ಮಂಗಳವಾರ, ನವೆಂಬರ್ 30, 2021

ಒಂದು ಸಿಮ್​ ಅನ್ನು ಎಷ್ಟು ಬಾರಿ ಪೋರ್ಟ್ ಮಾಡಬಹುದು?: ಈ ವಿಚಾರ ನಿಮಗೆ ತಿಳಿದಿರಲಿ

ಒಂದು ಸಿಮ್​ ಅನ್ನು ಎಷ್ಟು ಬಾರಿ ಪೋರ್ಟ್ ಮಾಡಬಹುದು?: ಈ ವಿಚಾರ ನಿಮಗೆ ತಿಳಿದಿರಲಿ

    

Mobile Number Portability: ಒಂದು ನೆಟ್‌ವರ್ಕ್‌ನಿಂದ ಮತ್ತೊಂದು ನೆಟ್‌ವರ್ಕ್‌ಗೆ ಮೊಬೈಲ್ ನಂಬರ್ ಅನ್ನು ನೀವು ಪೋರ್ಟ್ ಮಾಡಬೇಕಾದರೆ ಕೆಲವೊಂದು ನಿಯಮಗಳನ್ನು ತಪ್ಪದೇ ಪಾಲಿಸಬೇಕಾಗುತ್ತದೆ. ಅನೇಕರಿಗೆ ಈ ಬಗ್ಗೆ ತಿಳಿದಿರುವುದಿಲ್ಲ. ಈ ಸ್ಟೋರಿ ಓದಿ.

ಒಂದು ಸಿಮ್​ ಅನ್ನು ಎಷ್ಟು ಬಾರಿ ಪೋರ್ಟ್ ಮಾಡಬಹುದು?: ಈ ವಿಚಾರ ನಿಮಗೆ ತಿಳಿದಿರಲಿ

ಒಂದು ನೆಟ್‌ವರ್ಕ್‌ನಿಂದ ಮತ್ತೊಂದು ನೆಟ್‌ವರ್ಕ್‌ಗೆ ಮೊಬೈಲ್ ನಂಬರ್ ಅನ್ನು ನೀವು ಪೋರ್ಟ್ ಮಾಡಬೇಕಾದರೆ ಕೆಲವೊಂದು ನಿಯಮಗಳನ್ನು ತಪ್ಪದೇ ಪಾಲಿಸಬೇಕಾಗುತ್ತದೆ. ದೇಶದಲ್ಲಿ ಕಳೆದ ವರ್ಷದ ಅಂತ್ಯದಲ್ಲಿ ಹೊಸ ಎಂಎನ್‌ಪಿ, ಅಂದರೆ ಮೊಬೈಲ್ ನಂಬರ್ ಪೋರ್ಟೆಬಿಲಿಟಿ ನಿಯಮಗಳನ್ನು ಜಾರಿಗೆ ತರಲಾಗಿತ್ತು. ಇದರಿಂದಾಗಿ ಗ್ರಾಹಕರು ಯಾವುದೇ ಸಮಸ್ಯೆಯಿಲ್ಲದೆ ಸುಲಭದಲ್ಲಿ ಮೊಬೈಲ್ ನಂಬರ್ ಪೋರ್ಟ್ ಮಾಡಿಕೊಳ್ಳಬಹುದು. ಅಲ್ಲದೆ ಒಂದು ಮೊಬೈಲ್ ಸಂಖ್ಯೆಯನ್ನು ನೀವು ಎಷ್ಟು ಬಾರಿ ಬೇಕಾದರೂ ಪೋರ್ಟ್ ಮಾಡಬಹುದು. ಇದಕ್ಕೆ ಯಾವುದೇ ನಿರ್ದಿಷ್ಟ ತಡೆಯಿಲ್ಲ.

ಆದರೆ, ನಿಮ್ಮ ಮೊಬೈಲ್ ನಂಬರ್ ಪೋರ್ಟ್ ಆಗಬೇಕು ಎಂದರೆ ಕೆಲವು ವಿಚಾರಗಳನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು. ನೀವು ಮೊಬೈಲ್ ನಂಬರ್ ಮತ್ತೊಂದು ನೆಟ್‌ವರ್ಕ್‌ಗೆ ಪೋರ್ಟ್ ಮಾಡಿಕೊಳ್ಳಲು ಬಯಸಿದ್ದರೆ, ಅದಕ್ಕೂ ಮುಂಚೆ ಹಳೆಯ ಕಂಪನಿಗೆ ಬಾಕಿ ಉಳಿಸಿಕೊಂಡಿರುವ ಎಲ್ಲ ಬಿಲ್ ಮೊತ್ತವನ್ನು ಪಾವತಿಸಿರಬೇಕು. ಅಂದರೆ ವಿಶೇಷವಾಗಿ, ಪೋಸ್ಟ್ ಪೋಯ್ಡ್ ಗ್ರಾಹಕರು, ತಿಂಗಳ ಬಿಲ್ ಮೊತ್ತ ಬಾಕಿ ಉಳಿಸಿಕೊಂಡಿದ್ದರೆ, ಅದನ್ನು ಟೆಲಿಕಾಂ ಸೇವಾದಾರ ಕಂಪನಿಗೆ ಪಾಲಿಸುವುದು ಕಡ್ಡಾಯ. ಬಾಕಿ ಉಳಿಸಿಕೊಂಡಿದ್ದರೆ, ಪೋರ್ಟಿಂಗ್ ಸಾಧ್ಯವಾಗುವುದಿಲ್ಲ.

ಯಾವುದೇ ನೆಟ್‌ವರ್ಕ್‌ಗೆ ಪೋರ್ಟ್ ಆಗಬೇಕಾದರೂ, ಪ್ರಸ್ತುತ ಇರುವ ನೆಟ್‌ವರ್ಕ್‌ನಲ್ಲಿ ಕನಿಷ್ಟ 90 ದಿನ ಪೂರೈಸಬೇಕು. ಅದಕ್ಕೂ ಮುಂಚೆ ಮತ್ತೊಂದು ನೆಟ್‌ವರ್ಕ್‌ಗೆ ಪೋರ್ಟ್ ಸಾಧ್ಯವಿಲ್ಲ. ಅಲ್ಲದೆ, ಸಿಮ್ ಕಾರ್ಡ್ ಹೊಂದಿರುವ ವ್ಯಕ್ತಿ ಮತ್ತೋರ್ವ ವ್ಯಕ್ತಿಗೆ ಮಾಲಿಕತ್ವ ಹಸ್ತಾಂತರಿಸುವ ಪ್ರಕ್ರಿಯೆ ಜಾರಿಯಲ್ಲಿದ್ದರೆ, ಅಂತಹ ಸಂದರ್ಭದಲ್ಲಿ ಎಂಎನ್‌ಪಿ ಸಾಧ್ಯವಾಗುವುದಿಲ್ಲ.

ಮೊಬೈಲ್‌ ನಂಬರ್ ಪೋರ್ಟ್ ಮಾಡಲು ಈ ಕ್ರಮಗಳನ್ನು ಅನುಸರಿಸಿ:

  • ಸಿಮ್ ಪೋರ್ಟ್‌ ಮಾಡಲು UPC (ಯೂನಿಕ್ ಪೋರ್ಟಿಂಗ್ ಕೋಡ್) ಅಗತ್ಯ.
  • ಅದಕ್ಕಾಗಿ ಮೊದಲು UPC (ಯೂನಿಕ್ ಪೋರ್ಟಿಂಗ್ ಕೋಡ್) ಜನರೇಟ್ ಮಾಡಬೇಕು.
  • ಕ್ಯಾಪಿಟಲ್ ಅಕ್ಷರಗಳಲ್ಲಿ PORT-ಸ್ಪೇಸ್‌-ನಿಮ್ಮ ನೊಬೈಲ್ ಸಂಖ್ಯೆ ನಮೂದಿಸಿ. 1900 ನಂಬರ್‌ಗೆ ಎಸ್‌ಎಮ್‌ಎಸ್‌ ಮಾಡಿ.
  • ಆ ಬಳಿಕ UPC ಎಸ್‌ಎಮ್‌ಎಸ್‌ ಲಭ್ಯವಾಗುತ್ತದೆ.
  • ಪೋರ್ಟ್ ಆಗ ಬಯಸುವ ಟೆಲಿಕಾಂ ಸಂಸ್ಥೆಯ ಸರ್ವೀಸ್ ಸೆಂಟರ್‌ಗೆ ಭೇಟಿ ನೀಡಿ.
  • Customer Acquisition Form (CAF) ತುಂಬುವುದು ಮತ್ತು ಕೆವೈಸಿ ದಾಖಲಾತಿ ನೀಡಬೇಕು.

ಟೆಲಿಕಾಂ ವಲಯದಲ್ಲಿ ಎಮ್‌ಎನ್‌ಪಿ ಸೌಲಭ್ಯವು ಚಂದಾದಾರರಿಗೆ ಉಪಯುಕ್ತವಾಗಿದ್ದು, ಒಂದು ಆಪರೇಟರ್‌ನಿಂದ ಇನ್ನೊಂದು ಟೆಲಿಕಾಂ ಆಪರೇಟರ್‌ಗೆ ಬದಲಾಯಿಸಬಹುದಾಗಿದೆ. ಈ ಎಮ್‌ಎನ್‌ಪಿ ಬದಲಾವಣೆಯು ಯಶಸ್ವಿಯಾಗಲು ಸುಮಾರು ಒಂದು ವಾರ ಆಗುತ್ತಿತ್ತು. ಆದ್ರೆ ಟ್ರಾಯ್‌ನ ಹೊಸ ಎಮ್‌ಎನ್‌ಪಿ ನಿಯಮ ಜಾರಿಯಿಂದ ಈಗ ಐದು ದಿನಗಳ ಬಳಗಾಗಿ ಸಿಮ್‌ ಫೋರ್ಟ್ ಆಗಲಿದೆ.

ಅರ್ಜೆಂಟೀನಾದ ಫುಟ್ಬಾಲ್‌ ಆಟಗಾರ ಲಯೊನೆಲ್‌ ಮೆಸ್ಸಿ ಅವರು ವಿಶ್ವದ ಉತ್ತಮ ಆಟಗಾರ ವಿಭಾಗದಲ್ಲಿ ಪ್ರತಿಷ್ಠಿತ ಬಾಲನ್‌ ಡಿ'ಓರ್‌ ಪ್ರಶಸ್ತಿಯನ್ನು 7ನೇ ಬಾರಿಗೆ ಮುಡಿಗೇರಿಸಿಕೊಂಡಿದ್ದಾರೆ.

ಪ್ಯಾರಿಸ್‌: ಅರ್ಜೆಂಟೀನಾದ ಫುಟ್ಬಾಲ್‌ ಆಟಗಾರ ಲಯೊನೆಲ್‌ ಮೆಸ್ಸಿ ಅವರು ವಿಶ್ವದ ಉತ್ತಮ ಆಟಗಾರ ವಿಭಾಗದಲ್ಲಿ ಪ್ರತಿಷ್ಠಿತ ಬಾಲನ್‌ ಡಿ'ಓರ್‌ ಪ್ರಶಸ್ತಿಯನ್ನು 7ನೇ ಬಾರಿಗೆ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ರಾಬರ್ಟ್‌ ಲೆವಂಡೊಸ್ಕಿ ಮತ್ತು ಜಾರ್ಗಿನ್‌ಹೊ ಅವರನ್ನು ಹಿಂದಿಕ್ಕಿದ್ದಾರೆ.

ಫ್ರಾನ್ಸ್‌ ಫುಟ್ಬಾಲ್‌ ನಿಯತಕಾಲಿಕೆ ನೀಡುವ ಬಾಲನ್‌ ಡಿ'ಓರ್‌ ಪ್ರಶಸ್ತಿಯನ್ನು ಮೆಸ್ಸಿ ಅವರು 2009, 2010, 2011, 2012, 2015 ಮತ್ತು 2019ರಲ್ಲಿ ವಿಜೇತರಾಗಿದ್ದರು. ಕಳೆದ ವರ್ಷ ಜುಲೈ ತಿಂಗಳಲ್ಲಿ ಅರ್ಜೆಂಟೀನಾಗೆ ಮೊದಲ ಬಾರಿಗೆ ಕೋಪಾ ಅಮೆರಿಕ ಟ್ರೋಫಿಯನ್ನು ತಂದುಕೊಟ್ಟ ಬಳಿಕ 7ನೇ ಬಾರಿಗೆ ಮೆಸ್ಸಿ ಅವರು ಡಿ'ಓರ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ.

'ಇದನ್ನು ಪುನಃ ಕೇಳಲು ಅದ್ಭುತವೆನಿಸುತ್ತಿದೆ. ಎರಡು ವರ್ಷಗಳ ಹಿಂದೆ ಸಿಕ್ಕಿದ ಪ್ರಶಸ್ತಿಯೇ ಕೊನೆ ಎಂದುಕೊಂಡಿದ್ದೆ. ಕೋಪಾ ಅಮೆರಿಕವನ್ನು ಗೆದ್ದಿದ್ದು ಪ್ರಮುಖವಾಯಿತು' ಎಂದು ಮೆಸ್ಸಿ ಪ್ಯಾರಿಸ್‌ನ ಥಿಯೇಟರ್‌ ಡು ಚಟೆಲೆಟ್‌ನಲ್ಲಿ ಹೇಳಿದ್ದಾರೆ.

ಸ್ಪೈನ್‌ ಅಲೆಕ್ಸಿಯಾಗೆ ಡಿ'ಓರ್‌ ಪ್ರಶಸ್ತಿ

ಮಹಿಳೆಯರ ವಿಭಾಗದಲ್ಲಿ ಸ್ಪೈನ್‌ನ ಫುಟ್ಬಾಲ್‌ ಆಟಗಾರ್ತಿ ಅಲೆಕ್ಸಿಯಾ ಪುಟೆಲ್ಲಾ ಅವರು ಬಾಲನ್‌ ಡಿ'ಓರ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. 27 ವರ್ಷದ ಅಲೆಕ್ಸಿಯಾ ಡಿ'ಓರ್‌ ಪ್ರಶಸ್ತಿ ಪಡೆದ 3ನೇ ಮಹಿಳೆಯಾಗಿದ್ದಾರೆ. ಕಳೆದ ವರ್ಷ ಮೆಗನ್‌ ರಾಪಿನೊ ಈ ಪ್ರಶಸ್ತಿ ಪಡೆದಿದ್ದರು. 2018ರಲ್ಲಿ ಮಹಿಳೆಯ ವಿಭಾಗದ ಬಾಲನ್‌ ಡಿ'ಓರ್‌ ಪ್ರಶಸ್ತಿ ನೀಡಲು ಆರಂಭಿಸಲಾಗಿದ್ದು, ಅದಾ ಹಿಗರ್‌ಬರ್ಗ್‌ ಮೊದಲ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಗುರುವಾರ, ನವೆಂಬರ್ 25, 2021

ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾರತೀಯ ಮಹಿಳೆಯರ ಪಾತ್ರ

ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾರತೀಯ ಮಹಿಳೆಯರ ಪಾತ್ರ

ಬ್ರಿಟಿಷರ ಆಳ್ವಿಕೆಯಿಂದ ರೋಸಿ ಹೋಗಿದ್ದ ಭಾರತೀಯರು ಬ್ರಿಟಿಷರ ವಿರುದ್ಧ ತಿರುಗಿಬಿದ್ದು ಗುಲಾಮತನದಿಂದ ಸ್ವತಂತ್ರರಾಗಲು ನಿರ್ಧರಿಸಿ ಹೋರಾಟ ಪ್ರಾರಂಭಿಸಿದರು. ಇಂತಹ ಹೋರಾಟದಲ್ಲಿ ಅನೇಕ ಪುರುಷರು, ಮಹಿಳೆಯರು, ಮಕ್ಕಳು ಭಾಗವಹಿಸಿ ದೊಡ್ಡ ಕ್ರಾಂತಿಯನ್ನೇ ಪ್ರಾರಂಭಿಸಿದರು, ಅದೇ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಸಂಗ್ರಾಮ.

ಇಂತಹ ಮಹೋನ್ನತ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾವಿರಾರು ಮಹಿಳೆಯರು ಪುರುಷರಷ್ಟೆ ಪ್ರಮುಖ ಪಾತ್ರ ವಹಿಸಿದರು. ಅಂತಹ ಸಾವಿರಾರು ದೇಶಭಕ್ತಿ, ತ್ಯಾಗ, ಬಲಿದಾನ, ಹೋರಾಟ ಮತ್ತು ಸಾಮಾಜಿಕ ಪ್ರಜ್ಞೆಯಿಂದ ಮೆರೆದ ಧೀಮಂತ, ದಿಟ್ಟ ಮಹಿಳೆಯರನ್ನು ಮೆಚ್ಚಿಕೊಳ್ಳುತ್ತಾ, ಅವರನ್ನೇ ಸ್ಫೂರ್ತಿಯಾಗಿ ಇಂದಿನ ತಲೆಮಾರಿನವರು ಅವರ ವಿಷಯಗಳನ್ನು ತಿಳಿದು, ಅವರನ್ನು ಆದರ್ಶವಾಗಿರಿಸಿಕೊಂಡು ದೇಶಭಕ್ತಿ ಮರೆಯಲಿ ಎಂದು ಆಶಿಸುತ್ತಾ ಕೆಲವು ಧೀಮಂತ ದಿಟ್ಟಮಹಿಳೆಯರ ಪರಿಚಯ ಮಾಡಿಕೊಳ್ಳೋಣ.

ಝಾನ್ಸಿ ರಾಣಿ ಲಕ್ಷ್ಮೀಬಾಯಿ  1828-1858 

ಲಕ್ಷ್ಮೀಬಾಯಿ ಇವರ ತೌರೂರಿನ ಹೆಸರು ಮಣಿಕರ್ಣಿಕಾ ತಾಂಬೆ. ಝಾನ್ಸಿಯ ರಾಜನನ್ನು ವಿವಾಹವಾದ ನಂತರ ಝಾನ್ಸಿರಾಣಿ ಲಕ್ಷ್ಮೀಬಾಯಿ ಎಂಬ ಹೆಸರು ಪಡೆದರು. ರಾಜನ ನಿಧನಾನಂತರ ಒಂದು ಮಗುವನ್ನು ದತ್ತು ಪಡೆದು ತಾವೇ ರಾಜ್ಯಭಾರ ಮಾಡುತ್ತಿದ್ದರು. ಬ್ರಿಟಿಷ್ ವೈಸ್‌ರಾಯ್ ಲಾರ್ಡ್‌ಡಾಲ್ ಹೌಸಿಯ ದತ್ತು ಮಕ್ಕಳಿಗೆ ರಾಜ್ಯದ ಹಕ್ಕಿಲ್ಲವೆಂಬ ಕಾಯಿದೆಯನ್ನು ವಿರೋಧಿಸಿ ಬ್ರಿಟಿಷ್‌ರ ವಿರುದ್ಧ ಯುದ್ಧ ಘೋಷಿಸಿದರು. ತಾಂತ್ಯಾಟೋಪಿಯವರ ನಾಯಕತ್ವದಲ್ಲಿ ಹೋರಾಟ ಪ್ರಾರಂಭವಾಯ್ತು. ಸ್ವತಃ ತಾವೇ ತಮ್ಮ ದತ್ತು ಪುತ್ರನನ್ನು ಬೆನ್ನಿಗೆ ಕಟ್ಟಿಕೊಂಡು ರಣಾಂಗಣಕ್ಕಿಳಿದು ರಣಚಂಡಿಯಂತೆ ಹೋರಾಡಿದರು. 1958 ರ ಜೂನ್ 18 ರಂದು ಅವರು ವೀರಮರಣವನ್ನು ಹೊಂದಿದರು. ಅವರು ಸ್ವರ್ಗಸ್ಥರಾಗಿ 162 ವರ್ಷಗಳಾದರೂ ಇಂದಿಗೂ ಝಾನ್ಸಿಯ ಪ್ರಾಂತದಲ್ಲಿ ಅವರ ಶೌರ್ಯದ ಗುಣಗಾನ ಜಾನಪದ ಹಾಡುಗಳ ಮೂಲಕ ಪ್ರಚಾರದಲ್ಲಿದೆ.

ಸರೋಜಿನಿ ನಾಯ್ಡು  1879-1949 

ಭಾರತ ಸ್ವಾತಂತ್ಯ್ರ ಸಂಗ್ರಾಮದಲ್ಲಿ ಭಾಗವಹಿಸಿದ ಪ್ರಮುಖರಲ್ಲಿ ಭಾರತದ ಕೋಗಿಲೆ ಎಂದು ಬಿರಿದಾಂಕಿತರಾದ ಕವಿಯತ್ರಿ ದಿಟ್ಟ ಧೀಮಂತ ಮಹಿಳೆ ಉರ್ದು, ತೆಲುಗು, ಇಂಗ್ಲೀಷ್, ಪರ್ಷಿಯಾ ಹಾಗೂ ಬಂಗಾಲಿ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. ಗುರು ಗೋಪಾಲಕೃಷ್ಣ ಗೋಖಲೆಯವರೊಂದಿಗೆ ಚಳುವಳಿಗಳಲ್ಲಿ ಭಾಗವಹಿಸುತ್ತಿದ್ದರು. 1925 ರಲ್ಲಿ ಕಾನ್ಪುರದಲ್ಲಿ ನಡೆದ ಭಾರತೀಯ ಮಹಿಳಾ ಅಧಿವೇಶನದಲ್ಲಿ ಅಧ್ಯಕ್ಷೆಯಾಗಿದ್ದ ಪ್ರಥಮ ಭಾರತೀಯ ಮಹಿಳೆ ಎಂದು ಪ್ರಖ್ಯಾತರಾದ ಧೀಮಂತ ಮಹಿಳೆ, 1949 ಮಾರ್ಚ್ 29 ರಂದು ಮರಣ ಹೊಂದಿದರು.

ರಾಜಕುಮಾರಿ ಅಮೃತ್‌ಕೌರ್ 1839-1964

ಸ್ವಾತಂತ್ರ ಸಂಗ್ರಾಮದಲ್ಲಿ ಮಹಾತ್ಮಗಾಂಧಿಯವರ ಸಹಭಾಗಿತ್ವದಲ್ಲಿ ಚಳುವಳಿಗೆ ಇಳಿದ ದಿಟ್ಟೆ. 1927 ರಲ್ಲಿ ಅಖಿಲ ಭಾರತ ಮಹಿಳಾ ಅಧಿವೇಶನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸ್ವತಂತ್ರ ಭಾರತದ ಪ್ರಥಮ ಮಹಿಳಾ ಆರೋಗ್ಯ ಮಂತ್ರಿಯಾಗಿದ್ದರು ಮತ್ತು ದೆಹಲಿಯಲ್ಲಿ ಅಖಿಲ ಭಾರತ ಆರೋಗ್ಯ ವಿಜ್ಞಾನ ಸಂಸ್ಥೆ (ಂIಒS) ಯನ್ನು ಆರಂಭಿಸಿದರು. 1964 ರಲ್ಲಿ ನಿಧನರಾದರು.

ಮಾತಂಗಿ ಹಜ್ರಾ 1870-1942

ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯವರಾದ ಮಾತಂಗಿಯವರು ಕ್ವಿಟ್ ಇಂಡಿಯಾ ಚಳುವಳಿ ಮತ್ತು ಅಸಹಕಾರ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಇವರನ್ನು ಮಹಿಳಾಗಾಂಧಿ ಎಂದು ಕರೆಯುತ್ತಿದ್ದರು. 1942 ಸೆಪ್ಟೆಂಬರ್ 29 ರಂದು ತಮ್ಲುಕ್ ಪೋಲೀಸ್ ಠಾಣೆ ವಶಪಡಿಸಿಕೊಳ್ಳಲು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಹೋಗುತ್ತಿರುವಾಗ ಅವರಿಗೆ ಗುಂಡೇಟು ತಗುಲಿತು. ಆದರೂ ವಿಚಲಿತರಾಗದೆ ವಂದೇಮಾತರಂ ಎಂದು ಕೂಗುತ್ತಾ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ದಿಟ್ಟ, ಧೀಮಂತ ಮಹಿಳೆ ಮಾತಂಗಿ ಹಜ್ರಾ.

