ಮಂಗಳವಾರ, ಆಗಸ್ಟ್ 29, 2017

2017 ನೇ ಸಾಲಿನ ಖೇಲರತ್ನ, ದ್ರೋಣಾಚಾರ್ಯ ಪ್ರಶಸ್ತಿ

Tuesday, 29 Aug, 4.42 pm
ಸಂಜೆ ವಾಣಿ
  💐  *ಇಂದು ರಾಷ್ಟ್ರಪತಿಗಳಿಂದ ಖೇಲ್‍ರತ್ನ ದ್ರೋಣಾಚಾರ್ಯ ಪ್ರಶಸ್ತಿ ಪ್ರದಾನ* 💐

ನವದೆಹಲಿ, ಆ. 29- ಅಂತಾರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಇಂದು ರಾಷ್ಟ್ರಪತಿ ಭವನದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ 17 ಕ್ರೀಡಾ ಪಟುಗಳಿಗೆ ಖೇಲ್ ರತ್ನ ಹಾಗೂ ತರಬೇತುದಾರರಿಗೆ ದ್ರೋಣಾಚಾರ್ಯ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರದಾನ ಮಾಡಲಿದ್ದಾರೆ. ಪ್ಯಾರಾ ಒಲಿಂಪಿಕ್ಸ್‍ನಲ್ಲಿ ಅದ್ಭುತ ಪ್ರದರ್ಶನ ತೋರಿದ ಮರಿಯಪ್ಪನ್ ಹಾಗೂ ವರುಣ್ ಸಿಂಗ್ ಬಾಟಿ ಅವರಿಗೆ ಅರ್ಜುನ ಪ್ರಶಸ್ತಿಯನ್ನು ರಾಷ್ಟ್ರಪತಿಯವರು ಪ್ರದಾನ ಮಾಡಿ ಗೌರವಿಸಲಿದ್ದಾರೆ. 2004ರ ಅಥೆನ್ಸ್ ಗೇಮ್ಸ್ ಹಾಗೂ 2013ರ ವಿಶ್ವ ಚಾಂಪಿಯನ್ಸ್‍ಷಿಪ್‍ನ ಪ್ಯಾರಾ ಒಲಿಂಪಿಕ್ಸ್‍ನಲ್ಲಿ ನೂತನ ದಾಖಲೆ ನಿರ್ಮಿಸಿದ ದೇವಿಂದ್ರ ಜಾಜಾರಿಯಾ, ಭಾರತದ ಹಾಕಿ ತಂಡವನ್ನು ಮೇಲಸ್ತರಕ್ಕೇರಿಸಿದ ಸರ್ದಾರ್ ಸಿಂಗ್‍ಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ನೀಡಿ ಕೋವಿಂದ್ ಇಂದು ಸನ್ಮಾನಿಸಲಿದ್ದಾರೆ.

ಇನ್ನುಳಿದಂತೆ ಜ್ಯೋತಿ ಸುರೇಖಾ ವಿನ್ನಮ್ (ಆರ್ಚರಿ), ಕುಶ್‍ಬೀರ್ ಕೌರ್ (ಅಥ್ಲೇಟಿಕ್ಸ್), ಪ್ರಶಾಂತಿ ಸಿಂಗ್ (ಬ್ಯಾಸ್ಕೆಟ್ ಬಾಲ್), ಲೇಸ್‍ರಾಮ್ ದೇವೊಂದರ್ ಸಿಂಗ್ (ಬಾಕ್ಸಿಂಗ್), ಚೇತೇಶ್ವರ್ ಪೂಜಾರ , ಹರ್ಪಿತ್‍ಕೌರ್ (ಕ್ರಿಕೆಟ್), ಒಹಿನಾಮ್ ಬಿಮ್‍ಬಿಮ್ ದೇವಿ (ಫುಟ್ಬಾಲ್), ಎಸ್‍ಎಸ್‍ಪಿ ಚವ್‍ರಾಸಿಯಾ, ಎಸ್‍ವಿ ಸುನೀಲ್ (ಹಾಕಿ), ಜಸ್‍ವೀರ್ ಸಿಂಗ್ (ಕಬ್ಬಡಿ), ಕನ್ನಡಿಗ ಪ್ರಕಾಶ್ ನಂಜಪ್ಪ ( ಶೂಟಿಂಗ್), ಆಂಟೋನಿ ಅಮಲ್‍ರಾಜ್(ಟೇಬಲ್‍ಟೆನ್ನಿಸ್),ಸನಮ್ ಸಿಂಗ್ (ಟೆನ್ನಿಸ್), ಸತ್ಯವಾರ್ಟ್ ಕದಿಯಾನ್(ಕುಸ್ತಿ) ಇವರಿಗೆ ಖೇಲ್ ರತ್ನ ಪ್ರಶಸ್ತಿ ಲಭಿಸಲಿದೆ.

🌷  *ದ್ರೋಣಾಚಾರ್ಯ ಪ್ರಶಸ್ತಿ:*

ದಿವಂಗತ ಡಾ.ಆರ್. ಗಾಂಧಿ (ಅಥ್ಲೆಟಿಕ್ಸ್), ಹೇರಾ ನಂದ್ ಕಟಾರಿಯಾ (ಕಬ್ಬಡಿ), ಜಿಎಸ್‍ಎಸ್‍ವಿ ಪ್ರಸಾದ್ (ಬ್ಯಾಡ್ಮಿಂಟನ್, ಜೀವಮಾನ ಸಾಧನೆ), ಬಿರ್ಜ್ ಭೂಷಣ್ ಮೊಹಾಂತಿ (ಬಾಕ್ಸಿಂಗ್- ಜೀವಮಾನ ಸಾಧನೆ), ಪಿ.ಎ. ರಾಪ್‍ಹಿಲ್ (ಹಾಕಿ, ಜೀವಮಾನ ಸಾಧನೆ), ಸ್ಯಾನ್‍ಜೋಯ್ ಚಕ್ರವರ್ತಿ ( ಶೂಟಿಂಗ್- ಜೀವಮಾನ ಸಾಧನೆ), ರೋಷನ್ ಲಾಲ್ (ಕುಸ್ತಿ- ಜೀವಮಾನ ಸಾಧನೆ).

  🌷 *ಧ್ಯಾನ್ ಚಂದ್*  *ಪ್ರಶಸ್ತಿ* : 

ಭುಪೆಂದರ್ ಸಿಂಗ್ (ಅಥ್ಲೆಟಿಕ್ಸ್), ಸೈಯದ್ ಸಾಹಿದ್ ಹಕ್ಕಿಮ್ (ಫುಟ್ಬಾಲ್), ಸುಮರೈ ಟೆಟೆ (ಹಾಕಿ).

ಭಾರತದ ಪ್ರಮುಖ ಕಾರ್ಯಾಚರಣೆಗಳು

ಭಾರತದ ಪ್ರಮುಖ ಕಾರ್ಯಾಚರಣೆಗಳು

Q1.ಆಪರೇಷನ್ ವಿಜಯ್ ಕಾರ್ಯಾಚರಣೆ ಸಂಬಂಧಿಸಿದ್ದು?
ಕಾರ್ಗಿಲ್

Q2.ಆಪರೇಷನ್ ಸೇಪಡ ಸಾಗರ?
ಕಾರ್ಗಿಲ್ ಯುದ್ಧ ದಲ್ಲಿ ವಾಯುಪಡೆ ಕೈಗೊಂಡ ಕಾರ್ಯಾಚರಣೆ

Q3.ಆಪರೇಷನ್ ಭದ್ರ ಕಾರ್ಯಾಚರಣೆ?
ಕಾರ್ಗಲ್ ಯುದ್ಧ ದಲ್ಲಿ ಪಾಕ್ ಕೈಗೊಂಡ ಕಾರ್ಯಾಚರಣೆ

Q4.ಆಪರೇಷನ್ ಟ್ರೈಡೆಂಟ್?
1972 ಭಾರತ/ ಪಾಕಿಸ್ತಾನ ಯುದ್ಧದಲ್ಲಿ ಭಾರತದ ನೌಕಾಪಡೆ ಕೈಗೊಂಡ ಕಾರ್ಯಾಚರಣೆ

