ಶನಿವಾರ, ಫೆಬ್ರವರಿ 3, 2018

ಜನವರಿ 30 ರ ಕುರಿತು ಕನ್ನಡ ಕವಿಗಳ ಸವಿಮಾತು

KannadaLiteratureProse & Poetry

ಕನ್ನಡದ ಕವಿಗಳು ಮತ್ತು ಜನವರಿ ೩೦
By
Arun Meshtru -
January 30, 2018

ಜನವರಿ ೩೦.
ಮಹಾತ್ಮಾ ಗಾಂಧಿಯವರು ಹತ್ಯೆಗೀಡಾದ ದಿನ.
ಗಾಂಧೀಜಿಯವರನ್ನು ಸ್ಮರಿಸುತ್ತ, ಆ ಕಾಲದ ಕನ್ನಡದ ಪ್ರಮುಖ ಕವಿಗಳು ಮಹಾತ್ಮಾ ಗಾಂಧಿಯವರ ಬಗ್ಗೆ ಬರೆದ ಸಾಲುಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಶ್ರೀ ಪು.ತಿ.ನರಸಿಂಹಾಚಾರ್ಯರು ತಮ್ಮ “ರಸ ಸರಸ್ವತಿ” ಕವನ ಸಂಕಲನದಲ್ಲಿ ಬರೆದಿರುವ “ಗಾಂಧೀಸ್ತವ” ಕವನದ ಆರಂಭದಲ್ಲೇ ಗಾಂಧೀಜಿಯವರನ್ನು ಹೀಗೆ ನೆನೆಯುತ್ತಾರೆ:

ನೆನೆವೆನೀ ದಿನ ಪುಣ್ಯಜಾತನ ನಮ್ಮ ನಾಡವಿಧಾತನ
ಜನಪದ ಸ್ವಾತಂತ್ರ್ಯದಾತನ ಸಕಲಹೃದಯೋಪೇತನ
ನೆನೆಯುತಚ್ಚರಿಗೊಳುವ ಮಹಿಮನ ದಿವ್ಯಮಂಗಳ ಚರಿತೆಗೆ
ಕೊನೆಯ ಕೇಡಿಗೆ ದುಗುಡಗೊಳುವೆನು ರಿಕ್ತವಾದೀ ಜನತೆಗೆ!

ಆ ಕಾಲದ ಎಲ್ಲ ಕವಿಗಳೂ “ನಾಡವಿಧಾತ”ನೆಂಬ ರೂಪಕವನ್ನು ಗಾಂಧೀಜಿಗೆ ಬಳಸಿದ್ದರೆನ್ನಿಸುತ್ತೆ. ಕವನವನ್ನು ಮುಂದುವರೆಸುತ್ತ ಪುತಿನ ಅವರು

ಕೇಡಿಗೆ ಕೇಡೆಣಿಸುವ ಬಗೆ ದೇವಗು ತಪ್ಪದೆನೆ
ಹಾಡುವೆವೆಂಟವತಾರದ ಗೋವಿಂದನ ಭವವ
ಈಡಾಗದೆ ಈತೆರ ಖಲಶಾಪಕೆ ಮಾತವಸಿ
ನೀಡಿದನಭಯವ ಲೋಕಕೆ – ಈತನಿಗಾವನೆಣೆ?

ಎಂದು ಹಾಡಿ ಹೊಗಳುತ್ತಾರೆ.

“ಶಿಲಾಲತೆ” ಎಂಬ ಕವನ ಸಂಕಲನದಲ್ಲಿ ಇದೇ ಶೀರ್ಷಿಕೆಯ, ಅಂದರೆ “ಗಾಂಧೀಸ್ತವನ” ಎಂಬ ಶೀರ್ಷಿಕೆಯ ಪದ್ಯವೊಂದನ್ನು ಶ್ರೀ ಕೆ.ಎಸ್.ನರಸಿಂಹಸ್ವಾಮಿಯವರು ಬರೆದಿರುತ್ತಾರೆ.

ಲೋಕಸೇವೆಗೆ ಮುಡಿಪು ದೇಹವೆಂದರೆ, ಲೋಕ
ನುಡಿದವನ ದೇಹವನೆ ಬಲಿಗೊಂಡಿತು.
ನೆಲದ ನೋವನು ಅರಿತು ಅಮೃತಪಾತ್ರೆಯ ತಂದ
ದಾನಿಯನೆ ಕೈಯಾರ ಕೊಂದರಿವರು.

ಎಂದು ಮರುಗುತ್ತ, “ದೀಪವಿತ್ತು, ದೀಪವಿಲ್ಲ; ದೀಪವಿತ್ತು, ದೀಪವಿಲ್ಲ.” ಎಂದು ನೋವಿನ ಸಾಲುಗಳನ್ನು ಬರೆಯುತ್ತಾರೆ. ಅಲ್ಲದೆ,

ನಿನ್ನ ಹೆಸರಿಡಬಹುದು ಬೀದಿ ಬೀದಿಗೆ, ಸುಲಭ;
ನಿನ್ನಂತೆ ಬದುಕುವುದು ದುರ್ಲಭ.
ನಿನ್ನ ಹೆಸರೆತ್ತಿದರೆ, ನಿನ್ನ ಮಾತಾಡಿದರೆ
ನಿನ್ನ ವೈರಿಗೆ ಕೂಡ ಲಾಭ.

ಎಂದು ಗಾಂಧೀಜಿಯ ಹೆಸರನ್ನು “ಬಳಸಿಕೊಳ್ಳುವ” ಜನರಿಗೆನ್ನುವಂತೆ ಹೇಳುತ್ತಾರೆ.

ಕನ್ನಡದ ಮೊದಲ ರಾಷ್ಟ್ರಕವಿ ಶ್ರೀ ಎಂ. ಗೋವಿಂದ ಪೈಗಳಂತೂ ಗಾಂಧೀಜಿಯವರ ಬಗ್ಗೆ ಹತ್ತಾರು ಕವನಗಳನ್ನು ಬರೆದಿದ್ದಾರೆ. “ವಿಟಂಕ” ಕವನ ಸಂಕಲನದ “ವರುಷ ಒಂದಾಯ್ತು” ಎಂಬ ಒಂದು ಪದ್ಯ ಈ ರೀತಿ ಆರಂಭವಾಗುತ್ತದೆ.

ವರುಷ ಒಂದಾಯ್ತು ನೀನಗಲಿ ನಮ್ಮಿಂದ!
ಭಾರತವ ನಿನ್ನಾತ್ಮ ಬಿಟ್ಟು ಹೋಗುವುದೆ?
ಇಲ್ಲಿ ಕೊನೆವರಮೆನಿತೊ ಕಷ್ಟವಂ ಮಿಂದ
ನಾಗೆ ಹೂವ, ಮಹಾತ್ಮ, ಕಂಪು ನೀಗುವುದೆ?

ಈ ಕವನವನ್ನು ಹೀಗೆ ಭಾವುಕರಾಗಿ ಮುಗಿಸುತ್ತಾರೆ.

ನಿನ್ನ ಮೂರ್ತಿಯನಿಂದು ತಳೆವೆನೆದೆ ತೀವೆ
ಪ್ರಥಮಾಬ್ದಿಕದಲಿ ಬಾಷ್ಪಾಂಜಲಿಯನೀವೆ!

ಭಾರತೀಯ ಕಾವ್ಯಮೀಮಾಂಸೆಯನ್ನು ಕನ್ನಡಿಗರಿಗೆ ದಯಪಾಲಿಸಿದ ಕವಿ ಶ್ರೀ ತಿ.ನಂ.ಶ್ರೀಕಂಠಯ್ಯನವರ “ಪೂರ್ಣಾಹುತಿ” ಕವನದಲ್ಲಿ ಗೋಡ್ಸೆಯ ಕೊಲೆಗಡುಕತನವನ್ನು ಟೀಕಿಸಿ ಕಂಬನಿ ಮಿಡಿಯುತ್ತಾರೆ.

ದ್ವೇಷಮಾರಿಯ ಮಹಾತೃಷೆಗೆ ತರ್ಪಣವಾಗಿ
ಸುರಿಸಿದನೆ ಈ ಪ್ರೇಮನಿಧಿಯ ರಕ್ತವನು,
ಸಲಿಸಿದನೆ ಕಾಣಿಕೆಗೆ ಇವನ ಪ್ರಾಣವನು,
ಉರಿಸಿದನೆ ಜಗದಳಲ ಕಕ್ಕಡವನು!

ದ್ವೇಷವೆಂಬ ಮಾರಿಯು ಕೈಯನ್ನು ಬಿರುಸು ಮಾಡುವುದಲ್ಲದೆ ಮನಸ್ಸನ್ನು ಹೊಲಸು ಮಾಡುವುದೆಂದು ಕೊಲೆಗಾರನನ್ನು ಕಠೋರವಾಗಿ ಟೀಕಿಸುತ್ತಾರೆ.

ಕೈಯೆಂತು ಬಿರುಸಾಯ್ತೊ, ಮನವೆಂತು ಹೊಲಸಾಯ್ತೊ,
ಕೊಲೆಗಾರನರಿವೆಂತು ವಿಲಯವಾಯ್ತೊ?
ಭಾರತದ ಕಣ್‍ಬೆಳಕು ನಂದಿಹೋಯ್ತೋ!

