ಭಾನುವಾರ, ಏಪ್ರಿಲ್ 30, 2017

ಪಾಕ್ ಹಿಂದೂ ಯುವಕನಿಗೆ ಅಮೆರಿಕ ಪ್ರತಿಷ್ಠಿತ ಪ್ರಶಸ್ತಿ

ಪಾಕ್‌ ಹಿಂದೂ ಯುವಕನಿಗೆ ಅಮೆರಿಕ ಪ್ರತಿಷ್ಠಿತ ಪ್ರಶಸ್ತಿ

ವಾಷಿಂಗ್ಟನ್‌: ಪಾಕಿಸ್ಥಾನದ ಹಿಂದೂ ಯುವಕನೊಬ್ಬ ಅಮೆರಿಕ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿಯೊಂದಕ್ಕೆ ಭಾಜನರಾಗಿದ್ದಾರೆ.

ಸುಸ್ಥಿರ ಶಾಂತಿ ಸ್ಥಾಪಿಸುವಲ್ಲಿ ಗಮನಾರ್ಹ ಪಾತ್ರ ವಹಿಸಿದ ಯುವಕರಿಗೆ ಅಮೆರಿಕ ವಿದೇಶಾಂಗ ಇಲಾಖೆ  ಕೊಡಮಾಡುವ ಎಮರ್ಜಿಂಗ್‌ ಯಂಗ್‌ ಲೀಡರ್‌ ಪ್ರಶಸ್ತಿಗೆ ಪಾಕ್‌ ಯುವಕ ರಾಜ್‌ ಕುಮಾರ್‌ ಭಾಜನರಾಗಿದ್ದಾರೆ. ಇವರಲ್ಲದೇ ಮಾಲ್ಟ, ಶ್ರೀಲಂಕ, ಆಫ್ಘಾನಿಸ್ತಾನ, ಅಲೆjàರಿಯಾ ಮುಂತಾದ 10 ದೇಶಗಳ ಯುವಕರಿಗೆ ಈ ಪ್ರಶಸ್ತಿ ದೊರಕಿದೆ. ಪ್ರಶಸ್ತಿ ಪಡೆದವರು 15 ದಿನಗಳ ಮಟ್ಟಿಗೆ ಅಮೆರಿಕಕ್ಕೆ ತೆರಳಿ ನಾಯ ಕತ್ವ ಸೇರಿ ಇನ್ನಿತರ ವಿಷಯಗಳ ಬಗ್ಗೆ ತರಬೇತಿ ಪಡೆಯಲಿ ದ್ದಾರೆ.  ಪಾಕಿಸ್ತಾನಿ ಹಿಂದು ಆಗಿರುವ ಕುಮಾರ್‌ ಶಾಂತಿ, ಸಾಮರಸ್ಯ ಸಾರುವಂಥ ಲೇಖನಗಳನ್ನು ಪ್ರಕಟಿಸಿದ್ದಾರೆ.

ಮಾಜಿ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಗರ್ಭಿಣಿ

ಮಾಜಿ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಗರ್ಭಿಣಿ

ನ್ಯೂಯಾರ್ಕ್:
ವಿಶ್ವದ ಮಾಜಿ ನಂ.1 ಆಟಗಾರ್ತಿ ಹಾಗೂ 23 ಗ್ರ್ಯಾನ್ ಸ್ಪ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳ ಒಡತಿ ಅಮೆರಿಕದ ಸೆರೆನಾ ವಿಲಿಯಮ್ಸ್ ಗರ್ಭಿಣಿಯಾಗಿದ್ದಾರೆ.

ಹೌದು ಈ ಬಗ್ಗೆ ಸೆರೆನಾ ವಿಲಿಯಮ್ಸ್ ಖುದ್ದು ಹೇಳಿಕೊಂಡಿದ್ದು ತಾವು 20 ವಾರಗಳ ಗರ್ಭಿಣಿ ಎಂಬ ವಿಷಯವನ್ನು ಸಾಮಾಜಿಕ ತಾಣವಾದ ಸ್ನ್ಯಾಪ್ ಚಾಟ್ ಮೂಲಕ ಬುಧವಾರ ಬಹಿರಂಗ ಪಡಿಸಿದ್ದಾರೆ.

ವರ್ಷದ ಮೊದಲ ಗ್ರ್ಯಾನ್ ಸ್ಪ್ಯಾಮ್ ಟೂರ್ನಿಯಾದ ಆಸ್ಪ್ರೇಲಿಯಾ ಓಪನ್ನಲ್ಲಿ ಹಿರಿಯ ಸಹೋದರಿ ವೀನಸ್ ವಿಲಿಯಮ್ಸ್ ಅವರನ್ನು ಮಣಿಸಿ 23ನೇ ಸಿಂಗಲ್ಸ್ ಗ್ರ್ಯಾನ್ ಸ್ಪ್ಯಾಮ್ ಪ್ರಶಸ್ತಿ ಗೆದ್ದ ಸೆರೆನಾ ವಿಲಿಯಮ್ಸ್, ಅಂದಿನಿಂದ ಆಟದಿಂದ ದೂರ ಉಳಿದಿದ್ದಾರೆ. ಕಳೆದ ವರ್ಷದ ಡಿಸೆಂಬರ್ನಲ್ಲಿ ರೆಡಿಟ್ ಸಂಸ್ಥೆಯ ಸಹ ಸಂಸ್ಥಾಪಕ ಅಲೆಕ್ಸಿಸ್ ಒಹಾನಿಯನ್ ಜತೆಗೆ ಒಡನಾಟ ಹೊಂದಿರುವುದಾಗಿ ಸೆರೆನಾ ಹೇಳಿಕೊಂಡಿದ್ದು, ಈಗ ಗರ್ಭಿಣಿಯಾಗಿದ್ದಾರೆ.

ಪನಾಮ ಹಗರಣ

ಪನಾಮಾ ಹಗರಣ : ಸದ್ಯಕ್ಕೆ ನವಾಜ್ ಷರೀಫ್ ಬಜಾವ್

ಇಸ್ಲಾಮಾಬಾದ್ :
ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಅಕ್ರಮ ವಿದೇಶಿ ಹೂಡಿಕೆ ಪ್ರಕರಣದಲ್ಲಿ ಪ್ರಧಾನಿ ಪಟ್ಟ ಕಳೆದುಕೊಳ್ಳುವ ಆಪತ್ತಿಗೆ ಸಿಲುಕಿದ್ದ ಅವರು ಸದ್ಯಕ್ಕೆ ಬಚಾವಾಗಿದ್ದಾರೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ಅಲ್ಲಿನ ಸುಪ್ರೀಂಕೋರ್ಟ್ ಸಾಕ್ಷ್ಯಾಧಾರ ಕೊರತೆಯ ಕಾರಣ ನೀಡಿ ಹೆಚ್ಚಿನ ಮಾಹಿತಿಗೆ ಜಂಟಿ ತನಿಖೆ ನಡೆಸುವಂತೆ ಆದೇಶ ನೀಡಿದೆ.

ಪನಾಮಾ ಪೇಪರ್ ಸೋರಿಕೆಯಿಂದ ಷರೀಫ್ ಅವರ ಕುಟುಂಬದ ವಿದೇಶಿ ಹೂಡಿಕೆಯ ಬಾನಗಡಿಯು ಅವರ ಪ್ರಧಾನಿ ಹುದ್ದೆಗೆ ಕುತ್ತು ತರಲಿದೆ ಎಂದೇ ಭಾವಿಸಲಾಗಿದೆ. ಆದರೆ ಸುಪ್ರೀಂಕೋರ್ಟ್ ನ ಗುರುವಾರದ ತೀರ್ಪು ಷರೀಫ್ ಅವರಿಗೆ ಇನ್ನಷ್ಟು ಕಾಲ ನಿರುಮ್ಮಳವಾಗಿರಲು ಅವಕಾಶ ನೀಡಿತ್ತು. ತತ್ಕಾಲಕ್ಕೆ ಅವರ ಪ್ರಧಾನಿ ಹುದ್ದೆ ಸುರಕ್ಷಿತವಾಗಿದ್ದರೂ 60 ದಿನಗಳೊಳಗೆ ಜಂಟಿ ತನಿಖೆಗೆ ಒಳಪಡಬೇಕಾದ ಒತ್ತಡ ಇದೆ.

