ಭಾನುವಾರ, ಏಪ್ರಿಲ್ 30, 2017

ಅಮೆರಿಕದ ಸರ್ಜನ್ ಜನರಲ್ ಮಂಡ್ಯ ಮೂಲದ ವಿವೇಕ್ ಮೂರ್ತಿ ವಜಾ

ಅಮೆರಿಕದ ಸರ್ಜನ್‌ ಜನರಲ್‌ ಮಂಡ್ಯ ಮೂಲದ ವಿವೇಕ್‌ ಮೂರ್ತಿ ವಜಾ

ವಾಷಿಂಗ್ಟನ್‌: ಅಮೆರಿಕದ ಸರ್ಜನ್‌ ಜನರಲ್‌(ಸಾರ್ವಜನಿಕ ಆರೋಗ್ಯ ಇಲಾಖೆ ಮುಖ್ಯಸ್ಥ) ಆಗಿ ಒಬಾಮ ಆಡಳಿತದಿಂದ ನೇಮಕಗೊಂಡಿದ್ದ ಮೊದಲ ಭಾರತೀಯ-ಅಮೆರಿಕದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಕರ್ನಾಟಕದ ಮಂಡ್ಯ ಮೂಲದ  ವಿವೇಕ್‌ ಮೂರ್ತಿ (39) ಅವರನ್ನು ಟ್ರಂಪ್‌ ಆಡಳಿತ ವಜಾ ಮಾಡಿದೆ. ಈ ದಿಢೀರ್‌ ಬೆಳವಣಿಗೆಯು ಸ್ವತಃ ಆರೋಗ್ಯ ಸೇವಾ ಇಲಾಖೆಯ ನೌಕರರಿಗೂ ಅಚ್ಚರಿ ಮೂಡಿಸಿದೆ.

ಮಹತ್ವದ ಇಲಾಖೆಗೆ ಹೊಸ ನಾಯ ಕತ್ವವನ್ನು ತರುವ ಉದ್ದೇಶದಿಂದ ಅವ ರನ್ನು ಸೇವೆಯಿಂದ ವಜಾ ಮಾಡಲಾಗಿದೆ. ಅವರ ಸ್ಥಾನಕ್ಕೆ ಅವರ ಕೆಳಗೆ ಕಾರ್ಯ ನಿರ್ವಹಿಸುತ್ತಿದ್ದ ಅಡ್ಮಿರಲ್‌ ಸಿಲ್ವಿಯಾ ಟ್ರೆಂಟ್‌-ಆ್ಯಡಮ್ಸ್‌ರನ್ನು ನೇಮಕ ಮಾಡ ಲಾಗಿದೆ. ಇವರು ಅಮೆರಿಕದ ಸರ್ಜನ್‌ ಜನರಲ್‌ ಹುದ್ದೆಗೇರುತ್ತಿರುವ ಮೊದಲ ನರ್ಸ್‌ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಮೂರ್ತಿ ಎರಡನೆಯವರು: "ಮೂರ್ತಿ ಅವರನ್ನು ಹುದ್ದೆಯಿಂದ ತೆಗೆದುಹಾಕಲಾ ಗಿದೆ. ಅವರು ಕಮಿಷನ್‌x ಕಾಪ್ಸ್‌ìನ ಸದಸ್ಯರಾಗಿ ಮುಂದುವರಿಯಲಿದ್ದಾರೆ,' ಎಂದು ಆರೋಗ್ಯ ಇಲಾಖೆ ತಿಳಿಸಿದೆ. "ಥ್ಯಾಂಕ್ಯೂ ಅಮೆರಿಕ, ನಿಮ್ಮ ಸರ್ಜನ್‌ ಜನರಲ್‌ ಆಗಿ ಸೇವೆ ಮಾಡಲು ಅವಕಾಶ ಸಿಕ್ಕಿದ್ದಕ್ಕೆ. ಮುಂದೆ ನಿಮ್ಮೊಂದಿಗೆ ಹೊಸ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಉತ್ಸುಕನಾಗಿದ್ದೇನೆ,' ಎಂದು ಮೂರ್ತಿ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. 2014ರ ಡಿಸೆಂಬರ‌ಲ್ಲಿ ಮೂರ್ತಿ ಸರ್ಜನ್‌ ಜನರಲ್‌ ಆಗಿ ನೇಮಕಗೊಂಡಿದ್ದರು. ಕುತೂಹಲದ ವಿಚಾರವೆಂದರೆ, ಮೂರ್ತಿ ಅವರು ಟ್ರಂಪ್‌ ಆಡಳಿತವು ಸೇವೆಯಿಂದ ವಜಾಗೊಳಿಸುತ್ತಿರುವ 2ನೇ ಭಾರತೀಯ -ಅಮೆರಿಕನ್‌. ಇತ್ತೀಚೆಗೆ ಯುಎಸ್‌ ಆಟಾರ್ನಿ ಪ್ರೀತ್‌ ಭರಾರಾರನ್ನು ವಜಾ ಮಾಡಲಾಗಿತ್ತು.

ಯುದ್ದ ವಿಮಾನ ವಾಹಕ ನೌಕೆ ನಿರ್ಮಾಣ

ಯುದ್ಧ ವಿಮಾನ ವಾಹಕ ನೌಕೆ ನಿರ್ಮಾಣ: ಭಾರತದ ಆತುರ ಸಲ್ಲ
ಬೀಜಿಂಗ್: ಯುದ್ಧ ವಿಮಾನ ವಾಹಕ ನೌಕೆಗಳನ್ನು ನಿರ್ಮಿಸುವ ಬದಲು ಭಾರತ ತನ್ನ ಆರ್ಥಿಕ ಬೆಳವಣಿಗೆಯತ್ತ ಚಿತ್ತ ಹರಿಸಬೇಕಿದೆ ಎಂದು ಚೀನಾದ ಮಾಧ್ಯಮವೊಂದು ಹೇಳಿದೆ. ''ಯುದ್ಧ ವಿಮಾನ ವಾಹಕ ನೌಕೆ ನಿರ್ಮಿಸಲು ದೆಹಲಿ ಆತುರ ತೋರುತ್ತಿದೆ. ದೇಶವಿನ್ನೂ ಕೈಗಾರೀಕಾ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿದೆ. ಸದ್ಯ ಯುದ್ಧ ವಿಮಾನ ವಾಹಕ ಯುದ್ಧ ನೌಕೆಗಳನ್ನು ನಿರ್ಮಿಸುವ ವಾತಾವರಣ ಭಾರತದಲ್ಲಿಲ್ಲ. ಕಳೆದ ಕೆಲ ದಶಕಗಳಿಂದಲೂ ಭಾರೀ ನೌಕೆಗಳ ನಿರ್ಮಾಣದಲ್ಲಿ ಭಾರತ ಹಾಗೂ ಚೀನಾ ಭಿನ್ನ ಹಾದಿ ಹಿಡಿದಿವೆ....

ಪ್ರಾನ್ಸ್ ಅಧ್ಯಕ್ಷಿಯ ಚುನಾವಣೆ

ಫ್ರಾನ್ಸ್‌ ಅಧ್ಯಕ್ಷೀಯ ಚುನಾವಣೆ: ಲೆ ಪೆನ್‌ ಹಿಂದಿಕ್ಕಿದ ಮ್ಯಾಕ್ರನ್‌

ಪ್ಯಾರಿಸ್‌: ಫ್ರಾನ್ಸ್‌ ಅಧ್ಯಕ್ಷೀಯ ಚುನಾವಣೆಯ ಒಂದು ಹಂತದ ಮತದಾನ ಭಾನುವಾರ ಮುಕ್ತಾಯವಾಗಿದ್ದು, ಕಟ್ಟರ್‌ ಬಲಪಂಥೀಯವಾದಿ, ನ್ಯಾಷನಲ್‌ ಫ್ರಂಟ್‌ ನಾಯಕಿ ಮರೀನ್‌ ಲೆ ಪೆನ್‌ ಹಾಗೂ ರಾಜಕೀಯವಾಗಿ ಅನನುಭವಿಯಾಗಿರುವ ಮ್ಯಾಕ್ರನ್‌ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ.

ಮ್ಯಾಕ್ರನ್‌ ಶೇ.23.9ರಷ್ಟು ಮತಗಳಿಂದ ಮುನ್ನಡೆ ಸಾಧಿಸಿದ್ದರೆ, ಲೆ. ಪೆನ್‌ ಶೇ.21.4ರಷ್ಟು ಮತ ಗಳಿಸಿದ್ದಾರೆ. ಫ್ರಾನ್ಸ್‌ನ ಮುಂದಿನ ಅಧ್ಯಕ್ಷರಾಗುವತ್ತ ಮ್ಯಾಕ್ರನ್‌ ಹೆಜ್ಜೆಯಿಟ್ಟಿದ್ದು, ಅವರಿಗೆ ಭಾರೀ ಜನಬೆಂಬಲ ವ್ಯಕ್ತವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, "ಫ್ರೆಂಚರ ಭಯ, ಹತಾಶೆ ಮತ್ತು ನೋವುಗಳನ್ನು ನಾನು ಆಲಿಸಿದ್ದೇನೆ ಮತ್ತು ಅರಿತಿದ್ದೇನೆ. ಅವರು ಬದಲಾವಣೆಯನ್ನು ಬಯಸಿದ್ದಾರೆ ಎಂಬುದನ್ನೂ ನಾನು ಮನಗಂಡಿದ್ದೇನೆ,' ಎಂದಿದ್ದಾರೆ.
ಮೇ 7ರಂದು ಎರಡನೇ ಸುತ್ತಿನ ಮತದಾನ ನಡೆಯಲಿದೆ.

ಇದೇ ವೇಳೆ, ಕಟ್ಟರ್‌ ಬಲಪಂಥೀಯವಾದಿ ನಾಯಕಿಯಾಗಿರುವ ಲೆ ಪೆನ್‌ ಅವರು ವಲಸಿಗ ವಿರೋಧಿ, ಐರೋಪ್ಯ ಒಕ್ಕೂಟ ವಿರೋಧಿ ಸಿದ್ಧಾಂತದಿಂದ ಜನಪ್ರಿಯರಾದವರು. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರಂತೆ ಪ್ರಚಾರದುದ್ದಕ್ಕೂ "ಫ್ರಾನ್ಸ್‌ ಫ‌ಸ್ಟ್‌' ನೀತಿಯನ್ನು ಅನುಸರಿಸುವುದಾಗಿ ಘೋಷಿಸುತ್ತಾ ಬಂದವರು.

ಬಾಹ್ಯಾಕಾಶ ವಾಸ : ದಾಖಲೆ ಮುರಿದ ಪೆಗ್ಗಿ

ಬಾಹ್ಯಾಕಾಶ ವಾಸ :ದಾಖಲೆ ಮುರಿದ ಪೆಗ್ಗಿ

ವಾಷಿಂಗ್ಟನ್ :
ನಾಸಾದ ಗಗನಯಾತ್ರಿ ಪೆಗ್ಗಿ ವೈಟ್ಸನ್ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 534 ದಿನಗಳ ಕಾಲ ವಾಸಿಸುವ ಮೂಲಕ ಜೆಫ್ ವಿಲಿಯಮ್ಸ್ ರ ದಾಖಲೆಯನ್ನು ಮುರಿದಿದ್ದಾರೆ.

