಹಾಗೂ ಪಶ್ಚಿಮ, ಮಧ್ಯ ಮತ್ತು ಉತ್ತರ ಭಾರತದ ಇತರ ಪ್ರಮುಖ ನಗರಗಳನ್ನು ಕೊಂಕಣ ರೈಲ್ವೇ ಮುಖಾಂತರ ಸಂಪರ್ಕಿಸುತ್ತದೆ. ಬ್ರಾಡ್‌ಗೇಜ್ ರೈಲ್ವೇ ಜಾಲವು ಪಯ್ಯನೂರಿನಿಂದ ಚೆನ್ನೈ ಅನ್ನು ಮತ್ತು ಪೂರ್ವ ಭಾರತದ (ಚೆನ್ನೈ ಮೂಲಕ) ಮತ್ತು ದಕ್ಷಿಣ ಭಾರತದ (ಪಾಯಕ್ಕಾಡ್ ಮೂಲಕ) ಪ್ರಮುಖ ನಗರಗಳನ್ನು ಸಹ ಸಂಪರ್ಕಿಸುತ್ತದೆ. ಹತ್ತಿರದ ರೈಲ್ವೇ ನಿಲ್ದಾಣವು ಐಎನ್ಎಸ್ ಜಾಮೋರಿನ್‌ನಿಂದ ಸುಮಾರು ೧೫೦ ಕಿಮೀ ದೂರದ ಮಂಗಳೂರಿನಲ್ಲಿ ನೆಲೆಸಿದೆ. ಐಎನ್ಎಸ್ ಜಾಮೋರಿನ್, ಪಯ್ಯನೂರು ಮತ್ತು ಕಣ್ಣೂರು ನಡುವೆ ನಿಯಮಿತವಾಗಿ ಖಾಸಗಿ ಬಸ್ ಸೇವೆಯು ಲಭ್ಯವಿದೆ. ಐಎನ್ಎ ಇಂದ ಹತ್ತಿರದ ರೈಲ್ವೇ ನಿಲ್ದಾಣವು ಪಯ್ಯನೂರು ಆಗಿದೆ. ಪಯ್ಯನೂರು ರೈಲ್ವೇ ನಿಲ್ದಾಣವನ್ನು ಈ ಮೂಲಕ ಸಂಪರ್ಕಿಸಬಹುದು:-

(ಎ) ರೈಲು - ರಾಜಧಾನಿ ಎಕ್ಸ್‌ಪ್ರೆಸ್ ಹೊರತುಪಡಿಸಿ ಕೊಂಕಣ ರೈಲ್ವೇ ಮಾರ್ಗದ ಎಲ್ಲಾ ರೈಲುಗಳು (ದೆಹಲಿ - ತಿರುವನಂತಪುರಂ ಮಧ್ಯೆ ಚಲಿಸುವ ರೈಲುಗಳು), ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ (ಚಂಡೀಗಢ - ತಿರುವನಂತಪುರಂ ನಡುವೆ ಚಲಿಸುವ ರೈಲು), ಜೋಧ್‌ಪುರ್ ಎಕ್ಸ್‌ಪ್ರೆಸ್ (ಜೋಧ್‌ಪುರ್ - ತಿರುವನಂತಪುರಂ ನಡುವೆ ಚಲಿಸುವ ರೈಲು) ಮತ್ತು ಜೈಪುರ ಮಾರು ಸಾಗರ್ ಎಕ್ಸ್‌ಪ್ರೆಸ್ (ಜೈಪುರ- ಎರ್ನಾಕುಲಂ ನಡುವೆ ಚಲಿಸುವ ರೈಲು) ಪಯ್ಯನೂರಿನಲ್ಲಿ ನಿಲ್ಲುತ್ತದೆ. ಕೆಲವು ಸಂದರ್ಭಗಳಲ್ಲಿ, ಮೇಲಿನ ರೈಲುಗಳು ಪಯ್ಯನೂರಿನಲ್ಲಿ ನಿಲ್ಲದೇ ಹತ್ತಿರದ ಕಣ್ಣೂರು ರೈಲ್ವೇ ನಿಲ್ದಾಣದಲ್ಲಿ ನಿಲ್ಲಬಹುದು.

(ಬಿ) ರಸ್ತೆ - ಪಯ್ಯನೂರನ್ನು ರಾಷ್ಟ್ರೀಯ ಹೆದ್ದಾರಿ ೧೭ ಕಣ್ಣೂರು ಮತ್ತು ಮಂಗಳೂರಿನೊಡನೆ ಸಂಪರ್ಕಿಸುತ್ತದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮತ್ತು ಖಾಸಗಿ ಬಸ್‌ಗಳು ನಿಯಮಿತವಾಗಿ ಪಯ್ಯನೂರನ್ನು ಕಣ್ಣೂರು ಮತ್ತು ಮಂಗಳೂರಿನೊಡನೆ ಸಂಪರ್ಕಿಸುತ್ತದೆ. ಬಸ್‌ ಮೂಲಕ ತಲುಪಿದಾಗ, ಪಯ್ಯನೂರು ಬಸ್ ನಿಲ್ದಾಣ (ಪಯ್ಯನೂರು ಪಟ್ಟಣದೊಳಗೆ, ರೈಲ್ವೇ ನಿಲ್ದಾಣದಿಂದ ನಾಲ್ಕು ಕಿಮೀ ದೂರದಲ್ಲಿ ನೆಲೆಸಿದೆ) ದಲ್ಲಿ ಇಳಿಯಬೇಕು.

(ಸಿ) ವಿಮಾನ ಸಂಪರ್ಕ - ಪಯ್ಯನೂರಿನಲ್ಲಿ ಯಾವುದೇ ವಿಮಾನ ನಿಲ್ದಾಣಗಳಿಲ್ಲ. ಹತ್ತಿರದ ವಿಮಾನ ನಿಲ್ದಾಣವು ಪಯ್ಯನೂರಿನಿಂದ ಸುಮಾರು ೧೫೦ ಕಿಮೀ ದೂರದಲ್ಲಿನ ಮಂಗಳೂರಿನಲ್ಲಿದೆ. ಮಂಗಳೂರಿಗೆ ಮತ್ತು ಅಲ್ಲಿಂದ ಹೊರಭಾಗಕ್ಕೆ ಇಂಡಿಯನ್ ಏರ್‌ಲೈನ್ಸ್ ಮತ್ತು ಜೆಟ್ ಏರ್‌ವೇಸ್‌ನ ವಿಮಾನಗಳು ಕಾರ್ಯನಿರ್ವಹಿಸುತ್ತವೆ. ಮತ್ತೊಂದು ವಿಮಾನ ನಿಲ್ದಾಣವು ಪಯ್ಯನೂರಿನಿಂದ ೧೪೫ ಕಿಮೀ ದೂರದಲ್ಲಿ ಕೋಯಿಕೋಡ್ (ಕ್ಯಾಲಿಕಟ್) ನಲ್ಲಿ ನೆಲೆಸಿದೆ. ಮಂಗಳೂರು ಮತ್ತು ಕೋಯಿಕೋಡ್ ಎರಡೂ ನಿಲ್ಧಾಣಗಳು ಪಯ್ಯನೂರಿನಿಂದ ರಸ್ತೆ ಮತ್ತು ರೈಲು ಮಾರ್ಗಗಳಿಂದ ಉತ್ತಮವಾಗಿ ಸಂಪರ್ಕಿತವಾಗಿದೆ.ಆದರೆ ಮತ್ತನೂರಿನಲ್ಲಿ ಹೊಸ ವಿಮಾನ ನಿಲ್ದಾಣವನ್ನು ಸ್ಥಾಪಿಸುವ ಪ್ರಸ್ತಾಪವಿದೆ (ಕಣ್ಣೂರು ಪಟ್ಟಣದಿಂದ ಅಂದಾಜು ೨೫ ಕಿಮೀ ದೂರದಲ್ಲಿ).

ಸ್ಥೂಲ ಅವಲೋಕನಸಂಪಾದಿಸಿ

ಅಕಾಡೆಮೆ ಎಸ್ಟೇಟ್ (೨೫೦೦ ಎಕರೆಗೂ ಹೆಚ್ಚು) ಎನ್ನುವುದು ಪಶ್ಚಿಮದಲ್ಲಿ ಅರೇಬಿಯನ್ ಸಮುದ್ರಕ್ಕೆ ಮುಖಮಾಡಿರುವ ತೀರ ಪ್ರದೇಶಕ್ಕೆ ಗೋಚರಿಸುವ ವಿಶಾಲವಾದ ಪ್ರದೇಶವಾಗಿದ್ದು, ಮಧ್ಯದ ಭಾಗವನ್ನು ರೂಪಿಸಿರುವ ಅಲೆಯಾಕಾರದ ಬೆಟ್ಟಗಳಿಂದ ಆವರಿಸಿದೆ ಮತ್ತು ಪೂರ್ವದಲ್ಲಿ ಒಳನಾಡಿನ ಪ್ರದೇಶಗಳು ಪಶ್ಚಿಮ ಘಟ್ಟದ ಭಾಗವನ್ನು ರೂಪಿಸಿದೆ.

ಐಎನ್ಎ ಅನ್ನು ಮೂರು ವಲಯಗಳಾಗಿ ವಿಭಾಗಿಸಲಾಗಿದ್ದು, ಅವುಗಳೆಂದರೆ ತರಬೇತಿ ವಲಯ, ಆಡಳಿತಾತ್ಮಕ ವಲಯ ಮತ್ತು ವಸತಿ ವಲಯ. ಅಕಾಡೆಮಿ ಮುಖ್ಯ ಕಟ್ಟಡದ ಸಂಕೀರ್ಣ, ದೈಹಿತ ತರಬೇತಿ ಮತ್ತು ಪಠ್ಯೇತರ ಚಟುವಟಿಕೆಗಳು (ಇಸಿಎ) ಸಂಕೀರ್ಣ, ಹೊರಾಂಗಣ ತರಬೇತಿ ಮತ್ತು ವಾಟರ್‌ಮ್ಯಾನ್‌ಶಿಪ್ ಸಂಕೀರ್ಣ, ಫೈರಿಂಗ್ ರೇಂಜ್, ಕೆಡೆಟ್‌ಗಳ ಭೋಜನಾಲಯ ಮತ್ತು ಕೆಡೆಟ್‌ಗಳ ವಸತಿ ಇವುಗಳನ್ನು ತರಬೇತಿ ವಲಯವು ಒಳಗೊಂಡಿದೆ. ಆಡಳಿತಾತ್ಮಕ ಸಂಕೀರ್ಣ, ಆಸ್ಪತ್ರೆ, ಲಾಜಿಸ್ಟಿಕ್ ಸಂಕೀರ್ಣ, ಸಾರಿಗೆ ಸಂಕೀರ್ಣ ಮತ್ತು ಅಗ್ನಿಶಾಮಕ ಠಾಣೆಯನ್ನು ಆಡಳಿತಾತ್ಮಕ ವಲಯವು ಒಳಗೊಂಡಿದೆ.

ಅಕಾಡೆಮಿ ಮುಖ್ಯ ಕಟ್ಟಡ ಕಾಂಪ್ಲೆಕ್ಸ್ (ಎಎಮ್‌ಬಿಸಿ)ಯು ಅಕಾಡೆಮಿಯ ಹೃದಯ ಭಾಗವಾಗಿದ್ದು, ಇದು ಕೇಂದ್ರ ಕಚೇರಿ ವಿಭಾಗ, ಸೇವಾ ಮತ್ತು ತಾಂತ್ರಿಕ ತರಬೇತಿ ವಿಭಾಗಗಳು, ಪ್ರಯೋಗಶಾಲೆಗಳು, ಕಾರ್ಯಾಗಾರಗಳು, ಗ್ರಂಥಾಲಯ ಮತ್ತು ೧೭೩೬ ಜನರು ಕುಳಿತುಕೊಳ್ಳಬಹುದಾದ ಸಭಾಂಗಣವನ್ನು ಒಳಗೊಂಡಿದೆ. ಮುಖ್ಯ ಪರ್ವತ ಶ್ರೇಣಿಯಿಂದ ಚಾಚಿಕೊಂಡ ಭಾಗದಲ್ಲಿ ಸಂಕೀರ್ಣವು ನೆಲೆಸಿದೆ ಮತ್ತು ಇದು ಅಕಾಡೆಮಿಯ ಎತ್ತರದ ಪ್ರದೇಶವಾಗಿ ರೂಪಿಸಿದೆ.

ಅಕಾಡೆಮಿಯು ಪ್ರತಿವರ್ಷ ಅಂದಾಜು ೧೧೦೦ ಶಿಕ್ಷಾರ್ಥಿಗಳಿಗೆ ತರಬೇತಿಯನ್ನು ನೀಡುತ್ತದೆ. ಇದರಲ್ಲಿ ಭಾರತೀಯ ಕರಾವಳಿ ರಕ್ಷಣಾ ಪಡೆಯ ಮತ್ತು ವಿದೇಶೀ ರಾಷ್ಟ್ರಗಳ ಸ್ನೇಹಪರ ಅಧಿಕಾರಿ ಶಿಕ್ಷಾರ್ಥಿಗಳನ್ನು ಒಳಗೊಂಡಿರುತ್ತದೆ.

ತರಬೇತಿ ಮತ್ತು ಇತರ ಆಡಳಿತಾತ್ಮಕ ಬೆಂಬಲಿತ ಕಾರ್ಯಗಳನ್ನು ನಡೆಸಲು ಅಕಾಡೆಮಿಯು ಸಮವಸ್ತ್ರಧಾರಿ ಮತ್ತು ನಾಗರಿಕ ಸಿಬ್ಬಂದಿಗಳ ಮಿಶ್ರಣವನ್ನು ಹೊಂದಿದೆ. ಇಲ್ಲಿ ೧೬೧ ಅಧಿಕಾರಿಗಳು, ೪೭ ಪ್ರೊಫೆಸರ್‌ಗಳು/ಉಪನ್ಯಾಸಕರು, ೫೦೨ ನಾವಿಕರು ಮತ್ತು ೫೫೭ ನಾಗರಿಕರಿದ್ದಾರೆ. ಸಿಬ್ಬಂದಿಯ ಕುಟುಂಬ ವರ್ಗದವರೊಡನೆ, ಕ್ಯಾಂಪಸ್‌ನ ಜನಸಂಖ್ಯೆಯು ಸುಮಾರು ೪೦೦೦ ದಷ್ಟಿದೆ.

ಆಯ್ಕೆ ವಿಧಾನಸಂಪಾದಿಸಿ

೧೦ + ೨ (ತಾಂತ್ರಿಕ) ಕೆಡೆಟ್ ಪ್ರವೇಶ ಮತ್ತು ಎನ್‌ಸಿಸಿ ವಿಶೇಷ ಪ್ರವೇಶ (ಪದವಿ)ಗಳನ್ನು ಹೊರತುಪಡಿಸಿ ಎಲ್ಲಾ ಪರ್ಮನೆಂಟ್ ಕಮೀಷನ್ ಪ್ರವೇಶಗಳಿಗೆ ಆಯ್ಕೆಯನ್ನು ಯುಪಿಎಸ್‌ಸಿ ನಡೆಸುವ ಲಿಖಿತ ಪರೀಕ್ಷೆಯ ಮೂಲಕ ಮಾಡಲಾಗುತ್ತದೆ, ತದನಂತರ ಸರ್ವೀಸ್ ಸೆಲೆಕ್ಷನ್ ಬೋರ್ಡ್ (ಎಸ್ಎಸ್‌ಬಿ) ನಡೆಸುವ ಸಂದರ್ಶನವಿರುತ್ತದೆ. ಶಾರ್ಟ್ ಸರ್ಮೀಸ್ ಕಮೀಷನ್ (ಎಸ್ಎಸ್‌ಸಿ) ಗಾಗಿ ಯಾವುದೇ ಲಿಖಿತ ಪರೀಕ್ಷೆಗಳಿರುವುದಿಲ್ಲ. ಆಯ್ಕೆಯು ಅರ್ಹತೆ ಆಧಾರದಲ್ಲಿ ಮಾತ್ರ ಆಗಿರುತ್ತದೆ. ಅರ್ಹತೆ ಮತ್ತು ಲಭ್ಯವಿರುವ ಸ್ಥಾನಗಳ ಆಧಾರದಲ್ಲಿ ಎಸ್‌ಎಸ್‌ಸಿ ಅಧಿಕಾರಿಗಳು ಪರ್ಮನೆಂಟ್ ಕಮೀಷನ್‌ ಅನ್ನು ಆಯ್ದುಕೊಳ್ಳಬಹುದು. ಭಾರತೀಯ ಕರಾವಳಿ ರಕ್ಷಣಾ ಪಡೆಗೆ, ಆಯ್ಕೆಯನ್ನು ಪಿಎಸ್‌ಬಿ ಮತ್ತು ಎಫ್‌ಎಸ್‌ಬಿ ಆಯ್ಕೆ ಹಂತಗಳ ಮೂಲಕ ನಡೆಸಲಾಗುತ್ತದೆ.

ಸರ್ವೀಸಸ್ ಸೆಲೆಕ್ಷನ್ ಬೋರ್ಡ್/ಎಸ್ಎಸ್‌ಬಿಎಸ್ಎಸ್‌ಬಿಯು ಐದು ದಿನಗಳ ಪರೀಕ್ಷಾ ವೇಳಾಪಟ್ಟಿಯನ್ನು ಹೊಂದಿರುತ್ತದೆ ಮತ್ತು ಅಭ್ಯರ್ಥಿಗಳು ಒಂದು ದಿನ ಮೊದಲು ಮಧ್ಯಾಹ್ನದೊಳಗೆ ವರದಿ ಮಾಡಿಕೊಳ್ಳಬೇಕು. ಮಧ್ಯಾಹ್ನ/ಸಂಜೆಯ ವೇಳೆಯಲ್ಲಿ ಅಭ್ಯರ್ಥಿಗಳಿಗೆ ಮುಂದಿನ ಐದು ದಿನಗಳ ವಿವರವಾದ ವೇಳಾಪಟ್ಟಿ ಮತ್ತು ನಡತೆಯ ನಿಯಮಾವಳಿಯ ಬಗ್ಗೆ ವಿವರಿಸಲಾಗುವುದು ಮತ್ತು ಅಭ್ಯರ್ಥಿಗಳು ವಯಸ್ಸು/ಶೈಕ್ಷಣಿಕ ವಿದ್ಯಾರ್ಹತೆಯ ಬಗ್ಗೆ ಅಗತ್ಯ ಪ್ರಮಾಣಪತ್ರಗಳನ್ನು ಒಳಗೊಂಡು ಸಂಪೂರ್ಣ ದಾಖಲಾತಿಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಪರೀಕ್ಷೆಯ ವಿವರಗಳು ಈ ಕೆಳಕಂಡಂತಿದೆ:-

ದಿನ-I (ಹಂತ-I).

ಹಂತ ಒಂದು ಆಯ್ಕೆಯ ವ್ಯವಸ್ಥೆಯು ಈ ಮುಂದಿನದನ್ನು ಒಳಗೊಂಡಿರುತ್ತದೆ:- (i) ಜಾಣ್ಮೆ ಪರೀಕ್ಷೆ (ii) ಚಿತ್ರದ ಗ್ರಹಿಕೆ ಮತ್ತು ವಿವರಣೆ ಪರೀಕ್ಷೆ (ಪಿಡಿಪಿಟಿ): ೩೦ ಸೆಕೆಂಡುಗಳ ಕಾಲ ಚಿತ್ರವನ್ನು ತೋರಿಸಲಾಗುವುದು. ಪ್ರತಿ ಪಾತ್ರಕ್ಕೆ ಸಂಬಂಧಿಸಿಂದಂತೆ ಒಂದು ನಿಮಿಷದಲ್ಲಿ ಅಭ್ಯರ್ಥಿಗಳು ಪಾತ್ರಗಳ ಸಂಖ್ಯೆ, ವಯಸ್ಸು, ಲಿಂಗ, ಮನೋಭಾವ, ಭೂತ, ಭವಿಷ್ಯ ಮತ್ತು ವರ್ತಮಾನಕಾಲಕ್ಕೆ ಸಂಬಂಧಿಸಿದಂತೆ ಕಾರ್ಯಗಳ ಕುರಿತು ಹೀಗೆ ಮೂಲಭೂತ ಏಳು ಮಾನದಂಡಗಳನ್ನು ಸಂಪೂರ್ಣವಾಗಿ ಟಿಪ್ಪಣಿ ಮಾಡಿಕೊಳ್ಳಬೇಕು. (iii) ಚಿತ್ರದ ಬಗ್ಗೆ ಚರ್ಚೆ – ೩೦ ನಿಮಿಷಗಳು. ಈ ಹಂತದಲ್ಲಿ ಅಭ್ಯರ್ಥಿಗಳನ್ನು ಹಲವು ಗುಂಪುಗಳಾಗಿ ವಿಂಗಡಿಸಲಾಗುವುದು. ಗುಂಪಿನಲ್ಲಿ ಸುಮಾರು ೧೫ ಅಭ್ಯರ್ಥಿಗಳಿರುತ್ತಾರೆ. ಪ್ರತಿ ಅಭ್ಯರ್ಥಿಯು ತನ್ನ ಸ್ವಂತ ಲಿಖಿತ ವಿವರಣೆಯನ್ನು ಅದೇ ಪದಗಳಲ್ಲಿ ವಿವರಿಸಬೇಕಾಗುತ್ತದೆ. ತರುವಾಯು, ಭಾಗ -II ರಲ್ಲಿ, ಅಭ್ಯರ್ಥಿಗಳು ತಮ್ಮಷ್ಟಕ್ಕೇ ಚರ್ಚಿಸಬೇಕಾಗುತ್ತದೆ ಮತ್ತು ಕಥೆಯ ಪಾತ್ರಗಳು ಮತ್ತು ವಿಷಯ ವಸ್ತುವಿನ ಬಗ್ಗೆ ಸಾಮಾನ್ಯ ಸಹಮತಕ್ಕೆ ಬರಬೇಕಾಗುತ್ತದೆ. ಅಭ್ಯರ್ಥಿಗಳು ಒಮ್ಮೆ ಈ ಹಂತವನ್ನು ಪೂರೈಸಿದ ನಂತರ ಹಂತ ಒಂದರ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಯಶಸ್ವಿ ಅಭ್ಯರ್ಥಿಗಳನ್ನು ಹಂತ-II ರ ಪರೀಕ್ಷೆಗೆ ಉಳಿಸಿಕೊಳ್ಳಲಾಗುತ್ತದೆ ಮತ್ತು ಉಳಿದವರಿಗೆ ಸಾಮಾನ್ಯ ನ್ಯೂನ್ಯತೆಗಳ ಬಗ್ಗೆ ವಿವರಿಸಿದ ನಂತರ ತೊರೆಯಲು ತಿಳಿಸಲಾಗುತ್ತದೆ.

ದಿನ -೨ (ಹಂತ-II).

ಮನೋವೈಜ್ಞಾನಿಕ ಪರೀಕ್ಷೆಗಳು ಈ ಮುಂದಿನವುಗಳನ್ನು ಒಳಗೊಂಡಿರುತ್ತದೆ:- (i) ಥೆಮ್ಯಾಟಿಕ್ ಅಪ್ರೆಸೆಪ್ಶನ್ ಟೆಸ್ಟ್ (ಟಿಎಟಿ). ಪ್ರತಿ ೩೦ ಸೆಕೆಂಡುಗಳ ಅಂತರದಲ್ಲಿ ಒಂದು ಖಾಲಿ ಚಿತ್ರವನ್ನು ಒಳಗೊಂಡು ೧೨ ಚಿತ್ರಗಳನ್ನು ತೋರಿಸಲಾಗುತ್ತದೆ. ಘಟನೆಗೆ ಏನು ಕಾರಣವಾಯಿತೆಂಬುದನ್ನು ಅಭ್ಯರ್ಥಿಗಳಿಗೆ ಬರೆಯಲು ತಿಳಿಸಲಾಗುತ್ತದೆ? ಏನು ನಡೆಯುತ್ತಿದೆ ಮತ್ತು ಫಲಿತಾಂಶವು ಏನಾಗಿರುತ್ತದೆ? ಚಿತ್ರವನ್ನು ೩೦ ಸೆಕೆಂಡುಗಳ ಕಾಲ ತೋರಿಸಲಾಗುತ್ತದೆ ಮತ್ತು ಅಭ್ಯರ್ಥಿಗಳು ಅದನ್ನು ೪ ನಿಮಿಷಗಳಲ್ಲಿ ಬರೆಯಬೇಕು. ಖಾಲಿ ಚಿತ್ರದಲ್ಲಿ, ಅಭ್ಯರ್ಥಿಗಳು ತಮ್ಮದೇ ಆಯ್ಕೆಯ ಚಿತ್ರವೊಂದರ ಬಗ್ಗೆ ಯೋಚಿಸಿ ಅದರ ಬಗ್ಗೆ ವಿಷಯವನ್ನು ಬರೆಯಬೇಕು. (ii) ವರ್ಡ್ ಅಸೋಸಿಯೇಶನ್ ಟೆಸ್ಟ್ (ಡಬ್ಲ್ಯೂಎಟಿ).ಈ ಪರೀಕ್ಷೆಯಲ್ಲಿ, ಪ್ರತಿ ೧೫ ಸೆಕೆಂಡುಗಳ ಅಂತರದಲ್ಲಿ ಒಂದರ ನಂತರ ಒಂದು ಹೀಗೆ ೬೦ ಪದಗಳನ್ನು ಸರಣಿಯಲ್ಲಿ ತೋರಿಸಲಾಗುತ್ತದೆ. ಅಭ್ಯರ್ಥಿಗಳು ತಮ್ಮ ಮನಸ್ಸಿನಲ್ಲಿ ಮೊದಲು ಹೊಳೆಯುವ ಯೋಚನೆ ಅಥವಾ ಅಭಿಪ್ರಾಯವನ್ನು ಬರೆಯಬೇಕಾಗುತ್ತದೆ. (iii) ಸನ್ನಿವೇಶಕ್ಕೆ ಪ್ರತಿಕ್ರಿಯೆ ಪರೀಕ್ಷೆ (ಎಸ್ಆರ್‌ಟಿ).ಈ ಪರೀಕ್ಷೆಯು ದೈನದಿಂದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ೬೦ ದಿನನಿತ್ಯದ ಜೀವನ ಸನ್ನಿವೇಶಗಳನ್ನು ಒಳಗೊಂಡಿರುತ್ತದೆ. ಸನ್ನಿವೇಶಗಳನ್ನು ಕಿರು ಪುಸ್ತಕದಲ್ಲಿ ಮುದ್ರಿಸಿರಲಾಗುತ್ತದೆ ಮತ್ತು ಅಭ್ಯರ್ಥಿಗಳು ಈ ಸನ್ನಿವೇಶಗಳ ಬಗ್ಗೆ ಹೇಗೆ ಭಾವಿಸುತ್ತಾರೆ, ಯೋಚಿಸುತ್ತಾರೆ ಮತ್ತು ನಡೆದುಕೊಳ್ಳುತ್ತಾರೆ ಎಂಬ ಬಗ್ಗೆ ತಮ್ಮ ಪ್ರತಿಕ್ರಿಯೆಗಳನ್ನು ವಾಕ್ಯಗಳನ್ನು ಪೂರ್ಣಗೊಳಿಸುವುದರ ಮೂಲಕ ಬರೆಯಬೇಕಾಗುತ್ತದೆ. (iv) ಸ್ವಯಂ ವಿವರಣೆ-೧೫ ನಿಮಿಷಗಳು.ಅಭ್ಯರ್ಥಿಗಳು ಐದು ಪ್ರತ್ಯೇಕ ಪ್ಯಾರಾಗ್ರಾಫ್‌ಗಳಲ್ಲಿ ತಮ್ಮ ಪಾಲಕರು/ಪೋಷಕರು, ಸ್ನೇಹಿತರು, ಶಿಕ್ಷಕರು/ಮೇಲ್ವಿಚಾರಕರು ಹೀಗೆ ಪ್ರತಿಯೊಬ್ಬರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಬರೆಯಬೇಕಾಗುತ್ತದೆ.