ತನಿಖೆಗೆ 60 ದಿನಗಳ ಕಾಲಾವಕಾಶ ನೀಡಿರುವ ಸುಪ್ರೀಂ ಕೋರ್ಟ್, ಪ್ರತಿ ಎರಡು ವಾರಗಳಿಗೆ ಒಮ್ಮೆ ತನಿಖಾ ಪ್ರಗತಿಯ ವರದಿ ಸಲ್ಲಿಸುವಂತೆ ಆದೇಶಿಸಿದೆ.

ಲಂಡನ್ ನಗರದಲ್ಲಿ ನಾಲ್ಕು ಐಷಾರಾಮಿ ಅಪಾರ್ಟ್ ಮೆಂಟ್ ಗಳನ್ನು ಷರೀಫ್ ತಮ್ಮ ಮಕ್ಕಳ ಹೆಸರಿನಲ್ಲಿ ಖರೀದಿಸಿದ್ದಾರೆ.,ಜತೆಗೆ ಖತಾರ್ ನ ಉದ್ಯಮ ವಲಯದಲ್ಲಿಯೂ ಅಪಾರ ಮೊತ್ತದ ಹಣ ಹೂಡಿಕೆ ಮಾಡಿದ್ದಾರೆ ಎನ್ನುವುದು ಪನಾಮಾ ಪೇಪರ್ ಗಳ ಮೂಲಕ ತಿಳಿದುಬಂದಿತ್ತು.

  



ದಿರಿಯ ನಿರಾಶ್ರಿತೆ ವಿಶ್ವಸಂಸ್ಥೆ ರಾಯಭಾರಿ

ಸಿರಿಯ ನಿರಾಶ್ರಿತೆ ವಿಶ್ವಸಂಸ್ಥೆ ರಾಯಭಾರಿ

ಜಿನೇವ, ಎ. 28: ಜರ್ಮನಿಯಲ್ಲಿ ಆಶ್ರಯ ಪಡೆದಿರುವ ಸಿರಿಯ ನಿರಾಶ್ರಿತೆ ಯೂಸ್ರಾ ಮರ್ದಿನಿ ಅವರನ್ನು ವಿಶ್ವಸಂಸ್ಥೆಯ ಸದ್ಭಾವನಾ ರಾಯಭಾರಿಯಾಗಿ ನೇಮಿಸಲಾಗಿದೆ.

ಸಿರಿಯದ ಯುದ್ಧದಿಂದ ತಪ್ಪಿಸಿಕೊಂಡು ಸಣ್ಣ ದೋಣಿಯಲ್ಲಿ ಮೆಡಿಟರೇನಿಯನ್ ಸಮುದ್ರ ದಾಟುತ್ತಿದ್ದಾಗ ಅವರ ದೋಣಿ ಮುಳುಗಿತ್ತು. ಆಗ ಅವರು ಮತ್ತು ತಂಗಿ ಗಂಟೆಗಳ ಕಾಲ ಈಜಿ ಗ್ರೀಸ್‌ನ ಲೆಸ್ಬೋಸ್ ತಲುಪಿದ್ದರು. ಇತರ 20 ಮಂದಿಯನ್ನೂ ಅವರು ರಕ್ಷಿಸಿದ್ದರು.

ಕಳೆದ ವರ್ಷದ ಆಗಸ್ಟ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಅವರು ನಿರಾಶ್ರಿತ ಒಲಿಂಪಿಕ್ಸ್ ತಂಡದ ಸದಸ್ಯೆಯಾಗಿ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಈಗ ಅವರು ಯುದ್ಧದಿಂದ ನಿರಾಶ್ರಿತರಾದ ಜನರ ಧ್ವನಿಯಾಗಿದ್ದಾರೆ.

‘‘ನನಗೆ ಸಿಕ್ಕಿದ ಅವಕಾಶ ಮತ್ತು ವೇದಿಕೆಗಾಗಿ ನಾನು ಕೃತಜ್ಞಳಾಗಿದ್ದೇನೆ.
ಈ ಎಳೆಯ ಪ್ರಾಯದಲ್ಲೇ ನಾವು ಅನುಭವಿಸಿದ ಭಯಾನಕ ಅನುಭವಗಳು, ನಾವು ಪ್ರೀತಿಸಿದ ಮತ್ತು ಕಳೆದುಕೊಂಡ ಮನೆಗಳು, ನಾವು ಕಳೆದುಕೊಂಡ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಬಗ್ಗೆ ಜಗತ್ತಿಗೆ ಹೇಳಬಹುದಾಗಿದೆ. ನಾವು 100 ವರ್ಷ ಬದುಕಿದ್ದೇವೇನೋ ಎಂದು ಅನಿಸುತ್ತಿದೆ’’ ಎಂದು 19 ವರ್ಷದ ಮರ್ದಿನಿ ಹೇಳುತ್ತಾರೆ. ಅವರು ಬರ್ಲಿನ್‌ನಲ್ಲಿ ಅಧ್ಯಯನ ಮಾಡುತ್ತಿದ್ದಾರೆ ಹಾಗೂ ಈಜು ತರಬೇತಿಯನ್ನೂ ಪಡೆಯುತ್ತಿದ್ದಾರೆ.

ಲಾಡೆನ್ ಆಯ್ತು ಈಗ ಅಲ್ ಖೈದಾ ಮುಖಂಡ ಜವಾಹಿರಿ

ಲಾಡೆನ್ ಆಯ್ತು, ಈಗ ಅಲ್ ಖೈದಾ ಮುಖಂಡ ಜವಾಹಿರಿ ಐಎಸ್‌ಐ ರಕ್ಷಣೆಯಲ್ಲಿ!

ವಾಷಿಂಗ್ಟನ್‌ : ಅಲ್‌ ಕಾಯಿದಾ ಉಗ್ರ ಸಂಘಟನೆಯ ಮುಖ್ಯಸ್ಥ, ಹತ ಉಸಾಮಾ ಬಿನ್‌ ಲಾದನ್‌ನ ಗುರು ಹಾಗೂ ಉತ್ತರಾಧಿಯಾಗಿರುವ ಈಜಿಪ್ಟ್ ಸಂಜಾತ ಇಮಾನ್‌ ಅಲ್‌ ಜವಾಹಿರಿ ಪಾಕಿಸ್ಥಾನದ ಕುಖ್ಯಾತ ಬೇಹುಗಾರಿಕೆ ಸಂಸ್ಥೆ ಐಎಸ್‌ಐ ರಕ್ಷಣೆಯಲ್ಲಿ ಬಹುತೇಕ ಕರಾಚಿಯಲ್ಲಿ ಅಡಗಿಕೊಂಡಿದ್ದಾನೆ ಎಂದು ವರದಿಯೊಂದು ಹೇಳಿದೆ.

ಅತ್ಯಂತ ಮಹತ್ವದ ತನಿಖಾ ವರದಿಯಲ್ಲಿ ನ್ಯೂಸ್‌ ವೀಕ್‌ ಈ ರೀತಿ ಹೇಳಿದೆ : 2001ರಲ್ಲಿ ಅಮೆರಿಕನ್‌ ಪಡೆಗಳು ಅಫ್ಘಾನಿಸ್ಥಾನದಿಂದ ಅಲ್‌ ಕಾಯಿದಾವನ್ನು  ತೆರವುಗೊಳಿಸಿದ ಬಳಿಕ, ಓರ್ವ ತರಬೇತಿ ಪಡೆದ ಸರ್ಜನ್‌ ಆಗಿರುವ ಜವಾಹಿರಿಯು, ಪಾಕಿಸ್ಥಾನದ ಬೇಹು ಸಂಸ್ಥೆ ಐಎಸ್‌ಐ ಆಸರೆಯಲ್ಲಿ ಕರಾಚಿಯಲ್ಲಿ ಅಡಗಿಕೊಂಡಿದ್ದಾನೆ'.