ದುರ್ಗಾಬಾಯಿ ದೇಶಮುಖ್ 1909-1981

12 ನೇ ವಯಸ್ಸಿನಲ್ಲಿ ಇಂಗ್ಲೀಷರ ವಿರುದ್ದ ಸಿಡಿದು ವಿದ್ಯಾಭ್ಯಾಸ ಮೊಟಕುಗೊಳಿಸಿದರು. ನಂತರ ರಾಜಮಂಡ್ರಿಯಲ್ಲಿ ಹೆಣ್ಣು ಮಕ್ಕಳಿಗಾಗಿ ಬಾಲಿಕಾ ಹಿಂದಿ ಪಾಠಶಾಲೆಯನ್ನು ಆರಂಭಿಸಿದರು. ಮಹಾತ್ಮಗಾಂಧಿಯವರ ಅನುಯಾಯಿಯಾಗಿದ್ದ ದುರ್ಗಾಬಾಯಿ ಸ್ವಾತಂತ್ರ್ಯ ಹೋರಾಟದಲ್ಲಿ ಹಲವು ಬಾರಿ ಜೈಲುವಾಸ ಅನುಭವಿಸಿದರು. ಸಣ್ಣ ವಯಸ್ಸಿನಲ್ಲಿ ಹೋರಾಟಕ್ಕಿಳಿದ ಧೀಮಂತೆ ದಿಟ್ಟ ಮಹಿಳೆ ದುರ್ಗಾ 1981 ರಲ್ಲಿ ನಿಧನರಾದರು. ಇವರೂ ಎಂದಿಗೂ ಚಿನ್ನಾಭರಣ ಧರಿಸದ ಧೀಮಂತೆ.

ಮೇಡಂ ಭೀಕಾಜಿ ಕಾಮಾ 1861-1936

ಮಹನೀಯರೇ ಏಳಿ ಈ ಧ್ವಜಕ್ಕೆ ವಂದಿಸಿ. ಧ್ವಜದೊಡನೆ ಭಾರತದ ಸ್ವಾತಂತ್ರ್ಯಕ್ಕಾಗಿ ಸಹಕರಿಸಿ ಎಂದು ಜರ್ಮನಿಯ ಸ್ಟುವರ್ಟ್‌ನಲ್ಲಿ 1907 ರಲ್ಲಿ ನಡೆದ ಸಮಾಜವಾದಿ ಅಧಿವೇಶನದಲ್ಲಿ ಪ್ರಥಮಬಾರಿಗೆ ಧ್ವಜಾರೋಹಣ ಮಾಡಿದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಧ್ರುವತಾರೆ ಎನಿಸಿದ ಮೇಡಂ ಭೀಕಾಜಿ ಕಾಮ ಇಂಡಿಯನ್ ಹೌಸ್, ಪ್ಯಾರಿಸ್ ಇಂಡಿಯನ್ ಸೊಸೈಟಿ ಮತ್ತು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ದಿಟ್ಟ ಮಹಿಳೆ. ಪ್ರಥಮ ಧ್ವಜ ಇಂದು ಕ್ರಮೇಣ ಬದಲಾವಣೆ ಪಡೆಯಿತು. 1936 ಆಗಸ್ಟ್ 31 ರಂದು ನಿಧನರಾದ ದಿಟ್ಟ ಧೀಮಂತೆ ಮೇಡಂ ಭೀಕಾಜಿಕಾಮ.

ಸುಚೇತ ಕೃಪಲಾನಿ 1904-1974

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ಮಾಡಿದ ಧೀಮಂತೆ. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪ್ರಥಮ ಮಹಿಳಾ ಮುಖ್ಯ ಮಂತ್ರಿಯಾಗಿ ಉತ್ತರ ಪ್ರದೇಶದ ಆಳ್ವಿಕೆಯನ್ನು 1963 ರಿಂದ 1967 ರವರೆಗೆ ಯಶಸ್ವಿಯಾಗಿ ನಿಭಾಯಿಸಿ 1974 ಡಿಸೆಂಬರ್ ಒಂದರಂದು ದೆಹಲಿಯಲ್ಲಿ ನಿಧನರಾದರು.

ಇವರಷ್ಟೇ ಅಲ್ಲದೆ ಬಹಳ ಮುಖ್ಯವಾಗಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ದೇಶಕ್ಕಾಗಿ ತಮ್ಮ ತ್ಯಾಗ, ದಿಟ್ಟತನದಿಂದ ಬಲಿಯಾದ ಮಹಿಳೆಯರೆಂದರೆ ಕಿತ್ತೂರು ರಾಣಿ ಚೆನ್ನಮ್ಮ, ಬೇಗಲತಾಫಿಯಾ ಅಬ್ದುಲ್ ವಾಜಿದ್, ಜ್ಯೋತಿಮಯಿ ಗಂಗೂಲಿ ರಾಣಿ ಗೈದಿನಲ್ಯೂ, ಕಸ್ತೂರಬಾ ಗಾಂಧಿ, ವಿಜಯಲಕ್ಷ್ಮಿ ಪಂಡಿತ್, ಕಮಲಾ ನೆಹರೂ, ರಿಹಾನತ್ಯಾಯ ಬೇಡಾ, ಕ್ಯಾಪ್ಟನ್ ಲಕ್ಷ್ಮಿಸೈಗಲ್, ಕಲ್ಪನಾದತೈ ನೋನಿಬಾಲದೇವಿ, ಪ್ರೀತಿಲತಾ ವಾಡ್ಡಿಯರ್.

ಭಾರತೀಯರಷ್ಟೇ ಅಲ್ಲದೆ ಬ್ರಿಟಿಷ್ರಾದ ಅನಿಬೆಸೆಂಟ್ (1847-1933) ಸಮಾಜವಾದಿ ಮಹಿಳೆಯರ ಹಕ್ಕಿಗಾಗಿ ಹೋರಾಟ ಮಾಡಿದ ಶಿಕ್ಷಣ ತಜ್ಞೆ, ತತ್ವಜ್ಞಾನಿ, ಥಿಯೋಸೋಫಿಕಲ್ ಸೊಸೈಟಿ ಹೋಂರೂಲ್ ಚಳುವಳಿಯಲ್ಲಿ ಭಾರತೀಯರ ಪರವಾಗಿ ಹೋರಾಟ ಮಾಡಿದ್ದರು. 1917ರಲ್ಲಿ ಕಲ್ಕತ್ತಾದಲ್ಲಿ ನಡೆದ ಭಾರತೀಯ ಮಹಿಳಾ ಕಾಂಗ್ರೆಸ್‌ನ ಮೊದಲ ಅಧ್ಯಕ್ಷೆಯಾಗಿದ್ದರು.

ನಮ್ಮ ದೇಶ ಭಾರತದ 75 ನೇ ಸ್ವಾತಂತ್ರ್ಯೋತ್ಸವದ ಆಚರಣೆ ಸಂದರ್ಭದಲ್ಲಿ ಇತಿಹಾಸ ಪುಟದಲ್ಲಿ ನೆನಪಾಗಿ ಬೆರತು ಹೋಗಿರುವ, ದೇಶವನ್ನು ತಮ್ಮ ತ್ಯಾಗ, ಬಲಿದಾನಗಳಿಂದ ಗುಲಾಮಗಿರಿಯಿಂದ ಹೊರತಂದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ, ಪ್ರಸಿದ್ಧರಾದ ದಿಟ್ಟ ಧೀಮಂತ ಮಹಿಳೆಯರನ್ನು ನೆನೆಯುತ್ತಾ ನಮ್ಮ ನಮನಗಳನ್ನು ಸಲ್ಲಿಸೋಣ. ಇವರೆಲ್ಲರೂ ತೋರಿಸಿದ ಮಾರ್ಗದಲ್ಲಿ ಇಂದಿನ ಪೀಳಿಗೆಯೂ ದೇಶದ ಪ್ರಗತಿಗಾಗಿ ಮುಂದುವರೆಯಲಿ ಎಂದು ಹಾರೈಸೋಣ.

ದೇಶ ನಮಗೇನು ಕೊಟ್ಟಿತು ಎಂದು ಯೋಚಿಸುವ ಬದಲು ದೇಶಕ್ಕಾಗಿ ನಾನೇನು ಮಾಡಿದೆ ಎಂದು ಒಮ್ಮೆ ನೆನೆದು ಪ್ರಗತಿಯತ್ತ ಸಾಗಲು ಭಾರತೀಯರಾಗಿ ಶ್ರಮಿಸೋಣ. ಭಾರತಾಂಬೆಯ ಮಡಿಲಲ್ಲಿ ಬೆಳೆದ ನಾವೇ ಧನ್ಯರು.

ಜೈ ಭಾರತ ಮಾತೆ..

✍️ ಶ್ರೀಮತಿ ಬಿ. ಎಸ್. ಹೇಮಲತ, ಬೆಂಗಳೂರು

ಸಾರಾ ಬೇಗಂ ಅವರು ತಮ್ಮ ಮಗ ಮತ್ತು ಜಮ್ಮು ಮತ್ತು ಕಾಶ್ಮೀರದ ವಿಶೇಷ ಪೊಲೀಸ್ ಅಧಿಕಾರಿ ಬಿಲಾಲ್ ಅಹ್ಮದ್ ಮಗ್ರೆ ಅವರ ಪರವಾಗಿ ಶಾಂತಿಕಾಲಕ್ಕಾಗಿ ದೇಶದ ಮೂರನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಶೌರ್ಯ ಚಕ್ರವನ್ನು ಪಡೆದರು.

ಸಾರಾ ಬೇಗಂ ಅವರು ತಮ್ಮ ಮಗ ಮತ್ತು ಜಮ್ಮು ಮತ್ತು ಕಾಶ್ಮೀರದ ವಿಶೇಷ ಪೊಲೀಸ್ ಅಧಿಕಾರಿ ಬಿಲಾಲ್ ಅಹ್ಮದ್ ಮಗ್ರೆ ಅವರ ಪರವಾಗಿ ಶಾಂತಿಕಾಲಕ್ಕಾಗಿ ದೇಶದ ಮೂರನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಶೌರ್ಯ ಚಕ್ರವನ್ನು ಪಡೆದರು.  ಅವರು 2019 ರಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಕರ್ತವ್ಯದ ಸಾಲಿನಲ್ಲಿ ಸಾವನ್ನಪ್ಪಿದರು.

 ಅನಿ ಹಂಚಿಕೊಂಡ ಒಂದು ವೀಡಿಯೊ ಸಾರಾ ಬೇಗಂ ತನ್ನ ಮಗ ಧೈರ್ಯವಾಗಿ ಒಂದು ಭದ್ರತಾ ಕಾರ್ಯಾಚರಣೆಯ ಸಂದರ್ಭದಲ್ಲಿ ಹೋರಾಡಿದರು ಹೇಗೆ ಅಶರೀರವಾಣಿ ನಿರೂಪಿಸಿದರು ಕಣ್ಣೀರು ತಡೆಹಿಡಿದು ಹೆಣಗಾಡುತ್ತಿರುವ ತೋರಿಸುತ್ತದೆ.

 ಈ ಕಾರ್ಯಕ್ರಮ ಮಂಗಳವಾರ ನಡೆದ ರಕ್ಷಣಾ ಹೂಡಿಕೆ ಸಮಾರಂಭವಾಗಿತ್ತು.  2019 ರಲ್ಲಿ ಬಾರಾಮುಲ್ಲಾದಲ್ಲಿ ನಡೆದ ಕಾರ್ಯಾಚರಣೆಯ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರೂ ಸಹ ನಾಗರಿಕರನ್ನು ಸ್ಥಳಾಂತರಿಸುವಲ್ಲಿ ಮತ್ತು ಭಯೋತ್ಪಾದಕರನ್ನು ತೊಡಗಿಸಿಕೊಳ್ಳುವಲ್ಲಿ ಬಿಲಾಲ್ ಅಹ್ಮದ್ ಮಗ್ರೆ ಅದಮ್ಯ ಧೈರ್ಯವನ್ನು ತೋರಿಸಿದ್ದರು ಎಂದು ANI ವರದಿ ಮಾಡಿದೆ.

 ಆತ್ಮವನ್ನು ಕಲಕುವ ಕ್ಲಿಪ್, ಹೃತ್ಪೂರ್ವಕ ಕ್ಷಣದಲ್ಲಿ ವೃದ್ಧ ಮಹಿಳೆಯನ್ನು ಸಾಂತ್ವನ ಮಾಡುವಾಗ ಭದ್ರತಾ ಸಿಬ್ಬಂದಿ ಬೆಂಗಾವಲು ಮಾಡುತ್ತಿರುವುದನ್ನು ತೋರಿಸುತ್ತದೆ.

 ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ಪ್ರಶಸ್ತಿ ಸ್ವೀಕರಿಸಿದ ನಂತರ ಸಾರಾ ಬೇಗಂ ತಮ್ಮ ಹಿಂದೆ ಕುಳಿತಿದ್ದ ಹಿರಿಯ ಸಚಿವರನ್ನು ಸ್ವಾಗತಿಸಿದರು.  ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಮ್ಮ ಮಗನ ಪ್ರಶಸ್ತಿಯನ್ನು ಕೈಯಲ್ಲಿ ಹಿಡಿದುಕೊಂಡು ತೆರಳುವ ಮೊದಲು ವೃದ್ಧೆಯನ್ನು ಸಮಾಧಾನಪಡಿಸುತ್ತಿರುವುದು ಕಂಡುಬಂದಿದೆ.

 ಆಕೆಯ ಮಗ ಬಿಲಾಲ್ ಅಹ್ಮದ್ ಮಗ್ರೆ ಭದ್ರತಾ ಕಾರ್ಯಾಚರಣೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರೂ ಸಹ ನಾಗರಿಕರನ್ನು ಹೇಗೆ ಸ್ಥಳಾಂತರಿಸಿದರು ಮತ್ತು ಭಯೋತ್ಪಾದಕರನ್ನು ತೊಡಗಿಸಿಕೊಂಡರು ಎಂದು ಪ್ರಶಸ್ತಿಯ ಉಲ್ಲೇಖವು ಹೇಳಿದೆ.

 "ಶ್ರೀ ಬಿಲಾಲ್ ಅಹ್ಮದ್ ಮಗ್ರೆ ಸ್ವಯಂಸೇವಕರಾಗಿ ರೂಮ್ ಇಂಟರ್ವೆನ್ಷನ್ ಆಪರೇಷನ್ ಪಾರ್ಟಿಯಲ್ಲಿ ತೊಡಗಿಸಿಕೊಂಡರು ಮತ್ತು ಆ ಮೂಲಕ ಗುರಿಯಿರುವ ಮನೆಯಿಂದ ಸಿಕ್ಕಿಬಿದ್ದ ನಾಗರಿಕರನ್ನು ಸ್ಥಳಾಂತರಿಸಲು ಮತ್ತು ಭಯೋತ್ಪಾದಕನನ್ನು ತಟಸ್ಥಗೊಳಿಸಿದರು. ಎಸ್‌ಪಿಒ ಬಿಲಾಲ್ ಅಹ್ಮದ್ ನಾಗರಿಕರನ್ನು ಸ್ಥಳಾಂತರಿಸುವಾಗ, ಅಡಗಿಕೊಂಡಿದ್ದ ಭಯೋತ್ಪಾದಕ ಹಲವಾರು ಕೈ ಗ್ರೆನೇಡ್‌ಗಳನ್ನು ಎಸೆದು ಗುಂಡು ಹಾರಿಸಿದನು.  ಅವನ ಮತ್ತು ಅವನ ಕಾರ್ಯಾಚರಣೆಯ ಸಹೋದ್ಯೋಗಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ, ಅವರಿಗೆ ಮತ್ತು ಪಕ್ಷದ ಕಮಾಂಡರ್ ಎಸ್‌ಐ ಶ್ರೀ ಅಮರ್ ದೀಪ್ ಮತ್ತು ಸೋನು ಲಾಲ್ ಎಂಬ ಒಬ್ಬ ನಾಗರಿಕನಿಗೆ ಗಂಭೀರ ಗಾಯಗಳಾಗಿವೆ, ”ಎಂದು ಉಲ್ಲೇಖವು ಸೇರಿಸಲಾಗಿದೆ.

Heartbreaking Moment J&K Cop's Mother Tears Up While Receiving Shaurya Chakra On His Behalf

A sobbing Sara Begum received the Shaurya Chakra, the country's third-highest gallantry award for peacetime, on behalf of her son and Jammu and Kashmir Special Police Officer Bilal Ahmad Magray. He died in the line of duty in an anti-terror operation in 2019.

A video shared by ANI shows Sara Begum struggling to hold back tears as the voiceover narrated how her son bravely fought during a security operation.  

 The event was the defence investiture ceremony which was held on Tuesday. Bilal Ahmad Magray had shown indomitable courage in evacuating civilians and engaging terrorists despite being seriously injured during the operation in Baramulla in 2019, ANI reported. 

The soul-stirring clip also shows security personnel escorting the elderly woman while consoling her during the heartfelt moment

After receiving the award from President Ram Nath Kovind, Sara Begum greeted senior ministers seated behind her. Defence Minister Rajnath Singh, apparently moved by the occasion, was seen consoling the elderly woman before she walked away with her son's award in her hand.

The citation for the award said how her son Bilal Ahmad Magray evacuated civilians and engaged terrorists despite being seriously injured in the security operation. 

"Shri Bilal Ahmad Magray volunteered himself to the room intervention operational party and thereby to evacuate the entrapped civilians from the target house and to neutralize the terrorist. When SPO Bilal Ahmad was evacuating the civilians, the hiding terrorist lobbed a number of hand grenades and fired indiscriminately upon him and his operational colleagues, resulting in serious injuries to him and party commander SI Shri Amar Deep and also one civilian namely Sonu Lal," the citation added.


ಕೇರಳದ ಎರ್ನಾಕುಲಂ ಜಿಲ್ಲೆಯ ವಳಯಂಚಿರಂಗರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ತನ್ನ ಎಲ್ಲಾ ವಿದ್ಯಾರ್ಥಿಗಳಿಗೆ ಸಾಮಾನ್ಯ ಸಮವಸ್ತ್ರವನ್ನು ಪರಿಚಯಿಸುವುದರೊಂದಿಗೆ ಲಿಂಗ ತಟಸ್ಥತೆಯತ್ತ ಹೆಜ್ಜೆ ಹಾಕಿದೆ.

ಮುಖ್ಯಾಂಶಗಳು

 ಕೇರಳದ ಎರ್ನಾಕುಲಂ ಜಿಲ್ಲೆಯ ವಳಯಂಚಿರಂಗರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ತನ್ನ ಎಲ್ಲಾ ವಿದ್ಯಾರ್ಥಿಗಳಿಗೆ ಸಾಮಾನ್ಯ ಸಮವಸ್ತ್ರವನ್ನು ಪರಿಚಯಿಸುವುದರೊಂದಿಗೆ ಲಿಂಗ ತಟಸ್ಥತೆಯತ್ತ ಹೆಜ್ಜೆ ಹಾಕಿದೆ.


 ಈ ಹೊಸ ಡ್ರೆಸ್ ಕೋಡ್ ಅನ್ನು 2018 ರಲ್ಲಿ ಯೋಜಿಸಲಾಗಿತ್ತು ಮತ್ತು ಶಾಲೆಯ ಕೆಳಗಿನ ಪ್ರಾಥಮಿಕ ವಿಭಾಗದಲ್ಲಿ ಪರಿಚಯಿಸಲಾಯಿತು ಮತ್ತು ಈ ಶೈಕ್ಷಣಿಕ ವರ್ಷದಲ್ಲಿ ಸಾಂಕ್ರಾಮಿಕ ಪ್ರೇರಿತ ಲಾಕ್‌ಡೌನ್ ನಂತರ ಶಾಲೆಗಳು ಪುನರಾರಂಭವಾದಾಗ, ಇದನ್ನು ಎಲ್ಲಾ ವಿದ್ಯಾರ್ಥಿಗಳಿಗೆ ವಿಸ್ತರಿಸಲಾಗಿದೆ.

 ಲಿಂಗವನ್ನು ಲೆಕ್ಕಿಸದೆ ಎಲ್ಲರೂ ಸಮಾನರು ಎಂದು ಮಗುವಿಗೆ ಚಿಕ್ಕ ವಯಸ್ಸಿನಿಂದಲೇ ಕಲಿಸಬೇಕು ಮತ್ತು ಇದನ್ನು ಕಲಿಯಲು ಉತ್ತಮ ಮಾರ್ಗವೆಂದರೆ ಶಾಲೆಯಿಂದ.

 ಕೇರಳದ ಎರ್ನಾಕುಲಂ ಜಿಲ್ಲೆಯ ವಳಯಂಚಿರಂಗರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ತನ್ನ ಎಲ್ಲಾ ವಿದ್ಯಾರ್ಥಿಗಳಿಗೆ ಸಾಮಾನ್ಯ ಸಮವಸ್ತ್ರವನ್ನು ಪರಿಚಯಿಸುವುದರೊಂದಿಗೆ ಲಿಂಗ ತಟಸ್ಥತೆಯತ್ತ ಹೆಜ್ಜೆ ಹಾಕಿದೆ.

 ಈ ಹೊಸ ಡ್ರೆಸ್ ಕೋಡ್ ಅನ್ನು 2018 ರಲ್ಲಿ ಯೋಜಿಸಲಾಗಿತ್ತು ಮತ್ತು ಶಾಲೆಯ ಕೆಳ ಪ್ರಾಥಮಿಕ ವಿಭಾಗದಲ್ಲಿ ಪರಿಚಯಿಸಲಾಯಿತು ಮತ್ತು ಈ ಶೈಕ್ಷಣಿಕ ವರ್ಷದಲ್ಲಿ ಸಾಂಕ್ರಾಮಿಕ ಪ್ರೇರಿತ ಲಾಕ್‌ಡೌನ್ ನಂತರ ಶಾಲೆಗಳನ್ನು ಪುನಃ ತೆರೆಯಲಾಯಿತು, ಇದನ್ನು ಎಲ್ಲಾ ವಿದ್ಯಾರ್ಥಿಗಳಿಗೆ ವಿಸ್ತರಿಸಲಾಗಿದೆ.

 ಶಾಲೆಯ ಸಿ Raji ಆಗಿನ ಮುಖ್ಯೋಪಾಧ್ಯಾಯಿನಿ ಶಾಲೆಯ ನಿರ್ವಹಣೆ ಸಮಿತಿ ಮತ್ತು ಪೋಷಕರು ಶಿಕ್ಷಕರು ಸಮಿತಿಯಿಂದ ಅನುಮೋದನೆ ನಂತರ ಈ ನಿರ್ಧಾರ ಜಾರಿಗೆ


 ಅವರು ANI ಗೆ ಹೇಳಿದರು, "ನಾವು ಶಾಲೆಯಲ್ಲಿ ಜಾರಿಗೆ ತರಲು ಹಲವು ಅಂಶಗಳ ಬಗ್ಗೆ ಮಾತನಾಡುವಾಗ ಲಿಂಗ ಸಮಾನತೆ ಮುಖ್ಯ ವಿಷಯವಾಗಿದೆ. ಆದ್ದರಿಂದ ಸಮವಸ್ತ್ರವು ನೆನಪಿಗೆ ಬಂದಿತು. ನಾನು ಇದನ್ನು ಏನು ಮಾಡಬೇಕೆಂದು ಯೋಚಿಸಿದಾಗ, ಹುಡುಗಿಯರು ಬಹಳಷ್ಟು ಎದುರಿಸುತ್ತಿರುವುದನ್ನು ನಾನು ನೋಡಿದೆ.  ಸ್ಕರ್ಟ್‌ಗಳ ವಿಷಯಕ್ಕೆ ಬಂದರೆ ಸಮಸ್ಯೆಗಳು. ಬದಲಾವಣೆಯ ಆಲೋಚನೆಯನ್ನು ಎಲ್ಲರೊಂದಿಗೆ ಚರ್ಚಿಸಲಾಯಿತು. ಆ ಸಮಯದಲ್ಲಿ 90 ಪ್ರತಿಶತ ಪಾಲಕರು ಇದನ್ನು ಬೆಂಬಲಿಸಿದರು. ಮಕ್ಕಳೂ ಸಂತೋಷಪಟ್ಟರು. ಈಗ ಇದನ್ನು ಚರ್ಚಿಸುತ್ತಿರುವುದಕ್ಕೆ ನನಗೆ ತುಂಬಾ ಸಂತೋಷ ಮತ್ತು ಹೆಮ್ಮೆ ಇದೆ.