ದಿನ -೩(ಜಿಟಿಓ-ದಿನ ೧)

ಇದು ಇವುಗಳನ್ನು ಒಳಗೊಂಡಿರುತ್ತದೆ:- (i) ಸಮೂಹ ಚರ್ಚೆ. ಸಾಮಾನ್ಯ ಆಸಕ್ತಿಯ (ಸಾಮಾಜಿಕ ಸಮಸ್ಯೆಗಳು ಮತ್ತು ಪ್ರಸ್ತುತ ಘಟನೆಗಳು) ಕುರಿತ ಎರಡು ವಿಷಯಗಳನ್ನು ಚರ್ಚಿಸಲಾಗುವುದು. ಇದು ಒಂದು ಅನೌಪಚಾರಿಕ ಚರ್ಚೆಯಾಗಿರುತ್ತದೆಯೇ ಹೊರತು ವಾದವಾಗಿರುವುದಿಲ್ಲ. ಪ್ರತಿ ವಿಷಯಕ್ಕೆ ತಲಾ ೨೦ ನಿಮಿಷಗಳನ್ನು ನಿಗದಿಪಡಿಸಲಾಗಿರುತ್ತದೆ. ಯಾವುದೇ ನಿರ್ದಿಷ್ಟ ನಿರ್ಣಯವನ್ನು ಊಹಿಸುವ ಅಗತ್ಯವಿರುವುದಿಲ್ಲ. (ii)ಗ್ರೂಪ್ ಪ್ಲಾನಿಂಗ್ ಎಕ್ಸರ್‌ಸೈಸ್(ಜಿಪಿಇ). ಇದು ಐದು ಹಂತಗಳನ್ನು ಒಳಗೊಂಡಿರುತ್ತದೆ, ಇವುಗಳೆಂದರೆ, ಮಾದರಿಯ ಬಗ್ಗೆ ವಿವರಿಸುವಿಕೆ, ಜಿಟಿಓನಿಂದ ನಿರೂಪಣೆಯ ಓದುವಿಕೆ, ಅಭ್ಯರ್ಥಿಗಳಿಂದ ಐದು ನಿಮಿಷಗಳ ಕಾಲ ಸ್ವಯಂ ಓದುವಿಕೆ, ವೈಯಕ್ತಿಕ ಲಿಖಿತ ಪರಿಹಾರಗಳಿಗೆ ೧೦ ನಿಮಿಷಗಳು ಮತ್ತು ಸಮೂಹ ಚರ್ಚೆಗಾಗಿ ೨೦ ನಿಮಿಷಗಳು. ಸಮೂಹ ಪರಿಹಾರದ ನಿರೂಪರಣೆ ಮತ್ತು ಸ್ಪಷ್ಟ ನಿರ್ಣಯವು ಅಗತ್ಯವಿರುತ್ತದೆ. (iii)ಪ್ರೊಗ್ರೆಸ್ಸಿವ್ ಗ್ರೂಪ್ ಟಾಸ್ಕ್ಸ್(ಪಿಜಿಟಿ). ಇದು ಮೊದಲ ಹೊರಾಂಗಣ ಕಾರ್ಯವಾಗಿರುತ್ತದೆ. ಹಂತಹಂತವಾಗಿ ಹೆಚ್ಚುತ್ತಿರುವ ಹಂತದ ಅಡಚಣೆಗಳೊಂದಿಗೆ ನಾಲ್ಕು ತಡೆಗಳನ್ನು ೪೦ ರಿಂದ ೫೦ ನಿಮಿಷಗಳ ಕಾಲಾವಧಿಯಲ್ಲಿ ಪೂರ್ಣಗೊಳಿಸಬೇಕಾಗುತ್ತದೆ. ರಚನೆಗಳು, ಸಹಾಯ ವಸ್ತು ಮತ್ತು ಸಾಮಾನುಗಳನ್ನು ಗುಂಪಿಗೆ ಒದಗಿಸಲಾಗುತ್ತದೆ. (iv) ಗ್ರೂಪ್ ಒಬ್ಸ್ಟಾಕಲ್ ರೇಸ್(ಜಿಓಆರ್). ಈ ಕಾರ್ಯದಲ್ಲಿ ಗುಂಪಿನವರು ಪರಸ್ಪರರ ವಿರುದ್ಧವಾಗಿ ಆರು ಅಡೆತಡೆಗಳಲ್ಲಿ ನಿರ್ವಹಿಸಬೇಕಾಗುತ್ತದೆ ಮತ್ತು ಇದರಲ್ಲಿ ಹಾವಿನಂತಹ ಸಾಮಾನನ್ನು ಎತ್ತಿಕೊಂಡಿರಬೇಕಾಗುತ್ತದೆ. (v) ಹಾಫ್ ಗ್ರೂಪ್ ಟಾಸ್ಕ್ (ಹೆಚ್‌ಜಿಟಿ). ಇದು ಪ್ರೊಗ್ರೆಸಿವ್ ಗ್ರೂಪ್ ಟಾಸ್ಕ್‌ನಂತಹುದೇ ಒಂದು ಅಡಚಣೆಯನ್ನು ಹೊಂದಿರುತ್ತದೆ ಮತ್ತು ಇಲ್ಲಿ ಸಹಾಯ ವಸ್ತು ಮತ್ತು ಸಾಮಾನನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಗುಂಪನ್ನು ಎರಡು ಉಪ ಗುಂಪುಗಳಾಗಿ ವಿಭಾಗಿಸಲಾಗುತ್ತದೆ ಮತ್ತು ಎರಡೂ ಗುಂಪುಗಳಿಗೂ ಒಂದೇ ಅಡಚಣೆಯನ್ನು ನೀಡಿರಲಾಗಿರುತ್ತದೆ, ಆದರೆ ಒಂದು ಗುಂಪು ಕಾರ್ಯನಿರ್ವಹಿಸಬೇಕಾದಾಗ ಮತ್ತೊಂದು ಗುಂಪಿಗೆ ಅದನ್ನು ನೋಡಲು ಅವಕಾಶ ಕಲ್ಪಿಸಲಾಗಿರುವುದಿಲ್ಲ. ಪ್ರತಿ ಉಪ ಗುಂಪಿಗೆ ೧೫ ನಿಮಿಷಗಳ ಕಾಲಾವಧಿಯನ್ನು ನಿಗದಿಪಡಿಸಿರಲಾಗಿರುತ್ತದೆ. (vi) ಲೆಕ್ಚರೇಟ್. ಇದು ವೈಯಕ್ತಿಕ ಕಾರ್ಯವಾಗಿದೆ ಮತ್ತು ಅಭ್ಯರ್ಥಿಯು ಗುಂಪಿನಲ್ಲಿ ಕಿರು ಭಾಷಣವನ್ನು ಮಾಡಬೇಕಾಗುತ್ತದೆ. ಮಾತನಾಡಲು ನೀಡಿರುವ ನಾಲ್ಕು ಲೆಕ್ಚರೇಟ್ ಕಾರ್ಡುಗಳಿಂದ ಆಯ್ಕೆ ಮಾಡಲಾದ ಯಾವುದೇ ಒಂದು ವಿಷಯದ ಬಗ್ಗೆ ತಯಾರಿ ಮಾಡಿಕೊಳ್ಳಲು ಮೂರು ನಿಮಿಷಗಳ ಕಾಲಾವಧಿಯನ್ನು ನೀಡಲಾಗುತ್ತದೆ.

ದಿನ – ೪(ಜಿಟಿಓ –ದಿನ ೨)

(i) ವೈಯಕ್ತಿಕ ಅಡಚಣೆಗಳು. ೧೦ ಅಡಚಣೆಗಳನ್ನು ವೈಯಕ್ತಿಕವಾಗಿ ನಿರ್ವಹಿಸಬೇಕಾಗುತ್ತದೆ. ಅಡಚಣೆಗಳಿಗೆ ಒಂದರಿಂದ ಹತ್ತು ಸಂಖ್ಯೆಗಳನ್ನು ನೀಡಲಾಗಿರುತ್ತದೆ ಮತ್ತು ಇದು ಪ್ರತಿಯೊಂದಕ್ಕೆ ನಿಗದಿಪಡಿಸಿರುವ ಅಂಕಗಳನ್ನು ಸೂಚಿಸುತ್ತದೆ. ಪ್ರತಿ ಅಭ್ಯರ್ಥಿಗೆ ಮೂರು ನಿಮಿಷಗಳ ಕಾಲಾವಧಿ ನೀಡಲಾಗುತ್ತದೆ. (ii) ಕಮಾಂಡ್ ಟಾಸ್ಕ್. ಪ್ರೊಗ್ರೆಸಿವ್ ಗ್ರೂಪ್ ಟಾಸ್ಕ್‌ನಂತಹ ಒಂದು ಅಡಚಣೆಯನ್ನು ಒಳಗೊಂಡಿರುವ ಒಂದು ಕಾರ್ಯಕ್ಕೆ ಪ್ರತಿಯೊಬ್ಬರನ್ನೂ ಕಮಾಂಡರ್ ಆಗಿ ನೇಮಕ ಮಾಡಲಾಗುತ್ತದೆ ಮತ್ತು ಇದಕ್ಕೆ ೧೫ ನಿಮಿಷಗಳ ಕಾಲಾವಧಿಯನ್ನು ನೀಡಲಾಗುತ್ತದೆ. (iii) ಫೈನಲ್ ಗ್ರೂಪ್ ಟಾಸ್ಕ್. ಈ ಕಾರ್ಯವು ಪ್ರೊಗ್ರೆಸಿವ್ ಗ್ರೂಪ್ ಟಾಸ್ಕ್‌ನಂತಹ ಒಂದು ಅಡಚಣೆಯನ್ನು ಒಳಗೊಂಡಿರುತ್ತದೆ. ಈ ಕಾರ್ಯವನ್ನು ಪೂರ್ತಿಗೊಳಿಸಲು ೧೫-೨೦ ನಿಮಿಷಗಳ ಕಾಲಾವಧಿಯನ್ನು ನೀಡಲಾಗಿರುತ್ತದೆ.

ದಿನ ೩ & ೪ ಸಂದರ್ಶನಗಳು - ಸಂದರ್ಶನ ಅಧಿಕಾರಿ (ಐಓ) ಕೈಗೊಳ್ಳುವ ವೈಯಕ್ತಿಕ ಸಂದರ್ಶನ

ದಿನ - ೫

ಇದು ಈ ಮುಂದಿನವುಗಳನ್ನು ಒಳಗೊಂಡಿರುತ್ತದೆ:- (i) ಬೋರ್ಡ್‌ನ ಉಪಾಧ್ಯಕ್ಷರಿಂದ ಮುಕ್ತಾಯ ಭಾಷಣ. (ii) ಸಭೆ. (iii) ಫಲಿತಾಂಶಗಳ ಘೋಷಣೆ. (iv) ಮುಕ್ತಾಯ.

ಪ್ರವೇಶದ ವಿಧಾನಗಳುಸಂಪಾದಿಸಿ

೧೦+೨ ಎಕ್ಸಿಕ್ಯೂಟಿವ್ ಪ್ರವೇಶ / ಎನ್‌ಡಿಎ ಪ್ರವೇಶ೧೦+೨(ಎಕ್ಸಿಕ್ಯೂಟಿವ್)ನ ಆಯ್ಕೆಗೊಂಡ ಅಭ್ಯರ್ಥಿಗಳನ್ನು ನೇರವಾಗಿ ಭಾರತೀಯ ನೌಕಾ ಅಕಾಡೆಮಿ, ಎಳಿಮಲದಲ್ಲಿ ನಾಲ್ಕು ವರ್ಷಗಳ ಬಿ-ಟೆಕ್ ಕೋರ್ಸಿಗೆ ಕೆಡೆಟ್‌ಗಳಾಗಿ ಸೇರ್ಪಡೆಗೊಳಿಸಿಕೊಳ್ಳಲಾಗುತ್ತದೆ. ಕೋರ್ಸು ಪೂರ್ಣಗೊಳಿಸಿದ ನಂತರ, ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್‌ಯು) ದಿಂದ ಬಿ-ಟೆಕ್ ಪದವಿಯನ್ನು ಪ್ರದಾನ ಮಾಡಲಾಗುತ್ತದೆ. ಎನ್‌ಡಿಎನಲ್ಲಿ ಆಯ್ಕೆಯಾದ ನೌಕಾ ಅಭ್ಯರ್ಥಿಗಳು ಭೂಸೇನೆ ಮತ್ತು ವಾಯುಸೇನೆಗಳ ಕೆಡೆಟ್‌ಗಳೊಂದಿಗೆ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಜಂಟಿ ತರಬೇತಿಯನ್ನು ಪೂರ್ಣಗೊಳಿಸಿದ ಬಳಿಕ ಹೆಚ್ಚಿನ ತರಬೇತಿಗಾಗಿ ಭಾರತೀಯ ನೌಕಾ ಅಕಾಡೆಮಿ, ಎಳಿಮಲಕ್ಕೆ ಆಗಮಿಸುತ್ತಾರೆ. ಭಾರತೀಯ ನೌಕಾ ಅಕಾಡೆಮಿಯಲ್ಲಿ ಇನ್ನೂ ಎರಡು ವರ್ಷಗಳನ್ನು ಪೂರೈಸಿದ ಬಳಿಕ, ಎಲ್ಲಾ ಕೆಡೆಟ್‌ಗಳಿಗೆ ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್‌ಯು) ದಿಂದ ಬಿ-ಟೆಕ್ ಪದವಿಯನ್ನು ಪ್ರದಾನ ಮಾಡಲಾಗುತ್ತದೆ.

೧೦+೨ ತಾಂತ್ರಿಕ ಪ್ರವೇಶ ಆಯ್ಕೆಯಾದ ಅಭ್ಯರ್ಥಿಗಳನ್ನು ಕೇರಳದ ಎಳಿಮಲದಲ್ಲಿರುವ ಭಾರತೀಯ ನೌಕಾ ಅಕಾಡೆಮಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ನಾಲ್ಕು ವರ್ಷಗಳ ಬಿ-ಟೆಕ್ ಕೋರ್ಸಿಗೆ ಸೇರಿಸಿಕೊಳ್ಳಲಾಗುತ್ತದೆ. ಕೋರ್ಸಿನ ಅವಧಿಯಲ್ಲಿ ಕೆಡೆಟ್‌ಗಳಿಗೆ ಇಂಜಿನಿಯರಿಂಗ್ ಅಥವಾ ಎಲೆಕ್ಟ್ರಿಕಲ್ ವಿಭಾಗವನ್ನು ನೀಡಲಾಗುತ್ತದೆ. ಕೋರ್ಸು ಪೂರ್ಣಗೊಳಿಸಿದ ನಂತರ ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್‌ಯು) ದಿಂದ ಬಿ-ಟೆಕ್ ಪದವಿಯನ್ನು ಪ್ರದಾನ ಮಾಡಲಾಗುತ್ತದೆ. ಮೊದಲ ಅವಧಿಯ ನಂತರ ಕೆಲವು ಕೆಡೆಟ್‌ಗಳಿಗೆ ಕೊಚ್ಚಿನ್ ಯೂನಿವರ್ಸಿಟಿ ಆಫ್ ಸೈನ್ಸ್ ಎಂಡ್ ಟೆಕ್ನಾಲಜಿ (ಸಿಯುಎಸ್ಎಟಿ)ಯ ನವಲ್ ಆರ್ಕಿಟೆಕ್ಚರ್‌ನಲ್ಲಿ ಬಿ-ಟೆಕ್ ಪದವಿಗೆ ನಾಮಕರಣ ಮಾಡಲಾಗುವುದು. ಅವರು ಸಿಯುಎಸ್ಎಟಿ ನ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಕುಳಿತುಕೊಳ್ಳಬೇಕಾಗುತ್ತದೆ. ಯಶಸ್ವಿ ಅಭ್ಯರ್ಥಿಗಳು ಸ್ವಲ್ಪ ಕಾಲಾವಧಿಯ ಬಳಿಕ ಸಿಯುಎಸ್ಎಟಿ ನಲ್ಲಿ ನವಲ್ ಆರ್ಕಿಟೆಕ್ಚರ್ ಎಂಡ್ ಶಿಪ್ ಬಿಲ್ಡಿಂಗ್‌ನಲ್ಲಿ ನಾಲ್ಕು ವರ್ಷಗಳ ಬಿ-ಟೆಕ್ ಪದವಿ ವ್ಯಾಸಂಗ ಮಾಡಬೇಕಾಗುತ್ತದೆ. ಆ ನಂತರ, ಕೆಡೆಟ್‌ಗಳನ್ನು ವಿಶಾಖಪಟ್ಣಂನಲ್ಲಿ ಯುದ್ಧನೌಕೆಯ ವಿನ್ಯಾಸದ ಕೋರ್ಸಿಗಾಗಿ ಆರು ತಿಂಗಳ ಅವಧಿಗೆ ಕಳುಹಿಸಲಾಗುತ್ತದೆ, ಆ ಬಳಿಕ ಅವರು ಐಐಟಿ ದೆಹಲಿಯಲ್ಲಿ ೧೮ ತಿಂಗಳ ನವಲ್ ಆರ್ಕಿಟೆಕ್ಚರ್‌ನಲ್ಲಿ ಸ್ನಾತಕೋತ್ತರ ಡಿಪ್ಲೋಮಾ ವ್ಯಾಸಂಗ ಮಾಡಬೇಕಾಗುತ್ತದೆ.ಎನ್ಎವಿಎಸಿ ಸಹ ೭೫೦ ಕೆಡೆಟ್‌ಗಳು ಮತ್ತು ನಿಯೋಜಿತ ಅಧಿಕಾರಿಗಳಿಗೆ ನವಲ್ ಆರ್ಕಿಟೆಕ್ಚರ್‌ನಲ್ಲಿ ಬಿ-ಟೆಕ್ ಅನ್ನು ನಡೆಸುತ್ತದೆ. ಇಂಜಿನಿಯರಿಂಗ್ ಶಿಕ್ಷಣ ಕ್ರಮವನ್ನು ಭಾರತೀಯ ನೌಕಾಪಡೆಯು ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್‌ಯು) ಮತ್ತು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಕೌನ್ಸಿಲ್ (ಎಐಸಿಟಿಇ) ಸಹಯೋಗದೊಂದಿಗೆ ರೂಪಿಸಿದೆ.

ಶಾರ್ಟ್ ಸರ್ವಿಸ್ ಕಮೀಷನ್(ಎಸ್ಎಸ್‌ಸಿ)ಎಸ್ಎಸ್‌ಸಿ ಅಧಿಕಾರಿಗಳ ಕಾಲಾವಧಿ ಇದು ೧೦ ವರ್ಷಗಳ ಕಾಲಾವಧಿಯದ್ದಾಗಿರುತ್ತದೆ, ಇದನ್ನು ಸೇವಾ ಅಗತ್ಯತೆಗಳು ಮತ್ತು ಅಭ್ಯರ್ಥಿಗಳ ಸಾಧನೆ/ಬಯಕೆಗೆ ಒಳಪಟ್ಟು ಇನ್ನೂ ೪ ವರ್ಷಗಳ ಕಾಲ ವಿಸ್ತರಿಸಬಹುದಾಗಿದೆ.ಶಿಕ್ಷಣ, ಲಾಜಿಸ್ಟಿಕ್ಸ್, ಇಂಜಿನಿಯರಿಂಗ್, ಎಲೆಕ್ಟ್ರಿಕಲ್, ಸಬ್‌ಮೆರಿನ್ (ತಾಂತ್ರಿಕ), ಏರ್ ಟ್ರಾಫಿಕ್ ಕಂಟ್ರೋಲ್ ಮತ್ತು ಕಾನೂನು ವಿಭಾಗಗಳು/ವರ್ಗಗಳ ಸಬ್ ಲೆಫ್ಟಿನೆಂಟ್‌ಗಳಿಗೆ ಪ್ರಾರಂಭಿಕ ತರಬೇತಿ ಅವಧಿಯು ೨೦ ವಾರಗಳದ್ದಾಗಿರುತ್ತದೆ. ಇತರ ನೌಕಾ ಕೇಂದ್ರಗಳಲ್ಲಿಯೂ ವಿಭಾಗಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ತರಬೇತಿಯನ್ನು ಆ ನಂತರ ನೀಡಲಾಗುವುದು.ನವಲ್ ಆರ್ಕಿಟೆಕ್ಟ್, ಕಾನೂನು, ಲಾಜಿಸ್ಟಿಕ್ಸ್, ಎಟಿಸಿ, ಅಬ್ಸರ್ವರ್ ಮತ್ತು ಶೈಕ್ಷಣಿಕ ವಿಭಾಗಗಳಲ್ಲಿ ಮಹಿಳೆಯರಿಗೆ ಶಾರ್ಟ್ ಸರ್ವಿಸ್ ಕಮೀಷನ್ (ಎಸ್ಎಸ್‌ಸಿ) ಅನ್ನು ನೀಡಲಾಗುವುದು.

ಐಸಿಟಿ ಅಸಿಸ್ಟೆಂಟ್ ಕಮಾಂಡೆಂಟ್ಸ್ ಕೋರ್ಸ್ (ಜಿಡಿ/ತಾಂತ್ರಿಕ/ಪೈಲಟ್-ನ್ಯಾವಿಗೇಟರ್/ಕಾನೂನು/ಸಿಪಿಎಲ್*) ಅಸಿಸ್ಟಂಟ್ ಕಮಾಂಡೆಂಟ್ ( ಲೆಫ್ಟಿನೆಂಟ್ ಹುದ್ದೆಗೆ ಸಮಾನ)ಗಳು ಖಾಯಂ ನಿಯೋಜಿತ ಅಧಿಕಾರಿಗಳಾಗಿದ್ದು, ಇವರು ನೌಕಾ ಅಕಾಡೆಮಿಯಲ್ಲೇ ತರಬೇತಿ ಪಡೆದುಕೊಳ್ಳುತ್ತಾರೆ, ಆದರೆ ಇವರು ಭಾರತೀಯ ತಟ ಸೇನೆಗೆ ಸೇರ್ಪಡೆಗೊಳ್ಳುತ್ತಾರೆ. ಸಿಪಿಎಲ್ ಹೊಂದಿರುವವರಿಗೆ ಶಾರ್ಟ್ ಸರ್ವಿಸ್ ಕಮೀಷನ್‌ಗಳನ್ನು ನೀಡಲಾದರೆ ಇತರರು ಖಾಯಂ ಅಧಿಕಾರಿಗಳಾಗುತ್ತಾರೆ.

ತರಬೇತಿಸಂಪಾದಿಸಿ

ವರದಿ ಮಾಡಿಕೊಂಡ ಬಳಿಕ, ಶಿಕ್ಷಾರ್ಥಿಗಳಿಗೆ ಐಎನ್ಎನಲ್ಲಿನ ಒಂದು ಸ್ಕ್ವಾಡ್ರನ್ ಗಳಲ್ಲಿ ನಿಯೋಜನೆ ಮಾಡಲಾಗುತ್ತದೆ. ಪ್ರತಿ ವಿಭಾಗದಲ್ಲಿ ಸುಮಾರು ೪೦ ಶಿಕ್ಷಾರ್ಥಿಗಳಂತೆ ಪ್ರತಿ ಸ್ಕ್ವಾಡ್ರನ್ ನಾಲ್ಕು ವಿಭಾಗಗಳನ್ನು ಒಳಗೊಂಡಿರುತ್ತದೆ. ಕಮಾಂಡರ್/ ಲೆಫ್ಟಿನೆಂಟ್ ಕಮಾಂಡರ್ ಹುದ್ದೆಯ ಸ್ಕ್ವಾಡ್ರನ್ ಕಮಾಂಡರ್ ಅವರು ಸ್ಕ್ವಾಡ್ರನ್‌ನ ಮುಖ್ಯಸ್ಥರಾಗಿರುತ್ತಾರೆ ಮತ್ತು ಇವರಿಗೆ ಲೆಫ್ಟಿನೆಂಟ್ ಹುದ್ದೆಯ ವಿಭಾಗೀಯ ಅಧಿಕಾರಿಗಳು ಸಹಾಯ ಮಾಡುತ್ತಾರೆ. ಪ್ರತಿಯೊಂದು ವಿಭಾಗವು ವಿವಿಧ ಕೋರ್ಸುಗಳಿಂದ ಬಂದಿರುವ ಶಿಕ್ಷಾರ್ಥಿಗಳ ಮಿಶ್ರಣವನ್ನು ಹೊಂದಿರುತ್ತದೆ ಮತ್ತು ಇದನ್ನು ವಿಭಾಗೀಯ ಅಧಿಕಾರಿಯು ನಿಯಂತ್ರಿಸುತ್ತಾರೆ ಮತ್ತು ಮೇಲ್ವಿಚಾರಣೆ ನೋಡಿಕೊಳ್ಳುತ್ತಾರೆ, ಇವರಿಗೆ ಸ್ಕ್ವಾಡ್ರನ್/ಡಿವಿಷನ್‌ನಲ್ಲಿ ಶಿಕ್ಷಾರ್ಥಿ ನೇಮಕಾತಿಗಳಿಂತ ಸಹಾಯ ಮಾಡಲಾಗುತ್ತದೆ. ಈ ಮೂಲಕ ವಿಭಾಗೀಯ ವ್ಯವಸ್ಥೆಯು ಶಿಕ್ಷಾರ್ಥಿಗಳಿಗೆ ಅವರ ಎಲ್ಲಾ ಚಟುವಟಿಕೆಗಳ ಸೂಕ್ಷ್ಮ ಮೇಲ್ವಿಚಾರಣೆ, ಮಾರ್ಗದರ್ಶನ ಮತ್ತು ಸಲಹೆಗೆ ಅವಕಾಶ ಒದಗಿಸುತ್ತದೆ. ಶಿಕ್ಷಾರ್ಥಿಗಳಿಗೆ ಸ್ಕ್ವಾಡ್ರನ್‌ಗಳು ವಾಸದ ಪ್ರದೇಶವಾಗಿರುತ್ತದೆ, ಆದರೆ ತರಗತಿ ಕೋಣೆಯ ಸೂಚನೆಗಳು ಮತ್ತು ಹೊರಾಂಗಣ ತರಬೇತಿಯನ್ನು ಪ್ರತ್ಯೇಕವಾಗಿ ನಿಯೋಜಿತ ತರಬೇತಿ ಪ್ರದೇಶಗಳಲ್ಲಿ ನಡೆಸಲಾಗುವುದು.ತರಬೇತಿಯನ್ನು ಪ್ರತಿ ೨೨ ವಾರಗಳ ಅವಧಿಯ ಎಂಟು ಸೆಮಿಸ್ಟರ್‌ಗಳಲ್ಲಿ ಪೂರ್ಣಗೊಳಿಸಲಾಗುವುದು, ಹಾಗೂ ಇದರಲ್ಲಿ ಸೆಮಿಸ್ಟರ್‌ಗಳ ನಡುವೆ ನಾಲ್ಕು ವಾರಗಳ ರಜೆಯಿರುತ್ತದೆ.

ಐಎನ್‌ಹೆಚ್ಎಸ್ ನವಜೀವನಿಸಂಪಾದಿಸಿ

ಐಎನ್‌ಹೆಚ್ಎಸ್ ನವಜೀವನಿ ಎನ್ನುವುದು ೬೪- ಹಾಸಿಗೆಗಳ ನೌಕಾ ಆಸ್ಪತ್ರೆಯಾಗಿದ್ದು, ಇದಕ್ಕೆ ಕೇಂದ್ರದ ರಕ್ಷಣಾ ಮಂತ್ರಿಯವವರಾದ ಎ.ಕೆ. ಆಂಟನಿಯವರು ಶಂಕುಸ್ಥಾಪನೆಯನ್ನು ನೇರವೇರಿಸಿದ್ದಾರೆ, ಇಲ್ಲಿ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಕೆಡೆಟ್‌ಗಳು, ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಮತ್ತು ಮಾಜಿ-ಸೈನಿಕರ ಆರೋಗ್ಯದ ಅಗತ್ಯತೆಗಳನ್ನು ನೋಡಿಕೊಳ್ಳಲಾಗುತ್ತದೆ.