2008 ರಲ್ಲಿ ಬಾಹ್ಯಾಕಾಶ ನಿಲ್ದಾಣದ ಮೊದಲ ಮಹಿಳಾ ಕಮಾಂಡ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ವೈಟ್ಸನ್ ಅವರು ಕಳೆದ ವರ್ಷ ನ.17 ರಂದು 377 ದಿನಗಳ ಅವಧಿಗೆ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳಸಿದ್ದ ವೈಟ್ಸನ್, ಜೆಫ್ ವಿಲಿಯಮ್ಸ್ ರ 534 ದಿನ 2 ಗಂಟೆ ಮತ್ತು 48 ನಿಮಿಷಗಳ ದಾಖಲೆಯನ್ನು ಅವರು ಮುರಿದಿದ್ದಾರೆ. ಮಾರ್ಚ್ ನಲ್ಲಿ ವಾಪಸ್ ಮರಳಿ ಭೂಮಿಗೆ ಬರಬೇಕಿದ್ದ ಅವರ ಯಾನವನ್ನು ಸೆಪ್ಟಂಬರ್ ವರೆಗೆ ವಿಸ್ತರಿಸಲಾಗಿದೆ. ಅವರು ಭೂಮಿಗೆ ಮರಳುವ ವೇಳೆಗೆ 650 ದಿನಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸಿಸಿದ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ವೈಟ್ಸನ್ ಅವರು ನಾಸಾದಲ್ಲಿ 1980 ರಲ್ಲಿ ವೃತ್ತಿ ಜೀವನ ಆರಂಭಿಸಿ ಹಲವಾರು ಸಂಶೋಧನೆಗಳಲ್ಲಿ ಪಾಲ್ಗೊಂಡಿದ್ದರು. 1992 ರಲ್ಲಿ ಶಟಲ್ ಮೀರ್ ಯೋಜನೆಯಲ್ಲಿ ಕೆಲಸ ನಿರ್ವಹಿಸಿದ ಅವರು 2002 ರಲ್ಲಿ ಎಕ್ಸೆಪೆಡಿಷನ್-5 ಯೋಜನೆಯಡಿ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳಸಿದ್ದರು. 184 ದಿನಗಳ ಕಾಲ ತಂಗಿದ್ದ ಅವರು, 21 ವೈಜ್ಞಾನಿಕ ಸಂಶೋಧನೆಗಳಲ್ಲಿ ತೊಡಗಿದ್ದು. ನಾಸಾದ ಮೊದಲ ವಿಜ್ಞಾನ ಅಧಿಕಾರಿಯಾಗಿದ್ದರು.

ಕಳೆದ ನವೆಂಬರ್ ನಿಂದ ಐಎಸ್ ಎಸ್ ಗೆ ಮರಳಿರುವ ಅವರು 53 ಗಂಟೆಗಳ ಕಾಲ ಅಂತರಿಕ್ಷ ನಡಿಗೆ ಕೈಗೊಂಡಿದ್ದಾರೆ. ಈ ನಡುವೆ 2009 ರಲ್ಲಿ ಗಗನಯಾತ್ರಿಗಳ ಕಚೇರಿಯಲ್ಲಿ ಮುಖ್ಯಸ್ಥೆಯಾಗಿ ನೇಮಕಗೊಂಡ ಮೊದಲ ಮಹಿಳೆಯಾಗಿದ್ದರು. ಈಗ ಮತ್ತೆ ಅಂತರಿಕ್ಷ ನಡಿಗೆಗೆ ಸನ್ನದಾರಾಗಿರುವ ಅವರು ಹೊಸ ದಾಖಲೆ ನಿರ್ಮಿಸುವ ಉದ್ದೇಶ ಹೊಂದಿದ್ದಾರೆ.

ಭಾರತದ 101 ಈ ಅಜ್ಜಿ 100 ಮೀಟರ್ ಓಟದಲ್ಲಿ ಚಿನ್ನ ಗೆದ್ದಿದ್ದಾಳೆ!

ಭಾರತದ 101ರ ಈ ಅಜ್ಜಿ 100 ಮೀಟರ್ ಓಟದಲ್ಲಿ ಚಿನ್ನ ಗೆದಿದ್ದಾಳೆ!

ಆಕ್ಲೆಂಡ್:
ಇಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಕ್ರೀಡಾಕೂಟದ 100 ಮೀಟರ್ ಓಟದಲ್ಲಿ 101 ವರ್ಷದ ಮನ್ ಕೌರ್ ಚಿನ್ನದ ಪದಕವನ್ನು ಭಾರತದ ಶತಾಯುಷಿ ಅಜ್ಜಿ ವಿದೇಶದಲ್ಲಿ ತಮ್ಮದಾಗಿಸಿಕೊಂಡಿದ್ದಾರೆ.

ಚಂಡೀಗಢ್ದ ಅಜ್ಜಿ ಮನ್ ಕೌರ್ ಅವರು 100 ಮೀಟರ್ಸ್ ಓಟದ ಸ್ಪರ್ಧೆಯನ್ನು ಕೇವಲ 1 ನಿಮಿಷ 14 ಸೆಕೆಂಡ್ಗಳಲ್ಲಿ ಪೂರ್ತಿಗೊಳಿಸಿದ್ದಾರೆ. ಇಡೀ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ ಮನ್ ಕೌರ್ ಅವರೇ ಹಿರಿಯರಾಗಿದ್ದರು.

200 ಮೀಟರ್ ಓಟ, ಶಾಟ್ಪುಟ್ ಹಾಗೂ ಜಾವಲಿನ್ ಎಸೆತ ಸ್ಪರ್ಧೆಗಳಲ್ಲಿಗೂ ಅಜ್ಜಿ ಮನ್ ಕೌರ್ ನೋಂದಾಣಿ ಮಾಡಿಸಿದ್ದು, ಬುಧವಾರ ನಡೆಯುವ ಈ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬೇರೆ ಬೇರೆ ರಾಷ್ಟ್ರಗಳಲ್ಲಿ ನಡೆದ ಮಾಸ್ಟರ್ಸ್ ಕ್ರೀಡಾಕೂಟಗಳಲ್ಲಿ ಅಜ್ಜಿ ಮನ್ ಕೌರ್ 20ಕ್ಕೂ ಹೆಚ್ಚು ಪದಕಗಳನ್ನು ಜಯಿಸಿದ್ದಾರೆ.

ಇವರ ಪುತ್ರ ಗುರುದೇವ್ ಸಿಂಗ್. ಗುರುದೇವ್ ಸಹ ಓಟಗಾರರಾಗಿದ್ದು, ಇವರ ಕುಟುಂಬ ಕೆನಡಾದಲ್ಲಿ ನೆಲೆಸಿದ್ದಾರೆ. ತಮ್ಮ ಸಾಧನೆ ಬಗ್ಗೆ ಮಾಧ್ಯಮಗಳ ಜೊತೆ ಅಭಿಪ್ರಾಯ ಹಂಚಿಕೊಂಡಿರುವ ಮನ್ ಕೌರ್ ನನ್ನ ಮಗ ಹೇಳಿದ್ದನ್ನು ಮಾಡುತ್ತೇನೆ. ಮಗನಿಂದ ನಾನು ನಿತ್ಯವೂ ತರಬೇತಿ ಪಡೆಯುತ್ತಿದ್ದೇನೆ. ನಾನು ದೈಹಿಕವಾಗಿ ಸಮರ್ಥಳಾಗಿದ್ದು, ನನ್ನ ಜೀವ ಇರೋವರಿಗೂ ನಾನು ಓಡುತ್ತಲೇ ಇರುತ್ತೇನೆ' ಎಂದು ಹೇಳುತ್ತಾರೆ.

ಚಿಲಿಯಲ್ಲಿ ಭೂಕಂಪನ

ಚಿಲಿಯಲ್ಲಿ ಭೂಕಂಪನ: ರಿಕ್ಟರ್ ಮಾಪಕದಲ್ಲಿ 6.9 ತೀವ್ರತೆ ದಾಖಲು
ಸ್ಯಾಂಟಿಯಾಗೋ: ಚಿಲಿಯಲ್ಲಿ ಮಂಗಳವಾರ ಬೆಳಗ್ಗೆ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.9ರಷ್ಟು ತೀವ್ರತೆ ದಾಖಲಾಗಿದೆ ಎಂದು ಅಮೆರಿಕ ಭೂಕಂಪನ ಮಾಪನ ಕೇಂದ್ರ ತಿಳಿಸಿದೆ. ಚಿಲಿ ದೇಶದ ಕೇಂದ್ರ ಭಾಗದಲ್ಲಿ ವಲ್ಪರೈಸೋ ನಗರದ 38 ಕಿ.ಮೀ ಆಳದಲ್ಲಿ ಕಂಪನದ ಕೇಂದ್ರ ಬಿಂದು ದಾಖಲಾಗಿದ್ದು, ಕರಾವಳಿ ತೀರಗಳಲ್ಲಿ ಭಾರಿ ಪ್ರಮಾಣದ ಅಲೆಗಳು ಏಳಲಿವೆ. ಸುನಾಮಿ ಎಚ್ಚರಿಕೆ ನೀಡದ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಕರಾವಳಿ ತೀರದ ನಿವಾಸಿಗಳು ಎತ್ತರದ ಪ್ರದೇಶಕ್ಕೆ ತೆರಳುವಂತೆ ಸೂಚನೆ...

ಅಮೆರಿಕವನ್ನು ಧಿಕ್ಕರಿಸಿ ಉ.ಕೊರಿಯ ಕ್ಷಿಪಣಿ ಪ್ರಯೋಗ

ಅಮೆರಿಕವನ್ನು ಧಿಕ್ಕರಿಸಿ ಉ. ಕೊರಿಯ ಕ್ಷಿಪಣಿ ಪ್ರಯೋಗ

ಸಿಯೋಲ್, ಎ. 29: ಉತ್ತರ ಕೊರಿಯ ಶನಿವಾರ ಮಧ್ಯಮ ವ್ಯಾಪ್ತಿಯ ಪ್ರಕ್ಷೇಪಕ ಕ್ಷಿಪಣಿಯೊಂದರ ಪರೀಕ್ಷಾ ಹಾರಾಟ ನಡೆಸಿದೆಯಾದರೂ, ಅದು ವಿಫಲಗೊಂಡಿದೆ ಎಂದು ದಕ್ಷಿಣ ಕೊರಿಯ ಮತ್ತು ಅಮೆರಿಕ ಹೇಳಿವೆ.

ಇದು ಈ ತಿಂಗಳೊಂದರಲ್ಲೇ ಉತ್ತರ ಕೊರಿಯ ನಡೆಸಿದ ಮೂರನೆ ವಿಫಲ ಕ್ಷಿಪಣಿ ಪ್ರಾಯೋಗಿಕ ಹಾರಾಟವಾಗಿದೆ. ಆದರೆ, ಸಮೀಪದ ಸಮುದ್ರದಲ್ಲೇ ಅಮೆರಿಕದ ವಿಮಾನವಾಹಕ ಯುದ್ಧ ನೌಕೆಗಳು ಯುದ್ಧಾಭ್ಯಾಸ ನಡೆಸುತ್ತಿರುವ ಸಮಯದಲ್ಲೇ ನಡೆಸಲಾದ ಪ್ರಾಯೋಗಿಕ ಪರೀಕ್ಷೆಯನ್ನು, ಅಮೆರಿಕಕ್ಕೆ ಉತ್ತರ ಕೊರಿಯದ ನೀಡಿದ ಸ್ಪಷ್ಟ ಧಿಕ್ಕಾರದ ಸಂದೇಶ ಎಂಬುದಾಗಿ ಪರಿಗಣಿಸಲಾಗಿದೆ.

ಉತ್ತರ ಕೊರಿಯವು ತನ್ನ ಪ್ರಕ್ಷೇಪಕ ಕ್ಷಿಪಣಿಗಳಲ್ಲಿ ಪರಮಾಣು ಶಸ್ತ್ರಗಳನ್ನು ಅಳವಡಿಸುವ ಸಾಧ್ಯತೆಯಿರುವುದರಿಂದ, ಆ ದೇಶ ನಡೆಸುವ ಕ್ಷಿಪಣಿ ಪರೀಕ್ಷೆಗಳನ್ನು ವಿಶ್ವಸಂಸ್ಥೆ ನಿಷೇಧಿಸಿದೆ.
ಉತ್ತರ ಕೊರಿಯದ ಪರಮಾಣು ಬೆದರಿಕೆಯನ್ನು ಉಗ್ರ ನಿಲುವಿನ ಮೂಲಕ ಎದುರಿಸುವ ಬದಲು, ವಿಶ್ವಸಂಸ್ಥೆಯಲ್ಲಿ ರಾಜತಾಂತ್ರಿಕವಾಗಿ ಎದುರಿಸಲು ಅಮೆರಿಕ ಮನಸ್ಸು ಮಾಡಿದ ಬೆನ್ನಿಗೇ ನೂತನ ಪರೀಕ್ಷೆ ನಡೆದಿದೆ.

ಈ ಘಟನೆಗೆ ಪ್ರತಿಕ್ರಿಯಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘‘ಉತ್ತರ ಕೊರಿಯ ಇಂದು ಕ್ಷಿಪಣಿಯೊಂದನ್ನು ಪರೀಕ್ಷೆ ನಡೆಸುವ ಮೂಲಕ ಚೀನಾ ಹಾಗೂ ಅದರ ಅತ್ಯಂತ ಗೌರವಾನ್ವಿತ ಅಧ್ಯಕ್ಷರ ದ ಆಶಯಗಳಿಗೆ ಚ್ಯುತಿ ತಂದಿದೆ. ಅದು ಸರಿಯಲ್ಲ!’’ ಎಂದು ಟ್ವೀಟ್ ಮಾಡಿದ್ದಾರೆ.

