ಶನಿವಾರ, ಜುಲೈ 18, 2015

ವಿತ್ತೀಯ ನೀತಿ(financial polcy)


ವಿತ್ತೀಯ ನೀತಿ




ಸರ್ಕಾರ, ಕೇಂದ್ರ ಬ್ಯಾಂಕ್ ಅಥವಾ ರಾಷ್ಟ್ರದ ವಿತ್ತೀಯ ಪ್ರಾಧಿಕಾರವು (i) ವಿತ್ತೀಯ ಸರಬರಾಜು,(ii) ಹಣದ ಅಗತ್ಯತೆ, (iii) ಹಣದ ವೆಚ್ಚ ಅಥವಾ ಬಡ್ಡಿದರವನ್ನು ನಿಯಂತ್ರಿಸುವ ಪ್ರಕ್ರಿಯೆಗೆ ವಿತ್ತೀಯ ನೀತಿ ಎನ್ನಲಾಗುತ್ತದೆ. ಆರ್ಥಿಕತೆಯ ಸ್ಥಿರತೆ ಮತ್ತು ಪ್ರಗತಿ ಕಡೆಗೆ ಗುರಿಯಿಟ್ಟು ಅವುಗಳ ಸಮ‍ೂಹವನ್ನು ಸಾಧಿಸುವುದು ಇದರ ಹಿಂದಿನ ಉದ್ದೇಶವಾಗಿದೆ.[೧] ವಿತ್ತೀಯ ಸಿದ್ಧಾಂತವು ಗರಿಷ್ಠ ಹಣಕಾಸು ನೀತಿ ರೂಪಿಸುವ ಬಗ್ಗೆ ಒಳನೋಟವನ್ನು ಒದಗಿಸುತ್ತದೆ.

ವಿತ್ತೀಯ ನೀತಿಯನ್ನು ವಿಸ್ತರಣೆ ನೀತಿ ಅಥವಾ ಪರಿಮಿತ ನೀತಿ ಎಂದು ಉಲ್ಲೇಖಿಸಲಾಗಿದೆ. ವಿಸ್ತರಣೆಯ ನೀತಿಯು ಆರ್ಥಿಕತೆಯಲ್ಲಿ ಹಣದ ಒಟ್ಟು ಪೂರೈಕೆಯನ್ನು ವರ್ಧಿಸುತ್ತದೆ. ಪರಿಮಿತ ನೀತಿಯು ಒಟ್ಟು ಹಣದ ಪೂರೈಕೆಯನ್ನು ಕುಗ್ಗಿಸುತ್ತದೆ.
ಆರ್ಥಿಕ ಹಿಂಜರಿತದ ಕಾಲದಲ್ಲಿ ಬಡ್ಡಿದರವನ್ನು ಕುಂಠಿತಗೊಳಿಸುವ ಮ‌ೂಲಕ ನಿರುದ್ಯೋಗ ನಿವಾರಣೆಗೆ ವಿಸ್ತರಣಾ ನೀತಿಯನ್ನು ಸಾಂಪ್ರದಾಯಿಕವಾಗಿ ಬಳಸಲಾಗುತ್ತದೆ. ಪರಿಮಿತ ನೀತಿಯಲ್ಲಿ ಹಿಂಜರಿತ ನಿಭಾಯಿಸಲು ಬಡ್ಡಿದರಗಳ ಏರಿಕೆ ಒಳಗೊಂಡಿದೆ. ವಿತ್ತೀಯ ನೀತಿಯು ಖಜಾನೆ ನೀತಿಗೆ ಭಿನ್ನವಾಗಿದೆ. ಸರ್ಕಾರದ ಸಾಲ,ವೆಚ್ಚ ಮತ್ತು ತೆರಿಗೆ ಪದ್ಧತಿಯನ್ನು ಖಜಾನೆ ನೀತಿ ಉಲ್ಲೇಖಿಸುತ್ತದೆ.[೨]






ಸ್ಥೂಲ ಅವಲೋಕನಸಂಪಾದಿಸಿ
ಆರ್ಥಿಕ ವ್ಯವಸ್ಥೆಯಲ್ಲಿ ಬಡ್ಡಿದರಗಳ ನಡುವಿನ ಸಂಬಂಧದ ಮೇಲೆ ವಿತ್ತೀಯ ನೀತಿ ಅವಲಂಬಿತವಾಗಿದೆ. ಹಣವನ್ನು ಸಾಲವಾಗಿ ಪಡೆಯುವ ದರ ಮತ್ತು ಹಣದ ಒಟ್ಟು ಪೂರೈಕೆ ಇದರಲ್ಲಿ ಸೇರಿದೆ. ಆರ್ಥಿಕ ಬೆಳವಣಿಗೆ, ಹಣದುಬ್ಬರ, ಇತರೆ ಕರೆನ್ಸಿಗಳ ಜತೆ ವಿನಿಮಯ ದರ ಮತ್ತು ನಿರುದ್ಯೋಗ ಮುಂತಾದ ಫಲಶ್ರುತಿಗಳ ಪೈಕಿ ಪೈಕಿ ಒಂದು ಅಥವಾ ಎರಡನ್ನೂ ನಿಯಂತ್ರಿಸಿ ಅವುಗಳ ಮೇಲೆ ಪ್ರಭಾವ ಬೀರುವುದಕ್ಕಾಗಿ ವಿತ್ತೀಯ ನೀತಿಯು ವಿವಿಧ ಸಾಧನಗಳನ್ನು ಬಳಸುತ್ತದೆ.
ಕರೆನ್ಸಿ ವಿತರಣೆ ಏಕಸ್ವಾಮ್ಯತೆ ಹೊಂದಿರುವ ಕಡೆ, ಅಥವಾ ಕೇಂದ್ರ ಬ್ಯಾಂಕ್‌ಗೆ ಬದ್ಧವಾದ ಬ್ಯಾಂಕ್‌ಗಳ ಮ‌ೂಲಕ ಕರೆನ್ಸಿಗಳನ್ನು ವಿತರಿಸುವ ನಿಯಂತ್ರಿತ ವ್ಯವಸ್ಥೆ ಇರುವ ಕಡೆಯಲ್ಲಿ, ವಿತ್ತೀಯ ಪ್ರಾಧಿಕಾರಕ್ಕೆ ಹಣಕಾಸು ಪೂರೈಕೆ ಬದಲಿಸುವ ಸಾಮರ್ಥ್ಯವಿರುತ್ತದೆ. ಹೀಗೆ ಅದು ಬಡ್ಡಿದರದ ಮೇಲೆ ಪ್ರಭಾವ ಬೀರುತ್ತದೆ(ವಿತ್ತೀಯ ನೀತಿ ಗುರಿಗಳನ್ನು ಸಾಧಿಸುವುದಕ್ಕಾಗಿ) 19ನೇ ಶತಮಾನದ ಅಂತ್ಯದಲ್ಲಿ ವಿತ್ತೀಯ ನೀತಿ ಆರಂಭವಾಗಿದ್ದು, ಆಗ ಸುವರ್ಣಮಾನಕ ಪದ್ಧತಿಯನ್ನು ಕಾಯ್ದುಕೊಳ್ಳಲಾಗುತ್ತಿತ್ತು.