ಭಾರತೀಯ ನೌಕಾದಳದ ಚಿತ್ರಪಟಸಂಪಾದಿಸಿ

US Navy 070907-N-8591H-194 F-A-18F Super Hornet Strike Fighter Squadron ೧೦೨, F-A-೧೮E Super Hornet Strike Fighter Squadron ೨೭, Indian Navy Sea Harriers, Indian Air Force Jaguars over INS Viraat (R ೨೨), Malabar 07-2.jpg


ಭಾರತೀಯ ವಿಮಾನ ವಾಹಕ ಐಎನ್ಎಸ್ ವಿರಾಟ್ ಮೇಲೆ ಭಾರತೀಯ ನೌಕಾಪಡೆಯ ಸೀ ಹ್ಯಾರಿಯರ್ಸ್, ಯುಎಸ್ ಸೂಪರ್ ಹಾರ್ನೆಟ್ ದಾಳಿ ಯುದ್ಧ ವಿಮಾನ ಮತ್ತು ಭಾರತೀಯ ವಾಯುದಳದ ಜಾಗ್ವಾರ್‌ಗಳು




ಬಂಗಾಳ ಕೊಲ್ಲಿಯಲ್ಲಿ ಜಂಟಿ ಸಮರಾಭ್ಯಾಸದ ಸಂದರ್ಭದಲ್ಲಿ ಭಾರತೀಯ ನೌಕಾಪಡೆಯ ಸೀ ಹಾರಿಯರ್ಸ್ ಪಕ್ಕದಲ್ಲಿ ಯುಎಸ್ ನೌಕಾದಳದ ಎಫ್/ಎ-೧೮ಎಫ್ ಸೂಪರ್ ಹಾರ್ನೆಟ್ ಹಾರುತ್ತಿದೆ




ಸೀ ಹ್ಯಾರಿಯರ್ಸ್‌ನೊಂದಿಗೆ ಭಾರತೀಯ ನೌಕಾಪಡೆಯ ವಿಮಾನ ವಾಹಕ ಐಎನ್ಎಸ್ ವಿರಾಟ್




ಭಾರತೀಯ ನೌಕಾಪಡೆಯ ಮಾರ್ಗದರ್ಶಿ ಕ್ಷಿಪಣಿ ನಾಶಕ ಐಎನ್ಎಸ್ ಮೈಸೂರು




ಭಾರತೀಯ ಅಣು ಸಬ್‌ಮೆರಿನ್ ಐಎನ್ಎಸ್ ಅರಿಹಂತ್




ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್ಎಸ್ ತಲ್ವಾರ್




ಕೇರಳದ ಕಣ್ಣೂರಿನ ಸ್ಥಾನ


ಭಾರತೀಯ ನೌಕಾಪಡೆ

ಭಾರತೀಯ ನೌಕಾಪಡೆ

ಭಾರತೀಯ ನೌಕಾಪಡೆ (Indian Navy) ಇದು ಭಾರತೀಯ ರಕ್ಷಣಾ ಪಡೆಗಳ ನೌಕಾ ಅಂಗ. ಇದು ಜಗತ್ತಿನ ಐದನೇಯ ಅತಿ ದೊಡ್ಡ ನೌಕಾಪಾಡೆಯಾಗಿದ್ದು, ಇದರಲ್ಲಿ ಸುಮಾರು ೫೫,೦೦೦ ಜನರು ಕಾರ್ಯನಿರತರಾಗಿದ್ದಾರೆ. ಇವರಲ್ಲಿ ಸುಮಾರು ೫,೦೦೦ ಜನ ನೌಕಾ ವಾಯುಪಡೆಗೆ ಸೇರಿದ್ದು ಮತ್ತು ಸುಮಾರು ೨೦೦೦ ಜನ ನೌಕಾ ಕಮಾಂಡೋಗಳಾಗಿದ್ದಾರೆ. ಭಾರತೀಯ ನೌಕಾಪಡೆ ೧೫೫ ನೌಕೆಗಳನ್ನು ಹೊಂದಿದ್ದು, ಐ.ಎನ್.ಎಸ್.ವಿರಾಟ್ ಎಂಬ ವಾಯು ಯುದ್ಧ ನೌಕೆಯನ್ನು ಹೊಂದಿದೆ. ಸಂಪೂರ್ಣ ಏಷ್ಯಾ ಖಂಡದಲ್ಲಿರುವ ಎರಡು ವಾಯು ಯುದ್ಧ ನೌಕೆಗಳಲ್ಲಿ ಇದು ಒಂದು.


ನೌಕಾಪಡೆಯ ಮುಖ್ಯಸ್ಥರು

31-05-2016:


ಮುಖ್ಯಸ್ಥರಾಗಿದ್ದ ಅಡ್ಮಿರಲ್‌ ಆರ್‌.ಕೆ. ಧೋವನ್‌ಅವರ ನಿವೃತ್ತಿ.


ವೈಸ್ ಅಡ್ಮಿರಲ್‌ ಸುನಿಲ್‌ ಲಂಬಾ ಅವರು ನೌಕಾಪಡೆ ಸಿಬ್ಬಂದಿ ಮುಖ್ಯಸ್ಥರಾಗಿ 31/05/2016 ಮಂಗಳವಾರ ಅಧಿಕಾರ ಸ್ವೀಕರಿಸಿದರು. ಈ ವೇಳೆ ಗೌರವ ವಂದನೆ ಹಾಗೂ ಪ್ರತಿಜ್ಞಾ ವಿಧಿ ಸ್ವೀಕರಿಸಿದರು, ಅಧಿಕಾರ ಸ್ವೀಕರಿಸಿದ ಲಂಬಾ ಅರು ಮೇ 31, 2019ರವರೆಗೆ ಕಾರ್ಯನಿರ್ವಹಿಸಲಿದ್ದಾರೆ.


58 ವರ್ಷದ ಲಂಬಾ ಅವರು ಪಶ್ಚಿಮ ನೌಕಾದಳದ ಫ್ಲ್ಯಾಗ್ ಆಫೀಸರ್ ಆಗಿ ಕಾರ್ಯ ನಿರ್ವಹಿಸಿದ್ದು, 1978ರಲ್ಲಿ ಭಾರತೀಯ ನೌಕಾಪಡೆಯ ಕಾರ್ಯನಿರ್ವಾಹಕ ಶಾಖೆಗೆ ನೇಮಕಗೊಂಡಿದ್ದರು. ಅವರು, ನೌಕಾಯಾನ ಹಾಗೂ ನಿರ್ದೇಶನ ತಜ್ಞ.

Admiral RK Dhowan, the outgoing CNS handovers the traditional telescope of the CNS to Admiral Lanba as he takes charge as the chief at Naval Headquarters, New Delhi on May 31, 2016

[೪]

ನೌಕಾಪಡೆಗೆ ‘ಅರಿಹಂತ್‌’ ಸೇರ್ಪಡೆ

19 Oct, 2016;


ಅರಿಹಂತ-ಪ್ರಥಮವರ್ಗದ ಜಲಾಂತರ್ಗಾಮಿ


ದೇಶೀಯವಾಗಿ ನಿರ್ಮಿಸಲಾದ ಮೊದಲ ಅಣ್ವಸ್ತ್ರ ಜಲಾಂತರ್ಗಾಮಿ ‘ಐಎನ್‌ಎಸ್‌ ಅರಿಹಂತ್‌’ ರಹಸ್ಯವಾಗಿ ತನ್ನ ಕಾರ್ಯಾಚರಣೆ ಆರಂಭಿಸಿದೆ. ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿರುವ ಈ ಜಲಾಂತರ್ಗಾಮಿ ಅಣ್ವಸ್ತ್ರಗಳನ್ನು ಸಿಡಿಸುವ ಸಾಮರ್ಥ್ಯ ಹೊಂದಿದೆ. ಆಗಸ್ಟ್‌ 25ರಂದು ವಿಶಾಖಪಟ್ಟಣದಲ್ಲಿ ಈ ಜಲಾಂತರ್ಗಾಮಿಯನ್ನು ನೌಕಾಪಡೆಗೆ ಸೇರ್ಪಡೆ ಮಾಡಲಾಗಿದೆ ಎಂದು ವರದಿಯಾಗಿದೆ. ಆದರೆ, ಈ ಜಲಾಂತರ್ಗಾಮಿಯನ್ನು ನೌಕಾಪಡೆಗೆ ಸೇರಿಸಿರುವ ಕುರಿತು ಯಾವುದೇ ಮಾಹಿತಿಯನ್ನು ಸರ್ಕಾರ ಬಹಿರಂಗಪಡಿಸಿಲ್ಲ. ರಕ್ಷಣಾ ಸಚಿವಾಲಯ ಮತ್ತು ನೌಕಾಪಡೆ ಈ ಕುರಿತ ವರದಿಗಳನ್ನು ದೃಢಪಡಿಸಿಲ್ಲ ಅಥವಾ ತಳ್ಳಿ ಹಾಕಿಲ್ಲ. ‘ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗುವುದು’ ಎಂದು ವೈಸ್‌ ಆಡ್ಮಿರಲ್‌ ಜಿ.ಎಸ್‌. ಪಬ್ಬಿ ತಿಳಿಸಿದ್ದಾರೆ. ‘ಐಎನ್‌ಎಸ್‌ ಅರಿಹಂತ್‌’ ಸೇರ್ಪಡೆಯಿಂದ ಭೂಮಿ, ಆಕಾಶ ಮತ್ತು ಸಮುದ್ರದಿಂದ ಅಣ್ವಸ್ತ್ರ ದಾಳಿ ನಡೆಸುವ ಸಾಮರ್ಥ್ಯವನ್ನು ಭಾರತ ಹೊಂದಿದಂತಾಗಿದೆ.


ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್‌ ಕಲಾಂ ಅವರ ಹೆಸರು ಇರಿಸಲಾಗಿರುವ ‘ಕೆ’ ಸರಣಿಯ ಕ್ಷಿಪಣಿಗಳನ್ನು ಈ ಜಲಾಂತರ್ಗಾಮಿ ಹೊಂದಿದೆ. ‘ಕೆ–15’ ಕ್ಷಿಪಣಿಗಳು 750 ಕಿಲೋ ಮೀಟರ್‌ ಮತ್ತು ‘ಕೆ–4’ ಕ್ಷಿಪಣಿಗಳು 3,500 ಕಿಲೋ ಮೀಟರ್‌ ದೂರವರೆಗೆ ಸಾಗಬಲ್ಲವು. ‘ಕೆ–5’ ಕ್ಷಿಪಣಿಗಳು ಇನ್ನೂ ಹೆಚ್ಚಿನ ಸಾಮರ್ಥ್ಯ ಹೊಂದಿವೆ. ಆದರೆ, ಈ ವಿವಿಧ ಮಾದರಿಯ ಕ್ಷಿಪಣಿಗಳನ್ನು ಅಳವಡಿಸಿರುವುದನ್ನು ನೌಕಾಪಡೆ ದೃಢಪಡಿಸಿಲ್ಲ. 2013ರ ಜನವರಿಯಲ್ಲಿ  ಈ ಕ್ಷಿಪಣಿಗಳ ಸಾಮರ್ಥ್ಯದ ಬಗ್ಗೆ ನೀರಿನ ಒಳಗೆ ಪರೀಕ್ಷೆ ಕೈಗೊಳ್ಳಲಾಗಿತ್ತು. ಜಲಾಂತರ್ಗಾಮಿಯಿಂದ ಕನಿಷ್ಠ ಮೂರು ಬಾರಿ ಕ್ಷಿಪಣಿಗಳನ್ನು ಸಿಡಿಸುವ ಪರೀಕ್ಷೆ ಕೈಗೊಳ್ಳುವುದು ಕಡ್ಡಾಯವಾಗಿದೆ. ಕಳೆದ ವರ್ಷ ಪರಿಸರ ಖಾತೆ ಹೊಂದಿದ್ದ ಪ್ರಕಾಶ್‌ ಜಾವಡೇಕರ್‌ ಅವರು ನಿಕೋಬಾರ್‌ನ ತಿಲಾಂಚಂಗ್‌ ದ್ವೀಪದಲ್ಲಿ ನೀರಿನ ಒಳಗೆ ಕ್ಷಿಪಣಿಗಳನ್ನು ಸಿಡಿಸುವ ಪರೀಕ್ಷೆಗೆ ನೌಕಾಪಡೆಗೆ ಅನುಮತಿ ನೀಡಿದ್ದರು. ಈ ಪರೀಕ್ಷೆ ಬಳಿಕ ಸರ್ಕಾರ ಮೌನವಹಿಸಿತ್ತು. ಆದರೆ, ಜಲಾಂತರ್ಗಾಮಿಯ ಖಂಡಾಂತರ ಕ್ಷಿಪಣಿಗಳ ಕಡ್ಡಾಯ ಪ್ರಯೋಗ ಇನ್ನೂ ಪೂರ್ಣಗೊಳ್ಳದ ಕಾರಣ ‘ಅರಿಹಂತ್‌’ ಇನ್ನೂ ಕಾರ್ಯಾಚರಣೆಗೆ ನಿಯೋಜಿಸಲು ಸಿದ್ಧವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಅಣು ಸಾಮರ್ಥ್ಯದ ಎರಡನೇ ಜಲಾಂತರ್ಗಾಮಿ ‘ಐಎನ್‌ಎಸ್‌ ಅರಿಧಾನ್‌’ ಇನ್ನೂ ನಿರ್ಮಾಣ ಹಂತದಲ್ಲಿದೆ. ಅಮೆರಿಕ, ಬ್ರಿಟನ್‌, ರಷ್ಯಾ, ಫ್ರಾನ್ಸ್‌ ಮತ್ತು ಚೀನಾ ಮಾತ್ರ ಅಣು ಸಾಮರ್ಥ್ಯದ ಜಲಾಂತರ್ಗಾಮಿಗಳನ್ನು ಹೊಂದಿವೆ.


ಮುಖ್ಯಸ್ಥರ ನೇಮಕ

31 ಮೇ 2016 ರಂದು ನಿವೃತ್ತಿ ಹೊಂದಿದ ಅಡ್ಮಿರಲ್ ರಾಬಿನ್ ಕೆ. ಅವರಿಂದ ಕೇಂದ್ರ ಸರಕಾರದ ನೌಕಾ ಸಿಬ್ಬಂದಿ ಮುಖ್ಯಸ್ಥರಾಗಿ ಅದೇ ದಿನ ಸುನಿಲ್ ಲಾನ್ಬಾ ಅಧಿಕಾರ ವಹಿಸಿಕೊಂಡಿದ್ದಾರೆ,(Admiral Sunil Lanba, AVSM, SM).


ನೌಕಾಪಡೆಯ ಸಾಮರ್ಥ್ಯ

ಮೂರು ಕಡೆ ಸಾಗರ ಆವರಿಸಿರುವ ಭಾರತದ ರಕ್ಷಣೆಗೆ ಕನಿಷ್ಠ ಮೂರು ವಿಮಾನವಾಹಕ ನೌಕೆಗಳು ಬೇಕು. ಆದರೆ ಭಾರತ ಈಗ ‘ವಿಕ್ರಮಾದಿತ್ಯ’ ಒಂದನ್ನೇ ನೆಚ್ಚಿದೆ. ಈ ನೌಕೆಗೂ ಅಗತ್ಯ ಸಂಖ್ಯೆಯಲ್ಲಿ ಬೆಂಗಾವಲು ಸಬ್‌ಮರೀನ್‌ಗಳು ಮತ್ತು ಆಗಸದಿಂದಲೇ ಸಬ್‌ಮರೀನ್‌ಗಳನ್ನು ಗುರುತಿಸಿ ನಾಶಪಡಿಸಬಲ್ಲ ಹೆಲಿಕಾಪ್ಟರ್‌ಗಳ ಬೆಂಬಲ ಇಲ್ಲ.


ಭಾರತದ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ‘ಐಎನ್‌ಎಸ್‌ ವಿಕ್ರಾಂತ್’ 2013ರಲ್ಲಿ ಸಾಗರಕ್ಕಿಳಿದಿದೆ. ಆದರೆ ಇನ್ನೂ ಅದರ ಪರೀಕ್ಷೆಗಳು ಮುಗಿದಿಲ್ಲ. ಇದು 2020ರ ವೇಳೆಗೆ ಸೇವೆಗೆ ಲಭ್ಯವಾಗಬಹುದು. ಕೊಚಿನ್‌ನಲ್ಲಿ ನಿರ್ಮಾಣವಾಗುತ್ತಿರುವ ಭಾರತದ ಮತ್ತೊಂದು ವಿಮಾನ ವಾಹಕ ನೌಕೆ 2023ರ ವೇಳೆಗೆ ನೌಕಾಪಡೆ ಸೇವೆಗೆ ಲಭ್ಯವಾಗುವ ನಿರೀಕ್ಷೆ ಇದೆ. ರಕ್ಷಣಾ ಸಮತೋಲನದಲ್ಲಿ ಚೀನಾಗೆ ಸಮಾನ ನೆಲೆಯಲ್ಲಿ ನಿಲ್ಲಲು ಮತ್ತು ಹಿಂದೂ ಮಹಾಸಾಗರದಲ್ಲಿ ಪಾರಮ್ಯ ಮೆರೆಯುವ ಕನಸು ನನಸು ಮಾಡಿಕೊಳ್ಳಲು ನಮ್ಮ ನೌಕಾದಳದ ತ್ವರಿತ ಸುಧಾರಣೆ ಅತ್ಯಗತ್ಯ.


ಮುಂದಿನ ಯೋಜನೆ

ಭಾರತ ದೇಶವು ಪ್ರಸ್ತುತ ಎದುರಿಸುತ್ತಿರುವ ಸವಾಲುಗಳು ಮತ್ತು ಭವಿಷ್ಯದ ಬೆಳವಣಿಗೆಗಳನ್ನು ಅಂದಾಜಿಸಿ ನಮ್ಮ ದೇಶದ ನೌಕಾದಳದ ಸಾಮರ್ಥ್ಯ ಹೀಗಿರಬೇಕು ಎಂದು ಕೆಲ ವಿಶ್ಲೇಷಕರು ಲೆಕ್ಕಾಚಾರ ಹಾಕಿದ್ದಾರೆ. ಈ ಲೆಕ್ಕಾಚಾರದಂತೆ ಒಟ್ಟು 3 ವಿಮಾನವಾಹಕ ನೌಕೆಗಳು, 4 ನ್ಯೂಕ್ಲಿಯರ್ ಸಬ್‌ಮರೀನ್‌ಗಳು, 16 ಸಾಂಪ್ರದಾಯಿಕ ಸಬ್‌ಮರೀನ್‌ಗಳು, 32 (ದಾಳಿ) ಸಮರನೌಕೆಗಳು, ಸೈನಿಕರನ್ನು ದೂರ ದೇಶಗಳ ತೀರಕ್ಕೆ ಕ್ಷಿಪ್ರಗತಿಯಲ್ಲಿ ಸಾಗಿಸಬಲ್ಲ 4 ಸಾಗಣೆ (ಆಂಫೀಬಿಯಸ್) ನೌಕೆಗಳು, 4 ತೈಲ ಸಾಗಣೆ ಟ್ಯಾಂಕರ್‌ಗಳು, 12 ಕ್ಷಿಪಣಿ ಉಡಾವಣಾ ನೌಕೆಗಳು, 12 ಮೈನ್‌ (ಸಾಗರದಾಳದ ಬಾಂಬ್) ನಾಶಕ ನೌಕೆಗಳು, 12 ಗಸ್ತು ನೌಕೆಗಳು, 20 ವೇಗವಾಗಿ ಸಂಚರಿಸಬಲ್ಲ ದಾಳಿ ನೌಕೆಗಳು, 12 ಗಸ್ತು ವಿಮಾನಗಳು, ತಲಾ 12ರಿಂದ 24 ಯುದ್ಧ ವಿಮಾನಗಳಿರುವ ನಾಲ್ಕು ವೈಮಾನಿಕ ಯುದ್ಧ ತಂಡಗಳು, 24 ಮಲ್ಟಿರೋಲ್ ಮತ್ತು 36 ಲಘು ಹೆಲಿಕಾಪ್ಟರ್‌ಗಳು ನೌಕಾದಳದಲ್ಲಿ ಇರಬೇಕಂತೆ.


ಸ್ವತಂತ್ರ ನಿರ್ಮಾಣದ ಸಾಧನೆ

ಇದೇ ಮೊದಲ ಬಾರಿಗೆ ಭಾರತೀಯ ನೌಕಾಪಡೆ ಗ್ರಾಹಕನಿಂದ ಉತ್ಪಾದಕ ಸ್ಥಾನಕ್ಕೆ ಭಡ್ತಿ ಪಡೆದಿದೆ. ಹಲವು ಸ್ವದೇಶಿ ನಿರ್ಮಿತ ಯುದ್ಧನೌಕೆ ಮತ್ತು ಸಬ್‌ಮರೀನ್‌ಗಳನ್ನು ಈಗಾಗಲೇ ಸೇವೆಗೆ ನಿಯೋಜಿಸಲಾಗಿದೆ. ಕೊಚ್ಚಿ, ವಿಶಾಖಪಟ್ಟಣ, ಮುಂಬೈ ಸೇರಿದಂತೆ ವಿವಿಧೆಡೆ ಯುದ್ಧನೌಕೆಗಳನ್ನು ಕಟ್ಟುವ ಕೆಲಸ ಭರದಿಂದ ಸಾಗಿದೆ. ಕಳೆದ ಕೆಲ ವರ್ಷಗಳಲ್ಲಿ ಸೇವೆಗೆ ನಿಯೋಜನೆಗೊಂಡ ಯುದ್ಧನೌಕೆಗಳ ಪೈಕಿ ‘ಗೈಡೆಡ್‌ ಮಿಸೈಲ್ ಡೆಸ್ಟ್ರಾಯರ್’ (ಕ್ಷಿಪಣಿ ನಾಶಕ ನೌಕೆ) ಐಎನ್‌ಎಸ್ ಮರ್ಮಗೋವಾ, ವಿಮಾನ ವಾಹಕ ನೌಕೆ ಐಎನ್‌ಎಸ್‌ ವಿಕ್ರಮಾದಿತ್ಯ ಮತ್ತು ಸಬ್‌ಮರೀನ್ ನಾಶಕ ನೌಕೆ ಐಎನ್‌ಎಸ್‌ ಕರ್ಮೊತ್ರಾ ಉಲ್ಲೇಖನೀಯ. ಯುದ್ಧ ವಿಮಾನಗಳನ್ನು ಸಾಗಿಸುವ ವಿಕ್ರಮಾದಿತ್ಯದಿಂದ ಭಾರತಕ್ಕೆ ವೈರಿ ನೆಲದಲ್ಲಿಯೇ ಯುದ್ಧ ಮಾಡುವ ಮತ್ತು ಆಗಸದಲ್ಲಿಯೇ ಯುದ್ಧ ವಿಮಾನಗಳಿಗೆ ಇಂಧನ ತುಂಬಿಸಿ ಅವುಗಳ ರೀಚ್ (ತಲುಪುವಿಕೆ) ಹೆಚ್ಚಿಸುವ ಸಾಮರ್ಥ್ಯ ಬಂದಿದೆ. ಟಾರ್ಪೆಡೊ (ನೀರಿನಾಳದ ಕ್ಷಿಪಣಿಗಳು) ಮತ್ತು ಸಬ್‌ಮರೀನ್‌ಗಳ ದಾಳಿಯನ್ನು ಕರ್ಮೋತ್ರಾ ನಿರ್ವಹಿಸಬಲ್ಲದು.


ವಿಶಾಖಪಟ್ಟಣ ನೌಕಾನೆಲೆಯಲ್ಲಿ ನಿರ್ಮಾಣವಾದ ಭಾರತದ ಮೊದಲ (ಸ್ವದೇಶಿ ನಿರ್ಮಿತ) ಅಣ್ವಸ್ತ್ರ ಚಾಲಿತ ಸಬ್‌ಮರೀನ್ ಐಎನ್ಎಸ್ ಅರಿಹಂತ್ ಸದ್ದಿಲ್ಲದೆ ಸೇವೆಗೆ ನಿಯೋಜನೆಗೊಂಡಿದೆ. ರಕ್ಷಣಾ ಇಲಾಖೆ ಈ ವಿಚಾರವನ್ನು ಅಧಿಕೃತವಾಗಿ ಒಪ್ಪಿಕೊಳ್ಳುತ್ತಲೂ ಇಲ್ಲ– ನಿರಾಕರಿಸುತ್ತಲೂ ಇಲ್ಲ. ಐಎನ್‌ಎಸ್‌ ಅರಿಹಂತ್‌ನ ಸಾಮರ್ಥ್ಯ, ಸಾಗರ ಪರೀಕ್ಷೆಗಳ ಮಾಹಿತಿ ಹೊರ ಜಗತ್ತಿಗೆ ಅಪರಿಚಿತ. ಆದರೆ ಇದು ಭಾರತೀಯ ನೌಕಾಪಡೆಯ ಮಹತ್ವಾಕಾಂಕ್ಷಿ ಕನಸೊಂದು ನನಸಾದ ಸಾಧನೆ ಎನ್ನುವುದು ಮಾತ್ರ ನಿರ್ವಿವಾದ. ‘ಐಎನ್‌ಎಸ್‌ ಅರಿಹಂತ್‌’ ಸೇವೆಗೆ ನಿಯೋಜನೆಗೊಳ್ಳುವ ಮೂಲಕ ನಮ್ಮ ದೇಶಕ್ಕೆ ನೀರಿನಾಳದಿಂದಲೂ ಖಂಡಾಂತರ ಕ್ಷಿಪಣಿ ಉಡಾವಣೆ ಮಾಡುವ ಸಾಮರ್ಥ್ಯ ಬಂದಿದೆ. ಈ ಸಾಧನೆಯೊಂದಿಗೆ ಅಣ್ವಸ್ತ್ರ ಚಾಲಿತ ಸಬ್‌ಮರೀನ್ ವಿನ್ಯಾಸಗೊಳಿಸಬಲ್ಲ ಸಾಮರ್ಥ್ಯ ಹೊಂದಿರುವ ವಿಶ್ವದ 6 ಪ್ರಮುಖ ರಾಷ್ಟ್ರಗಳ ಸಾಲಿಗೆ ಭಾರತವೂ ಸೇರ್ಪಡೆಯಾಗಿದೆ.


ನಮ್ಮ ದೇಶ ‘ಮೊದಲು ಅಣ್ವಸ್ತ್ರ ಬಳಸುವುದಿಲ್ಲ’ ಎಂಬ ವ್ರತ ಪಾಲಿಸುತ್ತಿದೆ. ಇಂಥ ದೇಶಗಳಿಗೆ ಸಮುದ್ರದಾಳದಿಂದ ಅಣ್ವಸ್ತ್ರ ಸಿಡಿತಲೆ ಹೊತ್ತ ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯ ಇರುವ ಸಬ್‌ಮರೀನ್‌ಗಳನ್ನು ಹೊಂದುವುದು ಸೇನಾ ಕಾರ್ಯಪದ್ಧತಿ (ಮಿಲಿಟರಿ ಸ್ಟ್ರಾಟಜಿ) ದೃಷ್ಟಿಯಿಂದ ಅತ್ಯಗತ್ಯ. ಅರಿಹಂತ್‌ನಿಂದಾಗಿ ನೆಲದಿಂದ, ಬಾನಿನಿಂದ, ಸಮುದ್ರದ ಮೇಲಿನಿಂದ ಮತ್ತು ಸಾಗರದಾಳದಿಂದಲೂ ಅಣ್ವಸ್ತ್ರ ಪ್ರಯೋಗಿಸುವ ಸಾಮರ್ಥ್ಯ ಸಿಕ್ಕಂತೆ ಆಗಿದೆ.


ಸ್ಕೌಟ್ ಚಳುವಳಿ ಬೆಳೆದು ಬಂದ ಬಗೆ(ರೀತಿ)

ಸ್ಕೌಟ್ ಚಳುವಳಿ



ಸ್ಕೌಟ್ ಚಳುವಳಿ ವಿಶ್ವವ್ಯಾಪಿಯಾಗಿರುವ ಒಂದು ಯುವ ಜನಾಂಗದ ಕೂಟ. ಈ ಚಳುವಳಿಯ ಉದ್ದೇಶವು ಯುವ ಪೀಳಿಗೆಯ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಗೆ. ಈ ಚಳುವಳಿಯನ್ನು ೧೯೦೭ರಲ್ಲಿ ರಾಬರ್ಟ್ ಬೇಡೆನ್ ಪೊವೆಲ್ ಇಂಗ್ಲೆಂಡ್ನಲ್ಲಿ ಪ್ರಾರಂಭಿಸಿದರು.

ಬಾಯ್ ಸ್ಕೌಟ್ಸ್ ಮತ್ತು ಗರ್ಲ್ ಗೈಡ್ಸ್ ಆರಂಭ

ಇಂಗ್ಲೆಂಡಿನ ನಿವೃತ್ತ ಸೈನ್ಯಾಧಕಾರಿಯಾಗಿದ್ದ ಲಾರ್ಡ್ ಬೇಡನ್‘ ಪೊವೆಲ್‌ರಿಂದ 1907 ರಲ್ಲಿ ಗಂಡುಮಕ್ಕಳ ಸ್ಕೌಟ್‘ (ಬಾಯ್ ಸ್ಕೌಟ್) ಆರಂಭ ವಾಯಿತು . ಪ್ರಯೋಗಾರ್ಥವಾಗಿ 20 ಹುಡುಗರಿಗೆ ಬ್ರೌನ್ ಸೀ ದ್ವೀಪದಲ್ಲಿ ಕ್ಯಾಂಪ್ ಮಾಡಿ ಶಿಕ್ಷಣ ಕೊಡಲಾಯಿತು. ಅದರ ಉಪುಕ್ತತೆ ಮತ್ತು ಯಶಸ್ವಿಯೆಂದು ಕಂಡು ಬಂದಿದ್ದರಿಂದ ಅವರು ಸ್ಕೌಟಿಂಗ್ ಫಾರ್ ಬಾಯ್ಸ್ ಎಂಬ ಸ್ಕೌಟ್ ಶಿಕ್ಣಣದ ವಿವರವಾದ ಪಠ್ಯವುಳ್ಳ 15 ದಿನದ ನಿಯತಕಾಲಿಕೆ ಪುಸ್ತಕವನ್ನು ಪ್ರಕಟಿಸಿದರು. ಇದು ಮುಂದಿನ ಸ್ಕೌಟ್ ಶಿಕ್ಷಣ ಮತ್ತು ಚಳುವಳಿಗೆ ನಾಂದಿಯಾಯಿತು.


ಸನ್ 1910ರಲ್ಲಿ ಕ್ರಿಸ್ಟಲ್ ಪ್ಯಾಲೇಸ್ ರ‍್ಯಾಲಿ (ಎಲ್ಲಾ ಸ್ಕೌಟ್ ಮಕ್ಕಳ ಕೂಟ) ನೆಡೆಸಿದರು. ಅದರಲ್ಲಿ ಹೆಣ್ಣು ಮಕ್ಕಳೂ ಸ್ಕೌಟ್ ತೊಡಿಗೆಯೊಂದಿಗೆ ಬಂದಿದ್ದರು ಮತ್ತು ತಾವೂ ಬಾಗವಹಿಸುವುದಾಗಿ ಹೇಳಿದರು. ಪೊವೆಲ್ಲರ ತಂಗಿ ಆಗ್ನೆಸ್ ಬೇಡನ್ ಪೊವೆಲ್ ರ ನೇತ್ರತ್ವದಲ್ಲಿ ಗರ‍್ಲ್ ಗೈಡ್ ಎಂಬ ವಿಭಾಗವೂ ಆರಂಭವಾಯಿತು.