ಶ್ರೀ ಕಯ್ಯಾರ ಕಿಞ್ಞಣ್ಣ ರೈ ಅವರ “ಹೇ ರಾಮ” ಎಂಬ ಸುದೀರ್ಘ ಕವನದಲ್ಲಿ “ನಾವೆಂಥ ಪಾಪಿಜನ!” ಎಂಬ ಮಾತು ನೋವಿನಿಂದ ಬರುತ್ತದೆ.

ಹೊಡೆದೆವೋ ಹೊಡೆತದಲಿ ನೋಯದನ.
ಕೊಂದೆವೋ ಕೊಲಬಾರದೆಂದವನ,
ಸುಟ್ಟೆವೋ ಬೆಂಕಿಯಲಿ ಸುಡದವನ,
ಮರೆತೆವೋ ನಾವ್ ಮರೆಯಬಾರದನ
ಕಳೆದೆವಯ್ಯೋ ಕಳಕೊಳ್ಳಬಾರದನ
ಹೇರಾಮS ನಾವೆಂಥ ಪಾಪಿಜನ!

ಕೊನೆಯಲ್ಲಿ ಶ್ರೀರಾಮನಂತೆಯೇ ಗಾಂಧೀಜಿಯೂ ಸಹ ಎನ್ನುವಂತಹ ಮಾತು ಬರುತ್ತದೆ.

ಹೇರಾಮS ಕೈ ಮುಗಿಯುತ ನಿಂತೆ,
ಹೇರಾಮS ಮೈ ನಡುಗುವುದಂತೆ;
ಹೇರಾಮS ಕಂಬನಿಯೊಸರಿತ್ತೆ?
ಹೇರಾಮS ನನಗಿದುವೇ ಚಿಂತೆ;
ಹೇರಾಮS ನಮಗಾಗಿಯೆ ಸತ್ತೆ;
ಹೇರಾಮS ನಿನಗಾಗಿಯೆ ಅತ್ತೆ!

ಕವಿ ಶ್ರೀ ಕೆ.ಎಸ್.ನಿಸಾರ್ ಅಹಮದ್‍ರವರು ತಮ್ಮ “ಸಂಜೆ ಐದರ ಮಳೆ“ಯ “ಬಾಪೂ” ಎಂಬ ಕವನದ ಕೊನೆಯಲ್ಲಿ ಬಾಪೂರನ್ನು ಒಂದು ರೀತಿಯಲ್ಲಿ ಹೀಗೆ ಪ್ರಾರ್ಥಿಸುತ್ತಾರೆ:

ನಿನಗಿಂತ ಹಿರಿಯರನು ಕಾಣೆ ಮಹಾತ್ಮ
ಮಿತಿಮೀರಿ ಏರಿರುವೆ, ಬಾಳಿಗೆ ದಕ್ಕದೆ ಮೀರಿರುವೆ –
ವಾಸ್ತವತೆ ನಾನು ಆದರ್ಶ ನೀನು.
ಲೋಕವನೆ ದಹಿಸಿರುವ ಸೂರ್ಯನಿಗೆ ತಡೆಯಾಗಿ
ನಿನ್ನ ಕೊಡೆ ನೆತ್ತಿಯನು ಕಾಯುತಿರಲಿ;
ಕಾದ ಹಾದಿಯ ನಡೆಯೆ ಸ್ವಾನುಭವ ಕೆರವಾಗಿ
ಸ್ವಂತ ಜೀವನದೊಡನೆ ತೇಯುತಿರಲಿ.

“ಕಟ್ಟುವೆವು ನಾವು” ಕವನ ಸಂಕಲನದಲ್ಲಿ ಕವಿ ಶ್ರೀ ಗೋಪಾಲಕೃಷ್ಣ ಅಡಿಗರು “ಭಾರತದ ತಂದೆ ಗಾಂಧಿ” ಎಂಬ ಸುದೀರ್ಘ ಕವನವೊಂದನ್ನು ರಚಿಸಿದ್ದಾರೆ. ಕವನದ ಮೊದಲೆರಡು ಭಾಗಗಳಲ್ಲಿ ಗಾಂಧೀಜಿಯವರ ಜೀವನದ ಚಿತ್ರಣವು ಮೂಡಿದ್ದರೆ, ಮೂರನೆಯ ಭಾಗದಲ್ಲಿ ಗಾಂಧೀಜಿಯ ಸಾವಿನಿಂದಾದ ನೋವು ತುಂಬಿದೆ.

ಬರಸಿಡಿಲಂತೆರಗಿತು: ಹಾ! ಕೊಲೆಗಡುಕನ ಕೈ
ಜರಾಜೀರ್ಣ, ತ್ಯಾಗಶೀರ್ಣ ಎಲುಬುಗೂಡು ಮೈ
ಬಿತ್ತು ಕೆಳಗೆ, ಬಿದ್ದ ಹಾಗೆ
ನ್ಯಾಯಸತ್ಯದಯಾಧರ್ಮದೊಂದೆ ಆಧಾರವು;
ನಮ್ಮ ತಲೆಯ ಮೇಲೆ ಬಿತ್ತು
ನಮ್ಮ ಪಾಪಭಾರವು!

ಪದ್ಯದ ಕೊನೆಯಲ್ಲಿ ವಾಚಕರಿಗೆ ಗಾಂಧೀಜಿಯ ದಾರಿಯಲ್ಲಿ ಸಾಗೋಣವೆಂದು ಹೀಗೆ ಕರೆ ಕೊಡುತ್ತಾರೆ ಅಡಿಗರು:

ಅವನ ದಾರಿಯೊಂದೆ ದಾರಿ; ಉಳಿದುದೆಲ್ಲ ಹಳುವವು;
ಅವನ ಗುರಿಯೆ ಗುರಿಯು, ಉಳಿದುದೆಲ್ಲ ವಿಫಲ ಚಪಲವು!

ಶ್ರೀ ಎ.ಎನ್.ಮೂರ್ತಿರಾಯರು ತಮ್ಮ ಆತ್ಮಕಥನವಾದ “ಸಂಜೆಗಣ್ಣಿನ ಹಿನ್ನೋಟ“ದಲ್ಲಿ “1948ರ ವಿದ್ಯಮಾನಗಳು” ಎಂಬ ಒಂದು ಅಧ್ಯಾಯವನ್ನೇ ಬರೆದಿರುತ್ತಾರೆ. ಅಹಿಂಸಾತತ್ತ್ವವು ಪ್ರಸ್ತುತವೋ ಅಪ್ರಸ್ತುತವೋ ಎಂಬ ವೈಚಾರಿಕತೆಯನ್ನೂ ಚರ್ಚಿಸುತ್ತಾರೆ. ಆದರೆ ಗಾಂಧೀಹತ್ಯೆಯಾದ ನಂತರದ ದಿನಗಳಲ್ಲಿ ತಮ್ಮ ತರಗತಿಯಲ್ಲಾದ ಅನುಭವವನ್ನು ಹೀಗೆ ನೆನಪಿಸಿಕೊಳ್ಳುತ್ತಾರೆ:

“ಆ ದಿನ (ಗಾಂಧೀಹತ್ಯೆಯಾದ ದಿನ) ಕಳೆದ ಮೇಲೆ ನಾನು ತೆಗೆದುಕೊಂಡ ಮೊದಲ ಒಂದೆರಡು ತರಗತಿಗಳಲ್ಲಿ ಹುಡುಗರು “ಇವತ್ತು ಪಾಠ ಬೇಡ ಸಾರ್, ಗಾಂಧಿಯವರ ವಿಷಯ ಹೇಳಿ” ಎಂದರು. ನನಗೂ ಪಾಠ ಬೇಕಿರಲಿಲ್ಲ. ಮನಸ್ಸಿನಲ್ಲಿ, ಹೃದಯದಲ್ಲಿ ಕುದಿಯುತ್ತಿದ್ದುದನ್ನು ಹೊರಹಾಕುವುದು ಆವಶ್ಯಕವಾಗಿತ್ತು. ಭಾವನೆಗಳು ಉಕ್ಕಿಬಂದವು. ಅವತ್ತು ನಾನು ಮನೆಗೆ ಹೊರಟಾಗ ಆರೇಳು ಜನ ಹುಡುಗರು ಗಾಂಧಿಯವರ ಬದುಕನ್ನೂ ತತ್ತ್ವಗಳನ್ನೂ ಕುರಿತು ಮಾತಾಡುತ್ತಾ ಮನೆವರೆಗೂ ಬಂದರು..” (ಮುಂದಿನ ಸಾಲುಗಳಲ್ಲಿ ಅಹಿಂಸೆಯನ್ನು ಅನುಸರಿಸುವುದು ಹೇಗೆ, ಅದು ಸಾಧ್ಯವೋ ಇಲ್ಲವೋ, ಮತ್ತು ಈ ವಿಷಯದ ಬಗ್ಗೆ ಆ ಕ್ಷಣದಲ್ಲಿ ಲೇಖಕರಿಗೆ ಸಮರ್ಪಕವಾದ ಉತ್ತರವನ್ನು ಕೊಡಲು ಆಗಲಿಲ್ಲವೆಂಬ ವಿಷಯವು ಬರುತ್ತದೆ. ಕೊನೆಯಲ್ಲಿ ಗಾಂಧೀಜಿಯ ಮೂಲತತ್ವವು ದ್ವೇಷವಿಲ್ಲವಿರುವುದು ಎಂಬ ವಿವರಣೆಯನ್ನು ನೀಡುತ್ತಾರೆ).

ರಾಷ್ಟ್ರಕವಿ ಶ್ರೀ ಕುವೆಂಪುರವರು “ದಿವಂಗತ ರಾಷ್ಟ್ರಪಿತ” ಎಂಬ ಲೇಖನವನ್ನು (ಗಾಂಧೀಜಿಯವರ ನಿಧನದ ಮರುದಿನ ಸಂಜೆ ಮೈಸೂರು ಆಕಾಶವಾಣಿಯಲ್ಲಿ ಮಾಡಿದ ಪ್ರಸಾರ ಭಾಷಣ) ಹೀಗೆ ಆರಂಭಿಸುತ್ತಾರೆ:

ರಾಷ್ಟ್ರಪಿತ ದಿವಂಗತ
ಉನ್ಮತ್ತ ಹಸ್ತ ಹತ!
ನರಹೃದಯದ ವಿಷವಾರ್ಧಿಗೆ
ಜೀವಾಮೃತ ಸಮರ್ಪಿತ!
ಕ್ಷಮಿಸು, ಓ ಜಗತ್ ಪಿತ:
ಅದೃಷ್ಟ ಹೀನ ಭಾರತ!

ಗಾಂಧೀಜಿಯವರ ಹತ್ಯೆಯ ಬಗ್ಗೆ ಹೀಗೊಂದು ಮಾತನ್ನು ಹೇಳುತ್ತಾರೆ ಕುವೆಂಪುರವರು: “ಈ ಪಾಪಕರ್ಮಕ್ಕೆ ತಕ್ಕ ತಪಸ್ಯೆಯಿಂದ ಪಶ್ಚಾತ್ತಾಪದಿಂದ ಪ್ರಾಯಶ್ಚಿತ್ತ ಮಾಡಿಕೊಳ್ಳದಿದ್ದರೆ ನಮಗೆ ಯೇಸು ಕ್ರಿಸ್ತನನ್ನು ಮೊಳೆ ಹೊಡೆದು ಕೊಂದ ಜನಾಂಗಕ್ಕಾಗಿರುವ ದುರ್ಗತಿಯೇ ಒದಗುತ್ತದೆಯೋ ಏನೋ ಎಂದು ಹೆದರಿಕೆಯಾಗುತ್ತಿದೆ!”

“ಗಾಂಧೀಜಿಗಾಗಿ ನಾವು ಅಳಬೇಕಾಗಿಲ್ಲ. ನಮ್ಮ ದುರದೃಷ್ಟಕ್ಕಾಗಿಯಾದರೂ ಅಳುತ್ತಾ ಕೂರುವುದು ಅವಿವೇಕವೆ! ಈಶ್ವರನ ಲೀಲೆಯಲ್ಲಿ ಇಂತಹ ಘಟನೆ ಮೊತ್ತಮೊದಲನೆಯದಲ್ಲವೆಂದೂ ತೋರುತ್ತದೆ. ಶ್ರೀಕೃಷ್ಣನು ಎಂತಹ ದುರಂತ ಸನ್ನಿವೇಶದಲ್ಲಿ ಮೃತನಾದನೆಂಬುದನ್ನು ಊಹಿಸಿಕೊಳ್ಳಿ. ಶ್ರೀರಾಮಚಂದ್ರನಿಗೆ ಕೊನೆ ಬಂದ ಪರಿಯನ್ನು ನೆನೆಯಿರಿ. ಶ್ರೀ ಕ್ರಿಸ್ತನು ಎಂತಹ ದುರ್ಮರಣಕ್ಕೀಡಾದನು ಎಂಬುದನ್ನು ಪರ್ಯಾಲೋಚಿಸಿ. ನಮಗೆ ಅನರ್ಥವಾಗಿ ತೋರುವುದು ಈಶ್ವರನ ಸಮದೃಷ್ಟಿಗೆ ಅರ್ಥಪೂರ್ಣವೂ ಸಾರ್ಥಕವೂ ಆಗಿರಬಾರದೇನು? ಮಹಾತ್ಮರೇ ಹೇಳುತ್ತಿದ್ದರು: ’ನನ್ನನ್ನು ಕೊಲ್ಲುವ ಸಾಮರ್ಥ್ಯ ಇರುವುದು ಈಶ್ವರನೊಬ್ಬನಿಗೇ’ ಎಂದು. ಕೊಂದವನು ಯಃಕಶ್ಚಿತ ಮನುಷ್ಯನಾದರೂ ಅಲ್ಲಿಯೂ ರುದ್ರನ ಹಸ್ತವನ್ನು ಕಾಣಬಹುದು.” ಎಂದು ಇಡೀ ಘಟನೆಯನ್ನು ತತ್ತ್ವದೃಷ್ಟಿಯಿಂದ ನೋಡುತ್ತಾರೆ.

ನಂತರದ “ಬಾಪೂಜಿಗೆ ಬಾಷ್ಪಾಂಜಲಿ” ಎಂಬ ಲೇಖನದಲ್ಲಿ (ಗಾಂಧೀಜಿಯವರ ಅಸ್ಥಿವಿಸರ್ಜನೆಯ ನಂತರ ಮೈಸೂರಿನಲ್ಲಿ ಮಾಡಿದ ಭಾಷಣ) ಗಾಂಧೀಜಿಯನ್ನು ಸ್ಮರಿಸುತ್ತ, “ಹೇ ಲೋಕಗುರು, ನಮ್ಮ ಮುನ್ನಡೆಗೆ ಮಾರ್ಗದರ್ಶಕ ಪರಂಜ್ಯೋತಿಯಾಗು. ಕವಿದಿರುವ ಈ ಕತ್ತಲೆಯಲ್ಲಿ ನಿನ್ನ ಕಿರಣ ಹಸ್ತದಿಂದ ನಮ್ಮನ್ನು ಕೈ ಹಿಡಿದು ನಡಸು. ನಮ್ಮ ಹೃದಯದಲ್ಲಿ ಹೆಡೆಯೆತ್ತಿರುವ ಕ್ರೋಧ ಹಿಂಸೆ ಪ್ರತೀಕಾರಾದಿ ಅಹಂಕಾರ ಸರ್ಪಗಳಿಗೆ ಗರುಡಮಣಿಯಾಗಿ ನಮ್ಮನ್ನು ರಕ್ಷಿಸು. ಅಸತ್ತಿನಿಂದ ಸತ್ತಿಗೆ, ತಮಸ್ಸಿನಿಂದ ಜ್ಯೋತಿಗೆ, ಮೃತ್ಯುವಿನಿಂದ ಅಮೃತಕ್ಕೆ ನಮ್ಮನ್ನು ಕೊಂಡೊಯ್!” ಎಂದು ಪ್ರಾರ್ಥಿಸುತ್ತಾರೆ.

ಶ್ರೀ ಶಿವರಾಮ ಕಾರಂತರು ಗಾಂಧೀಜಿಯವರ ಬಗ್ಗೆ ಬರೆದ ಪ್ರಬಂಧದ ಶೀರ್ಷಿಕೆ: “ಬದುಕಿದಾಗ ಮುಳ್ಳಿನ ಹಾಸಿಗೆ, ಬದುಕಿನ ಬಳಿಕ ಹೂವಿನ ಹಾಸಿಗೆ” ಎಂದು. ಪ್ರಬಂಧದುದ್ದಕ್ಕೂ ಗಾಂಧೀಜಿಯವರ ಹತ್ಯೆಯನ್ನು ಖಂಡಿಸುತ್ತ, ಅಂತಹ ಕೃತ್ಯವನ್ನೆಸಗುವುದು “ಪಶುಸ್ವಭಾವ”ವೆನ್ನುತ್ತಾರೆ. ಪ್ರಬಂಧದ ಒಂದು ಹಂತದಲ್ಲಿ ಹೀಗೆ ಬರೆಯುತ್ತಾರೆ:

“ತುಸು, ತುಸುವಾಗಿ ಅನೇಕ ಬಗೆಯಿಂದ ನಾವು ಅವರನ್ನು ಚುಚ್ಚಿದ್ದೇವೆ, ಗಾಯಗೊಳಿಸಿದ್ದೇವೆ, ಸಾಯಿಸಲಿಲ್ಲ ಮಾತ್ರ!” ಎಂದು.