Q5.ಆಪರೇಷನ್ ಬ್ಲಾಕ್ ಥಂಡರ?
1986 apr 30 ಸುವರ್ಣ ಮಂದಿರ ದ ಮೇಲೆ ದಾಳಿ

Q6.ಆಪರೇಷನ್ ಬ್ಲಾಕ್ ಟಾನ್ರಾಡೋ?
nov 26.2008. NSG ಪಡೆ ಭಯೋತ್ಪಾದಕರು ವಿರುದ್ಧ ಕೈಗೊಂಡ ಕಾರ್ಯಾಚರಣೆ

Q7.ಆಪರೇಷನ್ ನೇಪ್ಚೊನಸ್ಪಿಯರ ?
ಒಸಮಾ ಬಿನ್ ಲಾಡೆನ್ ಹತ್ಯೆಗೆ ಕೈಗೊಂಡ ಕಾರ್ಯಾಚರಣೆ

Q8.ಆಪರೇಷನ್ ರಾಹತ್?
ಭಾರತೀಯ ವಾಯುಪಡೆ ಉತ್ತರಖಂಡದಲ್ಲಿ ಕೈಗೊಂಡ ಕಾರ್ಯಾಚರಣೆ

Q9.ಆಪರೇಷನ್ ಮೇಘದೂತ?
1984ರಲ್ಲಿ ಸಿಯಾಚಿನ್ ವಶಪಡಿಸಿಕೊಂಡಿದ್ದು

Q10.ಆಪರೇಷನ್ ದುರ್ಯೋಧನ ?
14ನೇ ಲೋಕ ಸಭೆಯಲ್ಲಿ 11 ಮಂದಿ ಸಂಸದರು ಪ್ರಶ್ನೇ ಕೇಳಲು ಲಂಚ ಸ್ವೀಕರಿಸಿದ ಪ್ರಕರಣ,

Q11.ಆಪರೇಷನ್ ಮದಾದ್?
ಭಾರತೀಯ ನೌಕಾಪಡೆ ತಮಿಳುನಾಡಿನಲ್ಲಿ ಸುನಾಮಿ ಉಂಟಾದಾಗ ಕೈಗೊಂಡ ಕಾರ್ಯಾಚರಣೆ

Q12.ಆಪರೇಷನ್ ಗ್ರೀನ್ ಹಂಟ್?
2009 ನಕ್ಸಲ್ ಹಾವಳಿ ನಿಯಂತ್ರಿಸಲು

Q13.ಆಪರೇಷನ್ ಕ್ಯಾಕ್ಟಸ್
1988ರಲ್ಲಿ ಭಾರತೀಯ ವಾಯುಪಡೆ & ಮಾಲ್ಡಿವ್ಸ ಸರ್ಕಾರ ಬಂಡುಕೋರರ ವಿರುದ್ಧ ಕೈಗೊಂಡ ಕಾರ್ಯಾಚರಣೆ

Q14.ಆಪರೇಷನ್ ಓಶನ್ ಶಿಲ್ಡ?
2009 ರಿಂದ ನ್ಯಾಟೋ ಪಡೆ ಸೋಮಾಲಿಯಾ ಬಂಡುಕೋರರ ವಿರುದ್ಧ ಕೈಗೊಂಡ ಕಾರ್ಯಾಚರಣೆ

Q15.ಆಪರೇಷನ್ ಬ್ಲೂಸ್ಟಾರ್ ?
ಸುವರ್ಣ ಮಂದಿರದ ಮೇಲಿನ ದಾಳಿ ಹತ್ತಿಕ್ಕಲು

ಸೋಮವಾರ, ಆಗಸ್ಟ್ 28, 2017

ಪಿ,ವಿ,ಸಿಂಧುಗೆ ಬೆಳ್ಳಿ

☑️ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಫೈನಲ್‌: ಪಿ.ವಿ. ಸಿಂಧುಗೆ ಬೆಳ್ಳಿ

# ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದಲ್ಲಿ ಜಪಾನಿನ ನೊಝೊಮಿ ಒಕುಹರ ವಿರುದ್ಧ ಪಿ.ವಿ. ಸಿಂಧುಗೆ ಅವರು ಸೋಲನುಭವಿಸಿದ್ದಾರೆ. ಇದರಿಂದ ಅವರು ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.

# ಒಕುಹರ ವಿರುದ್ಧದ ಪಂದ್ಯದಲ್ಲಿ ಸಿಂಧು ಅವರು 19-21, 22-20, 20-22 ಸೆಟ್‌ಗಳಿಂದ ಪರಾಭವಗೊಂಡರು. ಇದಕ್ಕೂ ಮುನ್ನ, ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಚೆನ್ ಯುಫಿ ವಿರುದ್ಧ 48 ನಿಮಿಷಗಳಲ್ಲಿ 21-13, 21-10 ಸೆಟ್‌ಗಳಿಂದ ಸಿಂಧು ಜಯಗಳಿಸಿದ್ದರು.

# ಸಿಂಧು ಅವರು 2013 ಮತ್ತು 2014ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಪಡೆದಿದ್ದರು.

ಭಾನುವಾರ, ಆಗಸ್ಟ್ 27, 2017

ಬ್ರಿಕ್ಸ್ ಕೃಷಿ ಸಂಶೋಧನಾ ವೇದಿಕೆ

ಬ್ರಿಕ್ಸ್ ಕೃಷಿ ಸಂಶೋಧನಾ ವೇದಿಕೆ ಸ್ಥಾಪನೆಗಾಗಿ ಭಾರತ ಮತ್ತು ಬ್ರಿಕ್ಸ್ ರಾಷ್ಟ್ರಗಳ ನಡುವೆ ಆಗಿರುವ ಎಂ.ಓ.ಯು.ಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ವಿವಿಧ ಬ್ರಿಕ್ಸ್ ರಾಷ್ಟ್ರಗಳ ನಡುವೆ ಬ್ರಿಕ್ಸ್ ಕೃಷಿ ಸಂಶೋಧನಾ ವೇದಿಕೆ (ಬ್ರಿಕ್ಸ್ –ಎ.ಆರ್.ಪಿ.) ಸ್ಥಾಪನೆಗಾಗಿ ಆಗಿರುವ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಗೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.

ಹಿನ್ನೆಲೆ:

2015ರ ಜುಲೈ 9ರಂದು ರಷ್ಯಾದ ಉಫಾದಲ್ಲಿ ನಡೆದ 7ನೇ ಬ್ರಿಕ್ಸ್ ಶೃಂಗಸಭೆಯ ವೇಳೆ, ಪ್ರಧಾನಮಂತ್ರಿ ಶ್ರೀ ಮೋದಿ ಅವರು ಇಡೀ ವಿಶ್ವಕ್ಕೇ ಕೊಡುಗೆಯಾಗಬಲ್ಲ ಬ್ರಿಕ್ಸ್ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆಯ ಪ್ರಸ್ತಾಪ ಮಾಡಿದ್ದರು. ಈ ಕೇಂದ್ರವು ಬ್ರಿಕ್ಸ್ ಸದಸ್ಯ ರಾಷ್ಟ್ರಗಳಿಗೆ ಆಹಾರ ಭದ್ರತೆ ಒದಗಿಸಲು ಕೃಷಿಯಲ್ಲಿ ವ್ಯೂಹಾತ್ಮಕ ಸಹಕಾರವನ್ನು ಒದಗಿಸುವ ಮೂಲಕ ಸುಸ್ಥಿರ ಕೃಷಿ ಅಭಿವೃದ್ಧಿ ಮತ್ತು ಬಡತನ ನಿರ್ಮೂಲನೆ ಮಾಡುವುದನ್ನು ಉತ್ತೇಜಿಸುತ್ತದೆ. 

ಬ್ರಿಕ್ಸ್ ರಾಷ್ಟ್ರಗಳಲ್ಲಿ ಸಣ್ಣ ಹಿಡುವಳಿದಾರರ ಕೃಷಿಗೆ ತಂತ್ರಜ್ಞಾನವೂ ಸೇರಿದಂತೆ ಕೃಷಿ ಸಂಶೋಧನಾ ನೀತಿ, ವಿಜ್ಞಾನ ಮತ್ತು ತಂತ್ರಜ್ಞಾನ, ನಾವಿನ್ಯತೆ ಮತ್ತು ಸಾಮರ್ಥ್ಯವರ್ಧನೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳ ನಡುವೆ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಕೃಷಿ ಸಂಶೋಧನಾ ವೇದಿಕೆ ಸ್ಥಾಪನೆಗೆ ಎಂ.ಓ.ಯು.ಗೆ ಬ್ರಿಕ್ಸ್ ರಾಷ್ಟ್ರಗಳ ವಿದೇಶಾಂಗ ಸಚಿವರುಗಳು ಗೋವಾದಲ್ಲಿ 2016ರ ಅಕ್ಟೋಬರ್ 16ರಂದು ನಡೆದಿದ್ದ 8ನೇ ಬ್ರಿಕ್ಸ್ ಶೃಂಗಸಭೆಯ ವೇಳೆ ಅಂಕಿತ ಹಾಕಿದ್ದರು.