1909 ರಲ್ಲಿ. ನಿವೃತ್ತ ಕ್ಯಾಪ್ಟನ್ ಟಿ ಎಚ್ ಬೇಕರ್ ಎಂಬವರು ಬೆಂಗಳೂರಿನ ಬಿಶಪ್ ಕಾಟನ್ ಶಾಲೆಯಲ್ಲಿ ಒಂದು ಬಾಯ್ ಸ್ಕೌಟ್ ತಂಡದ ರೂಪದಲ್ಲಿ ಆರಂಭಿಸಿದರು. ರಾಷ್ಟ್ರೀಯ ನಾಯಕರಾದ ಪಂಡಿತ ಮದನ ಮೋಹನ ಮಾಳವೀಯಸೇವಾ ಸಮಿತಿ ಸ್ಕೌಟ್ ಎಸೋಸಿಯೇಶನನ್ನು ಸ್ಥಾಪಿಸಿದರು. ಡಾ ಅನ್ನಿ ಬೆಸೆಂಟ್ಚೆನ್ನೈಯಲ್ಲಿ ಸ್ಕೌಟ್ ಎಸೊಸಿಯೇಶನ್ ಫಾರ್ ಇಂಡಿಯನ್ ಬಾಯ್ಸ್ ಎಂಬ ಸಂಸ್ಥೆಯನ್ನು ಆರಂಭಿಸಿದರು.


ಭಾರತದಲ್ಲಿ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆ


ರಾಬರ್ಟ ಬೇಡನ್ ಪೊವೆಲ್ (22 February 1857 – 8 January 1941), also known as B-P or Lord Baden-Powell, (ಇಂಗ್ಲಿಷ್ ವಿಭಾಗದಿಂದ)

ಹೀಗೆ ಭಾರತದಲ್ಲೂ ಅನೇಕ ಕಡೆಗಳಲ್ಲಿ ಸ್ಕೌಟ್ ಚಳುವಲಿ ಬೇರೆ ಬೇರೆ ಹೆಸರಿನಲ್ಲಿ ಪ್ರತ್ಯೇಕವಾಗಿ ಆರಂಭವಾಯಿತು . 1910 ರಲ್ಲಿ ಜಬ್ಬಲ್ಪುರದಲ್ಲಿ ಗರ್ಲ್ ಗೈಡ್ ಆರಂಭವಾಯಿತು. ಅದರೆ ಅದು ಹೆಚ್ಚಾಗಿ ಆಂಗ್ಲೋ ಇಂಡಿಯನ್ನರಿ ಗೆ ಆಗಿತ್ತುನಂತರ ಭಾರತೀಯ ಮಕ್ಕಳಿಗೂ ಆಶಿಕ್ಷಣ ದೊರೆಯುವಂತಾಯಿತು. 1927 1937 ರಲ್ಲಿ ಬೇಡನ್ ಪೊವೆಲ್ ಭಾರತಕ್ಕೆ ಬಂದಾಗ ಇವನ್ನೆಲ್ಲಾ ಒಟ್ಟು ಸೇರಿಸಲು ಪ್ರಯತ್ನಿಸಿದರು ಆದರೆ ಆಗಲಿಲ್ಲ.


ಭಾರತವು ೧೯೪೭ ರಲ್ಲಿ ಸ್ವಾತಂತ್ರಗಳಿಸಿದ ನಂತರ ಮೊದಲ ಪ್ರಧಾನಿ ಪಂ.ಜವಾಹರಲಾಲ್ ನೆಹರೂ , ಶಿಕ್ಷಣ ಮಂತ್ರಿ ಮೌಲಾನಾ ಅಬುಲ್ ಕಲಂ ಅಜಾದ್ ಅವರು , ಈಗಿನ ಉತ್ರ ಪ್ರದೇಶದ ರಾಜ್ಯಪಾಲ ಶ್ರೀ ಮಂಗಲದಾಸ್ ಪಕ್ವಾಸ್, ಪಂ. ಹೃದಯನಾಥ ಕುಂಜ್ರು,


ಶ್ರೀ ರಾಮ ಭಾಜಪೇಯಿ , ನ್ಯಾಯ ಮೂರ್ತಿ ವಿವಿಯನ್ ಬೋಸ್, ಮೊದಲಾದವರನ್ನು ಒಪ್ಪಿಸಿ ವಿವಿಧ ಪ್ರದೇಶಗಳಲ್ಲಿ ಇದ್ದ ಸ್ಕೌಟ್ಸ್ ಗೈಡ್ಸ್ ಸಂಸ್ಥೆಗಳನ್ನು 7 ನವೆಂಬರ್ ೧೯೫೦ರಲ್ಲಿ ಒಂದು ಸಂಸ್ಥೆಯಾಗಿ ಒಗ್ಗೂಡಿಸಿದರು. ದಿ.15- 8-1951.ರಲ್ಲಿ ಭಾರತದ ಗರ್ಲ್ ಗೈಡ್ ಸಂಸ್ಥೆಯೂ ಇದರೊಂದಿಗೆ ಸೇರಿತು. ಕೇಂದ್ರ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಡಾ..ತಾರಾಚಂದ್‘ ಈ ಕ್ರಿಯೆಗೆ ವಿಶೇಷ ಶ್ರಮಿಸಿದರು.


ಈ ಭಾರತ ಸ್ಕೌಟ್ಸ್ ಮತ್ತು ಗೈರ್ಡ್ಸ್ ಎಂದು ನಾಮಕಣಗೊಂಡ ಸಂಸ್ಥೆ ಸೊಸೈಟಿ ಕಾಯಿದೆ ಮತ್ತು ನಿಯಮಗಳ ಅಡಿಯಲ್ಲಿ ನೊಂದಾಯಿಸಲ್ಪಟ್ಟಿದೆ. ಅದರ ಮುಖ್ಯ ಕಾರ್ಯಾಲಯ ೧೯೬೩ ರರವರೆಗೆ ದೆಹಲಿಯ ಕನ್ನಾಟ ಪ್ರದೇಶದಲ್ಲಿದ್ದು ನಂತರ.ಲಕ್ಷ್ಮಿ ಮುಜುಮ್ದಾರ್ ಭವನ, 16 ಮಹಾತ್ಮ ಗಾಂಧಿ ಮಾರ್ಗ ಇಂದ್ರ ಪ್ರಸ್ಥ ಎಸ್ಟೇಟ್ ನವ ದೆಹಲಿ 110002; ಇಲ್ಲಿ ನೆಡೆಯುತ್ತಿದೆ.(Lakshmi Mazumdar Bhawan , 16, Mahatma Gandhi Marg, Indra Prasth Estate, New Delhi – 110002)


ಈ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಎಂದು ನಾಮಕಣಗೊಂಡ ಸಂಸ್ಥೆ ಅಂತರರಾಷ್ತ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗಳಲ್ಲಿ ನೊಂದಾಯಿಸಿಕೊಂಡಿದೆ.ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಜಗತ್ತಿನ ಅತ್ಯಂತದೊಡ್ಡ ಸೇವಾಸಂಸ್ಥೆಗಳಲ್ಲಿ ಒಂದು.


ಕರ್ನಾಟಕದಲ್ಲಿ ಸ್ಕೌಟ್ ಚಳವಳಿ

೧೯೧೭ರಲ್ಲಿ ಸ್ಕೌಟ್ ಚಳವಳಿ ಕರ್ನಾಟಕದಲ್ಲಿ ಪ್ರಾರಂಭವಾಯಿತು. ‘ದ ಬಾಯ್ಸ್ ಸ್ಕೌಟ್ಸ್ ಆಫ್ ಮೈಸೂರ್’ ಎಂಬ ಹೆಸರಿನ ಸಂಸ್ಥೆಗೆ ಅಂದಿನ ಮಹಾರಾಜರಾಗಿದ್ದ ಶ್ರೀ ಕೃಷ್ಣದೇವರಾಜ ಒಡೆಯರ್ ಪೋಷಕರಾಗಿದ್ದರು. ಅವರ ಸೋದರ ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ರಾಜ್ಯ ಮುಖ್ಯಸ್ಥರಾಗಿದ್ದರು. ತಮ್ಮ ಆಡಳಿತದ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸ್ಕೌಟ್ ಚಟುವಟಿಕೆಗಳನ್ನು ಆರಂಭಿಸಬೇಕೆಂದು ಮಹಾರಾಜರು ೧೯೧೭ರ ಅಕ್ಟೋಬರ್ ೩ರಂದು ರಾಜಾಜ್ಞೆಯನ್ನು ಹೊರಡಿಸಿದರು.

ಶ್ರೀ ಜಯಚಾಮರಾಜ ಒಡೆಯರರೂ ಬಾಲಕರಾಗಿದ್ದಾಗ ಸ್ಕೌಟಿನಲ್ಲಿ ಮುಖ್ಯ ಕಬ್ ಆಗಿದ್ದರು. ನಂತರ ೧೯೨೭ರಲ್ಲಿ ‘ದ ಬಾಯ್ಸ್ ಸ್ಕೌಟ್ಸ್ ಆಫ್ ಮೈಸೂರ್’ ಸಂಸ್ಥೆಯ ಸೋದರ ಸಂಸ್ಥೆಯಾಗಿ ‘ದ ಗರ್ಲ್ ಗೈಡ್ಸ್ ಆಫ್ ಮೈಸೂರ್’ ಎಂಬುದು ಸ್ಥಾಪನೆಯಾಯಿತು. ಇವೆರಡೂ ಸ್ವತಂತ್ರವಾಗಿಯೇ ಕಾರ್ಯ ನಿರ್ವಹಿಸುತ್ತಿದ್ದು, ೧೯೫೧ರಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟನೆಯೊಂದಿಗೆ ವಿಲೀನವಾಯಿತು.

ಸ್ಕೌಟ್ ಗೈಡ್ ಮೇಳಗಳು

ಬೇಡನ್ ಪೊಡೆಲ್ ನಂತರ ಆಯ್ಕೆ ಮಾಡಿದ ಸ್ಕೌಟ್ ಚಿನ್ಹೆ

ಸ್ಕೌಟ್ ಗೈಡ್ ಮಹಾಮೇಳಗಳು,ರಾಜ್ಯಮಟ್ಟದ ,ಜಿಲ್ಲಾಮಟ್ಟದ ಮೇಳಗಳು ಅಥವಾ ಜಾಂಬೂರಿಗಳು ಮತ್ತು ರ‍್ಯಾಲಿಗಳನ್ನು


ಅಗಾಗ ನೆಡಸಲಾಗುತ್ತದೆ.

ಮೊದಲನೇ ಜಾಗತಿಕ ಸ್ಕೌಟ್ ಜಾಂಬೂರಿಯು (ಜಾಗತಿಕ ಸ್ಕೌಟ್ ಮಹಾಮೇಳ) 1920ನೇ ಇಸವಿಯಲ್ಲಿ , ಇಂಗ್ಲೆಂಡಿನ ಲಂಡನ್` ನ ಒಲಂಪಿಯಾದಲ್ಲಿ ನಡೆಯಿತು. ಅದರಲ್ಲಿ 27 ದೇಶಗಳ 8000 ಸ್ಕೌಟ್ ಗೈಡ್ ಗಳು ಸೇರಿದ್ದರು.


ಒಂಭತ್ತನೇ ಜಾಗತಿಕ ಸ್ಕೌಟ್ ಗೈಡ್ ಬಜಾಂಬೂರಿಯು, 1957 ರಲ್ಲಿ , ಬೇಡನ್ ಪೊವೆಲ್ ಅವರ ಶತಮಾನದ ಜನ್ಮದಿನೋತ್ಸವ ಹಾಗೂ 1907ರಲ್ಲಿ ಬ್ರೌನ್ ಸೀ ದ್ವೀಪದಲ್ಲಿ ನೆಡೆದ ಪ್ರಥಮ ಸ್ಕೌಟ್` ಕ್ಯಾಂಪ್`ನ 50 ನೇ ವರ್ಷದ ಸ್ಮರಣೆಯ ಅಂಗವಾಗಿ ಇಂಗ್ಲೆಂಡಿನ ಸುತ್ತನ್` ಪಾರ್ಕ್`ನಲ್ಲಿ ಆಯೋಜಿಸಲಾಗಿತ್ತು. ಅದರಲ್ಲಿ ಸ್ಕೌಟ್`ಗಳು, ರೋವರುಗಳು,ಸ್ಕೌಟ್ಟ ಮಾಸ್ಟರ್`ಗಳು 84 ದೇಶಗಳಿಂದ ಆಗಮಿಸಿದ್ದರು. ಅವರ ಒಟ್ಟು ಸಂಖ್ಯೆ 35,000 ದಷ್ಟಿತ್ತು.


ಭಾರತದಲ್ಲಿ ಸಾಮಾನ್ಯವಾಗಿ ನಾಲ್ಕು ವರ್ಷಕ್ಕೊಮ್ಮೆ ರಾಷ್ಟ್ರೀಯ ಸ್ಕೌಟ್` ಗೈಡ್` ಜಾಂಬೂರಿ ನೆಡೆಯುವುದು. ಅದರಲ್ಲಿ ಎಲ್ಲಾ ರಾಜ್ಯಗಳ ಸ್ಕೌಟ್`ಗರ್ಲ್`ಗೈಡ್ ಗಳು, ರೋವರುಗಳು, ರೇಂಜರ್`ಗಳು, ಸ್ಕೌಟ್`ಮಾಸ್ಟರ್`ಗಳು, ಸೇರುತ್ತಾರೆ.


ಭಾರತದ ಸ್ಕೌಟ್` ಗೈಡ್ ಗಳ 17ನೇ ರಾಷ್ಟ್ರೀಯ ಸ್ಕೌಟ್` ಗೈಡ್` ಜಾಂಬೂರಿ ಪಿಂಕ್` ಸಿಟಿ ಎಂದು ಕರೆಯಲ್ಪಡುವ ,ರಾಜಾಸ್ಥಾನ ರಾಜ್ಥದ ಜಯಪುರದಲ್ಲಿ 2015 ರ ಜನವರಿಯಲ್ಲಿ ದಿ.3 ರಿಂದ 9ರ ವರೆಗೆ ನೆಡೆಯುವುದು.

ಉದ್ದೇಶಗಳು

ಘೋಷಣೆ:

ಈ ಭಾರತ ಸ್ಕೌಟ್ಸ್ ಮತ್ತು ಗೈಟ್ಸ್ ಸಂಸ್ಥೆಯು, ಒಂದು ಸ್ವಯಂಸೇವಾ ಸಂಸ್ಥೆಯಾಗಿದ್ದು , ರಾಜಕೀಯವಲ್ಲದ, ಮಕ್ಕಳಿಗೆ /ಯುವಕರಿಗೆ ಮೀಸಲಾದ , ಜಾತಿ /ಹುಟ್ಟು, ಮತ, ಪಂಥಗಳ ಬೇಧವಿಲ್ಲದ , ಎಲ್ಲ ಮಕ್ಕಳು, ಯುವಕರಿಗೂ ಅವಕಾಶವಿರುವ, ಈ ಸಂಸ್ಥೆಯ ಮೂಲ ಸ್ಥಾಪಕರಾದ ಲಾಡ್ ಬೇಡನ್ ಪೊವೆಲ್ 1907 ರಲ್ಲಿ ರೂಪಿಸಿದ ನೀತಿ ನಿಯಮ ಮತ್ತು ಉದ್ದೇಶಗಳನ್ನು ಹೊಂದಿದ ಸಂಸ್ಥೆಯಾಗಿರುತ್ತದೆ.


ಉದ್ದೇಶ

ಈ ಚಳುವಳಿಯು ಮಕ್ಕಳು/ಯುವಕರು, ಪೂರ್ಣ, ದೈಹಿಕ, ಬೌದ್ಧಿಕ, ಸಾಮಾಜಿಕ, ದೈವಿಕ ವಾಗಿ ಪೂರ್ಣ ಪ್ರಮಾಣದ ಉನ್ನತಿಯನ್ನು ಸಾಧಿಸುವುದು, ಅಲ್ಲದೆ ಪ್ರಾದೇಶಿಕ, ರಾಷ್ಟ್ರೀಯ, ಅಂತರ ರಾಷ್ಟ್ರೀಯ ಮಟ್ಟದ ಹೊಣೆಗಾರಿಕೆಯುಳ್ಳ ವ್ಯಕ್ತಿಗಳಾಗಿ ರೂಪುಗೊಳ್ಳುವುದು.


ತತ್ವಗಳು

ಸ್ಕೌಟ್ / ಗೈಡ್ ಸಂಸ್ಥೆಯ ನಿಯಮ / ತತ್ವಗಳು ಈ ಕೆಳಕಂಡಂತೆ ಇವೆ:


ದೇವರಿಗೆ ಸಲ್ಲಿಸುವ ಕರ್ತವ್ಯ :

ದೈವಿಕ/ಅಧ್ಯಾತ್ಮಿಕ ತತ್ವ/ನೀತಿನಿಯಮಗಳಿಗೆ ಅದರ ನಿರ್ವಹಣೆಗೆ ಮಾಡಬೇಕಾದ ಕರ್ತವ್ಯಗಳ ಪಾಲನೆಗೆ ಬದ್ಧನಾಗಿರುವುದು.


ಇತರರಿಗೆ ಸಲ್ಲಬೇಕಾದ ಕರ್ತವ್ಯ:

ತನ್ನ ಪ್ರಾದೇಶಿಕ ಹಿತದ ಜೊತೆಗೆ, ದೇಶಕ್ಕೆ/ದೇಶದ ಅಭಿವೃದ್ಧಿಗೆ, ಮತ್ತು ಅಂತರರಾಷ್ಟ್ರೀಯ ಶಾಂತಿ -ಸೌಹಾರ್ದತೆ, ಸಹಬಾಳ್ವೆಗೆ, ಸಹೋದ್ಯೋಗಿಗಳೊಂದಿಗೆ ಗೌರವಯುತ ನಡತೆಗೆ, ಮತ್ತು ಜಗತ್ತಿನ ಪ್ರಾಕೃತಿಕ ಪರಿಸರಕ್ಕೆ ಹೊಂದಿಕೊಳ್ಳುವ, ಪರಸ್ಪರ ಸಹಕರಿಸುವ ಬದ್ಧತೆಯನ್ನು ಹೊಂದಿರುವುದು.


ತನ್ನ ಬಗೆಗೆ ನಡೆಸಬೇಕಾದ ಕರ್ತವ್ಯ:

ತನ್ನ ಪೂರ್ಣ ಬೆಳವಣಿಗೆಗೆ ಮಾಡಬೇಕಾದ ಕರ್ತವ್ಯದ ಹೊಣೆಗಾರಿಕೆ.(ಹೊಣೆಗಾರಿಕೆಯಿಂದ ನಡೆದುಕೊಳ್ಳುವುದು: ವ್ಯಾಯಾಮ ಇತ್ಯಾದಿ)


ಶಿಕ್ಷಣ ವಿಧಾನ ಮತ್ತು ಮಾರ್ಗ:ಸಂಪಾದಿಸಿ

ಸ್ಕೌಟ್ / ಗೈಡ್ ಶಿಕ್ಷಣ ವಿಧಾನವು ಸ್ವಯಂ ಶೀಕ್ಷಣದ ಮೂಲಕ ಹಂತ ಹಂತವಾಗಿ ಮುಂದುವರಿಯುತ್ತದೆ. ಅದು ಈ ಕೆಳಗಿನ ವಿಧಾನವನ್ನು ಅನುಸರಿಸುತ್ತದೆ.:


ಪ್ರತಿಜ್ಞೆ/ವಚನ ಸ್ವೀಕಾರ ಮತ್ತು ಸ್ಸೌಟ್ ನಿಯಮಗಳು :


ಕ್ರಿಯೆ ಅಥವಾ ಮಾಡುವುದರಿಂದ ಕಲಿಕೆ :


ದೊಡ್ಡವರ ಮೇಲ್ವಿಚಾರಣೆಯಲ್ಲಿ ಸದಸ್ಯತ್ವ ಹೊಂದಿದ ಸಣ್ಣ ಎಳೆಯರ ಗಂಪು ಕಲಿಕೆಯ ಮೇಲಕಿನ ಮೇಲಿನ ಹಂತಕ್ಕೆ ತಲುಪುವುದು.


ಸ್ವಂತ ಹೊಣೆಗಾರಿಕೆ ಮತ್ತು ಸ್ವಯಂ-ಮೇಲ್ವಿಚಾರಣೆಯನ್ನು ಒಪ್ಪಿಕೊಂಡು ;


ಸನ್ನಡತೆಯ ಮುನ್ನೆಡೆ, ಉತ್ತಮ ಸಾಮರ್ಥ್ಯ, ಸ್ವಾವಲಂಬನೆ, ಭರವಸೆಯುಳ್ಳ ವ್ಯಕ್ತಿತ್ವ, ಸಹಕಾರ ಮನೋಭಾವ-ಗುಣ ಮತ್ತು ಮುನ್ನೆಡುಸುವ ಗುಣ ಅಥವಾ ನಾಯಕತ್ವದ ಸಾವ್ಮರ್ಥ್ಯ (ಗುಣ) ; ಇದಕ್ಕಾಗಿ ಅಗತ್ಯ ಉತ್ಸಾಹದಾಯಕ (ಆಸಕ್ತಿದಾಯಕ) ಚಟುವಟಿಕೆಯ ಯೋಜನೆ ಗಳು, ಆಸಕ್ತದಾಯಕ ಕಾರ್ಯಕ್ರಮಗಳು ; ಇದರಲ್ಲಿ ಸದಸ್ಯರು ಭಾಗವಹಿಸುವ ಆಟಗಳು, ಉಪಯುಕ್ತ ಕೌಶಲಗಳು, ಸಮಾಜಕ್ಕೆ /ಜನಪರ ಹಿತವಾದ ಸೇವಾಕಾರ್ಯ,-ಇವ ಹೆಚ್ಚಾಗಿ ವಸತಿಯಹೊರಗಿನ ಪ್ರಕೃತಿಯ ಸಾಮೀಪ್ಯದ ವಾತಾವರಣದಲ್ಲಿ ನಡೆಯುವುದು.


ಸ್ಕೌಟ್/ಗೈಡ್`ಧ್ಯೇಯ

A scout/guide says and believes

Do your best is our Motto,


Be prepared is our aim,


Service is our watch word,


All three mean the same.


.

Cubs/Bulbuls - Koshish Karo (Do your best)


Scouts/Guides - Taiyar (Be Prepared)


Rovers/Rangers - Seva (Service)


.

ಒಬ್ಬ ಸ್ಕೌಟ್` /ಗೈಡ್` ಪಾಲಿಸುವ ಧ್ಯೇಯ :

ನಿನ್ನ ಶಕ್ತಿ ಇದ್ದಷ್ಟು ಕರ್ತವ್ಯ ನಿರ್ವಹಿಸು ಇದು ನಮ್ಮ,ಗುರಿ,


ಸದಾ ಸಿದ್ಧನಾಗಿರು ಇದು ನಮ್ಮ ಧ್ಯೇಯ,


ಸೇವೆಯೇ ನಮ್ಮ ಚರಮ ವಾಕ್ಯ,


ಆದರೆ ಇವೆಲ್ಲಕ್ಕೂ ಒಂದೇ ಅರ್ಥ.


ಸ್ಕೌಟ್ ಧ್ಯೇಯ :

•ಕಬ್ಸ್` /ಬುಕ್`ಬುಲ್`ಬುಲ್` ಗಳಿಗೆ –ಕೋಶಿಶ್ ಕರೋ -ಪ್ರಯತ್ನ ಮಾಡು.. •ಸ್ಕೌಟ್ಸ್ ಮತ್ತು ಗೈಡ್ಸ್`ಗಳಿಗೆ - ತಯ್ಯಾರ್- ಸದಾ ಸಿದ್ಧನಾಗಿರು.

ರೋವರ್`/ರೇಂಜರ್`ಗಳಿಗೆ -ಸೇವಾ -ಸೇವೆ


ಸ್ಕೌಟ್`/ಗೈಡ್` ಶಿಕ್ಷಣ ಮತ್ತು ತರಬೇತಿ

ಒಂದು ಸ್ಕೌಟ್` /ಗೈಡ್` ದಳ/ ಟ್ರೂಪಿನಲಿ 10 ರಿಂದ 24 / 30 ಬಾಲಕ/ಬಾಲಕಿಯರಿರಬಹುದು. ಅದನ್ನು 5 ಅಥವಾ 6/8 ರ ಚಿಕ್ಕ ಚಿಕ್ಕ ಪೆಟ್ರೋಲ್`ಗಳಾಗಿ/ಗುಂಪುಗಳಾಗಿ ವಿಂಗಡಿಸಿ ಪ್ರತಿಯೊಂದು ಉಪದಳ/ಗುಂಪಿಗೂ ಒಬ್ಬ ನಾಯಕನನ್ನು ಮಾಡಲಾಗುವುದು. ಇಡೀ ದಳಕ್ಕೆ ಒಬ್ಬ ನಾಯಕ ಮತ್ತು ಒಬ್ಬ ಉಪನಾಯಕ ಇರುತ್ತಾನೆ.


ಮೊದಲನೆಯ ಸೋಪಾನ –ಟೆಂಡರ್ ಫುಟ್ :

ಇದರಲ್ಲಿ ಸ್ಕೌಟ್ ನಿಯಮ ; ಪ್ರತಿಜ್ಞೆ , ರಾಷ್ಟ್ರ ಧ್ವಜದ ವಿವರ ಸ್ಕೌಟ್`ಬಾವುಟದ ಅರ್ಥ, ಅದಕೆ /ಅವಕ್ಕೆ ಗೌರವ ಕೊಡುವ ವಿಧಿ ವಿಧಾನ; ಸ್ಕೌಟ್` ಲಾಠಿಯ ಉಪಯೋಗ; ದಾರಿ ಸೂಚಕ-ಅಪಾಯ ಸೂಚಕವೇ ಮೊದಲಾದ ಸಂಕೇತಗಳು ; ದಾರಗಳಿಂದ ಜಾರದಂತೆ ಮತ್ತು ಸುಲಭವಾಗಿ ಬಿಚ್ಚಬಹುದಾದ ಕೆಲವು ಸರಳ ಗಂಟುಗಳನ್ನು ಹಾಕುವುದು, ಉದಾಹರಣೆಗೆ ಸಮಗಂಟು/ಪವಿತ್ರ ಗಂಟು, ಅಡ್ಡಗಂಟು, ಕೊಟ್ಟಿಗೆ ಗಂಟು, ಇತ್ಯಾದಿ ; ಸ್ಕೌಟ್` ಸೆಲ್ಯೂಟ್` ಕ್ರಮ ಅದರ ಅರ್ಥ; ಇವುಗಳನ್ನು ಕಲಿಸಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಟೆಂಡರ್` ಫುಟ್` ಬ್ಯಾಡ್ಜ್`ನ್ನು ವಿಧಿ-ವಿಧಾನದ ಮೂಲಕ ಸ್ಕೌಟ್`/ಗೈಡ್`ಗಳಿಗೆ ಪ್ರದಾನ ಮಾಡಲಾಗುವುದು..ಸಾಮಾನ್ಯ ಮಟ್ಟಿನ ಕವಾಯಿತು ಮತ್ತು ಆಜ್ಞೆ ಪಾಲನೆ , ವಿಶಲ್`/ಶೀಟಿಯ ಸಂಜ್ಞೆಗೆ /ಆಜ್ಞೆಗೆ ವಿಧೇಯರಾಗಿ ಅದನ್ನು ಪಾಲಿಸುವುದು ಅರಿಯಬೇಕು.