ಪ್ರಬಂಧವನ್ನು ಮುಂದುವರೆಸುತ್ತ ಕಾರಂತರು ಹೀಗೆನ್ನುತ್ತಾರೆ:

“ಗಾಂಧೀಜಿಯವರನ್ನು ಅವರು ಬೇಡವೆಂದರೂ, ನಾವು ಮಹಾತ್ಮರನ್ನಾಗಿ ಮಾಡಿದೆವು. ನಮಗೆ ಅವರನ್ನು ಅನುಕರಿಸುವ ಇಷ್ಟವಿದ್ದಿಲ್ಲವಾದರೂ, ಅನುಕರಿಸದೆ ಹೋದರೂ, ಅವರನ್ನು ದೇವರನ್ನಾಗಿ ಮಾಡಿದೆವು. ಸಾವಿನ ಬಳಿಕವಂತೂ, ಯಾವ ದೇವರಿಗೂ ದೊರೆಯದ ಸನ್ಮಾನ ಅವರಿಗೆ ಸಲ್ಲುವುದು ನಿಶ್ಚಯ.”

“ಎಂದೋ ಕೊಲ್ಲಬಹುದಾಗಿದ್ದ ಅವರನ್ನು, ಮೊನ್ನೆ ದಿನ, ನಮಸ್ಕರಿಸಿದ ಕೈಯೇ ಕೊಂದಿತು. ಈ ಮಾತು ಅಕ್ಷರಶಃ ನಿಜವಾಗಿರುವಂತೆ ವಿಶಾಲಾರ್ಥದಲ್ಲೂ ನಿಜವಾದುದೇ!” ಎಂಬ ಕಾರಂತರ ಈ ಮಾತು ಮನಮುಟ್ಟುವ ಹಾಗಿದೆ.

ಪ್ರಬಂಧದ ಕೊನೆಯಲ್ಲಿ,

“ಜಗತ್ತಿನ ಕೆಲವೇ ಮಂದಿ ಗಾಂಧಿಯವರನ್ನು ತಿಳಿಯಬಲ್ಲರು; ಅದಕ್ಕಿಂತ ಕಡಿಮೆ ಮಂದಿ ಅವರನ್ನು ಅನುಕರಿಸಬಲ್ಲರು. ಬಹುಮಂದಿ ಮಾಡಬಹುದಾದ ಒಂದೇ ಒಂದು ಕೆಲಸ – ಅವರ ’ಜಯಘೋಷ!’ ನಾವು ಅವರಿಗೆ ಸಲ್ಲಿಸಿದ ಹೂವಿನ ಹಾಸಿಗೆಯೆಲ್ಲ (ಮರಣದ ಬಳಿಕ) ಅದಕ್ಕೇನೆ. ಜಯಘೋಷ, ಸಂತಾಪ ಸೂಚನೆಗಳಿಂದಲೇ ನಾವು ಅವರಿಗೆ ಕೃತಜ್ಞತೆ ಸಲ್ಲಿಸಿ – ಮರೆತು ಬಿಡುವವರು!” ಎಂದು ಕಾರಂತರು ಹೇಳುತ್ತಾರೆ.

ಈ ಮಾತುಗಳು ಈ ಹೊತ್ತಿಗೂ ಸತ್ಯವೆಂದು ತೋರುತ್ತದೆ.

– ಅ
30.01.2018

ಕೃಪೆ:- ಬ್ಯಾಂಗಲೂರಿಜಮ್(Bangaloorism)
   

ಗುರುವಾರ, ಫೆಬ್ರವರಿ 1, 2018

ಬಜೆಟ್ ಇತಿಹಾಸ

ಹಣಕಾಸು ಸಚಿವ ಅರುಣ್ ಜೇಟ್ಲಿ ಫೆಬ್ರವರಿ 1 ರಂದು ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ. ದೇಶದಲ್ಲಿ ಜುಲೈ 1, 2017 ರಿಂದ GST(ಸರಕು ಮತ್ತು ಸೇವಾ ತೆರಿಗೆ) ಪರಿಚಯಿಸಿದ ನಂತರ ಇದು ಮೊದಲ ಬಜೆಟ್ ಆಗಿದೆ. ಅಂದ ಹಾಗೇ ಭಾರತದ ಬಜೆಟ್ ಗೆ ತನ್ನದೇ ಆದ ಇತಿಹಾಸ ಹಾಗೂ ಒಂದಿಷ್ಟು ಆಸಕ್ತಿಕರ ವಿಷಯಗಳನ್ನು ಹೊಂದಿದ್ದು ಅವುಗಳ ಬಗ್ಗೆ ಮಾಹಿತಿಗಳು ಇಲ್ಲಿವೆ.

* ಬಜೆಟ್ ಪದವನ್ನು ಲ್ಯಾಟಿನ್ "ಬೋಗೆಟ್" ನಿಂದ ಮಾಡಲಾಗಿದೆ, ಅಂದರೆ ಚರ್ಮದ ಚೀಲ

* ಮಧ್ಯಕಾಲೀನ ಕಾಲದಲ್ಲಿ ಪಾಶ್ಚಾತ್ಯ ದೇಶಗಳಲ್ಲಿ ವ್ಯಾಪಾರಿಗಳು ಹಣ ಉಳಿಸಿಕೊಳ್ಳಲು ಚರ್ಮದ ಚೀಲಗಳನ್ನು ಬಳಸಿದರು.

* 1860 ರಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತದ ಬಜೆಟ್ ಅನ್ನು ಮೊದಲು ಪರಿಚಯಿಸಲಾಯಿತು, ಅಲ್ಲಿಗೆ ಭಾರತದ ಬಜೆಟ್ ಗೆ ಸರಿ ಸುಮಾರು 150 ವರ್ಷಕ್ಕಿಂತ ಹೆಚ್ಚು ಇತಿಹಾಸವಿದೆ.

* ಮುಂಗಡ ಪತ್ರವನ್ನು ಬ್ರೀಫ್ ಕೇಸ್​ನಲ್ಲಿ ಸಂಸತ್ತಿಗೆ ಕೊಂಡೊಯ್ಯುವ ಪದ್ಧತಿ ಆರಂಭವಾಗಿದ್ದು 1860ರಲ್ಲಿ, ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ. ಆ ಬ್ರೀಫ್ ಕೇಸ್​ಗೆ 'ಬಜೆಟ್ ಬಾಕ್ಸ್' ಎಂದು ಹೇಳುತ್ತಾರೆ.

* ಬಜೆಟ್ ದಾಖಲೆ ಪತ್ರಗಳನ್ನು ಮುದ್ರಣ ಮಾಡುವ ಪ್ರಕ್ರಿಯೆ ಬಜೆಟ್ ಆರಂಭವಾಗುವ 10ರಿಂದ 15 ದಿವಸಕ್ಕೂ ಮುನ್ನ ದಿಲ್ಲಿಯ ನಾರ್ಥ್ ಬ್ಲಾಕ್ನಲ್ಲಿ ಹಲ್ವಾ ಕಾರ್ಯಕ್ರಮ ನಡೆಯುತ್ತದೆ. ಬಜೆಟ್ ಪತ್ರದ ಗೋಪ್ಯತೆ ಕಾಯ್ದುಕೊಳ್ಳಲು ಹಣಕಾಸು ಸಚಿವಾಲಯದ ಪ್ರಮುಖ ಅಧಿಕಾರಿಗಳನ್ನು ಒಂದು ಕಡೆ ಇರಿಸಲಾಗುತ್ತದೆ. ಇಡೀ ಬಜೆಟ್ ಮಂಡನೆಯಾಗುವ ತನಕ ಅವರು ಅಲ್ಲಿಯೇ ಉಳಿಯುತ್ತಾರೆ. ಹಲ್ವಾ ತಯಾರಿಸಿ ಇಡೀ ಸಿಬ್ಬಂದಿ ವರ್ಗಕ್ಕೆ ವಿತರಿಸಲಾಗುವ ಸಂಪ್ರದಾಯ ದೀರ್ಘ ಕಾಲದಿಂದ ನಡೆದು ಬಂದಿದೆ.

* ಹಲ್ವಾ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವರು ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿರುತ್ತಾರೆ.

*1947ರ ನವೆಂಬರ್‍ ನಲ್ಲಿ ಆರ್‍.ಕೆ ಶಣ್ಮುಗಂ ಜೆಟ್ಟಿ ಭಾರತದ ಮೊಟ್ಟ ಮೊದಲ ಬಜೆಟ್ ಮಂಡಿಸಿದ
ಕೀರ್ತಿಗೆ ಪಾತ್ರರಾಗಿದ್ದಾರೆ.

*ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್.ಬಿ.ಐ) ಆಗಿದ್ದ ಸಿ.ಡಿ ದೇಶ್ ಮುಖ್ ಹಣಕಾಸು ಸಚಿವರಾದ ಮೊದಲಿಗರು ಅಷ್ಟೆ ಅಲ್ಲ ಅವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮೊದಲ ಗೌರ್ವನರ್ ಕೂಡ.

*ಪ್ರಧಾನಿಯಾಗಿ ಹಣಕಾಸು ಮಂಡಿಸಿದ ಮೊದಲ ಪ್ರಧಾನಿ ಎನ್ನುವ ಹೆಸರಿಗೆ ಮಾಜಿ ಪ್ರಧಾನಿ ಜವಹರ್‍ ಲಾಲ್ ನೆಹರು ಅವರದ್ದು 1958-1959 ರಲ್ಲಿ ಅವರು ಹಣಕಾಸು ಖಾತೆಯನ್ನು ಹೊಂದಿದ್ದರು.

*ಮೊರಾರ್ಜಿ ದೇಸಾಯಿ ಅತಿ ಹೆಚ್ಚು ಅಂದರೆ 10 ಬಾರಿ ಮುಂಗಡ ಪತ್ರವನ್ನು ಮಂಡಿಸಿರುವ ಹೆಗ್ಗಳಿಕಗೆ ಪಾತ್ರವಾಗಿದ್ದಾರೆ. ಅಷ್ಟು ಮಾತ್ರವಲ್ಲ ಹಣಕಾಸು ಸಚಿವರಾಗಿ ತಮ್ಮ ಎರಡು ಹುಟ್ಟು ಹಬ್ಬದ ದಿವಸ ಅಂದರೆ 1964 ಹಾಗೂ 1968ರಂದು ಮುಂಗಡ ಪತ್ರವನ್ನು ಮಂಡಿಸಿದ ಹಿರಿಮೆ ಅವರಿಗೆ ಇದೆ. ಅಂದ ಹಾಗೇ ಅವರ ಜನುಮ ದಿವಸ ಫೆ.29

*ರಾಜ್ಯ ಸಭೆ ಸದ್ಯಸರಾಗಿದ್ದುಕೊಂಡು ಬಜೆಟ್ ಮಂಡನೆ ಮಾಡಿದ ಕೀರ್ತಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಸಲ್ಲುತ್ತದೆ.

* ಮೊರಾರ್ಜಿ ದೇಸಾಯಿ ಸರ್ಕಾರದ ಪತನದ ಬಳಿಕ ಪ್ರಧಾನಿಯಾದ ಇಂದಿರಾ ಗಾಂಧಿ ವಿತ್ತ ಸಚಿವೆಯೂ ಆಗಿ ಬಜೆಟ್ ಮಂಡಿಸಿದ್ದರು. ಆನಂತರ ಮಹಿಳಾ ವಿತ್ತ ಸಚಿವರನ್ನು ಭಾರತ ಕಂಡಿಲ್ಲ.

* ಡಾ.ಮನಮೋಹನ್ ಸಿಂಗ್ ಮತ್ತು ಯಶವಂತ ಸಿನ್ಹಾ ಅವರು ಸತತ ಐದು ಬಾರಿ ಮುಂಗಡಪತ್ರ ಮಂಡಿಸಿದ ದಾಖಲೆ ಬರೆದಿದ್ದಾರೆ. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಕೂಡ ಈ ಬಾರಿ ಬಜೆಟ್ ಮಂಡಿಸಿ ಇದೇ ದಾಖಲೆಯನ್ನು ಸರಿಗಟ್ಟಲಿದ್ದಾರೆ.

* ಅಂದ ಹಾಗೇ 2000ನೇ ಇಸವಿ ತನಕವೂ ಫೆಬ್ರವರಿ ಕೊನೇ ದಿನ ಸಂಜೆ 5 ಗಂಟೆಗೆ ಬಜೆಟ್ ಆರಂಭವಾಗುತ್ತಿತ್ತು. ಬಜೆಟ್ ಮಂಡನೆ ಸಮಯವನ್ನು ಮೊದಲ ಬಾರಿಗೆ ಬದಲಾಗಿದ್ದು ನ್​ಡಿಎ ಸರ್ಕಾರ ಇದ್ದಾಗ. 2001ರಲ್ಲಿ ಎಅಂದು ವಿತ್ತ ಸಚಿವರಾಗಿದ್ದ ಯಶವಂತ ಸಿನ್ಹಾ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡಿಸಿದ್ದರು.

* ಕೇಂದ್ರ ಬಜೆಟ್ ಮಂಡನೆಗಿಂತ ಒಂದೆರಡು ದಿನ ಮೊದಲೇ ರೈಲ್ವೆ ಬಜೆಟ್ ಮಂಡನೆಯಾಗುವ ಪರಿಪಾಠ 2017ರ ತನಕವೂ 92 ವರ್ಷ ಕಾಲ ನಡೆದಿತ್ತು. ಕಳೆದ ವರ್ಷ ರೈಲ್ವೆ ಬಜೆಟನ್ನು ಕೇಂದ್ರ ಬಜೆಟ್ ಜತೆ ವಿಲೀನಗೊಳಿಸಿ ಒಂದೇ ಬಜೆಟ್ ಮಂಡಿಸಲಾಗಿತ್ತು. ಕೇಂದ್ರ ಸಚಿವ ಸುರೇಶ್ ಪ್ರಭು ರೈಲ್ವೆ ಸಚಿವರಾಗಿ ಕಾರ್ಯ ನಿವರ್ಹಣೆ ಮಾಡುತ್ತಿದ್ದ ವೇಳೆಯಲ್ಲಿ ರೈಲ್ವೆ ಬಜೆಟ್ ಕೊನೆಯದಾಗಿತ್ತು.

* ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಫೆ.1ರಂದು ಮಂಡಿಸಲಿರುವ ಬಜೆಟ್, ದೇಶದ ತೆರಿಗೆ ವ್ಯವಸ್ಥೆಯ ಆಮೂಲಾಗ್ರ ಪರಿಷ್ಕರಣೆ ನಂತರ ಮಂಡಿಸುವ ಮೊದಲ ಬಜೆಟ್ ಆಗಿದ್ದು, ಕುತೂಹಲ, ನಿರೀಕ್ಷೆ ಹೆಚ್ಚಿಸಿದೆ.

ಬಜೆಟ್ ಇತಿಹಾಸದ ಸಂಕ್ಷಿಪ್ತ ಪರಿಚಯ

ಫೆಬ್ರವರಿಯಲ್ಲಿ ಬಜೆಟ್ ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಈಗಾಗಲೇ ಹಲವು ಚರ್ಚೆಗಳು, ನಿರೀಕ್ಷೆಗಳು ಹಾಗು ಚುನಾವಣಾ ಆಧರಿಸಿ ಬಜೆಟ್ ನಲ್ಲಿರಬಹುದಾದ ವಿಷಯಗಳು ಚರ್ಚೆಯ ಪ್ರಮುಖ ಅಂಶಗಳಾಗಿವೆ.

ಈ ಸಂದರ್ಭದಲ್ಲಿ ಬಜೆಟ್ ನ ಸಂಕ್ಷಿಪ್ತ ಪರಿಚಯ ಒಳಗೊಂಡಂತೆ ಅದಾಯ ಖಾತೆ ಹಾಗೂ ತೆರಿಗೆ ರಹಿತ ಆದಾಯಗಳ ಬಗ್ಗೆ ಅರಿಯೋಣ ಬನ್ನಿ..

ಬಜೆಟ್ ನ ವಿವರಗಳನ್ನು ಸುಲಭವಾಗಿ ಅರಿತುಕೊಳ್ಳಲು ಈ ಪಕ್ಷಿನೋಟ ನೆರವಾಗಲಿದೆ. ಅಲ್ಲದೇ ಹೊಸ ಪರಿಕಲ್ಪನೆಗಳನ್ನೂ ಪರಿಚಯಿಸಲಿದೆ. ಪಾವತಿಗಳನ್ನು ಆದಾಯ ಹಾಗೂ ಕ್ಯಾಪಿಟಲ್ ಅಥವಾ ಬಂಡವಾಳ ಎಂದು ವಿಂಗಡಿಸಲಾಗುತ್ತದೆ. ಏಕೀಕೃತ ನಿಧಿಗೆ ಹೊರತಾಗಿ ಇದು ಕೇಂದ್ರದ ನಿವ್ವಳ ತೆರಿಗೆಯ ಮೂಲ ಲಭಿಸಿದ ಆದಾಯವನ್ನು ಪ್ರಕಟಿಸುತ್ತದೆ.

ಏಕೆಂದರೆ ಸಂಬಂಧಿತ ಆರ್ಧಿಕ ಸಮಿತಿ ನಿರ್ಧರಿಸಿದ ಪ್ರಕಾರ ಸಂಗ್ರಹಗೊಂಡ ಒಟ್ಟು ತೆರಿಗೆ ಆದಾಯ ನೇರವಾಗಿ ರಾಜ್ಯ ಸರ್ಕಾರಗಳಿಗೆ ಸಾಲರೂಪದಲ್ಲಿ ತಲುಪುತ್ತವೆ. ಬಜೆಟ್ ಪಕ್ಷಿನೋಟವು ಆದಾಯ ಮತ್ತು ಬಂಡವಾಳ ಎಂದು ವಿಂಗಡಿಸದೇ ಸರ್ಕಾರ ಮುಂಬರುವ ಪೂರ್ವಯೋಜಿತ ಹಾಗೂ ಯೋಜಿಸದಿರುವ ಯೋಜನೆಗಳಿಗೆ ಮಾಡಲಿರುವ ಖರ್ಚುಗಳನ್ನೂ ವಿವರಿಸಲಿದೆ. ರ್ವಯೋಜಿತ ಹಾಗೂ ಯೋಜಿಸದಿರುವ ಖರ್ಚುಗಳ ಬಗ್ಗೆ ತಿಳಿದುಕೊಳ್ಳುವ ಮುನ್ನ ಕೇಂದ್ರ ಸರ್ಕಾರದ ಯೋಜನೆಗಳ ಪರಿಕಲ್ಪನೆಯ ಬಗ್ಗೆ ಅರಿಯೋಣ. 2018ರಲ್ಲಿ ತೆರಿಗೆ ಉಳಿತಾಯ ಮಾಡಲು ಈ 16 ವಿಧಾನಗಳು ನಿಮ್ಮದಾಗಿರಲಿ..

ಇದು ಸರ್ಕಾರದ ಪಂಚವಾರ್ಷಿಕ ಯೋಜನೆಯಾಗಿದ್ದು ಇದನ್ನು ಒಟ್ಟು ಐದು ಕಂತುಗಳಾಗಿ, ವರ್ಷಕ್ಕೊಂದು ಕಂತಿನ ಮೂಲಕ ನೀಡಲಾಗುತ್ತದೆ. ಈ ಯೋಜನೆಗಳು ಮುಂದಿನ ಐದು ವರ್ಷದಲ್ಲಿ ಪೂರ್ಣಗೊಳ್ಳಬೇಕು ಎಂಬ ಗುರಿಯನ್ನು ಹಮ್ಮಿಕೊಂಡೇ ಪ್ರಾರಂಭಗೊಳ್ಳುತ್ತವೆ ಹಾಗೂ ಈ ಯೋಜನೆಗಳು ಅನುಷ್ಠಾನಗೊಂಡಿರುವ ರಾಜ್ಯಗಳ ಹಾಗೂ ಸಾರ್ವಜನಿಕ ಸಂಸ್ಥೆಗಳ ಸಹಕಾರದಿಂದ ಈ ಯೋಜನೆಗಳು ಪೂರ್ಣಗೊಳ್ಳುವಂತೆ ನೋಡಿಕೊಳ್ಳಲಾಗುತ್ತದೆ. ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ಪಡೆಯುವ ಸಹಾಯಕ್ಕೆ ಬಜೆಟ್ ಸಹಕಾರ (budget support) ಎಂದು ಕರೆಯುತ್ತಾರೆ. ಉದ್ಯೋಗಿಗಳು ಪಡೆದುಕೊಳ್ಳಬಹುದಾದ 10 ತೆರಿಗೆ ಕಡಿತಗಳನ್ನು ತಪ್ಪದೇ ತಿಳಿದುಕೊಳ್ಳಿ..

ಕೇಂದ್ರ ಸರ್ಕಾರದ ಯೋಜಿತ ಯೋಜನೆಗಳು ಹಾಗೂ ರಾಜ್ಯ ಸರ್ಕಾರ ಅಥವಾ ಒಕ್ಕೂಟ ಪ್ರದೇಶಗಳ ಯೋಜನೆಗಳಿಗೆ ನೀಡುವ ಆರ್ಥಿಕ ನೆರವಾಗಿದೆ. ಉಳಿದೆಲ್ಲಾ ಬಜೆಟ್ ವೆಚ್ಚದಂತೆ ಈ ವೆಚ್ಚವನ್ನು ಆದಾಯ ಮತ್ತು ಬಂಡವಾಳ ವೆಚ್ಚವನ್ನಾಗಿ ವಿಂಗಡಿಸಲಾಗುತ್ತದೆ.

ಇದು ಕೇಂದ್ರ ಸರ್ಕಾರದ ವೆಚ್ಚದ ಸಿಂಹಪಾಲನ್ನು ಬಳಸಿಕೊಳ್ಳುತ್ತದೆ. ಈ ವೆಚ್ಚದಲ್ಲಿ ಪ್ರಮುಖವಾಗಿ ಸಾಲಗಳಿಗೆ ನೀಡಲಾಗುವ ಬಡ್ಡಿ, ಸಬ್ಸಿಡಿ, ಸರ್ಕಾರಿ ನೌಕರರ ವೇತನಗಳು, ನಿವೃತ್ತರಿಗೆ ಪಿಂಚಣಿ ಹಾಗೂ ರಕ್ಷಣಾ ವೆಚ್ಚಗಳು ಸೇರುತ್ತವೆ. ಯೋಜಿತವಲ್ಲದ ವೆಚ್ಚಗಳಲ್ಲಿ ಬಂಡವಾಳ ವೆಚ್ಚ ಕಡಿಮೆಯಾಗಿದೆ. ಒಟ್ಟು ಖರ್ಚಿನಲ್ಲಿ ಗರಿಷ್ಟ ವೆಚ್ಚ ರಕ್ಷಣಾ ವಿಭಾಗಕ್ಕೆ ನೀಡಲಾಗುತ್ತದೆ. ರಕ್ಷಣಾ ಖಾತೆಯ ವೆಚ್ಚ ಯೋಜಿತವಲ್ಲದ ವೆಚ್ಚವಾಗಿದೆ.

ಯಾವಾಗ ಸರ್ಕಾರದ ಬಳಿ ಒಟ್ಟು ವೆಚ್ಚ ಸಾಲರಹಿತ ಬಂಡವಾಳಕ್ಕೂ ಕಡಿಮೆಯಾಗುತ್ತದೆಯೋ ಆಗ ಈ ವ್ಯತ್ಯಾಸವನ್ನು ಸರಿದೂಗಿಸಲು ಸಾರ್ವಜನಿಕರಿಂದ ಸಾಲವಾಗಿ ಪಡೆದುಕೊಳ್ಳುತ್ತದೆ. ಈ ವ್ಯತ್ಯಾಸವನ್ನು ಹಣಕಾಸಿನ ಕೊರತೆ ಎಂದು ಕರೆಯಲಾಗುತ್ತದೆ.

ಅದಾಯ ವೆಚ್ಚಗಳಲ್ಲಿ ಸರ್ಕಾರ ಹಿಂದೆ ಪಡೆದುಕೊಂಡಿದ್ದ ಸಾಲಗಳ ಬಡ್ಡಿ ಪಾವತಿಯೂ ಸೇರುತ್ತದೆ. ಪ್ರಮುಖ ಕೊರತೆಯಲ್ಲಿ ಒಟ್ಟು ಹಣಕಾಸಿನ ಕೊರತೆಯ ಮೊತ್ತದಿಂದ ಈ ಬಡ್ಡಿಯನ್ನು ಕಳೆಯಲಾಗುತ್ತದೆ. ಈ ಕೊರತೆ ಕಡಿಮೆಯಾಗುತ್ತಾ ಹೋದಷ್ಟೂ ಆ ದೇಶ ಸುಭಿಕ್ಷ ಎಂದು ಪರಿಗಣಿಸಲಾಗುತ್ತದೆ. ಬಜೆಟ್ ದಾಖಲೆಗಳು ಈ ಕೊರತೆಯನ್ನು GDPಯ ಒಂದು ಶೇಖಡಾವಾರು ಪ್ರಮಾಣದಲ್ಲಿ ತಿಳಿಸುತ್ತದೆ. ಈ ಮೂಲಕ ಸ್ಪಷ್ಟವಾದ ಪರಿಕಲ್ಪನೆ ಮೂಡಲು ಒಂದು ಹೋಲಿಕೆ ಸಿಕ್ಕಂತಾಗುತ್ತದೆ. ಪ್ರಜ್ಞಾಪೂರ್ವಕ ಹಣಕಾಸಿನ ನಿರ್ವಹಣೆಗೆ ಸಾಮಾನ್ಯ ಉದ್ದೇಶಗಳಿಗೆ ಸರ್ಕಾರವು ಸಾಲವನ್ನು ಕೊಡುವುದಿಲ್ಲ.

ಈ ವಿಧಿಯನ್ನು 2003ರಲ್ಲಿ ಪ್ರಾರಂಭಿಸಲಾಗಿತ್ತು. 2008-09ರ ವೇಳೆಗೆ ಅದಾಯ ಕೊರತೆಯನ್ನು ಇಲ್ಲವಾಗಿಸುವ ಉದ್ದೇಶದಿಂದ ಇದು ಪ್ರಾರಂಭಗೊಂಡಿತ್ತು. ಆ ಉದ್ದೇಶದ ಪ್ರಕಾರ 2008-09 ಆರ್ಥಿಕ ವರ್ಷದಿಂದ ಎಲ್ಲಾ ಆದಾಯಾ ವೆಚ್ಚಗಳನ್ನು ಆದಾಯ ಪಾವತಿಯಿಂದಲೇ ನಿರ್ವಹಿಸಲು ಪ್ರಾರಂಭಿಸಲಾಯಿತು. ಆದಾಯ ವೆಚ್ಚವನ್ನು ಸರಿದೂಗಿಸಲು ಪಡೆದುಕೊಳ್ಳುವ ಯಾವುದೇ ಸಾಲ ಆ ವೆಚ್ಚಕ್ಕೆ ಮಾತ್ರವೇ ಸೀಮಿತವಾಗಿರುವಂತೆ ಕಟ್ಟುಪಾಡು ವಿಧಿಸಲಾಯ್ತು. ಈ ವಿಧಿಯ ಪ್ರಕಾರ 2008-09.ರ ಬಳಿಕ ಆರ್ಥಿಕ ಕೊರತೆಗೆ 3%ದ ಮಿತಿಯನ್ನೂ ಹೇರಲಾಗಿದೆ.