ಬ್ರಿಕ್ಸ್ –ಎ.ಆರ್.ಪಿ. ವಿಶ್ವದ ಹಸಿವು, ಅಪೌಷ್ಟಿಕತೆ, ಬಡತನ ಮತ್ತು ಅಸಮಾನತೆ ಅದರಲ್ಲೂ ರೈತರು ಮತ್ತು ರೈತೇತರರ ಆದಾಯದ ನಡುವಿನ ಅಸಮಾನತೆ ಮತ್ತು ಕೃಷಿ ವ್ಯಾಪಾರವನ್ನು ಹೆಚ್ಚಿಸುವ, ಜೈವಿಕ –ಸುರಕ್ಷತೆ ಮತ್ತು ಹವಾಮಾನ ತಾಳಿಕೊಳ್ಳುವ ಕೃಷಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಲು ವಿಜ್ಞಾನದ ನೇತೃತ್ವದ ಕೃಷಿ ಆಧಾರಿತ ಸುಸ್ಥಿರ ಅಭಿವೃದ್ಧಿಗೆ ನೈಸರ್ಗಿಕ ಜಾಗತಿಕ ವೇದಿಕೆಯಾಗಿದೆ.
 

******

ಕರ್ನಾಟಕದಲ್ಲಿ ಪಾಸ್ ಪೋರ್ಟ್ ಕೇಂದ್ರ

ಕರ್ನಾಟಕದಲ್ಲಿ ನೂತನ 7 ಅಂಚೆ ಕಚೇರಿ “ಪಾಸ್ ಪೋರ್ಟ್ ಕೇಂದ್ರ”

ಭಾರತ ಸರಕಾರದ ವಾರ್ತಾ ಶಾಖೆ
ಬೆಂಗಳೂರು

ಬೆಂಗಳೂರು, ಜೂನ್ 19, 2017

ಪತ್ರಿಕಾ ಹೇಳಿಕೆ

ಕರ್ನಾಟಕದಲ್ಲಿ ನೂತನ 7 ಅಂಚೆ ಕಚೇರಿಪಾಸ್ ಪೋರ್ಟ್ ಕೇಂದ್ರ

ಅಂಚೆ ಕಚೇರಿಗಳ “ಪಾಸ್ ಪೋರ್ಟ್ಕೇಂದ್ರ” ಎರಡನೆ ಹಂತಕರ್ನಾಟಕಕ್ಕೆನೂತನ 7 ಕೇಂದ್ರಗಳು

 

ಕೇಂದ್ರ ವಿದೇಶಾಂಗ ವ್ಯವಹಾರಗಳಸಚಿವಾಲಯ ಮತ್ತು ಅಂಚೆ ಕಚೇರಿಇಲಾಖೆಗಳು ಜಂಟಿಯಾಗಿ ದೇಶದಾಧ್ಯಂತಖಾಲಿ ಸ್ಥಳಗಳನ್ನು ಹೊಂದಿರುವ ಮುಖ್ಯ ಅಂಚೆಕಚೇರಿಗಳು/ ಅಂಚೆ ಕಚೇರಿಗಳಲ್ಲಿ ಪಾಸ್ಪೋರ್ಟ್ ಸೇವಾ ಸೌಲಭ್ಯ ಪೂರೈಸುವಯೋಜನೆಯ ಎರಡನೇಯ ಹಂತದಲ್ಲಿಕರ್ನಾಟಕದ ಬಳ್ಳಾರಿ, ಬೀದರ್, ರಾಯಚೂರ್,ಶಿವಮೊಗ್ಗ, ತುಮಕೂರು, ಉಡುಪಿ, ಮತ್ತುವಿಜಾಪುರ ಸೇರಿದಂತೆ ( 7)  ಒಟ್ಟು 149 ಅಂಚೆಕಚೇರಿ ಪಾಸ್ ಪೋರ್ಟ್ ಸೇವಾ ಸೌಲಭ್ಯಕೇಂದ್ರಗಳನ್ನು ದೇಶದಾಧ್ಯಂತತೆರೆಯಲಾಗುವದು.

ಪಾಸ್ ಪೋರ್ಟ್ ವಿತರಣೆ ಸಂಬಂಧಿಸಿದ ಸೇವಾ ಸೌಲಭ್ಯಗಳ ಪೂರೈಕೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲು ಸೌಕರ್ಯ ಲಭ್ಯವಿರದ ಜಿಲ್ಲಾ ಕೇಂದ್ರ ಸ್ಥಳಗಳಿಗೆ ನೂತನ ಸೇವಾ ಕೇಂದ್ರಗಳನ್ನು ತೆರೆಯಲು ಜನತೆಯ ಪಾಲ್ಗೊಳ್ಳುವಿಕೆಯ ಈ ವಿಶೇಷ ಜಂಟಿ ಯೋಜನೆಯನ್ನು ಜಾರಿಗೊಳಿಸಿದೆ.

ಅಂಚೆ ಕಚೇರಿ ಪಾಸ್ ಪೋರ್ಟ್ ಸೇವಾ ಸೌಲಭ್ಯಕೇಂದ್ರ ಯೋಜನೆಯ ಮೊದಲ ಹಂತದಲ್ಲಿಒಟ್ಟು 86 ಪಿ.ಓ.ಪಿ.ಎಸ್.ಕೆ ಗಳನ್ನು ತೆರೆಯಲುವ್ಯವಸ್ಥೆಗಳನ್ನು ಮಾಡಿದ್ದು, ಇದರಲ್ಲಿ 52ಕಾರ್ಯಗತಗೊಂಡಿವೆ. ಈಗ ದೇಶದಾಧ್ಯಂತನೂತನ 149 ಕೇಂದ್ರ ತೆರೆಲಿದ್ದು, ಒಟ್ಟು 235ಅಂಚೆ ಕಚೇರಿ ಪಾಸ್ ಪೋರ್ಟ್ ಸೇವಾ ಸೌಲಭ್ಯಕೇಂದ್ರಗಳು ಸಾರ್ವಜನಿಕರ ಸೌಕರ್ಯಕ್ಕಾಗಿಲಭ್ಯವಿದೆ.

****

ಉಜ್ವಲ ಭವಿಷ್ಯದತ್ತ ಭಾರತೀಯ ಕೈಮಗ್ಗ ವಲಯ

ಉಜ್ವಲ ಭವಿಷ್ಯದತ್ತ ಭಾರತೀಯ ಕೈಮಗ್ಗ ವಲಯ

ಬಣ್ಣದೋಕುಳಿ, ಕಣ್ಣುಕೋರೈಸುವ ವಿನ್ಯಾಸ,ತಳುಕಿನ ಚಿತ್ತಾರ ಮತ್ತು ಬಳುಕುವ ನೇಯ್ಗೆ ಈವಸ್ತ್ರಗಳ ವಿಶಿಷ್ಠ ಆಕರ್ಷಣೆಯಾಗಿದೆ. ಈಶಾನ್ಯರಾಜ್ಯಗಳಿಂದಿಡಿದು ಕಾಶ್ಮೀರ-ದಕ್ಷಿಣದತುದಿಯವರೆವಿಗೂ ತಯಾರಾಗುವ ಪ್ರತೀಕೈಮಗ್ಗ ವಸ್ತ್ರಗಳಗೂ ಅದರದೇ ಆದ ವಿಶೇಷಗುಣಗಳಿವೆ. ಈ ವಿಶೇಷತೆಗಳಿಂದಲೇ ವಸ್ತ್ರಗಳು ಆಕರ್ಷಣೆ ಪಡೆದುಕೊಳ್ಳುತ್ತವೆ. ಭಾರತದಕರಕುಶಲಕಲೆಯೊಂದಿಗೆ ಕೈಮಗ್ಗಶತಮಾನಗಳಿಂದ ಮಿಳಿತಗೊಂಡಿದ್ದು, ದೇಶದ ಎಲ್ಲ ರಾಜ್ಯಗಳಲ್ಲೂ ನೆಲೆಸಿರುವ ಲಕ್ಷಾಂತರಕುಶಲಕರ್ಮಿಗಳಿಗೆ ಜೀವನೋಪಾಯಒದಗಿಸಿದೆ.