ಎರಡನೆಯ ಸೋಪಾನ -ಸೆಕೆಂಡ್`ಕ್ಲಾಸ್` ಬ್ಯಾಡ್ಜ್` :

ಎರಡನೆಯದರ್ಜೆಯ ತರಬೇತಿಯಲ್ಲಿ –ಆರೋಗ್ಯದ ನಿಯಮಗಳು-ಅದರ ಪಾಲನೆ; ದೇಹವನ್ನು ಸುಸ್ಥಿತಿಯಲ್ಲಡಲು ಸ್ಕೌಟ್` ವ್ಯಾಯಾಮ (ಆರು ಬಗೆ) –ಉಸಿರಾಟದ ಕ್ರಮ, ಅರೋಗ್ಯಕರ- ಕುಳಿತುಕೊಳ್ಳುವ ನಿಲ್ಲುವ, ನಡೆಯುವ ಕ್ರಮ; ನಂತರ ಪ್ರಥಮ ಚಿಕಿತ್ಸೆಯ ಆರಂಭಿಕ ಪಾಠಗಳು ಅದರ ಪ್ರಯೋಗ-ವಿಧಿ ವಿಧಾನ , ಉದಾಹರಣೆಗೆ –ಕತ್ತರಿಸಿದ ಘಾಯಕ್ಕೆ- ತರಚಿದ ಘಾಯಕ್ಕೆ, ಉಳುಕಿಗೆ,, ಸುಟ್ಟ ಘಾಯಕ್ಕೆ, ಕಣ್ಣಿನಲ್ಲಿ ಕಸ-ಧೂಳು-ಮರಳು ಇತ್ಯಾದಿ ಸೇರಿಕೊಂಡಾಗ ಮಾಡುವ ಪ್ರಥಮ ಚಿಕಿತ್ಸೆ ; ಮೂಗಿನಲ್ಲಿ ರಕ್ತ ಸೋರವಿಕೆ, ಕಡಿ ಜೇನು-ಕಣಜಗಳ ವಿóಪೂರಿತ ಕಡಿತ ಚಿಕಿತ್ಸೆ, ಅತಿ ಶಾಖ ಬಿಸಿಲಿನ ಝಳದ ಅತಿ ಸುಸ್ತಿಗೆ ಚಿಕಿತ್ಸೆ ;ಸರಳ ಬ್ಯಾಂಡೇಜ್ ಗಳನ್ನು ಮಾಡುವುದು, ತಲೆಗೆ ಘಾಯವಾದಾಗ, ಕೈ ,ಕಾಲು,ಪಾದ ಮರಿದಾಗ ಆರಂಭಿಕ ಬ್ಯಾಂಡೇಜು ಚಿಕಿತ್ಸೆ; ಇತ್ಯಾದಿ..


ಗಂಟುಗಳ ಮುಂದುವರಿದ ಭಾಗ – ಲಾಠಿ/ಕೋಲುಗಳಿಗೆ /ಕಂಬಗಳಿಗೆ ಚೌಕ ಸುತ್ತು-ಗಂಟು/ ಸ್ಕೇರ್`ಲ್ಯಾಷಿಂಗ್` , ಇತ್ಯಾದಿ. ಶಿಬಿರ / ಕ್ಯಾಂಪ್ ಮಾಡುವುದು ಅದಕ್ಕೆ ಅನುಕೂಲವಾಗಿ, ಕೋಲು ಕಡ್ಡಿಗಳಿಂದ ದಾರ ಉಪಯೋಗಿಸಿ ಉಪಯುಕ್ತ ಉಪಕರಣಗಳನ್ನು ತಯಾರಿಸಿಕೊಳ್ಳುವುದು.ಅದಕ್ಕಾಗಿ ಕೋಲು ಜೋಡಿಸುವ ಕತ್ತರಿ ಸುತ್ತು-ಗಂಟು. ಮರದ ತುಂಡಿಗೆ ಸುತ್ತುವ ಸರಪಳಿ ಗಂಟು; ಮೊದಲಾದವು.


ಬೆಂಕಿ ಹಚ್ಚುವ ತರಬೇತಿ –ಇರುವ ಕಸ ಕಡ್ಡಿಗಳ ಸಹಾಯದಿಂದ ಬೆಂಕಿ ಆರದಂತೆ ಪಿರಮಿಡ್ ಆಕಾರದಲ್ಲಿ ಜೋಡಿಸಿ ಸಾಮಾನ್ಯವಾಗಿ ಒಂಧೇ ಬೆಂಕಿ ಕಡ್ಡಿ ಉಪಯೋಗಿಸಿ ಬೆಂಕಿಮಾಡುವ ತರಬೇತಿ.

ಅಡಿಗೆ ಮಾಡುವ ಶಿಕ್ಷಣ: .ಒಬ್ಬರಿಗೆ ಅಥವಾ ಇಬ್ಬರಿಗೆ ಅಥವಾ ಕ್ಯಾಮಪ್`ಮಾಡಿದ ಆರು ಎಂಟು ಬಾಲಕರಿಗೆ , ಉಳಿದು ವ್ಯರ್ಥವಾಗದಂತೆ ,ಎರಡು ಬಗೆಯ ಮೇಲೋಗರ /ರಿಸೈಪ್` ಮತ್ತು ಅನ್ನ/ಚಪಾತಿ ಮಾಡುವ ಕಲೆ


ದಿಕ್ಕುಗಳನ್ನು ಗುರುತಿಸುವ ಕಂಡುಕೊಳ್ಳುವ ಕ್ರಮ. ದಿಕ್ಸೂಚಿಯ ಉಪಯೋಗ, ಸೂರ್ಯನ ಚಲನೆಯ ಅರಿವ, ರಾತ್ರಿ ಮುಖ್ಯ ನಕ್ಷತ್ರಗಳ ಪರಿಚಯ ಮಾಡಿಕೊಂಡು ದಿಕ್ಕನ್ನು ತಿಳಿಯುವುದು.

ಸಿಗ್ನಲಿಂಗ್`/ ಸಂಕೇತ ಭಾಷೆಯ ಅಭ್ಯಾಸ ; ದೋರದಲ್ಲಿರವವರಿಗೆ ಬಾವುಟ ಮೂಲಕ/ಬೆಂಕಿ ಮೂಲಕ/ ಸೀಠಿಯ (ವಿಶಲ್` ಮೋರ್ಸ್ ಕೋಡ್`) ಮೂಲಕ ಸಂದೇಶ ರವಾನಿಸುವುದು. ವಿಶೇಷ ಸಂಧರ್ಭಗಳಲ್ಲಿ –ಅಪಾಯ ಇತ್ಯಾದಿ ಸಂಧರ್ಭಗಳಲ್ಲಿ ಉಪಯೋಗಿಸುವ ಇಶಿಷ್ಟ ಸಂಕೇತ ಸಂಜ್ಞೆ/ ವಿಷಲ್`ಗಳು.


ಸ್ಕೌಟ್`ನ ಮೂರು ದೊಣ್ಣೆಗಳನ್ನು ಸೇರಿಸಿ ಕಟ್ಟಿ ಎ12 ಅಇಎತ್ತರದ ಧ್ವಜಸ್ಥಂಬ ಮಾಡಿ ರಾಷ್ಟ್ರದ/ಸ್ಕೌಟಿನ ಬಾವಟವನ್ನು ಸರಿಯಾದ ಕ್ರಮದಲ್ಲಿ ಹಾರಿಸುವುದನ್ನು ಕಲಿಯಬೇಕು.

ಕ್ಯಾಂಪ್`/ಶಿಬಿರ ಹೂಡಲು ಮತ್ತು ಅದನ್ನು ಮುಕ್ತಾಯ ಮಾರುವ ವಿಧಾನ ಅರಿತಿರಬೇಕು. ಶಿಬಿರದ ವೇಳೆ ಪರಿಸರಕ್ಕೆ ಸ್ವಲ್ಪವೂ ಹಾನಿಯಾಗದ ರೀತಿ ಶಿಬಿರ ಮಾಡಿ ಅದನ್ನು ಮುಕ್ತಾಯಗೊಳಿಸುವ ಕ್ರಮ ಅರಿತಿರಬೇಕು.


ತನ್ನ ವೈಯುಕ್ತಿಕ, ದೈಹಿಕ ವಿವರ ತಿಳಿದಿರಬೇಕು ; ಡೈರಿ/ದಿನಚರಿ ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೆಕು ಹೀಗೆ ಅನೇಕ ಬಗೆಯ ಸ್ವಾವಲಂಬನೆಯ / ಪರರ ಸಹಾಯಕ್ಕಾಗುವ ಶಿಕ್ಷಣವನ್ನು ಎರಡನೆಯ ಸೋಪಾನದಲ್ಲಿ ಸ್ಕೌಟ್`/ಗೈಡ್` ಪಡೆಯುತ್ತಾನೆ/ಳೆ..

ಮೂರನೇ ಸೋಪಾನ ಅಥವಾ ಮೊದಲ ದರ್ಜೆ

ಮೊದಲನೇ ದರ್ಜೆಯ ಸ್ಕೌಟ್ ಆಗಲು ಈಜು ಕಲಿಯಬೇಕು. ತನ್ನ ಇತರರ ರಕ್ಷಣೆಯ ಉಪಾಯಗಳನ್ನು ತಿಳಿದಿರಬೇಕು. ಅಪಾಯದ / ತೊಂದರೆಯ ನೀರುತಾಣಗಳನ್ನು ಅರಿತು ಎಚ್ಚರಿಕೆಯ ವಿಧಿಗಳನ್ನು ಅರಿತಿರಬೇಕು.


ಪಯೋನೀರಿಂಗ್` / ಸಾಹಸ ಯಾತ್ರೆ / ಶೋಧನಾಯಾತ್ರೆ ಗಳನ್ನು ಹಮ್ಮಿಕೊಂಡು ಅನುಭವ ಪಡೆಯಬೇಕು. ಇದಕ್ಕೆ ಬೇಕಾದ ಮುಂದುವರಿದ ಅಗ್ನಿಶಾಮಕದಳದವರು ತಿಳಿದಿರುವ, ಹಗ್ಗ ಗಂಟುಗಳ ಜೋಡಣೆಗಳ ಕಲಿಕೆ ಅರಿವು ಅಗತ್ಯ.. ಮೂರು ರಾತ್ರಿಗಳ ಕ್ಯಾಂಪ್` ಮಾಡಬೇಕು. ಕ್ಯಾಮಪ ಮುಕ್ತಾಯವಾದ ಮೇಲೆ ಅಲ್ಲಿ ಕ್ಯಾಂಪಿನ ಕುರುಹುಗಳು ಅವಶೇಶಗಳು ಇಲ್ಲದಂತೆ ಮಾಡುವ ತರಬೇತಿ ಪಡೆಯಬೇಕು.


ಸಂಕೇತ ರವಾನೆ-

ಮೋಸ್ರ್` ಕೋಡ್`ಗಳನ್ನು ವೇಗ ವಾಗಿಬಳಸಲು ಅರಿಯಬೇಕು.


ಕಟ್ಟಡದ, ಮರದ, ಎತ್ತರಗಳನ್ನು ದೊಣ್ಣೆ ಬಳಸಿ ಕಂಡು ಹಿಡಿಯುವ, ಹೊಳೆ ನದಿಗಳ ಅಗಲಗಳನ್ನು ತಿಳಿಯುವ ಗಣಿತ ಅರಿಯಬೇಕು.


ಹೆಚ್ಚಿನ ಪ್ರಥಮ ಚಿಕಿತ್ಸೆ./ಫಸ್ಟ್` ಏಡ್` ಅಭ್ಯಾಸ ಮಾಡಬೇಕು. ಬೆಂಕಿ ನೀರು ಅಪಘಾತಗಳಾದಾಗ ಅಲ್ಲಿಂದ ತೊಂದರೆಗಳಿಗೆ ಒಳಗಾದವರನ್ನು ಹೊತ್ತು ಸಾಗಿಸುವ , ಅಗ್ನಿ ಶಾಮಕದಳದವರ ತರಬೇತಿಯನ್ನೂ ಪಡೆಯಬೇಕು.


ನೀರಿನಲ್ಲಿ ಮುಳಗಿ ಮೇಲೆ ಎತ್ತಿದಾಗ, ಅವರಿಗೆ ಚಿಕಿತ್ಸೆಮಾಡುವುದು, ಬಿಸಿಲಿನ ಝಳಕ್ಕೆ / ಗುಂಪಿನ ಒತ್ತಡದಲ್ಲಿ ಸಿಲುಕಿ ಎಚ್ಚರತಪ್ಪಿದವರಿಗೆ, ವಿದ್ಯುತ್`ಶಾಕ್ ಆದವರಿಗೆ ಹೇಗೆ ಚಿಕಿತ್ಸೆ ಮಾಡಲು ತರಬೇತಿ ಪಡೆದಿರಬೇಕು.


ಪರಿಸರಕ್ಕೆ ಹಾನಿಯಾಗದಂತೆ ಆರೋಗ್ಯಕರ ಅಡಿಗೆ ಮಾಡುವುದು , ಹೊರಾಂಗಣದಲ್ಲಿ ಅಪಾಯವಾಗದಂತೆ, ಉರಿ ಕೆಡದಂತೆ ಬೆಂಕಿಮಾಡುವುದರ ತರಬೇತಿ ಹೊಂದಿರತಕ್ಕದ್ದು, .

ಆಕಾಶದಲ್ಲಿ ಓರಿಯನ್` ನಕ್ಷತ್ರ ಪುಂಜ, ಧೃವ ನಕ್ಷತ್ರಗಳನ್ನು ಗುರುತಿಸುವ –ಅದರಿಂದ ದಿಕ್ಕುತಿಳಿಯವುದನ್ನು, ಅದರಲ್ಲಿ ನದಿ,ದಾರಿ ಬೆಟ್ಟ, ಕಾಡು, ಕರೆ , ಸರೋವರ ಮೊದಲಾದವುಗಳನ್ನು ಸಂಕೇತ ಮೂಲಕ ಗುರುತಿಸುವುದನ್ನು ಕಲಿಯಬೇಕು.


ದಿಕ್ಕು ತಿಳಿದು ತಾನು ನೆಡೆದಾಡಿದ ಕ್ಯಾಂಪ್` ಮಾಡಿದ ಸ್ಥಳದ ಮ್ಯಾಪ್`/ನಕ್ಷೆ ತಯಾರಸಲು ಅರಿತಿರಬೇಕು.


ಹೀಗೆ ಪ್ರತಿ ಕೌಶಲ್ಯವನ್ನೂ ಪಡೆದಿರುವುದಕ್ಕೂ ಒದೊಂದು ಪ್ರತ್ಯೇಕ ಬ್ಯಾಡ್ಜ್` ಸಂಪಾದನೆ ಇದೆ.

ಒಬ್ಬ ಭಾರತೀಯ ಸ್ಕೌಟ್ / ಗೈಡ್` ಪಡೆಯುವ ಹೆಚ್ಚಿನ ಪ್ರಶಸ್ತಿ ಎಂದರೆ ಅದು ಪ್ರಸಿಡೆಂಟ್` ಬ್ಯಾಡ್ಜ್`. ಭಾರತದ ರಾಷ್ಟ್ರಪತಿಗಳಿಂದ ಪಡೆಯುವ ಪದಕ / ಬ್ಯಾಡ್ಜ್`.


ಸ್ಕೌಟ್ ನಿಯಮ ಮತ್ತು ಪ್ರತಿಜ್ಞೆ/ವಚನ:

ಪ್ರತಿಜ್ಞೆ ಸ್ವೀಕರಿಸುವಾಗ- ಮೂರು ಬೆರಳು ತೋರಿಸುವುದು.->

(LAW AND PROMISE)

ಪ್ರತಿಜ್ಞೆ/ವಚನ (PROMISE)

ನಾನು ನನ್ನ ಶಕ್ತಿ ಇರುವಷ್ಟು ಮಟ್ಟಿಗೆ,


ದೇವರಿಗೂ, ನನ್ನ ದೇಶಕ್ಕೂ ನಾನು ಸಲ್ಲಿಸಬೇಕಾದ ಕರ್ತವ್ಯ ಮಾಡಲೂ


ಮತ್ತು ಇತರರಿಗೆ ಸಹಾಯ ಮಾಡಲು


ಮತ್ತು ಸ್ಕೌಟ್ ನಿಯಮಗಳಿಗೆ ವಿಧೇಯನಾಗಿರಲೂ


ನಾನು ನನ್ನ ಆತ್ಮ ಸಾಕ್ಷಿಯಾಗಿ ವಚನ ಕೊಡುತ್ತೇನೆ ( ಸ್ವಲ್ಪ ಇಂಗ್ಲಿಷ್ ಬಲ್ಲ ಮಕ್ಕಳಿಂದ , ಇದನ್ನು ಸುಲಭವಾಗಿ ಇಂಗ್ಲಷ್ ಭಾಷೆಯಲ್ಲಿಯೇ ಪ್ರಾಮಿಸ್ ತೆಗೆದುಕೊಳ್ಲುವುದು ರೂಢಿ).


PROMISE

Promise as applicable to Scout/Guides.


"On my honour I promise that I will do my best -to do my duty to God and my country,to help other people andto obey the Scout/Guide Law.ಸ್ಸೌಟ್/ ಗೈಡ್ ನಿಯಮಗಳು (LAW)

ಸ್ಸೌಟ್/ ಗೈಡ್, ನಂಬಿಕೆಗೆ ಅರ್ಹರಾಗಿರುವುದು.


ಸ್ಸೌಟ್/ ಗೈಡ್, ಪ್ರಾಮಾಣಿಕರಾಗಿರುವುದು,


ಸ್ಸೌಟ್/ ಗೈಡ್, ಎಲ್ಲರಿಗೂ ಸ್ನೇಹಪರರಾಗಿರುವುದು ಮತ್ತು ಇತರೆ ಸ್ಸೌಟ್ /ಗೈಡ್ ಗಳಿಗೆ ಸೋದರ / ಸೋದರಿ ಭಾವನೆಯಿಂದ ಇರುವುದು.


ಸ್ಸೌಟ್/ ಗೈಡ್ ಪ್ರಾಣಿಗಳಿಗೆ ಸ್ನೇಹಿತ ಮತ್ತು ಪ್ರಕೃತಿಯ ಪ್ರೇಮಿ,


ಸ್ಸೌಟ್/ ಗೈಡ್ ಶಿಸ್ತು ಪಾಲಿಸುವನು ಮತ್ತು ದೇಶದ /ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವನು.,


ಸ್ಸೌಟ್/ ಗೈಡ್ ವಿನಯ ಶೀಲ,


ಸ್ಸೌಟ್/ ಗೈಡ್ ಮಿತವ್ಯಯಿ,


ಸ್ಸೌಟ್/ ಗೈಡ್ ಕಾಯಾ, ಮನಸಾ ಪರಿಶುದ್ಧನು


ನಿಯಮ- ಇಂಗ್ಲಿಷ್ ಪಾಠ

The Law.The Law for the Scout and Guide is:A Scout /Guide is trustworthy.A Scout /Guide is loyal.A Scout / Guide is Friend to all and brother/Sister to every other Scout/Guide.A Scout / Guide is courteous.A Scout / Guide is friend to animals and loves nature.A Scout / Guide is disciplined and helps protect public property.A Scout / Guide is courageous.A Scout / Guide is thrifty.A Scout / Guide is pure in thought, word and deed.

OR


Trusty, Loyal, and helpful,


Brotherly, courteous , Kind,


Obedient,smiling,trifty


Pure in body and mind


ಸ್ಕೌಟ್` /ಗೈಡ್ ಗುರಿ

Cub Scouts ಕಬ್ ಸ್ಕೌಟ್

ಒಬ್ಬ ಸ್ಕೌಟ್` /ಗೈಡ್` ಪಾಲಿಸುವ ಧ್ಯೇಯ/ ಗುರಿ 

ನಿನ್ನ ಶಕ್ತಿ ಇದ್ದಷ್ಟು ಕರ್ತವ್ಯ ನಿರ್ವಹಿಸು ಇದು ನಮ್ಮ,ಗುರಿ,


ಸದಾ ಸಿದ್ಧನಾಗಿರು ಇದು ನಮ್ಮ ಧ್ಯೇಯ,


ಸೇವೆಯೇ ನಮ್ಮ ಚರಮ ವಾಕ್ಯ,


ಆದರೆ ಇವೆಲ್ಲಕ್ಕೂ ಒಂದೇ ಅರ್ಥ.


ಇಂಗ್ಲಿಸ್ ವಾಚನA scout/guide says and believes

Do your best is our Motto,


Be prepared is our aim,


Service is our watch word,


All three mean the same


ಕಬ್ ನಿಯಮ ಮತು ಪ್ರತಿಜ್ಞೆ/ವಚನ

ಕಬ್ (ಹುಡುಗರು 5 ರಿಂದ 10ವರ್ಷದ ಒಳಗಿನವರಿಗೆ)

ಮತ್ತು ಬುಲ್ಬುಲ್ (ಹುಡುಗಿಯರು 6 ರಿಂದ 10ವರ್ಷದ ಒಳಗಿನವರಿಗೆ) :

ವಚನ/ಪ್ರತಿಜ್ಞೆ :

ನಾನು ನನ್ನ ಶಕ್ತಿ ಇರುವಷ್ಟು ಮಟ್ಟಿಗೆ, ದೇವರಿಗೂ, ನನ್ನ ದೇಶಕ್ಕೂ ನಾನು ಸಲ್ಲಿಸಬೇಕಾದ ಕರ್ತವ್ಯ ಮಾಡಲೂ, ದಿನಕ್ಕೊಂದು ಸಹಾಯ ಮಾಡಲು ಮತ್ತು ಕಬ್ ಮತ್ತು ಬುಲ್ಬುಲ್ ನಿಯಮಗಳಿಗೆ ವಿಧೇಯನಾಗಿರಲೂ ನಾನು ನನ್ನ ಆತ್ಮ ಸಾಕ್ಷಿಯಾಗಿ ವಚನ ಕೊಡುತ್ತೇನೆ.


ಕಬ್ ಮತ್ತು ಬುಲ್ಬುಲ್ ನಿಯಮ :

ಹಿರಿಯಗೆ ಗೌರವ ಕೊಡುವುದು


ಯಾವಾಗಲೂ ಸಭ್ಯತೆಯಿಂದ/ಮರ್ಯಾದೆಯಿಂದ ನಡೆದುಕೊಳ್ಳುವುದು.


ರೋವರ‍್ಸ್ -ರೇಂಜರ್ಸ್

ರೋವರ‍್ಸ್ (ಗಂಡು ಮಕ್ಕಳು/ಯುವಕರು)-ಹದಿನಾರು 16 ರಿಂದ 25 ವರ್ಷ;


ಮತ್ತು ರೇಂಜರ್ಸ್ (ಹೆಂಣು ಮಕ್ಕಳು/ಯುವತಿಯರು)- 18ರಿಂದ 25 ವರ್ಷ;


ಇವರಿಗೂ ಸ್ಸೌಟ್/ ಗೈಡ್ ನಿಯಮಗಳು ಮತ್ತು ಪ್ರತಿಜ್ಞೆ/ವಚನವು ಸಮಾನವಾಗಿರುತ್ತವೆ.

ದೇವರಿಗೆ ಬದಲಾಗಿ ಧರ್ಮ ಎಂದು ಅಗತ್ಯವಾದಲ್ಲಿ ಸೇರಿಸಿಕೊಳ್ಳಬಹುದು.


ಕೆಳಗೆ ಸ್ಕೌಟ್/ಗೈಡ್ ಪ್ರಾರ್ಥನೆಯನ್ನು ಕೊಟ್ಟಿದೆ ಅದರಲ್ಲಿ ಸಾಮಾನ್ಯವಾಗಿ ಒಂದು ಮತ್ತು ಮೂರನೇ ಪದ್ಯಗಳನ್ನು ಹೇಳಿ , ಪುನಹ ಒಂದನೇ ಪದ್ಯ ಹೇಳಿ ಮುಕ್ತಾಯ ಮಾಡುವುದು ರೂಢಿಯಲ್ಲಿದೆ.


ಸ್ಸೌಟ್/ ಗೈಡ್ ಪ್ರಾರ್ಥನೆ

ಸೌಟ್ಕ್-ಗೈಡ್ ಪ್ರಾರ್ಥನೆ (ಹಿಂದಿ ಭಾಷೆಯಲ್ಲಿದೆ):


ದಯಾ ಕರ್ ದಾನ್ ಭಕ್ತಿ ಕಾ,ಹಮೇ ಪರಮಾತುಮಾ ದೇನದಯಾಕರನಾ ಹಮಾರಿಆತ್ಮಾ ಮೇ ಶುದ್ಧತಾ ದೇನಾ.ಹಮಾರೀ ಧ್ಯಾನ ಮೇ ಆವೋ ,ಪ್ರಭು ಆಂಖೋ ಮೇ ಬಸ್ ಜಾವೋಆಂಧೇರಿ ದಿಲ್ ಮೇ ಆಕರ ಕೇಪರಮ ಜ್ಯೋತಿ ಜಗಾ ದೇನಾಬಹಾದೋ ಪ್ರೇಮಕೀ ಗಂಗಾದಿಲೋಮೇ ಪ್ರೇಮ್ ಕಾ ಸಾಗರ್ಹಮೇ ಆಪಸ್ ಮೆ ಮಿಲ್-ಜುಲ್ಕರ್ಪ್ರಭೂ ರೆಹನಾ ಸಿಖಾ ದೇನಾಹಮಾರಾ ಕರ್ಮ ಹೊ ಸೇವಾಹಮಾರಾ ಧರ್ಮ ಹೊ ಸೇವಾಸದಾಈಮಾನ್ ಹೊ ಸೇವಾವೊ ಸೇವಕ್ ಚರ್ ಬನಾ ದೇನಾವತನ್ ಕೇ ವಾಸ್ತೇ ಜೀನಾವತನ್ ಕೇ ವಾಸ್ತೇ ಮರನಾವತನ್ ಪರ್ ಜಾನ್ ಫಿದಾ ಕರನಾಪ್ರಭು ಹಮ್ಕೊ ಸಿಖಾ ದೇನಾದಯಾ ಕರ್ ದಾನ್ ಭಕ್ತಿ ಕಾ,ಹಮೇ ಪರಮಾತುಮಾ ದೇನದಯಾಕರನಾ ಹಮಾರಿಆತ್ಮಾ ಮೇ ಶುದ್ಧತಾ ದೇನಾ.

ಭಾರತದ ರಾಷ್ಟ್ರಧ್ವಜ -ಮೇಲೆ ಕೇಸರಿ, ಮಧ್ಯ ಬಿಳಿ, ಕೆಳಗೆ ಹಸಿರು. ಸಂಕೇತ -ತ್ಯಾಗ, ಪರಿಶುದ್ಧತೆ-ಸತ್ಯ, ಸಂಮೃದ್ಧಿ

ಸ್ಕೌಟ್ -ಗೈಡ್ಸ್ ಝಂಡಾ (ಬಾವುಟ) ಗೀತೆ

ಭಾರತೀಯ ಸ್ಕೌಟ್ ಗೈಡ್ ಝಂಡಾ


ಊಂಛಾ ಸದಾ ರಹೇಗಾ ,


ಊಂಛಾ ಸದಾ ರಹೇಗಾ ಝಂಡಾ - ಊಂಛಾ ಸದಾ ರಹೇಗಾ.


ನೀಲಾ ರಂಗ್ ಗಗನಸಾ ವಿಸ್ತೃ ತ್


ಭ್ರಾತೃ ಭಾವ ಪೆಹಲಾತ,


ತ್ರಿದಲ ಕಮಲನಿತ್ ತೀನ್ ಪ್ರತಿಜ್ಞೋಂಕಿ


ಯಾದ್ ದಿಲಾತಾ.


ಔರ್ ಚಕ್ರ್ ಕೆಹತಾ ಹೈ ಪ್ರತಿಫಲ್


ಆಗೇ ಕದಂ ಬಡೇಗಾ


ಊಂಛಾ ಸದಾ ರಹೇಗಾ ಝಂಡಾ - ಊಂಛಾ ಸದಾ ರಹೇಗಾ


.

ಸ್ಕೌಟ್ /ಗೈಡ್ ನ-ಭಾರತ ದೇಶದ ಝಂಡಾ ಗೀತೆ

ಹಿಂದೂ ದೇಶಕ ಪ್ಯಾರಾ ಝಂಡಾ


ಊಂಛಾ ಸದಾ ರಹೇಗಾ ,


ಊಂಛಾ ಸದಾ ರಹೇಗಾ (ಝಂಡಾ)


ಊಂಛಾ ಸದಾ ರಹೇಗಾ S- S- S-,


ಕೇಸರಿಯಾ ಬಲ್ ಭರನೇವಾಲಾ


ಸಾದಾ ಹೈ ಸಚ್ಚಾಯೀ S- S- S-


ಹರಾ ರಂಗು ಹೈ ಹರೀ ಹಮಾರಾ ,


ಧರತೀ ಕೀ ಅಂಗಡಾಯೀ,


ಔರ್ ಚಕ್ರ ಕಹೆತಾ ಹೈ ಹಮಾರಾ -


ಕದಂ ಕಭೀ ನS ರುಖೇಗಾ--


ಹಿಂದೂ ದೇಶಕ ಪ್ಯಾರಾ ಝಂಡಾ


ಊಂಛಾ ಸದಾ ರಹೇಗಾ ,


ಊಂಛಾ ಸದಾ ರಹೇಗಾ S- S- S-.


ಚಟುವಟಿಕೆಗಳು

ಕಾರ್ಯಕ್ರಮಗಳು ಪ್ರಾರ್ಥನೆಯೊಂದಿಗೆ ಆರಂಭವಾಗುತ್ತವೆ.


ಒಂದು ಕ್ಯಾಂಪ್`ನ ಮಾದರಿ ವೇಳಾಪಟ್ಟಿ

ವ್ಯಾಯಾಮ ಬೆಳಿಗ್ಗೆ 6.30.


