ಸೋಮವಾರ, ಡಿಸೆಂಬರ್ 24, 2018

ಚೌಧರಿ ಜನ್ಮದಿನವೇ ರೈತರ ದಿನಾಚರಣೆ’

ಚೌಧರಿ ಜನ್ಮದಿನವೇ ರೈತರ ದಿನಾಚರಣೆ’

'‘ರೈತಪರ ಚಿಂತಕರಾಗಿ, ರೈತರ ಹಿತಾಸಕ್ತಿಗಾಗಿ ಹಂಬಲಿಸುತ್ತಿದ್ದ ಚೌಧರಿ ಚರಣ್‌ಸಿಂಗ್‌ ಅವರ ಜನ್ಮದಿನವನ್ನೇ ರಾಷ್ಟ್ರದಾದ್ಯಂತ ರೈತ ದಿನವನ್ನಾಗಿ ಆಚರಿಸಲಾಗುತ್ತಿದೆ’'  

                                  ‘1979ರಲ್ಲಿ ಭಾರತದ 6ನೇ ಪ್ರಧಾನಿಯಾಗಿದ್ದ ಚೌಧರಿ ಚರಣ್‌ಸಿಂಗ್‌ ಅವರು ಪ್ರಧಾನಿ ಹುದ್ದೆಯಲ್ಲಿ ಕೇವಲ 6 ತಿಂಗಳಿದ್ದರು. ಅವರು ಇದ್ದಷ್ಟೂ ಕಾಲಾವಧಿಯಲ್ಲಿ ರೈತಪರ ಚಿಂತನೆಯನ್ನು ಹೊಂದಿದ್ದರು. ಅವರು ತೆಗೆದುಕೊಂಡ ಪ್ರಮುಖ ನಿರ್ಧಾರಗಳೆಲ್ಲವೂ ರೈತರ ಪರವಾಗಿರುತ್ತಿದ್ದವು, ಜೊತೆಗೆ ಅವರು ಹೊರಡಿಸಿದ ‘ಕೃಷಿಗೆ ಬೆಂಬಲ ಬೆಲೆ’ ಆದೇಶವು ಭಾರತದ ಕೃಷಿಕರ ಹೃದಯದಲ್ಲಿ ಅವರನ್ನು ಅಜರಾಮರನ್ನಾಗಿಸಿದೆ’

                         ಭಾರತದಲ್ಲಿ ರಾಷ್ಟ್ರೀಯ ಕೃಷಿಕ ದಿನವನ್ನು ಹಿಂದಿ ಭಾಷೆಯಲ್ಲಿ ಕಿಶನ್ ದಿವಾಸ್ ಎಂದು ಕರೆಯಲಾಗುತ್ತದೆ [1] ಫಾರ್ಮರ್ ಡೇ ಡಿಸೆಂಬರ್ 23 ರಂದು ಪ್ರತಿ ವರ್ಷ ಆಚರಿಸಲಾಗುತ್ತದೆ [5] , 5 ನೇ ಹುಟ್ಟುಹಬ್ಬದಂದು ಭಾರತದ ಪ್ರಧಾನ ಮಂತ್ರಿ , ಚೌಧರಿ ಚರಣ ಸಿಂಗ್ಭಾರತೀಯ ರೈತರ ಜೀವನ ಸುಧಾರಿಸಲು ಅನೇಕ ನೀತಿಗಳನ್ನು ಪರಿಚಯಿಸಿದ, ಸಹ ರೈತರು ಮುಖಂಡ,. [6]ವಿವಿಧ ಕಾರ್ಯಕ್ರಮಗಳು, ಚರ್ಚೆಗಳು, ವಿಚಾರಗೋಷ್ಠಿಗಳು, ರಸಪ್ರಶ್ನೆ ಸ್ಪರ್ಧೆಗಳು, ಚರ್ಚೆಗಳು, ಕಾರ್ಯಾಗಾರಗಳು, ಪ್ರದರ್ಶನಗಳು, ಪ್ರಬಂಧಗಳು ಬರೆಯುವ ಸ್ಪರ್ಧೆಗಳು ಮತ್ತು ಕಾರ್ಯಗಳನ್ನು ಆಯೋಜಿಸುವ ಮೂಲಕ ಇದನ್ನು ಆಚರಿಸಲಾಗುತ್ತದೆ. [1]