ವಿತ್ತೀಯ ನೀತಿಯೊಂದು ವಿತ್ತೀಯ ಪೂರೈಕೆಯ ಗಾತ್ರವನ್ನು ತಗ್ಗಿಸಿದರೆ ಅಥವಾ ಬಡ್ಡಿದರ ವರ್ಧಿಸಿದರೆ ಆ ನೀತಿಯನ್ನು ಪರಿಮಿತ ನೀತಿ ಎಂದು ಉಲ್ಲೇಖಿಸಲಾಗುತ್ತದೆ. ವಿಸ್ತರಣಾ ನೀತಿಯು ಹಣಕಾಸಿನ ಪೂರೈಕೆಯ ಗಾತ್ರವನ್ನು ಹೆಚ್ಚಿಸುತ್ತದೆ ಅಥವಾ ಬಡ್ಡಿದರವನ್ನು ಕುಗ್ಗಿಸುತ್ತದೆ. ಇದಿಷ್ಟೇ ಅಲ್ಲದೇ, ವಿತ್ತೀಯ ನೀತಿಗಳನ್ನು ಈ ಕೆಳಗಿನಂತೆ ಬಣ್ಣಿಸಲಾಗಿದೆ: ಕೇಂದ್ರ ವಿತ್ತೀಯ ಪ್ರಾಧಿಕಾರ ಗೊತ್ತುಮಾಡಿದ ಬಡ್ಡಿದರ ಆರ್ಥಿಕ ಬೆಳವಣಿಗೆ ಸೃಷ್ಟಿಯ ಉದ್ದೇಶ ಹೊಂದಿದ್ದರೆ ಹೊಂದಾಣಿಕೆಯ ನೀತಿ; ಬೆಳವಣಿಗೆ ಸೃಷ್ಟಿಸದೇ, ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶ ಇಲ್ಲದಿದ್ದರೆ ತಟಸ್ಥ ನೀತಿ; ಹಣದುಬ್ಬರ ತಗ್ಗಿಸುವ ಉದ್ದೇಶ ಹೊಂದಿದ್ದರೆ ಅದು ಬಿಗಿ ನೀತಿ ಎಂದು ಬಣ್ಣಿಸಲಾಗುತ್ತದೆ.

ಈ ಗುರಿಗಳ ಸಾಧನೆಗೆ ಅನೇಕ ಹಣಕಾಸಿನ ನೀತಿಯ ಸಾಧನಗಳು ಲಭ್ಯವಿವೆ: ಕಾನೂನುಬದ್ಧ ಬಡ್ಡಿ ದರಗಳನ್ನು ಹೆಚ್ಚಿಸುವುದು; ಆರ್ಥಿಕ ನೆಲಗಟ್ಟನ್ನು ತಗ್ಗಿಸುವುದು; ಮೀಸಲು ಅಗತ್ಯಗಳನ್ನು ಹೆಚ್ಚಿಸುವುದು. ಇವೆಲ್ಲವೂ ಹಣಕಾಸಿನ ಪೂರೈಕೆಯನ್ನು ಪರಿಮಿತಗೊಳಿಸುವ ಪ್ರಭಾವ ಹೊಂದಿವೆ. ಅದು ಹಿಂದುಮುಂದಾದರೆ ಹಣಕಾಸಿನ ಪೂರೈಕೆಯನ್ನು ವಿಸ್ತರಿಸುತ್ತದೆ. ಹಣಕಾಸಿನ ನೀತಿಯನ್ನು 1970ರವರೆಗೆ, ಸಾಮಾನ್ಯವಾಗಿ ಖಜಾನೆ ನೀತಿಯಿಂದ ಪ್ರತ್ಯೇಕವಾಗಿ ರಚಿಸಲಾಗುತ್ತಿತ್ತು. ಬ್ರೆಟ್ಟನ್ ವುಡ್ಸ್ ವ್ಯವಸ್ಥೆ 1970ರ ದಶಕದ ಪೂರ್ವದಿಂದ ಈಗಲೂ ಬಹುತೇಕ ರಾಷ್ಟ್ರಗಳು ಪ್ರತ್ಯೇಕವಾಗಿ ಎರಡು ನೀತಿಗಳನ್ನು ರಚಿಸುವುದನ್ನು ಖಾತರಿ ಮಾಡಿದೆ.