ಕ್ಷಿಪ್ರ ಬದಲಾವಣೆಯ ನಡುವೆಯೂ ಕೈಮಗ್ಗದಲ್ಲಿತೊಡಗಿಕೊಂಡಿರುವ ಕಲಾವಿದರು, ಅಸಾಧಾರಣಕೈಮಗ್ಗದ ರಚನೆಗಳನ್ನು ಸತತ ಪರಿಶ್ರಮದಿಂದಉಳಿಸಿಕೊಂಡು ಬಂದಿಲ್ಲದೆ, ತಮ್ಮ ಜ್ಞಾನ-ಕೌಶಲ್ಯವನ್ನು ಮುಂದಿನ ಪೀಳಿಗೆಗೆದಾಟಿಸುತ್ತಿದ್ದಾರೆ. ಇದು ಪ್ರತಿಯೊಬ್ಬ ಕೈಮಗ್ಗ ನೇಕಾರನ ಕನಸೂ ಆಗಿದೆ.

ಹೋಲಿಸಲಾಸಾಧ್ಯವಾದ ಗುಣಮಟ್ಟದಿಂದಭಾರತದ ಕೈಮಗ್ಗ ಪದಾರ್ಥಗಳುಜನಪ್ರಿಯವಾಗಿವೆ. ಛಾಂದೇರಿಯ ಮಸ್ಲಿನ್,ವಾರಣಾಸಿಯ ಅಂಚುಳ್ಳ ರೇಷ್ಮೆ ಸೀರೆಗಳು,ರಾಜಾಸ್ತಾನ-ಒಡಿಶಾದ ಬಣ್ಣದ ಉತ್ಪನ್ನಗಳು,ಮಚಲಿಪಟ್ಟಣದ ಚಿಂತಾಗಳೂ,ಹೈದಾರಾಬಾದ್‍ನ ಹಿಮ್ರಾಸ್, ಪಂಜಾಬ್‍ನಖೇಸ್, ಫಾರೂಖಾಬಾದ್‍ನ ಅಚ್ಚುಗಳು,ತೊಂಗಮ್‍ ಮತ್ತು ಫೀನಕ್ ಹಾಗೂ ಮಣಿಪುರ-ಅಸ್ಸಾಂನ ಬಾಟಲ್ ವಿನ್ಯಾಸ, ಮಧ್ಯಪ್ರದೇಶದಮಹೇಶ್ವರಿ ಸೀರೆಗಳು ಮತ್ತು ವಡೋದರಾದಪಾಟೋಲ ಸೀರೆಗಳು ಇವುಗಳಲ್ಲಿಪ್ರಮುಖವಾದವು.

ಜೊತೆಗೆ, ಕಾಂಚೀಪುರಂ, ಬನಾರಸ್ ಸೀರೆ,ಛತ್ತೀಸ್‍ಗಢದ ಕೋಸ, ಅಸ್ಸಾಂನ ಮೋಗಾರೇಷ್ಮೆ, ಬಂಗಾಳದ ಜಾಮ್ಧಾನಿ, ಮಧ್ಯಪ್ರದೇಶದಭಾಗಲ್‍ಪುರ್ ಮತ್ತು ಛಾಂದೇರಿ, ಓಡಿಶಾದತುಷಾರ್ ಮತ್ತು ಇಕಾತ್‍ನಂತಹ ರೇಷ್ಮೆ ವಸ್ತ್ರಗಳನ್ನು ತಯಾರಿಸುವ ಪ್ರಕ್ರಿಯೆ ಕೇವಲ ಆರ್ಥಿಕವಷ್ಟೇ ಅಲ್ಲದೇ ವಿಶೇಷ ಸಾಂಸ್ಕೃತಿಕಬಂಡವಾಳವೂ ಆಗಿದೆ.

ಹಗುರವಾಗಿದ್ದರೂ ವಿದೇಶಿ ಬಟ್ಟೆಗಳನ್ನು ಜನತೆಬಯಸುತ್ತಾರೆ. ಆದರೆ, ನಮ್ಮ ಸಾಂಪ್ರಾದಾಯಿಕವಿನ್ಯಾಸದ ವಸ್ತ್ರಗಳನ್ನು ಮದುವೆ-ಹಬ್ಬಗಳಂತಹವಿಶೇಷ ಸಂದರ್ಭಗಳಲ್ಲಿ ಉಡುವುದನ್ನುಮರೆಯುವುದಿಲ್ಲ.

ಸ್ವಾತಂತ್ರ್ಯದ ನಂತರ, ವಿದ್ಯುತ್ ಮಗ್ಗ ಮತ್ತು ಹತ್ತಿಗಿರಣಿ ಕ್ಷೇತ್ರದ ಆಕ್ರಮಣದಿಂದ ದೇಶದಸಾಂಸ್ಕøತಿಕ ಪರಂಪರೆಯಾದ ಕೈಮಗ್ಗ ಮತ್ತುನೇಕಾರರ ರಕ್ಷಣೆಗಾಗಿ ಮತ್ತು ಖಾದಿಯನ್ನುಗೌರವಿಸುವ ಗಾಂಧೀಜೀ ಅವರ ಮೌಲ್ಯವನ್ನುಕಾಪಾಡಲು ಸರ್ಕಾರ ಹಲವಾರುಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿತು.ಕೈಮಗ್ಗಗಳ (ಕರಕುಶಲ ಉತ್ಪನ್ನಗಳಿಗಾಗಿನಮೀಸಲು) ಕಾಯ್ದೆ 1985, ಅಂಚುಗಳಿರುವಸೀರೆ, ಪಂಚೆ, ಲುಂಗಿ, ಮತ್ತಿತರ ಕೈಮಗ್ಗದಉತ್ಪನ್ನಗಳನ್ನು ವರ್ಗೀಕರಿಸಿ, ವಿದ್ಯುತ್ ಮಗ್ಗಕ್ಷೇತ್ರದಿಂದ ಹೊರಗಿಟ್ಟಿತು. ಆದರೆ ಈ ಕಾಯ್ದೆತಡವಾಗಿ 8 ವರ್ಷಗಳ ನಂತರ ಜಾರಿಗೆಬಂದಾಗ, ಕಾಯ್ದೆಯಡಿ ಕೈಮಗ್ಗ ಉತ್ಪನ್ನಗಳಸಂಖ್ಯೆ ಕೇವಲ 11ಕ್ಕೆ ಇಳಿಕೆಯಾಗಿತ್ತು.ವಿದ್ಯುತ್‍ಮಗ್ಗ ವಲಯದ ವ್ಯಾಪಾರಸ್ಥರಕಾನೂನಾತ್ಮಕ ಸವಾಲು ಕಾಯ್ದೆಯ ಪಟ್ಟಿಯಲ್ಲಿನ ಕೈಮಗ್ಗ ಉತ್ಪನ್ನಗಳ ಸಂಖ್ಯೆಯನ್ನುಕಡಿತಗೊಳಿಸಿತ್ತು.

90ರ ದಶಕದಿಂದೀಚೆಗೆ ಬದಲಾದ ಗ್ರಾಹಕರಅಭಿರುಚಿ, ಬದಲಾದ ವ್ಯಾಪಾರ ಪ್ರಕ್ರಿಯೆಹಾಗೂ ಚೀಣಾದಿಂದ ಆಮದಾಗುವಸುಂಕರಹಿತ ತೆಳು ಕೆಂಪು ರೇಷ್ಮೆ (ಕ್ರೀಪ್ ರೇಷ್ಮೆ)ಭಾರತೀಯ ನೇಕಾರ ಸಮುದಾಯವನ್ನುಸಂಕಷ್ಟಕ್ಕೀಡುಮಾಡಿತು. ಕ್ರಮೇಣ ನೇಕಾರರುಕಾರ್ಮಿಕರಾದರು. ಬದಲಾದ ಕಾಲಘಟ್ಟದಲ್ಲಿ,ಜೀವನ ನಡೆಸುವುದೂ ದುಸ್ತರವಾಗಿನೇಕಾಕರರು ಆರ್ಥಿಕವಾಗಿ ಕುಸಿದರು.ಸೋಜಿಗವೆಂದರೆ, 2015ರಿಂದೀಚೆಗೆ ಗ್ರಾಹಕರಆಸಕ್ತಿ ಮತ್ತೆ ಕೈಮಗ್ಗದ ಕಡೆ ತಿರುಗಿದೆ.ಆಶಾದಾಯಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕೃಷಿ ಹೊರತುಪಡಿಸಿ ಭಾರತದ ಎರಡನೇಅತಿಹೆಚ್ಚು ಕಾರ್ಮಿಕರು ತೊಡಗಿಕೊಂಡಿರುವಉದ್ಯಮ ಕೈಮಗ್ಗವಾಗಿದೆ. ವಿವಿಧಸಮುದಾಯಗಳ 43 ಲಕ್ಷ 30 ಸಾವಿರ ಮಂದಿ, 20 ಲಕ್ಷ 38 ಸಾವಿರ ಕುಟುಂಬಗಳು ಕೈಮಗ್ಗಘಟಕಗಳಲ್ಲಿ ದುಡಿಯುತ್ತಿದ್ದಾರೆ. ಇದು ದೇಶದಶೇ.15ರಷ್ಟು ಜವಳಿ ಉತ್ಪಾದನೆ ಮತ್ತು ಅಷ್ಟೇಪ್ರಮಾಣದ ರಫ್ತಿಗೆ ಕೊಡುಗೆ ನೀಡುತ್ತಿದೆ.ಜಗತ್ತಿನ ಶೇ. 95ರಷ್ಟು ಕೈಮಗ್ಗದ ಬಟ್ಟೆಭಾರತದ್ದೇ ಎಂಬುದು ಹೆಮ್ಮೆಯ ವಿಷಯ.

ನೇಕಾರರ ಹಿತದೃಷ್ಟಿಯಿಂದ, ಇತಿಹಾಸವನ್ನುಮರುಕಳಿಸುವ ಮತ್ತು ಕೈಮಗ್ಗವನ್ನು ಪ್ರಸ್ತುತಸಂದರ್ಭಕ್ಕೆ ತಕ್ಕಂತೆ ಸಜ್ಜುಗೊಳಿಸಲು ಸರ್ಕಾರಬದ್ಧವಾಗಿದೆ. 1905ರಲ್ಲೇ ಆರಂಭಿಸಲಾದಸ್ವದೇಶಿ ಚಳುವಳಿಯ ಸ್ಮರಣಾರ್ಥ ಆಗಸ್ಟ್ 7ನ್ನುಭಾರತದ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರು ರಾಷ್ಟ್ರೀಯ ಕೈಮಗ್ಗದಿನವನ್ನಾಗಿ 2015ರಲ್ಲಿ ಘೋಷಿಸಿದರು. ಅವರಚುನಾವಣಾ ಸಮಯದ ಘೋಷಣೆಯಾದಕೃಷಿಯಿಂದ ನೂಲಿಗೆ, ನೂಲಿನಿಂದ ಬಟ್ಟೆ,ಬಟ್ಟೆಯಿಂದ ಸೊಬಗು, ಸೊಬಗಿನಿಂದ ವಿದೇಶಕ್ಕೆಎಂಬ ಪ್ರತಿಜ್ಞೆಗೆ ಬದ್ಧರಾಗಿದ್ದಾರೆ.

ಪ್ರಧಾನಮಂತ್ರಿ ಅವರು ಅಂದೇ, “ಇಂಡಿಯಾಹ್ಯಾಂಡ್ ಲೂಮ್” ಬ್ರಾಂಡ್, ಐಹೆಚ್‍ಬಿಗೆಚಾಲನೆ ನೀಡಿದರು. ಗ್ರಾಹಕರ ವಿಶ್ವಾಸಗಳಿಸಲುಸಾಮಾಜಿಕ ಮತ್ತು ಪರಿಸರಸ್ನೇಹಿ ವಿಷಯಗಳು ಮಾತ್ರವಲ್ಲದೇ,  ಕಚ್ಚಾವಸ್ತು, ಉತ್ಪಾದನೆ, ನೇಯ್ಗೆಮತ್ತಿತರ ಅಂಶಗಳ ಗುಣಮಟ್ಟದ ಖಾತ್ರಿಗೆಐಹೆಚ್‍ಬಿಗೆ ಚಾಲನೆ ನೀಡಲಾಯಿತು.

ಶೀಘ್ರವೇ ಸಾಮಾಜಿಕ ಜಾಲತಾಣಗಳನ್ನುತಲುಪಿದ ಐಹೆಚ್‍ಬಿ, ಗ್ರಾಹಕರನ್ನು ಅದರಲ್ಲೂವಿಶೇಷವಾಗಿ ಯುವಜನತೆಯನ್ನು ತಲುಪಿದ್ದುಬಹುದೊಡ್ಡ ಸಾಧನೆ.

2016 ಜುಲೈನಲ್ಲಿ ಜವಳಿ ಸಚಿವಾಲಯದಹೊಣೆ ಹೊತ್ತ ಸಚಿವೆ ಸ್ಮೃತಿ ಇರಾನಿ ಅವರು“ನಾನು ಕೈಮಗ್ಗದ ಬಟ್ಟೆಗಳನ್ನು ತೊಡುತ್ತೇನೆ”ಎಂದು ಘೋಷಿಸುವುದರ ಮೂಲಕ ಸ್ವತಃಮಾದರಿಯಾಗಿ ಸಾಮಾಜಿಕ ತಾಣದಲ್ಲಿಆಂದೋಲನ ಆರಂಭಿಸಿದರು.

ಕೈಮಗ್ಗಗಳನ್ನು ಪುನರುಜ್ಜೀವನಗಳಿಸಲುಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.ನೇಕಾರರ ಆದಾಯವನ್ನು ಹೆಚ್ಚಿಸುವುದರತ್ತಒತ್ತು ನೀಡಿರುವ ಸರ್ಕಾರ, ಯುವಸಮುದಾಯವನ್ನು ಈ ಉದ್ಯೋಗಕ್ಕೆಸೆಳೆಯಲು ಪ್ರಯತ್ನ ನಡೆಸಿದೆ. ಕ್ಲಸ್ಟರ್ಮಟ್ಟದಲ್ಲಿ ನೇಕಾರರ ಸಂಘಟನೆ ಮತ್ತುಸಾಮಾನ್ಯ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸುವಮೂಲಕ ಮೂಲಭೂತ ಸೌಲಭ್ಯ ನೀಡಲುಸರ್ಕಾರ ಪ್ರಯತ್ನ ನಡೆಸಿದೆ.

ಕೈಮಗ್ಗವನ್ನು ಉತ್ತೇಜಿಸಲು ಜವಳಿ ಸಚಿವರು,ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ವಿವಿಧಮುಂಚೂಣಿ ವಿನ್ಯಾಸಕರನ್ನು ಒಂದೇವೇದಿಕೆಯಡಿ ತರುವ ವಿಶಿಷ್ಟ ಕಾರ್ಯಕ್ರಮಆಯೋಜಿಸಿದ್ದರು. ಒಂದು ಡಜನ್‍ಗೂಅಧಿಕವಾಗಿದ್ದ ಇವರನ್ನು ವಿವಿಧ ಕೈಮಗ್ಗಕ್ಲಸ್ಟರ್‍ಗಳಿಗೆ ನಿಯೋಜಿಸಿ, ಉತ್ಪನ್ನಗಳಅಭಿವೃದ್ಧಿ ಮತ್ತು ನೇಕಾರರ ಕೌಶಲ್ಯಾಭಿವೃದ್ಧಿದೃಷ್ಟಿಯಿಂದ ತರಬೇತಿ ನೀಡಲು ಉತ್ತೇಜಿಸಲಾಗಿತ್ತು.