ಅನೇಕ ಅಧಿಕೃತ ಮೂಲಗಳನ್ನು ಆಧರಿಸಿ ತನಗೆ ಈ ಮಾಹಿತಿ ಸಿಕ್ಕಿರುವುದಾಗಿ ನ್ಯೂಸ್‌ ವೀಕ್‌ ಹೇಳಿದೆ.

2.60 ಕೋಟಿ ಜನಸಂಖ್ಯೆಇರುವ ಅರಬ್ಬೀ ಸಮುದ್ರದ ಬಂದರು ನಗರವಾಗಿರುವ ಕರಾಚಿಯಲ್ಲಿ ಜವಾಹಿರಿ ಬಹುತೇಕ ಅಡಗಿಕೊಂಡಿದ್ದಾನೆ ಎಂದು ನ್ಯೂಸ್‌ ವೀಕ್‌ ವರದಿ ತಿಳಿಸಿದೆ.

ಜಗತ್ತಿನ ಮೋಸ್ಟ್‌ ವಾಂಟೆಡ್‌ ಉಗ್ರರಲ್ಲಿ ಒಬ್ಬನಾಗಿರುವ ಜವಾಹಿರಿಯು ಅಡಗಿಕೊಂಡಿರುವ ತಾಣವನ್ನು ಪತ್ತೆ ಹಚ್ಚಿ ಬಹಿರಂಗಪಡಿಸಿರುವ, ಕಳೆದ ಹಲವಾರು ವರ್ಷಗಳಲ್ಲಿನ ಮೊತ್ತ ಮೊದಲ ವರದಿ ಇದಾಗಿದೆ ಎನ್ನಲಾಗಿದೆ.

14 ತುಂಬುವವರೆಗೆ ಮೊಬೈಲ್ ನಿಷೇಧ: ಇದು ಗೇಟ್ಸ್ ನಿಯಮ

14 ತುಂಬುವವರೆಗೆ ಮೊಬೈಲ್‌ ನಿಷೇಧ; ಇದು ಗೇಟ್ಸ್‌ ನಿಯಮ

ವಾಷಿಂಗ್ಟನ್‌: "ಊಹೂಂ, 14 ವರ್ಷ ತುಂಬದೇ ಮಕ್ಕಳ ಕೈಗೆ ಮೊಬೈಲ್‌ ಫೋನ್‌ ಕೊಡುವುದೇ ಇಲ್ಲ. ಹೋಂ ವರ್ಕ್‌ ಮಾಡೋ ಸಮಯದಲ್ಲಿ ಅದನ್ನು ಬಿಟ್ಟು ಬೇರೇನೂ ಮಾಡುವ ಹಾಗಿಲ್ಲ. ಶ್ರೀಮಂತಿಕೆಯ ಅಹಂ ಹತ್ತಿರ ಸುಳಿಯಬಾರದು. ಎಲ್ಲರ ಜೊತೆಯೂ ಸಾಮಾನ್ಯರಂತೆ ಬೆರೆಯಬೇಕು...'

ವೈಭೋಗದ ಜೀವನದ ಮೂಲಕ ಶ್ರೀಮಂತಿಕೆಯ ಪ್ರದರ್ಶನ ಮಾಡುವ ಕುಬೇರರೇ ತುಂಬಿರುವಂಥ ಈ ಜಗತ್ತಿನಲ್ಲಿ "ವಿಶ್ವದ ಅತಿ ಶ್ರೀಮಂತ ವ್ಯಕ್ತಿ' ಎಂದು ಹೆಸರು ಗಳಿಸಿರುವ ಮೈಕ್ರೋಸಾಫ್ಟ್ ಸ್ಥಾಪಕ ಬಿಲ್‌ ಗೇಟ್ಸ್‌ ಅವರು ಪಾಲಿಸಿಕೊಂಡು ಬಂದಿರುವ ನೀತಿಯಿದು.

ಈ ಡಿಜಿಟಲ್‌ ಯುಗದ ತಂತ್ರಜ್ಞಾನ ಕ್ರಾಂತಿಯಲ್ಲಿ ಮಹತ್ವದ ಪಾತ್ರ ವಹಿಸಿರುವ ಗೇಟ್ಸ್‌ ಅವರು ತಮ್ಮ ಮಕ್ಕಳಿಗೆ 14 ವರ್ಷ ತುಂಬುವವರೆಗೂ ಸ್ಮಾರ್ಟ್‌ಫೋನ್‌ ಸಂಪರ್ಕಕ್ಕೆ ಬಾರದಂತೆ ನೋಡಿಕೊಂಡಿದ್ದಾರೆ.
ಬ್ರಿಟನ್‌ನ ಪತ್ರಿಕೆ "ದಿ ಮಿರರ್‌'ಗೆ ನೀಡಿದ ಸಂದರ್ಶನದಲ್ಲಿ ಅವರೇ ಈ ಕುರಿತು ಹೇಳಿಕೊಂಡಿದ್ದಾರೆ.

ಮೊಬೈಲ್‌ ಬಳಕೆಗೆ ಮಿತಿ: "ನಮ್ಮ ಮಕ್ಕಳಾದ ಜೆನಿಫ‌ರ್‌(20), ರೋರಿ(17) ಮತ್ತು ಫೋಬೆ(14)ಗೆ ಹಲವು ಮಿತಿಗಳನ್ನು ಹೇರಿದ್ದೇವೆ. ಸಹಪಾಠಿಗಳೆಲ್ಲ ಮೊಬೈಲ್‌ ಹೊಂದಿದ್ದಾರೆ ಎಂದು ಎಷ್ಟು ಹಠ ಹಿಡಿದರೂ ಅವರಿಗೆ 14 ವರ್ಷ ತುಂಬುವವರೆಗೂ ಸ್ಮಾರ್ಟ್‌ಫೋನ್‌ ಕೊಡಿಸಿರಲಿಲ್ಲ. ಡಿನ್ನರ್‌ ಟೇಬಲ್‌ ಬಳಿಯಂತೂ ಮೊಬೈಲನ್ನು ತರುವ ಹಾಗಿಲ್ಲ.
ರಾತ್ರಿ ಮಲಗುವ ಸಮಯದಲ್ಲಿ ಅದು ಹತ್ತಿರ ಸುಳಿಯಲೂ ಕೂಡದು. ಸಾಮಾನ್ಯರಂತೆ ಇತರರೊಂದಿಗೆ ಬೆರೆಯಬೇಕು. ಹೋಂ ವರ್ಕ್‌ ಮಾಡಬೇಕು. ಹೆಚ್ಚು ಪಾಕೆಟ್‌ ಮನಿ ನೀಡುವುದಿಲ್ಲ. ಅವರನ್ನು ಸಾಮಾನ್ಯರ ಮಕ್ಕಳಂತೆ ಬೆಳೆಸಬೇಕೆಂಬುದು ನಮ್ಮ ಆಸೆ,' ಎಂದಿದ್ದಾರೆ ಗೇಟ್ಸ್‌. ಇದೇ ವೇಳೆ,  ಮ್ಯಾಕ್‌ಡೊನಾಲ್ಡ್‌, ಬರ್ಗರ್‌ ಕಿಂಗ್‌ ತಮ್ಮ ಫೇವರಿಟ್‌ ಎಂಬುದನ್ನು ಹೇಳಲು ಗೇಟ್ಸ್‌ ಮರೆಯಲಿಲ್ಲ.

10 ಡಾಲರ್‌ನ ವಾಚ್‌: ವಿಶೇಷವವೆಂದರೆ, ಸುಮಾರು 87 ಶತಕೋಟಿ ಡಾಲರ್‌(5.62 ಲಕ್ಷ ಕೋಟಿ ರೂ.) ಆಸ್ತಿ ಹೊಂದಿರುವ ಗೇಟ್ಸ್‌ ಅವರು ಸಂದರ್ಶನದ ಸಮಯದಲ್ಲೂ 10 ಡಾಲರ್‌(650 ರೂ.)ನ ಕ್ಯಾಸಿಯೋ ವಾಚ್‌ ಧರಿಸಿದ್ದರು ಎಂದು ದಿ ಮಿರರ್‌ ವರದಿ ಮಾಡಿದೆ.

ಅಮೆರಿಕದ ಸರ್ಜನ್ ಜನರಲ್ ಮಂಡ್ಯ ಮೂಲದ ವಿವೇಕ್ ಮೂರ್ತಿ ವಜಾ

ಅಮೆರಿಕದ ಸರ್ಜನ್‌ ಜನರಲ್‌ ಮಂಡ್ಯ ಮೂಲದ ವಿವೇಕ್‌ ಮೂರ್ತಿ ವಜಾ

ವಾಷಿಂಗ್ಟನ್‌: ಅಮೆರಿಕದ ಸರ್ಜನ್‌ ಜನರಲ್‌(ಸಾರ್ವಜನಿಕ ಆರೋಗ್ಯ ಇಲಾಖೆ ಮುಖ್ಯಸ್ಥ) ಆಗಿ ಒಬಾಮ ಆಡಳಿತದಿಂದ ನೇಮಕಗೊಂಡಿದ್ದ ಮೊದಲ ಭಾರತೀಯ-ಅಮೆರಿಕದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಕರ್ನಾಟಕದ ಮಂಡ್ಯ ಮೂಲದ  ವಿವೇಕ್‌ ಮೂರ್ತಿ (39) ಅವರನ್ನು ಟ್ರಂಪ್‌ ಆಡಳಿತ ವಜಾ ಮಾಡಿದೆ. ಈ ದಿಢೀರ್‌ ಬೆಳವಣಿಗೆಯು ಸ್ವತಃ ಆರೋಗ್ಯ ಸೇವಾ ಇಲಾಖೆಯ ನೌಕರರಿಗೂ ಅಚ್ಚರಿ ಮೂಡಿಸಿದೆ.

ಮಹತ್ವದ ಇಲಾಖೆಗೆ ಹೊಸ ನಾಯ ಕತ್ವವನ್ನು ತರುವ ಉದ್ದೇಶದಿಂದ ಅವ ರನ್ನು ಸೇವೆಯಿಂದ ವಜಾ ಮಾಡಲಾಗಿದೆ. ಅವರ ಸ್ಥಾನಕ್ಕೆ ಅವರ ಕೆಳಗೆ ಕಾರ್ಯ ನಿರ್ವಹಿಸುತ್ತಿದ್ದ ಅಡ್ಮಿರಲ್‌ ಸಿಲ್ವಿಯಾ ಟ್ರೆಂಟ್‌-ಆ್ಯಡಮ್ಸ್‌ರನ್ನು ನೇಮಕ ಮಾಡ ಲಾಗಿದೆ. ಇವರು ಅಮೆರಿಕದ ಸರ್ಜನ್‌ ಜನರಲ್‌ ಹುದ್ದೆಗೇರುತ್ತಿರುವ ಮೊದಲ ನರ್ಸ್‌ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಮೂರ್ತಿ ಎರಡನೆಯವರು: "ಮೂರ್ತಿ ಅವರನ್ನು ಹುದ್ದೆಯಿಂದ ತೆಗೆದುಹಾಕಲಾ ಗಿದೆ. ಅವರು ಕಮಿಷನ್‌x ಕಾಪ್ಸ್‌ìನ ಸದಸ್ಯರಾಗಿ ಮುಂದುವರಿಯಲಿದ್ದಾರೆ,' ಎಂದು ಆರೋಗ್ಯ ಇಲಾಖೆ ತಿಳಿಸಿದೆ. "ಥ್ಯಾಂಕ್ಯೂ ಅಮೆರಿಕ, ನಿಮ್ಮ ಸರ್ಜನ್‌ ಜನರಲ್‌ ಆಗಿ ಸೇವೆ ಮಾಡಲು ಅವಕಾಶ ಸಿಕ್ಕಿದ್ದಕ್ಕೆ. ಮುಂದೆ ನಿಮ್ಮೊಂದಿಗೆ ಹೊಸ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಉತ್ಸುಕನಾಗಿದ್ದೇನೆ,' ಎಂದು ಮೂರ್ತಿ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. 2014ರ ಡಿಸೆಂಬರ‌ಲ್ಲಿ ಮೂರ್ತಿ ಸರ್ಜನ್‌ ಜನರಲ್‌ ಆಗಿ ನೇಮಕಗೊಂಡಿದ್ದರು. ಕುತೂಹಲದ ವಿಚಾರವೆಂದರೆ, ಮೂರ್ತಿ ಅವರು ಟ್ರಂಪ್‌ ಆಡಳಿತವು ಸೇವೆಯಿಂದ ವಜಾಗೊಳಿಸುತ್ತಿರುವ 2ನೇ ಭಾರತೀಯ -ಅಮೆರಿಕನ್‌. ಇತ್ತೀಚೆಗೆ ಯುಎಸ್‌ ಆಟಾರ್ನಿ ಪ್ರೀತ್‌ ಭರಾರಾರನ್ನು ವಜಾ ಮಾಡಲಾಗಿತ್ತು.

ಯುದ್ದ ವಿಮಾನ ವಾಹಕ ನೌಕೆ ನಿರ್ಮಾಣ

ಯುದ್ಧ ವಿಮಾನ ವಾಹಕ ನೌಕೆ ನಿರ್ಮಾಣ: ಭಾರತದ ಆತುರ ಸಲ್ಲ
ಬೀಜಿಂಗ್: ಯುದ್ಧ ವಿಮಾನ ವಾಹಕ ನೌಕೆಗಳನ್ನು ನಿರ್ಮಿಸುವ ಬದಲು ಭಾರತ ತನ್ನ ಆರ್ಥಿಕ ಬೆಳವಣಿಗೆಯತ್ತ ಚಿತ್ತ ಹರಿಸಬೇಕಿದೆ ಎಂದು ಚೀನಾದ ಮಾಧ್ಯಮವೊಂದು ಹೇಳಿದೆ. ''ಯುದ್ಧ ವಿಮಾನ ವಾಹಕ ನೌಕೆ ನಿರ್ಮಿಸಲು ದೆಹಲಿ ಆತುರ ತೋರುತ್ತಿದೆ. ದೇಶವಿನ್ನೂ ಕೈಗಾರೀಕಾ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿದೆ. ಸದ್ಯ ಯುದ್ಧ ವಿಮಾನ ವಾಹಕ ಯುದ್ಧ ನೌಕೆಗಳನ್ನು ನಿರ್ಮಿಸುವ ವಾತಾವರಣ ಭಾರತದಲ್ಲಿಲ್ಲ. ಕಳೆದ ಕೆಲ ದಶಕಗಳಿಂದಲೂ ಭಾರೀ ನೌಕೆಗಳ ನಿರ್ಮಾಣದಲ್ಲಿ ಭಾರತ ಹಾಗೂ ಚೀನಾ ಭಿನ್ನ ಹಾದಿ ಹಿಡಿದಿವೆ....

ಪ್ರಾನ್ಸ್ ಅಧ್ಯಕ್ಷಿಯ ಚುನಾವಣೆ

ಫ್ರಾನ್ಸ್‌ ಅಧ್ಯಕ್ಷೀಯ ಚುನಾವಣೆ: ಲೆ ಪೆನ್‌ ಹಿಂದಿಕ್ಕಿದ ಮ್ಯಾಕ್ರನ್‌

ಪ್ಯಾರಿಸ್‌: ಫ್ರಾನ್ಸ್‌ ಅಧ್ಯಕ್ಷೀಯ ಚುನಾವಣೆಯ ಒಂದು ಹಂತದ ಮತದಾನ ಭಾನುವಾರ ಮುಕ್ತಾಯವಾಗಿದ್ದು, ಕಟ್ಟರ್‌ ಬಲಪಂಥೀಯವಾದಿ, ನ್ಯಾಷನಲ್‌ ಫ್ರಂಟ್‌ ನಾಯಕಿ ಮರೀನ್‌ ಲೆ ಪೆನ್‌ ಹಾಗೂ ರಾಜಕೀಯವಾಗಿ ಅನನುಭವಿಯಾಗಿರುವ ಮ್ಯಾಕ್ರನ್‌ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ.

ಮ್ಯಾಕ್ರನ್‌ ಶೇ.23.9ರಷ್ಟು ಮತಗಳಿಂದ ಮುನ್ನಡೆ ಸಾಧಿಸಿದ್ದರೆ, ಲೆ. ಪೆನ್‌ ಶೇ.21.4ರಷ್ಟು ಮತ ಗಳಿಸಿದ್ದಾರೆ. ಫ್ರಾನ್ಸ್‌ನ ಮುಂದಿನ ಅಧ್ಯಕ್ಷರಾಗುವತ್ತ ಮ್ಯಾಕ್ರನ್‌ ಹೆಜ್ಜೆಯಿಟ್ಟಿದ್ದು, ಅವರಿಗೆ ಭಾರೀ ಜನಬೆಂಬಲ ವ್ಯಕ್ತವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, "ಫ್ರೆಂಚರ ಭಯ, ಹತಾಶೆ ಮತ್ತು ನೋವುಗಳನ್ನು ನಾನು ಆಲಿಸಿದ್ದೇನೆ ಮತ್ತು ಅರಿತಿದ್ದೇನೆ. ಅವರು ಬದಲಾವಣೆಯನ್ನು ಬಯಸಿದ್ದಾರೆ ಎಂಬುದನ್ನೂ ನಾನು ಮನಗಂಡಿದ್ದೇನೆ,' ಎಂದಿದ್ದಾರೆ.
ಮೇ 7ರಂದು ಎರಡನೇ ಸುತ್ತಿನ ಮತದಾನ ನಡೆಯಲಿದೆ.

ಇದೇ ವೇಳೆ, ಕಟ್ಟರ್‌ ಬಲಪಂಥೀಯವಾದಿ ನಾಯಕಿಯಾಗಿರುವ ಲೆ ಪೆನ್‌ ಅವರು ವಲಸಿಗ ವಿರೋಧಿ, ಐರೋಪ್ಯ ಒಕ್ಕೂಟ ವಿರೋಧಿ ಸಿದ್ಧಾಂತದಿಂದ ಜನಪ್ರಿಯರಾದವರು. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರಂತೆ ಪ್ರಚಾರದುದ್ದಕ್ಕೂ "ಫ್ರಾನ್ಸ್‌ ಫ‌ಸ್ಟ್‌' ನೀತಿಯನ್ನು ಅನುಸರಿಸುವುದಾಗಿ ಘೋಷಿಸುತ್ತಾ ಬಂದವರು.

ಬಾಹ್ಯಾಕಾಶ ವಾಸ : ದಾಖಲೆ ಮುರಿದ ಪೆಗ್ಗಿ

ಬಾಹ್ಯಾಕಾಶ ವಾಸ :ದಾಖಲೆ ಮುರಿದ ಪೆಗ್ಗಿ

ವಾಷಿಂಗ್ಟನ್ :
ನಾಸಾದ ಗಗನಯಾತ್ರಿ ಪೆಗ್ಗಿ ವೈಟ್ಸನ್ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 534 ದಿನಗಳ ಕಾಲ ವಾಸಿಸುವ ಮೂಲಕ ಜೆಫ್ ವಿಲಿಯಮ್ಸ್ ರ ದಾಖಲೆಯನ್ನು ಮುರಿದಿದ್ದಾರೆ.

2008 ರಲ್ಲಿ ಬಾಹ್ಯಾಕಾಶ ನಿಲ್ದಾಣದ ಮೊದಲ ಮಹಿಳಾ ಕಮಾಂಡ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ವೈಟ್ಸನ್ ಅವರು ಕಳೆದ ವರ್ಷ ನ.17 ರಂದು 377 ದಿನಗಳ ಅವಧಿಗೆ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳಸಿದ್ದ ವೈಟ್ಸನ್, ಜೆಫ್ ವಿಲಿಯಮ್ಸ್ ರ 534 ದಿನ 2 ಗಂಟೆ ಮತ್ತು 48 ನಿಮಿಷಗಳ ದಾಖಲೆಯನ್ನು ಅವರು ಮುರಿದಿದ್ದಾರೆ. ಮಾರ್ಚ್ ನಲ್ಲಿ ವಾಪಸ್ ಮರಳಿ ಭೂಮಿಗೆ ಬರಬೇಕಿದ್ದ ಅವರ ಯಾನವನ್ನು ಸೆಪ್ಟಂಬರ್ ವರೆಗೆ ವಿಸ್ತರಿಸಲಾಗಿದೆ. ಅವರು ಭೂಮಿಗೆ ಮರಳುವ ವೇಳೆಗೆ 650 ದಿನಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸಿಸಿದ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ವೈಟ್ಸನ್ ಅವರು ನಾಸಾದಲ್ಲಿ 1980 ರಲ್ಲಿ ವೃತ್ತಿ ಜೀವನ ಆರಂಭಿಸಿ ಹಲವಾರು ಸಂಶೋಧನೆಗಳಲ್ಲಿ ಪಾಲ್ಗೊಂಡಿದ್ದರು. 1992 ರಲ್ಲಿ ಶಟಲ್ ಮೀರ್ ಯೋಜನೆಯಲ್ಲಿ ಕೆಲಸ ನಿರ್ವಹಿಸಿದ ಅವರು 2002 ರಲ್ಲಿ ಎಕ್ಸೆಪೆಡಿಷನ್-5 ಯೋಜನೆಯಡಿ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳಸಿದ್ದರು. 184 ದಿನಗಳ ಕಾಲ ತಂಗಿದ್ದ ಅವರು, 21 ವೈಜ್ಞಾನಿಕ ಸಂಶೋಧನೆಗಳಲ್ಲಿ ತೊಡಗಿದ್ದು. ನಾಸಾದ ಮೊದಲ ವಿಜ್ಞಾನ ಅಧಿಕಾರಿಯಾಗಿದ್ದರು.

ಕಳೆದ ನವೆಂಬರ್ ನಿಂದ ಐಎಸ್ ಎಸ್ ಗೆ ಮರಳಿರುವ ಅವರು 53 ಗಂಟೆಗಳ ಕಾಲ ಅಂತರಿಕ್ಷ ನಡಿಗೆ ಕೈಗೊಂಡಿದ್ದಾರೆ. ಈ ನಡುವೆ 2009 ರಲ್ಲಿ ಗಗನಯಾತ್ರಿಗಳ ಕಚೇರಿಯಲ್ಲಿ ಮುಖ್ಯಸ್ಥೆಯಾಗಿ ನೇಮಕಗೊಂಡ ಮೊದಲ ಮಹಿಳೆಯಾಗಿದ್ದರು. ಈಗ ಮತ್ತೆ ಅಂತರಿಕ್ಷ ನಡಿಗೆಗೆ ಸನ್ನದಾರಾಗಿರುವ ಅವರು ಹೊಸ ದಾಖಲೆ ನಿರ್ಮಿಸುವ ಉದ್ದೇಶ ಹೊಂದಿದ್ದಾರೆ.

ಭಾರತದ 101 ಈ ಅಜ್ಜಿ 100 ಮೀಟರ್ ಓಟದಲ್ಲಿ ಚಿನ್ನ ಗೆದ್ದಿದ್ದಾಳೆ!

ಭಾರತದ 101ರ ಈ ಅಜ್ಜಿ 100 ಮೀಟರ್ ಓಟದಲ್ಲಿ ಚಿನ್ನ ಗೆದಿದ್ದಾಳೆ!

ಆಕ್ಲೆಂಡ್:
ಇಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಕ್ರೀಡಾಕೂಟದ 100 ಮೀಟರ್ ಓಟದಲ್ಲಿ 101 ವರ್ಷದ ಮನ್ ಕೌರ್ ಚಿನ್ನದ ಪದಕವನ್ನು ಭಾರತದ ಶತಾಯುಷಿ ಅಜ್ಜಿ ವಿದೇಶದಲ್ಲಿ ತಮ್ಮದಾಗಿಸಿಕೊಂಡಿದ್ದಾರೆ.

ಚಂಡೀಗಢ್ದ ಅಜ್ಜಿ ಮನ್ ಕೌರ್ ಅವರು 100 ಮೀಟರ್ಸ್ ಓಟದ ಸ್ಪರ್ಧೆಯನ್ನು ಕೇವಲ 1 ನಿಮಿಷ 14 ಸೆಕೆಂಡ್ಗಳಲ್ಲಿ ಪೂರ್ತಿಗೊಳಿಸಿದ್ದಾರೆ. ಇಡೀ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ ಮನ್ ಕೌರ್ ಅವರೇ ಹಿರಿಯರಾಗಿದ್ದರು.

200 ಮೀಟರ್ ಓಟ, ಶಾಟ್ಪುಟ್ ಹಾಗೂ ಜಾವಲಿನ್ ಎಸೆತ ಸ್ಪರ್ಧೆಗಳಲ್ಲಿಗೂ ಅಜ್ಜಿ ಮನ್ ಕೌರ್ ನೋಂದಾಣಿ ಮಾಡಿಸಿದ್ದು, ಬುಧವಾರ ನಡೆಯುವ ಈ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬೇರೆ ಬೇರೆ ರಾಷ್ಟ್ರಗಳಲ್ಲಿ ನಡೆದ ಮಾಸ್ಟರ್ಸ್ ಕ್ರೀಡಾಕೂಟಗಳಲ್ಲಿ ಅಜ್ಜಿ ಮನ್ ಕೌರ್ 20ಕ್ಕೂ ಹೆಚ್ಚು ಪದಕಗಳನ್ನು ಜಯಿಸಿದ್ದಾರೆ.

ಇವರ ಪುತ್ರ ಗುರುದೇವ್ ಸಿಂಗ್. ಗುರುದೇವ್ ಸಹ ಓಟಗಾರರಾಗಿದ್ದು, ಇವರ ಕುಟುಂಬ ಕೆನಡಾದಲ್ಲಿ ನೆಲೆಸಿದ್ದಾರೆ. ತಮ್ಮ ಸಾಧನೆ ಬಗ್ಗೆ ಮಾಧ್ಯಮಗಳ ಜೊತೆ ಅಭಿಪ್ರಾಯ ಹಂಚಿಕೊಂಡಿರುವ ಮನ್ ಕೌರ್ ನನ್ನ ಮಗ ಹೇಳಿದ್ದನ್ನು ಮಾಡುತ್ತೇನೆ. ಮಗನಿಂದ ನಾನು ನಿತ್ಯವೂ ತರಬೇತಿ ಪಡೆಯುತ್ತಿದ್ದೇನೆ. ನಾನು ದೈಹಿಕವಾಗಿ ಸಮರ್ಥಳಾಗಿದ್ದು, ನನ್ನ ಜೀವ ಇರೋವರಿಗೂ ನಾನು ಓಡುತ್ತಲೇ ಇರುತ್ತೇನೆ' ಎಂದು ಹೇಳುತ್ತಾರೆ.

ಚಿಲಿಯಲ್ಲಿ ಭೂಕಂಪನ

ಚಿಲಿಯಲ್ಲಿ ಭೂಕಂಪನ: ರಿಕ್ಟರ್ ಮಾಪಕದಲ್ಲಿ 6.9 ತೀವ್ರತೆ ದಾಖಲು
ಸ್ಯಾಂಟಿಯಾಗೋ: ಚಿಲಿಯಲ್ಲಿ ಮಂಗಳವಾರ ಬೆಳಗ್ಗೆ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.9ರಷ್ಟು ತೀವ್ರತೆ ದಾಖಲಾಗಿದೆ ಎಂದು ಅಮೆರಿಕ ಭೂಕಂಪನ ಮಾಪನ ಕೇಂದ್ರ ತಿಳಿಸಿದೆ. ಚಿಲಿ ದೇಶದ ಕೇಂದ್ರ ಭಾಗದಲ್ಲಿ ವಲ್ಪರೈಸೋ ನಗರದ 38 ಕಿ.ಮೀ ಆಳದಲ್ಲಿ ಕಂಪನದ ಕೇಂದ್ರ ಬಿಂದು ದಾಖಲಾಗಿದ್ದು, ಕರಾವಳಿ ತೀರಗಳಲ್ಲಿ ಭಾರಿ ಪ್ರಮಾಣದ ಅಲೆಗಳು ಏಳಲಿವೆ. ಸುನಾಮಿ ಎಚ್ಚರಿಕೆ ನೀಡದ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಕರಾವಳಿ ತೀರದ ನಿವಾಸಿಗಳು ಎತ್ತರದ ಪ್ರದೇಶಕ್ಕೆ ತೆರಳುವಂತೆ ಸೂಚನೆ...

ಅಮೆರಿಕವನ್ನು ಧಿಕ್ಕರಿಸಿ ಉ.ಕೊರಿಯ ಕ್ಷಿಪಣಿ ಪ್ರಯೋಗ

ಅಮೆರಿಕವನ್ನು ಧಿಕ್ಕರಿಸಿ ಉ. ಕೊರಿಯ ಕ್ಷಿಪಣಿ ಪ್ರಯೋಗ

ಸಿಯೋಲ್, ಎ. 29: ಉತ್ತರ ಕೊರಿಯ ಶನಿವಾರ ಮಧ್ಯಮ ವ್ಯಾಪ್ತಿಯ ಪ್ರಕ್ಷೇಪಕ ಕ್ಷಿಪಣಿಯೊಂದರ ಪರೀಕ್ಷಾ ಹಾರಾಟ ನಡೆಸಿದೆಯಾದರೂ, ಅದು ವಿಫಲಗೊಂಡಿದೆ ಎಂದು ದಕ್ಷಿಣ ಕೊರಿಯ ಮತ್ತು ಅಮೆರಿಕ ಹೇಳಿವೆ.

ಇದು ಈ ತಿಂಗಳೊಂದರಲ್ಲೇ ಉತ್ತರ ಕೊರಿಯ ನಡೆಸಿದ ಮೂರನೆ ವಿಫಲ ಕ್ಷಿಪಣಿ ಪ್ರಾಯೋಗಿಕ ಹಾರಾಟವಾಗಿದೆ. ಆದರೆ, ಸಮೀಪದ ಸಮುದ್ರದಲ್ಲೇ ಅಮೆರಿಕದ ವಿಮಾನವಾಹಕ ಯುದ್ಧ ನೌಕೆಗಳು ಯುದ್ಧಾಭ್ಯಾಸ ನಡೆಸುತ್ತಿರುವ ಸಮಯದಲ್ಲೇ ನಡೆಸಲಾದ ಪ್ರಾಯೋಗಿಕ ಪರೀಕ್ಷೆಯನ್ನು, ಅಮೆರಿಕಕ್ಕೆ ಉತ್ತರ ಕೊರಿಯದ ನೀಡಿದ ಸ್ಪಷ್ಟ ಧಿಕ್ಕಾರದ ಸಂದೇಶ ಎಂಬುದಾಗಿ ಪರಿಗಣಿಸಲಾಗಿದೆ.

ಉತ್ತರ ಕೊರಿಯವು ತನ್ನ ಪ್ರಕ್ಷೇಪಕ ಕ್ಷಿಪಣಿಗಳಲ್ಲಿ ಪರಮಾಣು ಶಸ್ತ್ರಗಳನ್ನು ಅಳವಡಿಸುವ ಸಾಧ್ಯತೆಯಿರುವುದರಿಂದ, ಆ ದೇಶ ನಡೆಸುವ ಕ್ಷಿಪಣಿ ಪರೀಕ್ಷೆಗಳನ್ನು ವಿಶ್ವಸಂಸ್ಥೆ ನಿಷೇಧಿಸಿದೆ.
ಉತ್ತರ ಕೊರಿಯದ ಪರಮಾಣು ಬೆದರಿಕೆಯನ್ನು ಉಗ್ರ ನಿಲುವಿನ ಮೂಲಕ ಎದುರಿಸುವ ಬದಲು, ವಿಶ್ವಸಂಸ್ಥೆಯಲ್ಲಿ ರಾಜತಾಂತ್ರಿಕವಾಗಿ ಎದುರಿಸಲು ಅಮೆರಿಕ ಮನಸ್ಸು ಮಾಡಿದ ಬೆನ್ನಿಗೇ ನೂತನ ಪರೀಕ್ಷೆ ನಡೆದಿದೆ.

ಈ ಘಟನೆಗೆ ಪ್ರತಿಕ್ರಿಯಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘‘ಉತ್ತರ ಕೊರಿಯ ಇಂದು ಕ್ಷಿಪಣಿಯೊಂದನ್ನು ಪರೀಕ್ಷೆ ನಡೆಸುವ ಮೂಲಕ ಚೀನಾ ಹಾಗೂ ಅದರ ಅತ್ಯಂತ ಗೌರವಾನ್ವಿತ ಅಧ್ಯಕ್ಷರ ದ ಆಶಯಗಳಿಗೆ ಚ್ಯುತಿ ತಂದಿದೆ. ಅದು ಸರಿಯಲ್ಲ!’’ ಎಂದು ಟ್ವೀಟ್ ಮಾಡಿದ್ದಾರೆ.

ಅಟ್ಲಾಂಟಕ್ಕೆ ನೀಡಿದ ಒಂದು ದಿನದ ಭೇಟಿಯ ಬಳಿಕ ಶ್ವೇತಭವನಕ್ಕೆ ಮರಳಿದ ಅವರು, ಕ್ಷಿಪಣಿ ಹಾರಾಟಕ್ಕೆ ಸಂಬಂಧಿಸಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ.

ಉತ್ತರ ಕೊರಿಯದ ಕ್ಷಿಪಣಿ ಹಾರಾಟದ ಹೊತ್ತುಗಾರಿಕೆ ಮಹತ್ವ ಪಡೆದುಕೊಂಡಿದೆ. ಕೇವಲ ಗಂಟೆಗಳ ಮೊದಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪ್ಯಾಂಗ್‌ಯಾಂಗ್‌ನ ಶಸ್ತ್ರಾಸ್ತ್ರ ಕಾರ್ಯಕ್ರಮಗಳ ಬಗ್ಗೆ ಸಚಿವ ಮಟ್ಟದ ಸಭೆ ನಡೆದಿತ್ತು.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್ ಅಧ್ಯಕ್ಷತೆ ವಹಿಸಿದ ಸಭೆಯನ್ನು ಉತ್ತರ ಕೊರಿಯ ಅಧಿಕಾರಿಗಳು ಬಹಿಷ್ಕರಿಸಿದ್ದರು.

71 ಕಿ.ಮೀ. ಎತ್ತರ ತಲುಪಿದ ಬಳಿಕ ಪತನಗೊಂಡಿತು

ಕ್ಷಿಪಣಿಯು ಹಲವು ನಿಮಿಷಗಳ ಕಾಲ ಹಾರಿತು ಹಾಗೂ 71 ಕಿಲೋಮೀಟರ್‌ನಷ್ಟು ಗರಿಷ್ಟ ಎತ್ತರವನ್ನು ತಲುಪಿ ಪತನಗೊಂಡಿತು ಎಂದು ದಕ್ಷಿಣ ಕೊರಿಯದ ಸೇನಾ ಮುಖ್ಯಸ್ಥ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಆದರೆ, ಕ್ಷಿಪಣಿ ಎಷ್ಟು ದೂರ ಹಾರಿತು ಎಂಬ ಕುರಿತ ಮಾಹಿತಿಯನ್ನು ಅವರು ನೀಡಿಲ್ಲ. ಆದರೆ, ಅದು ಮಧ್ಯಮ ವ್ಯಾಪ್ತಿಯ ಕೆಎನ್-17 ಪ್ರಕ್ಷೇಪಕ ಕ್ಷಿಪಣಿಯಾಗಿರುವ ಸಾಧ್ಯತೆಯಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದರು.

ಫೆಸಿಫಿಕ್ ಸಾಗರ ಪ್ರದೇಶದಲ್ಲಿ ಅಮೇರಿಕದಿಂದ ಕ್ಷಿಪಣಿ ಪರೀಕ್ಷೆ

ಫೆಸಿಫಿಕ್ ಸಾಗರ ಪ್ರದೇಶದಲ್ಲಿ ಅಮೆರಿಕದಿಂದ ಕ್ಷಿಪಣಿ ಪರೀಕ್ಷೆ

ನ್ಯೂಸ್ ಡೆಸ್ಕ್ :
ಅಮೆರಿಕ ಮತ್ತು ಉತ್ತರ ಕೊರಿಯಾಗಳು ಪರಸ್ಪರ ಆಕ್ರಮಣಕಾರಿ ನಿಲುವು ತಳೆದಿರುವ ರೀತಿಯಲ್ಲಿ ಅಮೆರಿಕದ ವಾಯುಪಡೆಯು ಫೆಸಿಫಿಕ್ ಸಾಗರ ಪ್ರದೇಶದಲ್ಲಿ ದೂರವ್ಯಾಪ್ತಿಯ ಕ್ಷಿಪಣಿ ಪರೀಕ್ಷೆ ನಡೆಸಿದೆ.

ಈ ಕ್ಷಿಪಣಿಯು ಪರಮಾಣು ಬಾಂಬು ಕೊಂಡೊಯ್ಯಬಲ್ಲ ಸಾಮರ್ಥ್ಯ ಹೊಂದಿದ್ದು, ಪರೀಕ್ಷೆಯ ಸಂದರ್ಭದಲ್ಲಿ ಯಾವುದೇ ಸಿಡಿತಲೆ ಜೋಡಿಸಿರಲಿಲ್ಲ. ಕ್ಷಿಪಣಿಯು 4200 ಕಿ.ಮೀ. ಗಳಷ್ಟು ದೂರ ಕ್ರಮಿಸಿ ನಂತರ ಸಮುದ್ರಕ್ಕೆ ಅಪ್ಪಳಿಸಿತು. ಈ ಸಂದರ್ಭದಲ್ಲಿ ಉತ್ತರ ಕೊರಿಯಾದ ದಾಳಿಯಿಂದ ದಕ್ಷಿಣ ಕೊರಿಯಾವನ್ನು ರಕ್ಷಿಸುವ ನಿಟ್ಟಿನಲ್ಲಿ ಅಮೆರಿಕವು ದಕ್ಷಿಣ ಕೊರಿಯಾದ ಸುತ್ತಲೂ ಕ್ಷಿಪಣಿ ರಕ್ಷಣಾ ತಂತ್ರಜ್ಞಾನ ವ್ಯವಸ್ಥೆ ಅಳವಡಿಸುತ್ತಿದೆ.

12000 ಕಿ.ಮೀ. ಪ್ರಯಾಣಿಸಿ ಚೀನ ತಲುಪಿದ ರೈಲು

12000ಕಿ.ಮೀ. ಪ್ರಯಾಣಿಸಿ ಚೀನ ತಲುಪಿದ ರೈಲು

ಬೀಜಿಂಗ್‌: ಬ್ರಿಟನ್‌ನಿಂದ ಚೀನಕ್ಕೆ ನೇರ ಸಂಪರ್ಕ ಕಲ್ಪಿಸುವ ಸರಕು ಸಾಗಣೆ ರೈಲು ಇದೇ ಮೊದಲ ಬಾರಿಗೆ 12 ಸಾವಿರ ಕಿ.ಮೀ. ಪ್ರಯಾಣಿಸಿ ಚೀನದ ಝೆಜಿಯಾಂಗ್‌ ಪ್ರಾಂತ್ಯದ ಇವು ನಗರವನ್ನು ತಲುಪಿದೆ. ಕಳೆದ ಜನವರಿಯಲ್ಲಿ  ಯಿವುನಿಂದ ಲಂಡನ್‌ಗೆ ಸರಕು ಹೊತ್ತ ರೈಲು ಸಾಗಿದ್ದು, ಇದೀಗ ಲಂಡನ್‌ನಿಂದ ಸರಕು ಹೊತ್ತು ವಾಪಸಾಗಿದೆ. ಒಟ್ಟು 20 ದಿನಗಳ ಯಾತ್ರೆಯನ್ನು ಈ ರೈಲು ಮಾಡಿದ್ದು, ಫ್ರಾನ್ಸ್‌, ಬೆಲ್ಜಿಯಂ, ಜರ್ಮನಿ, ಬೆಲರಸ್‌, ಪೋಲೆಂಡ್‌, ರಷ್ಯಾ, ಕಜಕಿಸ್ತಾನದ ಮೂಲಕ ಹಾದು ಬಂದಿದೆ. ಈ ರೈಲಿನಲ್ಲಿ ವಿಸ್ಕಿ, ಮಕ್ಕಳ ಹಾಲು, ಔಷಧ ತಯಾರಿಕಾ ಯಂತ್ರಗಳು ಇದ್ದವು. ಪ್ರಾಚೀನ ರೇಷ್ಮೆ ವ್ಯಾಪಾರದ ಮಾರ್ಗದಲ್ಲೇ ಈ ರೈಲು ಹಾದುಹೋಗುತ್ತದೆ.

