ಗುರುವಾರ, ಮಾರ್ಚ್ 30, 2017

ಯುಎಇಯಲ್ಲಿ 10 ಭಾರಯೀಯರನ್ನು ರಕ್ಷಿಸಿದ NRI ಉದ್ಯಮಿ

ಯುಎಇಯಲ್ಲಿ 10 ಭಾರತೀಯರನ್ನು ಮರಣದಂಡನೆಯಿಂದ ಪಾರು ಮಾಡಿದ ಎನ್ನಾರೈ ಉದ್ಯಮಿ ಎಸ್‌ಪಿಎಸ್ ಒಬೆರಾಯ್

ದುಬೈ,ಮಾ.29: ದುಬೈನಲ್ಲಿ ಉದ್ಯಮಿಯಾಗಿರುವ ಅನಿವಾಸಿ ಭಾರತೀಯ ಎಸ್‌ಪಿಎಸ್ ಒಬೆರಾಯ್ ಅವರ ಮಟ್ಟಿಗೆ ಪರೋಪಕಾರವೇ ಜೀವನವಿಧಾನವಾಗಿದೆ. ಅವರ ಈ ಉದಾತ್ತ ಗುಣವನ್ನು ಗುರುತಿಸಿದ ಆಕ್ಸ್‌ಫರ್ಡ್ ವಿವಿಯು ಅವರಿಗೆ ಗೌರವ ಡಾಕ್ಟರೇಟ್ ಪ್ರದಾನಿಸುವ ಮೂಲಕ ತನ್ನನ್ನೇ ಗೌರವಿಸಿಕೊಂಡಿದೆ. ಮೂಲತಃ ಪಂಜಾಬ್‌ನವರಾಗಿರುವ 59ರ ಹರೆಯದ ಒಬೆರಾಯ್ ಯುಎಇಯಲ್ಲಿ ಪಾಕಿಸ್ತಾನಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಿದ್ದಕ್ಕಾಗಿ ಮರಣ ದಂಡನೆಗೆ ಗುರಿಯಾಗಿದ್ದ ತನ್ನ ತವರು ರಾಜ್ಯದ 10 ಜನರ ಪ್ರಾಣವುಳಿಸಲು ‘ರಕ್ತ ನಿಧಿ’ಯನ್ನು ಪಾವತಿಸುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ಅಂದ ಹಾಗೆ ಒಬೆರಾಯ್ ಪ್ರತಿವರ್ಷ ದಾನಧರ್ಮಗಳಿಗಾಗಿಯೇ ವಿನಿಯೋಗಿಸುವ ಮೊತ್ತ ಬರೋಬ್ಬರಿ 36 ಕೋ.ರೂ.ಗಳು. ಪಂಜಾಬಿಗಳು ಮಾತ್ರವಲ್ಲ, ವಿಶೇಷವಾಗಿ ಮಧ್ಯ ಪ್ರಾಚ್ಯ ಅಥವಾ ಪಶ್ಚಿಮ ಏಷ್ಯಾದಲ್ಲಿ ತನ್ನ ನೆರವು ಕೋರಿ ಬರುವ ಯಾರಿಗೇ ಆದರೂ ಆಪದ್ಬಾಂಧವರಾಗಿ ಹೆಸರು ಮಾಡಿದ್ದಾರೆ.

ಕಳೆದ ವಾರ ಯುಎಇಯ ನ್ಯಾಯಾಲಯವೊಂದರಲ್ಲಿ 60 ಲ.ರೂ.(2 ಲ.ದಿರ್ಹಮ್ಸ್)ಗಳನ್ನು ಒಬೆರಾಯ್ ಠೇವಣಿಯಿರಿಸಿದ್ದಾರೆ. ಕೊಲೆಯಾಗಿರುವ ಪಾಕಿಸ್ತಾನಿ ವ್ಯಕ್ತಿಯ ತಂದೆ ಕ್ಷಮಾದಾನ ನೀಡಲು ಒಪ್ಪಿಕೊಂಡಿರುವುದರಿಂದ ಮರಣ ದಂಡನೆಗೆ ಗುರಿಯಾಗಿ ಅಲ್ಲಿಯ ಜೈಲಿನಲ್ಲಿ ಕೊಳೆಯುತ್ತಿರುವ ಪಂಜಾಬಿನ 10 ಯುವಕರು ಶೀಘ್ರವೇ ಬಿಡುಗಡೆಗೊಳ್ಳಲಿದ್ದಾರೆ. ಒಬೆರಾಯ್ ಈವರೆಗೆ ಇಂತಹ 88 ಜನರಿಗೆ ಜೀವದಾನ ಮಾಡಿದ್ದಾರೆ.

ಈ ಯುವಕರನ್ನು ಸ್ವದೇಶಕ್ಕೆ ವಾಪಸ್ ಕರೆತರಲಿರುವ ಒಬೆರಾಯ್ ಅವರಿಗೆ ಪಂಜಾಬ್‌ನಲ್ಲಿರುವ ತನ್ನ ಸಮಾಜ ಸೇವಾ ಸಂಸ್ಥೆ ‘ಸರ್ಬತ್ ದಾ ಭಲಾ ಟ್ರಸ್ಟ್’ನ ಜಿಲ್ಲಾ ಕಚೇರಿಗಳಲ್ಲಿ ಉದ್ಯೋಗಗಳನ್ನು ನೀಡುವ ನಿರೀಕ್ಷೆಯಿದೆ.

ದುಬೈನಲ್ಲಿ ನಿರ್ಮಾಣ ಉದ್ಯಮವನ್ನು ಹೊಂದಿರುವ ಒಬೆರಾಯ್ 1992ರಲ್ಲಿ ಭಾರತದಿಂದ ಅಲ್ಲಿಗೆ ತೆರಳಿದ್ದರು.
ಅಗತ್ಯವುಳ್ಳವರಿಗೆ ಪಿಂಚಣಿಗಳನ್ನು ಮತ್ತು ಉದ್ಯೋಗಗಳನ್ನು ಪಡೆಯಲು ನೆರವಾಗಲು ಪಂಜಾಬ್‌ನಲ್ಲಿ ಹಲವರು ಕಚೇರಿಗಳನ್ನು ಹೊಂದಿರುವ ಒಬೆರಾಯ್ ಅವರ ಸೇವಾ ಚಟುವಟಿಕೆಗಳು ಈಗ ಹರ್ಯಾಣ ಮತ್ತು ಹಿಮಾಚಲ ಪ್ರದೇಶಗಳಿಗೂ ವಿಸ್ತರಿಸುತ್ತಿದೆ. ಅಲ್ಲಿ ಡಯಾಲಿಸಿಸ್ ಘಟಕಗಳನ್ನು ಮತ್ತು ಶಿಶುವಿಹಾರಗಳನ್ನು ಆರಂಭಿಸಲು ಅವರು ಯೋಜನೆಯನ್ನು ರೂಪಿಸುತ್ತಿದ್ದಾರೆ. ಅಲ್ಲದೆ ಜೈಲಿನಲ್ಲಿರುವ ಕೈದಿಗಳಿಗೆ ಕಂಪ್ಯೂಟರ್ ಗಳನ್ನೂ ಕೊಡುಗೆಯಾಗಿ ನೀಡಲಿದ್ದಾರೆ.

  ಹರ್‌ನಾಮ್ ಬ್ರಾಂಡ್‌ನ ಆಹಾರ ಉತ್ಪನ್ನಗಳ ತಯಾರಕರಾಗಿರುವ ಒಬೆರಾಯ್ ಚತುರ ಉದ್ಯಮಿ ಎಂದೇ ಗುರುತಿಸಿಕೊಂಡಿದ್ದಾರೆ. ದುಬೈನಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ನೆರವಾಗಲು ನೀರು ತುಂಬಿದ ಪ್ರದೇಶಗಳಿಂದ,ಅಷ್ಟೇ ಏಕೆ,ಸಮುದ್ರದ ಭಾಗಗಳಿಂದಲೂ ನೀರನ್ನು ತೆರವುಗೊಳಿಸುವ ಉದ್ಯಮವೂ ಅವರ ಕೈಯಲ್ಲಿದೆ. ವಿಶ್ವದ ಅತ್ಯಂತ ಎತ್ತರದ ಕಟ್ಟಡವೆಂಂಬ ಹೆಗ್ಗಳಿಕೆ ಹೊಂದಿರುವ ಬುರ್ಜ್ ಖಲೀಫಾದ ನಿರ್ಮಾಣ ಕಾಮಗಾರಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ನನ್ನ ಉದ್ಯಮ ದಿನೇ ದಿನೇ ಅಭಿವೃದ್ಧಿಗೊಳ್ಳುತ್ತಿದೆ. ನಾನು ದಾನಧರ್ಮ ಮಾಡಿದಷ್ಟೂ ಉದ್ಯಮದಲ್ಲಿ ನನ್ನ ಲಾಭವೂ ಹೆಚ್ಚುತ್ತಿದೆ ಎನ್ನುತ್ತಾರೆ ಒಬೆರಾಯ್.
ಪಂಜಾಬ್‌ನ ಗ್ರಾಮವೊಂದರಲ್ಲಿ ಜನರ ಕಡು ಬಡತನದ ಜೀವನ ನೋಡಿದ ಬಳಿಕ ತನ್ನಲ್ಲಿ ಪರೋಪಕಾರ ಬುದ್ಧಿ ಹುಟ್ಟಿಕೊಂಡಿತ್ತು ಎನ್ನುವ ಅವರು, ಬಹಳಷ್ಟು ಜನರ ಬಳಿ ಆಹಾರ, ಔಷಧಿ ಅಥವಾ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಹಣವಿಲ್ಲ. ತಾನು ಮಾಡುತ್ತಿರುವುದು ಅಂತಹವರ ಕಿಂಚಿತ್ ಸೇವೆ ಅಷ್ಟೇ ಎಂದು ವಿನಮ್ರರಾಗಿ ನುಡಿಯುತ್ತಾರೆ.