ಇ-ವಾಣಿಜ್ಯದ ಮೂಲಕ ತಮ್ಮ ಉತ್ಪನ್ನಗಳನ್ನುಮಾರಾಟ ಮಾಡಲು ಉತ್ತೇಜನ ನೀಡುವಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ನೇಕಾರ ಸಮುದಾಯದ ಕುಟುಂಬಗಳವಿದ್ಯಾವಂತ ಯವಜನತೆಗೆ ಮಾರುಕಟ್ಟೆ ಮಾಹಿತಿನೀಡಿಕೆ, ಉತ್ಪಾದನೆ ಮತ್ತು ಜವಳಿಯ ನೇರಮಾರುಕಟ್ಟೆ ಪುರಸ್ಕರಿಸುವ ಮೂಲಕ ಈ ಯುವ ಸಮುದಾಯವನ್ನು ಉದ್ಯಮಶೀಲರನ್ನಾಗಿಸುವಗುರಿ ಹೊಂದಲಾಗಿದೆ. ಮಾರುಕಟ್ಟೆಯ ವಿಸ್ತರಣೆಮತ್ತು ಆದಾಯ ಹೆಚ್ಚಳ ದೃಷ್ಠಿಯಿಂದಕೈಮಗ್ಗವನ್ನು ಫ್ಯಾಷನ್ ಮತ್ತುಪ್ರವಾಸೋದ್ಯಮದೊಂದಿಗೆ ಸೇರಿಸಲಾಗುತ್ತಿದೆ.ಇದರೊಂದಿಗೆ, ವಿನ್ಯಾಸ ಅಭಿವೃದ್ಧಿ ಮತ್ತುಮಾರಾಟ ತಂತ್ರಗಳಿಗಾಗಿ ಖಾಸಗಿ ಕ್ಷೇತ್ರವನ್ನುಒಳಗೊಳ್ಳಿಸಿಕೊಳ್ಳಲಾಗುತ್ತಿದೆ.

ಎಲ್ಲಾ ರೀತಿಯ ಬಟ್ಟೆಗಳಿಗೆ ಭಾರತವನ್ನುಜಾಗತಿಕ ಕೇಂದ್ರವನ್ನಾಗಿಸುವ ಪ್ರಯತ್ನದೆಡೆಗೆಸರ್ಕಾರ ಶ್ರಮವಹಿಸುತ್ತಿದ್ದು, ಭಾರತದ ಸೀಮಿತ ಗ್ರಾಹಕರ ಬದಲಿಗೆ ಜಾಗತಿಕ ಮಾರುಕಟ್ಟೆಒದಗಿಸುವುದು ಇದರ ಉದ್ದೇಶವಾಗಿದೆ.

ನೇಕಾರರಿಗೆ ಅನುಕೂಲವಾಗುವ, ಉತ್ಪಾದನೆಹೆಚ್ಚಳಗೊಳಿಸುವ ಮತ್ತು ಗುಣಮಟ್ಟದಖಾತ್ರಿಗಾಗಿ ನೇಯ್ಗೆ ತಂತ್ರಜ್ಞಾನವನ್ನುಉನ್ನರೀಕರಣಗೊಳಿಸುವ ಪ್ರಯತ್ನಗಳುನಡೆಯುತ್ತಿವೆ. ನೇಕಾರಿಕಾ ಪರಂಪರೆಯಮುಂದುವರಿಕೆಗಾಗಿ ದೇಶಾದ್ಯಂತ ಇರುವ 9ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆಗಳುಮುಂದಿನ ತಲೆಮಾರಿಗೆ ಅನುಗುಣವಾಗಿ ವಿಶೇಷತರಬೇತಿಯನ್ನು ನೀಡಲಾಗುತ್ತಿವೆ.

ಆಧುನಿಕ ಯುಗದಲ್ಲಿ ಬದಲಾಗುತ್ತಿರುವಗ್ರಾಹಕರ ಅಗತ್ಯಕ್ಕೆ-ಅಭಿರುಚಿಗೆ ತಕ್ಕಂತೆ ದೇಶದಕೈಮಗ್ಗ ನೇಕಾರಿಕೆಯೂ ತನ್ನನ್ನು ಪ್ರತೀದಿನಸಜ್ಜುಗೊಳಿಸಿಕೊಳ್ಳುತ್ತಿದೆ. ಹಲವು ರೀತಿಯನಾವೀನ್ಯ ವಿನ್ಯಾಸಗಳು, ತೂಕದ ಸಾದಾ ಬಟ್ಟೆ(ಕೇಸ್‍ಮೆಂಟ್), ತೂಕದ ಹತ್ತಿ ಬಳಸುವಚಿತ್ರನೇಯ್ಗೆ ಮಗ್ಗದ ನೂಲು (ಜಾಕ್ವರ್ಡ್ ಮಗ್ಗ)ಮತ್ತು ರೇಷ್ಮೆ ಬಟ್ಟೆಗಳು, ಪುನರ್ಬಳಸಬಹುದಾದ ರತ್ನಗಂಬಳಿಗಳು ಇಂದಿನಬೇಡಿಕೆಯ ಕೈಮಗ್ಗ ಉತ್ಪನ್ನಗಳಾಗಿವೆ.ಕೈಮಗ್ಗಗಳು ಇಂದು ವೈವಿಧ್ಯಮಯಅಲಂಕಾರಿಕ ಗೃಹೋಪಯೋಗಿ ಹತ್ತಿ ಮತ್ತುರೇಷ್ಮೇ ಉತ್ಪನ್ನಗಳನ್ನು ನೀಡುತ್ತಿದೆ. ದೇಶದಿಂದರಫ್ತಾಗುತ್ತಿರುವ ಶೇ. 50ಕ್ಕೂ ಹೆಚ್ಚಿನಉತ್ಪನ್ನಗಳು ಗೃಹೋಪಯೋಗಿಜವಳಿಗಳಾಗಿವೆ. ಜಾಗತಿಕವಾಗಿ, ಕೈಮಗ್ಗದಬಗೆಗೆ ಸಮಾಜದ ಪ್ರಖ್ಯಾತರು ಮತ್ತುವಿನ್ಯಾಸಕಾರರು ಸಕಾರಾತ್ಮಕ ಹೇಳಿಕೆಗಳನ್ನುನೀಡುತ್ತಿದ್ದಾರೆ.

ಉತ್ಪಾದನೆಯ ವಿಕೇಂದ್ರೀಕರಣ ವ್ಯವಸ್ಥೆ ಮತ್ತು ಯಾವುದೇ ತೆರೆನಾದ ಕಲುಷಿತಉದ್ಯಮವಲ್ಲದ್ದರಿಂದ, ಕೈಮಗ್ಗ ಭವಿಷ್ಯದನೆಚ್ಚಿನ ಕ್ಷೇತ್ರವಾಗಿದೆ. ತನ್ನ ವಿಶಿಷ್ಟತೆ, ಶ್ರೀಮಂತಪರಂಪರೆಯ, ಕಡಿಮೆ ಬಂಡವಾಳ-ಉತ್ತಮ ಉತ್ಪಾದನೆ ಅನುಪಾತ, ಆವಿಷ್ಕಾರ ಮತ್ತುಪೂರೈಕೆದಾರೊಂದಿಗಿನ ಅವಶ್ಯಕತೆಗೆಹೊಂದಿಕೊಳ್ಳುವಿಕೆ ಕೈಮಗ್ಗದ ಧನಾತ್ಮಕಅಂಶಗಳಾಗಿವೆ.

***

ಲೇಖಕರು ಸ್ವತಂತ್ರ ಪತ್ರಕರ್ತ ಮತ್ತುಅಂಕಣಕಾರರಾಗಿದ್ದು, ಮುದ್ರಣ, ಆನ್‍ಲೈನ್,ರೇಡಿಯೋ ಮತ್ತು ಟೆಲಿವಿಷನ್‍ ಕ್ಷೇತ್ರಗಳಲ್ಲಿನಾಲ್ಕು ದಶಕಗಳ ಅನುಭವವಿದೆ. ಇವರುಅಭಿವೃದ್ಧಿ ವಿಷಯಗಳ ಮೇಲೆ ಬರೆಯುತ್ತಾರೆ.

ಈ ಲೇಖನದಲ್ಲಿ ವ್ಯಕ್ತಪಡಿಸಿರುವಅಭಿಪ್ರಾಯಗಳು ಲೇಖಕರದ್ದು.