ಅಟ್ಲಾಂಟಕ್ಕೆ ನೀಡಿದ ಒಂದು ದಿನದ ಭೇಟಿಯ ಬಳಿಕ ಶ್ವೇತಭವನಕ್ಕೆ ಮರಳಿದ ಅವರು, ಕ್ಷಿಪಣಿ ಹಾರಾಟಕ್ಕೆ ಸಂಬಂಧಿಸಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ.

ಉತ್ತರ ಕೊರಿಯದ ಕ್ಷಿಪಣಿ ಹಾರಾಟದ ಹೊತ್ತುಗಾರಿಕೆ ಮಹತ್ವ ಪಡೆದುಕೊಂಡಿದೆ. ಕೇವಲ ಗಂಟೆಗಳ ಮೊದಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪ್ಯಾಂಗ್‌ಯಾಂಗ್‌ನ ಶಸ್ತ್ರಾಸ್ತ್ರ ಕಾರ್ಯಕ್ರಮಗಳ ಬಗ್ಗೆ ಸಚಿವ ಮಟ್ಟದ ಸಭೆ ನಡೆದಿತ್ತು.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್ ಅಧ್ಯಕ್ಷತೆ ವಹಿಸಿದ ಸಭೆಯನ್ನು ಉತ್ತರ ಕೊರಿಯ ಅಧಿಕಾರಿಗಳು ಬಹಿಷ್ಕರಿಸಿದ್ದರು.

71 ಕಿ.ಮೀ. ಎತ್ತರ ತಲುಪಿದ ಬಳಿಕ ಪತನಗೊಂಡಿತು

ಕ್ಷಿಪಣಿಯು ಹಲವು ನಿಮಿಷಗಳ ಕಾಲ ಹಾರಿತು ಹಾಗೂ 71 ಕಿಲೋಮೀಟರ್‌ನಷ್ಟು ಗರಿಷ್ಟ ಎತ್ತರವನ್ನು ತಲುಪಿ ಪತನಗೊಂಡಿತು ಎಂದು ದಕ್ಷಿಣ ಕೊರಿಯದ ಸೇನಾ ಮುಖ್ಯಸ್ಥ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಆದರೆ, ಕ್ಷಿಪಣಿ ಎಷ್ಟು ದೂರ ಹಾರಿತು ಎಂಬ ಕುರಿತ ಮಾಹಿತಿಯನ್ನು ಅವರು ನೀಡಿಲ್ಲ. ಆದರೆ, ಅದು ಮಧ್ಯಮ ವ್ಯಾಪ್ತಿಯ ಕೆಎನ್-17 ಪ್ರಕ್ಷೇಪಕ ಕ್ಷಿಪಣಿಯಾಗಿರುವ ಸಾಧ್ಯತೆಯಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದರು.

ಫೆಸಿಫಿಕ್ ಸಾಗರ ಪ್ರದೇಶದಲ್ಲಿ ಅಮೇರಿಕದಿಂದ ಕ್ಷಿಪಣಿ ಪರೀಕ್ಷೆ

ಫೆಸಿಫಿಕ್ ಸಾಗರ ಪ್ರದೇಶದಲ್ಲಿ ಅಮೆರಿಕದಿಂದ ಕ್ಷಿಪಣಿ ಪರೀಕ್ಷೆ

ನ್ಯೂಸ್ ಡೆಸ್ಕ್ :
ಅಮೆರಿಕ ಮತ್ತು ಉತ್ತರ ಕೊರಿಯಾಗಳು ಪರಸ್ಪರ ಆಕ್ರಮಣಕಾರಿ ನಿಲುವು ತಳೆದಿರುವ ರೀತಿಯಲ್ಲಿ ಅಮೆರಿಕದ ವಾಯುಪಡೆಯು ಫೆಸಿಫಿಕ್ ಸಾಗರ ಪ್ರದೇಶದಲ್ಲಿ ದೂರವ್ಯಾಪ್ತಿಯ ಕ್ಷಿಪಣಿ ಪರೀಕ್ಷೆ ನಡೆಸಿದೆ.

ಈ ಕ್ಷಿಪಣಿಯು ಪರಮಾಣು ಬಾಂಬು ಕೊಂಡೊಯ್ಯಬಲ್ಲ ಸಾಮರ್ಥ್ಯ ಹೊಂದಿದ್ದು, ಪರೀಕ್ಷೆಯ ಸಂದರ್ಭದಲ್ಲಿ ಯಾವುದೇ ಸಿಡಿತಲೆ ಜೋಡಿಸಿರಲಿಲ್ಲ. ಕ್ಷಿಪಣಿಯು 4200 ಕಿ.ಮೀ. ಗಳಷ್ಟು ದೂರ ಕ್ರಮಿಸಿ ನಂತರ ಸಮುದ್ರಕ್ಕೆ ಅಪ್ಪಳಿಸಿತು. ಈ ಸಂದರ್ಭದಲ್ಲಿ ಉತ್ತರ ಕೊರಿಯಾದ ದಾಳಿಯಿಂದ ದಕ್ಷಿಣ ಕೊರಿಯಾವನ್ನು ರಕ್ಷಿಸುವ ನಿಟ್ಟಿನಲ್ಲಿ ಅಮೆರಿಕವು ದಕ್ಷಿಣ ಕೊರಿಯಾದ ಸುತ್ತಲೂ ಕ್ಷಿಪಣಿ ರಕ್ಷಣಾ ತಂತ್ರಜ್ಞಾನ ವ್ಯವಸ್ಥೆ ಅಳವಡಿಸುತ್ತಿದೆ.

12000 ಕಿ.ಮೀ. ಪ್ರಯಾಣಿಸಿ ಚೀನ ತಲುಪಿದ ರೈಲು

12000ಕಿ.ಮೀ. ಪ್ರಯಾಣಿಸಿ ಚೀನ ತಲುಪಿದ ರೈಲು

ಬೀಜಿಂಗ್‌: ಬ್ರಿಟನ್‌ನಿಂದ ಚೀನಕ್ಕೆ ನೇರ ಸಂಪರ್ಕ ಕಲ್ಪಿಸುವ ಸರಕು ಸಾಗಣೆ ರೈಲು ಇದೇ ಮೊದಲ ಬಾರಿಗೆ 12 ಸಾವಿರ ಕಿ.ಮೀ. ಪ್ರಯಾಣಿಸಿ ಚೀನದ ಝೆಜಿಯಾಂಗ್‌ ಪ್ರಾಂತ್ಯದ ಇವು ನಗರವನ್ನು ತಲುಪಿದೆ. ಕಳೆದ ಜನವರಿಯಲ್ಲಿ  ಯಿವುನಿಂದ ಲಂಡನ್‌ಗೆ ಸರಕು ಹೊತ್ತ ರೈಲು ಸಾಗಿದ್ದು, ಇದೀಗ ಲಂಡನ್‌ನಿಂದ ಸರಕು ಹೊತ್ತು ವಾಪಸಾಗಿದೆ. ಒಟ್ಟು 20 ದಿನಗಳ ಯಾತ್ರೆಯನ್ನು ಈ ರೈಲು ಮಾಡಿದ್ದು, ಫ್ರಾನ್ಸ್‌, ಬೆಲ್ಜಿಯಂ, ಜರ್ಮನಿ, ಬೆಲರಸ್‌, ಪೋಲೆಂಡ್‌, ರಷ್ಯಾ, ಕಜಕಿಸ್ತಾನದ ಮೂಲಕ ಹಾದು ಬಂದಿದೆ. ಈ ರೈಲಿನಲ್ಲಿ ವಿಸ್ಕಿ, ಮಕ್ಕಳ ಹಾಲು, ಔಷಧ ತಯಾರಿಕಾ ಯಂತ್ರಗಳು ಇದ್ದವು. ಪ್ರಾಚೀನ ರೇಷ್ಮೆ ವ್ಯಾಪಾರದ ಮಾರ್ಗದಲ್ಲೇ ಈ ರೈಲು ಹಾದುಹೋಗುತ್ತದೆ.

ಗೂಗಲ್ ಸಿಇಒ ಸುಂದರ ಪಿಚೈ ವಾರ್ಷಿಕ ವೇತನ

ಗೂಗಲ್ ಸಿಇಒ ಸುಂದರ್ ಪಿಚೈ 2016ರ ವಾರ್ಷಿಕ ವೇತನ ಎಷ್ಟು ಗೊತ್ತೆ?

ನವದೆಹಲಿ, ಏಪ್ರಿಲ್ 30 : ಭಾರತದ ಚೆನ್ನೈ ಮೂಲದ 44 ವರ್ಷದ ಗೂಗಲ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಸುಂದರ್ ಪಿಚೈ ಅವರ ವೇತನದಲ್ಲಿ ಭಾರೀ ಏರಿಕೆಯಾಗಿದೆ.

2015ಕ್ಕೆ ಹೋಲಿಸಿದರೆ 2016ರ ವೇತನ ದುಪ್ಪಟ್ಟಾಗಿದೆ. 2016ಕ್ಕೆ ಅವರು 200 ಮಿಲಿಯನ್ ಡಾಲರ್(ಸುಮಾರು 1285.5 ಕೋಟಿ ರು) ವೇತನ ಪಡೆದಿದ್ದಾರೆ. 2015ರಲ್ಲಿ ಅವರು 99.8 ಮಿಲಿಯನ್ ಡಾಲರ್ ವೇತನವನ್ನು ಪಡೆದಿದ್ದರು.

ಪಿಚೈ ನೇತೃತ್ವದಲ್ಲಿ ಬಿಡುಗಡೆಯಾದ ಹೊಸ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಯಶಸ್ವಿಯಾಗಿದ್ದನ್ನು ಪರಿಗಣಿಸಿ ವೇತನವನ್ನು ಏರಿಕೆ ಮಾಡಲಾಗಿದೆ. [ಚಿತ್ರಗಳು : ಗಲ್ಲಿಯಲ್ಲಿ ಕ್ರಿಕೆಟ್ ಆಡಿದ ಗೂಗಲ್ ಸಿಇಒ ಸುಂದರ್ ಪಿಚೈ]

ಗೂಗಲ್ ಕಂಪೆನಿಯು 2016ರಲ್ಲಿ ತನ್ನದೇ ಹೊಸ ಸ್ಮಾರ್ಟ್ಫೋನ್, ವರ್ಚುವಲ್ ರಿಯಾಲಿಟಿ ಹೆಡ್ಸೆಟ್ ಇತ್ಯಾದಿ ಉತ್ಪನ್ನಗಳನ್ನು ಬಿಡುಗಡೆಗೊಳಿಸಿತ್ತು.
ಈ ಎಲ್ಲ ಬೆಳವಣಿಗೆಯಲ್ಲಿ ಪಿಚೈ ಅವರ ಮಹತ್ತರ ಪಾತ್ರ ಪರಿಗಣಿಸಿ ವೇತನ ಏರಿಕೆಯಾಗಿದೆ.

ಪಿಚೈ ಮುಖ್ಯಸ್ಥರಾದ ಬಳಿಕ ಯೂಟ್ಯೂಬ್ ವ್ಯವಹಾರ ಹಾಗೂ ಜಾಹೀರಾತು ಆದಾಯದಲ್ಲಿ ದೊಡ್ಡ ಮಟ್ಟಿನ ಏರಿಕೆ ದಾಖಲಿಸಿತು.

ಬಾಹ್ಯಾಕಾಶ ರಾಜತಾಂತ್ರಿಕತೆ

ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಪ್ರಧಾನಿ ಮೋದಿಯ 'ಬಾಹ್ಯಾಕಾಶ ರಾಜತಾಂತ್ರಿಕತೆ'

ನವದೆಹಲಿ: ಮೇ.5 ರಂದು ಶ್ರೀಹರಿಕೋಟಾದಿಂದ ಸಂವಹನ ಉಪಗ್ರಹ (ಜಿಎಸ್ಎಟಿ-9) ಉಡಾವಣೆಯಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿದ್ದ ದಕ್ಷಿಣ ಏಷ್ಯಾ ಉಪಗ್ರಹ ಯೋಜನೆ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ.

ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಸಂವಹನ ಉಪಗ್ರಹ ಉಡಾವಣೆಯಾಗಲಿದ್ದು, ನೆರೆ ರಾಷ್ಟ್ರಗಳಿಗೆ ಭಾರತ ಗಿಫ್ಟ್ ನೀಡುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹಿಂದೆಂದೂ ಮಾಡಿರದ ಸಾಧನೆಗೆ ಸಜ್ಜುಗೊಂಡಿದೆ. ಈ ಬಗ್ಗೆ ವಿದೇಶಾಂಗ ಇಲಾಖೆಯ ವಕ್ತಾರ ಗೋಪಾಲ್ ಬಗ್ಲೆ ಪ್ರತಿಕ್ರಿಯೆ ನೀಡಿದ್ದು, ನೆರೆಹೊರೆ ಮೊದಲು (ನೈಬರ್ ಹುಡ್ ಫಸ್ಟ್) ಎಂಬ ತತ್ವವನ್ನು ವಾಯುಮಂಡಲವನ್ನೂ ಮೀರಿ ವಿಸ್ತರಿಸಲಾಗಿದೆ. ನೆರೆಯ ರಾಷ್ಟ್ರಗಳಿಗೆ ಉಚಿತವಾಗಿ ಸಂವಹನ ಉಪಗ್ರಹ ಬಳಕೆ ಮಾಡಲು ಅವಕಾಶ ನೀಡಿರುವುದಕ್ಕೆ ಬಾಹ್ಯಾಕಾಶ ಜಗತ್ತಿನಲ್ಲಿ ಪರ್ಯಾಯ ಯಾವುದೂ ಇಲ್ಲ ಎಂದು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದ ದಕ್ಷಿಣ ಏಷ್ಯಾ ಉಪಗ್ರಹ ಯೋಜನೆ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
2014ರಲ್ಲಿ ಕಠ್ಮಂಡುವಿನಲ್ಲಿ ನಡೆದ ಸಾರ್ಕ್ ರಾಷ್ಟ್ರಗಳ ಸಮ್ಮೇಳನದಲ್ಲಿ ಸಾರ್ಕ್ ರಾಷ್ಟ್ರಗಳಿಗಾಗಿಯೇ ಪ್ರತ್ಯೇಕ ಉಪಗ್ರಹವನ್ನು ಉಡಾವಣೆ ಮಾಡುವುದರ ಬಗ್ಗೆ ಘೋಷಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸಂವಹನ ಉಪಗ್ರಹ ನೆರೆ ರಾಷ್ಟ್ರಗಳಿಗೆ ಭಾರತ ನೀಡುತ್ತಿರುವ ಉಡುಗೊರೆ ಎಂದಿದ್ದರು. 

ಕೆಂಪು ದೀಪ ನಿಷೇಧದ ಸಂಸ್ಕೃತಿ

ವಿಐಪಿ ಸಂಸ್ಕೃತಿಯ ಮನೋಸ್ಥಿತಿಯ ಅಂತ್ಯ ಕೆಂಪುದೀಪ ನಿಷೇಧದ ಉದ್ದೇಶ:ಪ್ರಧಾನಿ

ಹೊಸದಿಲ್ಲಿ,ಎ.30: ಕೆಲವು ಜನರ ಮನಸ್ಸಿನಲ್ಲಿರುವ ವಿಐಪಿ ಸಂಸ್ಕೃತಿಯನ್ನು ತೊಡೆದು ಹಾಕುವುದು ವಾಹನಗಳ ಮೇಲೆ ಕೆಂಪುದೀಪಗಳನ್ನು ನಿಷೇಧಿಸಿರುವ ನಿರ್ಧಾರದ ಹಿಂದಿನ ಉದ್ದೇಶವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ತನ್ನ ಮಾಸಿಕ ‘ಮನ್ ಕಿ ಬಾತ್ ’ರೇಡಿಯೊ ಕಾರ್ಯಕ್ರಮದಲ್ಲಿ ಹೇಳಿದರು. ವಿಐಪಿಯ ಬದಲು ‘ಇಪಿಐ ಅಥವಾ ಎವ್ವೆರಿ ಪರ್ಸನ್ ಈಸ್ ಇಂಪಾರ್ಟಂಟ್ (ಪ್ರತಿಯೊಬ್ಬನೂ ಮುಖ್ಯ ವ್ಯಕ್ತಿ)’ ಎಂಬ ಪರಿಕಲ್ಪನೆ ಮೂಡಬೇಕಿದೆ ಎಂದರು. ಕೆಂಪುದೀಪ ನಿಷೇಧ ಮೇ 1ರಿಂದ ಜಾರಿಗೆ ಬರಲಿದೆ.

ದೇಶದಲ್ಲಿಯ ಎಲ್ಲ 125 ಕೋಟಿ ಜನರೂ ಸಮಾನ ವೌಲ್ಯ ಮತ್ತು ಮಹತ್ವವನ್ನು ಹೊಂದಿದ್ದಾರೆ ಎಂದು ಒತ್ತಿ ಹೇಳಿದ ಅವರು, ಜನರಿಗೆ ವಿಐಪಿ ಸಂಸ್ಕೃತಿಯ ಬಗ್ಗೆ ಇಷ್ಟೊಂದು ತಾತ್ಸಾರವಿದೆ ಎನ್ನುವುದು ಕೆಂಪುದೀಪ ನಿಷೇಧಿಸುವ ನಿರ್ಧಾರ ಕೈಗೊಳ್ಳುವ ಮುನ್ನ ತನಗೆ ಗೊತ್ತಿರಲಿಲ್ಲ ಎಂದರು.

ಕೆಂಪುದೀಪವು ವಿಐಪಿ ಸಂಸ್ಕೃತಿಯ ಸಂಕೇತವಾಗಿದೆ ಮತ್ತು ಅದನ್ನು ಬಳಸುವವರ ಮನಸ್ಸಿನಲ್ಲಿ ತಾವು ಇತರರಿಗಿಂತ ಶ್ರೇಷ್ಠರು ಎನ್ನುವ ಮಿಥ್ಯೆ ಬೇರೂರಿಬಿಟ್ಟಿದೆ ಎಂದ ಅವರು, ಕೆಂಪುದೀಪ ಈಗ ಕಣ್ಮರೆಯಾಗುತ್ತಿದ್ದರೂ ಇದರಿಂದಾಗಿ ಕೆಲವರ ಮನಸ್ಸಿನಲ್ಲಿ ಬೇರೂರಿರುವ ವಿಐಪಿ ಸಂಸ್ಕೃತಿಯೂ ತೊಲಗಿದೆ ಎಂದು ಹೇಳುವಂತಿಲ್ಲ ಎಂದರು.

ಕೆಂಪುದೀಪ ನಿಷೇಧವು ಆಡಳಿತಾತ್ಮಕ ನಿರ್ಧಾರವಾಗಿದೆ ಎಂದ ಮೋದಿ, ಆದರೆ ಮನಸ್ಸುಗಳಲ್ಲಿ ಬೇರೂರಿರುವ ವಿಐಪಿ ಸಂಸ್ಕೃತಿಯನ್ನೂ ನಿರ್ಮೂಲಿಸುವ ಪ್ರಯತ್ನಗಳೂ ನಡೆಯಬೇಕಿವೆ ಎಂದರು. ನಾವೆಲ್ಲರೂ ಒಂದಾಗಿ ಪ್ರಯತ್ನಿಸಿದರೆ ಇದು ಅಸಾಧ್ಯವೇನಲ್ಲ ಎಂದು ಅವರು ನುಡಿದರು.