ಕಿಟ್ (ಹಾಸಿಗೆ ಬಟ್ಟೆ ) ಪರಿಶೀನೆ 7.30


ಬಾವಟ /ಧ್ವಜ ವಂದನೆ 8.00


ಬೆಳಗಿನ ತಿಂಡಿ -8.30


ಬೆಳಗಿನ ಶಿಕ್ಷಣ ತರಗತಿಗಳು 9.00-11.30


ಸ್ನಾನ ಊಟ ಇತ್ಯಾದಿ 11.30ಯಿಂದ 14.30 ಮಧ್ಯಾಹ್ನ.


ಅಪರಾಹ್ನ ಶಿಕ್ಷಣ ತರಗತಿಗಳು -14.30 -16.00


ಟೀ - 16.30


ಆಟ ಮತ್ತು ಪಾಠ 17.00 -18.30


ವಿಶ್ರಾಂತಿ;


ಕ್ಯಾಂಪ್ ಪೈರಿಗೆ ಸಿದ್ಧತೆ


ರಾತ್ರಿ ಊಟ 20.00-20.45


ಕ್ಯಾಂಪ್` ಪೈರ್`.


ದೀಪ ಆರಿಸುವಿಕೆ 22.30


.

ಸೌಟ್ಕ್-ಗೈಡ್:ಬೆಳಗಿನ ಪ್ರಾರ್ಥನೆ :


1.ಉದಾ:ಆದಿತ್ಯಸ್ಯ ನಮಸ್ಕಾರಾನ್ಯೇ ಕುರ್ವಂತಿ ದಿನೇ ದಿನೇ,ಜನ್ಮಾಂತರ ಸಹಸ್ರೇಷುದಾರಿದ್ರ್ಯಂ ನೋಪಜಾಯತೇ,ನಮೋ ಧರ್ಮ ಸಾಧನಾಯ,ನಮಸ್ತೇ ಕೃತ ಸಾಕ್ಷಿಣೇ (ನೇ)ನಮಃ ಪ್ರತ್ಯಕ್ಷ ದೇವಾಯ ,ಆದಿತ್ಯಾಯ ನಮೋನಮಃ

2.ಓಂ ಸಹನಾ ವವತು,ಸಹನೌ ಭುನಕ್ತುಸಹವೀರ್ಯಂ ಕರವಾವ ಹೈತೇಜಸ್ವಿನಾವಧೀತಮಸ್ತುಮಾವಿದ್ವಿಷಾವ ಹೈಓಂ ಶಾಂತಿಃ ಶಾಂತಿಃ ಶಾಂತಿಃ//

ಸ್ಕೌಟ್`/ಗೈಡ್` ತರಬೇತಿಯ ಕೆಲವು ಕ್ರಮ :

ಸಾಮಾನ್ಯವಾಗಿ ಸ್ಕೌಟ್`/ಗೈಡ್ ಪಠ್ಯ ವಿಷಯಗಳನ್ನು ಆಟ ಮತ್ತು ಹಾಡು, ಘರ್ಜನೆ, ಘೋಷಣೆ ಇವುಗಳನ್ನು ಜೊತೆಗೂಡಿಸಿಕೊಂಡು ಕಲಿಸಲಾಗುವುದು. ಸ್ಕೌಟ್`/ಗೈಡ್ ಗಳು ಒಂದು ಲಾಠಿ (ದೊಣ್ಣೆ) ಹಗ್ಗ, ಸ್ಕೌಟ್` ಚಾಕು ಇವಗಳನ್ನು ಇಟ್ಟುಕೊಂಡಿರಲು ಸೂಚಿಸಲಾಗುತ್ತದೆ. ಆರು-ಏಳು ಜನರಿರುವ ಸಣ್ಣ ಸಣ್ಣ ಪೆಟ್ರೋಲ್ (ಉಪದಳ- ಗುಂಪು) ಒಟ್ಟಾಗಿದ್ದು ಪರಸ್ಪರ ಸಹಕರಿಸಿ ಕಲಿಯಲು ಪ್ರೋತ್ಸಾಹಿಸಲಾಗುತ್ತದೆ.


ಒಟ್ಟಾಗಿ ಕೂಗುವ ಘೋಷಣೆ ಅಥವಾ ಘರ್ಜನೆಗಳು ಚಿಕ್ಕದಾಗಿದ್ದು ಖುಶಿ ಕೊಡುವಂತಿರುತ್ತವೆ. ಆದರೆ ಅವು ಯಾವುದೇ ಅರ್ಥಕೊಡುವಂತಿರಬೇಕಾಗಿಲ್ಲ.


ಉದಾಹರಣೆಗೆ : ಉಢಮಲಪೇಠ – ಢಮಾಲಪೇಠ – ಮಾಲಪೇಠ-ಲಪೇಠ- ಪೇಠ- ಠ!!


ಊಟ ಹೇಗಿತ್ತು ? (ಸ್ಕೌ.ಮಾ) : (ಮಕ್ಕಳು->) ಚೆನ್ನಾಗಿತ್ತು (ಏರುದನಿಯಲ್ಲಿ) :ಚೆನ್ನಾಗಿತ್ತು (ಸ್ವಲ್ಪ ತಗ್ಗಿದ ದನಿಯಲ್ಲಿ) ಹಾಗೆಯೇ ತಗ್ಗಿಸಿ ಹೇಳುತ್ತಾ , ಕೊನೆಯಲ್ಲಿ ಎತ್ತರಿಸಿದದನಿಯಲ್ಲಿ ಹೇಳಿ- ನಿಲ್ಲಿಸುವುದು.


ನಿಸರ್ಗದ ಮಧ್ಯದಲ್ಲಿ ಕ್ಯಾಂಪ್` ಮಾಡಿದಾಗ ದಿನವಿಡಿ ಅನೇಕ ಬಗೆಯ ಆಯಾ ಸೋಪಾನಕ್ಕೆ (ಕ್ಲಾಸ್) ತಕ್ಕಂತೆ ತರಗತಿಗಳು ಪೂರ್ವಯೋಜಿಒತವಾಗಿರುಇವಂತೆ ನಡೆಯುತ್ತವೆ. ಹಾಗೆ ಪೂರ್ಣ ಸಿದ್ಧತೆಯೊಂದಿಗೆ ಕ್ಯಾಂಪಮಾಡಬೇಕು. ಅದರಲ್ಲಿ ಸಂಜೆ ಊಟವಾದ ನಂತರ ಕ್ಯಾಂಪ್`-ಪೈರ್` ಕಾರ್ಯಕ್ರಮವಿರುತ್ತದೆ . ಅದರಲ್ಲಿ ಸ್ಕೌಟ್`/ಗೈಡ್ ಗಳು ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶವಿರುತ್ತದೆ. ಪಿರಮಿಡ್ ರೀತಿಯಲ್ಲಿ ಸೌದೆ ಜೋಡಿಸಿ ಬೆಂಕಿಹಚ್ಚಿ ಅದರ ಸುತ್ತಲೂ ಸ್ವಲ್ಪ ದೂರದಲ್ಲಿ ಕುಳಿತುಕೊಳುವ್ಳರು.ಆಬೆಂಕಿಯ ಎದುರಿನಲ್ಲಿ ಅಥವಾ ಅದರ ಸುತ್ತಲೂ ಸುತ್ತುತ್ತ, ಹಾಡು , ನೃತ್ಯ, ಜಾನಪದ ನೃತ್ಯ-ಕುಣಿತ , ಏಕ ಪಾತ್ರಾಭಿನಯ, ಅಣಕು ಪ್ರದರ್ಶನಗಳು- ಉದಾಹರಣೆಗೆ ಒಬ್ಬನಿಗೆ ಅಪಘಾತ ವಾಗಿದೆ ಎಂದು ಭಾವಿಸಿ ಅವನಿಗೆ ಪ್ರಥಮ ಚಿಕಿತ್ಸೆ ನೀಡಿ ವೈದ್ಯರಲ್ಲಿಗೆ ಸಾಗಿಸುವ , ಶಿಕ್ಷಣ-ಪ್ರದ ಅಣಕು ಪ್ರದರ್ಶನಗಳು. ಏಕ ಪಾತ್ರಾಭಿನಯಗಳು; ಚಿಕ್ಕ ಐದಾರು ನಿಮಿಷಗಳ ನಾಟಕಗಳು ನೆಡೆಯುವುವು. ಆ ದಿನ ಅಲ್ಲಿ ಉಳಿದು ಬೆಳಿಗ್ಗೆ ಆ ಪ್ರದೇಶವನ್ನು ಶುಚಿಮಾಡಿ ಅನಗತ್ಯ ವಸ್ತುಗಳನ್ನು ಗುಂಡಿತೋಡಿ ಹುಗಿದು , ಅಥವಾ ಸುಟ್ಟು ಶೇಷ ಉಳಿಯದಂತೆ ಮಾಡಿ ಕ್ಯಾಂಪ್` ಕೊನೆಗೊಳಿಸಲಾಗುವುದು. ಬೆಳಿಗ್ಗೆ ಮುಂಚೆ ಎದ್ದು ವ್ಯಾಯಾಮ ಹಾಸಿಗೆ ಬಟ್ಟೆಗಳನ್ನು ಜೋಡಿಸಿಟ್ಟಿರುವ ಬಗೆಯ ಪರೀಕ್ಷೆ ; ಧ್ವಜ ಕಟ್ಟುವುದು-ಧ್ವಜವಂದನೆ ಮೊದಲಾದವು ಇರುತ್ತವೆ.


ಹೈಕ್` : ಲಘು-ಪ್ರವಾಸ

ಇದಲ್ಲದೆ ಬೆಳಿಗ್ಗೆ ಹೊರಟು ಸಂಜೆ ವಾಪಾಸು ಬರುವ ಲಘು ಪ್ರವಾಸದ ಕಾರ್ಯಕ್ರಮವೂ ಇರುವುದು. ಆಗಲೂ ಪೂರ್ವಯೋಜನೆ ಹಾಕಿಕೊಂಡು ವೇಗ ನಡಿಗೆ ಕ್ರಮ, ಆಯಾಸವಾಗದಂತೆ ಓಡುವ ಕ್ರಮ, ಅದರಲ್ಲಿ ಎರಡು ತಂಡ ಮಾಡಿಕೊಂಡು, ಒಂದು ತಂಡದವರು ಮತ್ತೊಂದು ತಂಡವನ್ನು ಹುಡುಕುವ ಯೋಜನೆ , ಅದಕ್ಕೆ ಸಂಕೇತಗಳನ್ನು ಬಳಸಿ ಅದನ್ನು ತಿಳಿದು ಹಿಂಬಾಲಿಸುವ, ದಾರಿ ತಿಳಿಯುವ ಅಥವಾ ಹುಡುಕುವ ಕ್ರಮ ಇರುತ್ತದೆ ಅಲ್ಲದೆ ಅನೇಕ ಪಠ್ಯವಿಷಯಗಳನ್ನು ಕಲಿಯುವ ಯೋಜನೆಗಳೂ ಇರುತ್ತವೆ. ಸ್ಕೌಟ್`/ಗೈಡ್ ಲಘು ಪ್ರವಾಸಗಳು ಕೇವಲ ಮನೋರಂಜನೆಗಲ್ಲದೆ ಕಲಿಕೆಯ ಅಂಗವಾಗಿ ನಡೆಯುತ್ತವೆ.


ಹೀಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಈ ಚಳುವಳಿ ಪ್ರಾಮುಖ್ಯತೆ ನೀಡುತ್ತದೆ. (2)


ಸ್ಕೌಟ್/ಗೈಡ್`ನ -ಕೌಶಲ್ಯ ಅಥವಾ ಸಾಮರ್ಥ್ಯ

ಸ್ಕೌಟ್ ಚಳುವಳಿಯ ಉದ್ದೇಶವು ಮಕ್ಕಳಲ್ಲಿ ದೈಹಿಕ, ಬೌದ್ಧಿಕ, ಸಾಮಾಜಿಕ , ದೈವಿಕ ವಿಷಯಗಳಲ್ಲಿ ಅವರಲ್ಲಿರುವ ಆಂತರಿಕ ಶಕ್ತಿಯನ್ನು ಪ್ರತಿ ವ್ಯಕ್ತಿಯಲ್ಲಿ ಅಭಿವೃದ್ಧಿ ಪಡಿಸುವುದು ಮತ್ತು ಜವಾಬ್ದಾರಿಯುತ ಪ್ರಜೆಯಾಗಿ ರೂಪಿಸುವುದೇ ಆಗಿದೆ.


ಇದಕ್ಕೆ ವಿಶಿಷ್ಟ ಪ್ರತಿಭೆಯುಳ್ಳ , ಅನೇಕ ಸ್ಕೌಟ ಕೌಶಲ್ಯಗಳಲ್ಲಿ ಪರಿಣತಿಹೊಂದಿರುವ , ಸನ್ನಡತೆಯ (ಸಚ್ಚಾರಿತ್ರ್ಯವುಳ್ಳ) ಸ್ಕೌಟ ತರಬೇತಿ ಪಡೆದ ವ್ಯಕ್ತಿಯ ಅಗತ್ಯವಿದೆ. ಅಂತಹ ವ್ಯಕ್ತಿಯು ಸಮಾಜಕ್ಕೂ ದೇಶಕ್ಕೂ ಒಂದು ಅಮೂಲ್ಯ ಆಸ್ತಿ. ಅಂತಹ ವ್ಯಕ್ತಿಗಳಿಂದ ತರಬೇತಿ ಪಡೆದ ಸ್ಕೌಟ್ ಗಳು ಅನೇಕ ಕೌಶಲ್ಯಗಳನ್ನು ಪಡೆದು , ನಾಯಕತ್ವ ಗುಣಹೊಂದಿ ಉಳಿದವರಿಗಿಂತ ಸಮರ್ಥವಾಗಿ ಆಪತ್ತು ಅಥವಾ ಅಗತ್ಯ ಸಂದರ್ಭಗಳಲ್ಲಿ ವಿಶಿಷ್ಟ ಸಾಮರ್ಥ್ಯದಿಂದ ಕರ್ತವ್ಯನಿರ್ವಹಿಸಬಲ್ಲರು.

ಸಮರ್ಥ ಸ್ಕೌಟ್ ನಗರದ ಬೀದಿಗಳಲ್ಲಿ ಅಲೆದಾಡುವುದಕ್ಕಿಂತ ಪ್ರಕೃತಿ ಮಧ್ಯದಲ್ಲಿ ಕ್ಯಾಂಪ್ ಮಾಡುವುದಕ್ಕೆ ಇಷ್ಟ ಪಡುತ್ತಾನೆ.


ಅವನು ಸಂಜ್ಞೆಗಳನ್ನು ಗುರುತಿಸಿ ದಿಕ್ಕು ಗಳನ್ನು ತಿಳಿಯಬಲ್ಲ.

ಅವನು ಹಗ್ಗದಿಂದ ಜಾರದಿರುವ ಗಙಂಟುಗಳನ್ನು ಹಾಕಬಲ್ಲ. ಮರವನ್ನು ಹತ್ತಬಲ್ಲ. ಈಜಬಲ್ಲ. ಅವನು ವಿಷಭರಿತ ಹಣ್ಣುಗಳು ಅಲ್ಲದವು ಯಾವುವು ಎಂದು ಹೇಳಬಲ್ಲ. ಫಲಕೊಡುವ ಮರಗಳನ್ನು ಗುರುತಿಸಬಲ್ಲ. ನಕ್ಷತ್ರಗಳನ್ನು ಗುರುತಿಸಿ ದಾರಿ ಕಂಡುಕೊಳ್ಳಬಲ್ಲ.


ಅವನ ಕಣ್ಣು ಚುರುಕಾಗಿದ್ದು ಸಂಕೇತ, ಸಂಜ್ಞೆಗಳನ್ನು ಗುರುತಿಸಬಲ್ಲ.


ಆತನು ಮೃದು ಭಾಷಿ. ವಿನಯದಿಂದ ಪ್ರಶ್ನೆ ಕೇಳುತ್ತಾನೆ.


ಅವನು ಸಾಮಾನ್ಯವಾಗಿ ಒಂದೇ ಬೆಂಕಿಕಡ್ಡಿಯಿಂದ ಬೆಂಕಿಮಾಡಬಲ್ಲ.


ಆರೋಗ್ಯ, ಮತ್ತ ಢೃಡಕಾಯಕ್ಕಾಗಿ ಅಗತ್ಯವಾದ ಶುದ್ಧ ಆಹಾರವನ್ನು ಮಿತವಾಗಿ (ಅಗತ್ಯವಾದಷ್ಟು ಮಾತ್ರಾ) ಸೇವಿಸುತ್ತಾನೆ. ಅವನು ಅದರಿಂದ ಚುರುಕಾದ ಸ್ಪಷ್ಟ ವಿಚಾರದ ಬುದ್ಧಿಯುಳ್ಳವನು..


ಅವನು ಮ್ದ್ಯವನ್ನಾಗಲಿ ಹೊಗೆಸೊಪ್ಪನ್ನಾಗಲಿ ಉಪಯೋಗಿಸನು; ದುಶ್ಚಟಗಳಿಂದ ದೂರವಿರುವನು. ಅವನು ಬೆಂಕಿಯ ಅವಘಡ, ನಾವೆಎ, ರೈಲು ಅಪಘಾತ, ಈಬಗೆಯ ಅನಾಹುತ ಸಂದರ್ಭಗಳಲ್ಲಿ , ಗಾಬರಿಗೊಳ್ಳದೆ , ತನ್ನ ಮನಸ್ಸು ಮತ್ತು ದೇಹವನ್ನು ಹತೋಟಿಯಲ್ಲಿಟ್ಟುಕೊಂಡು , ಉಳಿದವರಿಗೆ ಮಾದರಿಯಾಗಿ ಸಹಾಯ , ಅಗತ್ಯ ಕರ್ತವ್ಯಗಳನ್ಗನು ಮಾಡಬಲ್ಲ. ಅವನಿಗೆ ಪ್ರಥಮ ಚಿಕಿತ್ಸೆ ಮಾಡುವುದು ಗೊತ್ತಿದೆ.


ಅವನು ಸ್ಕೌಟ್ ನಿಯಮ ಪಾಲಿಸುವವನು. ಅಂದರೆ ಅವನು ನಂಬಿಗೆಗೆ ಅರ್ಹ ; ಪ್ರಾಮಾಣಿಕ ; ಇತರ ಸ್ಸೌಟ್/ಗೈಡ್ಗಳಿಗೆ ಸೋದರಭಾವವುಳ್ಳವನು. ಎಲ್ಲರ ಸ್ನೇಹಿತ ; ಪ್ರಕೃತಿಯ ಸ್ನೇಹಿತ ; ಧೈರ್ಯಶಾಲಿ ; ಮಿತವ್ಯಯಿ ;ಮನ -ಕಾಕದಲ್ಲಿ ಪರಿಶುದ್ಧನು .


ಭಗವದ್ಗೀತೆಯಲ್ಲಿ ಹೇಳಿದಂತೆ ತರಬೇತಿ ಪಡೆದ ಕರ್ಮಯೋಗಿಯಾಗಿರವನು.


ಉತ್ತಮ ಸಮಾಜ ನಿರ್ಮಾಣಕ್ಕಾಗಿ, ದೇಶದ ಅಭಿವೃದ್ಧಿಗಾಗಿ ಸರ್ಕಾರಗಳು ಈ ಸ್ಸೌಟ್ -ಗೈಡ್ಸ್ ಚಳುವಳಿಗೆ ಉತ್ತಮ ಪ್ರೋತ್ಸಾಕೊಡುವುದು ಅಗತ್ಯವಾಗಿದೆ.


ಗಾಂಧೀಜಿ ಯವರ ಕೋರಿಕೆ,'ಪ್ರತಿಯೊಂದು ಮನೆಯಲ್ಲೂ ಈಬಗೆಯ ತರಬೇತಿಹೊದಿದ ಮಕ್ಕಳು ಇರಬೇಕೆಂದು ನನ್ನ ಪ್ರಾರ್ಥನೆ'.ಜವಾರಲಾಲ್ ನೆಹರೂ,ಸ್ಸೌಟ್ ಗೈಡ್ಸ್ ಬಗ್ಗೆ,'ಈ ಸಂಸ್ಥೆ ಸರಿಯಾದ ಮಾರ್ಗದಲ್ಲಿ ನೆಡೆಯುತ್ತಿದೆ. ಅದು ಭಾರತದಲ್ಲಿ ಬಾಲಕ,ಯುವಕರನ್ನು ತರಬೇತಿ ಮಾಡುವಲ್ಲಿ ಯಶಸ್ಸು ಗಳಿಸಲೆಂದು ಆಶಿಸುತ್ತೇನೆ.'

ಎನ್ ಸಿ ಸಿ (ನ್ಯಾಷನಲ್ ಕೆಡೆಟ್ ಕಾರ್ಪ್ಸ್)

ಎನ್ ಸಿ ಸಿ

ನ್ಯಾಷನಲ್ ಕೆಡೆಟ್ ಕಾರ್ಪ್ಸ್

[ಗಮನಿಸಿ-ನ್ಯಾಷನಲ್ ಕೆಡೆಟ್ ಕೋರ್ (ಎನ್.ಸಿ.ಸಿ)corps ಇದರ ಉಚ್ಛಾರ ಕೋರ್ = ದಳ; corpse=ಕಾರ್ಪ್ಸ್=ಹೆಣ]

ನ್ಯಾಷನಲ್ ಕೆಡೆಟ್ ಕಾರ್ಪ್ಸ್ ; ದೆಹಲಿ ಯಲ್ಲಿ ಪ್ರಧಾನ ಮಿಲಿಟರಿ ಭಾರತೀಯ ಕೆಡೆಟ್ ಪಡೆ ಹೊಂದಿದೆ. ಇದು ಸ್ವಯಂಪ್ರೇರಿತ ಆಧಾರದ ಮೇಲೆ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ತೆರೆದಿರುತ್ತದೆ. ನ್ಯಾಷನಲ್ ಕೆಡೆಟ್ ಕಾರ್ಪ್ಸ್ ಶಿಸ್ತಿನ ಮತ್ತು ದೇಶಭಕ್ತಿಯ ನಾಗರಿಕರು ದೇಶದವನ್ನು ಅಂದಗೊಳಿಸಲು ತೊಡಗಿರುವ ಸೇನೆ, ನೌಕಾಪಡೆ ಮತ್ತು ವಾಯುಪಡೆಯ, ಒಳಗೊಂಡಿದೆ, ಒಂದು ತ್ರಿಸೇವೆಗಳ ಸಂಘಟನೆಯಾಗಿದೆ. ಭಾರತದಲ್ಲಿ ನ್ಯಾಷನಲ್ ಕೆಡೆಟ್ ಕಾರ್ಪ್ಸ್ ಹೆಚ್ಚಿನ ಶಾಲೆಗಳು, ಕಾಲೇಜುಗಳು ಮತ್ತು ಭಾರತದಾದ್ಯಂತ ವಿಶ್ವವಿದ್ಯಾನಿಲಯಗಳ ಕೆಡೆಟ್ಗಳಿಗೆ ನೇಮಿಸಿಕೊಳ್ಳುತ್ತದೆ ಇದು ಸ್ವಯಂಪ್ರೇರಿತ ಸಂಘಟನೆಯಾಗಿದೆ. ಕೆಡೆಟ್ಗಳು, ಸಣ್ಣ ಶಸ್ತ್ರಗಳು ಮತ್ತು ಮೆರವಣಿಗೆಗಳು ಮೂಲಭೂತ ಸೈನಿಕಪಡೆ ತರಬೇತಿಯನ್ನು ನೀಡಲಾಗುತ್ತದೆ. ಅಧಿಕಾರಿಗಳು ಕೆಡೆಟ್ಗಳಿಗೆ ಅವರು ತಮ್ಮ ಕೋರ್ಸ್ ಪೂರ್ಣಗೊಳಿಸಲು ಒಮ್ಮೆ ಸಕ್ರಿಯವಾದ ಮಿಲಿಟರಿಯ ಹೊಣೆಗಾರಿಕೆ ಆದರೆ ಕಾರ್ಪ್ಸ್ ಸಾಧನೆಗಳನ್ನು ಆಧರಿಸಿ, ಆಯ್ಕೆಗಳನ್ನು ಸಮಯದಲ್ಲಿ ಸಾಮಾನ್ಯ ಅಭ್ಯರ್ಥಿಗಳ ಮೇಲೆ ಆದ್ಯತೆ ನೀಡಲಾಗುತ್ತದೆ. ಎನ್.ಸಿ.ಸಿ ಮೊದಲನೆಯದಾಗಿ ಜರ್ಮನಿಯಲ್ಲಿ ೧೬೬೬ ರಲ್ಲಿ ಪ್ರಾರಂಭವಾಯಿತು. ಭಾರತದಲ್ಲಿ ಎನ್.ಸಿ.ಸಿ ೧೯೪೮ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ಕಾಯಿದೆಯಡಿ ರಚಿಸಲಾಯಿತು. ಇದು ೧೯೪೮ ಜುಲೈ ೧೫ ರಂದು ಬೆಳೆಯಿತು. ಎನ್.ಸಿ.ಸಿ ಮೂಲ ಆರ್ಮಿ ಕೊರತೆ ತುಂಬುವ ವಸ್ತುವಿನಿಂದ, ಭಾರತದ ರಕ್ಷಣಾ ಕಾಯಿದೆ ೧೯೧೭ ಅಡಿಯಲ್ಲಿ ರಚಿಸಲಾದ 'ವಿಶ್ವವಿದ್ಯಾಲಯ ಕಾರ್ಪ್ಸ್' ಗುರುತಿಸಬಹುದಾಗಿದ್ದು . ಭಾರತೀಯ ಪ್ರಾಂತೀಯ ಕಾಯಿದೆ ಜಾರಿಗೆ ೧೯೨೦ ರಲ್ಲಿ, 'ವಿಶ್ವವಿದ್ಯಾಲಯ ಕಾರ್ಪ್ಸ್'ನಿಂದ ವಿಶ್ವವಿದ್ಯಾಲಯ ಟ್ರೇನಿಂಗ ಕಾರ್ಪ್ಸ್ ಎಂದು ಬದಲಿಸಲಾಯಿತು. ಗುರಿಯನ್ನು, ಸ್ಥಾನಮಾನವನ್ನು ಹೆಚ್ಚಿಸಲು ಮತ್ತು ಯುವಕರನ್ನು ಹೆಚ್ಚು ಆಕರ್ಷಕ ಮಾಡಲಾಗಿತ್ತು. ಇದು ಸಶಸ್ತ್ರ ಪಡೆಗಳ ಭಾರತೀಕರಣವನ್ನು ಕಡೆಗೆ ಗಮನಾರ್ಹ ಹೆಜ್ಜೆ ಆಗಿತ್ತು. ನ್ಯಾಷನಲ್ ಕೆಡೆಟ್ ಕಾರ್ಪ್ಸ್ ೧೯೪೨ ರಲ್ಲಿ ಬ್ರಿಟಿಷ್ ಸರ್ಕಾರ ರೂಪಿಸಿರುವ ವಿಶ್ವವಿದ್ಯಾಲಯ ಅಧಿಕಾರಿಗಳು ಟ್ರೇನಿಂಗ ಕಾರ್ಪ್ಸ್ ಒಂದು ಉತ್ತರಾಧಿಕಾರಿ ಎಂದು ಪರಿಗಣಿಸಬಹುದು. ಆದ್ದರಿಂದ ಇದು ರೂಪದಲ್ಲಿ ಪುನರ್ ನಾಮಕರಣ. ವಿಶ್ವ ಸಮರ ಸಂದರ್ಭದಲ್ಲಿ, ಬ್ರಿಟಿಷ್ ಸೆಟ್ ನಿರೀಕ್ಷೆಯ ಬಂದುವಾಗಿ, ಈ ಕೆಲವು ಉತ್ತಮ ಯೋಜನೆಗಳನ್ನು ಸಹ ಶಾಂತಿ ಸಮಯದಲ್ಲಿ, ಉತ್ತಮ ರೀತಿಯಲ್ಲಿ ಹೆಚ್ಚು ಯುವಕರು ತರಬೇತಿ ಎಂದು ರೂಪುಗೊಂಡದ್ದು ಕಲ್ಪನೆಗೆ ದಾರಿ. ಪಂಡಿತ್ ಹೆಚ್.ಎನ್.ಕುನ್ಜ಼್ರು ನೇತೃತ್ವದ ಸಮಿತಿ ರಾಷ್ಟ್ರೀಯ ಮಟ್ಟದಲ್ಲಿ ,ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಸ್ಥಾಪಿತವಾದ ಒಂದು ಕೆಡೆಟ್ ಸಂಸ್ಥೆಯ ಶಿಫಾರಸು. ನ್ಯಾಷನಲ್ ಕೆಡೆಟ್ ಕಾರ್ಪ್ಸ್ ಕಾಯಿದೆಯು ಗವರ್ನರ್ ಜನರಲ್ ಒಪ್ಪಿಗೆ ಇಂದ, ೧೫ ಜುಲೈ ೧೯೪೮ ರಂದು ನ್ಯಾಷನಲ್ ಕೆಡೆಟ್ ಕಾರ್ಪ್ಸ್ ಅಸ್ತಿತ್ವಕ್ಕೆ ಬಂದಿತು. ೧೯೪೯ ರಲ್ಲಿ, ಗರ್ಲ್ಸ್ ವಿಭಾಗ ಶಾಲೆ ಮತ್ತು ಕಾಲೇಜಿಗೆ ಹೋಗುವ ಹುಡುಗಿಯರ ಸಮನಾದ ಅವಕಾಶಗಳನ್ನು ನೀಡುವ ಸಲುವಾಗಿ ಬೆಳೆಯಿತು ಹಾಗು ಏರ್ ವಿಂಗ್ ಸೇರಿಸಲಾಯಿತು. ಎನ್.ಸಿ.ಸಿ ೧೯೫೨ ರಲ್ಲಿ ನೌಕಾ ವಿಂಗ್ ನಂತರ, ೧೯೫೦ ರಲ್ಲಿ ಅಂತರ ಸೇವೆ ಚಿತ್ರ ನೀಡಲಾಯಿತು. ಅದೇ ವರ್ಷ,ಎನ್.ಸಿ.ಸಿ ಪಠ್ಯಕ್ರಮದ ಬೆಳವಣಿಗೆಯಲ್ಲಿ ತೀವ್ರ ಆಸಕ್ತಿಯನ್ನು ವಹಿಸಿದರು, ಲೇಟ್ ಪಂಡಿತ್ ಜವಾಹರಲಾಲ್ ನೆಹರೂ ಆಣತಿಯಂತೆ ಎನ್.ಸಿ.ಸಿ ಪಠ್ಯಕ್ರಮ ಒಂದು ಭಾಗವಾಗಿ ಸಮುದಾಯ ಅಭಿವೃದ್ಧಿ / ಸಾಮಾಜಿಕ ಕಾರ್ಯಚಟುವಟಿಕೆಗಳು ಸೇರಿದಂತೆ ವಿಸ್ತರಿಸಲಾಯಿತು. ರಾಷ್ಟ್ರಪಿತ ಅಗತ್ಯಗಳನ್ನು ಪೂರೈಸಲು, ೧೯೬೨ ಸಿನೋ ಭಾರತದ ಕದನದ ನಂತರ,ಎನ್.ಸಿ.ಸಿ ತರಬೀತಿ ೧೯೬೩ರಲ್ಲಿ ಕಡ್ಡಾಯ ಮಾಡಲಾಯಿತು. ೧೯೬೮ ರಲ್ಲಿ, ಕಾರ್ಪ್ಸ್ ಮತ್ತೆ ಪ್ರೆರಿತ ಮಾಡಲಾಯಿತು. ೧೯೬೫ ರ ಇಂಡೋ ಪಾಕ್ ಯುದ್ಧದ ಹಾಗೂ ೧೯೭೧ ರ ಇಂಡೋ ಪಾಕ್ ಯುದ್ಧದ ಸಮಯದಲ್ಲಿ, ಎನ್ಸಿಸಿ ಕೆಡೆಟ್ಗಳು ರಕ್ಷಣಾ ಎರಡನೇ ಸಾಲಿನಲ್ಲಿ ಇದ್ದರು. ಅವರು ಮುಂದೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ಪೂರೈಕೆ, ಸೇನಾ ಪಡೆಯ ಕಾರ್ಖಾನೆಗಳು ನೆರವಾಗಲು ಶಿಬಿರ ಆಯೋಜಿಸಿ ಶತ್ರು ಆಕಾಶ ಹಿಡಿಯಲು ಗಸ್ತು ಪಕ್ಷಗಳಂತೆ ಬಳಸಲಾಗುತ್ತಿತ್ತು.ಎನ್.ಸಿ.ಸಿ ಕೆಡೆಟ್ಗಳು ನಾಗರಿಕ ರಕ್ಷಣಾ ಅಧಿಕಾರಿಗಳ ಜೊತೆಜೊತೆಯಾಗಿ ಕೆಲಸ ಮತ್ತು ಸಕ್ರಿಯವಾಗಿ ಪಾರುಗಾಣಿಕಾ ಕೃತ್ಯಗಳ ಮತ್ತು ಸಂಚಾರ ನಿಯಂತ್ರಣಗಳಲ್ಲಿ ಭಾಗವಹಿಸಿದರು. 1965 ಮತ್ತು 1971ರ ನಂತರ ವಾರ್ಸ್ ಎನ್.ಸಿ.ಸಿ ಪಠ್ಯಕ್ರಮ ಪರಿಷ್ಕರಿಸಲಾಯಿತು. ಕೇವಲ ರಕ್ಷಣಾ ಎರಡನೇ ಸಾಲಿನಲ್ಲಿ ಹೊರತಾಗಿ, ಎನ್ಸಿಸಿ ಪಠ್ಯಕ್ರಮ ಗುಣಗಳನ್ನು ಹಾಗೆ ನಾಯಕತ್ವ ಮತ್ತು ಅಧಿಕಾರಿ ಗುಣಮಟ್ಟ ಅಭಿವೃದ್ಧಿಗೆ ಹೆಚ್ಚಿನ ಒತ್ತಡ ಹಾಕಿತು. ಎನ್.ಸಿ.ಸಿ ಕೆಡೆಟ್ಗಳು ಪಡೆದ ಮಿಲಿಟರಿ ತರಬೇತಿ ಕಡಿಮೆಯಾಯಿತು ಮತ್ತು ಹೆಚ್ಚಿನ ಪ್ರಾಮುಖ್ಯತೆಯನ್ನು ಸಾಮಾಜಿಕ ಸೇವೆ ಮತ್ತು ಯುವ ನಿರ್ವಹಣೆ ಇತರ ಪ್ರದೇಶಗಳಲ್ಲಿ ನೀಡಲಾಯಿತು. ಎನ್.ಸಿ.ಸಿ ಹಾಡು "ಕದಮ್ ಮಿಲಾ ಕೆ ಚಲ್" ಎಂಬ ಎನ್.ಸಿ.ಸಿ ಅಧಿಕೃತ ಸಾಂಗ್ 1963 ರಲ್ಲಿ ಅಳವಡಿಸಿಕೊಳ್ಳಲಾಯಿತು. ಅಕ್ಟೋಬರ್ 1982 ರಲ್ಲಿ "ಹಮ್ ಸಭ್ ಭಾರತೀಯ ಹೈ" ಎಂಬ ಪ್ರಸ್ತುತ ಎನ್.ಸಿ.ಸಿ ಸಾಂಗ್ ಬದಲಾಯಿತು. "ಹಮ್ ಸಭ್ ಭಾರತೀಯ ಹೈ" - ಎನ್.ಸಿ.ಸಿ ಹಾಡು ಸುದರ್ಶನ್ ಫಕೀರ್ ಬರೆದಿದ್ದಾರೆ