ಅಮೆರಿಕಸಂಪಾದಿಸಿ

ಅಮೇರಿಕದಲ್ಲಿ, ಇದನ್ನು ಪ್ರತಿ ವರ್ಷ ಅಕ್ಟೋಬರ್ 12 ರಂದು ಆಚರಿಸಲಾಗುತ್ತದೆ. ಅಮೆರಿಕಾದ ಇತಿಹಾಸದುದ್ದಕ್ಕೂ ಎಲ್ಲಾ ರೈತರಿಗೆ ಗೌರವ ಸಲ್ಲಿಸಲು ಇದನ್ನು ಆಚರಿಸಲಾಗುತ್ತದೆ .


ರೈತ ಹುತಾತ್ಮ ದಿನ


ಜೂನ್ ೨೧- ಈ ದಿನವನ್ನು ಕರ್ನಾಟಕದಲ್ಲಿದಲ್ಲಿ ರೈತ ಹುತಾತ್ಮ ದಿನವೆಂದು ಆಚರಿಸಲಾಗುತ್ತದೆ.


ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ೧೯೭೪ರಿಂದ ೧೯೮೦ರವರೆಗೆ ಸತತ ೬ ವರ್ಷದ ಬರಗಾಲ ಬಿದ್ದಾಗಲೂ ಸಹ ಸರಕಾರವು ರೈತರಿಂದ ನೀರಾವರಿ ಕರ, ಬೆಟರಮೆಂಟ್ ಲೆವಿ ಹಾಗು ಸುಸ್ತಿ ಬಡ್ಡಿ ವಸೂಲಿಗೆ ಕಠಿಣ ಕ್ರಮಗಳನ್ನು ತೆಗೆದುಕೊಂಡಿತು. ಅಧಿಕಾರಿಗಳು ರೈತರ ಮನೆಮನೆಗೆ ನುಗ್ಗಿ ಅಲ್ಲಿಯ ಪಾತ್ರೆ- ಪಗಡೆ,ರಂಟೆ- ಕುಂಟಿಗಳನ್ನು ಜಪ್ತ ಮಾಡತೊಡಗಿದರು. ಇದರ ವಿರುದ್ಧ ನವಲಗುಂದನರಗುಂದ,ಸವದತ್ತಿ,ರಾಮದುರ್ಗ ತಾಲೂಕುಗಳ ರೈತರು ೧೯೮೦ ಮಾರ್ಚ್ ೧ ರಂದು ನವಲಗುಂದ ತಾಲೂಕಿನ ಅಳಗವಾಡಿ ಎನ್ನುವ ಹಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಸಿದರು. ಈ ಸಭೆಯಲ್ಲಿ ಮಲಪ್ರಭಾ ಪ್ರದೇಶ ರೈತ ಸಮನ್ವಯ ಸಮಿತಿಯನ್ನು ರಚಿಸಲಾಯಿತು. ಶ್ರೀಯುತರಾದ ಬಿ.ಆರ್.ಯಾವಗಲ್, ಬಿ.ಸಿ.ಬ್ಯಾಳಿ, ರಾಜಶೇಖರಪ್ಪ ಹೊಸಕೇರಿ, ವಿ.ಎನ್.ಹಳಕಟ್ಟಿ, ಬಿ.ಜಿ.ಸಾಲೂಟಗಿ, ಎಸ್.ಎಮ್.ಬಾಳಿಕಾಯಿ ಈ ಸಮಿತಿಯ ಸಂಚಾಲಕರು. ಮನವಿ, ಧರಣಿ, ಸತ್ಯಾಗ್ರಹ ಯಾವದಕ್ಕೂ ಸರಕಾರ ಕಿವಿಗೊಡಲಿಲ್ಲ.