 ಲಿಂಗ-ತಟಸ್ಥ ಸಮವಸ್ತ್ರ ನೀತಿಯ ಅಡಿಯಲ್ಲಿ, ಎಲ್ಲಾ ವಿದ್ಯಾರ್ಥಿಗಳು ಶರ್ಟ್ ಮತ್ತು ಮುಕ್ಕಾಲು ಭಾಗದಷ್ಟು ಪ್ಯಾಂಟ್ ಧರಿಸಬಹುದು.  ಈ ಸಮವಸ್ತ್ರ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿದೆ ಎಂದು ಈಗಿನ ಪ್ರಭಾರಿ ಮುಖ್ಯೋಪಾಧ್ಯಾಯಿನಿ ಸುಮಾ ಕೆ.ಪಿ.  "ಈ ಸಮವಸ್ತ್ರವು ವಿಶೇಷವಾಗಿ ಹುಡುಗಿಯರಿಗೆ ಏನನ್ನಾದರೂ ಮಾಡಲು ತುಂಬಾ ಸಹಾಯಕವಾಗಿದೆ. ಅವರು ಮತ್ತು ಅವರ ಪೋಷಕರು ಈ ನಿರ್ಧಾರದಿಂದ ತುಂಬಾ ಸಂತೋಷಪಟ್ಟಿದ್ದಾರೆ. ಈ ನಿರ್ಧಾರಕ್ಕೆ ಕಾರಣವೆಂದರೆ ಹುಡುಗರು ಮತ್ತು ಹುಡುಗಿಯರು ಸಮಾನ ಸ್ವಾತಂತ್ರ್ಯ ಮತ್ತು ಸಂತೋಷವನ್ನು ಹೊಂದಿರಬೇಕು" ಎಂದು ಅವರು ಹೇಳಿದರು.


 "ಲಿಂಗ ಸಮಾನತೆ ವಿದ್ಯಾರ್ಥಿನಿಯರು ಮತ್ತು ಪೋಷಕರ ಮನಸ್ಸಿನಲ್ಲಿರಬೇಕು. ಹುಡುಗಿಯರು ಸ್ಕರ್ಟ್‌ಗಳನ್ನು ಧರಿಸುವಾಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಶೌಚಾಲಯಕ್ಕೆ ಹೋಗುವಾಗ ಮತ್ತು ಆಟವಾಡುವಾಗ ಸಮಸ್ಯೆಗಳು ಉಂಟಾಗುತ್ತವೆ. ಅದೂ ಒಂದು ಅಂಶವಾಗಿದೆ. ಈ ಉಡುಪನ್ನು ಲಿಂಗ-ತಟಸ್ಥ ಪರಿಕಲ್ಪನೆಯಿಂದ ಪಡೆಯಲಾಗಿದೆ.  ಸಮವಸ್ತ್ರ ಇದು 105 ವರ್ಷಗಳಷ್ಟು ಹಳೆಯದಾದ ಶಾಲೆ. ಆದ್ದರಿಂದ ಯಾರಿಂದಲೂ ಗಮನಾರ್ಹ ವಿರೋಧ ಬಂದಿಲ್ಲ. ಶೈಕ್ಷಣಿಕ ಸಮಿತಿಯ ನಿರ್ಧಾರವನ್ನು ಎಲ್ಲರೂ ಒಪ್ಪಿಕೊಂಡರು. ನಾವು ಉದ್ದೇಶಿಸಿದ್ದಕ್ಕಿಂತ ಹೆಚ್ಚಿನ ಮನ್ನಣೆ ಸಿಕ್ಕಿದೆ ಎಂದು ಮಾಜಿ ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಎನ್.ಪಿ.ಅಜಯಕುಮಾರ್ ಹೇಳಿದರು.

Kerala Introduces Gender Neutral Uniform For All Students To Prove That Everyone's Equa

Kerala Introduces Gender Neutral Uniform For All Students To Prove That Everyone's Equa


It is recommended that a child should be taught from an early age that everyone is equal regardless of gender and the best way to learn this is from school

A government lower primary school in Valayanchirangara at Ernakulam district in Kerala took forward a step towards gender neutrality with the introduction of a common uniform for all its students. 

This new dress code was planned in 2018 and was introduced in the lower primary section of the school and this academic year when the schools were reopened after the pandemic induced lockdown, it has been extended to all students.  

Then headmistress of the school C Raji implemented this decision after the approval from the school management committee and parents teachers committee

She told ANI, "Gender equality was the main subject when we were talking about many factors to implement in the school. Therefore uniform came to mind. When I was thinking about, what to do with it, I could see that girls face a lot of problems when it comes to skirts. The idea of a change was discussed with everyone. 90 per cent of parents supported this at that time. The kids were happy too. I feel very happy and proud that this is being discussed now."

Under the gender-neutral uniform policy, all students can wear shirts and three-fourths of trousers. This uniform made the children very confident, said Suma KP, the present Headmistress in charge. "This uniform is very helpful for doing anything, especially for girls. They and their parents are very happy with this decision. The reason for this decision is the idea that boys and girls should have equal freedom and happiness," she added.

"Gender equality should be in the minds of students and parents. Girls face many problems when wearing skirts. Problems occur when going to the toilet and while playing. That too is a factor. This dress is derived from the concept of a gender-neutral uniform. This is a 105-year-old school. Therefore, there was no significant opposition from anyone. The decision of the Academic Committee was accepted by all. It got more recognition than we intended," said NP Ajayakumar former School Management Committee Chairman.

ವಿಶ್ವದ ಮೊದಲ ತೇಲುವ ನಗರ 'ಬುಸಾನ್' 2025 ರ ವೇಳೆಗೆ ಪೂರ್ಣಗೊಳ್ಳುತ್ತದೆ.

ಏರುತ್ತಿರುವ ಸಮುದ್ರ ಮಟ್ಟಗಳನ್ನು ತಪ್ಪಿಸಲು ವಿಶ್ವದ ಮೊದಲ ತೇಲುವ ನಗರ 'ಬುಸಾನ್' 2025 ರ ವೇಳೆಗೆ ಪೂರ್ಣಗೊಳ್ಳಬಹುದು

 ಮುಖ್ಯಾಂಶಗಳು

 ನಗರವು ವಿಶ್ವಸಂಸ್ಥೆಯಿಂದ ಬೆಂಬಲಿತವಾಗಿದೆ ಮತ್ತು ಹೆಚ್ಚುತ್ತಿರುವ ಸಮುದ್ರ ಮಟ್ಟದ ಸಮಸ್ಯೆಯನ್ನು ಎದುರಿಸಲು ಬುಸಾನ್ ಕರಾವಳಿಯಿಂದ ಮಾಡಲಾಗುವುದು

 ಯೋಜನೆಯನ್ನು ಮುನ್ನಡೆಸುವ ಜನರ ಪ್ರಕಾರ, ಇದು ಹಲವಾರು ಮಾನವ ನಿರ್ಮಿತ ದ್ವೀಪಗಳಿಂದ ಮಾಡಲ್ಪಟ್ಟ 'ಪ್ರವಾಹ ನಿರೋಧಕ ಮೂಲಸೌಕರ್ಯ' ಆಗಿರುತ್ತದೆ, ಇದು ಸಮುದ್ರದೊಂದಿಗೆ ಏರುವ ಮೂಲಕ ಪ್ರವಾಹದ ಅಪಾಯವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ.

ವಿಶ್ವದ ಮೊದಲ ತೇಲುವ ನಗರವನ್ನು ದಕ್ಷಿಣ ಕೊರಿಯಾದ ಕರಾವಳಿಯಲ್ಲಿ ನಿರ್ಮಿಸಲಾಗುವುದು ಮತ್ತು 2025 ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.

 ನಗರವು ವಿಶ್ವಸಂಸ್ಥೆಯಿಂದ ಬೆಂಬಲಿತವಾಗಿದೆ ಮತ್ತು ಹೆಚ್ಚುತ್ತಿರುವ ಸಮುದ್ರ ಮಟ್ಟದ ಸಮಸ್ಯೆಯನ್ನು ಎದುರಿಸಲು ಬುಸಾನ್ ಕರಾವಳಿಯಿಂದ ಮಾಡಲಾಗುವುದು.  ಯೋಜನೆಯನ್ನು ಮುನ್ನಡೆಸುವ ಜನರ ಪ್ರಕಾರ, ಇದು ಹಲವಾರು ಮಾನವ ನಿರ್ಮಿತ ದ್ವೀಪಗಳಿಂದ ಮಾಡಲ್ಪಟ್ಟ 'ಪ್ರವಾಹ ನಿರೋಧಕ ಮೂಲಸೌಕರ್ಯ' ಆಗಿರುತ್ತದೆ, ಇದು ಸಮುದ್ರದೊಂದಿಗೆ ಏರುವ ಮೂಲಕ ಪ್ರವಾಹದ ಅಪಾಯವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ.

 OCEANIX ಮತ್ತು UN ಹ್ಯೂಮನ್ ಸೆಟ್ಲ್‌ಮೆಂಟ್ ಪ್ರೋಗ್ರಾಂ (UN-Habit) ಜಂಟಿ ಪ್ರಯತ್ನವಾಗಿರುವ ಸ್ವಾವಲಂಬಿ ನಗರವು ಸೌರ ಫಲಕಗಳಿಂದ ತನ್ನದೇ ಆದ ವಿದ್ಯುತ್ ಅನ್ನು ಉತ್ಪಾದಿಸುತ್ತದೆ, ತನ್ನದೇ ಆದ ಆಹಾರ ಮತ್ತು ಶುದ್ಧ ನೀರನ್ನು ಉತ್ಪಾದಿಸುತ್ತದೆ ಮತ್ತು ಪ್ರವಾಸಿಗರು ಮತ್ತು ನಿವಾಸಿಗಳನ್ನು ದೋಣಿಯ ನಡುವೆ ಸಾಗಿಸುತ್ತದೆ.  ಮೇಲ್ ಆನ್‌ಲೈನ್ ವರದಿಯ ಪ್ರಕಾರ ವಿಶೇಷವಾಗಿ ತಯಾರಿಸಿದ ದೋಣಿಗಳಲ್ಲಿ ದ್ವೀಪ.

 ನಗರವು 75 ಹೆಕ್ಟೇರ್‌ಗಳಲ್ಲಿ ಹರಡುತ್ತದೆ ಮತ್ತು 10,000 ನಿವಾಸಿಗಳಿಗೆ ಅವಕಾಶ ಕಲ್ಪಿಸುತ್ತದೆ ಎಂದು ಇತರ ವರದಿಗಳು ಹೇಳಿವೆ.  ಸಂರಕ್ಷಿತ ಕೇಂದ್ರ ಬಂದರಿನ ಸುತ್ತಲೂ ನೆರೆಹೊರೆಗಳನ್ನು ಆರು ಗುಂಪುಗಳಾಗಿ ವಿಂಗಡಿಸಲಾಗುತ್ತದೆ.  ಪ್ರತಿ ಗ್ರಾಮವು 1,650 ನಿವಾಸಿಗಳಿಗೆ ವಸತಿ ಹೊಂದಬಹುದು.

 ಪ್ರವಾಹಗಳು, ಸುನಾಮಿಗಳು ಮತ್ತು ವರ್ಗ 5 ಚಂಡಮಾರುತಗಳಂತಹ ನೈಸರ್ಗಿಕ ವಿಕೋಪಗಳನ್ನು ತಡೆದುಕೊಳ್ಳಲು ನಗರವನ್ನು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ.  ಕಾಲಾನಂತರದಲ್ಲಿ ನೈಸರ್ಗಿಕವಾಗಿ ಬೆಳೆಯಲು, ರೂಪಾಂತರಗೊಳ್ಳಲು ಮತ್ತು ಹೊಂದಿಕೊಳ್ಳುವಂತೆ ಇದನ್ನು ವಿನ್ಯಾಸಗೊಳಿಸಲಾಗುವುದು.

 ನಿರ್ಮಾಣವು ಸುಮಾರು $200 ಮಿಲಿಯನ್ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಮತ್ತು ಶೀಘ್ರದಲ್ಲೇ ಪ್ರಾರಂಭವಾಗಲಿದೆ.  ರಿಪಬ್ಲಿಕ್ ಆಫ್ ಕೊರಿಯಾದ ಬುಸಾನ್ ಮೆಟ್ರೋಪಾಲಿಟನ್ ಸಿಟಿ, UN-Habitat ಮತ್ತು ನ್ಯೂಯಾರ್ಕ್ ವಿನ್ಯಾಸಕರು OCEANIX ಈಗಾಗಲೇ 'ಐತಿಹಾಸಿಕ ಒಪ್ಪಂದ'ಕ್ಕೆ ಸಹಿ ಹಾಕಿದ್ದಾರೆ.

 "ಈ ಮೂಲಮಾದರಿಯನ್ನು ನಿಯೋಜಿಸಲು ಬುಸಾನ್ ನಮಗೆ ಉತ್ತಮ ಸ್ಥಳವಾಗಿದೆ. ಆದರೆ ಇದು ಪ್ರಪಂಚದಾದ್ಯಂತದ ಎಲ್ಲಾ ಕರಾವಳಿ ನಗರಗಳಿಗೆ ಮತ್ತು ಸಮುದ್ರ ಮಟ್ಟ ಏರಿಕೆಯ ಸವಾಲನ್ನು ಎದುರಿಸುತ್ತಿರುವ ಎಲ್ಲಾ ಕರಾವಳಿ ಸಮುದಾಯಗಳಿಗೆ ಉಪಯುಕ್ತವಾಗಿದೆ ಎಂದು ನಾವು ಭಾವಿಸುತ್ತೇವೆ.  " OCEANIX ನ ಸಹ-ಸಂಸ್ಥಾಪಕರಾದ ಇಟಾಯ್ ಮಡಾಮೊಂಬೆ ಅವರು ಬ್ಯುಸಿನೆಸ್ ಇನ್ಸೈಡರ್ಗೆ ತಿಳಿಸಿದರು.

 ಸ್ಥಳೀಯ ಪ್ರದೇಶದ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳಲು OCEANIX ಸ್ಥಳೀಯ ವಿನ್ಯಾಸಕಾರರೊಂದಿಗೆ ಸಹಕರಿಸುತ್ತದೆ.  ಕೆಲಸದ ಫಲಿತಾಂಶಗಳನ್ನು ಏಪ್ರಿಲ್‌ನಲ್ಲಿ ಯುಎನ್ ರೌಂಡ್‌ಟೇಬಲ್‌ನಲ್ಲಿ ಪ್ರಸ್ತುತಪಡಿಸಲಾಗುತ್ತದೆ ಎಂದು ವರದಿಗಳು ಸೇರಿಸಲಾಗಿದೆ.

 "ಫ್ಲೋಟಿಂಗ್ ಸಿಟಿ ಪರಿಕಲ್ಪನೆಯ ಮೂಲಕ ಹವಾಮಾನ ಹೊಂದಾಣಿಕೆ ಮತ್ತು ಪ್ರಕೃತಿ ಆಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ನಾವು ಎದುರು ನೋಡುತ್ತಿದ್ದೇವೆ ಮತ್ತು ಮೂಲಮಾದರಿಯನ್ನು ನಿಯೋಜಿಸಲು ಬುಸಾನ್ ಸೂಕ್ತ ಆಯ್ಕೆಯಾಗಿದೆ" ಎಂದು ಯುಎನ್-ಹ್ಯಾಬಿಟಾಟ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮೈಮುನಾ ಮೊಹಮ್ಮದ್ ಷರೀಫ್ ಹೇಳಿದರು.

World's First Floating City 'Busan' Could Be Completed By 2025 To Avoid Rising Sea Levels

World's First Floating City 'Busan' Could Be Completed By 2025 To Avoid Rising Sea Levels


The world's first floating city will be built off the coast of South Korea and is likely to be completed as early as 2025.

The city is backed by the United Nations and will be made off the coast of Busan to deal with the rising sea level problem. According to people leading the project, it will be a 'flood-proof infrastructure' made up of several man-made islands that will work towards terminating the risk of flooding by rising with the sea.

The self-sufficient city, which is a joint effort by OCEANIX and the UN Human Settlement Programme (UN-Habit), will generate its own electricity from solar panels, produce its own food and fresh water, and also ferry tourists and inhabitants between the island on specially-made boats, according to a Mail Online report.

Other reports also claimed that the city will be spread over 75 hectares and will accommodate 10,000 residents. The neighbourhoods will be segregated into clusters of six around a protected central harbour. Each village could house up to 1,650 residents.

The city will be specifically designed to withstand natural disasters like floods, tsunamis, and Category 5 hurricanes. It will also be designed to grow, transform and adapt naturally over the course of time. 

Construction is estimated to cost around $200 million and will begin soon. Busan Metropolitan City of the Republic of Korea, UN-Habitat, and New York designers OCEANIX have already signed the 'historic agreement'.

"It just happened that Busan is the best place for us to deploy this prototype. But this is something that we hope will be useful to all coastal cities around the world, and all coastal communities who are facing the challenge of sea-level rise," Itai Madamombe, co-founder of OCEANIX, told Business Insider.

OCEANIX will collaborate with local designers to understand the needs of the local area. The results of the work will be presented at a UN roundtable in April, added the reports.

"We look forward to developing climate adaptation and nature-based solutions through the floating city concept, and Busan is the ideal choice to deploy the prototype," said Maimunah Mohd Sharif, executive director of UN-Habitat.

ಶನಿವಾರ, ನವೆಂಬರ್ 20, 2021

1 ಗಂಟೆ 25 ನಿಮಿಷ ಅಮೆರಿಕದ ಅಧ್ಯಕ್ಷೆಯಾಗಿದ್ದ ಭಾರತ ಮೂಲದ ಕಮಲಾ ಹ್ಯಾರಿಸ್

ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷೆಯಾಗಿರುವ ಭಾರತ ಮೂಲದ ಕಮಲಾ ಹ್ಯಾರಿಸ್ ಅವರು ಅಮೆರಿಕದ ಅಧ್ಯಕ್ಷೆಯಾಗಿ ಅಧಿಕಾರ ಚಲಾಯಿಸಿದ್ದಾರೆ. 1 ಗಂಟೆ 25 ನಿಮಿಷ ಅಧ್ಯಕ್ಷೀಯ ಅಧಿಕಾರ ಚಲಾಯಿಸುವ ಮೂಲಕ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸ್ವತಃ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಅಧಿಕಾರ ಹಸ್ತಾಂತರಿಸಿದ್ದಾರೆ. ಅಧಿಕಾರದ ತಾತ್ಕಾಲಿಕ ಹಸ್ತಾಂತರವನ್ನು ಘೋಷಿಸುವ ಅಧಿಕೃತ ಪತ್ರಗಳನ್ನು 10:10ಕ್ಕೆ ಕಳುಹಿಸಲಾಗಿದೆ. ಬಳಿಕ 11.35ಕ್ಕೆ ಅವರು ಕೆಲಸಕ್ಕೆ ಮರಳಿದರು. ಈ ವೇಳೆ ಅಧ್ಯಕ್ಷ ಜೋ ಬೈಡನ್ ಅವರಿಗೆ ಅರಿವಳಿಕೆ ಔಷಧಿ ನೀಡಲಾಗಿತ್ತು ಎಂದು ಶ್ವೇತಭವನ ಅಮೆರಿಕ ಕಾಂಗ್ರೆಸ್‌ಗೆ ಶುಕ್ರವಾರ ತಿಳಿಸಿದೆ.

ಅಮೆರಿಕದ ಇತಿಹಾಸದಲ್ಲಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಅತ್ಯಂತ ಹಿರಿಯ ವ್ಯಕ್ತಿ ಬೈಡನ್ ಅವರು ತಮ್ಮ 79ನೇ ಹುಟ್ಟುಹಬ್ಬದ ಮುನ್ನಾದಿನ ಶುಕ್ರವಾರದ ಆರಂಭದಲ್ಲಿ ವಾಷಿಂಗ್ಟನ್‌ನ ಹೊರಗಿನ ವಾಲ್ಟರ್ ರೀಡ್ ವೈದ್ಯಕೀಯ ಕೇಂದ್ರಕ್ಕೆ ತೆರಳಿದರು. ವಾರ್ಷಿಕ ತಪಾಸಣೆ (routine annual physical) ಕಾರಣ ಬೈಡನ್ ಅವರ ಆರೋಗ್ಯ ತಪಾಸಣೆ ನಡೆಸಬೇಕಿತ್ತು ಎಂದು ಶ್ವೇತಭವನ ತಿಳಿಸಿದೆ.

ಕೊಲೊನೋಸ್ಕೋಪಿ ಪರೀಕ್ಷೆ ಸಮಯದಲ್ಲಿ ಬೈಡನ್‌ ಅವರಿಗೆ ಅರಿವಳಿಕೆ ಔಷಧಿಯನ್ನು ನೀಡಲಾಗಿತ್ತು. ಹೀಗಾಗಿ ಉಪಾಧ್ಯಕ್ಷರು ಅಧಿಕಾರವನ್ನು ವಹಿಸಿಕೊಳ್ಳುತ್ತಾರೆ. ಬೈಡನ್ ಅವರು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಅಲ್ಪಾವಧಿಗೆ ಅಧಿಕಾರ ಹಸ್ತಾಂತರಿಸಿ ಆರೋಗ್ಯ ತಪಾಸಣೆಗೆ ತೆರಳಿದರು. ಈ ವೇಳೆ ಉಪಾಧ್ಯಕ್ಷೆ ವೆಸ್ಟ್ ವಿಂಗ್‌ನಲ್ಲಿರುವ ಅವರ ಕಚೇರಿಯಲ್ಲೇ ಕಾರ್ಯನಿರ್ವಹಿಸಿದರು ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಹೇಳಿದರು.

57 ವರ್ಷದ ಕಮಲಾ ಹ್ಯಾರಿಸ್ ಅವರು ಅಮೆರಿಕದ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿರುವ ಮೊದಲ ಮಹಿಳೆಯಾಗಿದ್ದಾರೆ.

2002 ಹಾಗೂ 2007ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯು ಬುಶ್ ಕೂಡ ಕೊಲನೋಸ್ಕೋಪಿ ತಪಾಸಣೆಗೆ ಒಳಗಾಗಿದ್ದರು. ಈ ವೇಳೆ ಅಧಿಕಾರವನ್ನು ಉಪಾಧ್ಯಕ್ಷರಿಗೆ ಹಸ್ತಾಂತರಿಸಿದ್ದರು. ಇದೀಗ ಜೋ ಬೈಡನ್ ಕೂಡ ಉಪಾಧ್ಯಕ್ಷೆಗೆ ಅಧಿಕಾರ ಹಸ್ತಾಂತರಿಸಿ ತಪಾಸಣೆಗೆ ಒಳಗಾಗಿದ್ದಾರೆ.

ಕನ್ನಡ ಬೋಧನಾ ಪದ್ಧತಿ ಪ್ರಶ್ನೋತ್ತರಗಳು

ಕನ್ನಡ ಬೋಧನಾ ಪದ್ಧತಿ ಪ್ರಶ್ನೋತ್ತರಗಳು

ಹಳೆ ಪ್ರಶ್ನೆ  ಪತ್ರಿಕೆಯಲ್ಲಿನ ಪ್ರಮುಖ ಪ್ರಶ್ನೋತ್ತರಗಳು. ಟಿಇಟಿ ಪರೀಕ್ಷಾರ್ಥಿಗಳಿಗೆ ತುಂಬಾ ಉಪಯುಕ್ತ.


1.ಕಥೆಯ ಸ್ವರೂಪಕ್ಕೆ ಹೊಂದುವ ವಿಷಯ, ಪಾತ್ರಗಳು, ಸಂಭಾಷಣೆ, ಸಂದರ್ಭಗಳನ್ನು ಉತ್ತಮ ಧ್ವನಿಯ ಮೂಲಕ ಸಂವಹನ ಮಾಡುವ ಪದ್ಧತಿ. 

= ಕಥನ ಪದ್ಧತಿ. 


2.ಬೋಧನಾ ಕ್ರಿಯೆ ಪರಿಣಾಮಕಾರಿಯಾಗಲು ಪ್ರತ್ಯಕ್ಷ ಹಾಗೂ ಸಜೀವ ವಸ್ತುಗಳನ್ನು ಕೆಲವೊಮ್ಮೆ ಮಾದರಿಗಳನ್ನು ಉಪಯೋಗಿಸಿ ಕಲಿಸುವ ಪದ್ಧತಿ. 

= ನಿದರ್ಶನ ಪದ್ಧತಿ.


3.ಉತ್ತಮ ಮಾತುಗಾರಿಕೆಯ ಲಕ್ಷಣ ಹೀಗಿರಬೇಕು. 

= ಸಂದರ್ಭಕ್ಕನುಗುಣವಾಗಿ ಹಿತಮಿತವಾಗಿ ಮಾತನಾಡುವುದು. 


4.ಒಂದು ಕಾರ್ಯಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆಗಳಿಗೆ ತಕ್ಷಣ ಉತ್ತಮ ವಿಧಾನದಿಂದ ಪರಿಹಾರಕ್ಕಾಗಿ ಕೈಗೊಳ್ಳುವ ಪ್ರಕ್ರಿಯೆ. 

= ಕ್ರಿಯಾ ಸಂಶೋಧನೆ.


5.ಒಂದು ನಿರ್ದಿಷ್ಟ ಪಠ್ಯಾಂಶಗಳನ್ನು ವಿದ್ಯಾರ್ಥಿಗಳು ತಾವೇ ಕಲಿಯಲು ವ್ಯವಸ್ಥೆ ಗೊಳಿಸಿರುವ ಕಲಿಕಾ ಸಾಮಗ್ರಿಗಳ ಮೂಲಕ ಕಲಿಯುವ ವಿಧಾನ. 

= ಸ್ವಯಂ ಬೋಧಿನಿ ವಿಧಾನ. 


6.ಬರಹದಲ್ಲಿರುವ ಅಥವಾ ಮೌಖಿಕ ವಿಷಯವೊಂದನ್ನು ಮತ್ತೊಂದು ಭಾಷೆಗೆ ಪರಿವರ್ತಿಸುವುದು. 

= ಭಾಷಾಂತರ.


7.ಮಕ್ಕಳನ್ನು ಕಲಿಕೆಗೆ ಸಿದ್ಧಗೊಳಿಸಲು ಕಲಿಕೆಯತ್ತ ಆಸಕ್ತಿ ಮೂಡಿಸಿ ಪ್ರೇರಣೆ ನೀಡಲು ಪ್ರಶ್ನಿಸುವ ಪದ್ಧತಿ. 

= ಪ್ರಶ್ನೋತ್ತರ ಪದ್ಧತಿ.


8.ಭಾಷೆಯು ಮೂಲಭೂತವಾಗಿ ಮೌಖಿಕ ಕ್ರಿಯೆ ನಂತರ ಪಡೆಯುವ ರೂಪ. 

= ಬರಹ. 


9.ಭಾಷೆಯ ಉಗಮದ ಬಗ್ಗೆ ಇರುವ ದೈವ ಮೂಲ ಸಿದ್ಧಾಂತದ ಪ್ರಕಾರ ಭಾಷೆ ಹೀಗೆ ಉದ್ಭವವಾಗಿದೆ. 

= ಭಾಷೆ ಸೃಷ್ಟಿಕರ್ತ ನಿಂದ ಬಂದಿದೆ.


10.ವಿದ್ಯಾರ್ಥಿಗಳಲ್ಲಿ ಜ್ಞಾನ, ವರ್ತನೆ, ಕೌಶಲ್ಯ ಮತ್ತು ಮನೋಭಾವಗಳಲ್ಲಿನ ಬದಲಾವಣೆಗಳನ್ನು ಗುರುತಿಸುವ ನಿರಂತರ, ವ್ಯಾಪಕ ಮತ್ತು ನಿರ್ದಿಷ್ಟ ಪ್ರಕ್ರಿಯೆ. 

= ಮೌಲ್ಯಮಾಪನ. 


11.ಒಂದು ಮುದ್ರಿತ ಲಿಪಿಯನ್ನು ನೋಡಿ ಗಮನಿಸಿ ಅರ್ಥ ಮಾಡಿಕೊಂಡು ಧ್ವನಿ ರೂಪದಲ್ಲಿ ಅರ್ಥ ಬದ್ಧವಾಗಿ ಹೊರಹೊಮ್ಮಿಸುವ ಕ್ರಿಯೆ. 

= ಓದುಗಾರಿಕೆ.


12.ಉತ್ತಮ ಮತ್ತು ಸುಂದರ ಕೈಬರಹದ ಕೌಶಲ್ಯಗೊಳಿಸಿ ಮಾನ್ಯತೆ ಪಡೆಯುವದು ಈ ಅಂಶದಿಂದ. 

= ಬರವಣಿಗೆ ವಿನ್ಯಾಸದ ಸತತ ಅಭ್ಯಾಸದಿಂದ. 


13.ಕವಿಯೊಬ್ಬನ ಕನಸು, ಕಲ್ಪನೆ, ಭಾವಾನುಭವಗಳನ್ನು ಸುಸಂಬದ್ಧವಾಗಿ ಮತ್ತು ಛಂದೋಬದ್ಧವಾಗಿ ಅಭಿವ್ಯಕ್ತಿ ಗೊಳ್ಳುವ ರಚನೆ ಇದು. 

= ಪದ್ಯ ಸಾಹಿತ್ಯ.


14.ಆಡುವ ಮಾತು, ನಡೆಯುತ್ತಿರುವ ಕೆಲಸ, ಮಾಡುವ ಉದ್ದೇಶ ಈ ಭಾಷೆಯಲ್ಲಿ ನಡೆದಾಗ ಜನತೆಯ ಜೀವನದ ಮೇಲೆ ಸೂಕ್ತ ಪ್ರಭಾವ ಬೀರಲು ಸಾಧ್ಯವಾಗುವುದು. 

= ಪ್ರಾಂತ್ಯ ಭಾಷೆ. 


15.ಆರು ಸಾಲುಗಳ ಪದ್ಯವನ್ನು ಹೀಗೆಂದು ಕರೆಯುವರು. 

= ಷಟ್ಪದಿ.


16.ಮನುಷ್ಯನ ಯೋಜನೆಗಳನ್ನು ಅಭಿವ್ಯಕ್ತಿಗೊಳಿಸುವ ಸಲುವಾಗಿ ಇರುವ ಒಂದು ಶಬ್ದ ಸಂಯೋಜನಾ ಮಾಧ್ಯಮವೇ ಭಾಷೆ ಎಂದು ಹೇಳಿದವರು. 

= ಆಕ್ಸ್ಫರ್ಡ್ ನಿಘಂಟು. 


17.ಶ್ರಮ ಪರಿಹಾರ ಸಿದ್ಧಾಂತದ ಪ್ರತಿಪಾದಕರು. 

= ನೊಯಿರಿ. 


18.ಆಲಿಸುವಿಕೆನ್ನು ಉತ್ತಮಪಡಿಸುವ ಪ್ರಮುಖ ಅಂಶಗಳು. 

= ಆಸಕ್ತಿಯಿಂದ ವಸ್ತುನಿಷ್ಠತೆಯಿಂದ ಹೇಳುವವರನ್ನು ನೋಡುತ್ತಾ ಗ್ರಹಿಸುವುದು.


19.ಅನುಗಮನ ಪದ್ಧತಿಯ ಪ್ರತಿಪಾದಕರು. 

= ಫ್ರಾನ್ಸಿಸ್ ಬೇಕನ್. 


20.ವಿದ್ಯಾರ್ಥಿಯಲ್ಲಿ ಕಂಡುಬರುವ ಉತ್ತಮ ಮಾತುಗಾರಿಕೆಯ ಲಕ್ಷಣ ಹೀಗಿದೆ. 

= ಉದ್ದೇಶಪೂರ್ವಕವಾಗಿ ಮಾನಸಿಕ ಸಿದ್ಧತೆಯಿಂದ ಸರಳವಾಗಿ ಅರ್ಥ ಬದ್ಧವಾಗಿ ವ್ಯಾಕರಣಬದ್ಧವಾಗಿ ಮಾತನಾಡುವುದು.


21.ಎಂಟನೆಯ ತರಗತಿ ಬಿ ವಿಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಕರು ಆಶುಭಾಷಣ, ಏಕಪಾತ್ರಾಭಿನಯ ಸ್ಪರ್ಧೆಗಳನ್ನು ಏರ್ಪಡಿಸುವುದರ ಉದ್ದೇಶ. 

= ಉತ್ತಮ ಮಾತುಗಾರನನ್ನಾಗಿಸಲು. 


22.ಭಾಷೆ ಎನ್ನುವುದು ಅಭಿಪ್ರಾಯಗಳ ಅಭಿವ್ಯಕ್ತಿಯ ಒಂದು ವಿಧಾನ ಅಲ್ಲ ಅದೊಂದು ರೀತಿಯ ಆಲೋಚನೆ ಎಂದು ಹೇಳಿದವರು. 

= ಎರ್ಧಮನ್.


23.ಸ್ಥೂಲ, ಸೂಕ್ಷ್ಮ ಗ್ರಹಿಕೆಯೊಂದಿಗೆ ರಸಭಾವಗಳ ಪ್ರಶಂಸೆ ಮತ್ತು ಅಲಂಕಾರ, ಛಂದಸ್ಸು ಒಳಗೊಂಡ ಬೋಧನೆ. 

= ಕಾವ್ಯ ಬೋಧನೆ.


24.ಓದಿನಲ್ಲಿ ಹಿಮ್ಮರಳುವಿಕೆ ಉಂಟಾಗಲು ಕಾರಣ. 

= ಅವಧಾನ ಏಕಾಗ್ರತೆ ಮತ್ತು ಅರ್ಥಗ್ರಹಣ ಇಲ್ಲದಿರುವುದು. 


25.ವಿದ್ಯಾರ್ಥಿಗಳ ಕಲಿಕೆಯಲ್ಲಿ ಕಂಡುಬರುವ ದೋಷಗಳನ್ನು ನಿವಾರಿಸಲು ಕೈಗೊಳ್ಳುವ ಬೋಧನೆ. 

= ಪರಿಹಾರ ಬೋಧನೆ. 


26.ಬೋಧನೆ ಮತ್ತು ಕಲಿಕೆಯ ಪ್ರತಿಯೊಂದು ಹಂತದಲ್ಲಿ ಪ್ರತಿಕ್ರಿಯೆಗಳನ್ನು ಸ್ವೀಕರಿಸುತ್ತ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರುವ ಮೌಲ್ಯಮಾಪನ. 

= ನಿರಂತರ ಮೌಲ್ಯಮಾಪನ.


27.ಒಂದು ನಿರ್ದಿಷ್ಟ ತರಗತಿಯ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಉದ್ದೇಶಗಳಿಗನುಗುಣವಾಗಿ ನಿರ್ದಿಷ್ಟ ವಿಷಯಗಳನ್ನು ಅರ್ಥ ಬದ್ಧವಾಗಿ ವ್ಯವಸ್ಥಿತವಾಗಿ ಮತ್ತು ತಾರ್ಕಿಕವಾಗಿ ಜೋಡಿಸಿ ಪರಿಣಿತರು ಎಚ್ಚರಿಕೆಯಿಂದ ತಯಾರಿ ಮಾಡಿರುವುದು. 

= ಪಠ್ಯಪುಸ್ತಕ. 


28.ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುವಾಗ ಕುವೆಂಪುರವರ ಬಾಲ್ಯಜೀವನ ಮತ್ತು ಸಾಧನೆಗಳನ್ನು ವಿಡಿಯೋ ತೋರಿಸಿ ಮಹತ್ವ ಹೇಳುವುದು ಯಾವ ಬೋಧನೋಪಕರಣಗಳು ಉದಾಹರಣೆಯಾಗಿದೆ. 

= ದೃಕ್ ಶ್ರವಣೋಪಕರಣಗಳು.


29.ವಿದ್ಯಾರ್ಥಿಗಳ ಸಾಧನೆಗಳನ್ನು ನಿರಂತರ ಮೌಲ್ಯಮಾಪನದ ಮೂಲಕ ಅಳೆಯುವ ಪರೀಕ್ಷೆಗಳನ್ನು ಶೈಕ್ಷಣಿಕವಾಗಿ ಕರೆಯುವುದು. 

= ಘಟಕ ಪರೀಕ್ಷೆ.


30.ಭಾಷೆಯ ಪ್ರಾವೀಣ್ಯತೆ ಎಂದರೆ. 

= ಭಾಷಾ ಕೌಶಲ್ಯಗಳಲ್ಲಿ ಪ್ರಬುದ್ಧತೆ ಪಡೆಯುವುದು. 


31.ಭಾಷಾ ಬೋಧನೆಯಲ್ಲಿ ಪದ ಮಾಲ ಪದ್ಧತಿ ಎಂದರೆ. 

= ಪದಗಳನ್ನು, ಪದಗಳ ಉಚ್ಚಾರಣೆ ಮತ್ತು ಅರ್ಥವನ್ನು ತಿಳಿಸಿ ಕೊಡುವುದರ ಮೂಲಕ ಓದು ಕಲಿಸುವುದು.


32.ಭಾಷಾ ಕಲಿಕೆ ಮತ್ತು ಬೋಧನೆಯ ಮನೋವೈಜ್ಞಾನಿಕ ನಿಯಮಗಳ ಸರಿಯಾದ ಕ್ರಮ. 

= ಸಿದ್ಧತಾ ನಿಯಮ. ಅನುಕರಣ ನಿಯಮ. ಅಭ್ಯಾಸ ನಿಯಮ. ಪುನರ್ಬಲನ ಗೊಳಿಸುತ್ತಾ ಕಲಿಸುವುದು.


33.ಪ್ರಬಂಧ ಬೋಧನೆಯ ಉದ್ದೇಶ. 

= ಸ್ವ ಅಭಿವ್ಯಕ್ತಿಯನ್ನು ಪೋಷಿಸಿ ಬೆಳೆಸುವುದು

34.ಭಾಷೆಯ ರಚನೆಯ ನಿಯಮ ಮತ್ತು ಪ್ರಯೋಗವನ್ನು ಕುರಿತು ಅಧ್ಯಯನ ಮಾಡುವುದು. 

= ವ್ಯಾಕರಣ ಶಾಸ್ತ್ರ. 


35.ನಿರ್ದಿಷ್ಟವಾದ ವಿಷಯಗಳಿಂದ ಒಂದು ಸಾಮಾನ್ಯ ತೀರ್ಮಾನದ ಕಡೆ ಸಾಗುವ ಪದ್ಧತಿ. 

= ಅನುಗಮನ ಪದ್ಧತಿ.


36.ಬೋಧನಾ ಪದ್ಧತಿ ಎಂದರೆ. 

= ಕಲಿಕೆಯನ್ನು ಸುಲಭ ಮತ್ತು ಪರಿಣಾಮಕಾರಿ ಮಾಡಲು ಶಿಕ್ಷಕರು ಅನುಸರಿಸುವ ಮಾರ್ಗ. 


37.ಕಂದಪದ್ಯದ ಮೊದಲಾರ್ಧದಲ್ಲಿ ಬರುವ ಮಾತ್ರೆಗಳ ಸಂಖ್ಯೆ. 

= ಮೂವತ್ತೆರಡು. 


38.ಹತ್ತು ಬಾರಿ ಓದುವ ಬದಲು ಒಂದು ಬಾರಿ ಬರೆಯುವುದು ಎಂದು ಹೇಳುವುದು ಸಾಮಾನ್ಯ ಆದರೆ ಇದರಿಂದ ಬೆಳವಣಿಗೆಯಾಗುವುದು. 

= ಸ್ಮರಣ ಶಕ್ತಿ ಬೆಳೆಯುತ್ತದೆ. 


39.ಪದ್ಯವನ್ನು ರಾಗವಾಗಿ ಭಾವಪೂರ್ಣವಾಗಿ ಹಾಡುವ ಕ್ರಮವನ್ನು ಅಭ್ಯಾಸ ಮೂಡಿಸುವುದರಿಂದ ವಿದ್ಯಾರ್ಥಿಗಳಲ್ಲಿ ಈ ಸಾಮರ್ಥ್ಯ ಗಟ್ಟಿಯಾಗಿರುತ್ತದೆ. 

= ರಸಸ್ವಾದನೆ ಮತ್ತು ಸೌಂದರ್ಯ ಪ್ರಜ್ಞ

ಗುರುವಾರ, ನವೆಂಬರ್ 18, 2021

ಭಾರತದಲ್ಲಿರುವ ಈ ರೈಲ್ವೆ ನಿಲ್ದಾಣಕ್ಕೆ ಹೋಗಲು ಬೇಕು ಪಾಕಿಸ್ತಾನದ ವೀಸಾ…!

ಭಾರತದಲ್ಲಿರುವ ಈ ರೈಲ್ವೆ ನಿಲ್ದಾಣಕ್ಕೆ ಹೋಗಲು ಬೇಕು ಪಾಕಿಸ್ತಾನದ ವೀಸಾ…!

Kannada Dunia Kannada
18th November, 2021 07:39 IST

ವಿದೇಶಕ್ಕೆ ಹೋಗುವಾಗ ವೀಸಾ ಅನಿವಾರ್ಯ. ವೀಸಾ ಇಲ್ಲದೆ  ವಿದೇಶಕ್ಕೆ ಹೋಗಲು ಸಾಧ್ಯವಿಲ್ಲ. ಆದ್ರೆ ನಮ್ಮ ದೇಶದಲ್ಲಿ ಯಾವುದೇ ಪ್ರದೇಶದಲ್ಲಿ ಸುತ್ತಾಡಲು ವೀಸಾ ಬೇಕಾಗುವುದಿಲ್ಲ. ಹೀಗಂದುಕೊಂಡಿದ್ದರೆ ತಪ್ಪು. ಭಾರತದ ಒಂದು ಜಾಗಕ್ಕೆ ಹೋಗಲು ಭಾರತೀಯರಿಗೆ ವೀಸಾ ಅಗತ್ಯವಿದೆ.

ಹೌದು, ಆ ಜಾಗಕ್ಕೆ ಹೋಗಲು ಭಾರತೀಯರು, ಪಾಕಿಸ್ತಾನದ ವೀಸಾ ಹೊಂದಿರಬೇಕು. ಒಂದು ವೇಳೆ ಪಾಕಿಸ್ತಾನದ ವೀಸಾ ಇಲ್ಲದೆ ನೀವು ಆ ಜಾಗಕ್ಕೆ ಹೋದ್ರೆ, ಜೈಲು ಸೇರೋದು ನಿಶ್ಚಿತ. ಇಲ್ಲವೆ ದಂಡ ವಿಧಿಸಲಾಗುತ್ತದೆ. ಆ ಸ್ಥಳ ಬೇರೆ ಯಾವುದೋ ಅಲ್ಲ. ಪಂಜಾಬಿನ ಅಮೃತಸರದಲ್ಲಿರುವ ಅಟಾರಿ ರೈಲು ನಿಲ್ದಾಣ.

ಅಟಾರಿ ದೇಶದ ಏಕೈಕ ಅಂತರಾಷ್ಟ್ರೀಯ ಏರ್ ಕಂಡೀಷನರ್ ರೈಲು ನಿಲ್ದಾಣವಾಗಿದೆ. ಇದು ಪಾಕಿಸ್ತಾನದ ಗಡಿಯಲ್ಲಿದೆ. ಈ ನಿಲ್ದಾಣವು ದಿನದ 24 ಗಂಟೆಗಳ ಕಾಲ ಗುಪ್ತಚರ ಸಂಸ್ಥೆಗಳು ಮತ್ತು ಭದ್ರತಾ ಏಜೆನ್ಸಿಗಳಿಂದ ಸುತ್ತುವರೆದಿರುತ್ತದೆ. ಈ ಠಾಣೆಗೆ ಬರುವ ವ್ಯಕ್ತಿ ಪಾಕಿಸ್ತಾನದ ವೀಸಾ ಹೊಂದಿಲ್ಲದಿದ್ದರೆ, ವಿದೇಶಿ ಕಾಯಿದೆಯ ಸೆಕ್ಷನ್ 14 ರ ಅಡಿಯಲ್ಲಿ ಅವನ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಈ ಕಾಯ್ದೆಯಡಿ ಪ್ರಕರಣ ದಾಖಲಾದ್ರೆ ಜಾಮೀನು ಪಡೆಯುವುದು ಸುಲಭವಲ್ಲ.

ದೇಶದ ಅತ್ಯಂತ ವಿಐಪಿ ರೈಲು ಸಂಜೋತಾ ಎಕ್ಸ್ ಪ್ರೆಸ್ ಪಾಕಿಸ್ತಾನಕ್ಕೆ ಹೊರಡುವುದು ಅದೇ ರೈಲು ನಿಲ್ದಾಣದಿಂದ. ರೈಲ್ವೆ ಟಿಕೆಟ್ ಖರೀದಿಸುವಾಗ, ಪ್ರಯಾಣಿಕರು ಪಾಸ್‌ಪೋರ್ಟ್ ಸಂಖ್ಯೆಯನ್ನು ನೀಡಬೇಕು.

ಮಂಗಳವಾರ, ನವೆಂಬರ್ 16, 2021

*"ಒಂದು ಜಿಲ್ಲೆ- ಒಂದು ಉತ್ಪನ್ನ" ಯೋಜನೆಯಡಿ*

❇️ *"ಒಂದು ಜಿಲ್ಲೆ- ಒಂದು ಉತ್ಪನ್ನ" ಯೋಜನೆಯಡಿ* 
☘🍁☘🍁☘🍁☘🍁☘
⭐️ಬಾಗಲಕೋಟೆಯ *ಈರುಳ್ಳಿ*
⭐️ಬೆಳಗಾವಿಯ *ಬೆಲ್ಲ,* 
⭐️ಬಳ್ಳಾರಿಯ , *ಅಂಜೂರ*
⭐️ಬೆಂಗಳೂರು ಗ್ರಾಮಾಂತರ – *ಪೌಲ್ಟ್ರಿ ಉತ್ಪನ್ನ,* 
⭐️ಬೆಂಗಳೂರು ನಗರ- *ಬೇಕರಿ ಉತ್ಪನ್ನ*, 
⭐️ಚಾಮರಾಜನಗರ - *ಅರಿಶಿಣಕ್ಕೆ* ಪ್ರಾಧಾನ್ಯತೆ ಸಿಗಲಿದೆ.
⭐️ಚಿಕ್ಕಬಳ್ಳಾಪುರ- *ಟೊಮ್ಯಾಟೋ,* 
⭐️ಚಿಕ್ಕಮಗಳೂರಿನ *ಸಾಂಬಾರು ಪದಾರ್ಥ,* 
⭐️ಚಿತ್ರದುರ್ಗದ *ಕಡಲೆಕಾಯಿ ಉತ್ಪನ್ನ,* 
⭐️ದಕ್ಷಿಣ ಕನ್ನಡ- *ಸಾಗರ ಉತ್ಪನ್ನಗಳು,* 
⭐️ದಾವಣೆಗೆರೆ- *ಸಿರಿ ಧಾನ್ಯಗಳು*, 
⭐️ಧಾರವಾಡದ *ಮಾವು,* 
⭐️ಗದಗದ *ಬ್ಯಾಡಗಿ ಮೆಣಸಿನಕಾಯಿ,*
⭐️ಹಾಸನದ *ತೆಂಗು ಉತ್ಪನ್ನಕ್ಕೆ* ಆದ್ಯತೆ ಸಿಗಲಿದೆ
⭐️ಹಾವೇರಿ – *ಮಾವು,* 
⭐️ಕಲಬುರಗಿ – *ತೊಗರಿ*, 
⭐️ಕೊಡಗು- *ಕಾಫಿ*, 
⭐️ಕೋಲಾರ – *ಟೊಮ್ಯಾಟೋ*, 
⭐️ಕೊಪ್ಪಳ- *ಸೀಬೆ*, 
⭐️ಮಂಡ್ಯ – *ಬೆಲ್ಲ*, 
⭐️ಮೈಸೂರು- *ಬಾಳೆ*, 
⭐️ರಾಯಚೂರು- *ಮೆಣಸಿನಕಾಯಿ,* 
⭐️ರಾಮನಗರದ *ತೆಂಗು ಉತ್ಪನ್ನ,*
⭐️ ಶಿವಮೊಗ್ಗ- *ಅನಾನಸ್,* 
⭐️ತುಮಕೂರಿನ *ತೆಂಗು,* 
⭐️ಉಡುಪಿಯ *ಸಾಗರ ಉತ್ಪನ್ನ*, 
⭐️ಉತ್ತರ ಕನ್ನಡದ *ಸಾಂಬಾರು ಪದಾರ್ಥ*
⭐️ವಿಜಯಪುರ- *ನಿಂಬೆ,* 
⭐️ಯಾದಗಿರಿಯ *ಶೇಂಗ*
🔰🔰🔰🔰🔰🔰🔰

ಶನಿವಾರ, ನವೆಂಬರ್ 13, 2021

ಚಿನ್ನದ ಹುಡುಗ ನೀರಜ್ ಚೋಪ್ರಾ ಸೇರಿ 12 ಕ್ರೀಡಾಪಟುಗಳಿಗೆ ಪ್ರತಿಷ್ಠಿತ 2021ರ ʼಖೇಲ್‌ ರತ್ನʼ ಪ್ರಶಸ್ತಿ ಪ್ರಧಾನ : ಇಲ್ಲಿದೆ ಪ್ರಶಸ್ತಿ ವಿಜೇತರ ಫುಲ್‌ ಲಿಸ್ಟ್‌

  • ಚಿನ್ನದ ಹುಡುಗ ನೀರಜ್ ಚೋಪ್ರಾ ಸೇರಿ 12 ಕ್ರೀಡಾಪಟುಗಳಿಗೆ ಪ್ರತಿಷ್ಠಿತ ʼಖೇಲ್‌ ರತ್ನʼ ಪ್ರಶಸ್ತಿ ಪ್ರಧಾನ : ಇಲ್ಲಿದೆ ಪ್ರಶಸ್ತಿ ವಿಜೇತರ ಫುಲ್‌ ಲಿಸ್ಟ್‌

13 Nov 2021.4:57 PM

ನವದೆಹಲಿ : ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯುತ್ತಿದ್ದು, ಟೋಕಿಯೋ ಒಲಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವ್ರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವ್ರು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನ ನೀಡಿ ಗೌರವಿಸಿದ್ರು.