ಗುರುವಾರ, ಏಪ್ರಿಲ್ 27, 2017

ಪ್ರಚಲಿತ ವಿದ್ಯಮಾನ ಪ್ರಶ್ನೋತ್ತರಗಳು

ಗೋವು ಹತ್ಯೆ ಮಾಡುವವರಿಗೆ ಜೀವಾವಧಿ ಶಿಕ್ಷೆ ವಿಧಿಸುವ
ಕಾನೂನು ಜಾರಿಗೆ ತರುತ್ತಿರುವ ಮೊದಲ ರಾಜ್ಯ ಯಾವುದು?
a) ಗುಜರಾತ್✔✔✔
b) ಅರುಣಾಚಲಪ್ರದೇಶ
c) ಅಸ್ಸಾಂ
d) ಕರ್ನಾಟಕ
.
ದಿ ಬಿಗ್​ಬೆಂಡ್ ಹೆಸರಿನ ಯು ಟರ್ನ್ ಮಾದರಿಯ ಕಟ್ಟಡ
ನಿರ್ಮಾಣ ಯೋಜನೆ ರೂಪಗೊಂಡಿದ್ದು ಇದು ಈ ಕೆಳಗಿನ
ಯಾವ ಸ್ಥಳದಲ್ಲಿ ತಲೆ ಎತ್ತಲಿದೆ?
a) ಫ್ರಾನ್ಸ್
b) ಪ್ಯಾರಿಸ್
c) ನ್ಯೂಯಾರ್ಕ್✔✔✔
d) ಲಂಡನ್
.
ನ್ಯೂ ಡೆವೆಲೆಪ್ ಮೆಂಟ್ ಬ್ಯಾಂಕ್ (NDB) ನ ಎರಡನೇ
ವಾರ್ಷಿಕ ಸಭೆಯ ಆತಿಥ್ಯವನ್ನು ಯಾವ ದೇಶ
ವಹಿಸಿಕೊಳ್ಳಲಿದೆ?
a) ಚೀನಾ
b) ಪಾಕಿಸ್ತಾನ
c) ಭಾರತ✔✔✔
d) ಬ್ರೆಜಿಲ್
.
ಭಾರತದ ಯಾವ ನಗರವು ಮೂರನೇ G - 20 ಫ್ರೇಮ್ ವರ್ಕ್
ವರ್ಕಿಂಗ್ ಗ್ರೂಪ್ (FWG) ನ ಸಭೆಯ ಆತಿಥ್ಯವನ್ನು
ವಹಿಸಿಕೊಂಡಿದೆ?
a) ಗುಹಾಟಿ
b) ವಾರಾಣಾಸಿ✔✔✔
c) ಸೂರತ್
d) ಭೂಪಾಲ್
.
"ನಮಾಮಿ ಬ್ರಹ್ಮಪುತ್ರ" ಎಂಬ ಭಾರತದ
ಅತಿದೊಡ್ಡ ನದಿ ಉತ್ಸವವನ್ನು ಯಾವ
ರಾಜ್ಯದಲ್ಲಿ ಪ್ರಾರಂಭಿಸಲಾಯಿತು?
a) ಅಸ್ಸಾಂ✔✔✔
b) ಮಣಿಪುರ
c) ಸಿಕ್ಕಿಂ
d) ರಾಜಸ್ಥಾನ
.
ಭಾರತದ ಯಾವ ನಗರವು ಮೂರನೇ G - 20 ಫ್ರೇಮ್ ವರ್ಕ್
ವರ್ಕಿಂಗ್ ಗ್ರೂಪ್ (FWG) ನ ಸಭೆಯ ಆತಿಥ್ಯವನ್ನು
ವಹಿಸಿಕೊಂಡಿದೆ?
a) ಗುಹಾಟಿ
b) ವಾರಾಣಾಸಿ✔✔✔
c) ಸೂರತ್
d) ಭೂಪಾಲ್
.
2016ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ
ಆಯ್ಕೆಯಾದ ಸಾಹಿತಿಯನ್ನು ಗುರುತಿಸಿ.
a) ಡಾ. ನಾಗೇಶ್ ಹೆಗ್ಗಡೆ
b) ಪ್ರೊ.ಓ.ಎಲ್. ನಾಗಭೂಷಣ ಸ್ವಾಮಿ
c) ಡಾ.ಎಚ್.ಎಸ್. ಶ್ರೀಮತಿ
d) ಮೇಲಿನ ಎಲ್ಲರೂ✔✔✔
.
ಯಾವ ಜಿಲ್ಲೆಯ ಬೆಳ್ತಂಗಡಿಯ ಲೈಲಾ ಗ್ರಾಮ
ಪಂಚಾಯಿತಿಗೆ ಅಂತಾರಾಷ್ಟ್ರೀಯ
ಸ್ಟಾಂಡರ್ಡ್ವ ಆರ್ಗನೈಸೇಷನ್(ಐಎಸ್ಓ)ನ ಪ್ರಶಸ್ತಿ ಪತ್ರ
ದೊರೆತಿದೆ?
a) ದಕ್ಷಿಣ ಕನ್ನಡ✔✔✔
b) ಉತ್ತರ ಕನ್ನಡ
c) ಬೆಳಗಾವಿ
d) ಉಡುಪಿ
.
ರಬ್ಬರ್ ಮಣ್ಣಿನ ಮಾಹಿತಿ ವ್ಯವಸ್ಥೆ (RubSIS)ಗೆ ಯಾರು
ಚಾಲನೆ ನೀಡಿದರು?
a) ಕರ್ನಾಟಕ ರಾಜ್ಯ ಸರ್ಕಾರ
b) ಕೇಂದ್ರ ಸರ್ಕಾರ✔✔✔
c) ಕೇರಳ ರಾಜ್ಯ ಸರ್ಕಾರ
d) ತಮಿಳುನಾಡು ರಾಜ್ಯ ಸರ್ಕಾರ
.
ನ್ಯೂ ವರ್ಲ್ಡ್ ವೆಲ್ತ್ ವರದಿ ಪ್ರಕಾರ ಭಾರತದ
ಶ್ರೀಮಂತ ನಗರಗಳ ಪಟ್ಟಿಯಲ್ಲಿ ಬೆಂಗಳೂರು
ಎಷ್ಟನೇ ಸ್ಥಾನದಲ್ಲಿದೆ?
a) 1ನೇ ಸ್ಥಾನ
b) 2ನೇ ಸ್ಥಾನ
c) 3ನೇ ಸ್ಥಾನ✔✔✔
d) 4ನೇ ಸ್ಥಾನ
.
ಭಾರತದ ಇತಿಹಾಸದಲ್ಲಿ ನರೇಂದ್ರ ಮೋದಿ 3 ನೇ
ಅತ್ಯಂತ ಯಶಸ್ವಿ ಪ್ರಧಾನಿ ಎಂದು ಇತಿಹಾಸಕಾರ
ರಾಮಚಂದ್ರ ಗುಹಾ ಬಣ್ಣಿಸಿದ್ದಾರೆ. ಹಾಗಾದರೇ ಅವರ ಪ್ರಕಾರ
ಮೊದಲೆರೆಡು ಸ್ಥಾನದಲ್ಲಿರುವ ಪ್ರಧಾನಿಗಳೆಂದರೇ.
..
a) ಜವಾಹರಲಾಲ್ ನೆಹರು ಮತ್ತು ಮನಮೋಹನ್ ಸಿಂಗ್
b) ಜವಾಹರಲಾಲ್ ನೆಹರು ಮತ್ತು ಇಂದಿರಾಗಾಂಧಿ✔✔✔
c) ಜವಾಹರಲಾಲ್ ನೆಹರು ಮತ್ತು ಅಟಲ್ ಬಿಹಾರಿ ವಾಜಪೇಯ್
d) ಅಟಲ್ ಬಿಹಾರಿ ವಾಜಪೇಯ್ ಮತ್ತು ಇಂದಿರಾಗಾಂಧಿ
.
2017 ರ ಅಂತರಾಷ್ಟ್ರೀಯ ಆರ್ಥಿಕ
ಸ್ವಾತಂತ್ರ್ಯ ಅನುಸೂಚಿ ಬಿಡುಗಡೆಯಾಗಿದ್ದು, ಒಟ್ಟು 186
ದೇಶಗಳ ಪೈಕಿ ಭಾರತವು ............. ಸ್ಥಾನದಲ್ಲಿದೆ?
a) 145 ಸ್ಥಾನ
b) 144 ಸ್ಥಾನ
c) 143 ಸ್ಥಾನ✔✔✔
d) 142 ಸ್ಥಾನ
.
2016 ನೇ ಸಾಲಿನ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಗೆ
ಆಯ್ಕೆಯಾದವರು ಯಾರು?
a) ಕೆ.ವಿ ತಿರುಮಲೇಶ್✔✔✔
b) ಸಿದ್ಧರಾಮಸ್ವಾಮಿ
c) ಸುಧಾ ಮೂರ್ತಿ
d) ಕಮಲಾ ಹಂಪನಾ
.
ವಿಶ್ವದ ಬಹುದೊಡ್ಡ ವೃತ್ತಿಪರ ಬ್ಯುಸಿನೆಸ್
ಜಾಲತಾಣ ಲಿಂಕ್ಡ್ ಇನ್ ಗೆ ಸೇರ್ಪಡೆಯಾದ ವಿಶ್ವದ
ಮೊಟ್ಟ ಮೊದಲ ಕ್ರಿಕೆಟಿಗ ಎಂಬ
ಕೀರ್ತಿಗೆ ಪಾತ್ರರಾದವರು?
a) ಸಚಿನ್ ತೆಂಡಲ್ಕೂರ್✔✔✔
b) ಮಹೇಂದ್ರಸಿಂಗ್ ಧೋನಿ
c) ಯುವರಾಜ್ ಸಿಂಗ್
d) ವಿರಾಟ್ ಕೋಹ್ಲಿ
.
13 ನೇ ರಾಷ್ಟ್ರೀಯ ಕೃಷಿ ವಿಜ್ಞಾನ ಕಾಂಗ್ರೆಸ್
ಸಮ್ಮೇಳನ ಜರುಗಿದ್ದು ಎಲ್ಲಿ?
a) ಮುಂಬೈ
b) ದೆಹಲಿ
c) ಬೆಂಗಳೂರು✔✔✔
d) ಕೋಲ್ಕತ್ತ
.
ರೈಲು ನಿಲ್ದಾಣ ವೈಫೈ ಸವಲತ್ತು ಪಡೆದ ದೇಶದ ಮೊತ್ತ
ಮೊದಲ ರೈಲು ನಿಲ್ದಾಣ ಯಾವುದು?
a) ಬೆಂಗಳೂರು ರೈಲು ನಿಲ್ದಾಣ
b) ಕೋಲ್ಕತ್ತಾ ರೈಲು ನಿಲ್ದಾಣ
c) ಜಬ್ಬಲ್ಪುರ ರೈಲು ನಿಲ್ದಾಣ
d) ಪಾಟ್ನಾ ರೈಲು ನಿಲ್ಡಾಣ✔✔✔
.
ಪ್ರಸ್ತುತ ವಿಶ್ವ ಬ್ಯಾಂಕ್ ನ ಅಧ್ಯಕ್ಷರು ಯಾರು?
a) ಜಿಮ್ ಕಿಂಗ್
b) ಯಾಂಗ್ ಜಿಮ್ ಜಿಮ್
c) ಜಿಮ್ ಯಾಂಗ್ ಕಿಮ್✔✔✔
d) ಕಿಮ್ ಜೂ ಪಿಂಗ್
.
ಪ್ರಸ್ತುತ ಭಾರತದ ಕ್ರಿಕೆಟ್ ರಾಷ್ಟ್ರೀಯ ತಂಡದ
ಆಯ್ಕೆ ಸಮಿತಿ ಮುಖ್ಯಸ್ಥರನಾಗಿ ಯಾರನ್ನು
ನೇಮಕಮಾಡಲಾಗಿದೆ?
a) ಎಂ.ಎಸ್ ಪ್ರಶಾಂತ
b) ಎಂ.ಕೆ ಗೋಗರಿ
c) ಎಂ.ಎಸ್ ಪ್ರಸಾದ್✔✔✔
d) ಸಿ.ಕೆ ನಾಯ್ಡು
.
ಪೋರ್ಚುಗಲ್ ಫುಟ್ಬಾಲ್ ತಂಡದ ನಾಯಕ ಕ್ರಿಶ್ಚಿಯಾನೋ
ರೋನಾಲ್ಡೊ 2015-16 ನೇ ಸಾಲಿನ .......... ಪ್ರಶಸ್ತಿಗೆ
ಭಾಜನರಾಗಿದ್ದಾರೆ.
a) ಯುರೋ ಪ್ರಶಸ್ತಿ✔✔✔
b) ಪುಟ್ಬಾಲ್ ಅಸೋಸಿಯೇಷನ್ ಪ್ರಶಸ್ತಿ
c) ಜೀವಮಾನ ಸಾಧನೆ ಪ್ರಶಸ್ತಿ
d) ಉತ್ತಮ ಆಟಗಾರ ಪ್ರಶಸ್ತಿ
.
ಮಾಜಿ ವಿಶ್ವ ನಂ 1 ಷಟ್ಲರ್ ಸೈನಾ ನೆಹ್ವಾಲ್ ಅವರಿಗೆ ಯಾವ
ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ
ಗೌರವಿಸಿದೆ?
a) ಕೋಲ್ಕತ್ತಾ ವಿಶ್ವವಿದ್ಯಾಲಯ
b) ಚೆನ್ನೈ ವಿಶ್ವವಿದ್ಯಾಲಯ✔✔✔
c) ಮುಂಬೈ ವಿಶ್ವವಿದ್ಯಾಲಯ
d) ಕರ್ನಾಟಕ ವಿಶ್ವವಿದ್ಯಾಲಯ
.
ವಿಶ್ವದ ಅತಿ ದೊಡ್ಡ ಪಾಂಡಾ ’ಜಿಯಾ ಜಿಯಾ’
ಸಾವನ್ನಪಿದ್ದು ಇದು ಯಾವ ದೇಶದಲ್ಲಿತ್ತು?
a) ಜಪಾನ
b) ಅಮೇರಿಕಾ
c) ಚೀನಾ✔✔✔
d) ಇಂಡೋನೇಷ್ಯಾ
.
ಚೀನಾವು ಯಾವ ನದಿಗೆ ಅಡ್ಡಲಾಗಿ ಝ್ಯಾಂಗ್ಮು
ಜಲ ವಿದ್ಯುತ್ ಕೇಂದ್ರವನ್ನು ಆರಂಭಿಸಿದೆ?
a) ಬ್ರಹ್ಮಪುತ್ರ✔✔✔
b) ಸಿಂಧೂ
c) ಗಂಗಾ
d) ಸರಸ್ವತಿ
.
ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ)
ಅಥ್ಲೀಟ್​ಗಳ ಆಯೋಗದ ಸದಸ್ಯೆಯಾಗಿ
ನೇಮಕಗೊಂಡ ಭಾರತೀಯ
ಕ್ರೀಡಾಪಟು ಯಾರು?
a) ಸೈನಾ ನೆಹ್ವಾಲ್✔✔✔
b) ದೀಪಾ ಕರ್ಮಾಕರ್
c) ಸಾನಿಯಾ ಮಿರ್ಜಾ
d) ಇ.ವಿ ಸಿಂಧೂ
.
ಕನಾ೯ಟಕ ರಾಜ್ಯದ ಈ ಕೆಳಕಂಡ ಯಾವ ರೈಲು ನಿಲ್ದಾಣವು
ಸಂಪೂಣ೯ವಾಗಿ ಮೊಟ್ಟ ಮೊದಲ
ಕ್ಯಾಶ್ ಲೆಸ್ ರೈಲು ನಿಲ್ದಾಣ ಎಂಬ ಖ್ಯಾತಿಗೆ ಭಾಜನವಾಗಿದೆ.
a) ಮೈಸೂರು ರೈಲ್ವೆ ನಿಲ್ದಾಣ
b) ಬೆಂಗಳೂರು ರೈಲ್ವೆ ನಿಲ್ದಾಣ
c) ಹುಬ್ಬಳ್ಳಿ ರೈಲ್ವೆ ನಿಲ್ದಾಣ
d) ರಾಯಚೂರು ರೈಲ್ವೆ ನಿಲ್ದಾಣ✔✔✔
1. ಕೆಳಕಂಡವುಗಳಲ್ಲಿ ಯಾವುದು ಅಧಿಕೃತ ಲಾಂಛನ
(Official Mascot) ಪಡೆದ ಭಾರತದ ಮೊದಲ ಹುಲಿ
ಸಂರಕ್ಷಿತ ಅಭಯಾರಣ್ಯವಾಗಿದೆ?
A. ಕಾನ್ಹಾ ಹುಲಿ ಅಭಯಾರಣ್ಯ ✔
B. ಕಾರ್ಬೆಟ್ ಹುಲಿ ಅಭಯಾರಣ್ಯ
C. ಸರಿಸ್ಕಾ ಹುಲಿ ಅಭಯಾರಣ್ಯ
D. ಸಂಜಯ್ ಹುಲಿ ಅಭಯಾರಣ್ಯ
2. ಕೆಳಕಂಡವುಗಳಲ್ಲಿ ಯಾವ ದೇಶ 'ನ್ಯೂ
ಡೆವಲಪ್'ಮೆಂಟ್ ಬ್ಯಾಂಕ್'ನ
(NDB) 2ನೇ ವಾರ್ಷಿಕ ಸಭೆಯ ಆತಿಥ್ಯ ವಹಿಸಿತ್ತು?
A. ಚೀನಾ
B. ಬ್ರೆಜಿಲ್
C. ದ.ಆಫ್ರಿಕಾ
D. ಭಾರತ✔
3. ಭಾರತದ ಅತಿ ದೊಡ್ಡ ನದಿ ಉತ್ಸವ 'ನಮಾಮಿ
ಬ್ರಹ್ಮಪುತ್ರ' ಕೆಳಕಂಡ ಯಾವ ರಾಜ್ಯದಲ್ಲಿ
ಆರಂಭವಾಗಿದೆ?
A. ಅಸ್ಸಾಂ ✔
B. ಅರುಣಾಚಲ ಪ್ರದೇಶ
C. ಸಿಕ್ಕಿಂ
D. ಮಣಿಪುರ

4. ಕೆಳಕಂಡ ಯಾವ ದೇಶ ಈಚೆಗಷ್ಟೇ ಖನಿಜಗಳ ಗಣಿಗಾರಿಕೆಗೆ
ನಿಷೇಧ ಹೇರಿದ ವಿಶ್ವದ ಮೊದಲ ದೇಶ ಎಂಬ
ಖ್ಯಾತಿಗೆ ಪಾತ್ರವಾಯಿತು?
A. ಅಂಗೋಲಾ
B. ಎಲ್ ಸಾಲ್ವೆಡೋರ್ ✔
C. ಮೋರಕ್ಕೊ
D. ಸುಡಾನ್
5. ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿ ತಂತ್ರಜ್ಞಾನದ
ಸಹಾಯ ನೀಡುವ ನಿಟ್ಟಿನಲ್ಲಿ ಕೆಳಕಂಡ ಯಾವ
ಐಐಟಿ ಭಾರತೀಯ ಸೈನ್ಯದೊಂದಿಗೆ
ಒಪ್ಪಂದ ಮಾಡಿಕೊಂಡಿತು?
A. ಐಐಟಿ ಮದ್ರಾಸ್ ✔
B. ಐಐಟಿ ಮುಂಬೈ
C. ಐಐಟಿ ಇಂದೋರ್
D. ಐಐಟಿ ರೂರ್ಕಿ
6. 'ಹಾಲಂಡ್' ಇದು ಯಾವ ದೇಶದ ಹಳೆಯ ಹೆಸರಾಗಿದೆ?
A. ಫ್ರಾನ್ಸ್
B. ಸುಮಾತ್ರಾ
C. ನೆದರ್ಲೆಂಡ್ ✔
D. ಟಾಂಜಾನಿಯಾ
7. 'ಪರ್ಶಿಯಾ' ಇದು ಯಾವ ದೇಶದ ಪುರಾತನ ಹೆಸರಾಗಿದೆ?
A. ಇರಾನ್ ✔
B. ಇರಾಕ್
C. ಈಜಿಪ್ಟ್
D. ಇಸ್ರೇಲ್
8. 'ಗೋಲ್ಡ್'ಕೋಸ್ಟ್' ಇದು ಯಾವ ದೇಶದ ಮೊದಲಿನ
ಹೆಸರಾಗಿದೆ?
A. ಚಿಲಿ
B. ಘಾನಾ✔
C. ಮ್ಯಾನ್ಮಾರ್
D. ನೈಜಿರಿಯಾ
9. 'ಉತ್ತರ ರೊಡೇಶಿಯಾ' ಇದು ಯಾವ ದೇಶದ ಹಳೆಯ
ಹೆಸರು?
A. ಜಿಂಬಾಬ್ವೆ
B. ಕೀನ್ಯಾ
C. ಜಾಂಬಿಯಾ✔
D. ತೈವಾನ್
10. 'ಮೆಸಪೊಟಮಿಯಾ' ಇದು ಯಾವ ದೇಶದ ಹಳೆಯ
ಹೆಸರು?
A. ಇರಾಕ್ ✔
B. ಇರಾನ್
C. ಇಥಿಯೋಪಿಯಾ
D. ಇಸ್ರೇಲ್
11. ಕೆಳಕಂಡವರಲ್ಲಿ ಯಾವ ಆಂಗ್ಲ ವ್ಯಕ್ತಿಗೆ
ಜಹಾಂಗೀರನು 'ಇಂಗ್ಲಿಷ್ ಖಾನ್' ಎಂಬ
ಪದವಿ ಪ್ರದಾನ ಮಾಡಿದ್ದ?
A. ಎಡ್ವರ್ಡ್ ಟೆರಿ
B. ಹಾಕಿನ್ಸ್ ✔
C. ಸರ್ ಥಾಮನ್ ರೇ
D. ಥಾಮಸ್ ಪೆಯಿನ್
12. ಪ್ರಾಚೀನ ಭಾರತದಲ್ಲಿ ಕೆಳಕಂಡ ಯಾವುದು
ಅತ್ಯಂತ ಹಳೆಯ ವಂಶ?
A. ಚಾಲುಕ್ಯ ವಂಶ
B. ಪಲ್ಲವ ವಂಶ
C. ಶಾತವಾಹನ ವಂಶ✔
D. ರಾಷ್ಟ್ರಕೂಟರು
13. ವರ್ಧಮಾನ ಮಹಾವೀರ ಹಾಗೂ ಗೌತಮ ಬುದ್ಧ
ಕೆಳಕಂಡ ಯಾರ ಅವಧಿಯಲ್ಲಿ ತಮ್ಮ ಉಪದೇಶಗಳನ್ನು
ನೀಡಿದ್ದರು?
A. ಅಜಾತ ಶತ್ರು
B. ಬಿಂಬಸಾರ✔
C. ನಂದಿವರ್ಧನ
D. ಉದಯನ್
14. 'ಸೆವೆನ್ ಪಗೋಡಾಸ್' ಹೆಸರಿನಲ್ಲಿ ಪ್ರಖ್ಯಾತರಾಗಿರುವ
ಮಂದಿರಗಳನ್ನು ನಿರ್ಮಿಸಿದವರು ಯಾರು?
A. ಚೋಳರು
B. ಚಾಲುಕ್ಯರು
C. ಪಲ್ಲವರು✔
D. ರಾಷ್ಟ್ರಕೂಟರು
15. 13ನೇ ಶತಮಾನದಲ್ಲಿ ಮೌಂಟ್ ಅಬೂವಿನಲ್ಲಿ ಪ್ರಸಿದ್ಧ
ದಿಲ್ವಾರಾ ಮಂದಿರವನ್ನು ನಿರ್ಮಿಸಿದವರಾರು?
A. ಮಹೇಂದ್ರಪಾಲ
B. ಮಹಿಪಾಲ
C. ರಾಜ್ಯಪಾಲ
D. ತೇಜಪಾಲ ✔

■.ಕರ್ನಾಟಕದ ನವ ಮಂಗಳೂರು ಬಂದರು ಯಾರ
ಒಡೆತನದಲ್ಲಿದೆ????
1] ಕೇಂದ್ರ ಸರ್ಕಾರ ಒಡೆತನ ✔✔✔
2] ರಾಜ್ಯ ಸರ್ಕಾರ ಒಡೆತನ
3] ಕೇಂದ್ರ ಮತ್ತು ರಾಜ್ಯ ಸರ್ಕಾರ ಒಡೆತನ
4] ಅಂತರ್ ರಾಷ್ಟ್ರೀಯ ಒಡೆತನ
■ ಕರ್ನಾಟಕ ರಾಜ್ಯವು ----------- ಕಿ.ಮೀ ಕರಾವಳಿ
ತೀರ ಪ್ರದೇಶ ಹೊಂದಿದೆ? ?????
1] 410 ಕಿ.ಮಿ
2] 360 ಕಿ.ಮಿ
3] 405 ಕಿ.ಮಿ
4] 320 ಕಿ.ಮಿ✔✔✔
■. ಎಚ್.ಎ.ಎಲ್ ನ ಕೇಂದ್ರ ಕಛೇರಿ ಎಲ್ಲಿದೆ ?????
1] ಮಂಗಳೂರು
2] ಚೆನ್ನೈ
3] ಬೆಂಗಳೂರು✔✔✔
4] ಹಾಸನ
■ "ಸ್ಟೆಟ್ ಬ್ಯಾಂಕ್ ಆಫ್ ಮೈಸೂರು" ಸ್ಥಾಪನೆ ಆದದ್ದು????
1] 1913✔✔✔
2] 1914
3] 1915
4] 1916
■ "ಕರ್ನಾಟಕದ ಬ್ಯಾಂಕಿಂಗ್ ತೋಟ್ಟಿಲು" ಎಂದು
ಕರೆಸಿಕೋಳ್ಳುವ ಜಿಲ್ಲೆಗಳು ?????
1] ದಕ್ಷಿಣ ಕನ್ನಡ ಮತ್ತು ಉಡುಪಿ✔✔✔
2] ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ
3] ಉತ್ತರ ಕನ್ನಡ ಮತ್ತು ಮಂಗಳೂರು
4] ಮಂಗಳೂರು ಮತ್ತು ಉಡುಪಿ
■.2011 ರ ಪ್ರಕಾರ ಕರ್ನಾಟಕದ ಸಾಕ್ಷರತ ಪ್ರಮಾಣ. ??
1] 74.5 %
2] 75.6%✔✔✔
3] 76%
4]71%
■.ಈ ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ.
1]ಕಪ್ಪು ಅದಿರು - A.)ಕಲ್ಲಿದ್ದಿಲು
2] ಆಶ್ಚರ್ಯ ಲೋಹ -B) ಅಭ್ರಕ
3] ಕಾಗೆ ಬಂಗಾರ - C) ಮ್ಯಾಗ್ನಟೈಟ್
4] ಕಪ್ಪು ವಜ್ರ - D) ಬಾಕ್ಸೈಟ್
E) ಅಲುಮೀನಿಯಂ
ಸಂಕೇತ :-
1] 1A , 2B , 3C ,4D
2] 1A, 2D , 3C ,4A
3] 1C , 2D 3B ,4A✔✔✔
4] 1D , 2C , 3A, 4B
■."ಕಾವೇರಿ ನದಿಯಿಂದ ಗೋದಾವರಿ ನದಿಯ ವರೆಗೆ ಇದ್ದ ನಾಡೆ
ಕನ್ನಡ ನಾಡು " ಎಂದು ಹೇಳಿದವರು????
1] ಪಂಪ
2] ರನ್ನ
3] ಶ್ರೀ ವಿಜಯ ✔✔✔
4] ಜನ್ನ
■."ದಿ ಸ್ಪಿರಿಟ್ ಆಫ್ ಲಾಸ್" ಎಂಬ ಕೃತಿಯ ಕರ್ತೃ ಯಾರು ???
1] ರೂಸ್ಸೊ
2] ಕಾರ್ಲ್ ಮಾರ್ಕ್ಸ್
3] ಸ್ಟ್ಯಾಲಿನ್
4] ಮಾಂಟೆಸ್ಕೋ✔✔✔
■ ಈ ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ .
1] ಮ್ಯಾಜಿನಿ - A)ಒಂದನೇ ಜಾಗತಿಕ ಯುದ್ಧಕ್ಕೆ ಕಾರಣ
ಕರ್ತೃ.
2] ಗ್ಯಾರಿಬಾಲ್ಡಿ -B) ರಷ್ಯಾ ಕ್ರಾಂತಿಯ ಜನಕ .
3] ಕೈಸರ್ 2ನೇ ವಿಲಿಯಂ -C) ಇಟಲಿಯ ಖಡ್ಗ
4] ಲೆನಿನ್ - D)ಇಟಲಿಯ ಏಕೀಕರಣದ ಜನಕ.
- E) ನಾಜಿ ಪಕ್ಷದ ಸರ್ವಾಧಿಕಾರಿ .
ಸಂಕೇತ :-
1] 1C 2D 3E 4B
2] 1E 2B 3A 4D
3] 1D 2C 3A 4E
4] 1D 2C 3A 4B✔✔✔
■."ದಿ ವಾರ್ ಆಂಡ್ ಪೀಸ್ " ಕೃತಿಯ ಕರ್ತೃ.
1] ಜವಾಹರ್ ಲಾಲ್ ನೆಹರು
2] ಜಾನ್ ರಸ್ಕಿನ್
3] ದಾದಾ ಬಾಯಿನವರೋಜಿ
4] ಲಿಯೋ ಟಾಲ್ ಸ್ಟಾಯ್✔✔✔
■.Kingship knows , no kingship (ರಾಜ್ಯ
ಪ್ರೀತಿ ಹೊರತಾಗಿ ಬಂಧು ಪ್ರೀತಿ
ಇಲ್ಲದವ"ನೆಂದು) ಪ್ರಸಿದ್ಧನಾದ ದೆಹಲಿಯ ಸುಲ್ತಾನ್???
1] ಮಹ್ಮದ್ ಬೀನ್ ತುಘಲಕ್
2] ಅಲ್ಲಾವುದ್ದಿನ್ ಖಿಲ್ಜಿ✔✔✔
3] ಇಲ್ತಮಸ್
4] ಬಲ್ಬನ್
1. ಕೆಳಕಂಡ ಯಾವ ನಗರ ಪುರುಷರ ಹಾಕಿಯ ವರ್ಲ್ಡ್
ಲೀಗ್ ಫೈನಲ್ 2017 ಹಾಗೂ ಪುರುಷರ ವಿಶ್ವ ಕಪ್ -
2018ನ್ನು ಆಯೋಜಿಸುವ ಆತಿಥ್ಯ ಪಡೆದಿದೆ?
A. ನ್ಯೂಯಾರ್ಕ್
B. ಹಾಂಕಾಂಗ್
C. ಬೀಜಿಂಗ್
D. ಭುವನೇಶ್ವರ ✔
2. ಭಾರತೀಯ ನೌಕಾಪಡೆ ಕೆಳಕಂಡ ಯಾವ
ಸ್ಥಳದಲ್ಲಿ INLCU L51 ಗಸ್ತು ನೌಕೆಗೆ ಚಾಲನೆ
ನೀಡಿತು?
A. ಚೆನ್ನೈ
B. ಪೋರ್ಟ್'ಬ್ಲೇರ್ ✔
C. ಮುಂಬೈ
D. ಗೋವಾ
3. ಭಾರತೀಯ ಸ್ಟೇಟ್ ಬ್ಯಾಂಕ್ ಜನಧನ
ಖಾತೆಧಾರಕರಿಗೂ ಸೇರಿದಂತೆ ತನ್ನೆಲ್ಲ ಗ್ರಾಹಕರಿಗೆ ಬಿಡುಗಡೆ
ಮಾಡಿದ ಕ್ರೆಡಿಟ್ ಕಾರ್ಡ್'ನ ಹೆಸರೇನು?
A. ಪ್ರಗತಿ
B. ವಿಕಾಸ್
C. ಉನ್ನತಿ ✔
D. ವೃದ್ಧಿ
4. ಪಾಕಿಸ್ತಾನದ ಪ್ರಮುಖ ಬ್ಯಾಂಕ್ ಆಗಿರುವ ಯುನೈಟೆಡ್
ಬ್ಯಾಂಕ್ ಲಿಮಿಟೆಡ್'ಗೆ ಇದೇ ಪ್ರಥಮ ಬಾರಿಗೆ
ಮಹಿಳೆಯರೊಬ್ಬರು ಮುಖ್ಯಸ್ಥರಾದರು. ಆ ಮಹಿಳೆ
ಯಾರು?
A. ಸಿಮಾ ಕಾಮಿಲ್ ✔
B. ಮಾರಿಯಾ ಅಫ್ಜಲ್
C. ಜೇಹನ್ ಅರಾ
D. ರೋಶನಾ ಜಫರ್
5. ಭಾರತೀಯ ಮೂಲದ ಕೆಳಕಂಡ ಯಾರು ಈಚೆಗೆ 'ದಿ
ಲೀಡರ್'ಷಿಪ್ ಕಾನ್ಫರೆನ್ಸ್ ಆನ್ ಸಿವಿಲ್ ಅಂಡ್
ಹ್ಯೂಮನ್ ರೈಟ್ಸ್' (The Leadership Conference on
Civil and Human Rights)ನ ಸಿಇಒ ಹಾಗೂ ಪ್ರೆಸಿಡೆಂಟ್
ಆಗಿ ನೇಮಕಗೊಂಡರು?
A. ವನಿತಾ ಗುಪ್ತಾ ✔
B. ಸೋನಲ್ ವೀರಾ
C. ಅರುಣಾ ರೇ
D. ಆರುಂಧತಿ ಸೈನಿ
6. ಭಾರತದ ಸಂವಿಧಾನವನ್ನು ಅರೆ ಒಕ್ಕೂಟ (ಕ್ವಾಸಿ ಫೆಡರಲ್)
ಎಂದು ವರ್ಣಿಸಿದವರು ಯಾರು?
A. ಕೆ. ಸಿ. ವಿಯರ್✔
B. ಜೆನಿಂಗ್ಸ್
C. ಬಿ. ಆರ್. ಅಂಬೇಡ್ಕರ್
D. ಮಾರಿಸ್ ಜೋನ್ಸ್
7. ಅನಿ ಬೆಸೆಂಟ್ ಈ ಕೆಳಗಿನ ಯಾವುದಕ್ಕೆ
ಸಂಬಂಧಿಸಿದ್ದಾರೆ?
A. ಸರ್ವೆಂಟ್ಸ್ ಆಫ್ ಇಂಡಿಯಾ ಚಳುವಳಿ
B. ಕ್ವಿಟ್ ಇಂಡಿಯಾ ಚಳುವಳಿ
C. ಹೋಂ ರೂಲ್ ಚಳುವಳಿ✔
D. ನಾಗರಿಕ ಕಾಯಿದೆ ಭಂಗ ಚಳುವಳಿ
8. ಸತತ ಎರಡು ಅವಧಿಗಳವರೆಗೆ ಭಾರತದ ರಾಷ್ಟ್ರಪತಿ
ಸ್ಥಾನದಲ್ಲಿದ್ದವರು ಯಾರು?
A. ಡಾ. ಎಸ್. ರಾಧಾಕೃಷ್ಣನ್
B. ಡಾ. ಜಾಕೀರ್ ಹುಸೇನ್
C. ಗ್ಯಾನಿ ಜೈಲ್ ಸಿಂಗ್ಣ
D. ಡಾ. ರಾಜೇಂದ್ರ ಪ್ರಸಾದ್✔
9. ಭಾರತದಲ್ಲಿ ಡಯಾರ್ಕಿಯನ್ನು ಜಾರಿಗೆ ತಂದ ಕಾಯಿದೆ
ಯಾವುದು?
A. ಮಾರ್ಲೆ - ಮಿಂಟೋ ಸುಧಾರಣೆಗಳ ಕಾಯಿದೆ, 1919
B. ಗವರ್ನ್'ಮೆಂಟ್ ಆಫ್ ಇಂಡಿಯಾ ಕಾಯಿದೆ, 1919✔
C. ಇಂಡಿಯನ್ ಕೌನ್ಸಿಲ್ಸ್ ಕಾಯಿದೆ, 1892
D. ಗವರ್ನ್'ಮೆಂಟ್ ಆಫ್ ಇಂಡಿಯಾ ಕಾಯಿದೆ, 1935
10. ಭಾರತದ ಸಂವಿಧಾನವು ಅಂತಿಮವಾಗಿ 1949ರ
ನವೆಂಬರ್ 26ರಂದು ಜಾರಿಗೆ ಬಂದಾಗ ಸಂವಿಧಾನ
ರಚನಾ ಸಭೆಯ ಎಷ್ಟು ಮಂದಿ ಸದಸ್ಯರು ಅದಕ್ಕೆ ತಮ್ಮ
ಸಹಿ ಹಾಕಿದರು?
A. 284 ✔
B. 289
C. 309
D. 290
11. ಈ ಕೆಳಗಿನವರಲ್ಲಿ ಯಾರು ಸ್ವರಾಜ್
ಪಕ್ಷದೊಂದಿಗೆ ಸಂಬಂಧ
ಹೊಂದಿಲ್ಲ?
A. ಸಿ. ಆರ್. ದಾಸ್
B. ವಲ್ಲಭಭಾಯ್ ಪಟೇಲ್
C. ವಿಠ್ಠಲಭಾಯ್ ಪಟೇಲ್✔
D. ಮೋತಿಲಾಲ್ ನೆಹರು
12. ಪಕ್ಷರಹಿತ ಪ್ರಜಾಪ್ರಭುತ್ವದ ಕಲ್ಪನೆಯನ್ನು
ನೀಡಿದವರು ಯಾರು?
A. ಜವಾಹರಲಾಲ್ ನೆಹರು
B. ವಿನ್'ಸ್ಟನ್ ಚರ್ಚಿಲ್
C. ಲೆನಿನ್
D. ಜಯಪ್ರಕಾಶ್ ನಾರಾಯಣ್✔
13. ಈ ಕೆಳಗಿನ ಯಾವುದನ್ನು ಸೂಕರ ದರ್ಶನ (ಪಿಗ್ ಫಿಲಾಸಫಿ)
ಎಂದು ಕರೆಯುತ್ತಾರೆ?
A. ಸಮಾಜವಾದ
B. ಫ್ಯಾಸಿಸಂ
C. ಉದಾರತಾವಾದ
D. ಪ್ರಯೋಜಕತಾವಾದ✔
14. ಗಾಂಧೀ ತತ್ವದ ಪ್ರಕಾರ-
A. ಅಹಿಂಸೆಯು ದುರ್ಬಲರ ಅಸ್ತ್ರ
B. ಅಹಿಂಸೆಯು ಧಾರ್ಮಿಕ ವ್ಯಕ್ತಿಗಳ ಅಸ್ತ್ರ
C. ಅಹಿಂಸೆಯು ಶಸ್ತ್ರಹೀನರ ಅಸ್ತ್ರ
D. ಅಹಿಂಸೆಯು ಶಕ್ತಿಶಾಲಿಗಳ ಅಸ್ತ್ರ✔

15. ಆಡಳಿತಾತ್ಮಕ ನ್ಯಾಯಾಲಯಗಳು ಯಾವ ದೇಶದ
ಕೊಡುಗೆ?
A. ಬ್ರಿಟನ್
B. ಫ್ರಾನ್ಸ್ ✔
C. ಜರ್ಮನಿ
D. ಅಮೆರಿಕ
1. ಕೆಳಕಂಡ ಯಾವ ದೇಶದಲ್ಲಿ 19 ವರ್ಷಗಳ ಬಳಿಕ ಇದೇ
ಮೊದಲ
ಬಾರಿಗೆ 2017ರಲ್ಲಿ ಜನಗಣತಿ ನಡೆಯುತ್ತಿದೆ?
A. ಶ್ರೀಲಂಕಾ
B. ಭೂತಾನ್
C. ಪಾಕಿಸ್ತಾನ ✔
D. ನೇಪಾಳ
2. ಕೆಳಕಂಡ ಯಾವ ಯಾವ ರಾಜ್ಯಗಳು ಸಂಯುಕ್ತ
ರೂಪದಲ್ಲಿ
ಬರುವ ಮೇ ತಿಂಗಳಿನಲ್ಲಿ ಆನೆ ಗಣತಿ ನಡೆಸಲು
ನಿರ್ಧರಿಸಿವೆ?
A. ಒಡಿಸ್ಸಾ
B. ಪಶ್ಚಿಮ ಬಂಗಾಳ
C. ಛತ್ತೀಸಗಡ
D. ಝಾರ್ಖಂಡ
(ಉತ್ತರ : ಎಲ್ಲ 4 ರಾಜ್ಯಗಳು)
3. ರಿಸರ್ವ್ ಬ್ಯಾಂಕಿನ ಡೆಪ್ಯೂಟಿ ಗವರ್ನರ್ ಜನರಲ್ ಆಗಿ
ಕೆಳಕಂಡ
ಯಾರು ನೇಮಕಗೊಂಡರು?
A. ಮನೋಜ್ ಪಿಂಗ್ವಾ
B. ದಿಲೀಪ್ ಸಾಂಘ್ವಿ
C. ಚಂದ್ರಕಾಂತ್ ಭಾರ್ತಿ
D. ಬಿ.ಪಿ.ಕಾನುಂಗೊ✔
4. 'ಅಸೋಚಾಂ'ನ (ASSOCHAM) ನೂತನ ಅಧ್ಯಕ್ಷರಾಗಿ
ಕೆಳಕಂಡ ಯಾರು ನೇಮಕಗೊಂಡರು?
A. ಸಂದೀಪ್ ಜಜೋಡಿಯಾ ✔
B. ಕಿರಣ್'ಕುಮಾರ್ ಗಾಂಧಿ
C. ನವೀನ್ ಗುಪ್ತಾ
D. ಸುನಿಲ್ ಕನೋರಿಯಾ
5. ಮನೋಹರ್ ಪರೀಕ್ಕರ್ ಅವರಿಂದ ತೆರವಾದ
ರಕ್ಷಣಾ ಇಲಾಖೆಯ
ಉಸ್ತುವಾರಿಯನ್ನು ಕೆಳಕಂಡ ಯಾರಿಗೆ ಹೆಚ್ಚುವರಿಯಾಗಿ
ವಹಿಸಿಕೊಡಲಾಗಿದೆ?
A. ರಾಜನಾಥ್ ಸಿಂಗ್
B. ಅರುಣ್ ಜೇಟ್ಲಿ✔
C. ನಿತೀನ್ ಗಡಕರಿ
D. ಅನಂತಕುಮಾರ್
6. ಕೆಳಕಂಡ ಯಾವ ದೇಶದಲ್ಲಿ ಭಾರತದ ಯಾವುದೇ
ಬ್ಯಾಂಕಿನ ಶಾಖೆಗಳಿಲ್ಲ?
A. ಇಂಗ್ಲೆಂಡ್
B. ರಷ್ಯಾ
C. ಅಮೆರಿಕ
D. ಸ್ವಿಡ್ಜರ್ಲೆಂಡ್ ✔
7. 'ಸ್ಯಾಂಡಿ ಸ್ಟಾರ್ಮ್ಸ್' ಈ ಪುಸ್ತಕದ ಲೇಖಕರು ಯಾರು?
A. ಹರಭಜನ್ ಸಿಂಗ್
B. ಸಚಿನ್ ತೆಂಡೂಲ್ಕರ್
C. ರಾಹುಲ್ ದ್ರಾವಿಡ್
D. ಸಂದೀಪ್ ಪಾಟೀಲ್✔
ಕನ್ನಡ ಸಾಮಾನ್ಯ ಜ್ಞಾನ
8. ಲಾನ್ ಟೆನಿಸ್ ಆಟದಲ್ಲಿ ಕೆಳಕಂಡ ಯಾವ ಶಬ್ದವನ್ನು
ಬಳಸಲಾಗುವುದಿಲ್ಲ?
A. ಸ್ಮ್ಯಾಷ್
B. ಗ್ಯಾಂಬಿಟ್ ✔
C. ಬ್ಯಾಂಕ್ ಹ್ಯಾಂಡ್ ಡ್ರೈವ್
D. ಸರ್ವೀಸ್
9. 'ಡಿಸಿಎಂ ಟ್ರೋಫಿ' ಕೆಳಕಂಡ ಯಾವ ಕ್ರೀಡೆಗೆ
ಸಂಬಂಧಪಟ್ಟಿದೆ?
A. ಹಾಕಿ
B. ಫುಟ್ಬಾಲ್ ✔
C. ಬ್ಯಾಡ್ಮಿಂಟನ್
D. ಪೋಲೊ
10. ಬೆಟ್ಟದ ಇಳಿಜಾರಿನಗುಂಟ ಕೆಳಕಂಡ ಯಾವ
ಬೆಳೆಯನ್ನು
ಪ್ರಮುಖವಾಗಿ ಬೆಳೆಯಲಾಗುತ್ತದೆ?
A. ಆಲೂಗಡ್ಡೆ
B. ಚಹ ✔
C. ಶೇಂಗಾ
D. ಶುಂಠಿ
11. ವಿತ್ತೀಯ ಪತ್ರಿಕೆಗಳಲ್ಲಿ ಆಗಾಗ ಬಳಕೆಯಾಗುವ
'LIBOR' ಇದರ
ವಿಸ್ತೃತ ರೂಪ ಏನು?
A. Liberal International Best Offered Rates
B. London Inter Bank Offered Rates✔
C. Liberal International Bank Offered Rates
D. London Inter Bank Opportunity Rate
12. ಭಾರತದ ವಿತ್ತ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ
ಕ್ರೆಡಿಟ್
ರೇಟಿಂಗ್ ಏಜೆನ್ಸಿ ಯಾವುದು?
A. VISA
B. BOISL
C. NEET
D. ICRA ✔
13. ಕೆಳಕಂಡವುಗಳಲ್ಲಿ ಯಾವುದು ಕೃಷಿಯಲ್ಲಿ ಬಳಸುವ
ರಾಸಾಯನಿಕ ಗೊಬ್ಬರವಲ್ಲ?
A. ಯೂರಿಯಾ
B. ಡಿಎಪಿ
C. SSP
D. NDDP ✔
14. ಕೆಳಕಂಡವುಗಳಲ್ಲಿ ಯಾವುದು 'ಡುಯಿಂಗ್ ಬಿಸ್'ನೆಸ್
ರಿಪೋರ್ಟ್'ನ್ನು ಪ್ರಕಟಿಸುತ್ತದೆ?
A. ಏಷ್ಯನ್ ಅಭಿವೃದ್ಧಿ ಬ್ಯಾಂಕ್
B. ವಿಶ್ವ ವ್ಯಾಪಾರ ಸಂಘಟನೆ
C. ಅಂತರರಾಷ್ಟ್ರೀಯ ಆರ್ಥಿಕ ನಿಧಿ
D. ವಿಶ್ವ ಬ್ಯಾಂಕ್ ✔
15. ' ಟು ಎ ಹಂಗರ್ ಫ್ರೀ ವರ್ಲ್ಡ್ ' ಇದು ಯಾರು
ಬರೆದ ಪುಸ್ತಕ?
A. ಅಮರ್ತ್ಯ ಸೇನ್
B. ಸಿ. ರಂಗರಾಜನ್
C. ಮನಮೋಹನ್ ಸಿಂಗ್
D. ಎಂ.ಎಸ್. ಸ್ವಾಮಿನಾಥನ್ ✔

1) ಗುಪ್ತರ ಕಾಲದಲ್ಲಿ ಹೋರಡಿಸಲಾದ ಬೆಳ್ಳಿ ನಾಣ್ಯದ ಹೆಸರು
ಇದಾಗಿತ್ತು.
A) ದಿನಾರ್
B) ಪಣ
C) ಕರ್ಷಪನ
D) ರೂಪಕ
A)
2) ಅಣಿಬೆಸೆಂಟರು ತಿಲಕರೊಂದಿಗೆ ಸೇರಿ ಈ
ಕೆಳಗಿನ ಯಾವ ಚಳವಳಿಯನ್ನು ಆರಂಭಿಸಿದರು.
A) ಖಿಲಾಫತ್ ಚಳವಳಿ
B) ಹೋಂರೂಲ್ ಚಳವಳಿ
C) ಅಸಹಕಾರ ಚಳವಳಿ
D) ಕ್ವಿಟ್ ಇಂಡಿಯಾ ಚಳವಳಿ
B)
3) ಇಬಾದತ್ ಖಾನ್ ಎಂಬ ಪ್ರಾರ್ಥನಾ ಮಂದಿರವನ್ನು
ಕಟ್ಟಿಸಿದವನು .
A) ಬಾಬರ್
B) ಹುಮಾಯೂನ್
C) ಅಕ್ಬರ್
D) ಔರಂಗಜೆಬ.
C)
4) ವೃದ್ದ ಗಂಗೆ ಎಂದು ಕೆಳಗಿನ ಯಾವ ನದಿಯನ್ನು
ಕರೆಯುತ್ತಾನೆ.
A) ದಾಮೋದರ
B) ಮಹಾನದಿ
C) ಬ್ರಹ್ಮಪುತ್ರ
D) ಗೋದಾವರಿ
D)
5) ತಮಿಳು ಕೃತಿ ಶಿಲಾಪ್ಪದಿಕಾರಾಂ ನಲ್ಲಿ ಕರ್ನಾಟಕವನ್ನು
ಯಾವ ಹೆಸರಿನಿಂದ ಕರೆಯಲಾಗಿದೆ.
A) ಕನ್ನಾಡು
B) ಕರುನಾಡಗಂ
C) ಕರುನಾಡರ್
D) ಕರ್ಣಾಟ
C)
6) ದಖ್ಖನ್ ಪ್ರಸ್ತ ಭೂಮಿ ಯಾವ ಕಡೆಯಿಂದ ಯಾವ ಕಡೆಗೆ
ವಾಲಿದೆ.
A)ಪೂರ್ವದಿಂದ ಉತ್ತರಕ್ಕೆ
B) ಪಶ್ಚಿಮದಿಂದ ಪೂರ್ವಕ್ಕೆ
C) ಪೂರ್ವದಿಂದ ಪಶ್ಚಿಮಕ್ಕೆ
D) ಪಶ್ಚಿಮದಿಂದ ಉತ್ತರಕ್ಕೆ
B)
7) ಶಿವಾಜಿಯ ಆಸ್ಥಾನದಲ್ಲಿದ್ದು ವಿದೇಶಾಂಗ
ವ್ಯವಹಾರವನ್ನು ನೂಡಿಕೊಳ್ಳುತ್ತಿದ್ದವರು ಯಾರು.
A) ಸುಮಂತ
B) ಪೇಶ್ವೆ
C) ಪಂಡಿತ್ ರಾವ್
D) ಸಚಿವ
A)
8) ಕಾಂಗ್ರೆಸ್ ಅವನತಿ ಹೊಂದುತ್ತಿದೆ ಅದರ
ಶಾಂತಿಯುತ ಅಂತ್ಯಕ್ಕೆ ನೆರವಾಗುವುದೆ ನನ್ನ
ಮಹತ್ವಾಕಾಂಕ್ಷೆ ಈ ಹೆಳಿಕೆ ಕೊಟ್ಟವರು.
A) ಮಹಮ್ಮದ್ ಅಲಿ ಜಿನ್ನಾ
B) ಲಾರ್ಡ್ ಡಪರಿನ್
C) ಲಾರ್ಡ್ ರಿಪ್ಪನ್
D) ಲಾರ್ಡ್ ಕರ್ಜನ್
D)
9) ಕೆಳೆಗಿನ ಸುಲ್ತಾನರಲ್ಲಿ ಅಶೋಕ ಸ್ತಂಬವನ್ನು ದೆಹಲಿಗೆ
ತಂದವರು ಯಾರು.
A) ಅಲ್ಲವುದ್ದಿನ್ ಖಿಲ್ಜಿ
B) ಫಿರೋಜ್ ತುಘಲಕ್
C) ಘಿಯಸುದ್ದಿನ್ ಬಲ್ಬನ್
D) ಮಹಮ್ಮದ್ ಬಿನ್ ತುಘಲಕ್.
B)
10) ಕೃಷಿ ಅಭಿವೃದ್ಧಿ ಸಚಿವಾಲಯವನ್ನು ಸ್ಥಾಪಿಸಿದ ದೆಹಲಿಯ
ಸುಲ್ತಾನ ಯಾರು.
A) ಮಹಮ್ಮದ್ ಬಿನ್ ತುಘಲಕ್
B) ಬಲ್ಬನ್
C) ಅಲ್ಲವುದ್ದಿನ್ ಖಿಲ್ಜಿ
D) ಪಿರೋಜಾ ಷಾ ತುಘಲಕ್
A)
11) ಆಳವಾದ ಸಮುದ್ರದಲ್ಲಿ ಮೀನುಗಾರರ ಉಸಿರಾಟದ
ಸಹಾಯಕ್ಕಾಗಿ ಬಳಸುವ ಅನಿಲ.
A) ಆರ್ಗಾನ
B) ಹೀಲಿಯಂ
C) ನಿಯಾನ
D) ಕ್ರಿಪ್ಟಾನ್
D)
12) ಕವಿ ಕಾಳಿದಾಸನ ಹೆಸರು ಈ ಕೆಳಗಿನ ಯಾವ ಶಾಸನದಲ್ಲಿ
ಪ್ರಸ್ತಾಪಿಸಲ್ಪಟ್ಟಿದೆ.
A) ಅಲಹಾಬಾದ್ ಶಾಸನ
B) ಮಸ್ಕಿ ಶಾಸನ
C) ಐಹೊಳೆ ಶಾಸನ
D) ರೂಮಿಂಡೈ ಶಾಸನ
C)
13) ಕೆಳಗಿನ ಯಾವ ನಗರವನ್ನು ಶ್ವೇತ ನಗರವೆಂದು
ಕರೆಯುತ್ತಾರೆ.
A) ಉದಾಂಪುರ
B) ಗುರುಗಾಂವ
C) ