ಶನಿವಾರ, ನವೆಂಬರ್ 20, 2021

ಕನ್ನಡ ಬೋಧನಾ ಪದ್ಧತಿ ಪ್ರಶ್ನೋತ್ತರಗಳು

ಕನ್ನಡ ಬೋಧನಾ ಪದ್ಧತಿ ಪ್ರಶ್ನೋತ್ತರಗಳು

ಹಳೆ ಪ್ರಶ್ನೆ  ಪತ್ರಿಕೆಯಲ್ಲಿನ ಪ್ರಮುಖ ಪ್ರಶ್ನೋತ್ತರಗಳು. ಟಿಇಟಿ ಪರೀಕ್ಷಾರ್ಥಿಗಳಿಗೆ ತುಂಬಾ ಉಪಯುಕ್ತ.


1.ಕಥೆಯ ಸ್ವರೂಪಕ್ಕೆ ಹೊಂದುವ ವಿಷಯ, ಪಾತ್ರಗಳು, ಸಂಭಾಷಣೆ, ಸಂದರ್ಭಗಳನ್ನು ಉತ್ತಮ ಧ್ವನಿಯ ಮೂಲಕ ಸಂವಹನ ಮಾಡುವ ಪದ್ಧತಿ. 

= ಕಥನ ಪದ್ಧತಿ. 


2.ಬೋಧನಾ ಕ್ರಿಯೆ ಪರಿಣಾಮಕಾರಿಯಾಗಲು ಪ್ರತ್ಯಕ್ಷ ಹಾಗೂ ಸಜೀವ ವಸ್ತುಗಳನ್ನು ಕೆಲವೊಮ್ಮೆ ಮಾದರಿಗಳನ್ನು ಉಪಯೋಗಿಸಿ ಕಲಿಸುವ ಪದ್ಧತಿ. 

= ನಿದರ್ಶನ ಪದ್ಧತಿ.


3.ಉತ್ತಮ ಮಾತುಗಾರಿಕೆಯ ಲಕ್ಷಣ ಹೀಗಿರಬೇಕು. 

= ಸಂದರ್ಭಕ್ಕನುಗುಣವಾಗಿ ಹಿತಮಿತವಾಗಿ ಮಾತನಾಡುವುದು. 


4.ಒಂದು ಕಾರ್ಯಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆಗಳಿಗೆ ತಕ್ಷಣ ಉತ್ತಮ ವಿಧಾನದಿಂದ ಪರಿಹಾರಕ್ಕಾಗಿ ಕೈಗೊಳ್ಳುವ ಪ್ರಕ್ರಿಯೆ. 

= ಕ್ರಿಯಾ ಸಂಶೋಧನೆ.


5.ಒಂದು ನಿರ್ದಿಷ್ಟ ಪಠ್ಯಾಂಶಗಳನ್ನು ವಿದ್ಯಾರ್ಥಿಗಳು ತಾವೇ ಕಲಿಯಲು ವ್ಯವಸ್ಥೆ ಗೊಳಿಸಿರುವ ಕಲಿಕಾ ಸಾಮಗ್ರಿಗಳ ಮೂಲಕ ಕಲಿಯುವ ವಿಧಾನ. 

= ಸ್ವಯಂ ಬೋಧಿನಿ ವಿಧಾನ. 


6.ಬರಹದಲ್ಲಿರುವ ಅಥವಾ ಮೌಖಿಕ ವಿಷಯವೊಂದನ್ನು ಮತ್ತೊಂದು ಭಾಷೆಗೆ ಪರಿವರ್ತಿಸುವುದು. 

= ಭಾಷಾಂತರ.


7.ಮಕ್ಕಳನ್ನು ಕಲಿಕೆಗೆ ಸಿದ್ಧಗೊಳಿಸಲು ಕಲಿಕೆಯತ್ತ ಆಸಕ್ತಿ ಮೂಡಿಸಿ ಪ್ರೇರಣೆ ನೀಡಲು ಪ್ರಶ್ನಿಸುವ ಪದ್ಧತಿ. 

= ಪ್ರಶ್ನೋತ್ತರ ಪದ್ಧತಿ.


8.ಭಾಷೆಯು ಮೂಲಭೂತವಾಗಿ ಮೌಖಿಕ ಕ್ರಿಯೆ ನಂತರ ಪಡೆಯುವ ರೂಪ. 

= ಬರಹ. 


9.ಭಾಷೆಯ ಉಗಮದ ಬಗ್ಗೆ ಇರುವ ದೈವ ಮೂಲ ಸಿದ್ಧಾಂತದ ಪ್ರಕಾರ ಭಾಷೆ ಹೀಗೆ ಉದ್ಭವವಾಗಿದೆ. 