ಅಂದ್ಹಾಗೆ, ಯುವ ವ್ಯವಹಾರಗಳ ಮತ್ತು ಕ್ರೀಡಾ ಸಚಿವಾಲಯವು 2021ರ ನವೆಂಬರ್ 2 ರಂದು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಕ್ರೀಡೆಯಲ್ಲಿನ ಶ್ರೇಷ್ಠತೆಯನ್ನ ಗುರುತಿಸಲು ಮತ್ತು ಬಹುಮಾನ ನೀಡಲು ಪ್ರತಿ ವರ್ಷ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನ ನೀಡಲಾಗುತ್ತದೆ.

ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಪಡೆದ ವಿಜೇತರ ಪಟ್ಟಿ ಇಲ್ಲಿದೆ..! 
1. ನೀರಜ್ ಚೋಪ್ರಾ (Neeraj Chopra)
2. ರವಿ ಕುಮಾರ್ (Ravi Kumar)
3. ಲೊವ್ಲಿನಾ ಬೊರ್ಗೊಹೈನ್ (LovlinaBorgohain)
4. ಶ್ರೀಜೇಶ್ ಪಿ.ಆರ್ (Sreejesh P.R)
5. ಅವನಿ ಲೆಖಾರಾ (AvaniLekhara)
6. ಸುಮಿತ್ ಅಂಟಿಲ್‌ (SumitAntil)
7. ಪ್ರಮೋದ ಭಗತ್‌ (Pramod Bhagat)
8. ಕೃಷ್ಣ ನಗರ (Krishna Nagar)
9. ಮನೀಶ್ ನರ್ವಾಲ್ (Manish Narwal)
10. ಮಿಥಾಲಿ ರಾಜ್ (Mithali Raj)
11. ಸುನಿಲ್ ಚೆಟ್ರಿ (Sunil Chhetri)
12. ಮನ್ ಪ್ರೀತ್ ಸಿಂಗ್ (Manpreet Singh)

ಬುಧವಾರ, ನವೆಂಬರ್ 10, 2021

ಮೈಸೂರು: ವಿಶ್ವದ ಏಕೈಕ ಸಂಸ್ಕೃತ ಪತ್ರಿಕೆ ಎನಿಸಿದ್ದ 'ಸುಧರ್ಮ' ಸಂಸ್ಕೃತ ಪತ್ರಿಕೆಯ ಸಂಪಾದಕ ಕೆ.ವಿ.ಸಂಪತ್ ಕುಮಾರ್ ವಿಧಿವಶ

ಕನ್ನಡಪ್ರಭ ವಾರ್ತೆ Updated: 

ಮೈಸೂರು: ವಿಶ್ವದ ಏಕೈಕ ಸಂಸ್ಕೃತ ಪತ್ರಿಕೆ ಎನಿಸಿದ್ದ "ಸುಧರ್ಮ" ಸಂಸ್ಕೃತ ಪತ್ರಿಕೆಯ ಸಂಪಾದಕ ಕೆ.ವಿ.ಸಂಪತ್ ಕುಮಾರ್ (64) ಹೃದಯಾಘಾತದಿಂದ ನಿಧನರಾದರು.

ದೇಶ ಮತ್ತು ವಿದೇಶದಲ್ಲಿ ಸಂಸ್ಕೃತ ಜನಪ್ರಿಯಗೊಳಿಸುವಲ್ಲಿ, ಜನರ ಹೃದಯಕ್ಕೆ ಹತ್ತಿರವಾಗಿಸುವಲ್ಲಿ ಕಳೆದ 5 ದಶಕಗಳಿಂದ ನಿರಂತರವಾಗಿ ಶ್ರಮಿಸುತ್ತಿದ್ದ ಸುಧರ್ಮ ಸಂಸ್ಕೃತ ಪತ್ರಿಕೆಯ ಸಂಪಾದಕ ಕೆ.ವಿ. ಸಂಪತ್ ಕುಮಾರ್ ಮೈಸೂರಿನಲ್ಲಿಂದು ನಿಧನ ಹೊಂದಿದರು. 

ಸುದ್ದಿ ಬರೆಯುತ್ತಲೇ .ಸಂಪತ್ ಕುಮಾರ್ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಂಪತ್ ಕುಮಾರ್ ಹುಟ್ಟೂರು ಮೈಸೂರು ನಂಜನಗೂಡು ತಾಲೂಕು ಕಳಲೆ ಗ್ರಾಮ. ತಂದೆ ನಾಡದೂರ್ ವರದರಾಜ್ ಅಯ್ಯಂಗಾರ್, ತಾಯಿ ಸೀತಾಲಕ್ಷ್ಮೀ.
ಪಂಡಿತ್ ವರದರಾಜ ಅಯ್ಯಂಗಾರ್ ಈ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಸಂಸ್ಕೃತ ವಿದ್ವಾಂಸರೂ ಆಗಿರುವ ಇವರು 1945ರಲ್ಲಿ ಈ ಮುದ್ರಣಾಲಯ ಪ್ರಾರಂಭಿಸಿದ್ದು ಇಲ್ಲಿ ಪುಸ್ತಕಗಳು, ಸರ್ಕಾರಿ ಗೆಜೆಟ್ ಗಳು, ಸಂಸ್ಕೃತ ಮತ್ತು ಕನ್ನಡದಲ್ಲಿ ಪ್ರಶ್ನೆ ಪತ್ರಿಕೆಗಳು ಸಹ ಮುದ್ರಿತವಾಗಿದ್ದವು.

1963 ರಲ್ಲಿ ಅವರು ಬಾಲಕಿಯರ ಶಾಲೆ ಪ್ರಾರಂಭಿಸಿ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದ್ದರು. ಸಂಸ್ಕೃತ ಅನೇಕ ಕಾರ್ಯಾಗಾರಗಳನ್ನು ಆಯೋಜಿಸಿದ್ದರು  1970 ರಲ್ಲಿ, ಸಂಸ್ಕೃತ ಭಾಷೆಯನ್ನು ಜನಪ್ರಿಯಗೊಳಿಸುವುದಕ್ಕಾಗಿ ಪ್ರತಿನಿತ್ಯ ಸಂಸ್ಕೃತ ಜನರಿಗೆ ತಲುಪುವಂತೆ ಮಾಡುವುದಕ್ಕಾಗಿ “ಸುಧರ್ಮ” ಪತ್ರಿಕೆ ಪ್ರಾರಂಭಿಸಿದರು. ಆಕಾಶವಾಣಿಯಲ್ಲಿ ಸಂಸ್ಕೃತದಲ್ಲಿ ವಾರ್ತೆಯನ್ನು ವರದರಾಜ ಅಯ್ಯಂಗಾರ್ ಓದುತ್ತಿದ್ದರು.

ಸಂಪಾದಕ ಕೆ.ವಿ. ಸಂಪತ್ ಕುಮಾರ್ ಹಾಗೂ ಅವರ ಪತ್ನಿ ಜಯಲಕ್ಷ್ಮಿ ಅವರು ಬಹಳ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿದ್ದು ಪತ್ರಿಕೆಗೆ ಇಂದಿನ ಆಧುನಿಕ, ಡಿಜಟಲ್ ಯುಗದ ಆಧುನಿಕ ತಾಂತ್ರಿಕ ಸ್ಪರ್ಶನೀಡಿ ಮತ್ತಷ್ಟು ಜನಪ್ರಿಯಗೊಳಿಸಿದ್ದರು. ಜೊತೆಗೆ ಪತ್ರಿಕೆಯ ಆನ್ ಲೈನ್ ಆವೃತ್ತಿ ಸಹ ತಂದಿದ್ದರು ಸಂಪತ್ ಕುಮಾರ್ ರವರು ಸಹ ತಮ್ಮ ತಂದೆಯ ಇಚ್ಚೆಯಂತೆ ಸಂಸ್ಕೃತ ಪಸರಿಸುವ ಕೆಲಸಕ್ಕೆ ಟೊಂಕ ಕಟ್ಟಿ ನಿಂತಿದ್ದರು. ಪತ್ರಿಕೆ ಅಲ್ಲದೇ ಹಲವು ಸಂಸ್ಕೃತದ ಮೊಟ್ಟ ಮೊದಲುಗಳನ್ನು ನಿರ್ಮಿಸಿದ್ದಾರೆ. ಮೊದಲ ಸಂಸ್ಕೃತ ದಿನದರ್ಶಿಯನ್ನು ತಂದಿದ್ದಾರೆ.

“ಸುಧರ್ಮ” ಎ3 ಗಾತ್ರದ ಎರಡು-ಪುಟ, ಐದು-ಕಾಲಮ್ ಪತ್ರಿಕೆಯಾಗಿದೆ.2009 ರಲ್ಲಿ, “ಸುಧರ್ಮ” ಇ-ಪೇಪರ್ ಆವೃತ್ತಿ ಪ್ರಾರಂಭವಾಗಿದ್ದು ಜಗತ್ತಿನಾದ್ಯಂತ ಹಲವಾರು ಜನರು ಇದನ್ನು ಓದುತ್ತಿದ್ದಾರೆ.ಅಯ್ಯಂಗಾರ್ ಅವರ ಪುತ್ರ ಕೆ.ವಿ. ಸಂಪತ್ ಕುಮಾರ್ ಪ್ರಸ್ತುತ ಈ ಪತ್ರಿಕೆಯ ಸಂಪಾದಕರಾಗಿದ್ದಾರೆ.ಅವರ ತಂದೆ ಸಂಸ್ಕೃತ ಭಾಷೆಯನ್ನು ಜನಪ್ರಿಯಗೊಳಿಸುವ ಏಕೈಕ ಉದ್ದೇಶದಿಂದ ಈ ದಿನಪತ್ರಿಕೆ ಪ್ರಾರಂಭಿಸಿದರು.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಚಂದಾದಾರರನ್ನು ಹೊಂದಿದ್ದು, ಅಂಚೆ ಮೂಲಕ ಪತ್ರಿಕೆ ಕಳುಹಿಸುವ ವ್ಯವಸ್ಥೆಯೂ ಇದೆ. ಲಾಕ್ ಡೌನ್ ಸಂದರ್ಭದಲ್ಲಿ ಸಂಪತ್ ಕುಮಾರ್ ದಂಪತಿಗಳು ಪತ್ರಕರ್ತರಿಗೆ ಕೆಲ ದಿನ ಮಧ್ಯಾಹ್ನದ ಊಟ ವ್ಯವಸ್ಥೆ ಮಾಡಿ ಮಾದರಿಯಾಗಿದ್ದರು.

ಸಂಸ್ಕೃತ ಭಾಷೆಯಲ್ಲಿ 50 ವರ್ಷಗಳಿಂದ ಮೈಸೂರಿನಿಂದ ಪ್ರಕಟವಾಗುತ್ತಿರುವ ‘ಸುಧರ್ಮ’ ದಿನಪತ್ರಿಕೆಯ ಸಂಪಾದಕರಾದ ಕೆ.ವಿ.ಸಂಪತ್ ಕುಮಾರ್ ಹಾಗೂ ಅವರ .ಎಸ್.ಜಯಲಕ್ಷ್ಮಿ ಅವರಿಗೆ 2 ವರ್ಷದ ಹಿಂದೆ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿತ್ತು. ಆದರೇ ಪ್ರಶಸ್ತಿ ಸ್ವೀಕರಿಸುವ ಮುನ್ನವೇ ಸಂಪತ್ ಕುಮಾರ್ ವಿಧಿವಶರಾಗಿದ್ದಾರೆ.

ಏಕೈಕ ಸಂಸ್ಕೃತ ಪತ್ರಿಕೆ ‘ಸುಧರ್ಮ’ ಸಂಪಾದಕ ಕೆ.ವಿ.ಸಂಪತ್ ಕುಮಾರ್ ಇನ್ನಿಲ್ಲ

ಏಕೈಕ ಸಂಸ್ಕೃತ ಪತ್ರಿಕೆ ‘ಸುಧರ್ಮ’ ಸಂಪಾದಕ ಕೆ.ವಿ.ಸಂಪತ್ ಕುಮಾರ್ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated: 
prajavani

ಸಂಪತ್‌ಕುಮಾರ್

ಮೈಸೂರು: ರಾಷ್ಟ್ರದ ಏಕೈಕ ಸಂಸ್ಕೃತ ಪತ್ರಿಕೆ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದ ‘ಸುಧರ್ಮ’ ಪತ್ರಿಕೆಯ ಸಂಪಾದಕರಾದ ಕೆ.ವಿ.ಸಂಪತ್ ಕುಮಾರ್ (64) ಅವರು ಬುಧವಾರ ತಮ್ಮ ಕಚೇರಿಯಲ್ಲಿ ಹೃದಯಾಘಾತದಿಂದ ನಿಧನರಾದರು. ಇವರಿಗೆ ಪತ್ನಿ ಕೆ.ಎಸ್.ಜಯಲಕ್ಷ್ಮಿ ಇದ್ದಾರೆ.

ಮೃತರ ಅಂತ್ಯಕ್ರಿಯೆಯು ಸಂಜೆ ಇಲ್ಲಿನ ಚಾಮುಂಡಿಬೆಟ್ಟದ ತಪ್ಪಲಿನ ಸ್ಮಶಾನದಲ್ಲಿ ನೆರವೇರಲಿದೆ.

ಕಡಿಮೆ ಓದುಗರ ಬಳಗ ಹಾಗೂ ಆರ್ಥಿಕವಾಗಿ ಸಾಕಷ್ಟು ತೊಂದರೆಗಳಿದ್ದರೂ ಲೆಕ್ಕಿಸದೆ ‘ಸುಧರ್ಮ’ ಸಂಸ್ಕೃತ ಪತ್ರಿಕೆಯನ್ನು ಇವರು ತಮ್ಮ ಪತ್ನಿ ಜತೆಗೂಡಿ ಹೊರತರುತ್ತಿದ್ದರು. ಈ ಕಾರ್ಯಕ್ಕೆ ಕೇಂದ್ರ ಸರ್ಕಾರ ಸಂಪತ್‌ಕುಮಾರ್ ದಂಪತಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಿತ್ತು. ಪ್ರಶಸ್ತಿ ಸ್ವೀಕಾರಕ್ಕೂ ಮುನ್ನವೇ ಇವರು ನಿಧನರಾಗಿದ್ದಾರೆ.

ಸಂಪತ್‌ಕುಮಾರ್ ಅವರ ತಂದೆ ಪಂಡಿತ್ ವರದರಾಜ ಅಯ್ಯಂಗಾರ್ ಅವರು 1945ರಲ್ಲಿ ಸುಧರ್ಮ ಮುದ್ರಣಾಲಯ ಪ್ರಾರಂಭಿಸಿ, 1970ರಲ್ಲಿ ಸುಧರ್ಮ ಪತ್ರಿಕೆಯನ್ನು ಹೊರತರಲಾರಂಭಿಸಿದರು.  ಇವರ ನಿಧನದ ನಂತರ ಪತ್ರಿಕೆಯ ಜವಾಬ್ದಾರಿಯನ್ನು ವಹಿಸಿಕೊಂಡ ಸಂಪತ್‌ಕುಮಾರ್ ಪತ್ರಿಕೆಯಲ್ಲಿ  ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರು. ಪತ್ರಿಕೆಯ ಆನ್‌ಲೈನ್‌ ಆವೃತ್ತಿಯನ್ನೂ ಇವರು ಹೊರತಂದರು. ಜತೆಗೆ, ಸಂಸ್ಕೃತ ದಿನದರ್ಶಿಯನ್ನೂ ಪ್ರಕಟಿಸಿದರು.
ಸಂಸ್ಕೃತ ಭಾಷೆಯಲ್ಲಿ 50 ವರ್ಷಗಳಿಂದ ಮೈಸೂರಿನಿಂದ ಪ್ರಕಟವಾಗುತ್ತಿರುವ ‘ಸುಧರ್ಮ’ ದಿನಪತ್ರಿಕೆಯನ್ನು ಪರಿಗಣಿಸಿ 2 ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಕೆ.ವಿ.ಸಂಪತ್ ಕುಮಾರ್- ಕೆ.ಎಸ್.ಜಯಲಕ್ಷ್ಮೀ ದಂಪತಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಿತ್ತು. ಇದರ ಜತೆಗೆ, ಸಿದ್ಧಾರೂಢ ಪ್ರಶಸ್ತಿ, ಶಿವರಾತ್ರಿ ದೇಶಿಕೇಂದ್ರ ಮಾಧ್ಯಮ ಪ್ರಶಸ್ತಿ, ಅಬ್ದುಲ್ ಕಲಾಂ ಪ್ರಶಸ್ತಿಗಳೂ ಇವರಿಗೆ ಲಭಿಸಿವೆ.

ಮೈಸೂರು: ವಿಶ್ವದ ಏಕೈಕ ಸಂಸ್ಕೃತ ಪತ್ರಿಕೆ ಎನಿಸಿದ್ದ "ಸುಧರ್ಮ" ಸಂಸ್ಕೃತ ಪತ್ರಿಕೆಯ ಸಂಪಾದಕ ಕೆ.ವಿ.ಸಂಪತ್ ಕುಮಾರ್ (64) ಹೃದಯಾಘಾತದಿಂದ ನಿಧನರಾದರು.

ದೇಶ ಮತ್ತು ವಿದೇಶದಲ್ಲಿ ಸಂಸ್ಕೃತ ಜನಪ್ರಿಯಗೊಳಿಸುವಲ್ಲಿ, ಜನರ ಹೃದಯಕ್ಕೆ ಹತ್ತಿರವಾಗಿಸುವಲ್ಲಿ ಕಳೆದ 5 ದಶಕಗಳಿಂದ ನಿರಂತರವಾಗಿ ಶ್ರಮಿಸುತ್ತಿದ್ದ ಸುಧರ್ಮ ಸಂಸ್ಕೃತ ಪತ್ರಿಕೆಯ ಸಂಪಾದಕ ಕೆ.ವಿ. ಸಂಪತ್ ಕುಮಾರ್ ಮೈಸೂರಿನಲ್ಲಿಂದು ನಿಧನ ಹೊಂದಿದರು. 

ಸುದ್ದಿ ಬರೆಯುತ್ತಲೇ .ಸಂಪತ್ ಕುಮಾರ್ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಂಪತ್ ಕುಮಾರ್ ಹುಟ್ಟೂರು ಮೈಸೂರು ನಂಜನಗೂಡು ತಾಲೂಕು ಕಳಲೆ ಗ್ರಾಮ. ತಂದೆ ನಾಡದೂರ್ ವರದರಾಜ್ ಅಯ್ಯಂಗಾರ್, ತಾಯಿ ಸೀತಾಲಕ್ಷ್ಮೀ.
ಪಂಡಿತ್ ವರದರಾಜ ಅಯ್ಯಂಗಾರ್ ಈ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಸಂಸ್ಕೃತ ವಿದ್ವಾಂಸರೂ ಆಗಿರುವ ಇವರು 1945ರಲ್ಲಿ ಈ ಮುದ್ರಣಾಲಯ ಪ್ರಾರಂಭಿಸಿದ್ದು ಇಲ್ಲಿ ಪುಸ್ತಕಗಳು, ಸರ್ಕಾರಿ ಗೆಜೆಟ್ ಗಳು, ಸಂಸ್ಕೃತ ಮತ್ತು ಕನ್ನಡದಲ್ಲಿ ಪ್ರಶ್ನೆ ಪತ್ರಿಕೆಗಳು ಸಹ ಮುದ್ರಿತವಾಗಿದ್ದವು.

1963 ರಲ್ಲಿ ಅವರು ಬಾಲಕಿಯರ ಶಾಲೆ ಪ್ರಾರಂಭಿಸಿ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದ್ದರು. ಸಂಸ್ಕೃತ ಅನೇಕ ಕಾರ್ಯಾಗಾರಗಳನ್ನು ಆಯೋಜಿಸಿದ್ದರು  1970 ರಲ್ಲಿ, ಸಂಸ್ಕೃತ ಭಾಷೆಯನ್ನು ಜನಪ್ರಿಯಗೊಳಿಸುವುದಕ್ಕಾಗಿ ಪ್ರತಿನಿತ್ಯ ಸಂಸ್ಕೃತ ಜನರಿಗೆ ತಲುಪುವಂತೆ ಮಾಡುವುದಕ್ಕಾಗಿ “ಸುಧರ್ಮ” ಪತ್ರಿಕೆ ಪ್ರಾರಂಭಿಸಿದರು. ಆಕಾಶವಾಣಿಯಲ್ಲಿ ಸಂಸ್ಕೃತದಲ್ಲಿ ವಾರ್ತೆಯನ್ನು ವರದರಾಜ ಅಯ್ಯಂಗಾರ್ ಓದುತ್ತಿದ್ದರು.

ಸಂಪಾದಕ ಕೆ.ವಿ. ಸಂಪತ್ ಕುಮಾರ್ ಹಾಗೂ ಅವರ ಪತ್ನಿ ಜಯಲಕ್ಷ್ಮಿ ಅವರು ಬಹಳ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿದ್ದು ಪತ್ರಿಕೆಗೆ ಇಂದಿನ ಆಧುನಿಕ, ಡಿಜಟಲ್ ಯುಗದ ಆಧುನಿಕ ತಾಂತ್ರಿಕ ಸ್ಪರ್ಶನೀಡಿ ಮತ್ತಷ್ಟು ಜನಪ್ರಿಯಗೊಳಿಸಿದ್ದರು. ಜೊತೆಗೆ ಪತ್ರಿಕೆಯ ಆನ್ ಲೈನ್ ಆವೃತ್ತಿ ಸಹ ತಂದಿದ್ದರು ಸಂಪತ್ ಕುಮಾರ್ ರವರು ಸಹ ತಮ್ಮ ತಂದೆಯ ಇಚ್ಚೆಯಂತೆ ಸಂಸ್ಕೃತ ಪಸರಿಸುವ ಕೆಲಸಕ್ಕೆ ಟೊಂಕ ಕಟ್ಟಿ ನಿಂತಿದ್ದರು. ಪತ್ರಿಕೆ ಅಲ್ಲದೇ ಹಲವು ಸಂಸ್ಕೃತದ ಮೊಟ್ಟ ಮೊದಲುಗಳನ್ನು ನಿರ್ಮಿಸಿದ್ದಾರೆ. ಮೊದಲ ಸಂಸ್ಕೃತ ದಿನದರ್ಶಿಯನ್ನು ತಂದಿದ್ದಾರೆ.

“ಸುಧರ್ಮ” ಎ3 ಗಾತ್ರದ ಎರಡು-ಪುಟ, ಐದು-ಕಾಲಮ್ ಪತ್ರಿಕೆಯಾಗಿದೆ.2009 ರಲ್ಲಿ, “ಸುಧರ್ಮ” ಇ-ಪೇಪರ್ ಆವೃತ್ತಿ ಪ್ರಾರಂಭವಾಗಿದ್ದು ಜಗತ್ತಿನಾದ್ಯಂತ ಹಲವಾರು ಜನರು ಇದನ್ನು ಓದುತ್ತಿದ್ದಾರೆ.ಅಯ್ಯಂಗಾರ್ ಅವರ ಪುತ್ರ ಕೆ.ವಿ. ಸಂಪತ್ ಕುಮಾರ್ ಪ್ರಸ್ತುತ ಈ ಪತ್ರಿಕೆಯ ಸಂಪಾದಕರಾಗಿದ್ದಾರೆ.ಅವರ ತಂದೆ ಸಂಸ್ಕೃತ ಭಾಷೆಯನ್ನು ಜನಪ್ರಿಯಗೊಳಿಸುವ ಏಕೈಕ ಉದ್ದೇಶದಿಂದ ಈ ದಿನಪತ್ರಿಕೆ ಪ್ರಾರಂಭಿಸಿದರು.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಚಂದಾದಾರರನ್ನು ಹೊಂದಿದ್ದು, ಅಂಚೆ ಮೂಲಕ ಪತ್ರಿಕೆ ಕಳುಹಿಸುವ ವ್ಯವಸ್ಥೆಯೂ ಇದೆ. ಲಾಕ್ ಡೌನ್ ಸಂದರ್ಭದಲ್ಲಿ ಸಂಪತ್ ಕುಮಾರ್ ದಂಪತಿಗಳು ಪತ್ರಕರ್ತರಿಗೆ ಕೆಲ ದಿನ ಮಧ್ಯಾಹ್ನದ ಊಟ ವ್ಯವಸ್ಥೆ ಮಾಡಿ ಮಾದರಿಯಾಗಿದ್ದರು.

ಸಂಸ್ಕೃತ ಭಾಷೆಯಲ್ಲಿ 50 ವರ್ಷಗಳಿಂದ ಮೈಸೂರಿನಿಂದ ಪ್ರಕಟವಾಗುತ್ತಿರುವ ‘ಸುಧರ್ಮ’ ದಿನಪತ್ರಿಕೆಯ ಸಂಪಾದಕರಾದ ಕೆ.ವಿ.ಸಂಪತ್ ಕುಮಾರ್ ಹಾಗೂ ಅವರ .ಎಸ್.ಜಯಲಕ್ಷ್ಮಿ ಅವರಿಗೆ 2 ವರ್ಷದ ಹಿಂದೆ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿತ್ತು. ಆದರೇ ಪ್ರಶಸ್ತಿ ಸ್ವೀಕರಿಸುವ ಮುನ್ನವೇ ಸಂಪತ್ ಕುಮಾರ್ ವಿಧಿವಶರಾಗಿದ್ದಾರೆ.

ಸೋಮವಾರ, ನವೆಂಬರ್ 8, 2021

ಬೀದಿ ಕತ್ತಲು ಕಳೆದ ದೇಶದ ಮೊದಲ ವಿದ್ಯುದ್ಧೀಪ

ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿ ಪ್ರಾಂಗಣದ ಪೂರ್ವ ದಿಕ್ಕಿನ ದ್ವಾರದ ಬಳಿ ಒಳ ಪ್ರವೇಶಿಸುತ್ತಿದ್ದಂತೆಯೇ ರಸ್ತೆ ಪಕ್ಕದಲ್ಲಿ ಬೀದಿ ದೀಪವನ್ನು ನೋಡಬಹುದು. ಆಕರ್ಷಕವಾಗಿ ಕಾಣಿಸುವ, ದೀಪಗಳ ಗುಚ್ಛವನ್ನು ಒಳಗೊಂಡ ಈ ಬೀದಿ ದೀಪ ಕುತೂಹಲ ಮೂಡಿಸದೇ ಇರದು

ಕತ್ತಲೆ ಕಳೆಯುವ ಬೆಳಕಿನ ಹಬ್ಬ ದೀಪಾವಳಿಯ ಆಚರಣೆ ಬೆನ್ನಲ್ಲೇ ಈ ಬೀದಿ ದೀಪವನ್ನು ನೆನಪಿಸಿಕೊಳ್ಳುವುದಕ್ಕೆ ಕಾರಣವೂ ಇದೆ. ಎಲ್ಲ ಬೀದಿಗಳಂತೆಯೇ ಇದೂ ಕೂಡಾ ಮಾಮೂಲಿ ಬೀದಿದೀಪ ಎಂದು ಭಾವಿಸಬೇಡಿ. ಇದು ಅಂತಿಂಥ ಬೀದಿ ದೀಪವಲ್ಲ; ವಿದ್ಯುತ್‌ನಿಂದ ಬೆಳಗಿದ ದೇಶದ ಮೊದಲ ಬೀದಿ ದೀಪವಿದು. ಹಾಗಾಗಿ ಈ ದೀಪ ಬೆಂಗಳೂರಿನ ಹೆಮ್ಮೆಯ ಪ್ರತೀಕವೂ ಹೌದು.

‘ಕೋಲಾರ ಚಿನ್ನದ ಗಣಿಗೆ ವಿದ್ಯುತ್‌ ಪೂರೈಸುವ ಸಲುವಾಗಿ ಏಷ್ಯಾದ ಮೊದಲ ಜಲವಿದ್ಯುತ್‌ ಯೋಜನೆಯನ್ನು ಶಿವನ ಸಮುದ್ರದಲ್ಲಿ ಆರಂಭಿಸಲಾಗಿತ್ತು. ಅಲ್ಲಿಂದ ನೇರವಾಗಿ ಕೋಲಾರದ ಚಿನ್ನದ ಗಣಿ ಬೆಳಗಿಸಲು ವಿದ್ಯುತ್‌ ಪೂರೈಸಲಾಗುತ್ತಿತ್ತು. ಅಲ್ಲಿನ ಬೇಡಿಕೆಗಿಂತಲೂ ಹೆಚ್ಚು ವಿದ್ಯುತ್‌ ಈ ಯೋಜನೆಯಲ್ಲಿ ಉತ್ಪಾದನೆ ಆಗುತ್ತಿತ್ತು. ಅಂದಿನ ಡೆಪ್ಯುಟಿ ಚೀಫ್‌ ಎಂಜಿನಿಯರ್‌ ಆಗಿದ್ದ ಎಸಿಜೆ ಲ್ಯಾಬಿನ್‌ ಅವರು ಈ ಹೆಚ್ಚುವರಿ ವಿದ್ಯುತ್‌ ಅನ್ನು ಬೆಂಗಳೂರಿಗೆ ಪೂರೈಸುವ ಪ್ರಸ್ತಾಪವನ್ನು ಆಗಿನ ಮೈಸೂರು ಸಂಸ್ಥಾನದ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಮುಂದಿಟ್ಟಿದ್ದರು. ಒಡೆಯರ್‌ ಅವರು 1905ರ ಮೇ 30ರಂದು ಇದಕ್ಕೆ ಒಪ್ಪಿಗೆ ಸೂಚಿಸಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ದೂರದರ್ಶಿತ್ವದ ಫಲವಾಗಿ ನಗರಕ್ಕೆ ವಿದ್ಯುತ್‌ ಪೂರೈಕೆ ಆಗಿದೆ’ ಎಂದು ಇತಿಹಾಸ ಪ್ರೇಮಿ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ತಿಳಿಸಿದರು.

‘ಈ ದೀಪ 116 ವರ್ಷ ಹಳೆಯದು. ಮೈಸೂರಿನ ಅರಸರ ಜನಪರ ಕಾಳಜಿಯ ಕುರುಹಾಗಿರುವ ಈ ದೀ‍ಪವನ್ನು 1905ರ ಆ .05 ರಂದು ಸ್ಥಾಪಿಸಲಾಗಿತ್ತು. ವೈಸರಾಯ್‌ ಕೌನ್ಸಿಲ್‌ನ ಸರ್‌ ಜಾನ್‌ ಹೆವಿಟ್ ಅಧ್ಯಕ್ಷತೆಯಲ್ಲಿ ಇದರ ಉದ್ಘಾಟನೆ ನಡೆದಿತ್ತು. ನಾಲ್ವಡಿ ಕೃಷ್ಣರಾಜ್ ಒಡೆಯರ್‌ ಅವರೂ ಈ ಐತಿಹಾಸಿಕ ಘಳಿಗೆಗೆ ಸಾಕ್ಷಿಯಾಗಿದ್ದರು. ಏಷ್ಯಾ ಖಂಡದಲ್ಲೇ ವಿದ್ಯುತ್‌ನಿಂದ ಬೆಳಗಿದ ಮೊದಲ ಬೀದಿ ದೀಪವಿದು’ ಎಂದು ಅವರು ವಿವರಿಸಿದರು.

‘ಈಗಿನ ಕೆ.ಆರ್‌.ಮಾರುಕಟ್ಟೆ ಸಿಗ್ನಲ್‌ ಇರುವ ಜಾಗದಲ್ಲಿ ಹಿಂದೆ ಕೆರೆ ಇತ್ತು. ಅದನ್ನು ಸಿದ್ದಿಕಟ್ಟೆ ಕೆರೆ ಎಂದು ಕರೆಯುತ್ತಿದ್ದರು. ಅದರ ಪಕ್ಕದ ಬಯಲನ್ನು ಸಿದ್ಧಿಕಟ್ಟೆ ಎನ್ನುತ್ತಿದ್ದರು. ಈಗಿನ ಅವೆನ್ಯೂ ರಸ್ತೆ ಇರುವಲ್ಲಿ ಪೇಟೆ ಕೋಟೆ ಇತ್ತು. ಈಗ ಉಳಿದುಕೊಂಡಿರುವ ಕೋಟೆ ಹಾಗೂ ಪೇಟೆ ಕೋಟೆಗಳ ನಡುವೆ ಸಿದ್ದಿಕಟ್ಟೆ ಬಯಲು ಇತ್ತು. ಆ ಬಯಲಿನಲ್ಲಿ (ಈಗ ಗಣಪತಿ ದೇವಸ್ಥಾನವಿರುವ ಜಾಗ) ವಿದ್ಯುತ್‌ನಿಂದ ಬೆಳಗುವ ಬೀದಿ ದೀಪವನ್ನು ಸ್ಥಾಪಿಸಲಾಗಿತ್ತು’ ಎಂದು ಅವರು ತಿಳಿಸಿದರು.

‘1905ರಲ್ಲಿ ನಗರದಲ್ಲಿ ಚಾಮರಾಜಪೇಟೆ, ಮಲ್ಲೇಶ್ವರ ಮುಂತಾದ ಬಡಾವಣೆಗಳು ವ್ಯವಸ್ಥಿತವಾಗಿ ಬೆಳವಣಿಗೆ ಹೊಂದಿದ್ದವು. ನಗರಕ್ಕೆ ಶಿವನಸಮುದ್ರದಿಂದಲೇ ವಿದ್ಯುತ್‌ ಪೂರೈಸಲಾಗಿತ್ತು. ಇದೇ ಸಂದರ್ಭದಲ್ಲಿ 100 ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಲಾಗಿತ್ತು. ಆ ಮನೆಗಳಿಂದ ತಿಂಗಳಿಗೆ ₹ 1ರಂತೆ ವಿದ್ಯುತ್‌ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ನಗರಕ್ಕೆ ವಿದ್ಯುತ್‌ ಪೂರೈಸುವಲ್ಲಿ ಮೈಸೂರು ಸಂಸ್ಥಾನದ ಆಗಿನ ದಿವಾನರಾಗಿದ್ದ ಶೇಷಾದ್ರಿ ಅಯ್ಯರ್‌ ದೂರದೃಷ್ಟಿಯೂ ಇದೆ’ ಎಂದು ಧರ್ಮೇಂದ್ರ ವಿವರಿಸಿದರು.

ಈಗ ನಗರದಲ್ಲಿ ಸ್ಮಾರ್ಟ್‌ ಬೀದಿ ದೀಪಗಳನ್ನು ಬಿಬಿಎಂಪಿ ಅಳವಡಿಸುತ್ತಿದೆ. ವಿದ್ಯುತ್‌ ಉಳಿತಾಯ ಮಾಡುವ ಈ ಸ್ಮಾರ್ಟ್‌ ಬೀದಿ ದೀಪಗಳನ್ನು ನಿಯಂತ್ರಿಸಲು ಕೇಂದ್ರೀಕೃತ ವ್ಯವಸ್ಥೆ ಜಾರಿಗೆ ತರುವ ಮೂಲಕ ಪಾಲಿಕೆ ವಿನೂತನ ಹೆಜ್ಜೆ ಇಟ್ಟಿದೆ. ಈ ರೀತಿಯ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುವ ಪರಿಪಾಠ ನೂರಾರು ವರ್ಷಗಳಿಗೂ ಮುನ್ನವೇ ಆರಂಭವಾಗಿದ್ದರಿಂದಲೇ ಬೆಂಗಳೂರು ಈ ಹಂತಕ್ಕೆ ಬೆಳೆದಿದೆ ಎಂದರೆ ತಪ್ಪಾಗಲಾರದು.

ಗುರುವಾರ, ಅಕ್ಟೋಬರ್ 28, 2021

ಮಸುಕಾದ ಬಾನಿನಲ್ಲಿ ಎರೆಡು ಪತ್ರಿಕೋದ್ಯಮದ ನಕ್ಷತ್ರಗಳು ಮರಿಯಾ ಮತ್ತು ಮುರಾಟೋವ್

ಮಸುಕಾದ ಬಾನಿನಲ್ಲಿ ಎರೆಡು ಪತ್ರಿಕೋದ್ಯಮದ ನಕ್ಷತ್ರಗಳು ಮರಿಯಾ ಮತ್ತು ಮುರಾಟೋವ್ 
(ರಘುನಾಥ್ ಚ, ಹ,) 
ಪತ್ರಿಕೋದ್ಯಮದ ಮಸುಕು ಬಾನಿನಲ್ಲಿ ಎರಡು ಪ್ರಖರ ನಕ್ಷತ್ರಗಳು ಮೂಡಿವೆ. ನೋಬಲ್‌ ವೃತ್ತಿಗೆ ನೊಬೆಲ್‌ ಪ್ರಶಸ್ತಿ ಸಂದಿದೆ.

ಫಿಲಿಪ್ಪೀನ್ಸ್‌ನ ಮರಿಯಾ ರೆಸ್ಸಾ ಹಾಗೂ ರಷ್ಯಾದ ಡಿಮಿತ್ರಿ ಮುರಾಟೊವ್‌, 2021ರ ನೊಬೆಲ್‌ ಶಾಂತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 1935ರಲ್ಲಿ ಜರ್ಮನಿಯ ಪತ್ರಕರ್ತನೊಬ್ಬನಿಗೆ ನೊಬೆಲ್ ಶಾಂತಿ ಪ್ರಶಸ್ತಿ ಬಂದುದನ್ನು ಹೊರತುಪಡಿಸಿದರೆ – ಪತ್ರಿಕೆಗಳನ್ನು ಗುರ್ತಿಸಿ, ಪತ್ರಕರ್ತರನ್ನು ನೊಬೆಲ್‌ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಇದೇ ಮೊದಲು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿಶ್ವದಾದ್ಯಂತ ಧಕ್ಕೆಯುಂಟಾಗಿರುವ ಸಂದರ್ಭದಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗೆ ಈ ಪತ್ರಕರ್ತರು ನಡೆಸಿದ ಧೈರ್ಯದ ಹೋರಾಟವನ್ನು ಆಯ್ಕೆ ಸಮಿತಿ ಗುರ್ತಿಸಿದೆ.

ಈ ಆಯ್ಕೆಯ ಮೂಲಕ ನೊಬೆಲ್‌ ಸಮಿತಿ ಸೂಚ್ಯವಾಗಿ ಒಂದು ಸಂದೇಶ ನೀಡುತ್ತಿರುವಂತಿದೆ. ಈ ಜಗತ್ತನ್ನು ಮಾನವೀಯಗೊಳಿಸಲು ವೃತ್ತಿನಿಷ್ಠ ಪತ್ರಕರ್ತರು ಅಗತ್ಯ ಹಾಗೂ ಅಂಥವರನ್ನು ಗುರ್ತಿಸಿ ಗೌರವಿಸುವುದು ಈ ಹೊತ್ತಿನ ಜರೂರು ಎನ್ನುವ ಸೂಚನೆಯದು. ನಿಜ ಪತ್ರಿಕೋದ್ಯಮದ ಬೆನ್ನುತಟ್ಟಿದಂತಿರುವ ನೊಬೆಲ್‌ ಗೌರವ, ಸಮಕಾಲೀನ ಪತ್ರಿಕೋದ್ಯಮದಲ್ಲಿ ನೈತಿಕತೆ ಮತ್ತು ವ್ಯಾಪಾರದ ನಡುವಿನ ಗೆರೆ ಅಳಿಸಿಹೋಗಿರುವಷ್ಟು ತೆಳುವಾಗಿರುವ ಸನ್ನಿವೇಶದಲ್ಲಿ, ‘ಪತ್ರಕರ್ತ’ ಎನ್ನುವ

ಅಳಿಸಿಹೋಗುತ್ತಿರುವ ಪ್ರಭೇದವನ್ನು ರಕ್ಷಿಸುವಪ್ರಯತ್ನದಂತೆಯೂ ಇದೆ. ಈ ಕಾರಣಗಳಿಂದಾಗಿ, ಮರಿಯಾ ಮತ್ತು ಮುರಾಟೊವ್‌ ಅವರಿಗೆ ಸಂದಿರುವ ಪ್ರಶಸ್ತಿ ಪತ್ರಿಕೋದ್ಯಮದ ಸಂಭ್ರಮವಷ್ಟೇ ಅಲ್ಲ; ಅದು ಮಾನವೀಯತೆ ಮತ್ತು ವಿಶ್ವಶಾಂತಿಗೆ ಹಂಬಲಿಸುವ ಎಲ್ಲರ ಸಂಭ್ರಮವೂ ಹೌದು.

ಪ್ರಜಾಪ್ರಭುತ್ವ ಮತ್ತು ಪತ್ರಿಕಾ ಸ್ವಾತಂತ್ರ್ಯ ವಿಶ್ವದೆಲ್ಲೆಡೆ ಪ್ರತಿಕೂಲ ಪರಿಸ್ಥಿತಿ ಎದುರಿಸುತ್ತಿವೆ. ಆ ಪ್ರವಾಹದೆದುರು ಈಜುವ ಧೈರ್ಯ ತೋರಿರುವ ಮರಿಯಾ ಹಾಗೂ ಮುರಾಟೊವ್‌, ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗಾಗಿ ಪ್ರಯತ್ನಿಸುವ ಎಲ್ಲ ಪತ್ರಕರ್ತರ ಪ್ರತಿನಿಧಿಗಳು.

ಮರಿಯಾ (ಜ: 1963) ಅವರ ‘ರ‍್ಯಾಪ್ಲರ್’ ನ್ಯೂಸ್‌ ವೆಬ್‌ಸೈಟ್‌ಗೆ ಇನ್ನೂ ಹತ್ತರ ಪ್ರಾಯವೂ ತುಂಬಿಲ್ಲ. 2012ರಲ್ಲಿ ಆರಂಭವಾದ ಈ ಅಂತರ್ಜಾಲ ಪತ್ರಿಕೆ, ಫಿಲಿಪ್ಪೀನ್ಸ್‌ ಅಧ್ಯಕ್ಷ ರೊಡ್ರಿಗೊ ಡುಟರ್ಟೆ ಆಡಳಿತದ ಜನ ವಿರೋಧಿ ಕ್ರಮಗಳ ಬಗ್ಗೆ ನಿರಂತರವಾಗಿ ಬರೆಯುತ್ತಿದೆ. ಮಾದಕವಸ್ತು ವಿರುದ್ಧದ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸುಳ್ಳು ಸುದ್ದಿ ಹರಡಲು ಹಾಗೂ ವಿರೋಧಿಗಳಿಗೆ ಕಿರುಕುಳ ನೀಡಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವ ಪ್ರಯತ್ನಗಳನ್ನು ‌ಬಯಲಿ ಗೆಳೆಯುತ್ತಾ ಬಂದಿದೆ.

ಮರಿಯಾ ಅವರಿಗಿಂತ ಎರಡು ವರ್ಷ ಹಿರಿಯರಾದ ಮುರಾಟೊವ್‌ರ (ಜ: 1961) ‘ನೊವಾಯಾ ಗೆಝೆಟ್‌’ (ಆರಂಭ: 1993) ‘ರ‍್ಯಾಪ್ಲರ್’ಗೆ ಅಣ್ಣನಂತಹ ಪತ್ರಿಕೆ; 19 ವರ್ಷಗಳಷ್ಟು ಹೆಚ್ಚಿನ ಪ್ರಾಯದ್ದು. ‘ರ‍್ಯಾಪ್ಲರ್’ ಆನ್‌ಲೈನ್‌ ಪತ್ರಿಕೆ, ‘ನೊವಾಯಾ ಗೆಝೆಟ್‌’ ಮುದ್ರಿತ ಪತ್ರಿಕೆ ಎನ್ನುವ ವ್ಯತ್ಯಾಸ ಹೊರತುಪಡಿಸಿದರೆ, ಎರಡರ ದಾರಿ–ಧ್ಯೇಯಗಳು ಒಂದೇ. ಪ್ರಭುತ್ವವಿರೋಧಿ ಧೋರಣೆ ಹಾಗೂ ಜನಪರ ಕಾಳಜಿ ಮಾಧ್ಯಮದ ಪ್ರಮುಖ ಕಾಳಜಿಯಷ್ಟೇ. ಈ ಧೋರಣೆಯನ್ನು ಎತ್ತಿ ಹಿಡಿಯಲಿಕ್ಕಾಗಿ ಎರಡೂ ಪತ್ರಿಕೆಗಳು ಎಂಥ ಸವಾಲನ್ನೂ ಎದುರುಗೊಳ್ಳಲು ಹಿಂಜರಿದಿಲ್ಲ.

ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ ಮರಿಯಾ ಜೈಲು ಕಂಡು ಬಂದಿದ್ದಾರೆ; ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಮುರಾಟೊವ್‌ ಅವರ ದಾರಿ ಮತ್ತೂ ಕಠಿಣವಾದುದು. ಅವರ ಪತ್ರಿಕಾಬಳಗದ ಆರು ಸಹೋದ್ಯೋಗಿಗಳು ಹೋರಾಟದ ಹಾದಿಯಲ್ಲಿ ಹುತಾತ್ಮರಾಗಿದ್ದಾರೆ. ಆ ಕಾರಣದಿಂದಲೇ ನೊಬೆಲ್‌ ಪ್ರಕಟವಾದಾಗ ಮುರಾಟೊವ್‌ ಮೊದಲು ನೆನಪಿಸಿಕೊಂಡಿದ್ದು ತನ್ನ ಪತ್ರಿಕಾಬಳಗವನ್ನು, ಹುತಾತ್ಮರನ್ನು. ಹದಿನೈದು ವರ್ಷಗಳ ಹಿಂದೆ ಅಕ್ಟೋಬರ್‌ 7ರಂದು ಪತ್ರಿಕೆಯ ಅನ್ನಾ ಪೊಲಿಟ್‌ಕೋವ್ಸ್‌ಕಯ ಎನ್ನುವ ವರದಿಗಾರ್ತಿಯ ಕೊಲೆಯಾಗಿತ್ತು. ಕಾಕತಾಳೀಯ ಎನ್ನುವಂತೆ, ಆಕೆಯ ಸ್ಮರಣೆಯ ಆಸುಪಾಸಿನ ಸಂದರ್ಭದಲ್ಲೇ ಪ್ರಶಸ್ತಿ ಪ್ರಕಟಣೆಯ ಸುದ್ದಿ ಹೊರಬಿದ್ದಿದೆ.

‘ತಮಗೆ ಸಂದ ನೊಬೆಲ್‌, ವಿಶ್ವದೆಲ್ಲೆಡೆಯಲ್ಲಿನ ಪತ್ರಕರ್ತರಿಗೆ ಸಂದಿರುವ ಗೌರವ’ ಎಂದು ಮರಿಯಾ ಹೇಳಿದ್ದಾರೆ. ಪತ್ರಕರ್ತನ ಕೆಲಸ ಹಿಂದೆಂದಿಗಿಂತಲೂ ಕ್ಲಿಷ್ಟ ಹಾಗೂ ಅಪಾಯಕಾರಿ ಎಂದಿರುವ ಅವರು, ಈ ಪ್ರಶಸ್ತಿ ಪ್ರಭುತ್ವದ ಜನವಿರೋಧಿ ಧೋರಣೆಯ ವಿರುದ್ಧದ ಹೋರಾಟದಲ್ಲಿ ಹಲ್ಲೆಗಳಿಂದ ತಪ್ಪಿಸಿಕೊಳ್ಳಲು ಗುರಾಣಿಯಾಗಲಿದೆ. ಪತ್ರಕರ್ತರು ಆತಂಕವಿಲ್ಲದೆ ತಮ್ಮ ವೃತ್ತಿಯನ್ನು ನಿರ್ವಹಿಸಲು ಪ್ರೇರಣೆಯಾಗಲಿದೆ ಎನ್ನುವ ವಿಶ್ವಾಸ ಹೊಂದಿದ್ದಾರೆ.

ಪತ್ರಕರ್ತರ ಪಾಲಿಗೆ ವಿಶ್ವದ ಅತ್ಯಂತ ಅಪಾಯಕಾರಿ ದೇಶಗಳಲ್ಲೊಂದು ಎನ್ನುವ ಕುಖ್ಯಾತಿಗೆ ಪಾತ್ರವಾದ ಫಿಲಿಪ್ಪೀನ್ಸ್‌ನಲ್ಲಿ, ಮರಿಯಾ ಅವರಿಗೆ ಸಂದಿರುವ ಗೌರವ ಅಲ್ಲಿನ ಪತ್ರಕರ್ತರಿಗೆ ವಿಜಯೋತ್ಸವದಂತೆ ಕಾಣಿಸಿದೆ.

ರೊಡ್ರಿಗೊ ಡುಟರ್ಟೆ 2016ರಲ್ಲಿ ಫಿಲಿಪ್ಪೀನ್ಸ್‌ನ ಅಧ್ಯಕ್ಷರಾದ ನಂತರ ಮರಿಯಾ ಮತ್ತು ‘ರ‍್ಯಾಪ್ಲರ್’ ವಿರುದ್ಧ ಕ್ರಿಮಿನಲ್‌ ಮೊಕದ್ದಮೆಗಳು, ತನಿಖೆಗಳು ಹಾಗೂ ಆನ್‌ಲೈನ್‌ ದಾಳಿಗಳು ನಿರಂತರವಾಗಿ ನಡೆದಿವೆ. ರೊಡ್ರಿಗೊ ಅವರ ಪ್ರಕಾರ ‘ರ‍್ಯಾಪ್ಲರ್’ ಒಂದು ಸುಳ್ಳು ಸುದ್ದಿಗಳ ಕಾರ್ಖಾನೆ. ಸತ್ಯ ಹೇಳುವವರು ವ್ಯವಸ್ಥೆಯ ಕಣ್ಣಿಗೆ ಸುಳ್ಳುಗಾರರು, ದೇಶದ್ರೋಹಿಗಳಾಗಿ ಕಾಣುವುದರಲ್ಲಿ ಆಶ್ಚರ್ಯವೇನಿದೆ. ಫಿಲಿಪ್ಪೀನ್ಸ್‌ ಮಾದರಿ ಈಗ ವಿಶ್ವದ ಬಹುತೇಕ ದೇಶಗಳ ಮಾದರಿಯೂ ಆಗಿದೆ. ಉದಾಹರಣೆಗಳು ನಮ್ಮ ಕಣ್ಣೆದುರೇ ಇವೆ.

‘ಬುದ್ಧಿ–ಭಾವಗಳ ಮೇಲೆ ಸವಾರಿ ಮಾಡಲು ಭಯಕ್ಕೆ ಅವಕಾಶ ಮಾಡಿಕೊಟ್ಟರೆ ಅಧಿಕಾರದ ದುರುಪಯೋಗಕ್ಕೆ ಅವಕಾಶ ಕಲ್ಪಿಸಿದಂತೆಯೇ ಸರಿ. ಭಯದಿಂದ ಹೊರ ಬರುವುದು ಹೇಗೆನ್ನುವುದೇ ಬಹು ದೊಡ್ಡ ಸವಾಲು’ ಎನ್ನುವ ಮರಿಯಾ, ‘ಹೌ ಟು ಸ್ಟ್ಯಾಂಡಪ್‌ ಟು ಎ ಡಿಕ್ಟೇಟರ್‌’ (ಸರ್ವಾಧಿಕಾರಿಯನ್ನು ಎದುರಿಸುವುದು ಹೇಗೆ) ಪುಸ್ತಕದ ಲೇಖಕಿಯೂ ಹೌದು.

ಮರಿಯಾ ಅವರಂತೆ ಮುರಾಟೊವ್‌ ವ್ಯವಸ್ಥೆಯ ವಿರುದ್ಧದ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿರುವವರು. ರಷ್ಯಾದ ಮಾಜಿ ಅಧ್ಯಕ್ಷ ಮಿಖಾಯಿಲ್ ಗೊರ್ಬಚೆವ್‌, ತಮಗೆ ದೊರೆತ ನೊಬೆಲ್ ಶಾಂತಿ ಪುರಸ್ಕಾರದ ಮೊತ್ತದಲ್ಲಿ ಒಂದು ಭಾಗವನ್ನು ‘ನೊವಾಯಾ ಗೆಝೆಟ್‌’ಗೆ ನೀಡಿದ್ದರಂತೆ. ಆ ಹಣದಲ್ಲಿ ಪತ್ರಿಕೆಗೆ ಕಂಪ್ಯೂಟರ್‌ಗಳನ್ನು ಖರೀದಿಸಲಾಗಿತ್ತಂತೆ. ಪ್ರಶಸ್ತಿ ಪುಳಕದ ಪಾಳಿಯೀಗ ಮುರಾಟೊವ್‌ ಅವರದು. ಅವರು ತಮಗೆ ಬರುವ ಪ್ರಶಸ್ತಿಯ ಹಣದಲ್ಲಿ ಚಿಕ್ಕಾಸನ್ನೂ ಬಳಸದಿರಲು ನಿರ್ಧರಿಸಿದ್ದು, ಪ್ರಶಸ್ತಿಯ ಧ್ಯೇಯವನ್ನು ಸಾಕಾರಗೊಳಿಸುವ ಚಟುವಟಿಕೆಗಳಿಗಾಗಿ ಹಣ ಮೀಸಲಿಡಲು ಉದ್ದೇಶಿಸಿದ್ದಾರೆ.

ಮುರಾಟೊವ್‌ ಅವರಿಗೆ ಪ್ರಶಸ್ತಿ ಪ್ರಕಟವಾದ ಸಂದರ್ಭದಲ್ಲಿ ನಡೆದ ಮಾತುಕತೆಯಲ್ಲಿ ಗೊರ್ಬಚೆವ್‌, ‘ವಿರಳವಾಗಿಯಾದರೂ ಸತ್ಯವನ್ನು ನಿರಾಶೆಗೊಳಿಸುವುದಕ್ಕಾಗಿ ಪತ್ರಿಕೆಯನ್ನು ಅಭಿನಂದಿಸುತ್ತೇನೆ’ ಎಂದು ತಮಾಷೆ ಮಾಡಿದ್ದಾರೆ. ಅದಕ್ಕೆ ಮುರಾಟೊವ್‌ ಪ್ರತಿಕ್ರಿಯೆ: ‘ನಾವು ಪರಿಪೂರ್ಣರಲ್ಲ, ತಪ್ಪು ಮಾಡಿರುವುದನ್ನು ಒಪ್ಪಿಕೊಳ್ಳುತ್ತೇವೆ’. ಈ ವಿನಯ ಮತ್ತು ವಿಮರ್ಶೆ ಸಮಕಾಲೀನ ಪತ್ರಿಕೋದ್ಯಮದಲ್ಲಿ ವಿರಳ. ಸತ್ಯವನ್ನು ಪದೇ ‍ಪದೇ ನಿರಾಶೆಗೊಳಿಸುವುದು ಹಾಗೂ ತಮ್ಮನ್ನು ಪರಿಪೂರ್ಣ ಎಂದು ತಿಳಿದಿರುವುದು ಈಗಿನ ಮಾಧ್ಯಮಗಳ ಲಕ್ಷಣ.

ನೊಬೆಲ್‌ ಶಾಂತಿ ಪ್ರಶಸ್ತಿ ಪ್ರಕಟಗೊಂಡ ಮರುದಿನದ ‘ನೊವಾಯಾ ಗೆಝೆಟ್‌’ ಪತ್ರಿಕೆಯ ಮುಖಪುಟದಲ್ಲಿ ಇದ್ದುದು ಮುರಾಟೊವ್‌ ಛಾಯಾಚಿತ್ರವಲ್ಲ– ಮರಿಯಾ ಅವರದು. ‘ಆಕೆ ಅಪ್ರತಿಮ ಪತ್ರಕರ್ತೆ. ಆಕೆಯ ಬಗ್ಗೆ ನಮಗೆ ಅಪಾರ ಗೌರವವಿದೆ. ನಮ್ಮ ಪತ್ರಿಕೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುವಂತೆ ಮರಿಯಾರನ್ನು ಆಹ್ವಾನಿಸಿದ್ದೇವೆ’ ಎಂದು ಮುರಾಟೊವ್‌ ಹೇಳಿದ್ದಾರೆ. ಮುರಾಟೊವ್‌ರ ಬಗ್ಗೆ ಪ್ರೀತಿ–ಗೌರವ ಮೂಡಲು ಈ ನಡವಳಿಕೆಯೊಂದು ಸಾಲದೆ?

ಸೆಟೆದು ನಿಲ್ಲದಿದ್ದರೂ ಪರವಾಗಿಲ್ಲ, ಬಾಗದಿರುವ ಕನಿಷ್ಠ ವೃತ್ತಿಪರತೆಯನ್ನು ಹೊಂದಲಿಕ್ಕೆ ಸಮಕಾಲೀನ ಪತ್ರಕರ್ತರಿಗೆ ಮರಿಯಾ–ಮುರಾಟೊವ್‌ ಪ್ರೇರಣೆಯಾಗ ಬೇಕು. ಸ್ವತಂತ್ರ ಪತ್ರಿಕೋದ್ಯಮದ ಸಾಧ್ಯತೆಗಳ ಬಗ್ಗೆ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ, ಸಮಾನಮನಸ್ಕ ಪತ್ರಕರ್ತರ ಸಹಭಾಗಿತ್ವದಲ್ಲಿ ರೂಪುಗೊಂಡಿರುವ ‘ರ‍್ಯಾಪ್ಲರ್’ ಹಾಗೂ ‘ನೊವಾಯಾ ಗೆಝೆಟ್‌’ ಜೀವಂತಪಠ್ಯ ಗಳು ಭಾರತೀಯರಿಗೆ ಏನನ್ನೋ ಹೇಳುತ್ತಿರುವಂತಿವೆ.

ಶುಕ್ರವಾರ, ಅಕ್ಟೋಬರ್ 22, 2021

ಬಾರ್ಬಡೋಸ್ ಅಧ್ಯಕ್ಷೆಯಾಗಿ ಸಾಂಡ್ರಾ ಮೇಸನ್: ಬ್ರಿಟನ್ ವಸಾಹತುಶಾಹಿಯಿಂದ ಹೊರಕ್ಕೆ(ಮುಕ್ತಿ)

ಬ್ರಿಡ್ಜ್‌ಟೌನ್: ಬಾರ್ಬಡೋಸ್ ಕೆರಿಬಿಯನ್ ದ್ವೀಪವು ವಸಾಹತುಶಾಹಿ ಹಿಡಿತವನ್ನು ತೊಡೆದುಹಾಕುವ ನಿರ್ಣಾಯಕ ಹೆಜ್ಜೆಯಲ್ಲಿ ತನ್ನ ಮೊದಲ ಅಧ್ಯಕ್ಷರನ್ನು ಆಯ್ಕೆ ಮಾಡಿದೆ.

ಬ್ರಿಟನ್ ರಾಣಿ ಎಲಿಜಬೆತ್ ಅವರ ಹಿಡಿತದಿಂದ ಹೊರಬರಲು ಸಾಂಡ್ರಾ ಮೇಸನ್ ಅವರನ್ನು ಬುಧವಾರ ತಡರಾತ್ರಿ ದೇಶದ ಅಧ್ಯಕ್ಷರನ್ನಾಗಿ ಹೌಸ್ ಆಫ್ ಅಸೆಂಬ್ಲಿ ಮತ್ತು ಸೆನೆಟ್‌ನ ಜಂಟಿ ಅಧಿವೇಶನದಲ್ಲಿ ಮೂರನೇ ಎರಡರಷ್ಟು ಬಹುಮತದಿಂದ ಆಯ್ಕೆ ಮಾಡಲಾಯಿತು. ಇದು ನಮ್ಮ ‘ಗಣರಾಜ್ಯದ ಹಾದಿಯಲ್ಲಿ ಒಂದು ಮೈಲಿಗಲ್ಲು’ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

1966ರಲ್ಲಿ ಬ್ರಿಟಷರಿಂದ ಸ್ವಾತಂತ್ರ್ಯ ಪಡೆದ ಬಾರ್ಬಡೋಸ್, ವಸಾಹತು ರಾಷ್ಟ್ರವಾಗಿ ಬ್ರಿಟಿಷ್ ರಾಜಪ್ರಭುತ್ವದ ಜೊತೆ ದೀರ್ಘಕಾಲದಿಂದ ಸಂಬಂಧವನ್ನು ಉಳಿಸಿಕೊಂಡಿತ್ತು. ಆದರೆ, ಸಂಪೂರ್ಣ ಸಾರ್ವಭೌಮತ್ವ ಮತ್ತು ಸ್ವದೇಶಿ ನಾಯಕತ್ವಕ್ಕಾಗಿ ಇತ್ತೀಚಿನ ವರ್ಷಗಳಲ್ಲಿ ಕೂಗು ಹೆಚ್ಚಾಗಿದ್ದವು.

72 ವರ್ಷದ ಮೇಸನ್ ಅವರು ಬ್ರಿಟನ್‌ನಿಂದ ದೇಶ ಸ್ವಾತಂತ್ರ್ಯ ಪಡೆದದ 55 ನೇ ಸ್ವಾತಂತ್ರ್ಯೋತ್ಸವವಾದ ನವೆಂಬರ್ 30ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. 2018 ರಿಂದ ದ್ವೀಪದ ಗವರ್ನರ್-ಜನರಲ್ ಆಗಿರುವ ಮಾಜಿ ನ್ಯಾಯಶಾಸ್ತ್ರಜ್ಞೆ ಮೇಸನ್, ಬಾರ್ಬಡೋಸ್ ಕೋರ್ಟ್ ಆಫ್ ಅಪೀಲ್ಸ್‌ನಲ್ಲಿ ಸೇವೆ ಸಲ್ಲಿಸಿದ ಮೊದಲ ಮಹಿಳೆಯೂ ಕೂಡ ಆಗಿದ್ದಾರೆ.

ಅಧ್ಯಕ್ಷರ ಆಯ್ಕೆಯು ದೇಶದ ಪಯಣದಲ್ಲಿ ‘ಒಂದು ಪ್ರಮುಖ ಕ್ಷಣ’ಎಂದು ಬಾರ್ಬಡೋಸ್ ಪ್ರಧಾನಿ ಮಿಯಾ ಮೊಟ್ಲೆ ಬಣ್ಣಿಸಿದ್ಧಾರೆ.


ಮಂಗಳವಾರ, ಸೆಪ್ಟೆಂಬರ್ 28, 2021

ಚಂಡಮಾರುತಗಳಿಗೆ ಹೆಸರು ಇಡೋರು ಯಾರು?

ಚೆಂದ ಚೆಂದದ’ ಹೆಸರು ಇಟ್ಕೊಂಡು ಅಪ್ಪಳಿಸುತ್ತವಲ್ಲ ಈ ಚಂಡಮಾರುತಗಳು! ಇವಕ್ಕೆ ಹೆಸರು ಇಡೋರು ಯಾರು?

    

ಇತ್ತೀಚೆಗಷ್ಟೇ ನೀವಾರ್ ಚಂಡಮಾರುತ ಎದ್ದಿತ್ತು. ಇದಕ್ಕೆ ಹೆಸರುಕೊಟ್ಟಿದ್ದು ಇರಾನ್​. ಇದೀಗ ಪ್ರಾರಂಭವಾಗಿರುವ ಬುರೇವಿ ಮಾಲ್ಡೀವ್ಸ್​ನ ಸಲಹೆ. ಇನ್ನೂ ಮುಂದೆ ಅಪ್ಪಳಿಸಲಿರುವ ಸೈಕ್ಲೋನ್​ಗಳಿಗೂ ಈಗಾಗಲೇ ಹೆಸರಿಡಲಾಗಿದೆ.


ಪ್ರತಿವರ್ಷ ಒಂದಲ್ಲ ಒಂದು ಚಂಡಮಾರುತಗಳು ಏಳುತ್ತವೆ.. ಕೆಲವು ಅತಿ ಹೆಚ್ಚು ಭೀಕರತೆ ಸೃಷ್ಟಿಸಿದರೆ, ಮತ್ತೊಂದಿಷ್ಟು ಚಂಡಮಾರುತಗಳ ಪರಿಣಾಮ ಕೊಂಚ ಕಡಿಮೆ ಇರುತ್ತವೆ. ಆದರೆ ಅತಿಯಾದ ಗಾಳಿ, ಮಳೆ, ಸಮುದ್ರದಲ್ಲಿ ಏಳುವ ಭಯಂಕರ ಅಲೆಗಳು, ಭೂಕುಸಿತಗಳಂತಹ ಹಾನಿ ಭಯ ತರುವುದಂತೂ ಹೌದು..

ಆದರೆ ಈ ರುದ್ರ ಚಂಡಮಾರುತಗಳು ಹುಟ್ಟುಹುಟ್ಟುತ್ತಲೇ ಹೆಸರಿಟ್ಟುಕೊಂಡು ದಾಂಗುಡಿ ಇಡುತ್ತವಲ್ಲ..! ಅಷ್ಟಕ್ಕೂ ಇವಕ್ಕೆ ನಾಮಕರಣ ಮಾಡುವವರು ಯಾರು? ಯಾಕೆ ಮಾಡುತ್ತಾರೆ. ಇಷ್ಟೆಲ್ಲ ಪ್ರಕ್ರಿಯೆಗಳು ಹೇಗೆ ನಡೆಯುತ್ತವೆ ಎಂಬುದು ಇಂದಿಗೂ ಅನೇಕರ ಕುತೂಹಲ.

ಈಗಾಗಲೇ ಅದೆಷ್ಟೋ ಚಂಡಮಾರುತಗಳ ಹೆಸರು ಕೇಳಿದ್ದೇವೆ. 2018ರಿಂದ ಮೆಲುಕು ಹಾಕಿದರೆ, ತಿತ್ಲಿ, ಗಜಾ, ಫೆಥೈ, ಫನಿ, ವಾಯು ಮತ್ತು ಹಿಕ್ಕಾ, ಆಂಫಾನ್​, ನಿಸರ್ಗ, ನೀವಾರ್​, ಬುರೇವಿ…ಹೀಗೆ ‘ಚೆಂದಚೆಂದದ’ ಹೆಸರಿನ ಚಂಡಮಾರುತಗಳು ಅಪ್ಪಳಿಸಿವೆ. ಇದಕ್ಕೂ ಮೊದಲೂ ಸಹ ಫ್ಯಾನ್​, ನೀಲಂ, ಹೆಲೆನ್​, ಫೈಲಿನ್​ ಹೆಸರಿನ ಸೈಕ್ಲೋನ್​ಗಳು ಅಪಾರ ಹಾನಿ ಸೃಷ್ಟಿಸಿದ್ದವು.

2000 ದಲ್ಲಿ ಶುರುವಾಯಿತು.. ಭ್ರಷ್ಟ ರಾಜಕಾರಣಿಗಳು, ಮಹಿಳೆಯರ ಹೆಸರಿನ ಸೈಕ್ಲೋನ್​ಗಳು
ಮೊದಲೆಲ್ಲ ಸೈಕ್ಲೋನ್​ಗಳಿಗೆ ಹೆಸರಿಡಲು ನಿರ್ದಿಷ್ಟ ಪದ್ಧತಿ ಇರಲಿಲ್ಲ. 1953ರ ಹೊತ್ತಲ್ಲಿ ಆಸ್ಟ್ರೇಲಿಯಾದಲ್ಲಿ ಭ್ರಷ್ಟ ರಾಜಕಾರಣಿಗಳ ಹೆಸರನ್ನು ಇಡಲಾಗುತ್ತಿತ್ತು. ಹಾಗೇ ಅಮೆರಿಕ ಮಹಿಳೆಯರ ಹೆಸರನ್ನೇ ಸೈಕ್ಲೋನ್​ಗಳಿಗೂ ಇಡಲು ಶುರು ಮಾಡಿಕೊಂಡಿತ್ತು. ಎ ದಿಂದ ಡಬ್ಲ್ಯೂವರೆಗಿನ ಅಕ್ಷರಗಳನ್ನೂ ಪ್ರಯೋಗ ಮಾಡುತ್ತಿತ್ತು. ಆದರೆ ಮೊಟ್ಟ ಮೊದಲಿಗೆ ನಿರ್ದಿಷ್ಟ ಪದ್ಧತಿಯ ಅನುಸಾರ, ಚಂಡಮಾರುತಗಳು ಹುಟ್ಟುವ ಮೊದಲೇ ಅವನ್ನು ಹೆಸರಿಟ್ಟು ಗುರುತಿಸುವ ಪರಿಪಾಠ ಶುರುವಾಗಿದ್ದು 2000ದಲ್ಲಿ.

ಭಾರತ, ಬಾಂಗ್ಲಾದೇಶ, ಮಾಲ್ಡೀವ್ಸ್, ಮ್ಯಾನ್ಮಾರ್, ಒಮಾನ್​, ಪಾಕಿಸ್ತಾನ, ಶ್ರೀಲಂಕಾ ಮತ್ತು ಥೈಲ್ಯಾಂಡ್ ದೇಶಗಳನ್ನೊಳಗೊಂಡ WMO/ESCAP (ವಿಶ್ವ ಹವಾಮಾನ ಸಂಸ್ಥೆ ಹಾಗೂ ಏಷ್ಯಾ ಮತ್ತು ಪೆಸಿಫಿಕ್​ಗಳಿಗಾಗಿ ಇರುವ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗ) ಮೊಟ್ಟಮೊದಲಿಗೆ ಇದನ್ನು ಪ್ರಾರಂಭ ಮಾಡಿತು.

ಪ್ರತಿ ಸೈಕ್ಲೋನ್​ಗಳು ಅಪ್ಪಳಿಸುವ ಹೊತ್ತಿಗೆ ಈ ಎಂಟೂ ದೇಶಗಳು ಒಂದೊಂದು ಹೆಸರು ಸೂಚಿಸುತ್ತಿದ್ದವು. ಅದರಲ್ಲಿ ಆ ನಿರ್ದಿಷ್ಟ ಚಂಡಮಾರುತಕ್ಕೆ ಯಾವ ಹೆಸರು ಎಂಬುದನ್ನು WMO/ESCAPದ ಚಂಡಮಾರುತಗಳ ಪ್ಯಾನಲ್​ ಅಂತಿಮಗೊಳಿಸತೊಡಗಿತು. ಈ ಹೆಸರುಗಳು ಚಂಡಮಾರುತದ ಹುಟ್ಟುವ ಸ್ಥಳ, ವೇಗವನ್ನೂ ಆದರಿಸಿ ಇರುತ್ತಿತ್ತು.

2004ರಲ್ಲಿ ಅಪ್ಪಳಿಸಿದ್ದ ಚಂಡಮಾರುತಕ್ಕೆ ಭಾರತ ಮೊದಲ ಬಾರಿಗೆ ಅಗ್ನಿ ಎಂದು ಹೆಸರಿಟ್ಟಿತ್ತು. ಅದಾದ ಮೇಲೆ 2019ರಲ್ಲಿ ವಾಯು ಎಂಬುದು ನಮ್ಮ ದೇಶ ಇಟ್ಟ ಹೆಸರು. ಈಗಲೂ ಸಹ ಬಂಗಾಳ ಕೊಲ್ಲಿ, ಅರೇಬಿಯನ್​ ಸಾಗರ, ಹಿಂದೂ ಮಹಾಸಾಗರದಲ್ಲಿ ಹುಟ್ಟುವ ಚಂಡಮಾರುತಗಳಿಗೆ ಈ ಎಂಟು ರಾಷ್ಟ್ರಗಳ ಪ್ರಾದೇಶಿಕ ಹವಾಮಾನ ಇಲಾಖೆಗಳ ಹವಾಮಾನ ತಜ್ಞರೇ ಹೆಸರನ್ನು ಸೂಚಿಸುತ್ತಾರೆ. ಹಾಗೇ 2018ರಲ್ಲಿ ಈ ಸಮಿತಿಗೆ ಇರಾನ್, ಕತಾರ್, ಸೌದಿ ಅರೇಬಿಯಾ, ಯುಎಇ ಮತ್ತು ಯೆಮೆನ್ ಸೇರ್ಪಡೆಯಾಗಿವೆ. ಪ್ರತಿ ರಾಷ್ಟ್ರಕ್ಕೂ ಎಂಟು ಹೆಸರನ್ನು ಸಲಹೆ ಮಾಡುವ ಅಧಿಕಾರ ಇರುತ್ತದೆ.