ಮಾಧ್ಯಮಿಕ & ಉನ್ನತ ಶಿಕ್ಷಣ ರದ್ದಾಗದ ಮೂಲ ನಿಧಿ

2007ರ ವಿತ್ತ ಕಾಯಿದೆಯ ವಿಭಾಗ 136ರಡಿ ವಿಧಿಸುತ್ತಿರುವ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ತೆರಿಗೆ ಮೊತ್ತದಿಂದ ಏಕೈಕ, ರದ್ದಾಗದ ಮೂಲನಿಧಿ ಸೃಷ್ಟಿಗೆ ಸಚಿವ ಸಂಪುಟದ ಸಮ್ಮತಿ

2007ರ ವಿತ್ತ ಕಾಯಿದೆಯ ವಿಭಾಗ 136ರಡಿ ವಿಧಿಸುತ್ತಿರುವ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ತೆರಿಗೆ ಮೊತ್ತದಿಂದ ಏಕೈಕ, ರದ್ದಾಗದ ಮೂಲನಿಧಿ ಸೃಷ್ಟಿಗೆ ಸಚಿವ ಸಂಪುಟದ ಸಮ್ಮತಿ 
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಇಲಾಖೆಯ ಸಾರ್ವಜನಿಕ ಖಾತೆಯಲ್ಲಿ ಏಕೈಕ, ರದ್ದಾಗದೆ ಇರುವ ಮೂಲನಿಧಿ,"ಮಾಧ್ಯಮಿಕ್ ಮತ್ತು ಉಚ್ಛತರ್ ಶಿಕ್ಷಾ ಕೋಶ್(ಎಂಯುಎಸ್ಕೆ)'ಅನ್ನು ಸೃಷ್ಟಿಸಲು ಸಮ್ಮತಿ ನೀಡಲಾಗಿದೆ. ಇದಕ್ಕೆ "ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ತೆರಿಗೆ'ಯಿಂದ ಸಂಗ್ರಹವಾಗುವ ಎಲ್ಲ ಮೊತ್ತವನ್ನು ಜಮಾ ಮಾಡಲು ನಿರ್ಧರಿಸಲಾಗಿದೆ. 

ಎಂಯುಎಸ್ಕೆ ಅಡಿಯಲ್ಲಿ ಸಂಗ್ರಹವಾಗುವ ಮೊತ್ತವನ್ನು ಶೈಕ್ಷಣಿಕ ಕ್ಷೇತ್ರದ ನಾನಾ ಯೋಜನೆಗಳಿಗೆ ಬಳಸಬಹುದಾಗಿದ್ದು, ದೇಶದೆಲ್ಲೆಡೆಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಇದರ ಲಾಭ ಪಡೆಯಬಹುದಾಗಿದೆ. 

ಈ ನಿಧಿಗೆ ಸಂಬಂಧಪಟ್ಟಂತೆ, ಕೇಂದ್ರ ಸಂಪುಟವುವ ಕೆಳಗೆ ಉಲ್ಲೇಖಿಸಿದವಕ್ಕೆ ಸಮ್ಮತಿ ನೀಡಿದೆ. 

1) ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯವು ಈ ನಿಧಿಯ ನಿರ್ವಹಣೆ ಮತ್ತು ಮೇಲುಸ್ತುವಾರಿಯನ್ನು ವಹಿಸಲಿದೆ 

2) ತೆರಿಗೆಯಿಂದ ಕೂಡಿಬರುವ ಮೊತ್ತವನ್ನು ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣದಲ್ಲಿ ಚಾಲ್ತಿಯಲ್ಲಿರುವ ಯೋಜನೆಗಳಿಗೆ ಬಳಸಲಾಗುತ್ತದೆ. ಆದರೆ, ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯವು ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಕ್ಷೇತ್ರದ ಭವಿಷ್ಯದಲ್ಲಿನ ಯಾವುದೇ ಕಾರ್ಯಕ್ರಮ/ಯೋಜನೆಗೆ ಅಗತ್ಯವನ್ನು ಆಧರಿಸಿ, ನಿಗದಿಗೊಳಿಸಿದ ಪ್ರಕ್ರಿಯೆಗಳಿಗೆ ಅನುಗುಣವಾಗಿ ಈ ಅನುದಾನವನ್ನು ನೀಡಬಹುದಾಗಿದೆ. 

3) ಯಾವುದೇ ಆರ್ಥಿಕ ವರ್ಷದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಹಾಲಿ ಯೋಜನೆಗಳ ವೆಚ್ಚವನ್ನು ಪ್ರಾರಂಭದಲ್ಲಿ ಒಟ್ಟು ಆಯವ್ಯಯ ಬೆಂಬಲ(ಜಿಬಿಎಸ್) ದಿಂದ ಭರಿಸಲಾಗುತ್ತದೆ ಮತ್ತು ಜಿಬಿಎಸ್ ಖಾಲಿಯಾದ ಬಳಿಕವಷ್ಟೇ ಎಂಯುಎಸ್ಕೆಯಿಂದ ವೆಚ್ಚವನ್ನು ನೀಡಲಾಗುತ್ತದೆ. 

4) ಎಂಯುಎಸ್ಕೆಯನ್ನು ಭಾರತದ ಸಾರ್ವಜನಿಕ ಖಾತೆಯ ಬಡ್ಡಿರಹಿತ ವಿಭಾಗದ ಕಾಯ್ದಿಟ್ಟ ನಿಧಿ ಎಂದು ನಿರ್ವಹಿಸಲಾಗುತ್ತದೆ. ಇದರಿಂದ ಆಗುವ ಉಪಯೋಗವೆಂದರೆ, ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣಕ್ಕೆ ಅಗತ್ಯವಾದ ಸಂಪನ್ಮೂಲ ದೊರೆಯಲಿದೆ. ಜತೆಗೆ, ಆರ್ಥಿಕ ವರ್ಷದ ಅಂತ್ಯದಲ್ಲಿ ಖರ್ಚಾಗದೆ ಉಳಿದ ಹಣ ಬಳಕೆಯಾಗದೆ ವಾಪಸಾಗುವುದು ನಿಲ್ಲಲಿದೆ. 

ವಿಶೇಷತೆಗಳು: 

1. ಉದ್ದೇಶಿತ ರದ್ದಾಗದೆ ಇರುವ ಮೂಲನಿಧಿಗೆ ಜಮೆಯಾಗುವ ಮೊತ್ತವು ಮಾಧ್ಯಮಿಕ ಶಿಕ್ಷಣ ಮತ್ತು ಉನ್ನತ ಶಿಕ್ಷಣದ ವಿಸ್ತರಣೆಗೆ ಲಭ್ಯವಾಗಲಿದೆ. 

2. ಮಾಧ್ಯಮಿಕ ಶಿಕ್ಷಣ: ಪ್ರಸ್ತುತ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯವು ತೆರಿಗೆಯಿಂದ ಬರುವ ಮೊತ್ತವನ್ನು ಮಾಧ್ಯಮಿಕ ಶಿಕ್ಷಣದ ಚಾಲ್ತಿಯಲ್ಲಿರುವ ಯೋಜನೆಗಳಾದ- 

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ ಯೋಜನೆ ಮ ತ್ತು ಇತರ ರಾಷ್ಟ್ರೀಯ ಕಾರ್ಯಕ್ರಮಗಳಾದ ರಾಷ್ಟ್ರೀಯ ಜೀವನಾಧಾರ ಮತ್ತು ಮೆರಿಟ್ ಶಿಷ್ಯವೇತನ ಮತ್ತು ಹೆಣ್ಣು ಮಕ್ಕಳಿಗೆ ಮಾಧ್ಯಮಿಕ ಶಿಕ್ಷಣಕ್ಕೆ ನೆರವು ನೀಡುವ ರಾಷ್ಟ್ರೀಯ ಯೋಜನೆ. 

3. ಉನ್ನತ ಶಿಕ್ಷಣ: ತೆರಿಗೆ ಮೊತ್ತವನ್ನು ಚಾಲನೆಯಲ್ಲಿರುವ ಬಡ್ಡಿ ರಿಯಾಯಿತಿ ಯೋಜನೆಗಳು, ಖಾತ್ರಿ ನಿಧಿಗಳಿಗೆ ವಂತಿಗೆ, ಕಾಲೇಜು ಹಾಗೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಗಳಿಗೆ ಶಿಷ್ಯವೇತನ ನೀಡಲು, ರಾಷ್ಟ್ರೀಯ ಉಚ್ಛತರ ಶಿಕ್ಷಾ ಅಭಿಯಾನಕ್ಕೆ, ಶಿಷ್ಯವೇತನ(ವಿದ್ಯಾಲಯಗಳಿಗೆ ವಿಭಾಗ ಅನುದಾನ) ಮತ್ತು ಶಿಕ್ಷಕರು ಹಾಗೂ ತರಬೇತಿಯ ರಾಷ್ಟ್ರೀಯ ಆಂದೋಲನಕ್ಕೆ ನೀಡಲಾಗುವುದು. 