ಆ ಸಮಯದಲ್ಲಿ ಜಿಲ್ಲಾಧಿಕಾರಿಯಾಗಿದ್ದ ರೇಣುಕಾ ವಿಶ್ವನಾಥನ್ ಮನವಿಕಾರ ರೈತರನ್ನು ಭೇಟಿಯಾಗುವ ಸೌಜನ್ಯವನ್ನೂ ತೋರಲಿಲ್ಲ. ವಿಶೇಷ ಜಿಲ್ಲಾಧಿಕಾರಿ ಗೋವಿಂದರಾಜ ರೈತರನ್ನು ಬೈದು ಕಳುಹಿಸಿದರು. ಇದೆಲ್ಲದರ ಪರಿಣಾಮವಾಗಿ ಜುಲೈ ೨೧ರಂದು ನವಲಗುಂದನರಗುಂದಸವದತ್ತಿ ಹಾಗು ರಾಮದುರ್ಗತಾಲೂಕುಗಳಲ್ಲಿ ಬಂದ್ ಆಚರಿಸಲಾಯಿತು. ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ, ನರಗುಂದ ತಹಶೀಲದಾರರು ಪ್ರತಿಭಟಿಸುತ್ತಿದ್ದ ರೈತರನ್ನು ತುಳಿದುಕೊಂಡೇ ಕಚೇರಿಯ ಒಳಗೆ ನಡೆದರು. ಅದೆ ವೇಳೆಗೆ ಪಿ.ಎಸ್.ಐ. ರೈತರ ಮೇಲೆ ಗುಂಡು ಹಾರಿಸಿದರು. ರೊಚ್ಚಿಗೆದ್ದ ಜನ ಕಚೇರಿಯನ್ನು ಧ್ವಂಸ ಮಾಡಿ ಪೋಲೀಸರ ಮೇಲೆ ಪ್ರತಿ ದಾಳಿ ಮಾಡಿದರು. ಈ ಗಲಭೆಯಲ್ಲಿ ಮೂವರು ಪೊಲೀಸರು ಬಲಿಯಾದರೆ, ಪೋಲೀಸ ಗುಂಡೇಟಿಗೆ ಈರಪ್ಪ ಕಡ್ಲಿಕೊಪ್ಪ ಎನ್ನುವ ರೈತ ಬಲಿಯಾದ. ಇದೇ ವೇಳೆ ನವಲಗುಂದದಲ್ಲಿ ನೀರಾವರಿ ಕಚೇರಿಗೆ ಮುತ್ತಿಗೆ ಹಾಕಿದ ರೈತರ ಮೇಲೆ ಗೋಳೀಬಾರ್ ನಡೆಯಿತು. ರೈತ ಬಸಪ್ಪ ಲಕ್ಕುಂಡಿ ಆಹುತಿಯಾದರು. ಸಿಟ್ಟಿಗೆದ್ದ ಜನ ನೀರಾವರಿ ಕಚೇರಿಗೆ ಬೆಂಕಿ ಹಚ್ಚಿ ಕಂಡ ಕಂಡ ಅಧಿಕಾರಿಗಳನ್ನು ಬೆನ್ನಟ್ಟಿ ಥಳಿಸಿದರು.

ಮರುದಿನ ಪ್ರಾರಂಭವಾದದ್ದು ಸರಕಾರದ ಪ್ರತೀಕಾರ ಕಾಂಡ. ನವಲಗುಂದ, ನರಗುಂದದಲ್ಲಿ ಹತ್ತಿದ ಬೆಂಕಿ ಇಡೀ ರ್ನಾಟಕವನ್ನೇ ವ್ಯಾಪಿಸಿತು. ರಾಜ್ಯದಾದ್ಯಂತ ನಡೆದ ಪ್ರತಿಭಟನೆ ಹಾಗು ಪ್ರತಿಯಾಗಿ ನಡೆದ ಗೋಳೀಬಾರುಗಳಲ್ಲಿ ೧೩೯ ರೈತರು ಬಲಿಯಾದರು.ರಾಜ್ಯಾದ್ಯಂತ ರೈತ ಸಂಘಟನೆ ರೂಪುಗೊಂಡಿತು. ಇದರ ಫಲವಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಪಕ್ಷ ಪರಾಭವಗೊಂಡು, ರಾಮಕೃಷ್ಣ ಹೆಗಡೆ ಸರಕಾರ ಅಸ್ತಿತ್ವಕ್ಕೆ ಬಂದಿತು.

ಆ ಕಾರಣದಿಂದ ಜೂನ್ ೨೧ನ್ನು ರೈತ ಹುತಾತ್ಮ ದಿನವಾಗಿ  ಆಚರಿಸಲಾಗುತ್ತಿದೆ. 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