ಗೂಗಲ್ ಸಿಇಒ ಸುಂದರ ಪಿಚೈ ವಾರ್ಷಿಕ ವೇತನ

ಗೂಗಲ್ ಸಿಇಒ ಸುಂದರ್ ಪಿಚೈ 2016ರ ವಾರ್ಷಿಕ ವೇತನ ಎಷ್ಟು ಗೊತ್ತೆ?

ನವದೆಹಲಿ, ಏಪ್ರಿಲ್ 30 : ಭಾರತದ ಚೆನ್ನೈ ಮೂಲದ 44 ವರ್ಷದ ಗೂಗಲ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಸುಂದರ್ ಪಿಚೈ ಅವರ ವೇತನದಲ್ಲಿ ಭಾರೀ ಏರಿಕೆಯಾಗಿದೆ.

2015ಕ್ಕೆ ಹೋಲಿಸಿದರೆ 2016ರ ವೇತನ ದುಪ್ಪಟ್ಟಾಗಿದೆ. 2016ಕ್ಕೆ ಅವರು 200 ಮಿಲಿಯನ್ ಡಾಲರ್(ಸುಮಾರು 1285.5 ಕೋಟಿ ರು) ವೇತನ ಪಡೆದಿದ್ದಾರೆ. 2015ರಲ್ಲಿ ಅವರು 99.8 ಮಿಲಿಯನ್ ಡಾಲರ್ ವೇತನವನ್ನು ಪಡೆದಿದ್ದರು.

ಪಿಚೈ ನೇತೃತ್ವದಲ್ಲಿ ಬಿಡುಗಡೆಯಾದ ಹೊಸ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಯಶಸ್ವಿಯಾಗಿದ್ದನ್ನು ಪರಿಗಣಿಸಿ ವೇತನವನ್ನು ಏರಿಕೆ ಮಾಡಲಾಗಿದೆ. [ಚಿತ್ರಗಳು : ಗಲ್ಲಿಯಲ್ಲಿ ಕ್ರಿಕೆಟ್ ಆಡಿದ ಗೂಗಲ್ ಸಿಇಒ ಸುಂದರ್ ಪಿಚೈ]

ಗೂಗಲ್ ಕಂಪೆನಿಯು 2016ರಲ್ಲಿ ತನ್ನದೇ ಹೊಸ ಸ್ಮಾರ್ಟ್ಫೋನ್, ವರ್ಚುವಲ್ ರಿಯಾಲಿಟಿ ಹೆಡ್ಸೆಟ್ ಇತ್ಯಾದಿ ಉತ್ಪನ್ನಗಳನ್ನು ಬಿಡುಗಡೆಗೊಳಿಸಿತ್ತು.
ಈ ಎಲ್ಲ ಬೆಳವಣಿಗೆಯಲ್ಲಿ ಪಿಚೈ ಅವರ ಮಹತ್ತರ ಪಾತ್ರ ಪರಿಗಣಿಸಿ ವೇತನ ಏರಿಕೆಯಾಗಿದೆ.

ಪಿಚೈ ಮುಖ್ಯಸ್ಥರಾದ ಬಳಿಕ ಯೂಟ್ಯೂಬ್ ವ್ಯವಹಾರ ಹಾಗೂ ಜಾಹೀರಾತು ಆದಾಯದಲ್ಲಿ ದೊಡ್ಡ ಮಟ್ಟಿನ ಏರಿಕೆ ದಾಖಲಿಸಿತು.

ಬಾಹ್ಯಾಕಾಶ ರಾಜತಾಂತ್ರಿಕತೆ

ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಪ್ರಧಾನಿ ಮೋದಿಯ 'ಬಾಹ್ಯಾಕಾಶ ರಾಜತಾಂತ್ರಿಕತೆ'

ನವದೆಹಲಿ: ಮೇ.5 ರಂದು ಶ್ರೀಹರಿಕೋಟಾದಿಂದ ಸಂವಹನ ಉಪಗ್ರಹ (ಜಿಎಸ್ಎಟಿ-9) ಉಡಾವಣೆಯಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿದ್ದ ದಕ್ಷಿಣ ಏಷ್ಯಾ ಉಪಗ್ರಹ ಯೋಜನೆ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ.

ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಸಂವಹನ ಉಪಗ್ರಹ ಉಡಾವಣೆಯಾಗಲಿದ್ದು, ನೆರೆ ರಾಷ್ಟ್ರಗಳಿಗೆ ಭಾರತ ಗಿಫ್ಟ್ ನೀಡುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹಿಂದೆಂದೂ ಮಾಡಿರದ ಸಾಧನೆಗೆ ಸಜ್ಜುಗೊಂಡಿದೆ. ಈ ಬಗ್ಗೆ ವಿದೇಶಾಂಗ ಇಲಾಖೆಯ ವಕ್ತಾರ ಗೋಪಾಲ್ ಬಗ್ಲೆ ಪ್ರತಿಕ್ರಿಯೆ ನೀಡಿದ್ದು, ನೆರೆಹೊರೆ ಮೊದಲು (ನೈಬರ್ ಹುಡ್ ಫಸ್ಟ್) ಎಂಬ ತತ್ವವನ್ನು ವಾಯುಮಂಡಲವನ್ನೂ ಮೀರಿ ವಿಸ್ತರಿಸಲಾಗಿದೆ. ನೆರೆಯ ರಾಷ್ಟ್ರಗಳಿಗೆ ಉಚಿತವಾಗಿ ಸಂವಹನ ಉಪಗ್ರಹ ಬಳಕೆ ಮಾಡಲು ಅವಕಾಶ ನೀಡಿರುವುದಕ್ಕೆ ಬಾಹ್ಯಾಕಾಶ ಜಗತ್ತಿನಲ್ಲಿ ಪರ್ಯಾಯ ಯಾವುದೂ ಇಲ್ಲ ಎಂದು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದ ದಕ್ಷಿಣ ಏಷ್ಯಾ ಉಪಗ್ರಹ ಯೋಜನೆ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
2014ರಲ್ಲಿ ಕಠ್ಮಂಡುವಿನಲ್ಲಿ ನಡೆದ ಸಾರ್ಕ್ ರಾಷ್ಟ್ರಗಳ ಸಮ್ಮೇಳನದಲ್ಲಿ ಸಾರ್ಕ್ ರಾಷ್ಟ್ರಗಳಿಗಾಗಿಯೇ ಪ್ರತ್ಯೇಕ ಉಪಗ್ರಹವನ್ನು ಉಡಾವಣೆ ಮಾಡುವುದರ ಬಗ್ಗೆ ಘೋಷಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸಂವಹನ ಉಪಗ್ರಹ ನೆರೆ ರಾಷ್ಟ್ರಗಳಿಗೆ ಭಾರತ ನೀಡುತ್ತಿರುವ ಉಡುಗೊರೆ ಎಂದಿದ್ದರು.