= ಭಾಷೆ ಸೃಷ್ಟಿಕರ್ತ ನಿಂದ ಬಂದಿದೆ.


10.ವಿದ್ಯಾರ್ಥಿಗಳಲ್ಲಿ ಜ್ಞಾನ, ವರ್ತನೆ, ಕೌಶಲ್ಯ ಮತ್ತು ಮನೋಭಾವಗಳಲ್ಲಿನ ಬದಲಾವಣೆಗಳನ್ನು ಗುರುತಿಸುವ ನಿರಂತರ, ವ್ಯಾಪಕ ಮತ್ತು ನಿರ್ದಿಷ್ಟ ಪ್ರಕ್ರಿಯೆ. 

= ಮೌಲ್ಯಮಾಪನ. 


11.ಒಂದು ಮುದ್ರಿತ ಲಿಪಿಯನ್ನು ನೋಡಿ ಗಮನಿಸಿ ಅರ್ಥ ಮಾಡಿಕೊಂಡು ಧ್ವನಿ ರೂಪದಲ್ಲಿ ಅರ್ಥ ಬದ್ಧವಾಗಿ ಹೊರಹೊಮ್ಮಿಸುವ ಕ್ರಿಯೆ. 

= ಓದುಗಾರಿಕೆ.


12.ಉತ್ತಮ ಮತ್ತು ಸುಂದರ ಕೈಬರಹದ ಕೌಶಲ್ಯಗೊಳಿಸಿ ಮಾನ್ಯತೆ ಪಡೆಯುವದು ಈ ಅಂಶದಿಂದ. 

= ಬರವಣಿಗೆ ವಿನ್ಯಾಸದ ಸತತ ಅಭ್ಯಾಸದಿಂದ. 


13.ಕವಿಯೊಬ್ಬನ ಕನಸು, ಕಲ್ಪನೆ, ಭಾವಾನುಭವಗಳನ್ನು ಸುಸಂಬದ್ಧವಾಗಿ ಮತ್ತು ಛಂದೋಬದ್ಧವಾಗಿ ಅಭಿವ್ಯಕ್ತಿ ಗೊಳ್ಳುವ ರಚನೆ ಇದು. 

= ಪದ್ಯ ಸಾಹಿತ್ಯ.


14.ಆಡುವ ಮಾತು, ನಡೆಯುತ್ತಿರುವ ಕೆಲಸ, ಮಾಡುವ ಉದ್ದೇಶ ಈ ಭಾಷೆಯಲ್ಲಿ ನಡೆದಾಗ ಜನತೆಯ ಜೀವನದ ಮೇಲೆ ಸೂಕ್ತ ಪ್ರಭಾವ ಬೀರಲು ಸಾಧ್ಯವಾಗುವುದು. 

= ಪ್ರಾಂತ್ಯ ಭಾಷೆ. 


15.ಆರು ಸಾಲುಗಳ ಪದ್ಯವನ್ನು ಹೀಗೆಂದು ಕರೆಯುವರು. 

= ಷಟ್ಪದಿ.


16.ಮನುಷ್ಯನ ಯೋಜನೆಗಳನ್ನು ಅಭಿವ್ಯಕ್ತಿಗೊಳಿಸುವ ಸಲುವಾಗಿ ಇರುವ ಒಂದು ಶಬ್ದ ಸಂಯೋಜನಾ ಮಾಧ್ಯಮವೇ ಭಾಷೆ ಎಂದು ಹೇಳಿದವರು. 

= ಆಕ್ಸ್ಫರ್ಡ್ ನಿಘಂಟು. 


17.ಶ್ರಮ ಪರಿಹಾರ ಸಿದ್ಧಾಂತದ ಪ್ರತಿಪಾದಕರು. 

= ನೊಯಿರಿ. 


18.ಆಲಿಸುವಿಕೆನ್ನು ಉತ್ತಮಪಡಿಸುವ ಪ್ರಮುಖ ಅಂಶಗಳು. 

= ಆಸಕ್ತಿಯಿಂದ ವಸ್ತುನಿಷ್ಠತೆಯಿಂದ ಹೇಳುವವರನ್ನು ನೋಡುತ್ತಾ ಗ್ರಹಿಸುವುದು.


19.ಅನುಗಮನ ಪದ್ಧತಿಯ ಪ್ರತಿಪಾದಕರು. 

= ಫ್ರಾನ್ಸಿಸ್ ಬೇಕನ್. 


20.ವಿದ್ಯಾರ್ಥಿಯಲ್ಲಿ ಕಂಡುಬರುವ ಉತ್ತಮ ಮಾತುಗಾರಿಕೆಯ ಲಕ್ಷಣ ಹೀಗಿದೆ. 

= ಉದ್ದೇಶಪೂರ್ವಕವಾಗಿ ಮಾನಸಿಕ ಸಿದ್ಧತೆಯಿಂದ ಸರಳವಾಗಿ ಅರ್ಥ ಬದ್ಧವಾಗಿ ವ್ಯಾಕರಣಬದ್ಧವಾಗಿ ಮಾತನಾಡುವುದು.


21.ಎಂಟನೆಯ ತರಗತಿ ಬಿ ವಿಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಕರು ಆಶುಭಾಷಣ, ಏಕಪಾತ್ರಾಭಿನಯ ಸ್ಪರ್ಧೆಗಳನ್ನು ಏರ್ಪಡಿಸುವುದರ ಉದ್ದೇಶ. 

= ಉತ್ತಮ ಮಾತುಗಾರನನ್ನಾಗಿಸಲು. 


22.ಭಾಷೆ ಎನ್ನುವುದು ಅಭಿಪ್ರಾಯಗಳ ಅಭಿವ್ಯಕ್ತಿಯ ಒಂದು ವಿಧಾನ ಅಲ್ಲ ಅದೊಂದು ರೀತಿಯ ಆಲೋಚನೆ ಎಂದು ಹೇಳಿದವರು. 

= ಎರ್ಧಮನ್.


23.ಸ್ಥೂಲ, ಸೂಕ್ಷ್ಮ ಗ್ರಹಿಕೆಯೊಂದಿಗೆ ರಸಭಾವಗಳ ಪ್ರಶಂಸೆ ಮತ್ತು ಅಲಂಕಾರ, ಛಂದಸ್ಸು ಒಳಗೊಂಡ ಬೋಧನೆ. 

= ಕಾವ್ಯ ಬೋಧನೆ.


24.ಓದಿನಲ್ಲಿ ಹಿಮ್ಮರಳುವಿಕೆ ಉಂಟಾಗಲು ಕಾರಣ. 

= ಅವಧಾನ ಏಕಾಗ್ರತೆ ಮತ್ತು ಅರ್ಥಗ್ರಹಣ ಇಲ್ಲದಿರುವುದು. 


25.ವಿದ್ಯಾರ್ಥಿಗಳ ಕಲಿಕೆಯಲ್ಲಿ ಕಂಡುಬರುವ ದೋಷಗಳನ್ನು ನಿವಾರಿಸಲು ಕೈಗೊಳ್ಳುವ ಬೋಧನೆ. 

= ಪರಿಹಾರ ಬೋಧನೆ. 


26.ಬೋಧನೆ ಮತ್ತು ಕಲಿಕೆಯ ಪ್ರತಿಯೊಂದು ಹಂತದಲ್ಲಿ ಪ್ರತಿಕ್ರಿಯೆಗಳನ್ನು ಸ್ವೀಕರಿಸುತ್ತ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರುವ ಮೌಲ್ಯಮಾಪನ. 

= ನಿರಂತರ ಮೌಲ್ಯಮಾಪನ.


27.ಒಂದು ನಿರ್ದಿಷ್ಟ ತರಗತಿಯ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಉದ್ದೇಶಗಳಿಗನುಗುಣವಾಗಿ ನಿರ್ದಿಷ್ಟ ವಿಷಯಗಳನ್ನು ಅರ್ಥ ಬದ್ಧವಾಗಿ ವ್ಯವಸ್ಥಿತವಾಗಿ ಮತ್ತು ತಾರ್ಕಿಕವಾಗಿ ಜೋಡಿಸಿ ಪರಿಣಿತರು ಎಚ್ಚರಿಕೆಯಿಂದ ತಯಾರಿ ಮಾಡಿರುವುದು. 

= ಪಠ್ಯಪುಸ್ತಕ. 


28.ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುವಾಗ ಕುವೆಂಪುರವರ ಬಾಲ್ಯಜೀವನ ಮತ್ತು ಸಾಧನೆಗಳನ್ನು ವಿಡಿಯೋ ತೋರಿಸಿ ಮಹತ್ವ ಹೇಳುವುದು ಯಾವ ಬೋಧನೋಪಕರಣಗಳು ಉದಾಹರಣೆಯಾಗಿದೆ. 

= ದೃಕ್ ಶ್ರವಣೋಪಕರಣಗಳು.


29.ವಿದ್ಯಾರ್ಥಿಗಳ ಸಾಧನೆಗಳನ್ನು ನಿರಂತರ ಮೌಲ್ಯಮಾಪನದ ಮೂಲಕ ಅಳೆಯುವ ಪರೀಕ್ಷೆಗಳನ್ನು ಶೈಕ್ಷಣಿಕವಾಗಿ ಕರೆಯುವುದು. 

= ಘಟಕ ಪರೀಕ್ಷೆ.


30.ಭಾಷೆಯ ಪ್ರಾವೀಣ್ಯತೆ ಎಂದರೆ. 

= ಭಾಷಾ ಕೌಶಲ್ಯಗಳಲ್ಲಿ ಪ್ರಬುದ್ಧತೆ ಪಡೆಯುವುದು. 


31.ಭಾಷಾ ಬೋಧನೆಯಲ್ಲಿ ಪದ ಮಾಲ ಪದ್ಧತಿ ಎಂದರೆ. 

= ಪದಗಳನ್ನು, ಪದಗಳ ಉಚ್ಚಾರಣೆ ಮತ್ತು ಅರ್ಥವನ್ನು ತಿಳಿಸಿ ಕೊಡುವುದರ ಮೂಲಕ ಓದು ಕಲಿಸುವುದು.


32.ಭಾಷಾ ಕಲಿಕೆ ಮತ್ತು ಬೋಧನೆಯ ಮನೋವೈಜ್ಞಾನಿಕ ನಿಯಮಗಳ ಸರಿಯಾದ ಕ್ರಮ. 

= ಸಿದ್ಧತಾ ನಿಯಮ. ಅನುಕರಣ ನಿಯಮ. ಅಭ್ಯಾಸ ನಿಯಮ. ಪುನರ್ಬಲನ ಗೊಳಿಸುತ್ತಾ ಕಲಿಸುವುದು.


33.ಪ್ರಬಂಧ ಬೋಧನೆಯ ಉದ್ದೇಶ. 

= ಸ್ವ ಅಭಿವ್ಯಕ್ತಿಯನ್ನು ಪೋಷಿಸಿ ಬೆಳೆಸುವುದು

34.ಭಾಷೆಯ ರಚನೆಯ ನಿಯಮ ಮತ್ತು ಪ್ರಯೋಗವನ್ನು ಕುರಿತು ಅಧ್ಯಯನ ಮಾಡುವುದು. 

= ವ್ಯಾಕರಣ ಶಾಸ್ತ್ರ. 


35.ನಿರ್ದಿಷ್ಟವಾದ ವಿಷಯಗಳಿಂದ ಒಂದು ಸಾಮಾನ್ಯ ತೀರ್ಮಾನದ ಕಡೆ ಸಾಗುವ ಪದ್ಧತಿ. 

= ಅನುಗಮನ ಪದ್ಧತಿ.


36.ಬೋಧನಾ ಪದ್ಧತಿ ಎಂದರೆ. 

= ಕಲಿಕೆಯನ್ನು ಸುಲಭ ಮತ್ತು ಪರಿಣಾಮಕಾರಿ ಮಾಡಲು ಶಿಕ್ಷಕರು ಅನುಸರಿಸುವ ಮಾರ್ಗ. 


37.ಕಂದಪದ್ಯದ ಮೊದಲಾರ್ಧದಲ್ಲಿ ಬರುವ ಮಾತ್ರೆಗಳ ಸಂಖ್ಯೆ. 

= ಮೂವತ್ತೆರಡು. 


38.ಹತ್ತು ಬಾರಿ ಓದುವ ಬದಲು ಒಂದು ಬಾರಿ ಬರೆಯುವುದು ಎಂದು ಹೇಳುವುದು ಸಾಮಾನ್ಯ ಆದರೆ ಇದರಿಂದ ಬೆಳವಣಿಗೆಯಾಗುವುದು. 

= ಸ್ಮರಣ ಶಕ್ತಿ ಬೆಳೆಯುತ್ತದೆ. 


39.ಪದ್ಯವನ್ನು ರಾಗವಾಗಿ ಭಾವಪೂರ್ಣವಾಗಿ ಹಾಡುವ ಕ್ರಮವನ್ನು ಅಭ್ಯಾಸ ಮೂಡಿಸುವುದರಿಂದ ವಿದ್ಯಾರ್ಥಿಗಳಲ್ಲಿ ಈ ಸಾಮರ್ಥ್ಯ ಗಟ್ಟಿಯಾಗಿರುತ್ತದೆ. 

= ರಸಸ್ವಾದನೆ ಮತ್ತು ಸೌಂದರ್ಯ ಪ್ರಜ್ಞ

1 ಕಾಮೆಂಟ್‌: