ಬುಧವಾರ, ಜನವರಿ 30, 2019

ಶಾಲಾ ಸೌಲಭ್ಯಗಳು

ಶಾಲಾ ಸೌಲಭ್ಯಗಳು


CONTENTS


ಶಿಕ್ಷಕರ ಸ್ಥಳಾಂತರ ಸಂಬಂಧ ರಾಜ್ಯ ನೀತಿ ಹಾಗೂ ನಿಯಮಗಳು


ದೂರು/ತಕರಾರುಗಳಿಗೆ ಪರಿಹಾರ


ಪಚಾರಿಕ ಶಿಕ್ಷಣದ ವ್ಯವಸ್ಥೆಯಲ್ಲಿ ಶಾಲೆಯು ಮೂಲಭೂತ ಘಟಕವಾಗಿರುತ್ತದೆ. 2012-13ನೇ ಸಾಲಿನ ಜಿಲ್ಲಾ ಶೈಕ್ಷಣಿಕ ಮಾಹಿತಿ ವ್ಯವಸ್ಥೆ (ಡೈಸ್) ಅಂಕಿ ಅಂಶಗಳ ವರದಿಗಳ ಪ್ರಕಾರ ರಾಜ್ಯದಲ್ಲಿ ಒಟ್ಟು 78,950 ಶಾಲೆಗಳು (ಪದವಿ ಪೂರ್ವ ಕಾಲೇಜುಗಳು ಸೇರಿ) ಇದ್ದು, ಅವುಗಳಲ್ಲಿ 25,950 ಕಿರಿಯ ಪ್ರಾಥಮಿಕ ಶಾಲೆಗಳು, 34,086 ಹಿರಿಯ ಪ್ರಾಥಮಿಕ ಶಾಲೆಗಳು, 14,194 ಪ್ರೌಢ ಶಾಲೆಗಳು ಮತ್ತು 4,720 ಪದವಿ ಪೂರ್ವ ಕಾಲೇಜುಗಳಿವೆ. ಕಿರಿಯ ಪ್ರಾಥಮಿಕ ಶಾಲೆಗಳು ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಅನುಪಾತವು 0.761 : 1 ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಪ್ರೌಢ ಶಾಲೆಗಳ ಅನುಪಾತವು 1 : 0.416 ಆಗಿರುತ್ತದೆ. .


1 ರಿಂದ 8ನೇ ತರಗತಿ ಹೊಂದಿರುವ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ, ಪ್ರೌಢ ಶಾಲೆಗಳಲ್ಲಿ ಮತ್ತು 1 ರಿಂದ 12ನೇ ತರಗತಿಯವರೆಗೆ ಉನ್ನತ ಪ್ರೌಢ ಶಾಲೆಗಳಲ್ಲಿ 8ನೇ ತರಗತಿ ಸೌಲಭ್ಯದ ಲಭ್ಯತೆ ಇರುತ್ತದೆ. ಆದಾಗ್ಯೂ 1 ರಿಂದ 7ನೇ ತರಗತಿ ಹೊಂದಿರುವ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಶಾಲೆ ವಾಸಸ್ಥಳಕ್ಕೆ ಹತ್ತಿರವಿರುವ 8ನೇ ತರಗತಿ ಹೊಂದಿರುವ ಹಿರಿಯ ಪ್ರಾಥಮಿಕ ಅಥವಾ ಪ್ರೌಢ ಶಾಲೆಗಳಲ್ಲಿ ದಾಖಲಾತಿ ಹೊಂದುತ್ತಾರೆ.

2010-11ನೇ ಸಾಲಿನ ಆರ್.ಟಿ.ಇ ಪೂರಕ ಯೋಜನೆಯಡಿಯಲ್ಲಿ ರಾಜ್ಯದ 5 ಜಿಲ್ಲೆಗಳಲ್ಲಿ ಬೆಂಗಳೂರು (ನಗರ), ದಕ್ಷಿಣ ಕನ್ನಡ, ಧಾರವಾಡ, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕೆಲವು ನಿರ್ದಿಷ್ಟ ವರ್ಗಗಳ ಮಕ್ಕಳಿಗಾಗಿ ವಸತಿ ಶಾಲೆಗಳನ್ನು ಮಂಜೂರು ಮಾಡಲಾಗಿದೆ. ಸದರಿ ಶಾಲೆಗಳು ಶಿಕ್ಷಣ ವಂಚಿತ ನಗರ ಪ್ರದೇಶಗಳ ಮಕ್ಕಳು, ಬೆಟ್ಟ, ಗುಡ್ಡಗಾಡು, ನದಿ, ಅರಣ್ಯ ಪ್ರದೇಶ, ನಕ್ಸಲ್ ಪೀಡಿತ ಪ್ರದೇಶ, ಇತರೆ ಭೌಗೋಳಿಕ ಅಡೆತಡೆಗಳು ಇರುವ ಪ್ರದೇಶಗಳಲ್ಲಿ ಇರುವ ಮಕ್ಕಳಿಗಾಗಿ, ಶಾಲಾ ಅನುಭವ ಮಾತ್ರವಲ್ಲದೆ, ಊಟ ಮತ್ತು ವಸತಿಗಳ ಅಗತ್ಯತೆ ಇರುವ ವಯಸ್ಕರ ರಕ್ಷಣೆ ಇಲ್ಲದೆ ಸಂಕಷ್ಟದಲ್ಲಿರುವ ಅನಾಥ ಹಾಗೂ ಬೀದಿ ಮಕ್ಕಳ ರಕ್ಷಣೆ, ಪಾಲನೆ/ಪೋಷಣೆ ಹಾಗೂ ಶಾಲಾ ಅವಕಾಶಕ್ಕಾಗಿ ವಿಶೇಷವಾಗಿ ಕಸ್ತೂರ ಬಾ ಗಾಂಧಿ ಬಾಲಿಕ ವಿದ್ಯಾಲಯಗಳ ಮಾದರಿಯಲ್ಲಿ 10 ವರ್ಷ ಮೇಲ್ಪಟ್ಟ ಮಕ್ಕಳಿಗಾಗಿ (6 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ) ಪ್ರಾರಂಭಿಸಿರುವ ಸನಿವಾಸ ಶಾಲೆಗಳಾಗಿವೆ. ಪ್ರತಿ ಶಾಲೆಯಲ್ಲಿ ಗರಿಷ್ಟ 100 ಮಕ್ಕಳನ್ನು ದಾಖಲಿಸಲು ಅವಕಾಶ ಇದೆ. ಈ ಶಾಲೆಗಳಳ್ಲಿ 2013ರ ಜೂನ್ ತಿಂಗಳವರೆಗೆ ಒಟ್ಟು 328 ಮಕ್ಕಳು ದಾಖಲಾಗಿದ್ದು, ಜಿಲ್ಲಾವಾರು ದಾಖಲಾತಿ ವಿವರಗಳು ಕೆಳಗಿನಂತಿವೆ:

ಕ್ರ.ಸಂ

ಜಿಲ್ಲೆಯ ಹೆಸರು

ಬ್ಲಾಕ್ ಹೆಸರು

ಶಾಲೆ ಇರುವ ಸ್ಥಳ

ದಾಖಲಾಗಿರುವ  ಮಕ್ಕಳ ಸಂಖ್ಯೆ

01

ಬೆಂಗಳೂರು ನಗರಬೆಂಗಳೂರು (ದಕ್ಷಿಣ)Tತಲಘಟ್ಟಪುರ55

02

ದಕ್ಷಿಣ ಕನ್ನಡಬೆಳ್ತಂಗಡಿಬೆಳ್ತಂಗಡಿ91

03

ಧಾರವಾಡಹುಬ್ಬಳ್ಳಿ ಸಿಟಿಘಂಟಿಕೇರಿ ಹುಬ್ಬಳ್ಳಿ56

04

ಮೈಸೂರುಮೈಸೂರು ಉತ್ತರನಜರಾಬಾದ್63

05

ಶಿವಮೊಗ್ಗತೀರ್ಥಹಳ್ಳಿಆಗುಂಬೆ63ಒಟ್ಟು328

ಪ್ರಾಥಮಿಕ ಶಿಕ್ಷಕರ ನೇಮಕಾತಿ ಕುರಿತು ರಾಜ್ಯ ಸರ್ಕಾರದ ನೀತಿ ಹಾಗೂ ನಿಯಮಗಳು

ಶಿಕ್ಷಕರ ನೇಮಕಾತಿಯನ್ನು ಪಾರದರ್ಶಕತೆಯಿಂದ ನಡೆಸುವ ಉದ್ದೇಶದಿಂದ ರಾಜ್ಯದಲ್ಲಿ ಕೇಂದ್ರೀಕೃತ ದಾಖಲಾತಿ ಘಟಕವನ್ನು (CAC) ಸ್ಥಾಪಿಸಲಾಗಿದೆ


ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಶಿಕ್ಷಕರ ನೇಮಕಾತಿ ಮಾಡಲಾಗುತ್ತಿದೆ. ರಾಜ್ಯದಲ್ಲಿ 34 ಶೈಕ್ಷಣಿಕ ಜಿಲ್ಲೆಗಳಿದ್ದು, ಜಿಲ್ಲಾ ಉಪ ನಿರ್ದೇಶಕರು (ಆಡಳಿತ) ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅಧಿಕಾರ ಹೊಂದಿದ್ದು, ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೇಮಕಾತಿ ಪ್ರಾಧಿಕಾರಿಗಳಾಗಿರುತ್ತಾರೆ,


ಅಭ್ಯರ್ಥಿಗಳು ಪಿ.ಯು.ಸಿ.ಡಿ.ಇಡಿ. ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಸರಾಸರಿ ಶೇಕಡ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು (Provisional Selection List) ಸಿದ್ಧಪಡಿಸಲಾಗುವುದು.


ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ಮೀಸಲಾತಿ/ವಿನಾಯಿತಿ ನಿಯಮಗಳ (Reservation) ಆಧಾರದ ಮೇಲೆ ಸಿದ್ಧಪಡಿಸಿ, ಪಟ್ಟಿಯನ್ನು ಪ್ರಕಟಿಸಿ ಆಕ್ಷೇಪಣೆಗಳು ಇದ್ದಲ್ಲಿ ವ್ಯಕ್ತಪಡಿಸಲು ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುವುದು. ಶೇಕಡ 50 ರಷ್ಟು ಹುದ್ದೆಗಳು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾಗಿರುತ್ತದೆ.


ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮ ಜಿಲ್ಲಾವಾರು ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದು.


ಕಾರ್ಯನಿರ್ವಹಿಸಲು ತಮಗೆ ಅನುಕೂಲವಾದಂತಹ ಶಾಲೆಗಳನ್ನು ಆಯ್ಕೆ ಮಾಡಲು ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್ ಮೂಲಕ ಅವಕಾಶ ನೀಡಲಾಗುವುದು.


2001ನೇ ಸಾಲಿನ ನಂತರ ನೇಮಕಾತಿಯಾಗಿರುವ ಶಿಕ್ಷಕರನ್ನು ಗ್ರಾಮಾಂತರ ಪ್ರದೇಶದಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಬೇಕು. 04-05-2005ರ ದಿನಾಂಕಕ್ಕೆ ಗ್ರಾಮಾಂತರ ಪ್ರದೇಶದಲ್ಲಿ 5 ವರ್ಷ ಸೇವೆ ಪೂರೈಸಿರುವ ಶಿಕ್ಷಕರಿಗೆ ಸೇವಾ ಅವಧಿಯಲ್ಲಿ ಒಂದು ಬಾರಿ ಘಟಕದ ಹೊರಗೆ ವರ್ಗಾವಣೆ ಪಡೆಯಲು ಅವಕಾಶವಿದ್ದು, ತೀವ್ರ ಕಾಯಿಲೆ, ದೈಹಿಕ ಅಂಗವಿಕಲತೆ, ವಿಧವೆ, ಪತಿ/ಪತ್ನಿ ಸರ್ಕಾರಿ ನೌಕರರಾಗಿರುವ ಪ್ರಕರಣ ಇತ್ಯಾದಿ ಸಂದರ್ಭಗಳಿಗೆ ವಿನಾಯಿತಿ ಇರುತ್ತದೆ.


ನೇಮಕಾತಿಯಾದ ನಂತರ ಶಿಕ್ಷಕರು ತಮ್ಮ ನೇಮಕಾತಿ ಸ್ಥಳದಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಬೇಕು.


ಶಿಕ್ಷಕರ ಸ್ಥಳಾಂತರ ಸಂಬಂಧ ರಾಜ್ಯ ನೀತಿ ಹಾಗೂ ನಿಯಮಗಳು

2007ನೇ ಸಾಲಿನಿಂದ ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯಿದೆಯನ್ನು (Regulation of Teachers Transfer Act) ರಾಜ್ಯ ಸರ್ಕಾರವು ಅಳವಡಿಸಿದ್ದು, ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ಅಗತ್ಯವಿರುವ ಶಾಲೆಗಳಿಗೆ ಮರುಹಂಚಿಕೆ ಕಾರ್ಯವನ್ನು ಕೌನ್ಸಿಲಿಂಗ್ ಮೂಲಕ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯನ್ನು ಸಾಮಾನ್ಯವಾಗಿ ಶಿಕ್ಷಕರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಗಿಂತ ಮುಂಚಿತವಾಗಿ ನಡೆಸಲಾಗುತ್ತದೆ. ಕೌನ್ಸಿಲಿಂಗ್ ಮೂಲಕ ಮರುಹಂಚಿಕೆ ಕಾರ್ಯವನ್ನು ನ್ಯಾಯ ಹಾಗೂ ಪಾರದರ್ಶಕತೆಯಿಂದ ನಡೆಸಲು ಅವಕಾಶ ಸಿಗುವುದಲ್ಲದೇ ಯಾವುದೇ ರೀತಿಯ ಹಸ್ತಕ್ಷೇಪ ಮತ್ತು ತಾರತಮ್ಯವನ್ನು ತಡೆಗಟ್ಟುವ ಮೂಲಕ ಪರಿಣಾಮಕಾರಿ ಆಡಳಿತಕ್ಕೆ ಸಹಕಾರಿಯಾಗುತ್ತದೆ.

ದೂರು/ತಕರಾರುಗಳಿಗೆ ಪರಿಹಾರ

ಶಾಲಾ ಅಭಿವೃದ್ಧಿ ಹಾಗೂ ಉಸ್ತುವಾರಿ ಸಮಿತಿಯು ಶಿಕ್ಷಕರು ಅನುಭವಿಸುವ ತೊಂದರೆ, ಕುಂದು ಕೊರತೆಗಳಿಗೆ, ಶಿಕ್ಷಕರು ನೀಡಿದ ದೂರುಗಳಿಗೆ ಪರಿಹಾರವನ್ನು ನೀಡುವ ಸಂಬಂಧ ಮೊದಲನೇ ಹಂತದ ಪ್ರಾಧಿಕಾರವಾಗಿರುತ್ತದೆ.


ನೇಮಕಾತಿ, ವೇತನ, ಬಡ್ತಿ, ರಜಾ ಸೌಲಭ್ಯ ಹಾಗೂ ಸೇವೆಗೆ ಸಂಬಂಧಿಸಿದ ಇತರೆ ವಿಷಯಗಳಲ್ಲಿ ಕ್ರಮಗಳನ್ನು ಬ್ಲಾಕ್ ಹಂತದಲ್ಲಿ ಪಾರದರ್ಶಕತೆಯಿಂದ ಕೈಗೊಳ್ಳಲಾಗುತ್ತಿದೆ. ಆಕ್ಷೇಪಣೆಗಳಿದ್ದಲ್ಲಿ ಬ್ಲಾಕ್/ಜಿಲ್ಲಾ ಹಂತದ ಕಛೇರಿಯಲ್ಲಿ ಪರಿಹಾರ ಸಿಗುತ್ತದೆ ಹಾಗೂ ಯಾವುದೇ ಶಿಕ್ಷಕರು ನ್ಯಾಯಕ್ಕಾಗಿ ಮೇಲ್ಮನವಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸವಹುದಾಗಿದೆ


ಮೂಲ : ಎಸ್ ಎಸ್ ಏ ಕರ್ನಾಟಕ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