ಜಾಗತಿಕವಾಗಿಯೂ ಇದೇ ಮಾದರಿ
ಈಗಂತೂ ಜಾಗತಿಕವಾಗಿ ಈ ಪದ್ಧತಿ ಮುಂದುವರಿಯುತ್ತಿದೆ. ವಿಶ್ವದ ಯಾವುದೇ ಸಾಗರದಲ್ಲಿ ಹುಟ್ಟುವ ಚಂಡಮಾರುತಗಳಿಗೆ ಆಯಾ ಪ್ರಾದೇಶಿಕ ವಿಶೇಷ ಹವಾಮಾನ ಕೇಂದ್ರಗಳು (RSMCs) ಮತ್ತು ಉಷ್ಣವಲಯ ಚಂಡಮಾರುತ ಎಚ್ಚರಿಕೆ ಕೇಂದ್ರಗಳು (TCWCs) ನಾಮಕರಣ ಮಾಡುತ್ತವೆ. ಜಗತ್ತಿನಲ್ಲಿ ಭಾರತೀಯ ಹವಾಮಾನ ಇಲಾಖೆ (IMD) ಸೇರಿ ಒಟ್ಟು ಆರು ಪ್ರಾದೇಶಿಕ ವಿಶೇಷ ಹವಾಮಾನ ಕೇಂದ್ರಗಳು ಮತ್ತು ಐದು ಉಷ್ಣವಲಯ ಚಂಡಮಾರುತ ಎಚ್ಚರಿಕೆ ಕೇಂದ್ರಗಳಿವೆ.

ಆಯಾ ದೇಶಗಳ ಭಾಷೆಯಲ್ಲಿ ಕೆಲವು ವಿಭಿನ್ನ ಅರ್ಥಕೊಡುವ ಹೆಸರನ್ನೇ ಚಂಡಮಾರುತಕ್ಕೆ ಇಡುತ್ತಿರುವುದು ಸೂಕ್ಷ್ಮವಾಗಿ ಗಮನಿಸಿದರೆ ಅರ್ಥವಾಗುತ್ತದೆ. ಉದಾಹರಣೆಗೆ 2017ರ ನವೆಂಬರ್​ನಲ್ಲಿ ಅಪ್ಪಳಿಸಿದ ಚಂಡಮಾರುತಕ್ಕೆ ಬಾಂಗ್ಲಾದೇಶ ಓಖಿ ಎಂದು ಹೆಸರಿಟ್ಟಿತ್ತು. ಅದರ್ಥ ಬೆಂಗಾಳಿ ಭಾಷೆಯಲ್ಲಿ ಕಣ್ಣು. ಹಾಗೇ ಫನಿ ಎಂದರೆ ಹಾವಿನ ಹೆಡೆ. ಇಲ್ಲಿಯವರೆಗೆ ಹಿಂದೂ ಮಹಾಸಾಗರ, ಅರೇಬಿಯನ್​ ಮತ್ತು ಬಂಗಾಳಕೊಲ್ಲಿಯಲ್ಲಿ ಹುಟ್ಟಿದ ಸುಮಾರು 64ಕ್ಕೂ ಹೆಚ್ಚು ಚಂಡಮಾರುತಗಳಿಗೆ ವಿಭಿನ್ನ, ಚೆಂದನೆಯ ಹೆಸರಿಡಲಾಗಿದೆ.

ಹೆಸರು ಕೊಡೋದು ಯಾಕೆ?
ಅಷ್ಟಕ್ಕೂ ಚಂಡಮಾರುಗಳಿಗೆ ಹೆಸರನ್ಯಾಕೆ ಕೊಡಲು ನಿರ್ಧರಿಸಿದ್ದಾರೆ ಎಂಬುದಕ್ಕೆ ಒಂದಷ್ಟು ಕಾರಣಗಳು ಸಿಗುತ್ತವೆ. ಮೊದಲನೆದಾಗಿ, ಆಯಾ ಪ್ರದೇಶದಲ್ಲಿ, ಬೇರೆಬೇರೆ ಕಾಲದಲ್ಲಿ ಅಪ್ಪಳಿಸುವ ಚಂಡಮಾರುತಗಳನ್ನು ಗುರುತಿಸಲು ಸುಲಭವಾಗುತ್ತದೆ. ಆ ನಿರ್ಧಿಷ್ಟ ಚಂಡಮಾರುತದ ಹಾನಿ ಪ್ರಮಾಣವನ್ನು ಜನರಿಗೆ ತಿಳಿಸಿ, ಅರಿವು ಮೂಡಿಸಲು ಸಹಾಯವಾಗುತ್ತದೆ.

ಕೆಲವೊಮ್ಮೆ ಒಂದೇ ಪ್ರದೇಶದಲ್ಲಿ ಒಂದಕ್ಕಿಂತ ಜಾಸ್ತಿ ಚಂಡಮಾರುತಗಳು ಒಟ್ಟಿಗೇ ಏಳುತ್ತವೆ.. ಅಥವಾ ಒಂದರ ಬೆನ್ನಿಗೆ ಮತ್ತೊಂದು ಅಪ್ಪಳಿಸುತ್ತವೆ. ಈ ಸಮಯದಲ್ಲಿ ಹೆಸರು ಇಡುವುದರಿಂದ ತುಂಬ ಅನುಕೂಲ. ಅಲ್ಲದೆ, ಸ್ಪಷ್ಟವಾಗಿ ಹಾನಿ, ಸಾವು, ನೋವಿನ ಲೆಕ್ಕಾಚಾರಗಳನ್ನು ದಾಖಲಿಸಬಹುದು. ಅದರಲ್ಲೂ ಅನೇಕ ವರ್ಷಗಳವರೆಗೆ ಚಂಡಮಾರುತ ಹೆಸರಿನಿಂದಲೇ ನೆನಪಿನಲ್ಲಿ ಉಳಿಯುತ್ತದೆ.

ಸದ್ಯದಲ್ಲೇ ಬೀಸಲಿದೆ ಪಾಕಿಸ್ತಾನದ ‘ಗುಲಾಬ್’ ಚಂಡಮಾರುತ 
ಇತ್ತೀಚೆಗಷ್ಟೇ ನಿವಾರ್ ಚಂಡಮಾರುತ ಎದ್ದಿತ್ತು. ಇದಕ್ಕೆ ಹೆಸರು ಕೊಟ್ಟಿದ್ದು ಇರಾನ್​. ಇದೀಗ ಪ್ರಾರಂಭವಾಗಿರುವ ಬುರೇವಿ ಮಾಲ್ಡೀವ್ಸ್​ನ ಸಲಹೆ. ಇನ್ನೂ ಮುಂದಕ್ಕೆ ಅಪ್ಪಳಿಸಲಿರುವ ಸೈಕ್ಲೋನ್​ಗಳಿಗೂ ಈಗಾಗಲೇ ಹೆಸರಿಡಲಾಗಿದೆ. ತೌಕ್ಟೆ (ಮ್ಯಾನ್ಮಾರ್​), ಯಾಸ್​ (ಒಮಾನ್​), ಗುಲಾಬ್​ (ಪಾಕಿಸ್ತಾನ​) ಎಂಬ ಸೈಕ್ಲೋನ್​ಗಳು ಶೀಘ್ರದಲ್ಲೇ ದಾಂಗುಡಿ ಇಡಲಿವೆ ಎಂದು ಹವಾಮಾನ ಇಲಾಖೆಗಳು ಪಟ್ಟಿ ಮಾಡಿವೆ.

ಶನಿವಾರ, ಸೆಪ್ಟೆಂಬರ್ 4, 2021

ನೋಯ್ಡಾ ಜಿಲ್ಲಾಧಿಕಾರಿ ಸುಹಾಸ್ ಯತಿರಾಜ್ ಪೈನಲ್ ಲಗ್ಗೆ

ನೋಯ್ಡಾ ಜಿಲ್ಲಾಧಿಕಾರಿ ಸುಹಾಸ್ ಯತಿರಾಜ್ ಪೈನಲ್ ಲಗ್ಗೆ.
ಟೋಕಿಯೊ: ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್‌ಎಲ್4 ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿರುವ ಭಾರತದ ಸುಹಾಸ್ ಎಲ್. ಯತಿರಾಜ್, ಚಿನ್ನದ ಪದಕ ಗೆಲ್ಲುವ ಗುರಿಯಿರಿಸಿದ್ದಾರೆ.

ಪುರುಷರ ಬ್ಯಾಡ್ಮಿಂಟನ್ ಎಸ್‌ಎಲ್4 ವಿಭಾಗದಲ್ಲಿ ಶನಿವಾರ ನಡೆದ ಸೆಮಿಫೈನಲ್ ಮುಖಾಮುಖಿಯಲ್ಲಿ ಯತಿರಾಜ್, ಎದುರಾಳಿ ಇಂಡೋನೇಷ್ಯಾದ ಫ್ರೆಡಿ ಸೆಟಿಯಾವನ್ ವಿರುದ್ಧ 21-9, 21-15ರ ಅಂತರದಲ್ಲಿ ಗೆಲುವು ದಾಖಲಿಸಿದರು.

ನೋಯ್ಡಾದ ಜಿಲ್ಲಾಧಿಕಾರಿಯಾಗಿರುವ ಸುಹಾಸ್ ಯತಿರಾಜ್, ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಮೊದಲ ಐಎಎಸ್ ಅಧಿಕಾರಿ ಎನಿಸಿದ್ದಾರೆ.

ಈ ಮೊದಲು ಬ್ಯಾಡ್ಮಿಂಟನ್ ಪುರುಷರ ಎಸ್‌ಎಲ್3 ವಿಭಾಗದಲ್ಲಿ ವಿಶ್ವ ನಂ.1 ಆಟಗಾರ ಭಾರತದ ಪ್ರಮೋದ್ ಭಗತ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಏತನ್ಮಧ್ಯೆ ಬ್ಯಾಡ್ಮಿಂಟನ್ ಪುರುಷರ ಎಸ್‌ಎಲ್3 ಸೆಮಿಫೈನಲ್ ಪಂದ್ಯದಲ್ಲಿ ಮನೋಜ್ ಸರ್ಕಾರ್ ಸೋಲು ಅನುಭವಿಸಿದ್ದಾರೆ. ಆದರೂ ಕಂಚಿನ ಪದಕಕ್ಕಾಗಿ ಸೆಣಸಲಿದ್ದಾರೆ.

ಗುರುವಾರ, ಸೆಪ್ಟೆಂಬರ್ 2, 2021

Union Budget 2021-22 | Summary | Date | Highlights

What Is Union Budget ?
  • The Union Budget of India, also referred to as the Annual Financial Statement in the Article 112 of the Constitution of India, is the annual budget of the Republic of India.
  • The Government presents it on the first day of February so that it could be materialized before the beginning of new financial year in April.
  • Until 2016 it was presented on the last working day of February by the Finance Minister of India in Parliament.
  • The budget, which is presented by means of the Finance bill and the Appropriation bill has to be passed by Lok Sabha before it can come into effect on April 1, the start of India’s financial year
What does the Budget presentation speech comprise? | Union Budget
  • The Budget presentation speech comprises the following parts:
  • Annual Financial Statement (AFS)
  • Demand for Grants (DG)
  • Appropriation Bill
  • Finance Bill
  • Macro-economic framework for the relevant financial year
  • Medium-Term fiscal policy and a strategy statement
  • Expenditure Profile
  • Expenditure Budget
  • Receipts Budget

Union Budget Of India 2021 Date |

  • Union Budget 2020-21 Will be presented By Finance Minister Nirmala Sitarman On 1 February 2021.

What is interim Budget ? | Union Budget 

  • The government of India  is expected to present an interim Budget, or vote on account, on February 1 as it nears the end of its term. Here, the government of India seeks the approval of Parliament to meet its expenditure for the first four months of the fiscal year (April to March) — paying salaries, ongoing programmes in various sectors etc — with no changes in the taxation structure, until a new government takes over and presents a full Budget that is revised for the full fiscal.

How Interim Budget is Differ From General Budget ?

  It differs from a General Budget, which is a comprehensive account of the finances. It lays down consolidated report of revenue from all sources, and outlays for schemes and projects.
  • The budget also carries Budgeted Estimates which are the estimates of the Central government’s accounts for the upcoming fiscal.



Union Budget 2021 Highlights | Budget 2021 Highlights

Union Budget 2021 Will be presented By Union Finance Minister Nirmala Sitaraman On 1 February 2021. Economic Survey Will be presented On 31st January 2021. Today Finance Minister Nirmala Sitarman Presented Union Budget 2021 For India . Full Details And Highlights Are Available Below .


  • Fiscal Deficit 2020-21 Was – 9.5 % of GDP , Fiscal Deficit For 2021-22 Will be Approx 6.8 %.
  • No Change In Personal Income Tax Slab.

Health and Well Being  Scheme And Fund Allocation In 2021 Budget

  • Ms. Sitharaman quotes Rabindranath Tagore: “Faith is the bird that feels the light when the dawn is still dark.”
  • Rs. 35, 000 crore has been allocated for COVID-19 vaccines and intend to provide further funds if required.
  • Rs. 2,217 crore for 32 urban centre For To tackle the burgeoning air pollution problem In India .
  • New Urban Jal Jeevan mission Will be Launched With A Total Fund Of Rs Rs 2.87 lakh crore. It Will Take Total 5 Years Time .
  • Mission Poshan 2.0 to improve nutritional outcomes across 112 Aspirational districts Would Be Launched In India .
  • The government envisages establishing critical health care hospital blocks in 602 districts.
  • PM Atma Nirbhar Swasthya Bharat Yojana at the outlay of Rs. 64,180 crore over six years to develop primary, secondary and tertiary healthcare systems.This will be in addition to the National Health mission and will support 17,000 rural and 11,000 urban health care centres.
  • Pnuemococcal vaccine to be rolled across the country
  • ₹35000 crore for Covid-19 Vaccine in 2021-22
  • Introduction of National Commission for Allied Healthcare Professionals Bill

PM Atma Nirbhar Swasth Bharat Yojana

utlay ₹64180 crore over 6 years

  • Support for Health and Wellness centres
  • Setting up of Integrated Public Health Labs
  • Establishing critical care hospital blocks
  • Strengthening NCDC
  • Expanding integrated health information portal

Health & Sanitation Budget 2021

  • A new scheme, titled PM Atma Nirbhar Swasthya Bharat Yojana, to be launched to develop primary, secondary and tertiary healthcare.
  • Mission POSHAN 2.0 to improve nutritional outcomes across 112 Aspirational districts Operationalization of 17 new public health units at points of entry
  • Modernising of existing health units at 32 airports, 15 seaports and land ports
  • Jal Jeevan Mission Urban aimed at better water supply nationwide
  • Strengthening of Urban Swachh Bharat Mission

Education Union Budget 2021

  • 100 new Sainik Schools to be set up
  • 750 Eklavya schools to be set up in tribal areas
  • A Central University to come up in Ladakh

Infrastructure Union Budget 2021

  • Vehicle scrapping policy to phase out old and unfit vehicles – all vehicles to undergo fitness test in automated fitness centres every 20 years (personal vehicles), every 15 years (commercial vehicles)
  • Highway and road works announced in Kerala, Tamil Nadu, West Bengal and Assam
  • National Asset Monetising Pipeline launched to monitor asset monetisation process
  • National Rail Plan created to bring a future ready Railway system by 2030
  • 100% electrification of Railways to be completed by 2023
  • Metro services announced in 27 cities, plus additional allocations for Kochi Metro, Chennai Metro Phase 2, Bengaluru Metro Phase 2A and B, Nashik and Nagpur Metros
  • National Hydrogen Mission to be launched to generate hydrogen from green power sources
  • Recycling capacity of ports to be doubled by 2024
  • Gas pipeline project to be set up in Jammu and Kashmir
  • Pradhan Mantri Ujjwala Yojana (LPG scheme) to be extended to cover 1 crore more beneficiaries

New Taxes Imposed In Budget 2021

  • No IT filing for people above 75 years who get pension and earn interest from deposits
  • Reopening window for IT assessment cases reduced from 6 to 3 years. However, in case of serious tax evasion cases (Rs. 50 lakh or more), it can go up to 10 years
  • Affordable housing projects to get a tax holiday for one year
  • Compliance burden of small trusts whose annual receipts does not exceed Rs. 5 crore to be eased
  • Duty of copper scrap reduced to 2.5%
  • Custom duty on gold and silver to be rationalised
  • Duty on naphtha reduced to 2.5%.
  • Duty on solar inverters raised from 5% to 20%, and on solar lanterns from 5% to 15%
  • All nylon products charged with 5% customs duty
  • Tunnel boring machines to attract customs duty of 7%
  • Customs duty on cotton raised from 0 to 10%

Economy and Finance In Budget 2021

  • Fiscal deficit stands at 9.5% of the GDP; estimated to be 6.8% in 2021-22
  • Proposal to allow States to raise borrowings up to 4% of GSDP this year
  • A Unified Securities Market Code to be created, consolidating provisions of the Sebi Act, Depositories Act, and two other laws
  • Proposal to increase FDI limit from 49% to 74%
  • An asset reconstruction company will be set up to take over stressed loans
  • Deposit insurance increased from Rs 1 lakh to Rs 5 lakh for bank depositors
  • Proposal to decriminalise Limited Liability Partnership Act of 2008
  • Two PSU bank and one general insurance firm to be Disinvested this year
  • An IPO of LIC to debut this fiscal
  • Strategic sale of BPCL, IDBI Bank, Air India to be completed

Agriculture Budget 2021 Key Schemes

  • Agriculture infrastructure fund to be made available for APMCs for augmenting their infrastructure
  • 1,000 more Mandis to be integrated into the E-NAM market place
  • Five major fishing hubs, including Chennai, Kochi and Paradip, to be developed
  • A multipurpose seaweed park to be established in Tamil Nadu

Employment Schemes In Budget 2021

  • A portal to be launched to maintain information on gig workers and construction workers
  • Social security to be extended to gig and platform workers
  • Margin capital required for loans via Stand-up India scheme reduced from 25% to 15% for SCs, STs and women

Union Budget 2021 : Full List Of Items What Got Cheaper & What Got Costlier After Budget 2021

Costlier Items After Budget 2021 

  • Mobile phones
  • Chargers
  • Power banks
  • Imported raw silk
  • Solar inverters – Budget 2021 raises duty to 20%.
  • Solar Lanterns : Budget 2021 raises duty to 15%.
  • Leather items
  • Gemstones
  • Tunnel boring machines
  • Kabuli chana, Pulses , Apples < Peas Will be Costlier After Budget 2021 .
  • Urea
  • Auto parts
  • Cotton: Customs duty increased to 10%
  • Gold & Silver Will be Costlier After Budget 2021 .
  • Palm Oil, Soybean Oil & Sun Flower Oil Will be Costlier

Cheaper Items After Budget 2021 

  • Iron
  • Steel
  • Nylon clothes
  • Copper items
  • Insurance
  • Shoes
  • Agricultural equipment

Budget 2021 Income Tax Slabs and Rates Table For Senior Citizen, NRIs

New Income Tax Slabs 2021-22
Under Rs 5 lakh
  • 0% for income upto 5 lakh.
  • 5% for income greater than 2.5 lakh if total income greater than Rs 5 lakh.
Rs 5 lakh to Rs 7.5 lakh10%
Rs 7.5 to 10 lakh15%
Rs 10 lakh to Rs 12.5 lakh20%
Rs 12.5 lakh to Rs 15 lakh25%
Above Rs 15 lakh30%

Important Abbreviations Union Budget 2021 | Indian Union Budget Abbreviations

  • IMF– International Monetary Fund
  • FDI- Foreign Direct Investment
  • CPI– Consumer Price Index
  • GDP– Gross Domestic Product
  • FCNR– Foreign Currency (Non-Resident) Account
  • GST– Goods and Service Tax
  • TEC India- Transform, Energise and Clean India
  • PACS– Primary Agriculture Credit Societies
  • KVKs– Krishi Vigyan Kendras
  • NAM– National Agricultural Market
  • APMC– Agricultural Produce Marketing Committee
  • MGNREGA– Mahatma Gandhi National Rural Employment Gurantee Act
  • PMGSY– Pradhan Mantri Gram Sadak Yojana
  • PMEGP– Prime Minister’s Employment Generation Programme
  • NRDWP– National Rural Drinking Water Programme
  • PMKK– Pradhan Mantri Kaushal Kendras
  • SANKALP– Skill Acquisition and Knowledge Awareness for Livelihood Promotion programme
  • STRIVE– Skill Strengthening for Industrial Value Enhancement
  • NTA– National Testing Agency
  • ICDS– Integrated Child Development Services
  • IRCTC– Indian Railway Catering and Tourism Corporation
  • TIES– Trade Infrastructure for Export Scheme
  • FIPB– Foreign Investment Promotion Board
  • CERT-Fin- Computer Emergency Response Team for our Financial Sector
  • IRFC– Indian Railway Finance Corporation Limited
  • FFO– Further Fund Offering
  • PMMY– Pradhan Mantri Mudra Yojana
  • BHIM– Bharat Interface for Money
  • UPI– Unified Payment Interface
  • USSD– Unstructured Supplementary Service Data
  • IMPS– Immediate Payment Service
  • SIDBI– Small Industries Development Bank of India
  • DBT- Direct Benefit Transfer
  • FRBM– Fiscal Responsibility and Budget Management Act
  • MAT– Minimum Alternate Tax
  • MSE– Medium and Small Enterprises
  • NPA– Non-Performing Asset
  • MSME– Micro, Small and Medium Enterprises
  • SIT– Special Investigation Team
  • FPI– Foreign Portfolio Investor
  • TDS– Tax Deducted at Source
  • QIBs– Qualified Institutional Buyers
  • SEBI- Securities and Exchange Board of India
  • RBI– Reserve Bank of India
  • CBDT– Central Board of Direct Taxation
  • IPO– Initial Public Offering
  • HUF– Hindu Undivided Family
  • OECD– Organisation for Economic Co-operation and Development
  • EBITDA– Earnings Before Interest, Taxes, Depreciation and Amortisation
  • TCS– Tax Collection at Source
  • FTC– Foreign Tax Credit
  • MPEDA– Marine Products Export Development Authority
  • APDEA– Anchorage Police Department Employees Association
  • AAR– Authority for Advance Ruling
  • FMV– Full Motion Video
  • FEMA– Foreign Exchange Management Act
  • LED– Light-Emitting Diode
  • RCS– Regional Connectivity Scheme
  • PCBs– Printed Circuit Boards
  • VPEG– Vinyl Polyethylene Glycol
  • MTA– Medium Quality Terephthalic Acid
  • QTA– Qualified Terephthalic Acid
  • NSSF– National Small Savings Fund


Union Budget Key Terminologies And Most Important Keywords
What Is Union Budget
  • Union Budget is the most comprehensive report of the Government’s Advances in which revenues from all sources and outlays for all activities are consolidated. The Budget also contains estimates of the Government’s accounts for the next Fiscal year called Budgeted Estimates.
  • Direct and Indirect Taxes – Direct taxes are the one that fall directly on individuals and corporations. For
    example, income tax, corporate tax etc. Indirect taxes are imposed on goods and services. They are paid by
    consumers when they buy goods and services. These include excise duty, customs duty etc.
  • Fiscal Deficit -When the government’s non-borrowed receipts fall short of its entire expenditure, it has to borrow money form the public to meet the shortfall. The excess of total expenditure over total non-borrowed receipts is called the Fiscal Deficit .
  • Revenue Deficit -The difference between revenue expenditure and revenue receipt is known as revenue Deficit. It shows the shortfall of government’s current receipts over current expenditure.
  • Primary Deficit -The primary deficit is the fiscal deficit minus interest payments. It tells how much of the Government’s borrowings are going towards meeting expenses other than interest payments.
  • Fiscal policy – It is the government actions with respect to aggregate levels of revenue and spending. Fiscal policy is implemented though the budget and is the primary means by which the government can influence the economy.
  • Capital Budget – The Capital Budget consists of capital receipts and payments. It includes investments in shares, loans and advances granted by the central Government to State Governments, Government companies, corporations and other parties
Revenue Budget –

The revenue budget consists of revenue receipts of the Government and it expenditure.
  • Revenue receipts are divided into tax and non-tax revenue.
  • Tax revenues constitute taxes like income tax, corporate tax, excise, customs, service and other duties that the Government levies.
  • The non-tax revenue sources include interest on loans, dividend on investments.
  • Budget Estimates – Amount of money allocated in the Budget to any ministry or scheme for the coming Financial year
  • Guillotine – Parliament, unfortunately, has very limited time for Scrutinizing the expenditure demands of all the Ministries.
  • So, once the prescribed period for the discussion on Demands for Grants is over, the Speaker of Lok Sabha puts all the outstanding Demands for Grants, Whether discussed or not, to the
    vote of the House.
  • This process is popularly known as ‘Guillotine’.