ಬಹುತೇಕ ಎಲ್ಲ ಆಧುನಿಕ ರಾಷ್ಟ್ರಗಳಲ್ಲಿ ವಿಶೇಷ ಸಂಸ್ಥೆಗಳು(ಬ್ಯಾಂಕ್ ಆಫ್ ಇಂಗ್ಲೆಂಡ್,ಯುರೋಪಿಯನ್ ಸೆಂಟ್ರಲ್ ಬ್ಯಾಂಕ್,ರಿಸರ್ವ್ ಬ್ಯಾಂಕ್ ಆಫ್ ಇಂಡಿಯ, ಫೆಡರಲ್ ರಿಸರ್ವ್ ಸಿಸ್ಟಮ್ ಇನ್ ದಿ ಯುನೈಟೆಡ್ ಸ್ಟೇಟ್ಸ್‌ ಬ್ಯಾಂಕ್ ಆಫ್ ಜಪಾನ್,ಬ್ಯಾಂಕ್ ಆಫ್ ಕೆನಡಾ ಅಥವಾ ರಿಸರ್ವ್ ಬ್ಯಾಂಕ್ ಆಫ್ ಆಸ್ಟ್ರೇಲಿಯ)ಅಸ್ತಿತ್ವದಲ್ಲಿದ್ದು,ವಿತ್ತೀಯ ನೀತಿಯನ್ನು ಜಾರಿಗೆತರುವ ಕೆಲಸ ವಹಿಸಿಕೊಂಡಿವೆ. ಅನೇಕ ವೇಳೆ ಕಾರ್ಯಾಂಗದಿಂದ ಪ್ರತ್ಯೇಕವಾಗಿ ಅವು ಕಾರ್ಯನಿರ್ವಹಿಸುತ್ತವೆ. ಸಾಮಾನ್ಯವಾಗಿ ಈ ಸಂಸ್ಥೆಗಳನ್ನು ಕೇಂದ್ರ ಬ್ಯಾಂಕ್‌ಗಳು ಎಂದು ಕರೆಯಲಾಗುತ್ತಿದೆ. ಹಣಕಾಸು ವ್ಯವಸ್ಥೆಯ ಸುಸೂತ್ರ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ಮುಂತಾದ ಇತರೆ ಜವಾಬ್ದಾರಿಗಳು ಅದಕ್ಕಿರುತ್ತವೆ.

ವಿತ್ತೀಯ ನೀತಿಯ ಪ್ರಾಥಮಿಕ ಸಾಧನವು ಮುಕ್ತ ಪೇಟೆಯ ಕಾರ್ಯಾಚರಣೆಗಳಾಗಿದೆ. ವಿವಿಧ ಸಾಲದ ಸಾಧನಗಳನ್ನು, ವಿದೇಶಿ ಕರೆನ್ಸಿಗಳನ್ನು ಅಥವಾ ಸರಕುಗಳನ್ನು ಮಾರುವ, ಖರೀದಿಸುವ ಮ‌ೂಲಕ ಚಲಾವಣೆಯಲ್ಲಿರುವ ಹಣದ ಪರಿಮಾಣವನ್ನು ನಿರ್ವಹಿಸುವುದು ಇದರಲ್ಲಿ ಒಳಗೊಂಡಿವೆ. ಇವೆಲ್ಲ ಖರೀದಿಗಳು ಅಥವಾ ಮಾರಾಟಗಳು ಹೆಚ್ಚುಕಡಿಮೆ ಮ‌ೂಲ ಕರೆನ್ಸಿ ಮಾರುಕಟ್ಟೆಯಲ್ಲಿ ಚಲಾವಣೆಗೆ ಪ್ರವೇಶಿಸುವ ಅಥವಾ ನಿರ್ಗಮಿಸುವುದರಲ್ಲಿ ಫಲ ನೀಡುತ್ತದೆ.

ಸಾಮಾನ್ಯವಾಗಿ, ಮುಕ್ತ ಪೇಟೆ ಕಾರ್ಯಾಚರಣೆಯ ಅಲ್ಪಾವಧಿ ಗುರಿಯು ಬಡ್ಡಿದರದ ನಿರ್ದಿಷ್ಟ ಅಲ್ಪಾವಧಿ ಗುರಿಯನ್ನು ಸಾಧಿಸುವುದಾಗಿದೆ. ಇತರ ನಿದರ್ಶನಗಳಲ್ಲಿ, ವಿತ್ತೀಯ ನೀತಿಯು ಕೆಲವು ವಿದೇಶಿ ಕರೆನ್ಸಿಗಳಿಗೆ ಅಥವಾ ಚಿನ್ನಕ್ಕೆ ಸಂಬಂಧಿಸಿದ ನಿರ್ದಿಷ್ಟ ವಿನಿಮಯ ದರದ ಮೇಲೆ ಗುರಿಯಿರಿಸುವುದು ಒಳಗೊಂಡಿದೆ. ಉದಾಹರಣೆಗೆ,USAಗೆ ಸಂಬಂಧಪಟ್ಟಂತೆ ಸದಸ್ಯ ರಾಷ್ಟ್ರಗಳು ದಿಢೀರನೇ ಪರಸ್ಪರ ಸಾಲ ನೀಡುವ ದರವಾದ ಫೆಡರಲ್ ನಿಧಿಗಳ ದರದ ಮೇಲೆ ಫೆಡರಲ್ ರಿಸರ್ವ್ ಗುರಿಯಿರಿಸುತ್ತದೆ; ಆದಾಗ್ಯೂ, ಚೀನದ ವಿತ್ತೀಯ ನೀತಿಯಲ್ಲಿ ರೆನ್‌ಮಿನ್ಬಿ(ಚೀನದ ಕರೆನ್ಸಿ) ಮತ್ತು ವಿದೇಶಿ ಕರೆನ್ಸಿಗಳ ಸಮ‌ೂಹದ ನಡುವಿನ ವಿನಿಯಮ ದರದ ಮೇಲೆ ಗುರಿಯಿರಿಸುವುದಾಗಿದೆ.

ವಿತ್ತೀಯ ನೀತಿಯನ್ನು ನಿರ್ವಹಿಸುವ ಇತರೆ ಪ್ರಾಥಮಿಕ ಮಾರ್ಗಗಳಲ್ಲಿ:(i)ರಿಯಾಯಿತಿ ಸಾಲ ವಿಭಾಗ(ಅಂತಿಮ ಋಣದಾತ),(ii)ಆಂಶಿಕ ಠೇವಣಿ ಸಾಲ(ಮೀಸಲು ಅಗತ್ಯದಲ್ಲಿ ಬದಲಾವಣೆಗಳು);(iii)ನೈತಿಕ ಮನವೊಲಿಕೆ ಮಾರ್ಗ(ನಿರ್ದಿಷ್ಟ ಫಲಿತಾಂಶಗಳನ್ನು ಸಾಧಿಸುವಂತೆ ಕೆಲವು ಮಾರುಕಟ್ಟೆ ಹೂಡಿಕೆದಾರರ ಮನವೊಲಿಕೆ);(iv) "ಮುಕ್ತ ಮಾರುಕಟ್ಟೆ ನೀತಿಯ ಕಾರ್ಯಾಚರಣೆಗಳು"(ಮಾರುಕಟ್ಟೆಯ ಮುಕ್ತ ವಿತ್ತೀಯ ನೀತಿ).



ಸಿದ್ಧಾಂತಸಂಪಾದಿಸಿ
ಸರ್ಕಾರ, ಕೇಂದ್ರ ಬ್ಯಾಂಕ್ ಅಥವಾ ರಾಷ್ಟ್ರದ ವಿತ್ತೀಯ ಪ್ರಾಧಿಕಾರವು (i) ವಿತ್ತೀಯ ಸರಬರಾಜು,(ii) ಹಣದ ಅಗತ್ಯತೆ, (iii) ಹಣದ ವೆಚ್ಚ ಅಥವಾ ಬಡ್ಡಿದರವನ್ನು ನಿಯಂತ್ರಿಸುವ ಪ್ರಕ್ರಿಯೆಗೆ ವಿತ್ತೀಯ ನೀತಿ ಎನ್ನಲಾಗುತ್ತದೆ. ಆರ್ಥಿಕತೆಯ ಸ್ಥಿರತೆ ಮತ್ತು ಬೆಳವಣಿಗೆ ಆಧಾರಿತವಾದ ಗುರಿಗಳ ಸಮ‍ೂಹವನ್ನು ಸಾಧಿಸುವುದು ಇದರ ಹಿಂದಿನ ಉದ್ದೇಶವಾಗಿದೆ.
ವಿತ್ತೀಯ ಸಿದ್ಧಾಂತವು ಗರಿಷ್ಠ ಹಣಕಾಸು ನೀತಿ ರೂಪಿಸುವ ಬಗ್ಗೆ ಒಳನೋಟವನ್ನು ಒದಗಿಸುತ್ತದೆ


 ಆರ್ಥಿಕವ್ಯವಸ್ಥೆಯಲ್ಲಿ ಬಡ್ಡಿದರಗಳ ನಡುವೆ ಸಂಬಂಧದ ಮೇಲೆ ವಿತ್ತೀಯ ನೀತಿ ಅವಲಂಬಿತವಾಗಿದೆ. ಹಣವನ್ನು ಸಾಲವಾಗಿ ಪಡೆಯುವ ದರ ಮತ್ತು ಹಣದ ಒಟ್ಟು ಪೂರೈಕೆ ಇದರಲ್ಲಿ ಸೇರಿದೆ. ಆರ್ಥಿಕ ಬೆಳವಣಿಗೆ, ಹಣದುಬ್ಬರ,ಇತರೆ ಕರೆನ್ಸಿಗಳ ಜತೆ ವಿನಿಮಯ ದರ ಮತ್ತು ನಿರುದ್ಯೋಗ ಮುಂತಾದ ಫಲಶ್ರುತಿಗಳ ಮೇಲೆ ಪ್ರಭಾವ ಬೀರುವುದಕ್ಕಾಗಿ ವಿತ್ತೀಯ ನೀತಿಯು ಇವುಗಳಲ್ಲಿ ಒಂದು ಅಥವಾ ಎರಡನ್ನೂ ನಿಯಂತ್ರಿಸಲು ವಿವಿಧ ಸಾಧನಗಳನ್ನು ಬಳಸುತ್ತದೆ. ಕರೆನ್ಸಿ ವಿತರಣೆ ಏಕಸ್ವಾಮ್ಯತೆ ಹೊಂದಿರುವ ಕಡೆ,ಕೇಂದ್ರ ಬ್ಯಾಂಕ್‌ಗೆ ಬದ್ಧವಾದ ಬ್ಯಾಂಕ್‌ಗಳ ಮ‌ೂಲಕ ಕರೆನ್ಸಿಗಳನ್ನು ವಿತರಿಸುವ ನಿಯಂತ್ರಿತ ವ್ಯವಸ್ಥೆ ಇರುವ ಕಡೆಯಲ್ಲಿ, ವಿತ್ತೀಯ ಪ್ರಾಧಿಕಾರಕ್ಕೆ ಹಣಕಾಸು ಪೂರೈಕೆ ಬದಲಿಸುವ ಸಾಮರ್ಥ್ಯವಿರುತ್ತದೆ. ಹೀಗೆ ಬಡ್ಡಿದರದ ಮೇಲೆ ಪ್ರಭಾವ ಬೀರುತ್ತದೆ(ನೀತಿ ಗುರಿಗಳನ್ನು ಸಾಧಿಸುವುದಕ್ಕಾಗಿ) 19ನೇ ಶತಮಾನದ ಅಂತ್ಯದಲ್ಲಿ ವಿತ್ತೀಯ ನೀತಿ ಆರಂಭವಾಗಿದ್ದು, ಆಗ ಚಿನ್ನದ ಪ್ರಮಿತಿವನ್ನು ಕಾಯ್ದುಕೊಳ್ಳಲಾಗುತ್ತಿತ್ತು. ವಿತ್ತೀಯ ನೀತಿಯೊಂದು ವಿತ್ತೀಯ ಪೂರೈಕೆಯ ಗಾತ್ರವನ್ನು ತಗ್ಗಿಸಿದರೆ ಅಥವಾ ಬಡ್ಡಿದರ ವರ್ಧಿಸಿದರೆ ಆ ನೀತಿಯನ್ನು ಪರಿಮಿತ ನೀತಿ ಎಂದು ಉಲ್ಲೇಖಿಸಲಾಗುತ್ತದೆ. ವಿಸ್ತರಣಾ ನೀತಿಯು ಹಣಕಾಸಿನ ಪೂರೈಕೆಯ ಗಾತ್ರವನ್ನು ಹೆಚ್ಚಿಸುತ್ತದೆ ಅಥವಾ ಬಡ್ಡಿದರವನ್ನು ಕುಗ್ಗಿಸುತ್ತದೆ. ಇದಿಷ್ಟೇ ಅಲ್ಲದೇ, ವಿತ್ತೀಯ ನೀತಿಗಳನ್ನು ಈ ಕೆಳಗಿನಂತೆ ಬಣ್ಣಿಸಲಾಗಿದೆ: ಕೇಂದ್ರ ವಿತ್ತೀಯ ಪ್ರಾಧಿಕಾರ ಗೊತ್ತುಮಾಡಿದ ಬಡ್ಡಿದರ ಆರ್ಥಿಕ ಬೆಳವಣಿಗೆ ಸೃಷ್ಟಿಯ ಉದ್ದೇಶ ಹೊಂದಿದ್ದರೆ ಹೊಂದಾಣಿಕೆಯ ನೀತಿ; ಬೆಳವಣಿಗೆ ಸೃಷ್ಟಿಸದೇ, ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶ ಇಲ್ಲದಿದ್ದರೆ ತಟಸ್ಥ ನೀತಿ; ಹಣದುಬ್ಬರ ತಗ್ಗಿಸುವ ಉದ್ದೇಶ ಹೊಂದಿದ್ದರೆ ಅದು ಬಿಗಿ ನೀತಿ ಎಂದು ಬಣ್ಣಿಸಲಾಗುತ್ತದೆ.

ವಿಶ್ವಾಸಾರ್ಹ ಪ್ರಕಟಣೆಗಳನ್ನು ನೀಡುವುದು ಮತ್ತು ಬಡ್ಡಿದರಗಳನ್ನು ಕೆಳಮಟ್ಟಕ್ಕೆ ಇಳಿಸುವುದು ನೀತಿರಚನೆಕಾರರಿಗೆ ಮುಖ್ಯವಾಗಿದೆ. ವಿತ್ತೀಯ ನೀತಿಗಳಿಗೆ ಸಂಬಂಧಿಸಿದಂತೆ ಅವು ಪ್ರಾಮುಖ್ಯವಲ್ಲ ಮತ್ತು ಅಪ್ರಸ್ತುತವೆನಿಸಿವೆ.
 ಹಣದುಬ್ಬರವನ್ನು ತಗ್ಗಿಸಲು ನೀತಿರಚನೆಕಾರರು ಬದ್ಧವಾಗಿದ್ದಾರೆಂದು ಖಾಸಗಿ ನಿಯೋಗಿಗಳು(ಗ್ರಾಹಕರು ಮತ್ತು ಸಂಸ್ಥೆಗಳು) ನಂಬಿದ್ದರೆ,ಭವಿಷ್ಯದ ದರಗಳು ಇಳಿಮುಖವಾಗುವುದೆಂದು ಅವರು ನಿರೀಕ್ಷೆ ಇಟ್ಟುಕೊಳ್ಳುತ್ತಾರೆ.(ಈ ನಿರೀಕ್ಷೆಗಳು ಹೇಗೆ ರೂಪುಗೊಳ್ಳುತ್ತದೆ ಎನ್ನುವುದು ಸಂಪೂರ್ಣ ಭಿನ್ನ ವಿಚಾರ; ಉದಾಹರಣೆಗೆ ತರ್ಕಬದ್ಧ ನಿರೀಕ್ಷೆಗಳನ್ನು ಹೊಂದಾಣಿಕೆ ನಿರೀಕ್ಷೆಗಳೊಂದಿಗೆ ತುಲನೆ ಮಾಡಿ)
ನೌಕರದಾರನೊಬ್ಬ ಭವಿಷ್ಯದಲ್ಲಿ ದರಗಳು ಹೆಚ್ಚುವುದೆಂದು ನಿರೀಕ್ಷಿಸಿದ್ದರೆ,ಈ ದರಗಳಿಗೆ ಹೊಂದಿಕೆಯಾಗಿ ಹೆಚ್ಚಿನ ವೇತನ ಪಡೆಯಲು ವೇತನ ಒಪ್ಪಂದ ರೂಪಿಸಬಹುದು. ಆದ್ದರಿಂದ ಕಡಿಮೆ ವೇತನಗಳ ನಿರೀಕ್ಷೆಯನ್ನು ನೌಕರರು ಮತ್ತು ಮಾಲೀಕರ ನಡುವೆ ವೇತನ ನಿಗದಿ ನಡವಳಿಕೆಯಲ್ಲಿ ಬಿಂಬಿಸಲಾಗುತ್ತದೆ.(ದರಗಳು ಕಡಿಮೆಯಾಗುವ ನಿರೀಕ್ಷೆಯಲ್ಲಿ ಕಡಿಮೆ ವೇತನಗಳು) ವೇತನಗಳು ವಾಸ್ತವವಾಗಿ ಕಡಿಮೆ ಇದ್ದಾಗ, ಬೇಡಿಕೆ ಎಳೆಯುವ ಹಣದುಬ್ಬರ ಇರುವುದಿಲ್ಲ. ಏಕೆಂದರೆ ನೌಕರರು ಕಡಿಮೆ ವೇತನ ಸ್ವೀಕರಿಸುತ್ತಿರುತ್ತಾರೆ. ವೆಚ್ಚ ಹೆಚ್ಚಳದ ಹಣದುಬ್ಬರ ಕೂಡ ಇರುವುದಿಲ್ಲ. ಏಕೆಂದರೆ ಮಾಲೀಕರು ವೇತನದ ರೂಪದಲ್ಲಿ ಕಡಿಮೆ ಪಾವತಿ ಮಾಡುತ್ತಾರೆ.


ಕಡಿಮೆ ಮಟ್ಟದ ಹಣದುಬ್ಬರ ಸಾಧನೆಗೆ ನೀತಿರಚನೆಕಾರರು ವಿಶ್ವಾಸಾರ್ಹ ಪ್ರಕಟಣೆಗಳನ್ನು ನೀಡಬೇಕು; ಈ ಪ್ರಕಟಣೆಗಳು ಭವಿಷ್ಯದ ವಾಸ್ತವ ನೀತಿಯನ್ನು ಬಿಂಬಿಸುತ್ತದೆಂದು ಖಾಸಗಿ ನಿಯೋಗಿಗಳು ನಂಬಬೇಕು. ಕೆಳ ಮಟ್ಟದ ಹಣದುಬ್ಬರದ ಗುರಿಗಳ ಬಗ್ಗೆ ನೀಡಿದ ಪ್ರಕಟಣೆಯನ್ನು ಖಾಸಗಿ ನಿಯೋಗಿಗಳು ನಂಬದಿದ್ದರೆ, ವೇತನ ನಿಗದಿಯಲ್ಲಿ ಉನ್ನತ ಮಟ್ಟದ ಹಣದುಬ್ಬರ ನಿರೀಕ್ಷಿಸಲಾಗುತ್ತದೆ ಮತ್ತು ವೇತನಗಳು ಏರಿಕೆಯಾಗಿ ಹಣದುಬ್ಬರ ಜಿಗಿಯುತ್ತದೆ. ಹೆಚ್ಚಿನ ವೇತನವು ಗ್ರಾಹಕರ ಬೇಡಿಕೆ, ಬೇಡಿಕೆ ಎಳೆಯುವ ಹಣದುಬ್ಬರ ಮತ್ತು ಸಂಸ್ಥೆಯ ವೆಚ್ಚಗಳನ್ನು, ವೆಚ್ಚ ಹೆಚ್ಚಿಸುವ ಹಣದುಬ್ಬರವನ್ನು ವೃದ್ಧಿಸುತ್ತದೆ.ಇದರಿಂದ ಹಣದುಬ್ಬರ ಏರಿಕೆಯಾಗುತ್ತದೆ. ಆದ್ದರಿಂದ ವಿತ್ತೀಯ ನೀತಿ ಕುರಿತು ನೀತಿರಚನೆಕಾರಕರ ಪ್ರಕಟಣೆಗಳು ವಿಶ್ವಾಸಾರ್ಹವಿಲ್ಲದಿದ್ದರೆ ನೀತಿಯು ಇಚ್ಛಿತ ಪರಿಣಾಮ ಬೀರುವುದಿಲ್ಲ.

ಖಾಸಗಿ ನಿಯೋಗಿಗಳು ಕಡಿಮೆ ಹಣದುಬ್ಬರ ನಿರೀಕ್ಷಿಸಿದ್ದಾರೆಂದು ನೀತಿರಚನೆಕಾರರು ನಂಬಿದ್ದರೆ, ವಿಸ್ತರಣೆ ವಿತ್ತೀಯ ನೀತಿಯ ಅಳವಡಿಕೆಗೆ ಅವರನ್ನು ಪ್ರಚೋದಿಸುತ್ತದೆ.(ವರ್ಧಿಸುವ ಆರ್ಥಿಕ ಫಲಶ್ರುತಿಯ ಗರಿಷ್ಠ ಸೌಲಭ್ಯಗಳು ಹಣದುಬ್ಬರದ ಗರಿಷ್ಠ ವೆಚ್ಚವನ್ನು ಮೀರಿಸುತ್ತದೆ); ಆದಾಗ್ಯೂ,ಖಾಸಗಿ ನಿಯೋಗಿಗಳಿಗೆ ತರ್ಕಬದ್ಧ ನಿರೀಕ್ಷೆಗಳಿಗಳಿವೆಯೆಂದು ಭಾವಿಸಿದಲ್ಲಿ, ನೀತಿ ರಚನೆಕಾರರು ಇಂತಹ ಪ್ರಚೋದನೆಗೆ ಒಳಗಾಗುವುದನ್ನು ಅವರು ತಿಳಿದಿರುತ್ತಾರೆ.
ತಾವು ಕಡಿಮೆ ಹಣದುಬ್ಬರ ನಿರೀಕ್ಷಿಸಿದರೆ, ವಿಸ್ತರಣಾ ನೀತಿ ಅಳವಡಿಸುವ ‌ಮೂಲಕ ಹಣದುಬ್ಬರ ಏರಿಕೆಯಾಗುತ್ತದೆಂದು ಖಾಸಗಿ ನಿಯೋಗಿಗಳು ಅರಿತಿರುತ್ತಾರೆ. ತರುವಾಯ,ಖಾಸಗಿ ನಿಯೋಗಿಗಳು ಹೆಚ್ಚಿನ ಹಣದುಬ್ಬರ ನಿರೀಕ್ಷಿಸುತ್ತಾರೆ.(ನೀತಿರಚನೆಕಾರರು ಕಡಿಮೆ ಹಣದುಬ್ಬರ ವಿಶ್ವಾಸಾರ್ಹ ವೆಂದು ಪ್ರಕಟಿಸುವ ತನಕ) ಈ ಮುನ್ನೆಣಿಕೆಯನ್ನು ಹೊಂದಾಣಿಕೆ ನಿರೀಕ್ಷೆಯ ಮ‌ೂಲಕ ಪೂರೈಸಲಾಗುತ್ತದೆ(ವೇತನ ನಿಗದಿ ನಡವಳಿಕೆ);ಆದ್ದರಿಂದ ಹಣದುಬ್ಬರ ಏರಿಕೆಯಾಗುತ್ತದೆ(ಹೆಚ್ಚುವರಿ ಉತ್ಪಾದನೆಯ ಸೌಲಭ್ಯವಿಲ್ಲದೇ). ಆದ್ದರಿಂದ ವಿಶ್ವಾಸಾರ್ಹ ಪ್ರಕಟಣೆಗಳನ್ನು ನೀಡದಿದ್ದ ಪಕ್ಷದಲ್ಲಿ ವಿಸ್ತರಣಾ ವಿತ್ತೀಯ ನೀತಿ ವಿಫಲಗೊಳ್ಳುತ್ತದೆ.



ವಿವಿಧ ವಿಧಾನಗಳಲ್ಲಿ ಪ್ರಕಟಣೆಗಳ ವಿಶ್ವಾಸಾರ್ಹತೆ ಸಾಧಿಸಬಹುದು. ಕಡಿಮೆ ಹಣದುಬ್ಬರ ಗುರಿಗಳೊಂದಿಗೆ ಸ್ವತಂತ್ರ ಕೇಂದ್ರ ಬ್ಯಾಂಕ್ ಸ್ಥಾಪನೆಯು ಒಂದು ವಿಧಾನವಾಗಿದೆ.(ಆದರೆ ಉತ್ಪಾದನೆ ಗುರಿಗಳಿಲ್ಲ). ಆದ್ದರಿಂದ ಸ್ವತಂತ್ರ ಸಂಸ್ಥೆಯು ನಿಗದಿಮಾಡಿದ್ದರಿಂದ ಹಣದುಬ್ಬರ ಕಡಿಮೆಯೆಂಬುದು ಖಾಸಗಿ ನಿಯೋಗಿಗಳಿಗೆ ಮನವರಿಕೆಯಾಗುತ್ತದೆ. ಕೇಂದ್ರ ಬ್ಯಾಂಕುಗಳಿಗೆ ಅವುಗಳ ಖ್ಯಾತಿ ವೃದ್ಧಿಗೆ ಮತ್ತು ನೀತಿಗುರಿಯತ್ತ ದೃಢ ಬದ್ಧತೆಯ ಸಂಕೇತವಾಗಿ ತನ್ನ ಗುರಿಗಳನ್ನು ಪೂರೈಸಲು ಪ್ರೋತ್ಸಾಹಕಗಳನ್ನು ನೀಡಬಹುದು.(ಉದಾಹರಣೆಗೆ, ಹೆಚ್ಚಿನ ಬಜೆಟ್‌ಗಳಿಗೆ, ಬ್ಯಾಂಕಿನ ಮುಖ್ಯಸ್ಥರಿಗೆ ವೇತನ ಬೋನಸ್). ವಿತ್ತೀಯ ನೀತಿ ಅನುಷ್ಠಾನದಲ್ಲಿ ಖ್ಯಾತಿಯು ಮುಖ್ಯ ಅಂಶವಾಗಿದೆ. ಆದರೆ ಖ್ಯಾತಿಯ ಕಲ್ಪನೆಯನ್ನು ಬದ್ಧತೆಯೆಂದು ತಪ್ಪಾಗಿ ಎಣಿಸಿ ಗೊಂದಲಕ್ಕೆ ಸಿಲುಕಬಾರದು. ಕೇಂದ್ರ ಬ್ಯಾಂಕ್ ವಿತ್ತೀಯ ನೀತಿಯ ಉತ್ತಮ ನಿರ್ವಹಣೆಯಿಂದ ಅನುಕೂಲಕರ ಖ್ಯಾತಿಯನ್ನು ಗಳಿಸಿರಬಹುದು. ಆದರೆ ಅದೇ ಕೇಂದ್ರಬ್ಯಾಂಕ್ ಬದ್ಧತೆಯ ಯಾವುದೇ ನಿರ್ದಿಷ್ಟ ಸ್ವರೂಪವನ್ನು ಆಯ್ಕೆ ಮಾಡದಿರಬಹುದು.(ಹಣದುಬ್ಬರಕ್ಕೆ ನಿರ್ದಿಷ್ಟ ವ್ಯಾಪ್ತಿಯ ಗುರಿ ನಿಗದಿ ಮಾಡುವುದು). ನೀತಿ ಗುರಿಯ ಬಗ್ಗೆ ಪ್ರಕಟಣೆಯನ್ನು ಮಾರುಕಟ್ಟೆಗಳು ಎಷ್ಟರಮಟ್ಟಿಗೆ ನಂಬುತ್ತವೆಂದು ನಿರ್ಧರಿಸುವಲ್ಲಿ ಖ್ಯಾತಿಯು ನಿರ್ಣಾಯಕ ಪಾತ್ರ ವಹಿಸುತ್ತದೆ. ಆದರೆ ಎರಡೂ ಪರಿಕಲ್ಪನೆಗಳು ಹೋಲಿಕೆಯಿಂದ ಕೂಡಿರಬಾರದು. ತರ್ಕಬದ್ಧ ನಿರೀಕ್ಷೆಗಳಲ್ಲಿ, ಹಿಂದಿನ ನೀತಿ ಕ್ರಮಗಳ ಆಧಾರದ ಮೇಲೆ ನೀತಿರಚನೆಕಾರನಿಗೆ ತನ್ನ ಖ್ಯಾತಿಯನ್ನು ಸಾಬೀತುಮಾಡುವ ಅಗತ್ಯವಿಲ್ಲವೆಂಬುದನ್ನು ಗಮನಿಸಿ; ಉದಾಹರಣೆಗೆ,ಕೇಂದ್ರ ಬ್ಯಾಂಕ್ ಮುಖ್ಯಸ್ಥರ ಖ್ಯಾತಿಯು ಅವರ ಅಥವಾ ಅವಳ ಸಿದ್ಧಾಂತ, ವೃತ್ತಿಪರ ಹಿನ್ನೆಲೆ, ಸಾರ್ವಜನಿಕ ಹೇಳಿಕೆಗಳು,ಇತರೆಗಳಿಂದ ಸಂಪೂರ್ಣವಾಗಿ ಹುಟ್ಟಿರಬಹುದು. ವಾಸ್ತವವಾಗಿ ಹೀಗೆಂದು ವಾದಿಸಲಾಗಿದೆ(ಕೆನ್ನೆತ್ ರೋಗೋಫ್,1985ಗೆ ಉಲ್ಲೇಖವನ್ನು ಸೇರಿಸಿ) "ದಿ ಆಪ್ಟಿಮಲ್ ಕಮಿಟ್‌ಮೆಂಟ್ ಟು ಎನ್ ಇಂಟರ್‌ಮೀಡಿಯೇಟ್ ಮಾನಿಟರಿ ಟಾರ್ಗೆಟ್" 'ಇನ್ ಕ್ವಾರ್ಟರ್ಲಿ ಜರ್ನಲ್ ಆಫ್ ಎಕನಾಮಿಕ್ಸ್'#100, pp. 1169-1189)
ವಿತ್ತೀಯ ನೀತಿ ಅನುಷ್ಠಾನದಲ್ಲಿ ಕಾಲ ಅಸಮಂಜಸತೆಗೆ ಸಂಬಂಧಿಸಿದ ಲಕ್ಷಣಗಳನ್ನು ತಪ್ಪಿಸಲು(ವಿಶೇಷವಾಗಿ ವಿಪರೀತ ಹಣದುಬ್ಬರ)ಕೇಂದ್ರ ಬ್ಯಾಂಕ್ ಮುಖ್ಯಸ್ಥರು ಉಳಿದ ಸರಾಸರಿ ಆರ್ಥಿಕತೆಗಿಂತ ಹೆಚ್ಚಾಗಿ ಹಣದುಬ್ಬರದ ಬಗ್ಗೆ ಹೆಚ್ಚಿನ ಅರುಚಿ ಹೊಂದಿರಬೇಕು. ಆದ್ದರಿಂದ ನಿರ್ದಿಷ್ಟ ಕೇಂದ್ರ ಬ್ಯಾಂಕ್ ಖ್ಯಾತಿಯು ಅದರ  ಪೂರ್ವ ಸಾಧನೆಗೆ ಕಟ್ಟುಬೀಳುವ ಅಗತ್ಯವಿಲ್ಲ. ಹಣದುಬ್ಬರ ನಿರೀಕ್ಷೆಗಳ ರಚನೆಗೆ ಮಾರುಕಟ್ಟೆಗಳು ಬಳಸಬಹುದಾದ ನಿರ್ದಿಷ್ಟ ಸಾಂಸ್ಥಿಕ ವ್ಯವಸ್ಥೆಗಳಿಗೆ ಅದು ಕಟ್ಟುಬೀಳಬೇಕು.

