ಭಾನುವಾರ, ಆಗಸ್ಟ್ 27, 2017

ಮಾಧ್ಯಮಿಕ & ಉನ್ನತ ಶಿಕ್ಷಣ ರದ್ದಾಗದ ಮೂಲ ನಿಧಿ

2007ರ ವಿತ್ತ ಕಾಯಿದೆಯ ವಿಭಾಗ 136ರಡಿ ವಿಧಿಸುತ್ತಿರುವ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ತೆರಿಗೆ ಮೊತ್ತದಿಂದ ಏಕೈಕ, ರದ್ದಾಗದ ಮೂಲನಿಧಿ ಸೃಷ್ಟಿಗೆ ಸಚಿವ ಸಂಪುಟದ ಸಮ್ಮತಿ

2007ರ ವಿತ್ತ ಕಾಯಿದೆಯ ವಿಭಾಗ 136ರಡಿ ವಿಧಿಸುತ್ತಿರುವ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ತೆರಿಗೆ ಮೊತ್ತದಿಂದ ಏಕೈಕ, ರದ್ದಾಗದ ಮೂಲನಿಧಿ ಸೃಷ್ಟಿಗೆ ಸಚಿವ ಸಂಪುಟದ ಸಮ್ಮತಿ 
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಇಲಾಖೆಯ ಸಾರ್ವಜನಿಕ ಖಾತೆಯಲ್ಲಿ ಏಕೈಕ, ರದ್ದಾಗದೆ ಇರುವ ಮೂಲನಿಧಿ,"ಮಾಧ್ಯಮಿಕ್ ಮತ್ತು ಉಚ್ಛತರ್ ಶಿಕ್ಷಾ ಕೋಶ್(ಎಂಯುಎಸ್ಕೆ)'ಅನ್ನು ಸೃಷ್ಟಿಸಲು ಸಮ್ಮತಿ ನೀಡಲಾಗಿದೆ. ಇದಕ್ಕೆ "ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ತೆರಿಗೆ'ಯಿಂದ ಸಂಗ್ರಹವಾಗುವ ಎಲ್ಲ ಮೊತ್ತವನ್ನು ಜಮಾ ಮಾಡಲು ನಿರ್ಧರಿಸಲಾಗಿದೆ. 

ಎಂಯುಎಸ್ಕೆ ಅಡಿಯಲ್ಲಿ ಸಂಗ್ರಹವಾಗುವ ಮೊತ್ತವನ್ನು ಶೈಕ್ಷಣಿಕ ಕ್ಷೇತ್ರದ ನಾನಾ ಯೋಜನೆಗಳಿಗೆ ಬಳಸಬಹುದಾಗಿದ್ದು, ದೇಶದೆಲ್ಲೆಡೆಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಇದರ ಲಾಭ ಪಡೆಯಬಹುದಾಗಿದೆ. 

ಈ ನಿಧಿಗೆ ಸಂಬಂಧಪಟ್ಟಂತೆ, ಕೇಂದ್ರ ಸಂಪುಟವುವ ಕೆಳಗೆ ಉಲ್ಲೇಖಿಸಿದವಕ್ಕೆ ಸಮ್ಮತಿ ನೀಡಿದೆ. 

1) ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯವು ಈ ನಿಧಿಯ ನಿರ್ವಹಣೆ ಮತ್ತು ಮೇಲುಸ್ತುವಾರಿಯನ್ನು ವಹಿಸಲಿದೆ 

2) ತೆರಿಗೆಯಿಂದ ಕೂಡಿಬರುವ ಮೊತ್ತವನ್ನು ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣದಲ್ಲಿ ಚಾಲ್ತಿಯಲ್ಲಿರುವ ಯೋಜನೆಗಳಿಗೆ ಬಳಸಲಾಗುತ್ತದೆ. ಆದರೆ, ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯವು ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಕ್ಷೇತ್ರದ ಭವಿಷ್ಯದಲ್ಲಿನ ಯಾವುದೇ ಕಾರ್ಯಕ್ರಮ/ಯೋಜನೆಗೆ ಅಗತ್ಯವನ್ನು ಆಧರಿಸಿ, ನಿಗದಿಗೊಳಿಸಿದ ಪ್ರಕ್ರಿಯೆಗಳಿಗೆ ಅನುಗುಣವಾಗಿ ಈ ಅನುದಾನವನ್ನು ನೀಡಬಹುದಾಗಿದೆ. 

3) ಯಾವುದೇ ಆರ್ಥಿಕ ವರ್ಷದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಹಾಲಿ ಯೋಜನೆಗಳ ವೆಚ್ಚವನ್ನು ಪ್ರಾರಂಭದಲ್ಲಿ ಒಟ್ಟು ಆಯವ್ಯಯ ಬೆಂಬಲ(ಜಿಬಿಎಸ್) ದಿಂದ ಭರಿಸಲಾಗುತ್ತದೆ ಮತ್ತು ಜಿಬಿಎಸ್ ಖಾಲಿಯಾದ ಬಳಿಕವಷ್ಟೇ ಎಂಯುಎಸ್ಕೆಯಿಂದ ವೆಚ್ಚವನ್ನು ನೀಡಲಾಗುತ್ತದೆ. 

4) ಎಂಯುಎಸ್ಕೆಯನ್ನು ಭಾರತದ ಸಾರ್ವಜನಿಕ ಖಾತೆಯ ಬಡ್ಡಿರಹಿತ ವಿಭಾಗದ ಕಾಯ್ದಿಟ್ಟ ನಿಧಿ ಎಂದು ನಿರ್ವಹಿಸಲಾಗುತ್ತದೆ. ಇದರಿಂದ ಆಗುವ ಉಪಯೋಗವೆಂದರೆ, ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣಕ್ಕೆ ಅಗತ್ಯವಾದ ಸಂಪನ್ಮೂಲ ದೊರೆಯಲಿದೆ. ಜತೆಗೆ, ಆರ್ಥಿಕ ವರ್ಷದ ಅಂತ್ಯದಲ್ಲಿ ಖರ್ಚಾಗದೆ ಉಳಿದ ಹಣ ಬಳಕೆಯಾಗದೆ ವಾಪಸಾಗುವುದು ನಿಲ್ಲಲಿದೆ. 

ವಿಶೇಷತೆಗಳು: 

1. ಉದ್ದೇಶಿತ ರದ್ದಾಗದೆ ಇರುವ ಮೂಲನಿಧಿಗೆ ಜಮೆಯಾಗುವ ಮೊತ್ತವು ಮಾಧ್ಯಮಿಕ ಶಿಕ್ಷಣ ಮತ್ತು ಉನ್ನತ ಶಿಕ್ಷಣದ ವಿಸ್ತರಣೆಗೆ ಲಭ್ಯವಾಗಲಿದೆ. 

2. ಮಾಧ್ಯಮಿಕ ಶಿಕ್ಷಣ: ಪ್ರಸ್ತುತ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯವು ತೆರಿಗೆಯಿಂದ ಬರುವ ಮೊತ್ತವನ್ನು ಮಾಧ್ಯಮಿಕ ಶಿಕ್ಷಣದ ಚಾಲ್ತಿಯಲ್ಲಿರುವ ಯೋಜನೆಗಳಾದ- 

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ ಯೋಜನೆ ಮ ತ್ತು ಇತರ ರಾಷ್ಟ್ರೀಯ ಕಾರ್ಯಕ್ರಮಗಳಾದ ರಾಷ್ಟ್ರೀಯ ಜೀವನಾಧಾರ ಮತ್ತು ಮೆರಿಟ್ ಶಿಷ್ಯವೇತನ ಮತ್ತು ಹೆಣ್ಣು ಮಕ್ಕಳಿಗೆ ಮಾಧ್ಯಮಿಕ ಶಿಕ್ಷಣಕ್ಕೆ ನೆರವು ನೀಡುವ ರಾಷ್ಟ್ರೀಯ ಯೋಜನೆ. 

3. ಉನ್ನತ ಶಿಕ್ಷಣ: ತೆರಿಗೆ ಮೊತ್ತವನ್ನು ಚಾಲನೆಯಲ್ಲಿರುವ ಬಡ್ಡಿ ರಿಯಾಯಿತಿ ಯೋಜನೆಗಳು, ಖಾತ್ರಿ ನಿಧಿಗಳಿಗೆ ವಂತಿಗೆ, ಕಾಲೇಜು ಹಾಗೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಗಳಿಗೆ ಶಿಷ್ಯವೇತನ ನೀಡಲು, ರಾಷ್ಟ್ರೀಯ ಉಚ್ಛತರ ಶಿಕ್ಷಾ ಅಭಿಯಾನಕ್ಕೆ, ಶಿಷ್ಯವೇತನ(ವಿದ್ಯಾಲಯಗಳಿಗೆ ವಿಭಾಗ ಅನುದಾನ) ಮತ್ತು ಶಿಕ್ಷಕರು ಹಾಗೂ ತರಬೇತಿಯ ರಾಷ್ಟ್ರೀಯ ಆಂದೋಲನಕ್ಕೆ ನೀಡಲಾಗುವುದು. 

ಆದರೆ, ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯವು ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಕ್ಷೇತ್ರದ ಭವಿಷ್ಯದಲ್ಲಿನ ಯಾವುದೇ ಕಾರ್ಯಕ್ರಮ/ಯೋಜನೆಗೆ ಅಗತ್ಯವನ್ನು ಆಧರಿಸಿ ಮತ್ತು ನಿಗದಿಗೊಳಿಸಿದ ಪ್ರಕ್ರಿಯೆಗಳಿಗೆ ಅನುಗುಣವಾಗಿ ಈ ಅನುದಾನವನ್ನು ನೀಡಬಹುದಾಗಿದೆ. 

ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣಕ್ಕಾಗಿ ತೆರಿಗೆಯನ್ನು ವಿಧಿಸುವ ಉದ್ದೇಶವೇನೆಂದರೆ, ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಅಗತ್ಯವಾದ ಸಂಪನ್ಮೂಲವನ್ನು ಕ್ರೊಡೀಕರಿಸುವುದಾಗಿದೆ . 

ಪ್ರಸ್ತುತ ಪ್ರಾರಂಭಿಕ ಶಿಕ್ಷಾ ಕೋಶ್(ಪಿಎಸ್ಕೆ)ದಡಿ ಇರುವ ವ್ಯವಸ್ಥೆಯನ್ನೇ ಆಧರಿಸಿ, ಈ ನಿಧಿಯನ್ನು ನಿರ್ವಹಿಸಲಾಗುತ್ತದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಬಿಸಿಯೂಟ ಯೋಜನೆ (ಎಂಡಿಎಂ)ಮತ್ತು ಸರ್ವ ಶಿಕ್ಷಾ ಅಭಿಯಾನ(ಎಸ್ಎಸ್ಎ)ಕ್ಕೆ ಈ ತೆರಿಗೆಯನ್ನೇ ಬಳಸಲಾಗುತ್ತಿದೆ. 

ಹಿನ್ನೆಲೆ:

1) 10ನೇ ಯೋಜನೆಯಲ್ಲಿ ಎಲ್ಲ ಕೇಂದ್ರ ತೆರಿಗೆಗಳ ಮೇಲೆ 1.4.2004ರಿಂದ ಅನ್ವಯವಾಗುವಂತೆ ಶೇ.2 ರಷ್ಟು ಶಿಕ್ಷಣ ತೆರಿಗೆಯನ್ನು ವಿಧಿಸಲಾಯಿತು. ಮೂಲ ಶಿಕ್ಷಣ/ಪ್ರಾಥಮಿಕ ಶಿಕ್ಷಣಕ್ಕೆ ಹಾಲಿ ಇದ್ದ ಆಯವ್ಯಯ ಸಂಪನ್ಮೂಲದ ಜತೆಗೆ ಹೆಚ್ಚುವರಿ ಸಂಪನ್ಮೂಲವನ್ನು ಕ್ರೋಡೀಕರಿಸುವುದು ಇದರ ಉದ್ದೇಶವಾಗಿತ್ತು. ಇದೇ ರೀತಿ ಮಾಧ್ಯಮಿಕ ಶಿಕ್ಷಣಕ್ಕೆ ಪ್ರವೇಶವನ್ನು ಸಾರ್ವತ್ರೀಕರಿ ಸಬೇಕು ಮತ್ತು ಉನ್ನತ ಶಿಕ್ಷಣ ಕ್ಷೇತ್ರದ ವ್ಯಾಪ್ತಿಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರಕ್ಕೆ ಅನ್ನಿಸಿತು. ಆದ್ದರಿಂದ, 2007ರ ಆಯವ್ಯಯ ಭಾಷಣದಲ್ಲಿ ವಿತ್ತ ಸಚಿವರು ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣಕ್ಕಾಗಿ ಶೇ. 1 ರಷ್ಟು ಹೆಚ್ಚುವರಿ ತೆರಿಗೆಯನ್ನು ವಿಧಿಸುವ ಪ್ರಸ್ತಾವವನ್ನು ಮಂಡಿಸಿದರು. 

2) 2007ರ ವಿತ್ತ ಕಾಯಿದೆಯಡಿ ಶೇ. 1ರಷ್ಟು "ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ತೆರಿಗೆ"ಯನ್ನು ವಿಧಿಸಲು ನಿರ್ಧರಿಸಿ, "ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣಕ್ಕೆ ಹಣಕಾಸು ನೀಡುವ ಸರ್ಕಾರದ ವಾಗ್ದಾನವನ್ನು ಈಡೇರಿಸಲು' ನಿರ್ಧರಿಸಲಾಯಿತು(ಕಾಯಿದೆಯ 136ನೇ ವಿಭಾಗ). 

3) ಜುಲೈ 2010ರಲ್ಲಿ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯವು ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಇಲಾಖೆಯ ಸಾರ್ವಜನಿಕ ಖಾತೆಯಲ್ಲಿ ಏಕೈಕ, ರದ್ದಾಗದೆ ಇರುವ ಮೂಲನಿಧಿಯಾದ "ಮಾಧ್ಯಮಿಕ್ ಮತ್ತು ಉಚ್ಛತರ್ ಶಿಕ್ಷಾ ಕೋಶ್(ಎಂಯುಎಸ್ಕೆ)'ನ್ನು ಸೃಷ್ಟಿಸುವ ಕುರಿತ ಸಂಪುಟದ ಕರಡು ಟಿಪ್ಪಣಿಯನ್ನು ಹಂಚಿತು. ಸಂಬಂಧಪಟ್ಟ ಮಂತ್ರಾಲಯಗಳಾದ ಯೋಜನಾ ಆಯೋಗ, ಈಶಾನ್ಯ ಪ್ರಾಂತ್ಯಗಳ ಮಂತ್ರಾಲಯ, ಆರ್ಥಿಕ ವ್ಯವಹಾರಗಳ ಇಲಾಖೆ ಮತ್ತು ವಿತ್ತ ಮಂತ್ರಾಲಯದ ಅಭಿಪ್ರಾಯವನ್ನು ಕೇಳಲಾಯಿತು. ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣದ ಯೋಜನೆಗಳಿಗೆ ಆಯವ್ಯಯದಲ್ಲಿ ನೀಡುತ್ತಿರುವ ಮೊತ್ತವು ಶೇ. 1 ರಂತೆ ಸಂಗ್ರಹಿಸುವ ತೆರಿಗೆಗಿಂತ ಹೆಚ್ಚು ಇದೆ ಎಂಬ ಹಿನ್ನೆಲೆಯಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆ ಪ್ರಸ್ತಾವವನ್ನು ಒಪ್ಪಲಿಲ್ಲ. 

ಆದ್ದರಿಂದ, ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣದ ಕಾರ್ಯಕ್ರಮಗಳಿಗೆ ಆ ಆರ್ಥಿಕ ವರ್ಷದಲ್ಲಿ ಸಂಗ್ರಹವಾದ ತೆರಿಗೆಯನ್ನು ಸಂಪೂರ್ಣವಾಗಿ ನೀಡಲಾಗಿದೆ ಎಂದು ಪರಿಗಣಿಸಲಾಯಿತು. ಹೀಗಾಗಿ, ಹಿಂದಿನ ಅವಧಿಯ ಶೇ.1 ರಷ್ಟು ತೆರಿಗೆಯ ಮೊತ್ತವನ್ನು ಈಗ ನೀಡಲು ಲಭ್ಯವಿಲ್ಲ. 

4) ಹೀಗಾಗಿ, ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯವು "ಮಾಧ್ಯಮಿಕ್ ಮತ್ತು ಉಚ್ಛತರ್ ಶಿಕ್ಷಾ ಕೋಶ್(ಎಂಯುಎಸ್ಕೆ)' ಸೃಷ್ಟಿಸಲು ಆರ್ಥಿಕ ವ್ಯವಹಾರಗಳ ಇಲಾಖೆಯ ಅಂಗೀಕಾರವನ್ನು ಫೆಬ್ರವರಿ 11, 2016ರಲ್ಲಿ ಕೋರಿತು. ಎಂಯುಎಸ್ಕೆಯ ಸೃಷ್ಟಿಗೆ ಸಂಬಂಧಿಸಿದಂತೆ ಕರಡು ಸಂಪುಟ ಟಿಪ್ಪಣಿಯನ್ನು ಸಿದ್ಧಪಡಿಸಿ ಸಂಪುಟದ ಒಪ್ಪಿಗೆಯನ್ನು ಪಡೆಯಬೇಕೆಂದು ಆರ್ಥಿಕ ವ್ಯವಹಾರಗಳ ಇಲಾಖೆಯು ಜೂನ್ 20,2016ರಂದು ಸಮ್ಮತಿ ನೀಡಿತು. 

ಭಾರತದ ಅಣುಶಕ್ತಿ ಕಾರ್ಯಕ್ರಮ

ಭಾರತದ ಅಣುಶಕ್ತಿ ಕಾರ್ಯಕ್ರಮ

ಸ್ವಾತಂತ್ರ್ಯದ 70 ವರ್ಷಗಳು – ವಿಶೇಷ ಲೇಖನ

ಭಾರತದ ಅಣುಶಕ್ತಿ ಕಾರ್ಯಕ್ರಮ

* ಡಾ. ಎಂ. ಆರ್. ಶ್ರೀನಿವಾಸನ್

 