ಆದರೆ, ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯವು ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಕ್ಷೇತ್ರದ ಭವಿಷ್ಯದಲ್ಲಿನ ಯಾವುದೇ ಕಾರ್ಯಕ್ರಮ/ಯೋಜನೆಗೆ ಅಗತ್ಯವನ್ನು ಆಧರಿಸಿ ಮತ್ತು ನಿಗದಿಗೊಳಿಸಿದ ಪ್ರಕ್ರಿಯೆಗಳಿಗೆ ಅನುಗುಣವಾಗಿ ಈ ಅನುದಾನವನ್ನು ನೀಡಬಹುದಾಗಿದೆ. 

ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣಕ್ಕಾಗಿ ತೆರಿಗೆಯನ್ನು ವಿಧಿಸುವ ಉದ್ದೇಶವೇನೆಂದರೆ, ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಅಗತ್ಯವಾದ ಸಂಪನ್ಮೂಲವನ್ನು ಕ್ರೊಡೀಕರಿಸುವುದಾಗಿದೆ . 

ಪ್ರಸ್ತುತ ಪ್ರಾರಂಭಿಕ ಶಿಕ್ಷಾ ಕೋಶ್(ಪಿಎಸ್ಕೆ)ದಡಿ ಇರುವ ವ್ಯವಸ್ಥೆಯನ್ನೇ ಆಧರಿಸಿ, ಈ ನಿಧಿಯನ್ನು ನಿರ್ವಹಿಸಲಾಗುತ್ತದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಬಿಸಿಯೂಟ ಯೋಜನೆ (ಎಂಡಿಎಂ)ಮತ್ತು ಸರ್ವ ಶಿಕ್ಷಾ ಅಭಿಯಾನ(ಎಸ್ಎಸ್ಎ)ಕ್ಕೆ ಈ ತೆರಿಗೆಯನ್ನೇ ಬಳಸಲಾಗುತ್ತಿದೆ. 

ಹಿನ್ನೆಲೆ:

1) 10ನೇ ಯೋಜನೆಯಲ್ಲಿ ಎಲ್ಲ ಕೇಂದ್ರ ತೆರಿಗೆಗಳ ಮೇಲೆ 1.4.2004ರಿಂದ ಅನ್ವಯವಾಗುವಂತೆ ಶೇ.2 ರಷ್ಟು ಶಿಕ್ಷಣ ತೆರಿಗೆಯನ್ನು ವಿಧಿಸಲಾಯಿತು. ಮೂಲ ಶಿಕ್ಷಣ/ಪ್ರಾಥಮಿಕ ಶಿಕ್ಷಣಕ್ಕೆ ಹಾಲಿ ಇದ್ದ ಆಯವ್ಯಯ ಸಂಪನ್ಮೂಲದ ಜತೆಗೆ ಹೆಚ್ಚುವರಿ ಸಂಪನ್ಮೂಲವನ್ನು ಕ್ರೋಡೀಕರಿಸುವುದು ಇದರ ಉದ್ದೇಶವಾಗಿತ್ತು. ಇದೇ ರೀತಿ ಮಾಧ್ಯಮಿಕ ಶಿಕ್ಷಣಕ್ಕೆ ಪ್ರವೇಶವನ್ನು ಸಾರ್ವತ್ರೀಕರಿ ಸಬೇಕು ಮತ್ತು ಉನ್ನತ ಶಿಕ್ಷಣ ಕ್ಷೇತ್ರದ ವ್ಯಾಪ್ತಿಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರಕ್ಕೆ ಅನ್ನಿಸಿತು. ಆದ್ದರಿಂದ, 2007ರ ಆಯವ್ಯಯ ಭಾಷಣದಲ್ಲಿ ವಿತ್ತ ಸಚಿವರು ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣಕ್ಕಾಗಿ ಶೇ. 1 ರಷ್ಟು ಹೆಚ್ಚುವರಿ ತೆರಿಗೆಯನ್ನು ವಿಧಿಸುವ ಪ್ರಸ್ತಾವವನ್ನು ಮಂಡಿಸಿದರು. 

2) 2007ರ ವಿತ್ತ ಕಾಯಿದೆಯಡಿ ಶೇ. 1ರಷ್ಟು "ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ತೆರಿಗೆ"ಯನ್ನು ವಿಧಿಸಲು ನಿರ್ಧರಿಸಿ, "ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣಕ್ಕೆ ಹಣಕಾಸು ನೀಡುವ ಸರ್ಕಾರದ ವಾಗ್ದಾನವನ್ನು ಈಡೇರಿಸಲು' ನಿರ್ಧರಿಸಲಾಯಿತು(ಕಾಯಿದೆಯ 136ನೇ ವಿಭಾಗ). 

3) ಜುಲೈ 2010ರಲ್ಲಿ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯವು ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಇಲಾಖೆಯ ಸಾರ್ವಜನಿಕ ಖಾತೆಯಲ್ಲಿ ಏಕೈಕ, ರದ್ದಾಗದೆ ಇರುವ ಮೂಲನಿಧಿಯಾದ "ಮಾಧ್ಯಮಿಕ್ ಮತ್ತು ಉಚ್ಛತರ್ ಶಿಕ್ಷಾ ಕೋಶ್(ಎಂಯುಎಸ್ಕೆ)'ನ್ನು ಸೃಷ್ಟಿಸುವ ಕುರಿತ ಸಂಪುಟದ ಕರಡು ಟಿಪ್ಪಣಿಯನ್ನು ಹಂಚಿತು. ಸಂಬಂಧಪಟ್ಟ ಮಂತ್ರಾಲಯಗಳಾದ ಯೋಜನಾ ಆಯೋಗ, ಈಶಾನ್ಯ ಪ್ರಾಂತ್ಯಗಳ ಮಂತ್ರಾಲಯ, ಆರ್ಥಿಕ ವ್ಯವಹಾರಗಳ ಇಲಾಖೆ ಮತ್ತು ವಿತ್ತ ಮಂತ್ರಾಲಯದ ಅಭಿಪ್ರಾಯವನ್ನು ಕೇಳಲಾಯಿತು. ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣದ ಯೋಜನೆಗಳಿಗೆ ಆಯವ್ಯಯದಲ್ಲಿ ನೀಡುತ್ತಿರುವ ಮೊತ್ತವು ಶೇ. 1 ರಂತೆ ಸಂಗ್ರಹಿಸುವ ತೆರಿಗೆಗಿಂತ ಹೆಚ್ಚು ಇದೆ ಎಂಬ ಹಿನ್ನೆಲೆಯಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆ ಪ್ರಸ್ತಾವವನ್ನು ಒಪ್ಪಲಿಲ್ಲ. 

ಆದ್ದರಿಂದ, ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣದ ಕಾರ್ಯಕ್ರಮಗಳಿಗೆ ಆ ಆರ್ಥಿಕ ವರ್ಷದಲ್ಲಿ ಸಂಗ್ರಹವಾದ ತೆರಿಗೆಯನ್ನು ಸಂಪೂರ್ಣವಾಗಿ ನೀಡಲಾಗಿದೆ ಎಂದು ಪರಿಗಣಿಸಲಾಯಿತು. ಹೀಗಾಗಿ, ಹಿಂದಿನ ಅವಧಿಯ ಶೇ.1 ರಷ್ಟು ತೆರಿಗೆಯ ಮೊತ್ತವನ್ನು ಈಗ ನೀಡಲು ಲಭ್ಯವಿಲ್ಲ. 

4) ಹೀಗಾಗಿ, ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯವು "ಮಾಧ್ಯಮಿಕ್ ಮತ್ತು ಉಚ್ಛತರ್ ಶಿಕ್ಷಾ ಕೋಶ್(ಎಂಯುಎಸ್ಕೆ)' ಸೃಷ್ಟಿಸಲು ಆರ್ಥಿಕ ವ್ಯವಹಾರಗಳ ಇಲಾಖೆಯ ಅಂಗೀಕಾರವನ್ನು ಫೆಬ್ರವರಿ 11, 2016ರಲ್ಲಿ ಕೋರಿತು. ಎಂಯುಎಸ್ಕೆಯ ಸೃಷ್ಟಿಗೆ ಸಂಬಂಧಿಸಿದಂತೆ ಕರಡು ಸಂಪುಟ ಟಿಪ್ಪಣಿಯನ್ನು ಸಿದ್ಧಪಡಿಸಿ ಸಂಪುಟದ ಒಪ್ಪಿಗೆಯನ್ನು ಪಡೆಯಬೇಕೆಂದು ಆರ್ಥಿಕ ವ್ಯವಹಾರಗಳ ಇಲಾಖೆಯು ಜೂನ್ 20,2016ರಂದು ಸಮ್ಮತಿ ನೀಡಿತು.