ಇಂದು ವ್ಯಾಟ್ ಹೆಸರು ಕೇಳದವರೇ ಇಲ್ಲ. ಒಂದು ಉತ್ಪನ್ನ ತಯಾರಾದ ಬಳಿಕ ಗ್ರಾಹಕನಿಗೆ ತಲುಪುವವರೆಗೆ ಹಲವಾರು ಹಂತಗಳನ್ನು ದಾಟಬೇಕಾಗುತ್ತದೆ. ಹೀಗೆ ದಾಟುವ ಪ್ರತಿ ಹಂತದಲ್ಲಿಯೂ ಒಂದು ನಿಗದಿತ ತೆರಿಗೆಯನ್ನು ಹೇರಲಾಗುತ್ತದೆ. ಈ ತೆರಿಗೆ ಆಯಾ ವಸ್ತುವನ್ನು ತಯಾರಿಸಲು ಬೇಕಾದ ಕಚ್ಚಾವಸ್ತು/ಸಾಮಾಗ್ರಿ/ಸಂಪನ್ಮೂಲಗಳ ವೆಚ್ಚವನ್ನು ಅವಲಂಬಿಸಿರುತ್ತದೆ. ಈ ತೆರಿಗೆಯ ಉದ್ದೇಶವೆಂದರೆ ಉತ್ಪನ್ನದ ತಯಾರಿಕೆಯ ವೇಳೆ ಬಳಸಲಾಗುವ ಸಂಪನ್ಮೂಲಗಳಿಗೆ ಮಾತ್ರವೇ ತೆರಿಗೆ ಹಾಕಿ ಈ ಉತ್ಪನ್ನದ ಮೌಲ್ಯವನ್ನು ವೃದ್ದಿಸಲಾಗುತ್ತದೆ. ಇದೇ ಕಾರಣಕ್ಕೆ ಈ ತೆರಿಗೆಯನ್ನು ಮೌಲ್ಯ-ವೃದ್ದಿ (ವಾಲ್ಯೂ ಆಡೆಡ್) ಎಂದು ಕರೆಯಲಾಗುತ್ತದೆ. ಈ ಮೂಲಕ ಪ್ರತಿ ಉತ್ಪನ್ನಕ್ಕೂ ಪಾರದರ್ಶಕ ತೆರಿಗೆಯನ್ನು ವಿಧಿಸಲಾಗುತ್ತದೆ.

ಇದು ಒಂದು ರೀತಿಯಲ್ಲಿ ಗಾಯದ ಮೇಲೆ ಬರೆ ಎಳೆದಂತೆ. ಅಂದರೆ ನಾವು ನೀಡುವ ತೆರಿಗೆಯ ಹಣವನ್ನು ಅವಲಂಬಿಸಿ ನೀಡಬೇಕಾದ ಹೆಚ್ಚುವರಿ ತೆರಿಗೆ. ಈ ತೆರಿಗೆಯಿಂದ ಪಡೆದ ಹಣವನ್ನು ಕೇಂದ್ರ ಸರ್ಕಾರ ಒಂದು ವಿಶೇಷ ಉದ್ದೇಶಕ್ಕೆ ಬಳಸಿಕೊಳ್ಳುತ್ತದೆ ಹಾಗೂ ಆ ಉದ್ದೇಶದ ಹೆಸರಿನಿಂದಲೇ ಈ ಸೆಸ್ ಅನ್ನು ಗುರುತಿಸಲಾಗುತ್ತದೆ. ಉದಾಹರಣೆಗೆ ಸ್ವಚ್ಛ ಭಾರತ ಸೆಸ್. ಇನ್ನೊಂದು ಉದಾಹರಣೆಯಲ್ಲಿ ಉದ್ಯಮ ಹಾಗೂ ವೈಯಕ್ತಿಕ ಆದಾಯಗಳಲ್ಲಿ 2% ಶೇಖಡಾ ಆದಾಯವನ್ನು ಶಿಕ್ಷಣ ಸೆಸ್ ಎಂದು ಮುರಿದುಕೊಳ್ಳಲಾಗುತ್ತದೆ. ಹಿಂದಿನ ಬಜೆಟ್ ನಲ್ಲಿ ಆದಾಯ ತೆರಿಗೆಯ ಮೇಲೆ 1% ಸೆಸ್ ತೆರಿಗೆಯನ್ನು ಮಾಧ್ಯಮಿಕ ಹಾಗೂ ಉನ್ನತ ಶಿಕ್ಷಣಕ್ಕಾಗಿ ಮುರಿದುಕೊಳ್ಳುತ್ತಿತ್ತು.

ಈ ತೆರಿಗೆ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ವಿಧಿಸುವ ತೆರಿಗೆಯನ್ನು ಅವಲಂಬಿಸಿದ್ದು ಆಮದು ಸುಂಕ ಒಂದು ನಿರ್ದಿಷ್ಟ ಮೊತ್ತ ದಾಟಿದ ಬಳಿಕ ಅನ್ವಯಗೊಳ್ಳುತ್ತದೆ. ಈ ತೆರಿಗೆ ಸ್ಥಳೀಯವಾಗಿ ಉತ್ಪಾದಿಸುವ ಸಂಸ್ಥೆಗಳ ಉತ್ಪನ್ನದ ಮೇಲೆ ಹೇರುವ ತೆರಿಗೆಗಳಿಗಿಂತ ಕೊಂಚ ಹೆಚ್ಚೇ ಇರುತ್ತದೆ. ಈ ಮೂಲಕ ಸ್ಥಳೀಯ ಉತ್ಪನ್ನಗಳಿಗೆ ಹೆಚ್ಚು ಬೆಂಬಲ ಸೂಚಿಸುವುದು ಈ ತೆರಿಗೆಯ ಮೂಲ ಉದ್ದೇಶವಾಗಿದೆ. ಈ ತೆರಿಗೆಯ ಮೇಲೆ ರಿಯಾಯಿತಿ ತೋರಿಸುವುದೆಂದರೆ ಸ್ಥಳೀಯ ಉದ್ಯಮಗಳಿಗೆ ಕಡೆಗಣನೆಯಾಗದಂತೆ ಹಾಗೂ ಈ ಮೂಲಕ ಈ ಕ್ಷೇತ್ರಗಳಿಗೆ ಹೂಡುವ ಹೂಡಿಕೆಯಿಂದ ಹೂಡಿಕೆದಾರರು ಹಿಂಜರಿಯುವುದನ್ನು ತಡೆಯುವುದೂ ಆಗಿದೆ.

ಈ ತೆರಿಗೆಯನ್ನು ರಫ್ತು ಮಾಡಲಾಗುವ ವಸ್ತುಗಳ ಮೇಲೆ ಹೇರಲಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಸುಂಕವನ್ನು ಆದಾಯವೆಂದು ಪರಿಗಣಿಸಲಾಗುವುದಿಲ್ಲ. ಆದರೆ ಕೆಲವು ವಸ್ತುಗಳನ್ನು ರಫ್ತು ಮಾಡಲು ಉತ್ತೇಜನ ನೀಡದೇ ಇರುವ ಉದ್ದೇಶಕ್ಕಾಗಿ ಹೇರಲಾಗುತ್ತದೆ. ಉದಾಹರಣೆಗೆ ಕಬ್ಬಿಣದ ಅದುರಿನ ರಫ್ತಿನಲ್ಲಿ ಪ್ರತಿ ಮೆಟ್ರಿಕ್ ಟನ್ ಕಬ್ಬಿಣದ ಅದಿರು ಹಾಗೂ ಅದಿರಿನ ಉಂಡೆಗಳಿಗೆ ರೂ. 300 ಹಾಗೂ ಕ್ರೋಮ್ ಅದಿರು ಹಾಗೂ ಅದಿರಿನ ಉಂಡೆಗಳಿಗೆ 2,000ರೂ.ರಫ್ತು ಸುಂಕ ವಿಧಿಸುವ ಮೂಲಕ ಇವುಗಳ ರಫ್ತುಗಳಿಗೆ ನಿರುತ್ತೇಜನ ನೀಡಿ ಇದರ ಪ್ರಯೋಜನ ಭಾರದಲ್ಲಿಯೇ ಆಗುವಂತೆ ನೋಡಿಕೊಂಡಿದೆ.

ಕೇಂದ್ರ ಸರ್ಕಾರ ಹೊಸದಾಗಿ ಪ್ರಸ್ತುತಪಡಿಸಲಿರುವ ತೆರಿಗೆಗಳು, ಈಗಿರುವ ತೆರಿಗೆಗಳಲ್ಲಿ ಆಗಲಿರುವ ಬದಲಾವಣೆ ಅಥವಾ ತೆರಿಗೆ ವ್ಯವಸ್ಥೆಯಲ್ಲಿ ಬದಲಾವಣೆ, ಹಿಂದೆ ಸಂಸತ್ ಅಂಗೀಕರಿಸಿದ್ದ ನಿಗದಿತ ಅವಧಿಗಾಗಿ ಹೇರಿದ್ದ ತೆರಿಗೆಯ ಅವಧಿಯನ್ನು ಮುಂದುವರೆಸುವುದು ಮೊದಲಾದ ನಿರ್ಧಾರಗಳನ್ನು ಪ್ರಕಟಿಸುವ ಪಟ್ಟಿಯನ್ನು ಹಣಕಾಸು ಮಸೂದೆ ಎಂದು ಕರೆಯುತ್ತಾರೆ. ಯಾವುದೇ ತೆರಿಗೆಯೊಂದಿಗೆ ಸಂಬಂಧವಿರುವ ಎಲ್ಲಾ ವ್ಯಕ್ತಿಗಳಿಗೆ ಈ ಬಿಲ್ ಅತಿ ಮುಖ್ಯವಾಗಿದೆ.