ಹಮ್ ಸಬ್ ಭಾರತೀಯ ಹೈ, ಹಮ್ ಸಬ್ ಭಾರತೀಯ ಹೈ 
ಅಪ್ನಿ ಮಂಜಿಲ್ ಏಕ್ ಹೈ, 
ಹಾ, ಹಾ, ಹಾ, ಏಕ್ ಹೈ, 
ಹೋ, ಹೋ, ಹೋ, ಏಕ್ ಹೈ. 
ಹಮ್ ಸಬ್ ಭಾರತೀಯ ಹೈ. 
ಕಾಶ್ಮೀರ ಕಿ ಧರ್ತಿ ರಾಣಿ ಹೈ, 
ಸರ್ತಾಜ್ ಹಿಮಾಲಯ ಹೈ, 
ಸಾದಿಯೊನ್ಸೆ ಹಮ್ನೆ ಇಸ್ಕೊ ಅಪನೇ ಖೂನ್ ಸೆ ಪಾಲಾ ಹೈ 
ದೇಶ್ ಕಿ ರಕ್ಷಾ ಕಿ ಖಾತಿರ್ ಹಮ್ ಶಮ್ಶಿರ್ ಉಠಾ ಲೆಂಗೆ, 
ಹಮ್ ಶಮ್ಶಿರ್ ಉಠಾ ಲೆಂಗೆ. 
ಬಿಖ್ರೆ ಬಿಖ್ರೆ ತಾರೇ ಹೈ ಹಮ್ ಲೆಕಿನ್ ಜಿಲ್ಮಿಲ್ ಏಕ್ ಹೈ, 
ಹಾ, ಹಾ, ಹಾ, ಏಕ್ ಹೈ 
ಹಮ್ ಸಬ್ ಭಾರತೀಯ ಹೈ. 
ಮಂದಿರ್ ಗುರುದ್ವಾರ್ ಭೀ ಹೈ ಯಹಾಂ
ಔರ್ ಮಸೀದಿ ಭೀ ಹೈ ಯಹಾಂ 
ಗಿರಿಜಾ ಕಾ ಹೈ ಘಡಿಯಾಳ್ ಕಹೀ 
ಮುಲ್ಲಾ ಕಿ ಕಹೀ ಹೈ ಅಜಾನ್ 
ಏಕ್ ಹೀ ಅಪನಾ ರಾಮ್ ಹೈ, ಏಕ್ ಹೈ ಅಲ್ಲಾ ತಾಲಾ ಹೈ, 
ಏಕ್ ಹೀ ಅಲ್ಲಾ ತಾಲಾ ಹೈ, ರಂಗೆ ಬಿರಂಗೆ ದೀಪಕ್ ಹೈ ಹಮ್, 
ಲೆಕಿನ್ ಜಗ್ಮಗ್ ಏಕ್ ಹೈ, ಹ ಹ ಹ ಏಕ್ ಹೈ, ಹೋ ಹೋ ಹೋ ಏಕ್ ಹೈ. 
ಹಮ್ ಸಬ್ ಭಾರತೀಯ ಹೈ, ಹಮ್ ಸಬ್ ಭಾರತೀಯ ಹೈ.