ವಿತ್ತೀಯ ನೀತಿಗೆ ಸಂಬಂಧಿಸಿದ ವಿಶ್ವಾಸಾರ್ಹತೆ ಕುರಿತು ಆಗಾಗ್ಗೆ ಚರ್ಚೆಯಾಗುತ್ತಿದ್ದರೂ ಕೂಡ, ವಿಶ್ವಾಸಾರ್ಹತೆಯ ನಿಖರ ಅರ್ಥದ ಬಗ್ಗೆ ಅಪರೂಪವಾಗಿ ವ್ಯಾಖ್ಯಾನಿಸಲಾಗಿದೆ. ಇಂತಹ ಸ್ಪಷ್ಟೀಕರಣದ ಕೊರತೆಯಿಂದ ಅತ್ಯಂತ ಅನುಕೂಲಕರ ಎಂಬ ನಂಬಿಕೆಯಿಂದ ಕೂಡ ನೀತಿಯನ್ನು ದೂರಮಾಡುತ್ತದೆ. ಉದಾಹರಣೆಗೆ, ಸಾರ್ವಜನಿಕ ಹಿತಾಸಕ್ತಿ ಪಾಲನೆಯ ಸಾಮರ್ಥ್ಯವು ಕೇಂದ್ರ ಬ್ಯಾಂಕುಗಳ ಜತೆ ಆಗಾಗ್ಗೆ ಸಂಬಂಧಿಸುವ ವಿಶ್ವಾಸಾರ್ಹತೆಯ ಕುರಿತ ಒಂದು ವ್ಯಾಖ್ಯಾನ. ಕೇಂದ್ರ ಬ್ಯಾಂಕ್ ತನ್ನ ವಾಗ್ದಾನಗಳನ್ನು ಎಷ್ಟು ನಂಬಿಕಾರ್ಹತೆಯಿಂದ ಉಳಿಸಿಕೊಳ್ಳುತ್ತದೆನ್ನುವುದು ಕೂಡ ಸಾಮಾನ್ಯ ವ್ಯಾಖ್ಯೆಯಾಗಿದೆ. ಕೇಂದ್ರ ಬ್ಯಾಂಕ್ ಸಾರ್ವಜನಿಕರಿಗೆ ಸುಳ್ಳು ನುಡಿಯಬಾರದೆಂದು ಪ್ರತಿಯೊಬ್ಬರೂ ಬಹುತೇಕ ಒಪ್ಪುತ್ತಾರೆ. ಆದರೆ ಸಾರ್ವಜನಿಕ ಹಿತಾಸಕ್ತಿ ರಕ್ಷಣೆಗೆ ಅತ್ಯುತ್ತಮವಾಗಿ ಕೇಂದ್ರ ಬ್ಯಾಂಕ್ ಹೇಗೆ ಸೇವೆ ಸಲ್ಲಿಸಬಹುದೆಂಬ ಬಗ್ಗೆ ವ್ಯಾಪಕ ಭಿನ್ನಾಭಿಪ್ರಾಯವಿದೆ. ಆದ್ದರಿಂದ ವ್ಯಾಖ್ಯೆಯ ಕೊರತೆಯಿಂದ ಜನರು ವಿಶ್ವಾಸಾರ್ಹತೆಯ ಒಂದು ನಿರ್ದಿಷ್ಟ ನೀತಿಯನ್ನು ಬೆಂಬಲಿಸುತ್ತಿರುವುದಾಗಿ ನಂಬಿರುತ್ತಾರೆ. ವಾಸ್ತವವಾಗಿ ಅವರು ಇನ್ನೊಂದು ನೀತಿಯನ್ನು ಬೆಂಬಲಿಸಿರುತ್ತಾರೆ.[೩]

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