ಮೂಲಭೂತ ಆರ್ಥಿಕ ಸೇವೆಗಳಿಗೆ ಸುಲಭ ದರದಲ್ಲಿ ಪ್ರವೇಶ ಸಾರ್ವತ್ರಿಕಗೊಳಿಸುವುದನ್ನು ಆರ್ಥಿಕ ಸೇರ್ಪಡೆ ಎಂದು ಕರೆಯುತ್ತಾರೆ. (ಅಂದರೆ ಬ್ಯಾಂಕ್ ಖಾತೆ ಹೊಂದಲು, ಕಾಲಕಾಲಕ್ಕೆ ಹಣವನ್ನು ಪಡೆಯುವಂತಾಗಲು ಇತ್ಯಾದಿ). ಈ ಸೇವೆಗಳಿಂದ ಹೊರಗಿಡುವಿಕೆಯಿಂದ ಈ ಸೇವೆಗಳಿಂದ ಹೊರತುಪಡಿಸಿದವರ ಮೇಲೆ ಅಧಿಕ ವೆಚ್ಚ ಬೀಳುತ್ತದೆ. ವಿಶೇಷವಾಗಿ ಕಡಿಮೆ ಆದಾಯದ ಕುಟುಂಬಗಳ ಮೇಲೆ ಹೊರಯಾಗುತ್ತದೆ. (ಉದಾಹರಣೆಗೆ ಬ್ಯಾಂಕ್ ಖಾತೆಯಲ್ಲಿ ಕನಿಷ್ಟ ಹಣ ಇಲ್ಲದಿದ್ದರೆ ಒಂದು ಮೊತ್ತವನ್ನು ವಿಧಿಸುವುದು) ಹೀಗೆ ಹೊರಗಿಡುವಿಕೆಯಿಂದ ಇವರು ಆರ್ಥಿಕ ಸುರಕ್ಷತೆ ಇರದ ಮೂಲಗಳಿಂದ ಹೆಚ್ಚಿನ ಬಡ್ಡಿ ದರಗಳಲ್ಲಿ ಸಾಲ ಪಡೆಯಬೇಕಾಗಿ ಬರುತ್ತದೆ. ಆರ್ಥಿಕ ಸೇರ್ಪಡೆ ಭಾರತದ ಮಟ್ಟಿಗೆ ಇಂದಿಗೂ ಒಂದು ಗಂಭೀರವಾದ ಸಮಸ್ಯೆಯಾಗಿದೆ. ಕೇಂದ್ರ ಸರ್ಕಾರ ಈ ಬಗೆಯ ಕಟ್ಟುಪಾಡುಗಳಿಲ್ಲದೇ ಇರುವ ಖಾತೆಗಳನ್ನು ಅತಿ ಕಡಿಮೆ ವೆಚ್ಚದಲ್ಲಿ ಹೊಂದುವಂತೆ ಮಾಡಲು ಚಿಂತನೆ ನಡೆಸುತ್ತಿದೆ.

ಹೆಸರೇ ಸೂಚಿಸುವಂತೆ ಇದು ಹೆಚ್ಚುವರಿ ತೆರಿಗೆಯಾಗಿದೆ. ಅಂದರೆ ತೆರಿಗೆಯ ಮೇಲಿನ ಜುಲ್ಮಾನೆ. ಉದಾಹರಣೆಗೆ 30% ತೆರಿಗೆಯ ಮೇಲೆ 10% ಜುಲ್ಮಾನೆ ಹೇರಿದರೆ ಒಟ್ಟು ತೆರಿಗೆ 33% ಆಗುತ್ತದೆ. ವೈಯಕ್ತಿಕ ವೇತನ ಹತ್ತು ಲಕ್ಷಕ್ಕೂ ಮೀರಿದರೆ ಆದಾಯ ತೆರಿಗೆಯ ಮೇಲೆ 10% ಸರ್ಜಾರ್ಜ್ ವಿಧಿಸಲಾಗುತ್ತದೆ. ಸ್ವದೇಶೀ ಸಂಸ್ಥೆಗಳ ಆದಾಯದ ಮೇಲೆ 10% ಹಾಗೂ ವಿದೇಶೀ ಬಂಡವಾಳದ ಸಂಸ್ಥೆಗಳ ಆದಾಯದ ಮೇಲೆ 2.5% ಸರ್ಚಾರ್ಜ್ ವಿಧಿಸಲಾಗುತ್ತದೆ. ಆದರೆ ಒಂದು ಕೋಟಿಗೂ ಕಡಿಮೆ ಆದಾಯವಿರುವ ಸಂಸ್ಥೆಗಳ ಮೇಲೆ ಸರ್ಚಾರ್ಜ್ ಅಥವಾ ಜುಲ್ಮಾನೆ ವಿಧಿಸಲಾಗುವುದಿಲ್ಲ.

ಈ ನಿಟ್ಟಿನಲ್ಲಿ ಮುಖ್ಯವಾದ ಆದಾಯವೆಂದರೆ ನೀಡಿರುವ ಸಾಲಕ್ಕೆ ಪಡೆಯುವ ಬಡ್ಡಿ (ಕೇಂದ್ರ ಸರ್ಕಾರ ರಾಜ್ಯ ಸರ್ಕಾರ, ರೈಲ್ವೇ ಹಾಗೂ ಇತರ ಯೋಜನೆಗಳಿಗೆ ಸಾಲವಾಗಿ ನೀಡಿರುವ ಹಣಕ್ಕೆ ಪಡೆಯುವ ಬಡ್ಡಿ) ಹಾಗೂ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳ ಆದಾಯ ಹಾಗೂ ಹೂಡಿಕೆಗಳಿಂದ ಪಡೆಯುವ ಬಡ್ಡಿ ಸೇರಿದೆ.

ಆದಾಯದ ಖಾತೆಯಲ್ಲಿನ ಆದಾಯಕ್ಕೂ ಮೀರಿದ ಖರ್ಚುಗಳಿದ್ದರೆ ಇದನ್ನು ಆದಾಯದ ಕೊರತೆ ಎಂದು ಕರೆಯಲಾಗುತ್ತದೆ. ಇದು ವೆಚ್ಚಗಳಿಗೆ ಈಗ ನಿಯಂತ್ರಣ ಬೇಕೆಂದು ಸೂಚಿಸುವ ಸೂಚಕವೂ ಆಗಿದೆ. ಆದಾಯ ಖಾತೆಯ ಎಲ್ಲಾ ಖರ್ಚುಗಳು ಆದಾಯಕ್ಕೆ ಸರಿಸಮನಾಗಿ ಅಥವಾ ಕಡಿಮೆ ಇರುವಂತೆ ನೋಡಿಕೊಳ್ಳುವ ಮೂಲಕ ಈ ಕೊರತೆ ನೀಗಿಸುವಂತೆ ನೋಡಿಕೊಳ್ಳಬಹುದು.

ಯಾವಾಗ ಆದಾಯದ ಕೊರತೆ ಎದುರಾಗುತ್ತದೋ ಆಗ ಸರ್ಕಾರವೇ ಹಣವನ್ನು ಸಾಲವಾಗಿ ಪಡೆಯಬೇಕಾಗುತ್ತದೆ. ಈ ಸಾಲವನ್ನು ಹಿಂಜರಿತ ಸಾಲ ಎಂದು ಕರೆಯಲಾಗುತ್ತದೆ. ಏಕೆಂದರೆ ಈ ಸಾಲದಿಂದ ಆದಾಯದ ಕೊರತೆಯನ್ನು ನೀಗಿಸಲಾಗುತ್ತದೆಯೇ ಹೊರತು ಇದನ್ನು ಆಸ್ತಿಗಳಿಕೆಗಾಗಿ ಬಳಸಲು ಸಾಧ್ಯವಿಲ್ಲ. ಪರಿಣಾಮವಾಗಿ ಹೆಚ್ಚಿನ ಪ್ರಮಾಣದ ಆದಾಯ ಪಾವತಿಗಳು ಬಡ್ಡಿಯ ರೂಪದಲ್ಲಿ ನೀಡಲ್ಪಡುತ್ತದೆ ಹಾಗೂ ಸಾಲದ ಕೂಪದಲ್ಲಿ ಬೀಳುವಂತಾಗುತ್ತದೆ. ಈ ಕೊರತೆಯನ್ನು ಶೂನ್ಯವಾಗಿಸಲು 2008-09ರಲ್ಲಿ ಸರ್ಕಾರ FRBM ವಿಧಿ ಎಂಬ ವಿಧಿಯನ್ನು ಪ್ರಾರಂಭಿಸಿತು.

source: goodreturns.in