ಭಾರತದ ಮೊದಲ ಅಣು ಪರಿವರ್ತಕ(ರಿಯಾಕ್ಟರ್) ಅಪ್ಸರ 1956ರ ಆಗಸ್ಟ್ 4ರಂದು ಕಾರ್ಯಾಚರಣೆ ಆರಂಭಿಸುವ ಮೂಲಕ ದೇಶ ಅಣುಶಕ್ತಿ ಯುಗ, ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಪರಮಾಣು ಯುಗವನ್ನು ಪ್ರವೇಶಿಸಿತು. ಈ ಪರಿವರ್ತಕವನ್ನು ಭಾರತವೇ ವಿನ್ಯಾಸಗೊಳಿಸಿತ್ತು ಮತ್ತು ಅದನ್ನು ನಿರ್ಮಿಸಿತು. ಬ್ರಿಟನ್‌ನೊಂದಿಗೆ ಮಾಡಿಕೊಂಡ ಕರಾರು ಒಪ್ಪಂದದಂತೆ ಪೂರೈಕೆ ಮಾಡಲಾದ ಅಣು ಇಂಧನವನ್ನು ಬಳಸಿ, ಪರಿವರ್ತಕವನ್ನು ನಡೆಸಲಾಗುತ್ತಿತ್ತು. ಸಂಶೋಧನೆ ಉದ್ದೇಶದ ನಮ್ಮ ಎರಡನೇ ಅಣು ಪರಿವರ್ತಕ ಸೀರುಸ್(ಸಿಐಆರ್‌ಯುಎಸ್)ನನ್ನು ಕೆನಡಾದ ಸಹಕಾರದೊಂದಿಗೆ ನಿರ್ಮಿಸಲಾಯಿತು ಮತ್ತು ಅದು 1960ರ ಆರಂಭದಲ್ಲಿ ಕಾರ್ಯಾಚರಣೆ ಆರಂಭಿಸಿತು. ಈ ಸಂಶೋಧನಾ ಪರಿವರ್ತಕಗಳು ನ್ಯೂಟ್ರಾನ್ ಭೌತಶಾಸ್ತ್ರ, ನ್ಯೂಟ್ರಾನ್ ಉದ್ದೀಪನಗೊಳಿಸುವುದರಿಂದ ವಸ್ತುಗಳ ಮೇಲಾಗುವ ಬದಲಾವಣೆಗಳನ್ನು ಅರಿಯಲು ಮತ್ತು ರೇಡಿಯೋ ಐಸೋಟೋಪ್‌ಗಳ ಉತ್ಪಾದನೆ ಮತ್ತಿತರವುಗಳ ಮೇಲೆ ಶೋಧ ನಡೆಸಲು ಒಂದು ವೇದಿಕೆಯಾಗಿದೆ. ಇವು ನಾನಾ ಕಾಯಿಲೆಗಳ ಪತ್ತೆಗೆ ಮತ್ತು ಚಿಕಿತ್ಸೆಗೆ ಅದರಲ್ಲೂ ವಿಶೇಷವಾಗಿ ಕ್ಯಾನ್ಸರ್‌ಗೆ ಅತ್ಯಂತ ಉಪಕಾರಿ ಮತ್ತು ಇದು ಕೈಗಾರಿಕೆಯಲ್ಲೂ ಅತ್ಯಂತ ಪ್ರಯೋಜನಕಾರಿಯಾಗಿದ್ದು, ಅದರಲ್ಲೂ ವಿಶೇಷವಾಗಿ ವಿಧ್ವಂಸಕಾರಿಯಲ್ಲದ ಉದ್ದೇಶದ ಪರೀಕ್ಷೆಗಳಿಗೆ ನೆರವಾಗಲಿದೆ.

 

1969ರಲ್ಲಿ           ತಾರಾಪುರದಲ್ಲಿ ಎರಡು ಪರಿವರ್ತಕಗಳು ಕಾರ್ಯಾರಂಭ ಮಾಡುವ ಮೂಲಕ ಅಣು ಇಂಧನವನ್ನು ಬಳಸಿ, ವಿದ್ಯುತ್ ಉತ್ಪಾದಿಸುವ ಕೆಲಸ ಶುರುವಾಯಿತು. ತಾರಾಪುರ ಅಣುಶಕ್ತಿ ಕೇಂದ್ರ (ಟಿಎಪಿಎಸ್) ಅನ್ನು ಅಮೆರಿಕದ ಜನರಲ್ ಎಲೆಕ್ಟ್ರಿಕಲ್ ಕಂಪನಿ ನಿರ್ಮಿಸಿದ್ದು, ಅದೀಗ 50 ವರ್ಷಗಳ ಸೇವೆ ನೀಡಿದಂತಾಗಿದೆ. ತಾರಾಪುರ ದೇಶದಲ್ಲಿ ಅತಿ ಕಡಿಮೆ ದರದಲ್ಲಿ ಜಲವಿದ್ಯುದೇತರ ವಿದ್ಯುತ್ ಶಕ್ತಿಯನ್ನು ಪೂರೈಸುತ್ತಿದೆ. ಭಾರತದ ಎರಡನೇ ಅಣುಶಕ್ತಿ ಕೇಂದ್ರ ರಾಜಸ್ಥಾನ ಸಮೀಪದ ಕೋಟಾದಲ್ಲಿ ತಲೆ ಎತ್ತಿತು, ಅದರ ಮೊದಲ ಘಟಕ 1972ರ ಆಗಸ್ಟ್ ನಲ್ಲಿ ಕಾರ್ಯಾರಂಭವಾಯಿತು. ರಾಜಸ್ಥಾನದಲ್ಲಿನ ಈ ಕೇಂದ್ರದ ಮೊದಲೆರಡು ಘಟಕಗಳನ್ನು, ನೈಸರ್ಗಿಕ ಯುರೇನಿಯಂ ಬಳಸಿ ಪರಿವರ್ತಕಗಳನ್ನು ಸ್ಥಾಪಿಸುವಲ್ಲಿ ಮುಂಚೂಣಿಯಲ್ಲಿರುವ ಕೆನಡಾದ ಸಹಭಾಗಿತ್ವದಲ್ಲಿ ನಿರ್ಮಿಸಲಾಗಿದೆ. ಆದರೆ ಇವುಗಳಿಗೆ ಗಡುಸು ನೀರು ಅಗತ್ಯವಿದೆ. ಪ್ರಸ್ತುತ ಸಾಮಾನ್ಯ ನೀರನ್ನು ಅತಿ ಕಡಿಮೆ ಪ್ರಮಾಣದಲ್ಲಿ ಬಳಸಲಾಗುತ್ತಿದ್ದು, ಸಂಕೀರ್ಣ ಪ್ರಕ್ರಿಯೆಯ ಮೂಲಕ ಅದನ್ನು ಆಯ್ದು ಹೊರತೆಗೆಯಲಾಗುತ್ತದೆ.

 

ಭಾರತದ ಮೂರನೇ ಅಣುಶಕ್ತಿ ಕೇಂದ್ರ ಚೆನ್ನೈ ಸಮೀಪದ ಕಲ್ಪಾಕಂನಲ್ಲಿ ಆರಂಭವಾಯಿತು. ಇದು ಭಾರತವೇ ತನ್ನ ಸ್ವಂತಶಕ್ತಿಯ ಮೇಲೆ ವಿನ್ಯಾಸಗೊಳಿಸಿ, ನಿರ್ಮಿಸಿದ ಮೊದಲ ಘಟಕವಾಗಿದೆ. ಅದಕ್ಕೆ ಬೇಕಾದ  ಎಲ್ಲ ಸಾಮಗ್ರಿ, ಸಲಕರಣೆಗಳು ಮತ್ತು ಯಂತ್ರೋಪಕರಣಗಳನ್ನೂ ಸಹ ದೇಶದಲ್ಲಿಯೇ ಉತ್ಪಾದಿಸಲಾಗಿದೆ. ಆ ಕಾಲದಲ್ಲಿ ಅಣುಶಕ್ತಿ ಕೇಂದ್ರಗಳಿಗೆ ಬೇಕಾದ ಸಂಕೀರ್ಣವಾದ ಯಂತ್ರೋಪಕರಣಗಳನ್ನು  ಉತ್ಪಾದಿಸುವಲ್ಲಿ ಯಾವುದೇ ಅನುಭವವಿಲ್ಲದ ಭಾರತೀಯ ಕೈಗಾರಿಕೆಗಳಿಗೆ ಇದೊಂದು ಭಾರೀ ಸವಾಲಾಗಿತ್ತು. ವಿಶೇಷ ಸಾಮಗ್ರಿಗಳಾದ ಅಣುಇಂಧನ, ಜಿರ್‌ಕೋನಿಯಂ ಬಿಡಿ ಭಾಗಗಳು ಮತ್ತು ಗಡುಸು ನೀರನ್ನು ಭಾಭಾ ಅಣುಶಕ್ತಿ ಸಂಶೋಧನಾ ಕೇಂದ್ರದ ಪ್ರಯೋಗಾಲಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲಾಯಿತು. ಮೊದಲು ಪ್ರಾಯೋಗಿಕವಾಗಿ ಘಟಕಗಳನ್ನು ನಿರ್ಮಿಸಿ ನಂತರ ಅವುಗಳನ್ನು ಕೈಗಾರಿಕಾ ಘಟಕಗಳನ್ನಾಗಿ ಮೇಲ್ದರ್ಜೆಗೇರಿಸಲಾಯಿತು. ಕೈಗಾರಿಕೆಗಳೂ ಕೂಡ ವಿಶೇಷ ಉತ್ಪಾದನಾ ಪ್ರಕ್ರಿಯೆಗಾಗಿ ತರಬೇತಿ ನೀಡಿದ್ದಲ್ಲದೆ, ನಾವಿನ್ಯ ಗುಣಮಟ್ಟ ಪರೀಕ್ಷಾ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಲಾಯಿತು. ಹಾಗಾಗಿ ಮದ್ರಾಸ್ ಅಣುಶಕ್ತಿ ಕೇಂದ್ರ(ಎಂಇಪಿಎಸ್)ನ ಮೊದಲ ಘಟಕ 1983ರ ಜುಲೈನಲ್ಲಿ ಆರಂಭವಾಯಿತು. ಆ ಮೂಲಕ ಭಾರತ ತಾನೇ ವಿನ್ಯಾಸಗೊಳಿಸಿ, ಅಣುಶಕ್ತಿ ಕೇಂದ್ರಗಳನ್ನು ನಿರ್ಮಿಸುವಂತಹ ಸಣ್ಣ ರಾಷ್ಟ್ರಗಳ ಗುಂಪಿಗೆ ಸೇರ್ಪಡೆಗೊಂಡಿತು.