ಸಂಘಟನೆ ಹೆಡ್ಕ್ವಾರ್ಟರ್ಸ್ ಮಟ್ಟದಲ್ಲಿ ಈ ಸಂಸ್ಥೆ, ಲೆಫ್ಟಿನೆಂಟ್ ಜನರಲ್ ಶ್ರೇಣಿಗೆ ಒಂದು ಅಧಿಕಾರಿ. ಅವರು ಎನ್.ಸಿ.ಸಿ ನಿರ್ದೇಶಕ ಜನರಲ್ ಆಗಿರುತ್ತಾರೆ. ಮೇಜರ್ ಜನರಲ್ ಶ್ರೇಣಿಯ ಎರಡು ಇತರ ಅಧಿಕಾರಿಗಳು, ಐದು ಬ್ರಿಗೇಡಿಯರ್ ಮಟ್ಟದ ಅಧಿಕಾರಿಗಳು ಮತ್ತು ಇತರ ನಾಗರಿಕ ಅಧಿಕಾರಿಗಳು ಅವನಿಗೆ ಸಹಾಯಕರಾಗಿರುತ್ತಾರೆ. ಹೆಡ್ಕ್ವಾರ್ಟರ್ಸ್ ದೆಹಲಿಯಲ್ಲಿದೆ. ಮೂರು ಸೇವೆಗಳ ಒಂದು ಬ್ರಿಗೇಡಿಯರ್ ಅಧಿಕಾರಿಯೊಬ್ಬರ ನೇತೃತ್ವದಲ್ಲಿ, ರಾಜ್ಯ ರಾಜಧಾನಿಗಳು ನೆಲೆಗೊಂಡಿರುವ ೧೭ ನಿರ್ದೇಶನಾಲಯಗಳು ಇವೆ. ಸ್ಟೇಟ್ಸ್ನ ಮತ್ತು ಎನ್.ಸಿ.ಸಿ ಬೆಳವಣಿಗೆ ಗಾತ್ರವನ್ನು ಅವಲಂಭಿಸಿರುತ್ತದೆ, ನಿರ್ದೇಶನಾಲಯಗಳು ತಮ್ಮ ಆಜ್ಞೆಯನ್ನು ಮತ್ತು ರಾಜ್ಯದ ಸಂಸ್ಥೆಯ ನಿಯಂತ್ರಣದ ವ್ಯಾಯಾಮದ ಮೂಲಕ ಅವುಗಳ ಅಡಿಯಲ್ಲಿ ೧೪ ಗ್ರೂಪ್ ಹೆಡ್ಕ್ವಾರ್ಟರ್ಸ್ ಹೊಂದಿವೆ. ಪ್ರತಿಯೊಂದು ಗುಂಪುಗು ಕಮಾಂಡರ್ ಎಂದು ಕರ್ನಲ್ ಸ್ಥಾನವನ್ನು, ಪ್ರತಿ ಎನ್.ಸಿ.ಸಿ ಗ್ರೂಪ್ ಹೆಡ್ಕ್ವಾರ್ಟರ್ಸ್ಗು ಲೆಫ್ಟಿನೆಂಟ್ ಕರ್ನಲ್ / ಮೇಜರ್ ಅಥವಾ ಸಮಾನ ನೇತೃತ್ವದಲ್ಲಿ ೫-೭ ಘಟಕಗಳನ್ನು ನಿಯಂತ್ರಿಸಲಾಗುತ್ತದೆ. ಪ್ರತಿ ಬೆಟಾಲಿಯನ್ ಪ್ರಮುಖ ಲೆಫ್ಟಿನೆಂಟ್ ಹುದ್ದೆಯ ಅಸೋಸಿಯೇಟ್ ಎನ್.ಸಿ.ಸಿ ಅಧಿಕಾರಿ (ಎ.ಎನ್.ಒ) ನೇತೃತ್ವದಲ್ಲಿ ಕಂಪನಿಗಳು ಒಳಗೊಂಡಿವೆ. ಎಲ್ಲಾರು ವ್ಯಾಯಾಮ (ತಾಂತ್ರಿಕ ಮತ್ತು ಹುಡುಗಿಯರು ಘಟಕ ಸೇರಿದಂತೆ) ೬೬೭ ಆರ್ಮಿ ವಿಂಗ್ ಘಟಕಗಳು, ೬೦ ನೌಕಾ ವಿಂಗ್ ಘಟಕಗಳು ಮತ್ತು ೬೧ ಏರ್ ಸ್ಕ್ವಾಡ್ರನ್ಸ್ ನೆಟ್ವರ್ಕ್ ನಿಯಂತ್ರಣ ದೇಶದಲ್ಲಿ ೯೫ ಗುಂಪು ಹೆಡ್ಕ್ವಾರ್ಟರ್ಸ್ಗಳಿವೆ. ಎರಡು ತರಬೇತಿ ಕೇಂದ್ರಗಳು, ಅವುಗಳೆಂದರೆ ಅಧಿಕಾರಿಗಳ ತರಬೇತಿ ಸ್ಕೂಲ್, ಸೇನಾಪಡೆಗಳ ನ್ಯಾಯಸ್ಥಾನಗಳ ಪ್ರಧಾನ ಮತ್ತು ಮಹಿಳೆಯರ ಅಧಿಕಾರಿಗಳ ತರಬೇತಿ ಶಾಲೆ, ಗ್ವಾಲಿಯರ್ನಲ್ಲಿವೆ. ನಿರ್ದೇಶನಾಲಯಗಳು -ಆಂಧ್ರ ಪ್ರದೇಶ -ಬಿಹಾರ ಮತ್ತು ಜಾರ್ಖಂಡ್ -ದೆಹಲಿ -ಗುಜರಾತ್ ದಾದ್ರಾ ಮತ್ತು ನಗರ ಹವೇಲಿ -ಜಮ್ಮು ಮತ್ತು ಕಾಶ್ಮೀರ -ಕರ್ನಾಟಕ ಮತ್ತು ಗೋವಾ -ಕೇರಳ ಹಾಗೂ ಲಕ್ಶದ್ವೀಪ್ -ಮಹಾರಾಷ್ಟ್ರ -ಮಧ್ಯಪ್ರದೇಶ ಹಾಗೂ ಛತ್ಥೀಗರ್ -ಒಡಿಶಾ -ಈಶಾನ್ಯ (ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಹಾಗೂ ತ್ರಿಪುರ) -ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಚಂಡೀಗಡ -ರಾಜಸ್ಥಾನ -ತಮಿಳುನಾಡು, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ -ಉತ್ತರ ಪ್ರದೇಶ -ಪಶ್ಚಿಮ ಬಂಗಾಳ ಹಾಗೂ ಸಿಕ್ಕಿಂ -ಉತ್ತರಖಂಡ ಆರ್ಮಿ : ಎನ್ಸಿಸಿ ಪ್ರತಿ ಬೆಟಾಲಿಯನ್ ಅಥವಾ ಘಟಕ ತುಕಡಿಗಳು ಅಥವಾ ಮಿತಭಾಷಿಯಾಗಿ ಒಳಗೊಂಡಿದೆ . ಹಿರಿಯ ವಿಭಾಗ ಹುಡುಗರು ಪ್ರತಿ ದಳದ ೫೨ ಕೆಡೆಟ್ಗಳು ಒಳಗೊಂಡಿದೆ ಮತ್ತು ಪ್ರತಿ ಮಿತಭಾಷಿಯು ೧೬೦ ಕೆಡೆಟ್ಗಳು ಒಳಗೊಂಡಿದೆ . ಪ್ರತಿ (ಬಿಎನ್) ಸುಮಾರು ೬೪೦ ರಿಂದ ೧೧೨೦ ಕೆಡೆಟ್ಗಳ ಗ ಒಯ್ಯುವ ೪೭ ಕಂಪನಿ ಹೊಂದಿದೆ . ೨೭(ಬಿಎನ್) ಮಿತಭಾಷಿಯಾಗಿ ಒಳಗೊಂಡಿದೆ ಹಿರಿಯ ರೆಕ್ಕೆ ಹುಡುಗಿಯರು ಒಟ್ಟು ೩೨೦ ರಿಂದ ೧೧೨೦ ಕೆಡೆಟ್ಗಳು . ಕಿರಿಯ ವಿಭಾಗ ಹುಡುಗರು ಮತ್ತು ಕಿರಿಯ ರೆಕ್ಕೆ ಹುಡುಗಿಯರು ಪ್ರತಿ ಸೈನ್ಯ ೧೦೦ ಕೆಡೆಟ್ಗಳು ಮತ್ತು ಪ್ರತಿ ಬಿಎನ್ ಕನಿಷ್ಠ ಒಂದು ಸೈನ್ಯ ಹೊಂದಿದೆ . ನೌಕಾಪಡೆ : ಹಿರಿಯ ವಿಭಾಗದ ಹುಡುಗರು ಪ್ರತಿ ಬಿಎನ್ ಅಥವಾ ಘಟಕದಲ್ಲಿ ೪೮ ವಿಭಾಗಗಳು ಒಳಗೊಂಡಿರುತ್ತದೆ ಮತ್ತು ಪ್ರತಿ ವಿಭಾಗದಲ್ಲಿ ೫೦ ಕೆಡೆಟ್ಗಳು ಒಳಗೊಂಡಿದೆ . ಹಿರಿಯ ರೆಕ್ಕೆ ಹುಡುಗಿಯರ ಇಂತಹದ್ದೇ ವ್ಯವಸ್ಥೆಯು ಹಿರಿಯ ವಿಭಾಗದ ಹುಡುಗರಿಗು ಅಸ್ತಿತ್ವದಲ್ಲಿದೆ . ಕಿರಿಯ ವಿಭಾಗದ ಹುಡುಗರು ಮತ್ತು ಕಿರಿಯ ರೆಕ್ಕೆ ಹುಡುಗಿಯರು ಪ್ರತಿ ಬಿಎನ್ ಗು ೧೦೦ ಕೆಡೆಟ್ಗಳ ಒಂದು ಸೈನ್ಯ ಹೊಂದಿದೆ . ಏರ್ : ಹಿರಿಯ ವಿಭಾಗದ ಹುಡುಗರು ಮತ್ತು ಹಿರಿಯ ರೆಕ್ಕೆ ಹುಡುಗಿಯರಿಗೆ ಪ್ರತಿ ಘಟಕದಲ್ಲಿ ೧೦೦ ಕೆಡೆಟ್ಗಳನ್ನು ಒಳಗೊಂಡಿದೆ ಹಾಗು ಕನಿಷ್ಠ ೨ ಪಡೆಯು ಒಳಗೊಂಡಿದೆ . ಆದ್ದರಿಂದ ಸ್ಕ್ವಾಡ್ರನ್ ಎಂದು ಪ್ರತಿ ಘಟಕ ಸುಮಾರು ೨೦೦ ಕೆಡೆಟ್ಗಳನ್ನು ಒಯ್ಯುತ್ತದೆ . ಕಿರಿಯ ರೆಕ್ಕೆ ಹುಡುಗಿಯರು ಮತ್ತು ಕಿರಿಯ ವಿಭಾಗ ಹುಡುಗರು ಪ್ರತಿ ಸ್ಕ್ವಾಡ್ರನ ಒಂದು ಸೈನ್ಯ ೧೦೦ ಕೆಡೆಟ್ಗಳನ್ನು ಒಳಗೊಂಡಿದೆ . ಆದರೆ, ಪ್ರತಿ ಘಟಕದಲ್ಲಿ ೨೪೦೦ ಕೆಡೆಟ್ಗಳ, ತಮ್ಮ ಶಕ್ತಿ ವಿಸ್ತರಿಸುವ ಹಿರಿಯ ವಿಭಾಗ ಹುಡುಗರ ೨೪ ಪಡೆಗಳು ಹೊಂದಬಹುದು ,ಆದರು ಈ ಗರಿಷ್ಠ ಮಿತಿಯನ್ನು ಹೊಂದಿದೆ. ಸಿಬ್ಬಂದಿ -ಕೆಡೆಟ್ ಶ್ರೇಣಿಗಳು -ಸೇನೆ -ನೌಕಾಪಡೆ -ಏರ್ ಫೋರ್ಸ್ -ಹಿರಿಯ ಅಡಿಯಲ್ಲಿ ಅಧಿಕಾರಿ -ಹಿರಿಯ ಕೆಡೆಟ್ ಕ್ಯಾಪ್ಟನ್ -ಹಿರಿಯ ಅಡಿಯಲ್ಲಿ ಅಧಿಕಾರಿ -ಅಧಿಕಾರಿ ಅಂಡರ್ -ಜೂನಿಯರ್ ಕೆಡೆಟ್ ಕ್ಯಾಪ್ಟನ್ -ಅಧಿಕಾರಿ ಅಂಡರ್ -ಕಂಪನಿ ಪ್ರಶ್ನೆ / ಎಂ ಸಾರ್ಜೆಂಟ್ -ಪೆಟ್ಟಿ ಅಧಿಕಾರಿ ಎಸ್.ಎಂ. -ವಾರಂಟ್ ಅಧಿಕಾರಿ -ಅಮೆರಿಕಾದ ಪೋಲಿಸ್ ಅಧಿಕಾರಿ -ನಾಯಕ ಕೆಡೆಟ್ -ಅಮೆರಿಕಾದ ಪೋಲಿಸ್ ಅಧಿಕಾರಿ -ಕಾರ್ಪೊರಲ್ -ಕೆಡೆಟ್ ವರ್ಗ I -ಕಾರ್ಪೊರಲ್ -ಲ್ಯಾನ್ಸ್ ಕಾರ್ಪೊರಲ್ -ಕೆಡೆಟ್ ವರ್ಗ II -ಪ್ರಮುಖ ವಿಮಾನ ಕೆಡೆಟ್ -ಕೊನೆಯ ಮಗ -ಕೊನೆಯ ಮಗ -ಹಾರಾಟ -ಕೊನೆಯ ಮಗ ಜೆಡಿ ಹುಡುಗರು ಮತ್ತು ಜೆ.ಡಬ್ಲು ಹುಡುಗಿಯರು ಸಾರ್ಜೆಂಟ್ ಶ್ರೇಯಾಂಕಗಳ ವರಗೆ ಅಪ್ ನೀಡಲಾಗುತ್ತದೆ ,ಎಸ್.ಡಿ ಹುಡುಗರು ಮತ್ತು ಎಸ್.ಡಬ್ಲು ಹುಡುಗಿಯರಿಗೆ ಸಾರ್ಜೆಂಟ್ ಮೇಲೆ ಶ್ರೇಯಾಂಕಗಳನ್ನು ನೀಡಲಾಗುತ್ತದೆ . ಎನ್.ಸಿ.ಸಿ ಅಸೋಸಿಯೇಟ್ ಅಧಿಕಾರಿ; ಎ.ಎನ್.ಒ (ಬಿಎನ್) ಕೆಡೆಟ್ಗಳ ನಡುವೆ ಎನ್.ಸಿ.ಸಿ ಸಂಸ್ಥೆಯ ಪ್ರಮುಖ ಲಿಂಕ್ ಆಗಿರುತ್ತಾರೆ. ಅವನು / ಅವಳು ಎಲ್ಲಾ ವರ್ಷದುದ್ದಕ್ಕೂ ಕೆಡೆಟ್ಗಳಿಗೆ ಸಂಪರ್ಕ ಯಾರು ಒಂದು ಕಾರಣ ವಾಸ್ತವವಾಗಿ ಅಮಾಟ ಎಂದು, ಎ.ಎನ್.ಒ, ಎನ್.ಸಿ.ಸಿ ಫೀಡರ್ ನೋಡ್. ಎರಡು ತರಬೇತಿ ಕೇಂದ್ರಗಳನ್ನು ಅವುಗಳೆಂದರೆ ಅಧಿಕಾರಿಗಳು ತರಬೇತಿ ಅಕಾಡೆಮಿ , ಸೇನಾಪಡೆಗಳ ನ್ಯಾಯಸ್ಥಾನಗಳ ಪ್ರಧಾನ ಮತ್ತು ಮಹಿಳೆಯರ ಅಧಿಕಾರಿಗಳ ತರಬೇತಿ ಶಾಲೆ,ಗ್ವಾಲಿಯರ್ನಲ್ಲಿವೆ . ಈ ಎರಡು ಸಂಸ್ಥೆಗಳ ಕಂಪನಿ / ಸೈನ್ಯ ಮುಖ್ಯಸ್ಥರಾದ ಆಯ್ಕೆ ಶಾಲೆ ಮತ್ತು ಕಾಲೇಜು ಶಿಕ್ಷಕರು ತರಬೇತಿ . ಈ ಸಂಸ್ಥೆಗಳಲ್ಲಿ ಕೋರ್ಸ್ಗಳು ೨೧ ದಿನಗಳ ಅವಧಿಯನ್ನು ೯೦ ದಿನಗಳ ವ್ಯಾಪ್ತಿಯಲ್ಲಿ. ಅಸೋಸಿಯೇಟ್ ಎನ್.ಸಿ.ಸಿ ಅಧಿಕಾರಿಗಳು ತಮ್ಮ ಹಿರಿತನದ ಮತ್ತು ತಮ್ಮ ತರಬೇತಿಯ ಪ್ರಕಾರ ಕೆಳಗಿನ ಶ್ರೇಣಿಗಳಿಗೆ ನೀಡಲಾಗುತ್ತದೆ . ( ಎಸ್.ಡಿ & ಎಸ್.ಡಬ್ಲು ಉಸ್ತುವಾರಿ ) ಕಾಲೇಜುಗಳು : 1.ಮೇಜರ್ 2.ನಾಯಕ 3.ಪ್ರತಿನಿಧಿ ಶಾಲೆಗಳು ( ಜೆಡಿ & ಜೆ ಉಸ್ತುವಾರಿ ( ಸಮಾನ ) ಅಧಿಕಾರಿ ನಿಯೋಜಿಸಿದ ) : 1.ಪ್ರಧಾನ ಅಧಿಕಾರಿ 2.ಪ್ರಥಮ ಅಧಿಕಾರಿ 3.ಎರಡನೆಯ ಅಧಿಕಾರಿ 4.ಮೂರನೆಯ ಅಧಿಕಾರಿ ಆರ್ಮಿ ಕೆಡೆಟ್ಗಳು ಕಾಕಿ ಸಮವಸ್ತ್ರವನ್ನು ಧರಿಸುತ್ತಾರೆ . ನೌಕಾ ಕೆಡೆಟ್ಗಳು ನೌಕಾಪಡೆ ಬಿಳಿ ಸಮವಸ್ತ್ರವನ್ನು ಧರಿಸುತ್ತಾರೆ . ಏರ್ ಫೋರ್ಸ್ ಕೆಡೆಟ್ಗಳಿಗೆ ಬೆಳಕಿನ ನೀಲಿ ಬೂದು (ಎಲ್.ಬೀ.ಜೀ) ಸಮವಸ್ತ್ರವನ್ನು ಧರಿಸುತ್ತಾರೆ . ಏಕರೂಪದ ಎಲ್ಲಾ ಸಂದರ್ಭಗಳಲ್ಲಿ ಕಡ್ಡಾಯ. ಎಸ್ಡಿ ಹುಡುಗರು ಆರ್ಮಿ ರೆಕ್ಕೆ ಉಡುಪು, ಕಾಕಿ ಪೂರ್ಣ ತೋಳು ಅಂಗಿ ಮತ್ತು ಜೆಡಿ ಉಡುಗಿ ಕಾಕಿ ಶರ್ಟ್ ಮತ್ತು ಕಾಕಿ ಚಡ್ಡಿ ಪ್ಯಾಂಟ್ ಧರಿಸುತ್ತಾರೆ. ಎಸ್.ಡಬ್ಲು & ಜೆ.ಡಬ್ಲು ನಿಂದ ಗರ್ಲ್ಸ್ ಕೆಡೆಟ್ಗಳಿಗೆ ಎರಡೂ ಕಾಕಿ ಪೂರ್ಣ ತೋಳು ಅಂಗಿ ಮತ್ತು ಪ್ಯಾಂಟ್ ಧರಿಸುತ್ತಾರೆ . ಎಸ್.ಡಿ ಹುಡುಗರು ಕೆಡೆಟ್ಗಳು ನೌಕಾ ರೆಕ್ಕೆ ಬಿಳಿ ಅರ್ಧ ತೋಳಿನ ಶರ್ಟ್ ಮತ್ತು ಬಿಳಿ ಪ್ಯಾಂಟ್ ಧರಿಸಲು ಹಾಗೂ ಜೆಡಿ ಹುಡುಗರು ಅರ್ಧ ತೋಳು ಬಿಳಿ ಅಂಗಿ ಮತ್ತು ಬಿಳಿಯ ಚಡ್ಡಿ ಧರಿಸುತ್ತಾರೆ . ನೌಕಾ ರೆಕ್ಕೆ ಎಸ್.ಡಬ್ಲು & ಜೆ.ಡಬ್ಲು ಗರ್ಲ್ಸ್ ಬಿಳಿ ಅರ್ಧ ತೋಳಿನ ಶರ್ಟ್ ಮತ್ತು ಪ್ಯಾಂಟ್ ಧರಿಸುತ್ತಾರೆ . ಎಸ್.ಡಿ ಹುಡುಗರು ಏರ್ ವಿಂಗ್ ಉಡುಗೆಯ ಬೆಳಕಿನ ನೀಲಿ ,ಅರ್ಧ ತೋಳಿನ ಶರ್ಟ್ ಮತ್ತು ಪ್ಯಾಂಟ್ ಹಾಗೂ ಜೆಡಿ ಕೆಡೆಟ್ಗಳಿಗೆ ಬೆಳಕಿನ ನೀಲಿ ಅರ್ಧ ತೋಳಿನ ಶರ್ಟ್ ಮತ್ತು ಪ್ಯಾಂಟ್ ಧರಿಸುತ್ತಾರೆ . ಎಸ್.ಡಬ್ಲು ಮತ್ತು ಜೆ.ಡಬ್ಲು ಗರ್ಲ್ಸ್ ಬೆಳಕಿನ ನೀಲಿ ಅರ್ಧ ತೋಳಿನ ಶರ್ಟ್ ಮತ್ತು ಲೌಂಜ್ ಧರಿಸಿರಬೇಕು . ಈ ಎಸ್.ಡಬ್ಲು & ಜೆ.ಡಬ್ಲು ಜೊತೆಗೆ ಕೆಡೆಟ್ಗಳಿಗೆ ಮೆರವಣಿಗೆ ಮತ್ತು ಬೇರೆ ಚಟುವಟಿಕೆಗಳ ಸಮಯದಲ್ಲಿ ಬಿಳಿ ಸಲ್ವಾರ್ ಮತ್ತು ಕಾಮೀಝ್ ಧರಿಸುತ್ತಾರೆ . ರೈಫಲ್ ಹಸಿರು ಟೋಪಿ, ರೈಫಲ್ ಹಸಿರು ಪೇಟ ಧರಿಸುವ ಸಿಖ್ ಕೆಡೆಟ್ಗಳಿಗೆ ಹೊರತುಪಡಿಸಿ ಎಲ್ಲಾ ಕೆಡೆಟ್ಗಳು ಕಡ್ಡಾಯವಾಗಿ ಧರಿಸಿರಬೇಕು . ದೈಹಿಕ ತರಬೇತಿ ಕೆಡೆಟ್ಗಳು ಕ್ಯಾನ್ವಾಸ್ ಶೂಗಳನ್ನು ಧರಿಸುತ್ತಾರೆ ಮತ್ತು ಡ್ರಿಲ್ ಡಿ.ಎಮ್.ಎಸ್ ಎಂಬ ಕಪ್ಪು ಚರ್ಮದ ಬೂಟುಗಳನ್ನು ( ಮಾರ್ಚ್ ಶೂಸ್ ಕೊರೆತಕ್ಕಾಗಿ ) ಧರಿಸಿರಬೇಕು . ಎಸ್.ಡಿ ಮತ್ತು ನೈರುತ್ಯ ಒಟ್ಟು ತರಬೇತಿ ಅವಧಿಯಲ್ಲಿ ಜೆಡಿ & ಜೆ.ಡಬ್ಲು ಒಂದು ಅನುಮತಿ ೧ ವರ್ಷ ವಿಸ್ತರಣೆ ಮತ್ತು ತರಬೇತಿ ಅವಧಿಯಲ್ಲಿ ೨ ,೩ ವರ್ಷಗಳು ಹೊಂದಿರಬೇಕು. ಹಿರಿಯ ಅಥವಾ ಕಿರಿಯ ವಿಭಾಗ ಪ್ರತಿ ಕೆಡೆಟ್ ತರಬೇತಿ ವರ್ಷದ ಅವಧಿಯಲ್ಲಿ ವಾರಕ್ಕೆ ಕನಿಷ್ಠ ೪ ಗಂಟೆಗಳ ಕಾಲ ಸೇವೆ ತರಬೇತಿಯನ್ನು ಹೊಂದಿರಬೇಕು . ಆದಾಗ್ಯೂ, ಯಾವುದೇ ತರಬೇತಿ ಕ್ಯಾಡೆಟ್ ಸೇರಿಕೊಂಡರು ಇದೆ ಮೂಲಕ ಕಾಲೇಜು ಅಥವಾ ಶಾಲೆಯ ವಿಹಾರಕ್ಕೆ ,ಮುಚ್ಚಿದಾಗ ಅವಧಿಯಲ್ಲಿ ನಡೆಸಲಾಗುತ್ತದೆ . ಹಿರಿಯರ ಮತ್ತು ಕಿರಿಯರ ವಿಭಾಗದ ಪ್ರತಿ ಕೆಡೆಟ್ ವಾರ್ಷಿಕ ಕಾಲೇಜು ಮತ್ತು ಶಾಲೆಯ ಅವಧಿಯಲ್ಲಿ ಒಟ್ಟು ಗಂಟೆಗಳ ೭೫% ಕನಿಷ್ಠ ಕಾಲ ಸೇವೆ ತರಬೇತಿ ಹೊಂದಿರಬೇಕು . ಹಿರಿಯ ವಿಭಾಗ ಸಂದರ್ಭದಲ್ಲಿ ೧೪ ದಿನಗಳ ಅವಧಿಯ ಮತ್ತು ಜೂನಿಯರ್ ವಿಭಾಗ ಸಂದರ್ಭದಲ್ಲಿ ೧೦ ದಿನಗಳ ಅವಧಿಯ ವಾರ್ಷಿಕ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ತರಬೇತಿ ವರ್ಷದಲ್ಲಿ ಪ್ರತಿ ಕೆಡೆಟ್ ಭಾಗವಹಿಸಬೇಕು . ಚಟುವಟಿಕೆಗಳು ಗಣರಾಜ್ಯ ದಿನ ಕ್ಯಾಂಪ್ ( ಆರ್.ಡಿ.ಸಿ ) ಆರ್.ಡಿ.ಸಿ ಮೊದಲು ಎಲ್ಲಾ ಗುಂಪು ಪ್ರಧಾನ ಐ.ಜಿ.ಸಿ ( ಅಂತರ್ ಗುಂಪು ಸ್ಪರ್ಧೆ ) ಎದುರಿಸಬೇಕಾಗುತ್ತದೆ. ಎನ್.ಸಿ.ಸಿ ಗಣರಾಜ್ಯೋತ್ಸವ ಕ್ಯಾಂಪ್ ಎಲ್ಲಾ ಎನ್.ಸಿ.ಸಿ ತರಬೇತಿ ಚಟುವಟಿಕೆಗಳು ಪರಾಕಾಷ್ಠೆ . ಆರ್.ಡಿ.ಸಿ ೧ ೨೯ ಜನವರಿ ೧೮೫೦,೧೭ ನಿರ್ದೇಶನಾಲಯಗಳು ಆಯ್ದ ಎನ್.ಸಿ.ಸಿ ಕೆಡೆಟ್ಗಳು ಶಿಬಿರದಲ್ಲಿ ಭಾಗವಹಿಸುತ್ತಾರೆ, ಗ್ಯಾರಿಸನ್ ಪೆರೇಡ್ ಮೈದಾನದಲ್ಲಿ , ದೆಹಲಿ ಕ್ಯಾಂಟ್ನಲ್ಲಿ ನಡೆಯುತ್ತದೆ . ಕ್ಯಾಂಪ್ ಭಾರತದ ಉಪಾಧ್ಯಕ್ಷ ಉದ್ಘಾಟಿಸಿದರು ಮತ್ತು ೨೭ ಜನವರಿ ಪ್ರಧಾನಿ ಜೊತೆ ಮುಕ್ತಾಯವಾಗುತ್ತದೆ . ಸಚಿವರಿಗೆ , ಸಂಪುಟ ಸಚಿವರು , ದೆಹಲಿಯ ಮುಖ್ಯಮಂತ್ರಿ , ಮೂರು ಸೇವೆ ಚೀಫ್ಸ್ ಮತ್ತು ವಿವಿಧ ರಾಜ್ಯ ಮಂತ್ರಿಗಳು / ವಿಐಪಿಗಳು ಶಿಬಿರದಲ್ಲಿ ಭೇಟಿಯ ಸಮಯದಲ್ಲಿ ಸಹ ಆಯೋಜಿಸಲಾಗಿದೆ . ಆರ್.ಡಿ.ಸಿ ಸಮಯದಲ್ಲಿ , ವಿವಿಧ ಸ್ಪರ್ಧೆಗಳಲ್ಲಿ ಪ್ರಧಾನಿ ಬ್ಯಾನರ್ನ ಪ್ರಶಸ್ತಿಗೆ ಚಾಂಪಿಯನ್ ನಿರ್ದೇಶನಾಲಯ ನಿರ್ಧರಿಸಲು ೧೭ ಎನ್.ಸಿ.ಸಿ ನಿರ್ದೇಶನಾಲಯಗಳ ನಡುವೆ ನಡೆಸಲಾಗುತ್ತದೆ . ಸ್ಪರ್ಧೆಗಳು ಹರಿತವಾಗಿ ಇಂತಹ ಪ್ರತಿ ನ್ಯಾಷನಲ್ ಇಂಟಿಗ್ರೇಷನ್ ಜಾಗೃತಿ , ಕೊರೆತ, ಲೈನ್ & ಪ್ರದೇಶ , ಸಾಂಸ್ಕೃತಿಕ ಕಾರ್ಯಕ್ರಮಗಳು ಅಂದರೆ ( ಗುಂಪು ಹಾಡು , ಗುಂಪು ನೃತ್ಯ ಮತ್ತು ಬ್ಯಾಲೆ ) , ಹಿರಿಯ ವಿಭಾಗದ ಅತ್ಯುತ್ತಮ ಕೆಡೆಟ್ ( ಹುಡುಗರು) ಮತ್ತು ಹಿರಿಯ ವಿಂಗ್ ( ಗರ್ಲ್ಸ್ ) ವಿವಿಧ ಘಟನೆಗಳು ವಿವಾದಾತ್ಮಕವಾಗಿದೆ ಸೇವೆ - ಸೇನೆ, ನೌಕಾಪಡೆ ಹಾಗೂ ಏರ್ ಡಿಸಿಪ್ಲೀನ್ . ಏರೋ ಮಾಡೆಲಿಂಗ್ ಮತ್ತು ಶಿಪ್ ಮಾಡೆಲಿಂಗ್ ಸಹ ಆರ್.ಡಿ.ಸಿ ಸಮಯದಲ್ಲಿ ನಡೆಸಲಾಗುತ್ತದೆ . ವಾರ್ಷಿಕ ತರಬೇತಿ ಶಿಬಿರಗಳು ( ಸಿ.ಎ.ಟಿ.ಸಿ )ಅವರು ಕ್ಯಾಡೆಟ್ ಎನ್.ಸಿ.ಸಿ ಏನು? ನಂತಹ ಮೂಲಭೂತ ಕಲಿಯಬಹುದು ಇದರಲ್ಲಿ ೧೦ ರಿಂದ ೧೨ ದಿನ ಶಿಬಿರಗಳು ಇವೆ , ಏನು ಇಟ್ಸ್ ಏಮ್ಸ್ ಇತ್ಯಾದಿ ಕೌಶಲಗಳನ್ನು ಫೈರಿಂಗ್ , ಇವೆ ಮತ್ತು ಇದು ಹೊಸ ಎನ್.ಸಿ.ಸಿ ಕೆಡೆಟ್ಗಳು ಬಹಳ ಮುಖ್ಯ . ನ್ಯಾಷನಲ್ ಇಂಟಿಗ್ರೇಷನ್ ಕ್ಯಾಂಪ್ (ಎನ್.ಐ.ಸಿ) ಎನ್ಐಸಿ ಶಿಬಿರಗಳು ಎಸ್.ಎಸ್.ಎಲ್.ಸಿ. ಗ್ರೇಸ್ ಮಾರ್ಕ್ ಈ ಶಿಬಿರಗಳು ಅಖಿಲ ಭಾರತ ಆಧಾರದ ಮೇಲೆ ನಡೆಸಲಾಗುತ್ತದೆ. ಪರಿಗಣಿಸುತ್ತಿದ್ದಾರೆ ಕೆಡೆಟ್ಗಳನ್ನು ಸಮಾಜದಲ್ಲಿ. ಇದರ ನಡುವೆ ರಾಷ್ಟ್ರೀಯ ಏಕೀಕರಣ ಪ್ರಸಾರಮಾಡಲು ಮತ್ತು ಭಾರತದ ವಿವಿಧ ರಾಜ್ಯಗಳಲ್ಲಿ ಸಾಂಸ್ಕೃತಿಕ ಅಂತರವನ್ನು ಸಹಾಯ ಆಗಿದೆ . ಜೊತೆಗೆ, ಲೇಹ್ ನಲ್ಲಿ ನಡೆಸಿದ ಆರು ವಿಶೇಷ ಎನ್.ಐ.ಸಿ ಗಳು ಇವೆ , ನಗ್ರೊಟಾ ( ಜೆ & ಕೆ ) , ಝಖಾಮಾ ( ಎನ್.ಇ.ಆರ್ ) , ಶ್ರೀನಗರ , ಲಕ್ಷದ್ವೀಪ ಮತ್ತು ಪೋರ್ಟ್ ಬ್ಲೇರ್ .ಆಲ್ ಇಂಡಿಯಾ ಬೇಸಿಗೆ ತರಬೇತಿ ಶಿಬಿರಗಳು ಎನ್ಸಿಸಿ ಕೆಡೆಟ್ಗಳ ಶಿಬಿರದಲ್ಲಿ ತರಬೇತಿ ಬೇರೆ ಸ್ಥಳಕ್ಕೆ ಕಳುಹಿಸಲಾಗುತ್ತದೆ. ಅಡ್ವಾನ್ಸ್ ನಾಯಕತ್ವ ಕೋರ್ಸ್ ಹಿಮಾಲಯ ಪರ್ವತಾರೋಹಣ ಸಂಸ್ಥೆಯಲ್ಲಿ ಡಾರ್ಜಿಲಿಂಗ್ ಮತ್ತು ಮನಾಲಿ ಕೋರ್ಸ್ ಪ್ಯಾರಾ ಸೈನಿಕರ ಶಿಬಿರಗಳು ಆರ್ಮಿ ಬಾಂಧವ್ಯ ಕ್ಯಾಂಪ್ ಸಿದ್ಧರಿದ್ದಾರೆ. ಕೆಡೆಟ್ಗಳಿಗೆ ೧೦-೧೫ ದಿನಗಳ ತರಬೇತಿ ಅವಧಿಯಲ್ಲಿ ಹೋಗುವ ಅಡಿಯಲ್ಲಿ ನಿರ್ದಿಷ್ಟ ಸೇನಾಪಡೆಗಳು ಜೋಡಿಸಿರುವ ಈ ಶಿಬಿರಗಳಲ್ಲಿ , ಭಾರತೀಯ ಸೇನೆಯ ಸಹಯೋಗದೊಂದಿಗೆ ಎನ್.ಸಿ.ಸಿ ನಡೆಸಲ್ಪಡುತ್ತಿವೆ. ಈ ಶಿಬಿರದಲ್ಲಿ , ಕೆಡೆಟ್ಗಳು ದಿನ / ರಾತ್ರಿ ಯುದ್ಧ ಮತ್ತು ಸಹ ಆಯುಧ ಪರಿಚಿತ ಪಡೆಯಲು ಸೇರಿದಂತೆ ಮಿಲಿಟರಿ ತಂತ್ರಗಳು , ನಿರ್ದಿಷ್ಟ ಸೇನಾದಳದ ಬೋಧಕರಿಗೆ ತರಬೇತಿ ನೀಡಲಾಗುತ್ತದೆ. ಹೈಕಿಂಗ್ ಮತ್ತು ಚಾರಣ ಶಿಬಿರಗರು,ಇವರ ಸಾಹಸ ಪೂರ್ಣ, ಸಾಹಸ ಏನೋ ಅನುಭವವನ್ನು ಬಯಸುವ ಕೆಡೆಟ್ಗಳು ಅವುಗಳನ್ನು ಹಾಜರಾಗಬೇಕಿತ್ತು . ತಾಲ್ ಸೈನಿಕ್ ಕ್ಯಾಂಪ್ ( ಟೀ.ಎಸ್.ಸಿ ). ಟೀ.ಎಸ್.ಸಿ ಕೆಡೆಟ್ಗಳಿಗೆ ೩ ಪೂರ್ವ ಶಿಬಿರಗಳು ೧೦ ಪ್ರತಿ ನಡೆಸುವುದು ಆಯ್ಕೆ ವಿಧಾನ , ಎಲ್ಲಾ ೧೬ ನಿರ್ದೇಶನಾಲಯಗಳು ( ಪ್ರತಿ ನಿರ್ದೇಶನಾಲಯ ೩೦ : +೩ ಕೆಡೆಟ್ಗಳಿಗೆ ) ಆಯ್ಕೆ ಇದರಲ್ಲಿ ಶರತ್ಕಾಲದ ಕೊನೆಯಲ್ಲಿ , ಪ್ರತಿ ವರ್ಷ ದೆಹಲಿ ನಡೆಸಿದ ೧೨ ದಿನಗಳ ಶಿಬಿರ ಒಂದು ವಾರ ಮಧ್ಯಂತರದಲ್ಲಿ -೧೨ ದಿನಗಳ ಆಯ್ಕೆ ಕೆಡೆಟ್ಗಳಿಗೆ. ನಂತರ ಈ ಕೆಳಗಿನ ಸ್ಪರ್ಧೆಗಳಲ್ಲಿ ತಮ್ಮ ನಿರ್ದೇಶನಾಲಯಗಳು ಪ್ರತಿನಿಧಿಸಲು ಟೀ.ಎಸ್.ಸಿ ಕಳುಹಿಸಲಾಗುತ್ತದೆ : ಅಡಚಣೆಯಾಗಿದೆ ಕೋರ್ಸ್ - ಅಡೆತಡೆಗಳನ್ನು ಇತ್ಯಾದಿ ೬ ಅಡಿ ಗೋಡೆ , ಝೀಘ್-ಅಂಕುಡೊಂಕು , ಡಬಲ್ ಡಿಚ್ , ಸಮತೋಲನ, ೩ ಅಡಿ ಬಾರ್ , ಎಡ ಬಾರ್ , ಬಲ ಬಾರ್ , ಇಳಿಜಾರಿನಿಂದ , ಒಳಗೊಂಡಿದೆ. ಇದು ಬಂದೂಕು ಪೂರ್ಣ ಟ್ಯಾಕ್ಟೀಬಲ್ ಗೇರ್ ಧರಿಸಿ ನಂತರ ಮಾಡಲಾಗುತ್ತದೆ . ಫೈರಿಂಗ್ - ( ಸ್ಟ್ಯಾಂಡಿಂಗ್ ಮಂಡಿಯೂರಿ & ಸ್ಥಾನಗಳನ್ನು ಸುಳ್ಳು ) ಫೈರಿಂಗ್ ( ಗ್ರೂಪಿಂಗ್ , ಸ್ನ್ಯಾಪ್ ಶೂಟಿಂಗ್ & ಅಪ್ಲಿಕೇಶನ್ ) ಮತ್ತು ಅಡ್ವಾನ್ಸ್ ಶೂಟಿಂಗ್ - ಇದು ಎರಡು ರೀತಿಯಾಗಿ ಒಳಗೊಂಡಿದೆ . ಇದು ೨೫ ಮೀಟರ್ ಮತ್ತು ೫೦ ಮೀಟರ್ ವ್ಯಾಪ್ತಿಯಲ್ಲಿ ಪ್ರಮಾಣಿತ ೨೨ ಕ್ಯಾಲಿಬರ್ ರೈಫಲ್ ಬಳಸಿ ಮಾಡಲಾಗುತ್ತದೆ. ನಕ್ಷೆ ಓದುವಿಕೆ - ಸಪ್ತವರ್ಣಗಳುಳ್ಳ ಕಂಪಾಸ್ , ಸೇವೆ ಪ್ರೊಟೆಕ್ಟರ್ ಮತ್ತು ಒಂದು ನಕ್ಷೆ ಕೆಲಸ ಒಳಗೊಂಡಿದೆ . ಇದು ಕೆಡೆಟ್ಗಳಿಗೆ ಕೈಬಿಡಲಾಯಿತು. ಇದರಲ್ಲಿ ಅಪರಿಚಿತ ಸ್ಥಳದಲ್ಲಿ ಭೂದೃಶ್ಯಗಳು ಸಹಾಯದಿಂದ , ' ಗ್ರಿಡ್ ಸ್ಥಾನಗಳು ' ' ಉತ್ತರ ಹುಡುಕುವ ಮತ್ತು ಆದರ ಸ್ಥಾನ ದಿನ ಅಥವಾ ರಾತ್ರಿ ನಡೆಸಲಾಗುತ್ತದೆ . ಮುಖಪುಟ ನರ್ಸಿಂಗ್ - ಇದು ಯುದ್ಧದಲ್ಲಿ ಸೈನಿಕನಾಗಿ ನೆರವು ಮತ್ತು ಗುಣಪಡಿಸಲು ಹೀಗೆ , ವೈದ್ಯಕೀಯ ಚಟುವಟಿಕೆಗಳನ್ನು ಒಳಗೊಂಡಿದೆ. ನಿರ್ದೇಶನಾಲಯಗಳು ತಮ್ಮ ತಮ್ಮ ವಸತಿ, ಡ್ರೆಸಿಂಗ್ ಮತ್ತು ಪರಿಶೀಲಿಸುವ ತಂಡಕ್ಕೆ ಅದಕ್ಕೆ ಕೆಲವು ಪಠ್ಯೇತರ ಚಟುವಟಿಕೆಗಳು ತಪಾಸಣೆ ಮೂಲಕ ಅಂಕಗಳನ್ನು ,ಅಂಕಿ ಇರಲಿ ವಿಜೇತ ನಿರ್ದೇಶನಾಲಯ ಟೀ.ಎಸ್.ಸಿ ಸಮಾರೋಪ ದಿನ ಡೈರೆಕ್ಟರ್ ಜನರಲ್ , ಎನ್.ಸಿ.ಸಿ ಅಲಂಕರಣಗಳು ಒಂದು ಕಪ್ ಪಡೆಯಲಾಗುತ್ತದೆ . ಎರಡು ಏಕಕಾಲೀನ ಟೀ.ಎಸ್.ಸಿ ಪ್ರತಿ ವರ್ಷ ಅರ್.ಡೀ ಪೆರೇಡ್ ಮೈದಾನದಲ್ಲಿ , ದೆಹಲಿ ಕ್ಯಾಂಟ್ನಲ್ಲಿ ನಡೆಸಲಾಗುತ್ತದೆ . ಅದೆಂದರೆ ಎಸ್ ಡಿ / ಜೆಡಿ ಹುಡುಗರು ಮತ್ತು ಎಸ್.ಡಬ್ಲು / ಜೆ.ಡಬ್ಲು ಹುಡುಗಿಯರು . ೬೪೦ ಬಾಯ್ ಮತ್ತು ೬೪೦ ಗರ್ಲ್ಸ್ ಕೆಡೆಟ್ಗಳು ಈ ಶಿಬಿರಗಳಲ್ಲಿ ಭಾಗವಹಿಸಲು ರಾಕ್ ಕ್ಲೈಂಬಿಂಗ್ ಶಿಬಿರಗಳು (ಅರ್.ಸಿ.ಸಿ),ಎಂಟು ರಾಕ್ ಕ್ಲೈಂಬಿಂಗ್ ಶಿಬಿರಗಳು ಪ್ರಾಥಮಿಕ ರಾಕ್ ಕ್ಲೈಂಬಿಂಗ್ ಮೂಲಭೂತ ಕೆಡೆಟ್ಗಳಿಗೆ ಒಡ್ಡಲು ಕೆಡೆಟ್ಗಳ ನಡುವೆ ಸಾಹಸ ಚೈತನ್ಯವನ್ನು ಮುಕ್ತರು ಪ್ರತಿ ವರ್ಷ ನಡೆಸುತರೆ . ಈ ಶಿಬಿರಗಳ ಪೈಕಿ ನಾಲ್ಕು ಕೇರಳದ ಟ್ರಿವೆಂಡ್ರಮ್ ಬಳಿ ನಾಯರ್ದಮ್ ನಲ್ಲಿ ಮಧ್ಯಪ್ರದೇಶ ಮತ್ತು ಇತರ ನಾಲ್ಕು ಶಿಬಿರಗಳಲ್ಲಿ ಗ್ವಾಲಿಯರ್ ನಡೆಸಲಾಗುತ್ತದೆ. ಉಲ್ಲೇಖಗಳು ಎನ್.ಸಿ.ಸಿ ಗಾತ್ರ " ಅಪ್ 1.ಲೆಫ್ಟಿನೆಂಟ್ ಜನರಲ್ ಎ ಚಕ್ರವರ್ತಿ ಡಿ.ಜಿ. ಎನ್ಸಿಸಿ ಮೇಲೆ ಟೇಕ್ಸ್ " ( ಪ್ರೆಸ್ ಬಿಡುಗಡೆ ) 2.ಭಾರತದ ವರ್ತಮಾನ ಮಾಹಿತಿ ಕೇಂದ್ರ ಸರ್ಕಾರ . ೨೦೧೩ ಡಿಸೆಂಬರ್ ೦೨ . ಡಿಸೆಂಬರ್ ೨೦೧೩,೨ ರಂದು ಮರುಸಂಪಾದಿಸಲಾಯಿತು.^ " ಹ್ಯಾಂಡ್ಬುಕ್ ಎನ್.ಸಿ.ಸಿ " 3.ತಮಿಳುನಾಡು ನಿರ್ದೇಶನಾಲಯ ."ಭಾರತದ ಅರೆಸೇನಾಪಡೆಗಳು " 4.ಶ್ರೀ.ಎಮ್.ಸಿ. ಶರ್ಮಾ . ನಿರ್ದೇಶನಾಲಯಗಳು " 5.ಭಾರತ ಸರ್ಕಾರ . ಆರ್ಟಿಐ ಅಪ್ಲಿಕೇಶನ್ " 6.ಎನ್.ಸಿ.ಸಿ , ಭಾರತ .ಆರ್ಟಿಐ " 7.ಎನ್.ಸಿ.ಸಿ ಗಣರಾಜ್ಯ ದಿನ ಕ್ಯಾಂಪ್ " 8.ಎನ್.ಸಿ.ಸಿ .ಬಾಹ್ಯ ಕೊಂಡಿಗಳು ವಿಕಿಮೀಡಿಯ ಕಣಜದಲ್ಲಿ ನ್ಯಾಷನಲ್ ಕೆಡೆಟ್ ಕಾರ್ಪ್ಸ್ ( ಭಾರತ ) ಸಂಬಂಧಿಸಿದ ಮಾಧ್ಯಮಗಳು ಹೊಂದಿದೆ . ಅಧಿಕೃತ ವೆಬ್ಸೈಟ್ ಎನ್.ಸಿ.ಸಿ ಒಟಾ ಸೇನಾಪಡೆಗಳ ನ್ಯಾಯಸ್ಥಾನಗಳ ಪ್ರಧಾನ

ಮಹಾರಾಷ್ಟ್ರ ನಿರ್ದೇಶನಾಲಯ,


ದೆಹಲಿ ನಿರ್ದೇಶನಾಲಯ,


ಪಂಜಾಬ್ ನಿರ್ದೇಶನಾಲಯ,


ಆಂಧ್ರ ಪ್ರದೇಶ ನಿರ್ದೇಶನಾಲಯ,


ಕೇರಳ ನಿರ್ದೇಶನಾಲಯ,


ಜಮ್ಮು ಮತ್ತು ಕಾಶ್ಮೀರ ನಿರ್ದೇಶನಾಲಯ,


ಗುಜರಾತ್ ನಿರ್ದೇಶನಾಲಯ.


ಒಡಿಶಾ ನಿರ್ದೇಶನಾಲಯ.