ಇವಿಎಂ,- ಚುನಾವಣಾ ಆಯೋಗಕಗಕ್ಕೆ ಸುಪ್ರೀಂ ನೋಟಿಸ್

ಇವಿಎಂ ತಿರುಚುವಿಕೆ ವಿವಾದ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೊಟೀಸು

ನವದೆಹಲಿ: ಇತ್ತೀಚೆಗೆ ನಡೆದ 5 ರಾಜ್ಯಗಳ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ವಿದ್ಯುನ್ಮಾನ ಮತಯಂತ್ರಗಳ ತಿರುಚುವಿಕೆ ವಿವಾದ ಕುರಿತು ಸಲ್ಲಿಸಲಾಗಿದ್ದ ದೂರಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಇಂದು ಚುನಾವಣಾ ಆಯೋಗಕ್ಕೆ ನೊಟೀಸ್ ಜಾರಿ ಮಾಡಿದೆ.

ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೆಹರ್ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ನ್ಯಾಯಪೀಠ, ವಕೀಲ ಮನೋಹರ್ ಲಾಲ್ ಶರ್ಮಾ ಸಲ್ಲಿಸಿದ ದೂರಿನ ಆಧಾರದ ಮೇಲೆ ನೊಟೀಸ್ ಜಾರಿ ಮಾಡಿದೆ.

ಇತ್ತೀಚೆಗೆ ಕೊನೆಗೊಂಡ 5 ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ತಿರುಚಲಾಗಿತ್ತು. ಈ ಮತಯಂತ್ರಗಳನ್ನು ಸರಿಯಾಗಿ ಪರಿಶೀಲಿಸಬೇಕು. ಅಮೆರಿಕಾದ ಕಂಪ್ಯೂಟರ್ ವಿಜ್ಞಾನಿಗಳಿಂದ ತನಿಖೆ ನಡೆಸಬೇಕು ಎಂದು ಶರ್ಮಾ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಈ ಹಂತದಲ್ಲಿ ಸಿಬಿಐ ತನಿಖೆಗೆ ಒಳಪಡಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಉತ್ತರ ಪ್ರದೇಶ ಮತ್ತು ಪಂಜಾಬ್ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ತಿರುಚಲಾಗಿತ್ತು ಎಂದು  ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಹಿರಂಗವಾಗಿ ಆರೋಪಿಸಿದ್ದರು.

ಸಚಿವ ಸ್ಥಾನದಲ್ಲಿ ಇದ್ದರೂ ನಾಟಕಕ್ಕೆ ಬಣ್ಣ ಹಚ್ಚಿದ ಉಮಾಶ್ರೀ

ಬಣ್ಣ ಹಚ್ಚಿದ ಉಮಾಶ್ರೀ: ನಾಟಕ ನೋಡಿದ ಸಿ.ಎಂ.

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಯುಗಾದಿ ಹಬ್ಬದ ದಿನ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ವೀಕ್ಷಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಖ್ಯಾತ ನಟಿ ಉಮಾಶ್ರೀ ಮತ್ತೆ ಬಣ್ಣ ಹಚ್ಚಿದ್ದಾರೆ. ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಅವರು ಅಭಿನಯಿಸಿದ್ದ ನಾಟಕವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಹಲವು ಗಣ್ಯರು ವೀಕ್ಷಿಸಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಸರಿಗಮ ವಿಜಿ ಅವರು ನಿರ್ದೇಶಿಸಿದ ‘ಸಂಸಾರದಲ್ಲಿ ಸರಿಗಮ’ ನಾಟಕದ 1391 ನೇ ಪ್ರದರ್ಶನ ಏರ್ಪಡಿಸಲಾಗಿತ್ತು. ಇದರಲ್ಲಿ ಉಮಾಶ್ರೀ ಸರಸ್ವತಿ ಪಾತ್ರ ನಿರ್ವಹಿಸಿದ್ದಾರೆ. ನಾಟಕ ಪ್ರದರ್ಶನ ಮುಗಿದ ಬಳಿಕ ಉಮಾಶ್ರೀ ಅವರನ್ನು ಸನ್ಮಾನಿಸಲಾಗಿದೆ.

ನಟರಾದ ವಿಜಯ್ ರಾಘವೇಂದ್ರ, ‘ನೆನಪಿರಲಿ’ ಪ್ರೇಮ್, ಸುಂದರರಾಜ್, ನಟಿಯರಾದ ಮೇಘನಾ ರಾಜ್, ಮಯೂರಿ ಮೊದಲಾದವರು ನಾಟಕ ವೀಕ್ಷಿಸಿದ್ದಾರೆ.

ಜಿ,ಎಸ್,ಟಿ,ಯಿಂದ ಜನಸಾಮಾನ್ಯರ ಮೆಲೆ ಆಗುವ ಪರಿಣಾಮಗಳು

ಏನಿದು ಜಿಎಸ್ ಟಿ? ಇದರಿಂದ ಜನ ಸಾಮಾನ್ಯರ ಮೇಲಾಗುವ ಪರಿಣಾಮಗಳೇನು?
ನವದೆಹಲಿ: ಹಲವು ಸುತ್ತಿನ ಮಾತುಕತೆಗಳ ನಂತರ ಕೊನೆಗೂ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಮತ್ತು ಏಕೀಕೃತ ಸರಕು ಸೇವಾ ತೆರಿಗೆಗಳಿಗೆ ಜಿಎಸ್ ಟಿ ಮಂಡಳಿಯ ಒಪ್ಪಿಗೆ ದೊರೆತಿದೆ. ಈ ಮೂಲಕ ಭಾರತದ ಅತಿ ದೊಡ್ಡ ತೆರಿಗೆ ಸುಧಾರಣೆಯತ್ತ ಅಡಿಯಿಟ್ಟಂತಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೇ 10 ವರ್ಷಗಳ ಕಾಯುವಿಕೆಯ ನಂತರ ದೇಶವೂ ಏಕರೂಪ ತೆರಿಗೆ ವ್ಯವಸ್ಥೆಗೆ ಸಾಕ್ಷಿಯಾಗಲಿದೆ.

ಉತ್ಪಾದಕ ವಸ್ತುಗಳ ಎಲ್ಲ ತೆರಿಗೆಯನ್ನು ಒಂದೇ ವ್ಯವಸ್ಥೆಯಡಿ ತರುವ ತೆರಿಗೆ ಪದ್ಧತಿಗೆ ಸರಕು ಸೇವಾ ತೆರಿಗೆ ಎನ್ನಲಾಗುತ್ತದೆ. ಜಿಎಸ್ ಟಿ ಜಾರಿಯಾದರೆ ವ್ಯಾಪಾರ ವಹಿವಾಟು ಇದರಿಂದ ದೇಶಾದ್ಯಂತ ಯಾವುದೇ ಅಡೆತಡೆಯಿಲ್ಲದೆ ವಹಿವಾಟು ನಡೆಸಬಹುದು. ವಹಿವಾಟು ವೆಚ್ಚ ಕೂಡ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಜಿಎಸ್ ಟಿ ಜಾರಿಯಾದರೆ ಸಂಕೀರ್ಣ ತೆರಿಗೆ ಪದ್ಧತಿ ಸರಳ ತೆರಿಗೆ ಪದ್ಧತಿಯಾಗುತ್ತದೆ.
ಇನ್ನೊಂದೆಡೆ ಇದು ಆರ್ಥಿಕ ಅಭಿವೃದ್ಧಿ ದರ ಸುಧಾರಣೆಗೂ ನೆರವಾಗುತ್ತದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಜಿ ಎಸ್ ಟಿಯಲ್ಲಿ ಮೂರು ವಿಭಾಗಗಳಿದ್ದು, ಆ ಪೈಕಿ, ಕೇಂದ್ರ ಸರಕು ಮತ್ತು ಸೇವಾ ತೆರಿಗೆ(ಸಿಜಿಎಸ್ ಟಿ) ಒಂದು, ಪ್ರಸ್ತುತ ಇರುವ ಕೇಂದ್ರ ಅಬಕಾರಿ ತೆರಿಗೆ, ಕೇಂದ್ರ ಮಾರಾಟ ತೆರಿಗೆ, ಹೆಚ್ಚುವರಿ ಅಬಕಾರಿ ತೆರಿಗೆ, ಹೆಚ್ಚುವರಿ ಸೀಮಾ ಸುಂಕಗಳು ಸಿಜಿಎಸ್ ಟಿಯೊಂದಿಗೆ ಸೇರಿಕೊಳ್ಳುತ್ತವೆ. ಸಿಜಿಎಸ್ ಟಿ ಅನ್ವಯ ಸಂಗ್ರಹಿಸಲಾದ ಎಲ್ಲಾ ಆದಾಯವು ಕೇಂದ್ರಕ್ಕೆ ಸೇರುತ್ತದೆ. ಅಂದರೆ ಗ್ರಾಹಕ ಯಾವುದೇ ವಸ್ತುವನ್ನು ಖರೀದಿಸುವಾಗ ರಾಜ್ಯ ಹಾಗೂ ಕೇಂದ್ರಕ್ಕೆ ಪ್ರತ್ಯೇಕ ತೆರಿಗೆ ಪಾವತಿಸುವಂತಿಲ್ಲ, ಜಿಎಸ್ ಟಿ ಮೂಲಕ ಒಂದು ಬಾರಿ ತೆರಿಗೆ ಪಾವತಿಸುತ್ತಾನೆ.

ಸಾಮಾನ್ಯ ಜನರ ಮೇಲೆ ಜಿಎಸ್ ಟಿ ಪರಿಣಾಮ

ಹೋಟೆಲ್ಗಳು, ರೆಸ್ಟೋರೆಂಟ್ಗಳಲ್ಲಿ ಆಹಾರ ಸೇವನೆ ತುಟ್ಟಿ, ಸೇವಾ ತೆರಿಗೆ ಶೇ.18ಕ್ಕೆ ನಿಗದಿಯಾದರೆ ದೂರವಾಣಿ ಬಿಲ್ ಮೊತ್ತ ಏರಿಕೆ, ಆಮದು ಮಾಡಿದ ಫೋನ್ ಖರೀದಿ ದುಬಾರಿ. ಆಭರಣಗಳ ಖರೀದಿ ಮೇಲೂ ತೆರಿಗೆ ಹೆಚ್ಚು ಬೀಳುವ ಕಾರಣ, ಚಿನ್ನದ ದರ ಏರಿಕೆ, ಇ-ಕಾಮರ್ಸ್ ಕೂಡ ಜಿಎಸ್ಟಿ ವ್ಯಾಪ್ತಿಗೆ ಬರುವ ಕಾರಣ ಆನ್ಲೈನ್ನಲ್ಲಿ ಖರೀದಿಸುವ ವಸ್ತುಗಳು ತುಟ್ಟಿ, ಜಿಎಸ್ಟಿಯೊಳಗೇ ಎಕ್ಸೈಸ್ ಮತ್ತು ವ್ಯಾಟ್ ವಿಲೀನಗೊಳ್ಳುವ ಕಾರಣ ಸಿದ್ಧ ಉಡುಪುಗಳ ದರ ಇಳಿಕೆ, ತೆರಿಗೆ ದರ ಇಂತಿಷ್ಟೇ ಎಂದು ನಿಗದಿಯಾಗುವ ಕಾರಣ ಕಾರುಗಳ ಬೆಲೆ ಇಳಿಯಲಿವೆ, ಎಲ್‌ಇಡಿ ಟಿವಿಗಳು ಅಗ್ಗವಾಗಲಿದೆ.

ಜಿ,ಎಸ್,ಟಿ, ಮಸೂದೆ ಜುಲೈ 1 ರಿಂದ ಜಾರಿ

ಕೊನೆಗೂ ಜಿಎಸ್ ಟಿ ಕರಡು ಮಸೂದೆಗೆ ಒಪ್ಪಿಗೆ: ಜುಲೈ 1ರಿಂದ ಅನುಷ್ಠಾನ ಸಾಧ್ಯತೆ
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಯನ್ನು ಜುಲೈ 1 ರಿಂದ ಜಾರಿಗೆ ತರುವ ಹಾದಿ ಸುಗಮವಾಗುತ್ತಿದೆ. ಮಾರ್ಚ್ 9 ರಿಂದ ನಡೆಯುವ ಬಜೆಟ್ ಅಧಿವೇಶನದಲ್ಲಿ ಮಸೂದೆಗೆ ಶಾಸನಾತ್ಮಕ ಒಪ್ಪಿಗೆ ಪಡೆಯುವ ವಿಶ್ವಾಸವಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಜಿಎಸ್ ಟಿ ಮಂಡಳಿಯ ಸಭೆ ಬಳಿಕ ಮಾತನಾಡಿದ ಅವರು ಕೇಂದ್ರದ ಜಿಎಸ್ ಟಿ ಮತ್ತು ಅಂತರ ರಾಜ್ಯ ವಹಿವಾಟಿಗೆ ಸಂಬಂಧಿಸಿದ ಸಮಗ್ರ ಕರಡು ಮಸೂದೆಗೆ ಜಿಎಸ್ ಟಿ ಮಂಡಳಿ ಒಪ್ಪಿಗೆ ನೀಡಿದೆ. ಆದರೆ ರಾಜ್ಯಗಳಿಗೆ ಸಂಬಂಧಿಸಿದ ಯುಟಿ-ಜಿಎಸ್ ಟಿ ಮತ್ತು ಕೇಂದ್ರಾಡಳಿತ ಮಸೂದೆಗಳಿಗೆ ಮಾರ್ಚ್ 16 ರಂದು ನಡೆಯಲಿರುವ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗುವುದು ಎಂದು ಹೇಳಿದ್ದಾರೆ.

ಗರಿಷ್ಠ ಶೇ. 40 ರ ವರೆಗೂ ತೆರಿಗೆ ವಿಧಿಸಲು (ಶೇ.20 ರಷ್ಟು ಕೇಂದ್ರ ಮತ್ತು ಶೇ.20 ರಷ್ಟು ರಾಜ್ಯಗಳು) ಜಿಎಸ್ ಟಿ ಮಸೂದೆಯಲ್ಲಿ ಅವಕಾಶವಿದೆ.
ಆದರೆ ತೆರಿಗೆ ದರವನ್ನು ಈ ಹಿಂದೆ ಮಂಜಳಿಯು ಒಪ್ಪಿಗೆ ನೀಡಿರುವ ಹಂತಗಳಲ್ಲಿಯೇ (ಶೇ.5, ಶೇ.12, ಶೇ.18 ಮತ್ತು ಶೇ. 28) ಇಡಲಾಗುವುದು ಎಂದು ಅವರು ವಿವರಿಸಿದ್ದಾರೆ.

ಧ್ವನಿ ಮತದ ಮೂಲಕ 4 ಜಿ,ಎಸ್,ಟಿ ಮಸೂದೆಗೆ ಅನುಮೋದನೆ

ಲೋಕಸಭೆ: ಧ್ವನಿ ಮತದ ಮೂಲಕ 4 ಜಿಎಸ್ ಟಿ ಮಸೂದೆಗಳಿಗೆ ಅನುಮೋದನೆ
ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿದ್ದ ಜಿಎಸ್ ಟಿಗೆ ಸಂಬಂಧಿಸಿದ 4 ಪ್ರಮುಖ ಮಸೂದೆಗಳನ್ನು ಬುಧವಾರ ಲೋಕಸಭೆಯಲ್ಲಿ ಆಂಗೀಕರಿಸಲಾಗಿದೆ.

ಸತತ 9 ಗಂಟೆಗಳ ಕಾಲ ಸುಧೀರ್ಘ ಚರ್ಚೆಯ ಬಳಿಕ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಮಸೂದೆ (ಸಿ.ಜಿ.ಎಸ್.ಟಿ) ಮಸೂದೆ 2017, ಏಕೀಕೃತ ಸರಕು ಮತ್ತು ಸೇವಾ ತೆರಿಗೆ ಮಸೂದೆ-2017, ಕೇಂದ್ರಾಡಳಿತ ಪ್ರದೇಶ ಸರಕು  ಮತ್ತು ಸೇವಾ ತೆರಿಗೆ ಮಸೂದೆ-2017, ಜಿಎಸ್ ಟಿ ಮಸೂದೆ (ರಾಜ್ಯಗಳಿಗೆ ಪರಿಹಾರ ನೀಡುವ ಮಸೂದೆ)-2017 ಗಳನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಸದಸ್ಯರ ಧ್ವನಿಮತದ ಮೂಲಕ ಒಂದರ ಹಿಂದೆ ಒಂದು  ಮಸೂದೆಯಂತೆ ಒಟ್ಟು 4 ಮಸೂದೆಗಳನ್ನು ಅಂಗೀಕರಿಸಲಾಗಿದೆ.

ಕೇಂದ್ರ ಮತ್ತು ಏಕೀಕೃತ ಜಿಎಸ್ ಟಿ ಮಸೂದೆಯು ದೇಶವ್ಯಾಪಿ ಏಕರೂಪದ ದಂಡ ಮತ್ತು ತೆರಿಗೆ ಸಂಗ್ರಹಿಸುವ ಕಾನೂನಾಗಿದ್ದು, ಜಿಎಸ್ ಟಿ ಪರಿಹಾರ ಮಸೂದೆಯೂ ಜಿಎಸ್ ಟಿ ಜಾರಿ  ಬಳಿಕ ರಾಜ್ಯ ಸರ್ಕಾರಗಳಿಗಾಗುವ  ನಷ್ಟವನ್ನು ಭರಿಸುವ ಮತ್ತು ಪರಿಹಾರ ನೀಡುವ ಮಸೂದೆಯಾಗಿದೆ.
ಇದು ಕೇಂದ್ರಾಡಳಿತ ಪ್ರದೇಶಕ್ಕೂ ಅನ್ವಯವಾಗಲಿದೆ ಎಂದು ಜೇಟ್ಲಿ ಸದನಕ್ಕೆ ಸ್ಪಷ್ಟಪಡಿಸಿದರು.

ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸಚಿವ ಸಂಪುಟದ ಅನುಮೋದನೆ ಪಡೆದು ಮಾರ್ಚ್ 27 ರಂದು ಲೋಕಸಭೆಯಲ್ಲಿ ಈ ನಾಲ್ಕು ಜಿಎಸ್ ಟಿ ಮಸೂದೆಗಳನ್ನು ಮಂಡಿಸಿದ್ದರು.  ಜಿಎಸ್ ಟಿ ಜಾರಿಯ (ಜುಲೈ.1 ರಿಂದ) ಒಳಗಾಗಿ ಈ  ಮಸೂದೆಗಳನ್ನು ರಾಜ್ಯದ ವಿಧಾನಸಭೆಗಳಲ್ಲೂ ಮಂಡಿಸಿ ಅಂಗೀಕಾರ ಪಡೆದುಕೊಳ್ಳಲಾಗುತ್ತದೆ. ಜಿಎಸ್ ಟಿ ಜಾರಿಯಿಂದ ಆರ್ಥಿಕ ಬೆಳವಣಿಗೆ ಶೇ.0.5 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.

ಜಿ,ಎಸ್,ಟಿ, ಯ ಗುಣ ಹಾಗೂ ಅವಗುಣಗಳು


GST
ಸದ್ಯ ಎಲ್ಲ ಕಡೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ನೀತಿಯದ್ದೇ ಚರ್ಚೆ. ಹಾಗಾದರೆ ಈ ಜಿಎಸ್ ಟಿ ಅಂದರೆ ಏನು? ಸಾಮಾನ್ಯ ಜನರ ಮೇಲೆ ಬೀರುವ ಪರಿಣಾಮ ಎಂಥಹುದು. ರಾಜ್ಯಗಳ ಮೇಲೆ ಬಿರುವ ಪರಿಣಾಮ ಏನು? ಯಾರಿಗೆ ಲಾಭ? ಯಾರಿಗೆ ನಷ್ಟ? ಆರ್ಥಿಕ ವ್ಯವಸ್ಥೆಯಲ್ಲಿ ನೀತಿ ತರುವ ಬದಲಾವಣೆಗಳು ಏನು? ಎಂಬ ಹತ್ತಾರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗುತ್ತದೆ.

ಸರಳ ಉದಾಹರಣೆಯೊಂದನ್ನು ನೋಡೋಣ.. ಒಂದು ಸಾಬೂನು ದೇಶದ ಒಳಗಡೆ ತಯಾರಾಗಿ ಅದು ಗ್ರಾಹಕನ ಕೈ ಸೇರುವ ವೇಳೆಗೆ ಅನೇಕ ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗೆ ಒಳಪಡಬೇಕಾಗುತ್ತದೆ. ರಾಜ್ಯದಿಂದ ರಾಜ್ಯಕ್ಕೂ ಅದು ಭಿನ್ನವಾಗಿರುತ್ತದೆ. ಮೌಲ್ಯವರ್ಧಿತ ತೆರಿಗೆ(ವ್ಯಾಟ್), ಸೇವಾ ತೆರಿಗೆ, ಸೆಸ್ ಈ ಬಗೆಯ ತೆರಿಗೆಯ ಹೆಸರುಗಳನ್ನು ಇದಕ್ಕೆ ಸೇರಿಸಿಕೊಳ್ಳಬಹುದು. ಉತ್ಪಾದಕನ ಕೈಯಿಂದ ಗ್ರಾಹಕನ ಕೈ ಸೇರುವವರೆಗೆ ತೆರಿಗೆಗಳನ್ನು ಹೇರಿಸಿಕೊಳ್ಳುತ್ತಲೇ ಸಾಗುತ್ತದೆ.

ಸಾಬೂನಿಗೆ ತಮಿಳುನಾಡಲ್ಲಿ 12 ರು. ಇದ್ದರೆ, ಅದೇ ಸಾಬೂನಿಗೆ ಕರ್ನಾಟಕದಲ್ಲಿ 16 ರು. ನೀಡಬೇಕಾಗುತ್ತದೆ. ಇದಕ್ಕೆ ಕೆಲ ಪರೋಕ್ಷ ತೆರಿಗೆಗಳೇ ಕಾರಣ. ಆದರೆ ಜಿಎಸ್ ಟಿ ಜಾರಿಯಾದರೆ ಈ ಎಲ್ಲ ಪರೋಕ್ಷ ತೆರಿಗೆಗಳನ್ನು ತೆಗೆದು ಹಾಕಿ ನೇರ ತೆರಿಗೆ ಮಾತ್ರ ಉಳಿದುಕೊಳ್ಳುತ್ತದೆ. ಅಂದರೆ ರಾಜ್ಯದಿಂದ ರಾಜ್ಯಕ್ಕೆ ಒಂದೇ ವಸ್ತುವಿನ ಬೆಲೆಯಲ್ಲಿ ಭಾರೀ ದರ ವ್ಯತ್ಯಾಸ ಕಾಣ ಸಿಗುವುದಿಲ್ಲ. ಅಲ್ಲದೇ ಉತ್ಪಾದನ ಘಟಕಗಳು ಪಾವತಿ ಮಾಡುವ ತೆರಿಗೆಯಲ್ಲಿ ಬದಲಾವಣೆ ಆಗುವುದಿಲ್ಲ.

ಉತ್ಪಾದಕ ವಸ್ತುಗಳ ಎಲ್ಲ ತೆರಿಗೆಯನ್ನು ಒಂದೇ ವ್ಯವಸ್ಥೆಯಡಿ ತರುವ ತೆರಿಗೆ ಪದ್ಧತಿಗೆ ಶ್ರೀ ಕಾರವೇ "ಸರಕು ಮತ್ತು ಸೇವಾ ತೆರಿಗೆ"(ಜಿಎಸ್ ಟಿ). ದೇಶಾದ್ಯಂತ ಏಕರೂಪದ ತೆರಿಗೆ ಪದ್ಧತಿ ಅನ್ವಯವಾಗುಂತೆ ಮಾಡಲಾಗುತ್ತಿದ್ದು ದೇಶದ ಒಳಗಿನ ಅರ್ಥ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ನಿರೀಕ್ಷೆ ಮಾಡಲಾಗುತ್ತದೆ.

*ಜಿಎಎಸ್ ಟಿ ಅಗತ್ಯ ಏನು?*

ಪ್ರಸ್ತುತ ನಮ್ಮ ದೇಶದಲ್ಲಿ ವಿವಿಧ ರೀತಿಯ ತೆರಿಗೆ ವಿಧಾನಗಳಿವೆ. ಕೇಂದ್ರ ಮತ್ತು ಅಬಕಾರಿ ಸುಂಕ , ಸೇವಾ ತೆರಿಗೆ ಮತ್ತು ಕಸ್ಟಮ್ಸ್ ತೆರಿಗೆಗಳನ್ನು ಕೇಂದ್ರ ಸರ್ಕಾರ ಹಾಕುವುದಿದ್ದರೆ, ಮೌಲ್ಯವರ್ಧಿತ ತೆರಿಗೆ (ವ್ಯಾಟ್ ), ಮನರಂಜನಾ ತೆರಿಗೆ, ಐಷಾರಾಮಿ ತೆರಿಗೆ ಅಥವಾ ಲಾಟರಿ ತೆರಿಗೆಗಳನ್ನು ಆಯಾ ರಾಜ್ಯ ಸರಕಾರಗಳು ವಿಭಿನ್ನವಾಗಿ ನಿಭಾಯಿಸುತ್ತವೆ. ಈ ಎಲ್ಲಾ ತೆರಿಗೆಗಳನ್ನು ಒಂದೇ ತೆರಿಗೆ ವಿಧಾನದಡಿ ತರಲು ಜಿಎಸ್ ಟಿ ನೆರವಾಗುತ್ತದೆ.

*ಸರಳ ವಹಿವಾಟು*

ಜಿಎಸ್ ಟಿ ಜಾರಿಯಾದರೆ ವ್ಯಾಪಾರ ವಹಿವಾಟು ಇದರಿಂದ ದೇಶಾದ್ಯಂತ ಯಾವುದೇ ಅಡೆತಡೆಯಿಲ್ಲದೆ ವಹಿವಾಟು ನಡೆಸಬಹುದು. ವಹಿವಾಟು ವೆಚ್ಚ ಕೂಡ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.

*ಉತ್ಪಾದಕ ಮತ್ತು ಗ್ರಾಹಕರಿಗೆ ಲಾಭ*

ಜಿಎಸ್ ಟಿ ಜಾರಿಯಾದರೆ ಸಂಕೀರ್ಣ ತೆರಿಗೆ ಪದ್ಧತಿ ಸರಳ ತೆರಿಗೆ ಪದ್ಧತಿಯಾಗುತ್ತದೆ. ಇನ್ನೊಂದೆಡೆ ಇದು ಆರ್ಥಿಕ ಅಭಿವೃದ್ಧಿ ದರ ಸುಧಾರಣೆಗೂ ನೆರವಾಗುತ್ತದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.
ಕನ್ನಡ ಸಾಮಾನ್ಯ ಜ್ಞಾನ

*ಯುಪಿಎಯಿಂದ ಎನ್ ಡಿ ಎ ವರೆಗೆ*

ಹಿಂದೆ ಜಿಎಸ್ ಟಿ ಮಸೂದೆ ಬಗ್ಗೆ ಮೊದಲು ಧ್ವನಿ ಎತ್ತಿದ್ದು ಯುಪಿಎ ಸರ್ಕಾರ. ರಾಜಕೀಯ ಬದಲಾವಣೆಗಳ ನಂತರ ಮಸೂದೆ ಹಿಂದಕ್ಕೆ ಹೋಗಿತ್ತು. ಇದೀಗ ಎನ್ ಡಿಎ ಸರ್ಕಾರ ಮಸೂದೆ ಕೈಗೆತ್ತಿಕೊಂಡಿದ್ದು ಲೋಕಸಭೆಯಲ್ಲಿ ಅಮಗೀಕಾರ ಆಗಿದೆ. ಕಾಂಗ್ರೆಸ್ ಆಗ್ರಹದಂತೆ ಮಸೂದೆಯಲ್ಲಿ ಕೆಲ ಬದಲಾವಣೆ ಮಾಡಲಾಗಿದ್ದು ರಾಜ್ಯಸಭೆಯಲ್ಲೂ ಅಂಗೀಕಾರ ಆಗುವ ಎಲ್ಲ ಸಾಧ್ಯತೆಗಳಿವೆ.

*ಜಿಎಸ್ಟಿಯ ಅವಗುಣಗಳು*

ಜಿಎಸ್ ಟಿ ಪೆಟ್ರೋಲಿಯಂ ಮತ್ತು ಆಲ್ಕೋಹಾಲ್ ಉತ್ಪನ್ನಗಳಿಗೆ ಅನ್ವಯವಾಗಲ್ಲ. ಇದರಿಂದ ಸರ್ಕಾದರ ಬೊಕ್ಕಸಕ್ಕೆ ಭಾರೀ ನಷ್ಟವಾಗುವ ಸಾಧ್ಯತೆ ಇದೆ. 
* ಇಷ್ಟು ದಿನ ಒಂದು ಆಧಾರದಲ್ಲಿ ತೆರಿಗೆ ರಿಟರ್ನ್ಸ್ ಪಾವತಿ ಮಾಡುತ್ತಿದ್ದ ಸಾಮಾನ್ಯ ಮನುಷ್ಯನಿಗೆ ಹೊಸ ತೆರಿಗೆ ಲೆಕ್ಕ ಅರ್ಥವಾಗಲು ಕೆಲ ದಿನಗಳೆ ಹಿಡಿಯಬಹುದು ಅಥವಾ ಗೊಂದಲ ನಿರ್ಮಾಣವಾಗುವ ಸಾಧ್ಯತೆಯೂ ಇದೆ.
* ಜಿಎಸ್ ಟಿ ಬಿಲ್ ನ ಸಮಗ್ರ ಅನುಷ್ಠಾನಕ್ಕೆ ಬಲಿಷ್ಠ ಐಟಿ ವ್ಯವಸ್ಥೆ ಅಗತ್ಯ, ಆದರೆ ಭಾರತ ಐಟಿ ವ್ಯವಸ್ಥೆಯಲ್ಲಿ ಕೆಲ ಕೊರತೆಗಳನ್ನು ಎದುರಿಸುತ್ತಿದೆ.
* ಸದ್ಯದ ಮೌಲ್ಯವರ್ಧಿತ ತೆರಿಗೆ ಶೇ. 12.5 ರ ಜಾಗದಲ್ಲಿ ಶೇ. 16 ಪ್ರತಿಷ್ಠಾಪನೆಯಾಗುವ ಸಾಧ್ಯತೆ ಇದೆ.
* ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ತೆರಿಗೆ ಹಂಚಿಕೆಯಲ್ಲಿ ಗೊಂದಲಗಳು ಏರ್ಪಟ್ಟರೂ ಆಶ್ಚರ್ಯವಿಲ್ಲ.
*ರಾಜ್ಯಗಳಿಗಿದ್ದ ಹೆಚ್ಚುವರಿ ಶೇ. 1 ತೆರಿಗೆ ವಿಧಿಸುವ ಹಕ್ಕನ್ನು ಜಿಎಸ್ ಟಿ ಕಸಿದುಕೊಳ್ಳುತ್ತದೆ...

ಮಂಗಳವಾರ, ಮಾರ್ಚ್ 28, 2017

ರಸ್ತೆ ಸಾರಿಗೆಗೆ ಸಂಬಂಧಿಸಿದ ಯೋಜನೆಗಳು

ರಸ್ತೆ ಸಾರಿಗೆಗೆ ಸಂಬಂಧಿಸಿದ ಯೋಜನೆಗಳು

ನಾಗಪುರ ಯೋಜನೆವರ್ಷ: 1943ಭಾಗವಹಿಸಿದ್ದವರು:ಎಲ್ಲಾ ರಾಜ್ಯದ ಇಂಜಿನಿಯರ್‌ಗಳು ಸಭೆಯಲ್ಲಿ ಭಾಗವಹಿಸಿದ್ದರು.
ಉದ್ದೇಶ:ಹತ್ತು ವರ್ಷಗಳ ಅವಧಿಗೆ ರಸ್ತೆ ಅಭಿವೃದ್ಧಿ ಯೋಜನೆಯನ್ನ ಸಿದ್ಧಪಡಿಸುವುದು.
ಮುಖ್ಯಾಂಶಗಳು:

# ನಾಗಪುರ ಯೋಜನೆ ಪಕ್ಕ ರಸ್ತೆಗಳನ್ನು 88,000 ದಿಂದ 1,23,000ಮೈಲಿಗಳಿಗೆ ಮತ್ತು ಕಚ್ಚಾ ರಸ್ತೆಗಳನ್ನು 1,32,000 ದಿಂದ 2,08,000 ಮೈಲುಗಳಿಗೆ ಹೆಚ್ಚಿಸುವ ಗುರಿ ಹೊಂದಿತ್ತು.

# ನಾಗಪುರ ಯೋಜನೆ ರಸ್ತೆಗಳನ್ನು ನಾಲ್ಕು ವಿಧಗಳಾಗಿ ವಿಂಗಡಿಸಿತು ಅವುಗಳೆಂದರೆ,
1) ರಾಷ್ಟ್ರೀಯ ಹೆದ್ದಾರಿ,
2) ರಾಜ್ಯ ಹೆದ್ದಾರಿ,
3) ಜಿಲ್ಲಾ ರಸ್ತೆ,
4) ಗ್ರಾಮೀಣ ರಸ್ತೆ.

# ಈ ಯೋಜನೆಯನ್ನು 1948ರಲ್ಲಿ ನವೀಕರಿಸಲಾಯಿತು.

 

ಬಾಂಬೆ ಯೋಜನೆವರ್ಷ:1957ರಲ್ಲಿ
ಭಾಗವಹಿ ಸಿದ್ದವರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಮುಖ ಇಂಜಿನಿಯರ್‌ಗಳು ಮುಂಬೈನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.
ಗುರಿ: ಬಾಂಬೆ ಯೋಜನೆ ರಸ್ತೆ ಉದ್ದವನ್ನು 1961ರಲ್ಲಿ ಇದ್ದ 6.69ಲಕ್ಷ ಕಿ.ಮೀ.ಗಳಿಂದ 1981ರ ವೇಳೆಗೆ 10.51ಲಕ್ಷ ಕಿ.ಮೀ.ಗಳಿಗೆ ಹೆಚ್ಚಿಸುವ ಗುರಿ ಹೊಂದಿತ್ತು.

 

ಹೈದರಾಬಾದ್ ಯೋಜನೆವರ್ಷ:1959

ಭಾಗವಹಿಸಿದ್ದವರು:
ಹೈದರಾಬಾದ್‌ನಲ್ಲಿ ಐದು ರಾಜ್ಯಗಳ ಮುಖ್ಯ ಇಂಜಿನಿಯರ್‌ಗಳು ಮತ್ತು ಕೇಂದ್ರದ ಮುಖ್ಯ ಇಂಜಿನಿಯರ್‌ಗಳು ಭಾಗವಹಿಸಿದ್ದರು.

ಮುಖ್ಯಾಂಶಗಳು:

# ಸಭೆಯಲ್ಲಿ 20 ವರ್ಷಗಳ ಒಂದು ರಸ್ತೆ ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಿದರು.

# 1961 ರಿಂದ 81ರ ನಡುವೆ 3,79,000 ಮೈಲುಗಳಷ್ಟು ರಸ್ತೆ ಹೆಚ್ಚಳವಾಗಬೇಕೆಂದು ಉದ್ದೇಶಿಸಿತು.

 

ರೈಲು ಸಾರಿಗೆ

# ಭಾರತದಲ್ಲಿ ರೈಲುಮಾರ್ಗ ನಿರ್ಮಾಣ ಕಾರ್ಯವನ್ನು  ಗವರ್ನರ ಜನರಲ್ ಲಾರ್ಡ್ ಹಾರ್ಡಿಂಜ್ 1844 ರಲ್ಲಿ ಪ್ರಾರಂಭಿಸಿದರು.

# ಭಾರತದ ಮೊಟ್ಟ ಮೊದಲ ರೈಲು 1853ರ ಏಪ್ರಿಲ್ 16ರಂದು ಮುಂಬೈ ಬೋರಿ ಬಂದರ್‌ನಿಂದ ಠಾಣೆ ನಡುವೆ (ಮುಂಬೈ - ಠಾಣೆ) 34ಕಿ.ಮೀ. ಸಂಚಾರ ನಡೆಸಿತು. (ಪ್ರಯಾಣಿಕರನ್ನು ಹೊತ್ತು ಸಾಗಿರಲಿಲ್ಲ)

# ಭಾರತದಲ್ಲಿ ಮೊದಲ ರೈಲು ಸಾರಿಗೆ ಪ್ರಾರಂಭ ಮಾಡಿದವರು ಗವರ್ನರ್ ಜನರಲ್ 'ಡಾಲ್ ಹೌಸಿ'.

# 15 ಆಗಸ್ಟ್ 1854ರಂದು ಕೋಲ್ಕತ್ತಾದ ಹೌರ ನಿಲ್ದಾಣದಿಂದ ಹೂಗ್ಲಿಗೆ 24ಮೈಲು ಸಂಚರಿಸಿದ ಈಸ್ಟ್ ಇಂಡಿಯಾ ಕಂಪೆನಿಯ ರೈಲನ್ನು 'ಭಾರತದ ಮೊದಲ ಪ್ರಯಾಣಿಕರ ರೈಲು' ಎಂದು ಕರೆಯುತ್ತಾರೆ.

# ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ 1856 ರಲ್ಲಿ ಮದ್ರಾಸ್‌ನಲ್ಲಿ ರೈಲು ಸಂಚಾರ ಆರಂಭವಾಯಿತು. ವೇಸರಪಾಂಡಿ ಯಿಂದ ಆರ್ಕಾಡ್ ನಡುವೆ 63ಮೈಲು ಸಂಚರಿಸಿತು.

# ಉತ್ತರ ಭಾರತದ ಮೊದಲ ರೈಲು 1859 ಮಾರ್ಚ್ 3 ರಂದು ಅಲಹಾಬಾದ್ - ಕಾನ್ಪುರದ ನಡುವೆ 119 ಮೈಲು ಸಂಚಾರ ಆರಂಭಿಸಿತು.

# 19 ಅಕ್ಟೋಬರ್ 1875 ರಂದು ಹಥ್ರಾಸ್ ರಸ್ತೆಯಿಂದ ಮಥುರಾ ದಂಡು ರೈಲು ನಿಲ್ದಾಣಕ್ಕೆ ಸಂಚರಿಸಿದ ರೈಲು ಪಶ್ಚಿಮ ಭಾರತದ ಮೊದಲ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

 

ರೈಲು ಸಾರಿಗೆಗೆ ಸಂಬಂಧಿಸಿದ ಪ್ರಮುಖ ವಿಷಯಗಳು:

# ರೈಲು ಸಾರಿಗೆ ಉದ್ಯಮವು ಸಂಪೂರ್ಣವಾಗಿ ಕೇಂದ್ರ ಸರ್ಕಾರದಅಧೀನದಲ್ಲಿದೆ. 

# ಭಾರತದ ರೈಲು ಸಾರಿಗೆ ಪ್ರಪಂಚದಲ್ಲಿ4ನೇ ಸ್ಥಾನವನ್ನು ಪಡೆದಿದೆ.

# ಭಾರತೀಯ ರೈಲ್ವೆ ಇಲಾಖೆಯ 'ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್' ಹಾಗೂ 'ಮೌಂಟೇನ್ ರೈಲ್ವೇಸ್ ಆಫ್ ಇಂಡಿಯಾ’ಈ ಎರಡು ಸ್ಥಳಗಳು ಯುನೆಸ್ಕೊ ವಿಶ್ವ ಪಾರಂಪರಿಕ ತಾಣ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

# ದೇಶದ ವಿಭಿನ್ನ ಸ್ಥಳಗಳಲ್ಲಿರುವ ಮೂರು ಪರ್ವತ ಮಾರ್ಗಗಳು ಯುನೆಸ್ಕೊ ಮಾನ್ಯತೆ ಪಡೆದಿವೆ.

ಪಶ್ಚಿಮ ಬಂಗಾಳದ ದಾರ್ಜಿಲಿಂಗ್ ಹಿಮಾಲಯ ನ್ಯಾರೊಗೇಜ್ ರೈಲ್ವೆ (ಅಗೋನಿ ಪಾಯಿಂಟ್)ತಮಿಳುನಾಡಿನ ನೀಲಗಿರಿ ಪರ್ವತ ಶ್ರೇಣಿಯ ಮೀಟರ್ ಗೇಜ್ ರೈಲ್ವೆಹಿಮಾಚಲ ಪ್ರದೇಶದ ಕಾಲ್ಕಾ ಶಿಮ್ಲಾ ನ್ಯಾರೊ ಗೇಜ್ ರೈಲ್ವೆ.

 

ರೈಲ್ವೆ ಗೇಜುಗಳು :-

1. ಬ್ರಾಡ್ ಗೇಜ್:

1.676 ಮೀಟರ್ ಅಗಲ

2. ಮೀಟರ್ ಗೇಜ್: 

1 ಮೀಟರ್ ಅಗಲ

3. ನ್ಯಾರೋ ಗೇಜ್: 

0.762 ಮತ್ತು 0.610 ಮೀಟರ್ ಅಗಲ 

 

ರೈಲ್ವೆ ಉತ್ಪಾದನಾ ಘಟಕಗಳು

ರೈಲ್ವೆ ಬೋಗಿ ತಯಾರಿಕಾ ಕಾರ್ಖಾನೆ:

# ಪಂಜಾಬ್ ನ ಕಪುರ್ ತಾಲ್‌ನಲ್ಲಿ ರೈಲ್ವೆ ಬೋಗಿ ತಯಾರಿಕಾ ಕಾರ್ಖಾನೆ ಇದೆ. 1986 ರಲ್ಲಿ ಈ ಘಟಕವು ಸ್ಥಾಪನೆಯಾಯಿತು. ಇದು ಪ್ಯಾಸೆಂಜರ್ ಬೋಗಿಗಳನ್ನು ತಯಾರಿಸುತ್ತದೆ.

# ಉತ್ತರಪ್ರದೇಶದ ರಾಯ್ ಬರೇಲಿಯಲ್ಲಿ2012 ರಲ್ಲಿ ಸ್ಥಾಪನೆಯಾದ ರೈಲ್ವೆ ಬೋಗಿ ತಯಾರಿಕಾ ಘಟಕ ಇದೆ. ಇದು ಪ್ಯಾಸೆಂಜರ್ ಬೋಗಿಗಳನ್ನು ತಯಾರಿಸುವುದು.

 

ಇಂಟಿಗ್ರೇಲ್ ಕೋಚ್ ಫ್ಯಾಕ್ಟರಿ:

ತಮಿಳುನಾಡಿನ ಚೆನ್ನೈನಲ್ಲಿರುವ ಘಟಕವು ಪ್ಯಾಸೆಂಜರ್ ಬೋಗಿಗಳನ್ನು ತಯಾರಿಸುತ್ತದೆ. ಇದು 1952 ರಲ್ಲಿಸ್ಥಾಪನೆಯಾಯಿತು.

 

ಚಿತ್ತರಂಜನ್ ಲೋಕೋಮೋಟಿವ್ ವರ್ಕ್ಸ್:

#  1947 ರಲ್ಲಿ ಸ್ಥಾಪನೆಯಾದ ಈ ಘಟಕವು ಎಲೆಕ್ಟ್ರಿಕಲ್ ಲೋಕೋಮೋಟಿವ್ಸ್ ಗಳನ್ನು ತಯಾರಿಸುತ್ತದೆ.

# ಬೆಂಗಳೂರಿನ ಯಲಹಂಕದಲ್ಲಿ ರೈಲಿನ ಅಚ್ಚು ಮತ್ತು ಗಾಲಿಗಳು ತಯಾರಾಗುತ್ತವೆ.

 

ಡೀಸೆಲ್ ಲೋಕೋಮಾರ್ಡನೈಸೇಷನ್ ಕಾರ್ಖಾನೆ:

 1981 ರಲ್ಲಿ ಸ್ಥಾಪನೆಯಾದ ಈ ಘಟಕವು ಡೀಸೆಲ್ - ಎಲೆಕ್ಟ್ರಿಕ್ ಲೋಕೋಮೋಟಿವ್ಸ್ ತಯಾರಿಸುತ್ತದೆ. ಇದು ಪಂಜಾಬ್ ನ ಪಟಿಯಾಲಾದಲ್ಲಿದೆ.

ಸೋಮವಾರ, ಮಾರ್ಚ್ 27, 2017

ಮಾನವ ಅಭಿವೃದ್ದಿ ಸೂಚ್ಯಂಕ

ಮಾನವ ಅಭಿವೃದ್ಧಿ ಸೂಚ್ಯಾಂಕ (Human Development Index)

ಮೂಲಭೂತ ಅವಶ್ಯಕತೆಗಳ ಸಾಮಾಜಿಕ ಸೂಚಕವನ್ನು ಮಾಪನ ಮಾಡಲು ಅರ್ಥಶಾಸ್ತ್ರಜ್ಞರು ಹಲವಾರು ಸೂಚಕಗಳನ್ನು ಉಪಯೋಗಿಸಲು ಪ್ರಯತ್ನಿಸಿದ್ದಾರೆ. ಮಾನವ ಅಭಿವೃದ್ಧಿ ಸಂಯುಕ್ತ ಸೂಚಿಯನ್ನು ತಯಾರಿಸಲು ಒಂದು, ಎರಡು ಅಥವಾ ಇನ್ನೂ ಹೆಚ್ಚಿನ ಸೂಚಕಗಳನ್ನು ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ.

ಪ್ರಸ್ತುತವಾಗಿ ನಾವು ಎಂ.ಡಿ.ಮೋರಿಸ್ಅವರ 'ಜೀವನದ ಭೌತಿಕ ಗುಣಮಟ್ಟ ಅನುಸೂಚಿ (PQLI)' ಹಾಗೂ'ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP)' ಅಭಿವೃದ್ಧಿ ಪಡಿಸಿರುವ ಮಾನವ ಅಭಿವೃದ್ಧಿ ಅನುಸೂಚಿ (HDI) ಯನ್ನು ಪರಿಗಣಿಸಿದ್ದೇವೆ,

 

ಮಾನವ ಅಭಿವೃದ್ಧಿ ಸೂಚ್ಯಂಕದ ಮಾನದಂಡಗಳು

1) ಜೀವನದ ಭೌತಿಕ ಗುಣಮಟ್ಟ ಅನುಸೂಚಿ (Physical Quality of Life Index -PQLI)

# ಆರೋಗ್ಯ

# ಶಿಕ್ಷಣ

# ಕುಡಿಯುವ ನೀರು

# ಪೌಷ್ಠಿಕಾಂಶ

# ನೈರ್ಮಲ್ಯ ಇತ್ಯಾದಿ.

 

2) ಮಾನವ ಅಭಿವೃದ್ಧಿ ಅನುಸೂಚಿ (Human Development Life Index -HDI)

# ಜೀವನ ಮಟ್ಟ - ಅಡುಗೆ ಇಂಧನ, ಶೌಚಾಲಯ, ನೀರು, ವಿದ್ಯುತ್, ಕೃಷಿಯೇತರ ಕೆಲಸಗಾರರು, ತಲಾ ಆದಾಯ.

# ಶಿಕ್ಷಣ - ನೊಂದಣಿ ದರ, ಸಾಕ್ಷರತಾ ದರ

# ಆರೋಗ್ಯ - ಜನನದರ, ಮರಣದರ, ಬಾಣಂತಿಯರ ದರ, ಶಿಶು ಮರಣದರ

 

ಮಾನವ ಅಭಿವೃದ್ಧಿಯಲ್ಲಿ ಮೊದಲ ಐದು ಜಿಲ್ಲೆಗಳು ಮತ್ತು ಐದು ತಾಲ್ಲೂಕುಗಳು

  ಜಿಲ್ಲೆಗಳು

ತಾಲ್ಲೂಕುಗಳು

1) ಬೆಂಗಳೂರು ನಗರ

1) ಆನೇಕಲ್

2) ದಕ್ಷಿಣ ಕನ್ನಡ

2) ಬೆಂಗಳೂರು ಉತ್ತರ

3) ಉಡುಪಿ

3) ತುಮಕೂರು

4) ಕೊಡಗು

4) ಮಂಗಳೂರು

5) ಚಿಕ್ಕಮಗಳೂರು

5) ಬೆಂಗಳೂರು ದಕ್ಷಿಣ

 

ಮಾನವ ಅಭಿವೃದ್ಧಿಯಲ್ಲಿ ಕೊನೆಯ ಐದು ಜಿಲ್ಲೆಗಳು ಮತ್ತು ಐದು ತಾಲ್ಲೂಕುಗಳು

ಜಿಲ್ಲೆಗಳು

ತಾಲ್ಲೂಕುಗಳು

1) ರಾಯಚೂರು (30ನೇ ಸ್ಥಾನ)

1) ದೇವದುರ್ಗ (176ನೇ ಸ್ಥಾನ)

2) ಯಾದಗಿರಿ (29ನೇ ಸ್ಥಾನ)

2) ಸೋರಾಪುರ (175ನೇ ಸ್ಥಾನ)

3) ಕೊಪ್ಪಳ (28ನೇ ಸ್ಥಾನ)

3) ಸಿಂಧನೂರು (174ನೇ ಸ್ಥಾನ)

4) ವಿಜಯಪುರ (27ನೇ ಸ್ಥಾನ)

4) ಚಿಂಚೋಳಿ (173ನೇ ಸ್ಥಾನ)

5) ಗದಗ (26ನೇ ಸ್ಥಾನ)

5) ಮಾನ್ವಿ (172ನೇ ಸ್ಥಾನ)

 

ಜಿಲ್ಲಾ ಮಾನವ ಅಭಿವೃದ್ಧಿ ವರದಿ (DHDR)

ಲಿಂಗ ಸಂಬಂಧಿ ಸೂಚ್ಯಂಕ: ಶ್ರೇಣಿ 0 - ಲಿಂಗ ಸಂಬಂಧಿ ಸಮಾನತೆ, ಶ್ರೇಣಿ 1 - ಲಿಂಗ ಸಂಬಂಧಿ ಅಸಮಾನತೆ

 

ಮಾನದಂಡಗಳು:

# ಸಂತಾನೋತ್ಪತ್ತಿ

# ಆರೋಗ್ಯ

# ಸಬಲೀಕರಣ

# ಕಾರ್ಮಿಕ ಮಾರುಕಟ್ಟೆ

 

ಜಿಲ್ಲಾ ಮಾನವ ಅಭಿವೃದ್ಧಿಯ ಮೊದಲ ಐದು ಜಿಲ್ಲೆಗಳು ಮತ್ತು ತಾಲ್ಲೂಕುಗಳು (ಕನಿಷ್ಠ ಅಸಮಾನತೆ)

ಜಿಲ್ಲೆಗಳು

ತಾಲ್ಲೂಕುಗಳು

1) ಉಡುಪಿ

1) ಬೆಂಗಳೂರು ದಕ್ಷಿಣ

2) ದಕ್ಷಿಣ ಕನ್ನಡ

2) ಬೆಳ್ತಂಗಡಿ

3) ಬೆಂಗಳೂರು ನಗರ

3) ಕಡೂರು

4) ಚಿಕ್ಕಮಗಳೂರು

4) ಹಾಸನ

5) ಕೊಡಗು

5) ಮಂಗಳೂರು

 

ಜಿಲ್ಲಾ ಮಾನವ ಅಭಿವೃದ್ಧಿಯ ಕೊನೆಯ ಐದು ಜಿಲ್ಲೆಗಳು ಮತ್ತು ತಾಲ್ಲೂಕುಗಳು (ಗರಿಷ್ಠ ಅಸಮಾನತೆ)

ಜಿಲ್ಲೆಗಳು

ತಾಲ್ಲೂಕುಗಳು

1) ಕೊಪ್ಪಳ (30ನೇ ಸ್ಥಾನ)

1) ಕೂಡ್ಲಿಗಿ (176ನೇ ಸ್ಥಾನ)

2) ಬಳ್ಳಾರಿ (29ನೇ ಸ್ಥಾನ)

2) ಹರಿಹರ (175ನೇ ಸ್ಥಾನ)

3) ರಾಯಚೂರು (28ನೇ ಸ್ಥಾನ)

3) ಗದಗ (174ನೇ ಸ್ಥಾನ)

4) ಬಾಗಲಕೋಟೆ (27ನೇ ಸ್ಥಾನ)

4) ಹೊಸಪೇಟೆ (173ನೇ ಸ್ಥಾನ)

5) ಕಲ್ಬುರ್ಗಿ (26ನೇ ಸ್ಥಾನ)

5) ಸಿರಗುಪ್ಪ (172ನೇ ಸ್ಥಾನ)

 

ಇತರ ಪ್ರಮುಖ ಅಂಶಗಳು

# ಕರ್ನಾಟಕ ಮಾನವ ಅಭಿವೃದ್ಧಿ ವರದಿಯನ್ನು ಮೊದಲಿಗೆ 1999ರಲ್ಲಿ ಪ್ರಕಟಿಸಲಾಯಿತು, ಎರಡನೇ ಭಾರಿ 2005ರಲ್ಲಿ ಮತ್ತು ಮೂರನೇ ಬಾರಿಗೆ 2016ರಲ್ಲಿ ಪ್ರಕಟಿಸಲಾಯಿತು.

# ಜಿಲ್ಲಾ ಮಾನವ ಅಭಿವೃದ್ಧಿ ವರದಿಯನ್ನು ಪ್ರಾಯೋಗಿಕವಾಗಿ 2008ರಲ್ಲಿ ನಾಲ್ಕು ಜಿಲ್ಲೆಗಳ (ಕಲ್ಬುರ್ಗಿ, ಮೈಸೂರು, ಉಡಿಪಿ, ವಿಜಯಪುರ) ವರದಿ ಪ್ರಕಟಿಸಲಾಯಿತು. 2014ರಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ 30 ಜಿಲ್ಲೆಗಳ ವರದಿ ತಯಾರಿಸಲಾಯಿತು.

ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ 2017ರ ಸಮಗ್ರ ಅಧ್ಯಯನ ಸಾಮಗ್ರಿ ಒದಗಿಸುವ ಒಂದು ಚಿಕ್ಕ ಪ್ರಯತ್ನ.📋

List of Famous Books and their Authors

List of Famous Books and their Authors
● A Bunch of Old Letters : Jawaharlal Nehru
● Adventures of Sherlock Holmes : Arthur Conan Doyle
● Adhe Adhure : Mohan Rakesh
● A Week with Gandhi : Louis Fischer
● A China Passage : J.K. Galbraith
● Aesop’s Fables : Aesop
● A Farewell to Arms : Ernest Hemingway
● A Midsummer Night’s Dream : William Shakespeare
● A Million Mutinies, Now : V.S. Naipal
● An iron Will : Swett Marden
● A Pair of Blue Eyes : Thomas Hardy
● A Passage to India : E.M. Forster
● A Prisoner’s Scrapbook : L.K. Advani
● A Season of Ghosts : Ruskin Bond
● A Suitable Boy : Vikram Seth
● A Tale of Two Cities : Charles Dickens
● A Village by the Sea : Anita Desai
● A Voice for Freedom : Nayantara Sehgal
● Aenied : Virgil
● Against the Tide : Minoo Masani
● Age of Reason : Jean Paul Sartre
● A Dangerous Place : Daniel Patrik Moyihan
● A Haunted House : Virginia Woolf
● Agni Veena : Kazi Nazrul Islam
● Amar Kosha : Amar Singh
● Anand Math : Bankim Chandra Chatterje
● A Story of History : Arnold Toynbee
● Avanti Sundari : Dandi
● Autobiography : Jawaharlal Nehru
● As You Like It : W. Shakespeare
● Between the Lines : Kuldeep Nayyar
● Bhagwad Gita : Maharshi Ved Vyas
● Black Wednesday : Promila Kalhan
● Bubble : Mulk Raj Anand
● Buddha Charitam : Ashvaghosh
● Bal Gitayan : D.P. Maheshwari
● Bitter Sweet : Noel Coward
● Blind Beauty : Boris Pasternak
● Broken Wings : Sarojini Naidu
● Canterbury Tales : Chaucer
● Chidambara : Sumitra Nandan Pant
● Chitralekha : Bhagwati Charan Verma
● City of Joy : Dominique Lapierre
● Confessions of a Lover : Mulk Raj Anand
● Comedy of Errors : Shakespeare
● Communist Manifesto : Karl Marx
● Comus : John Milton
● Confidential Clerk : T.S. Eliot
● Coolie : Mulk Raj Anand
● Count of Monte Cristo : Alexander Dumas
● Childe Harold : Lord Byron
● Chittirappavai : P.V. Akhilandam
● Degeneration of India : T.N. Seshan
● Devdas : Sharat Chandra
● Divine Comedy : Dante
● Discovery of India : Jawaharlal Nehru
● Don Ouixote : Cervantes
● Dr. Jekyll and Mr. Hyde : R.L. Stevenson
● Dash Kumar Charitam : Dandi
● Dark Room, The : R.K. Narayan
● Debacle : Emile Zola
● Diana, The True Story : A. Morton
● Deserted Village : Goldsmith
● Distant Drums : Manohar Malgaonkar
● Emma : Jane Austen
● Ends and Means : Aldous Huxley
● Essays of Elia : Charles Lamb
● Emperor Jones, The : Eugene O’ Neill
● Essays on Gita : Sri Aurbindo Ghosh
● Every Man a King : Swett Marden
● Father and Sons : Ivan Turganev
● Faust : Goethe
● For Whom the Bell Tolls : Ernest Hemingway
● Flames from the Ashes : P.D. Tandon
● Friends, Not Masters : Ayub Khan
● Gathering Storm : Winston Churchill
● Geet Govind : Jaya Dev
● Ghasiram Kotwal : Vijay Tendulkar
● Gitanjali : R.N. Tagore
● Gita Rahasya : Bal Gangadhar Tilak
● Glimpses of World History : J.L. Nehru :
● Godan : Premchand
● God Father, The : Mario Puzo
● Grapes of Wrath : John Steinbeck
● Great Tragedy : Z.A. Bhutto
● Guide, The : R.K. Narayan
● Hamlet : William Shakespeare
● Harsha Charit : Bana Bhatt
● Heat and Dust : Ruth Prawar Jhabwala
● Himalayan Blunders : Brig. J.P. Dalvi
● House Divided : Pearl S. Buck
● Idle Hours : R.K. Laxman
● Idols : Sunil Gavaskar
● Idylls of the King : Lord, Alfred Tennyson
● If I am Assassinated : Z.A. Bhutto
● Isabela : Keats
● Illiad : Homer
● Inside the C.B.I. : Joginder Singh
● India Divided : Rajendra Prasad
● India Wins Freedom : Maulana Azad
● Indian War of Independence : V.D. Savarkar
● Jean Christopher : Romian Rolland
● Judgement, The : Kuldip Nayyar
● Julius Caesar : William Shakespeare
● Jurassic Park : Michael Chrichton
● Kadambari : Bana Bhatt
● Kagaz Te Kanwas : Amrita Pritam
● Kamayani : Jay Shankar Prasad
● Kamasutra : S.H. Vatsayayan
● Kaya Kulp : Premchand
● King Lear : W. Shakespeare 
● Lajja : Tasleem Nasreen
● Lady Chhatterley’s Lover : D.H. Lawrence
● Leaves of Grass : Walt Whitman
● Life Divine : Sri Aurbindo
● Living History : Hillary Rodham Clinton
● Living with Honour : Shiv Khera
● Lolita : Vladimir Nobokov
● Long Walk to Freedom : Nelson Mandela
● Less Miserable : Victor Hugo
● Macbeth : Shakespeare
● Madhushala : Harivansh Rai ‘Bachchan’
● Mahabharata : Maharshi Ved Vyas
● Major Barbara : G.B. Shaw
● Malti Madhav : Bhavbhuti
● Malvikagnimitra : Kalidas
● Man and Superman : G.B. Shaw
● Meghdoot : Kalidas
● Men Who Killed Gandhi : Manohar Magaonkar
● Merchant of Venice : Shakespeare
● Middle March : George Eliot
● Midnight Children : Salman Rushdie
● Mother : Maxim Gorky
● Mudra Rakshasa : Vishakha Datt
● Murder in the Cathedral : T.S. Eliot
● My Experiments with Truth : Gandhi
● Nana : Emile Zola
● Natya Shastra : Bharat Muni
● Netaji Dead or Alive : Samar Guha
● Nine Days’ Wonder : John Mansfield
● Ninteen Eighty Four : George Orwell
● O’ Jeruselam : L. Collins and D. Lapierre
● Odyssey : Homer
● Old Man and the Sea : Ernest Hemingway
● Of Human Bondage : Somerset Maugham
● Our India : Minoo Masani
● Out of Dust : F.D. Karaka
● On Contradiction : Mao-Tse-Tung
● Pakistan, The Gathering Storm : Behazir Bhutto
● Panchatantra : Vishnu Sharma
● Pather Panchali : Bibhutibhushan Bandyopadhyaya
● Peace has no Alternative : Mikhail Gorbachev
● Pickwick Papers : Charles Dickens
● Pilgrim’s Progress : John Bunyan
● Prathma Pratishruti : Ashapoorna Devi
● Price and Prejudice : Jane Austin
● Prince : Machiaveli
● Peter Pan : J.M. Barrie
● Principia : Isaac Newton
● Raghuvansha : Kalidasa
● Rajtaringini : Kalhan
● Ram Charit Manas : Tulsidas
● Ramayana : Valmiki
● Rangbhoomi : Premchand
● Ratnavali : Harshavardhan
● Robaiyat : Omar Khayyam
● Robinson Crusoe : Daniel Defoe
● Rugby Chapel : Mathew Arnold
● Saket : Maithili Sharan Gupta
● Satanic Verses : Salman Rushdie
● Satyarth Prakash : Swami Dayanand
● Shakuntalam : Kalidas
● Shahnama : Firdausi
● Social Contract : Rousseau :
● Sursagar : Surdas
● Sakharam Binder : Vijay Tendulkar
● Testament of Beauty : Robert Bridges
● The Blind Assassin : Margaret Atwood
● The Emperor’s New Suit : Hans Chrishtian Anderson
● Three Musketeers : Alexander Dumas
● The Otherness of Self : Feroz Varun Gandhi
● The Elephant Paradigm : Gurcharan Das
● The Affluent Society : J.K. Galbraith
● The God of Small Things : Arundhati Roy :
● The Inheritance of Loss : Anita Desai
● The Legacy of Nehru : K. Natwar Singh
● Tom Jones : Henry Fielding
● Treasure Island : R.L. Stevenson
● Trail of Jesus : John Masefield
● Uncle Tom’s Cabin : Mrs. Haraiet Stowe
● Unhappy India : Lajpat Rai
● Utopia : Tomas Moor
● Unto The Last : John Ruskin
● Untold Story : B.M. Kaul
● Urvashi : Ram Dhari Singh Dinkar
● Uttara Ram Charita : Bhav Bhuti
● Universe Around Us : James Jeans
● Vanity Fair : Thackeray
● Victim, The : Saul Bellow
● Village, The : Mulk Raj Anand
● Vinay Patrika : Tulsidas
● Voskresenia : Leo Tolstoy
● War and Peace : Tolstoy
● Wealth of Nations : Adam Smith
● We Indians : Khushwant Singh
● Waiting for God : Thomas Becket
● Wings of Fire : Dr. A.P.J. Abdul Kalam
● Yama : Mahadevi Verma
● Yashodhara : Maithili Sharan Gupta
● Zulfi, My Friend : Piloo Mody
● Zhivago, Dr. : Boris Pasternak