 

ನಮ್ಮ ನಾಲ್ಕನೇ ಅಣುಶಕ್ತಿ ಕೇಂದ್ರ ಗಂಗಾನದಿಯ ತಟದ ನರೋರಾದಲ್ಲಿ ತಲೆ ಎತ್ತಿತು. ಈ ಘಟಕದ ಸುತ್ತಮುತ್ತ ಭೂಕಂಪನದ ಅನುಭವವಾಗುತ್ತಿತ್ತು. ಹಾಗಾಗಿ ಸಂಭಾವ್ಯ ಭೂಕಂಪವನ್ನು ಎದುರಿಸಿ ನಿಲ್ಲಬಹುದಾದ ಸಾಮರ್ಥ್ಯವಿರುವ ಘಟಕದ ವಿನ್ಯಾಸವನ್ನು ರೂಪಿಸಲಾಯಿತು. 220 ಮೆಗಾವ್ಯಾಟ್ ಸಾಮರ್ಥ್ಯದ ಘಟಕಗಳ ಮಾದರಿ ವಿನ್ಯಾಸವನ್ನು ಸಿದ್ಧಪಡಿಸಲಾಗಿದ್ದು, ದೇಶದ ಹಲವು ಸ್ಥಳಗಳಲ್ಲಿ ಅದನ್ನು ನಿರ್ಮಿಸಬಹುದಾಗಿತ್ತು. ನರೋರಾದಲ್ಲಿ ಮೊದಲ ಘಟಕ 1989ರ ಅಕ್ಟೋಬರ್‌ನಲ್ಲಿ ಕಾರ್ಯಾರಂಭ ಮಾಡಿತ್ತು. ಮುಂದಿನ 20 ವರ್ಷಗಳಲ್ಲಿ ಭಾರತ ತನ್ನದೇ `ಒತ್ತಡದ ಭಾರೀ ಜಲ ಪರಿವರ್ತಕ’ (ಪ್ರೆಷರೈಸಡ್ ಹೆವಿ ವಾಟರ್ ರಿಯಾಕ್ಟರ್) ತಂತ್ರಜ್ಞಾನವನ್ನು ಬಳಸಿ, 220 ಮೆಗಾವ್ಯಾಟ್ ಸಾಮರ್ಥ್ಯದ 11 ಮತ್ತು 540 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಘಟಕಗಳನ್ನು ನಿರ್ಮಿಸಿ, ಅವುಗಳು ಕಾರ್ಯಾರಂಭ ಮಾಡಿದವು. ಈ ಸಾಧನೆ ನಿಟ್ಟಿನಲ್ಲಿ ಭಾರತ ಭಾರೀ ಗಡುಸು ನೀರು ಉತ್ಪಾದನೆ ಸಾಮರ್ಥ್ಯವನ್ನು ಮತ್ತು ಇಂಧನ ಉತ್ಪಾದನೆಯನ್ನು ಹೆಚ್ಚಿಸಿಕೊಂಡಿತಲ್ಲದೆ, ಜಾರ್ಖಂಡ್‌ನಲ್ಲಿ ಯುರೇನಿಯಂ ಗಣಿಗಾರಿಕೆಯನ್ನೂ ಆರಂಭಿಸಿತು. ಭಾರತದ ಅಣುಶಕ್ತಿ ಕಾರ್ಯಕ್ರಮಕ್ಕೆ ಎಲ್ಲ ಅಗತ್ಯ ಯಂತ್ರೋಪಕರಣಗಳು ಹಾಗೂ ಸಲಕರಣೆಗಳನ್ನು ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ತನ್ನದಾಗಿಸಿಕೊಂಡಿತು.

 

ಭಾರತ ಕ್ಷಿಪ್ರಗತಿಯಲ್ಲಿ ಅಣುಸಾಮರ್ಥ್ಯವನ್ನು ಹೊಂದಲು ತೀವ್ರ ಆಸಕ್ತಿ ತಾಳಿತ್ತು. ಅದು 1988ರಲ್ಲಿ ಹಿಂದಿನ ಸೋವಿಯತ್ ಒಕ್ಕೂಟದೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡು ಯುರೇನಿಯಂ ಇಂಧನವನ್ನು ಬಳಸಿ, ಒಂದು ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಎರಡು ಘಟಕಗಳನ್ನು ನಿರ್ಮಿಸಲು ಮುಂದಾಯಿತು. ಆದರೆ 1990ರಲ್ಲಿ ಸೋವಿಯತ್ ಒಕ್ಕೂಟ ಕಳಚಿ ಬೀಳುವುದರೊಂದಿಗೆ ಮತ್ತು ಭಾರತ ಆ ಸಮಯದಲ್ಲಿ ಎದುರಿಸುತ್ತಿದ್ದ ಆರ್ಥಿಕ ಸಂಕಷ್ಟಗಳಿಂದಾಗಿ ಭಾರತ ಮತ್ತು ರಷ್ಯಾ ನಡುವಿನ ಈ ಯೋಜನೆಗೆ ಹಿನ್ನಡೆಯಾಯಿತು. 1998ರಲ್ಲಿ ಭಾರತ ಮತ್ತು ರಷ್ಯಾ ಆ ಯೋಜನೆಯನ್ನು ಮತ್ತೆ ಕೈಗೆತ್ತಿಕೊಳ್ಳಲು ನಿರ್ಧರಿಸಿದವು. 2003ರಲ್ಲಿ ಕೂಡಂಕುಳಂನಲ್ಲಿ  ಯೋಜನೆ ಕಾರ್ಯಾರಂಭವಾಯಿತು. ಮೊದಲ ಘಟಕದ ಕಾಮಗಾರಿ ಪ್ರಗತಿಯ ವೇಳೆ ಜಪಾನ್‌ನ ಫುಕುಶಿಮಾದಲ್ಲಿ 2011ರ ಮಾರ್ಚ್‌ನಲ್ಲಿ ಒಂದು ದುರ್ಘಟನೆ ನಡೆಯಿತು. ಇದರಿಂದಾಗಿ ನೆರೆಹೊರೆಯ ಜನರು ಯೋಜನೆಗೆ ಭಾರೀ ಪ್ರತಿರೋಧ ಒಡ್ಡಿದರು. ಮತ್ತೆ ಕೂಡಂಕುಳಂನಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿಸಿ ಅವರಿಗೆ ತಾಳ್ಮೆಯಿಂದ ವಿವರಿಸಲು ಸಾಕಷ್ಟು ಸಮಯ ಪಡೆದುಕೊಂಡಿತು. ಜಪಾನ್ ಘಟಕದಲ್ಲಿ ಆಗಿರುವುದಕ್ಕೂ ಇಲ್ಲಿನ ಘಟಕದ ಸ್ಥಿತಿಗತಿಗಳಿಗೂ ಸಂಪೂರ್ಣ ವ್ಯತ್ಯಾಸವಿರುವುದನ್ನು ಜನರಿಗೆ ತಿಳಿಯಪಡಿಸಲಾಯಿತು. ಕೂಡಂಕುಳಂನ ಮೊದಲ ಘಟಕ 2014ರಲ್ಲಿ ಮತ್ತು ಎರಡನೇ ಘಟಕ 2016ರಲ್ಲಿ ಕಾರ್ಯಾರಂಭ ಮಾಡಿದವು.

 

ಇದೀಗ ಭಾರತದಲ್ಲಿ 21 ಅಣು ಪರಿವರ್ತಕಗಳು ಕೆಲಸ ಮಾಡುತ್ತಿವೆ. ಕೆನಡಾದಿಂದ ಅಣು ಇಂಧನ ಪೂರೈಕೆಯೊಂದಿಗೆ ರಾಜಸ್ತಾನದಲ್ಲಿ ಆರಂಭವಾಗಿದ್ದ ಘಟಕ ಕೆಲವು ಯಂತ್ರಗಳ ಕೊರತೆಯಿಂದಾಗಿ ಸದ್ಯ ಕಾರ್ಯನಿರ್ವಹಿಸುತ್ತಿಲ್ಲ. ಇತರೆ ಘಟಕಗಳ ಒಟ್ಟಾರೆ ಸಾಮರ್ಥ್ಯ 6700 ಮೆಗಾ ವ್ಯಾಟ್ ಆಗಿದ್ದು, ಅವುಗಳೆಲ್ಲಾ ಯಶಸ್ವಿಯಾಗಿ ಕಾರ‍್ಯನಿರ್ವಹಿಸಲಿವೆ. ಕಳೆದ ಐದು ವರ್ಷಗಳಲ್ಲಿ 2011ರಿಂದ 2016ರವರೆಗೆ ಘಟಕಗಳ ಸಾಮರ್ಥ್ಯ ಶೇ.78ರಷ್ಟು ಬಳಕೆಯಾಗುತ್ತಿದೆ. ಈ ಅಣು ವಿದ್ಯುತ್ ಘಟಕಗಳು ಎರಡರಿಂದ ಮೂರೂವರೆ ರೂಪಾಯಿಗೆ  ಪ್ರತಿ ಕಿಲೋ ವ್ಯಾಟ್ ವಿದ್ಯುತ್ ಅನ್ನು ಪೂರೈಕೆ ಮಾಡುತ್ತಿವೆ. ತಾರಾಪುರದಲ್ಲಿನ ವಿದ್ಯುತ್ ಉತ್ಪಾದನಾ ವೆಚ್ಚ ಒಂದು ಕಿಲೋವ್ಯಾಟ್‌ಗೆ ಒಂದು ರೂಪಾಯಿ ಮಾತ್ರ, ಕೂಡಂಕುಳಂನ ಒಂದು ಮತ್ತು ಎರಡನೇ ಘಟಕಗಳು 4 ರೂಪಾಯಿನಂತೆ ಪ್ರತಿ ಕಿಲೋವ್ಯಾಟ್ ವಿದ್ಯುತ್ ಒದಗಿಸುತ್ತಿದೆ.

 

ಭಾರತವೇ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದ ಅಣುಶಕ್ತಿ ಕೇಂದ್ರದ ಒಂದು ಮೆಗಾವ್ಯಾಟ್ ಸಾಮರ್ಥ್ಯದ ಘಟಕ ನಿರ್ಮಾಣಕ್ಕೆ ತಗುಲುವ ವೆಚ್ಚ 16.5 ಕೋಟಿ ರೂಪಾಯಿ. ರಷ್ಯಾದ ಪರಿವರ್ತಕಗಳಾದರೆ ಪ್ರತಿ ಮೆಗಾವ್ಯಾಟ್‌ಗೆ ತಗುಲುವ ವೆಚ್ಚ 22 ಕೋಟಿ ರೂಪಾಯಿ. ರಷ್ಯಾದ ರಿಯಾಕ್ಟರ್‌ಗಳಿಗೆ ಹೋಲಿಸಿದರೆ ಭಾರತೀಯ ಪರಿವರ್ತಕಗಳಿಗೆ ತಗುಲುವ ಇಂಧನ ವೆಚ್ಚ ಕಡಿಮೆ, ಎರಡೂ ಸಹ ಕಿಲೋವ್ಯಾಟ್‌ಗೆ  5 ರೂಪಾಯಿಯಂತೆ ವಿದ್ಯುತ್ ಅನ್ನು ಉತ್ಪಾದಿಸುತ್ತವೆ. ಕಾಲಾನುಕ್ರಮವಾಗಿ 2023-24ನೇ ಇಸವಿ ವೇಳೆಗೆ ಒಂದು ಕಿಲೋವ್ಯಾಟ್ ವಿದ್ಯುತ್ ಉತ್ಪಾದನಾ ದರ ರೂ.6.5 ಆಗಬಹುದು. ಕಲ್ಲಿದ್ದಲು ನಿಕ್ಷೇಪಗಳು ಘಟಕಗಳಿಂದ ಅನತಿ ದೂರದಲ್ಲಿರುವ ಕಾರಣ, ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನಾ ದರ  ಆದೇ ಕಾಲಕ್ಕೆ ಇನ್ನೂ ಹೆಚ್ಚಾಗಲಿದೆ. ಇತ್ತೀಚಿನ ಯೋಜನೆಗಳಂತೆ ಸೌರಶಕ್ತಿಯನ್ನು ಕಿಲೋವ್ಯಾಟ್‌ಗೆ 2.5 ರೂಪಾಯಿಯಂತೆ ಉತ್ಪಾದಿಸಬಹುದಾಗಿದೆ. ಆದರೆ ಆ ಸೌರಶಕ್ತಿಯನ್ನು ಗ್ರಿಡ್ ವ್ಯವಸ್ಥೆಗೆ ಸಂಯೋಜಿಸಲು ಪ್ರತಿಕಿಲೋ ವ್ಯಾಟ್‌ಗೆ 2 ರೂಪಾಯಿ ವೆಚ್ಚ ತಗುಲುತ್ತದೆ, ಹಾಗಾಗಿ ಒಟ್ಟಾರೆ ವಿದ್ಯುತ್ ಉತ್ಪಾದನಾ ವೆಚ್ಚ ಪ್ರತಿ ಕಿಲೋವ್ಯಾಟ್‌ಗೆ 4.5 ರೂಪಾಯಿ ಹಿಡಿಯುತ್ತದೆ.

 

ಭಾರತ, 2008ರಲ್ಲಿ ಅಮೆರಿಕಾ ಮತ್ತು ಫ್ರಾನ್ಸ್ ದೇಶಗಳೊಂದಿಗೆ ಅಣು ಸಹಕಾರ ಒಪ್ಪಂದವನ್ನು ಮಾಡಿಕೊಂಡಿದೆ. ಅದರಂತೆ ಭಾರತದಲ್ಲಿ ಆ ರಾಷ್ಟ್ರಗಳು ಅಣು ವಿದ್ಯುತ್ ಘಟಕಗಳನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಬೇಕಾಗಿದೆ. ಆಗಿನಿಂದಲೂ ಇನ್ನೂ ಆ ಬಗ್ಗೆ ಮಾತುಕತೆಗಳು ನಡೆಯುತ್ತಲೇ ಇವೆ. ಆದರೆ ಅಮೆರಿಕಾದ ಹೆಸರಾಂತ ಅಣು ವಿದ್ಯುತ್ ಘಟಕ ನಿರ್ಮಾಣ ಸಂಸ್ಥೆ, ವೆಸ್ಟಿಂಗ್‌ಹೌಸ್ ಕೆಲ ತಿಂಗಳುಗಳ ಹಿಂದೆ ದಿವಾಳಿತನ ಘೋಷಿಸಿಕೊಂಡಿತು. ಫ್ರಾನ್ಸ್ ನ ಅರೇವಾ ಸಂಸ್ಥೆ, ಫುಕುಶಿಮಾ ಘಟನೆಯ ನಂತರ ಅಣು ಇಂಧನ ವಹಿವಾಟಿನಲ್ಲಿ ಭಾರಿ ಹಣ ಕಳೆದುಕೊಂಡಿದೆ. ಫ್ರಾನ್ಸ್ ಸರ್ಕಾರ ತನ್ನ ಅಣು ರಿಯಾಕ್ಟರ್ ವ್ಯಾಪಾರವನ್ನು ರಾಷ್ಟ್ರೀಯ ಎಲೆಕ್ಟ್ರಿಕ್ ಸಂಸ್ಥೆ, ಎಲೆಕ್ಟ್ರಿಸೈಟ್ ಡೆ ಫ್ರಾನ್ಸ್ ಗೆ ವಹಿಸಿಕೊಟ್ಟಿದೆ. ಆದ್ದರಿಂದ ಅಮೆರಿಕಾ ಮತ್ತು ಫ್ರಾನ್ಸ್ ನಡುವಿನ ಅಣು ಸಹಕಾರ ಒಪ್ಪಂದ ಸಾಕಷ್ಟು ಅನಿಶ್ಚಿತತೆಯಿಂದ ಕೂಡಿದೆ.

 

ಈ ಸನ್ನಿವೇಶದಲ್ಲಿ, ಭಾರತ ಸರ್ಕಾರ 2017ರ ಜೂನ್ ತಿಂಗಳಲ್ಲಿ 700 ಮೆಗಾವ್ಯಾಟ್ ಸಾಮರ್ಥ್ಯದ 10 ಭಾರಿ ಬೃಹತ್ ಜಲ ಪರಿವರ್ತಕಗಳನ್ನು ನಿರ್ಮಿಸಲು ನಿರ್ಧರಿಸಿದೆ.  ಅಣು ವಿದ್ಯುತ್ ನಿಗಮದ ಸಾಮರ್ಥ್ಯವನ್ನು 540 ಮೆಗಾವ್ಯಾಟ್‌ನಿಂದ 700 ಮೆಗಾವ್ಯಾಟ್‌ಗೆ ಏರಿಸಲಾಗಿದೆ, ಕಕ್ರಾಪುರದಲ್ಲಿ ಎರಡು (3 ಮತ್ತು 4ನೇ ಘಟಕ) ಹಾಗೂ ರಾಜಸ್ತಾನದಲ್ಲಿ ಎರಡು (7 ಮತ್ತು 8ನೇ ಘಟಕ) ಘಟಕಗಳ ನಿರ್ಮಾಣ ಕೆಲಸ ಆರಂಭವಾಗಿದೆ. 2011ರ ಫುಕುಶಿಮಾ ಘಟನೆ ನಂತರ ಅಣು ಶಕ್ತಿ ವೃದ್ಧಿಯ ಅತಿ ದೊಡ್ಡ ಬದ್ಧತೆ ಇದಾಗಿದೆ. ಈ ಕಾರ್ಯಕ್ರಮಗಳಿಂದಾಗಿ ಭಾರತದ ಕೈಗಾರಿಕೆಗಳಿಗೆ ಸುಮಾರು ಒಂದು ದಶಕಗಳವರೆಗೆ ಸುಸ್ಥಿರ ಕಾರ‍್ಯದೊತ್ತಡ ನೀಡುವುದಲ್ಲದೆ, ಖಚಿತವಾಗಿಯೂ ಭಾರತ ಈ ಕ್ಷೇತ್ರದಲ್ಲಿ ಅತ್ಯಂತ ಪ್ರಮುಖ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯ.

 

ಕೂಡಂಕುಲಂನಲ್ಲಿ 3, 4, 5 ಮತ್ತು 6ನೇ ಘಟಕಗಳ ನಿರ್ಮಾಣ ಕೆಲಸ ಆರಂಭವಾಗಿದೆ. ಭಾರತ ಗುರುತಿಸಲಿರುವ ಎರಡನೇ ಘಟಕದ ಜಾಗದಲ್ಲಿ 1200 ಮೆಗಾವ್ಯಾಟ್ ಸಾಮರ್ಥ್ಯದ ಆರು ಘಟಕಗಳನ್ನು ನಿರ್ಮಿಸಲು ರಷ್ಯಾ ಮುಂದಾಗಿದೆ. ಅದಕ್ಕೆ ಪರ‍್ಯಾಯವಾಗಿ, ದೇಶ ಯುರೇನಿಯಂ ಇಂಧನ ಬಳಸಿ 900 ಮೆಗಾವ್ಯಾಟ್ ಸಾಮರ್ಥ್ಯದ `ಭಾರತೀಯ ಒತ್ತಡದ ಜಲ ರಿಯಾಕ್ಟರ್’ ಅನ್ನು ಅಭಿವೃದ್ಧಿಗೊಳಿಸಿದೆ. ಎರಡು ಘಟಕಗಳ ನಿರ್ಮಾಣ ಕೆಲಸ ಸದ್ಯದಲ್ಲೇ ಆರಂಭವಾಗಲಿದ್ದು, ನಂತರ ಸರಣಿಯಲ್ಲಿ ಇತರೆ ಘಟಕಗಳ ನಿರ್ಮಾಣ ಕೆಲಸ ಕೈಗೆತ್ತಿಕೊಳ್ಳಲಾಗುವುದು. ಕಲ್ಪಾಕಂನಲ್ಲಿ 300 ಮೆಗಾವ್ಯಾಟ್ ಸಾಮರ್ಥ್ಯದ ಪ್ರೋಟೋಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಕಾರ‍್ಯಾರಂಭ ಮಾಡುವ ಹಂತದಲ್ಲಿದೆ. ಅದೇ ಮಾದರಿಯನ್ನು 600 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಘಟಕಗಳು ಅನುಕರಿಸಲಿವೆ. ಭಾಭಾ ಅಣುಶಕ್ತಿ ಸಂಶೋಧನಾ ಕೇಂದ್ರ ಥೋರಿಯಂ ಬಳಸಿ 300 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದಿಸುವ `ಆತ್ಯಾಧುನಿಕ ಉಷ್ಣ ವಿದ್ಯುತ್ ರಿಯಾಕ್ಟರ್’ ವಿನ್ಯಾಸವನ್ನು ಪೂರ್ಣಗೊಳಿಸಿದೆ. ನಮ್ಮ ದೀರ್ಘ ಕಾಲದ ಯೋಜನೆ ಎಂದರೆ ವೇಗದ ರಿಯಾಕ್ಟರ್‌ಗಳನ್ನು ಮತ್ತು ಥೋರಿಯಂ ಆಧಾರಿತ ವ್ಯವಸ್ಥೆಗಳನ್ನು ಅವಲಂಬಿಸುವುದಾಗಿದೆ.

 

ಈ ಲೇಖನದಲ್ಲಿ ಇಂಧನ ಮರುಬಳಕೆ ಸಂಸ್ಕರಣೆ, ವೇಗವರ್ಧಕಗಳ ಅಭಿವೃದ್ಧಿ ಮತ್ತಿತರರ ಸಂಶೋಧನಾ ಚಟುವಟಿಕೆಗಳ ಬಗ್ಗೆ ವಿಸ್ತೃತವಾಗಿ ವಿವರಿಸಿಲ್ಲ. ಅಣುಶಕ್ತಿ ಇಲಾಖೆ, ಆಸ್ಪತ್ರೆ ಮತ್ತು ಕೈಗಾರಿಕೆಗಳಿಗೆ ಅಗತ್ಯವಾದ ರೇಡಿಯೋ ಐಸೋಟೋಪ್‌ಗಳನ್ನು ಪೂರೈಕೆ ಮಾಡುವಲ್ಲಿ ಕ್ರೀಯಾಶೀಲವಾಗಿದೆ. ಸಮುದ್ರದ ಆಹಾರೋತ್ಪನ್ನಗಳನ್ನು, ಮಸಾಲೆ ಅಥವಾ ಸಾಂಬಾರ ಪದಾರ್ಥಗಳು ಹಾಳಾಗದಂತೆ ತಡೆಯಲು ಮತ್ತು ಈರುಳ್ಳಿ, ಮಾವಿನ ಹಣ್ಣು ಮತ್ತು ಇತರೆ ಆಹಾರ ಉತ್ಪನ್ನಗಳ ಬಳಕೆ ಅವಧಿ ಹೆಚ್ಚಿಸಲು ವಿಕರಣ ತಂತ್ರಜ್ಞಾನಕ್ಕೆ ಬಳಕೆ ಮಾಡಲಾಗುತ್ತಿದೆ. ಜೊತೆಗೆ ವೈದ್ಯಕೀಯ ಸಲಕರಣೆಗಳ ಶುದ್ಧಿಗೂ ಬಳಕೆ ಮಾಡಲಾಗುತ್ತದೆ.

ಹಾಗಾಗಿ ನಾವು ಮುಂದಿನ ದಶಕಗಳಲ್ಲಿ ಅಣುಶಕ್ತಿ ಇಂಗಾಲ ರಹಿತ ಇಂಧನ ಹೊಂದುವುದಕ್ಕೆ ಮಹತ್ವದ ಕೊಡುಗೆ ನೀಡಲಿದೆ ಎಂಬುದನ್ನು ಕಾಣಬಹುದಾಗಿದೆ ಮತ್ತು ಪರಮಾಣು ತಂತ್ರಜ್ಞಾನ ನಮ್ಮ ಜನರ ಜೀವನ ಮಟ್ಟ ವೃದ್ಧಿಗೆ ಪರಿಹಾರಗಳನ್ನು ಒದಗಿಸಲಿದೆ.

***

*ಲೇಖಕರು, ಅಣುಶಕ್ತಿ ಆಯೋಗದ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು.

ಲೇಖನದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಅವರ ವೈಯಕ್ತಿಕ ಅನಿಸಿಕೆಗಳು.

ಭಾರತ - ಸ್ವೀಡನ್ ತಿಳಿವಳಿಕೆ ಒಪ್ಪಂದ

ಬೌದ್ಧಿಕ ಆಸ್ತಿ ಹಕ್ಕಿಗೆ ಸಂಬಂಧಿಸಿದಂತೆ ಸ್ವೀಡನ್ ಮತ್ತು ಭಾರತದ ನಡುವೆ ಎಂಓಯುಗೆ ಸಚಿವ ಸಂಪುಟ ಅಂಗೀಕಾರ

ಬೌದ್ಧಿಕ ಆಸ್ತಿ ಹಕ್ಕಿಗೆ ಸಂಬಂಧಿಸಿದಂತೆ ಸ್ವೀಡನ್ ಮತ್ತು ಭಾರತದ ನಡುವೆ ಎಂಓಯುಗೆ ಸಚಿವ ಸಂಪುಟ ಅಂಗೀಕಾರ 
 

ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಬೌದ್ಧಿಕ ಆಸ್ತಿ ಹಕ್ಕು(ಐಪಿಆರ್)ಗಳ ಕ್ಷೇತ್ರದಲ್ಲಿ ಸಹಕಾರಕ್ಕೆ ಸಂಬಂಧಿಸಿದ ಸ್ವೀಡನ್ ಮತ್ತು ಭಾರತದ ನಡುವಿನ ಒಪ್ಪಂದ(ಎಂಓಯು)ಕ್ಕೆ ಅಂಗೀಕಾರ ನೀಡಲಾಗಿದೆ. 

ಎರಡೂ ದೇಶಗಳು ತಾಂತ್ರಿಕ ವಿನಿಮಯ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಒಟ್ಟಾಗಿ ಹಮ್ಮಿಕೊಳ್ಳುವ ಹಾಗೂ ಅತ್ಯುತ್ತಮ ವಿಧಾನಗಳ ವಿನಿಮಯದ ಮೂಲಕ ಐಪಿಆರ್ ಕುರಿತು ಜಾಗೃತಿ ಮೂಡಿಸುವ ವಿಶಾಲವ್ಯಾಪ್ತಿಯ ಮತ್ತು ಹೊಂದಾಣಿಕೆಯ ಕಾರ್ಯಸಂಯೋಜನೆಯೊಂದನ್ನು ಸ್ಥಾಪಿಸಲು ಈ ಎಂಓಯು ಅವಕಾಶ ನೀಡಲಿದೆ. 

ಪರಿಣಾಮ:

ಐಪಿ ಪರಿಸರವ್ಯವಸ್ಥೆಗಳು ಮತ್ತು ಅನ್ವೇಷಣೆಯಲ್ಲಿನ ಅನುಭವಗಳನ್ನು ವಿನಿಮಯ ಮಾಡಿಕೊಳ್ಳಲು ಭಾರತಕ್ಕೆ ಅವಕಾಶ ನೀಡುವ ಮೂಲಕ, ಎರಡೂ ದೇಶದ ಉದ್ಯಮಿಗಳು, ಹೂಡಿಕೆದಾರರು ಮತ್ತು ಉದ್ಯಮಗಳಿಗೆ ಲಾಭ ತಂದುಕೊಡಲು ಒಪ್ಪಂದ ಅನುವು ಮಾಡಿಕೊಡಲಿದೆ. ಎರಡೂ ದೇಶಗಳ ನಡುವೆ ಉತ್ತಮ ವಿಧಾನಗಳ ವಿನಿಮಯದಿಂದ ಭಾರತದ ವೈವಿಧ್ಯಮಯ ಜನರಂತೆ, ವೈವಿಧ್ಯಮಯ ಬೌದ್ಧಿಕ ಸೃಷ್ಟಿಗಳ ಕುರಿತು ಜಾಗೃತಿಯಲ್ಲದೆ, ಸಂರಕ್ಷಣೆಯಲ್ಲಿ ಕಾಳಜಿ ಹೆಚ್ಚಲಿದೆ. ಜಾಗತಿಕ ಅನ್ವೇಷಣೆ ಕ್ಷೇತ್ರದಲ್ಲಿ ಭಾರತವು ಪ್ರಮುಖ ಆಟಗಾರ ಆಗುವ ಪಯಣದಲ್ಲಿ ಇದೊಂದು ಚಾರಿತ್ರಿಕ ಮೈಲುಗಲ್ಲು ಆಗಿದ್ದು, 2016ರ ರಾಷ್ಟ್ರೀಯ ಐಪಿಆರ್ ಕಾರ್ಯನೀತಿಯ ಗುರಿ ಮುಟ್ಟಲು ಇನ್ನಷ್ಟು ಉತ್ತೇಜಿಸಲಿದೆ. 

ವೈಶಿಷ್ಟ್ಯಗಳು:

ಎರಡೂ ದೇಶಗಳ ಸದಸ್ಯರಿರುವ ಜಂಟಿ ಸಂಯೋಜಕ ಸಮಿತಿಯನ್ನು ರಚಿಸಲಿದ್ದು, ಅದು ಕೆಳಕಂಡ ಕ್ಷೇತ್ರಗಳಲ್ಲಿ ಯಾವ ರೀತಿ ಸಹಕರಿಸಬೇಕು ಎಂಬ ಬಗ್ಗೆ ನಿರ್ಧರಿಸಲಿದೆ: 

ಎ) ಎರಡೂ ದೇಶಗಳ ಸಾರ್ವಜನಿಕರು, ಉದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಐಪಿ ಕುರಿತು ಜಾಗೃತಿ ಮೂಡಿಸಲು ಜ್ಞಾನ, ಅನುಭವ ಮತ್ತು ಉತ್ತಮ ವಿಧಾನಗಳ ವಿನಿಮಯ 

ಬಿ) ತರಬೇತಿ ಕಾರ್ಯಕ್ರಮಗಳು, ತಜ್ಞರ ವಿನಿಮಯ, ತಾಂತ್ರಿಕ ವಿನಿಮಯ ಮತ್ತು ವಿಸ್ತರಣೆ ಚಟುವಟಿಕೆಗಳಲ್ಲಿ ಸಹಭಾಗಿತ್ವ ಸಿ) ಐಪಿಗೆ ಸಂಬಂಧಿಸಿದ ಉತ್ತಮ ವಿಧಾನಗಳು, ಅನುಭವಗಳು ಮತ್ತು ಜ್ಞಾನವನ್ನು ಉದ್ಯಮ, ವಿಶ್ವವಿದ್ಯಾಲಯ ಅಭಿವೃದ್ಧಿ ಮತ್ತು ಸಂಶೋಧನೆ ಸಂಸ್ಥೆಗಳು ಹಾಗೂ ಸಣ್ಣ ಹಾಗೂ ಮಧ್ಯಮ ಉದ್ಯಮ(ಎಸ್ಎಂಇ)ಗಳಲ್ಲಿ ಪಾಲುದಾರಿಕೆ ಕಾರ್ಯಕ್ರಮಗಳನ್ನು ಒಂಟಿಯಾಗಿ ಇಲ್ಲವೇ ಒಟ್ಟಾಗಿ ಏರ್ಪಡಿಸುವ ಮೂಲಕ ವಿನಿಮಯ ಹಾಗೂ ಪ್ರಚುರ ಪಡಿಸುವುದು 

ಡಿ) ಪೇಟೆಂಟ್ಗಳು, ಟ್ರೇಡ್ ಮಾರ್ಕರ್ಗಳು , ಕೈಗಾರಿಕಾ ವಿನ್ಯಾಸಗಳು, ಕಾಪಿರೈಟ್ ಮತ್ತು ಜಿಯಾಗ್ರಫಿಕಲ್ ಇಂಡಿಕೇಷನ್(ಜಿಐ) ಕುರಿತ ಅರ್ಜಿ ಗಳ ವಿಲೇವಾರಿಗೆ ಸಂಬಂಧಿಸಿದಂತೆ, ಮಾಹಿತಿ ಮತ್ತು ಉತ್ತಮ ವಿಧಾನಗಳ ವಿನಿಮಯ. ಜತೆಗೆ, ಐಪಿ ಹಕ್ಕುಗಳ ಬಳಕೆ, ಜಾರಿ ಮತ್ತು ರಕ್ಷಣೆ ಕುರಿತ ಮಾಹಿತಿ ವಿನಿಮಯ. 

ಇ) ಆಧುನಿಕೀಕೃತ ಯೋಜನೆಗಳ ಜಾರಿಗೊಳಿಸುವಿಕೆ ಮತ್ತು ಆಟೋಮೇಷನ್ನ ಅಭಿವೃದ್ಧಿ, ಐಪಿಯಲ್ಲಿ ಹೊಸ ದಾಖಲೀಕರಣ ಮತ್ತು ಮಾಹಿತಿ ವ್ಯವಸ್ಥೆಗಳು ಮತ್ತು ಐಪಿ ನಿರ್ವಹಣೆಗೆ ವಿಧಿವಿಧಾನಗಳನ್ನು ರೂಪಿಸುವಲ್ಲಿ ಸಹಕಾರ 

ಎಫ್) ಸಾಂಪ್ರದಾಯಿಕ ಜ್ಞಾನದ ರಕ್ಷಣೆ ಹೇಗೆ ಎಂದು ಅರ್ಥಮಾಡಿಕೊಳ್ಳುವಲ್ಲಿ ಸಹಕಾರ: ಮತ್ತು ಸಾಂಪ್ರದಾಯಿಕ ಜ್ಞಾನಕ್ಕೆ ಸಂಬಂಧಿಸಿದ ಡೇಟಾ ಮೂಲ ಸೇರಿದಂತೆ ಉತ್ತಮ ವಿಧಾನಗಳ ವಿನಿಮಯ ಹಾಗೂ ಹಾಲಿ ಐಪಿ ವ್ಯವಸ್ಥೆ ಕುರಿತ ಅರಿವಿನ ಹೆಚ್ಚಳ 

ಜಿ) ಡಿಜಿಟಲ್ ಪರಿಸರದಲ್ಲಿ ಅದರಲ್ಲೂ ವಿಶೇಷವಾಗಿ ಕಾಪಿರೈಟ್ಗೆ ಸಂಬಂಧಿಸಿದಂತೆ ಬೌದ್ಧಿಕ ಹಕ್ಕುಗಳ ಕಾನೂನಿನ ಉಲ್ಲಂಘನೆ ತಡೆ ಕುರಿತ ಉತ್ತಮ ವಿಧಾನ ಹಾಗೂ ಮಾಹಿತಿಯ ವಿನಿಮಯ 

ಎಚ್) ಎರಡೂ ಪಕ್ಷಗಳು ಒಪ್ಪಿ, ನಿರ್ಧರಿಸುವ ಯಾವುದೇ ಚಟುವಟಿಕೆಗಳಲ್ಲಿ ಸಹಕಾರ 

ಭಾರತ - ನೇಪಾಳ ತಿಳಿವಳಿಕೆ ಒಪ್ಪಂದ

ಭಾರತ-ನೇಪಾಳ ಗಡಿಯಲ್ಲಿ ಮೆಚಿ ನದಿಯ ಮೇಲೆ ಹೊಸ ಸೇತುವೆಯನ್ನು ನಿರ್ಮಿಸಲು ಅನುಷ್ಠಾನ ವ್ಯವಸ್ಥೆಯನ್ನು ಸಿದ್ಧಪಡಿಸುವ ಸಲುವಾಗಿ ಭಾರತ ಮತ್ತು ನೇಪಾಳದ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಚಿವ ಸಂಪುಟದ ಅನುಮೋದನೆ

ಭಾರತ-ನೇಪಾಳ ಗಡಿಯಲ್ಲಿ ಮೆಚಿ ನದಿಯ ಮೇಲೆ ಹೊಸ ಸೇತುವೆಯನ್ನು ನಿರ್ಮಿಸಲು ಅನುಷ್ಠಾನ ವ್ಯವಸ್ಥೆಯನ್ನು ಸಿದ್ಧಪಡಿಸುವ ಸಲುವಾಗಿ ಭಾರತ ಮತ್ತು ನೇಪಾಳದ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಚಿವ ಸಂಪುಟದ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ – ನೇಪಾಳ ಗಡಿಯಲ್ಲಿ ಮೇಚಿ ನದಿಯ ಮೇಲೆ ನೂತನ ಸೇತುವೆ ನಿರ್ಮಿಸುವ ಸಲುವಾಗಿ ವೆಚ್ಚ ಹಂಚಿಕೆ, ಕಾಲಮಿತಿ ಮತ್ತು ಸುರಕ್ಷತಾ ವಿಷಯಗಳ ಕುರಿತಂತೆ ಅನುಷ್ಠಾನ ವ್ಯವಸ್ಥೆ ಸಿದ್ಧಪಡಿಸಲು ಭಾರತ ಮತ್ತು ನೇಪಾಳ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಗೆ ಅಂಕಿತ ಹಾಕಲು ತನ್ನ ಅನುಮೋದನೆಯನ್ನು ನೀಡಿದೆ. 

ಈ ಸೇತುವೆಯ ನಿರ್ಮಾಣದ ಅಂದಾಜು ವೆಚ್ಚ 158.65 ಕೋಟಿ ರೂಪಾಯಿಗಳಾಗಿದ್ದು, ಈ ಹಣವನ್ನು ಎಡಿಬಿ ಸಾಲದ ಮೂಲಕ ಭಾರತ ಸರ್ಕಾರ ಪೂರೈಸಲಿದೆ. ಹೊಸ ಸೇತುವೆಯು ರಾಷ್ಟ್ರೀಯ ಹೆದ್ದಾರಿ 327ಬಿಯಲ್ಲಿ ಕಾಕರ್ವಿಟ್ಟಾ (ನೇಪಾಳ) ದಿಂದ ಪನಿಟಾಂಕಿ ಬೈಪಾಸ್ (ಭಾರತ) ವರೆಗೆ 1500 ಮೀಟರ್ ಉದ್ದದ್ದಾಗಿದ್ದು 825 ಮೀಟರಿಗಳ 6 ಪಥದ ಸಂಪರ್ಕ ರಸ್ತೆಯನ್ನೂ ಒಳಗೊಂಡಿದೆ. ಮೆಚಿ ಸೇತುವೆಯು ನೇಪಾಳಕ್ಕೆ ಸಾಗುವ ಏಷ್ಯನ್ ಹೆದ್ದಾರಿ 02ರಲ್ಲಿ ಭಾರತದ ಅಂತಿಮ ಬಿಂದುವಾಗಿದೆ ಮತ್ತು ನೇಪಾಳಕ್ಕೆ ಮುಖ್ಯವಾದ ಸಂಪರ್ಕವನ್ನು ಒದಗಿಸುತ್ತದೆ. 

ಸೇತುವೆಯ ನಿರ್ಮಾಣದಿಂದ ಪ್ರಾದೇಶಿಕ ಸಂಪರ್ಕ ಸುಧಾರಣೆ ಆಗುತ್ತದೆ ಮತ್ತು ಎರಡೂ ರಾಷ್ಟ್ರಗಳ ನಡುವೆ ಗಡಿಯಾಚೆಗಿನ ವ್ಯಾಪಾರವನ್ನು ಬಲಪಡಿಸುವ ಹಾಗೂ ಕೈಗಾರಿಕೆಗಳ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿನಿಮಯವನ್ನು ಬಲಪಡಿಸಲು ಬಾಂಧವ್ಯವನ್ನು ಬೆಸೆಯುವ ಸಾಮರ್ಥ್ಯವನ್ನು ಹೊಂದಿದೆ. 

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಎನ್.ಎಚ್.ಐ.ಡಿ.ಸಿ.ಎಲ್.)ವನ್ನು ಈ ಯೋಜನೆಯ ಅನುಷ್ಠಾನ ಸಂಸ್ಥೆ ಎಂದು ನಿಯುಕ್ತಿಗೊಳಿಸಲಾಗಿದೆ. ಈ ಯೋಜನೆಗೆ ಡಿಪಿಆರ್ ಸಿದ್ಧಪಡಿಸಲಾಗಿದ್ದು, ಸೇತುವೆಯ ಜೋಡಣೆ ಕುರಿತಂತೆ ನೇಪಾಳ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ ಆಖೈರುಗೊಳಿಸಲಾಗಿದೆ. 

Biofuels

Waste Into Wealth

 

Relevant:-

Outcomes of the studySignificance of the studyAbout Bio fuelsWhat is Bio-Ethanol?

Recently

Recently, scientists from CSIR-NIIST, Thiruvananthapuram turned discarded cotton-stalks into biofuel.

Outcomes of the study

By using the combination of chemical and biological techniques, Scientists have turned discarded cotton-stalks into ethanol, which is obtained by fermentation of plant waste.To convert the glucose into ethanol, fermentation using a novel yeast straine. Saccharomycescerevisiae -RRP-03N, was carried out.

Significance of the study

India has about 9.4 million hectares under cotton cultivation and can use discarded 2 million tones of cotton from every hectare, to generate ethanol.Bio-Ethanol is a conventional fuel, which comes from a renewable resource.India can get rid of the large waste produced by turning it into bio-ethanol.Most of this first generation ethanol finds its way into consumer applications, primarily as liquor. Converting the agro-residues to ethanol reduces the food vs fuel competition

About Bio fuels

These fuels are produced from organic material or biomass, directly or indirectly. This organic material can be plant material, fishery products, municipal wastes, agro waste, food by-products, animal waste etc.Traditionally biomass are being used in villages in the form of cow dung, fuelwood, charcoal, etc but they are unprocessed and not suitable for the environment.Biofuels produces bioenergy, which covers nearly 10% of current total world energy demand.With technological advancement, biofuels can be extracted from wood, crops and waste material and can be in form of solid, liquid or gas.Biofuels are of two types:Primary Biofuels- These are produced by unprocessed organic material like fuelwood, pellets, wood chips etc for primary consumption like cooking, heating or electricity production.Secondary Biofuels- These are produced from processed biomass, which include liquid ethanol and biodesel for use in industrial processes and vehicles.

What is Bio-Ethanol?

Bio-ethanol is an alcohol produced from the fermentation of plant waste.It can be produced from wheat and paddy straw, biomass, bamboo, bagassee, feed stock, segregated municipal waste etc.The fermentation process is similar to that used for making wine or beer, but pure ethanol is obtained by distillation.Ethanol can be blended with petrol or burned in almost pure form in modified spark-ignition engines.A litre of ethanol contains approximately two thirds of the energy provided by a litre of petrol.However, when mixed with petrol, it improves the combustion performance and lowers the emissions of sulphur oxide and carbon monoxide.

ಶನಿವಾರ, ಆಗಸ್ಟ್ 26, 2017

New cadre policy for IAS,IPS

New cadre policy for IAS, IPS allocation; Northeast Indian states included in new zones!

August 23, 2017: The government has finalized a new policy for allocation of cadre to officers of three all India services – Indian Administrative Service (IAS), Indian Police Service (IPS) and Indian Forest Service (IFS).

Under the new policy, the Centre has decided to divide all 26 existing cadres into five zones and candidates will have to mention their preferred choices in descending order when appearing for the civil services examination.

While choosing their preference, candidates will have to indicate states from each zone. However, candidates will be allotted home states on the basis of merit, preference and vacancy.

The new policy will seek to ensure that officers from Bihar, for instance, will get to work in southern and north- eastern states, which may not be their preferred cadres, a personnel ministry official said.

“This policy will ensure national integration of the bureaucracy as officers will get a chance to work in a state which is not their place of domicile,” the official said.

He said the new policy would help in upholding the rationale behind the all-India services.

“All-India service officers are supposed to have varied experiences which can be earned when they work in a different state, which is new to them. The officers may not be able to experiment new things if they work in their own domicile state,” the official said.

The new zones are:

Zone-I – AGMUT (also known as Arunachal Pradesh-Goa-Mizoram and Union Territories), Jammu and Kashmir, Himachal Pradesh, Uttarakhand, Punjab, Rajasthan and Haryana.

Zone-II – Uttar Pradesh, Bihar, Jharkhand and Odisha
Zone-III – Gujarat, Maharashtra, Madhya Pradesh and Chhattisgarh

Zone-IV – West Bengal, Sikkim, Assam-Meghalaya, Manipur, Tripura and Nagaland

Zone-V – Telangana, Andhra Pradesh, Karnataka, Tamil Nadu and Kerala.

The policy is likely to be implemented from this year.

The officers of the services are currently allocated a cadre state or a set of states to work in.

They may be posted on central deputation during the course of their service after fulfilling certain eligibility conditions.

ಭಾರತ-ನೇಪಾಳ ಜಂಟಿ ಮಾತುಕತೆ, ಎಂಟು ಒಪ್ಪಂದಗಳಿಗೆ ಸಹಿ

ಭಾರತ-ನೇಪಾಳ ಜಂಟಿ ಮಾತುಕತೆ, ಎಂಟು ಒಪ್ಪಂದಗಳಿಗೆ ಸಹಿ

ನವದೆಹಲಿ: ಮಾದಕವಸ್ತು ಕಳ್ಳಸಾಗಣೆಗೆ ವಿರುದ್ದ ಕ್ರಮಕ್ಕೆ ಸಹಕಾರ ಸೇರಿದಂತೆ ಎಂಟು ಒಪ್ಪಂದಗಳಿಗೆ ಭಾರತ ಮತ್ತು ನೇಪಾಳ ಇಂದು ಸಹಿ ಹಾಕಿವೆ.

ದ್ವಿಪಕ್ಷೀಯ ಕಾರ್ಯತಂತ್ರ ಮತ್ತು ಪ್ರಾದೇಶಿಕ ಸಮಸ್ಯೆಗಳ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ನೇಪಾಳದ ಮುಖಂಡ ಶೇರ್ ಬಹದ್ದೂರ್ ದೇವುಬಾ ನಡುವಿನ ಸಮಗ್ರ ಮಾತುಕತೆಗಳ ನಂತರ ಒಪ್ಪಂದಕ್ಕೆ ಸಹಿ ಹಾಕಲಾಯಿತು.

"ನಮ್ಮ ದ್ವಿಪಕ್ಷೀಯ ಸಹಭಾಗಿತ್ವವನ್ನು ಇನ್ನಷ್ಟು ಉತ್ತಮಗೊಳಿಸುವ ಸಕಾರಾತ್ಮಕ ನಿರ್ಧಾರಕ್ಕೆ ಬಂದಿದ್ದೇವೆ," ಎಂದು ಮೋದಿ ಮತ್ತು ದೇವುಬಾ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ನೇಪಾಳ ದೇಶದ ಒಟ್ಟಾರೆ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಭಾರತ ಬದ್ದವಾಗಿದೆ ಎಂದು ಭರವಸೆ ನೀಡಿದರು.

ನೇಪಾಳ "ತನ್ನ ನೆಲದಲ್ಲಿ ಭಾರತ ವಿರೋಧಿ ಚಟುವಟಿಕೆಗಳನ್ನು ಯಾವತ್ತೂ ಉತ್ತೇಜಿಸುವುದಿಲ್ಲ" ಎಂದು ದೇವುಬಾ ಹೇಳಿದರು.

ಕಟೈಯಾ ಕುಸಾಹ ಮತ್ತು ರಾಕ್ಸಲ್-ಪರ್ವಾನಿಪುರ ಗಡಿ ವಿದ್ಯುತ್ ಪ್ರಸರಣ ಮಾರ್ಗವನ್ನು ಇಬ್ಬರು ನಾಯಕರು ಜಂಟಿಯಾಗಿ ಉದ್ಘಾಟಿಸಿದರು.

ರಕ್ಷಣೆ ಮತ್ತು ಭದ್ರತೆಯು ದ್ವಿಪಕ್ಷೀಯ ಸಂಬಂಧಗಳ ಪ್ರಮುಖ ಅಂಶವೆಂದು ಮೋದಿ ಗುರುತಿಸಿದರು..

ಇದಕ್ಕೂ ಮುನ್ನ, ರಾಷ್ಟ್ರಪತಿ ಭವನದಲ್ಲಿ ದೇವುಬಾ ಗೆ ಔಪಚಾರಿಕ ಸ್ವಾಗತ ನೀಡಲಾಗಿತ್ತು, ಅಲ್ಲಿ ಅವರು ದೇಶದ ಗಣ್ಯ ಅತಿಥಿಯಾಗಿ ಉಳಿದಿದ್ದರು.

ನಾಲ್ಕು ದಿನಗಳ ಭಾರತ ಭೇಟಿಗಾಗಿ ನಿನ್ನೆ ದೇವುಬಾ ಇಲ್ಲಿಗೆ ಆಗಮಿಸಿದ್ದರು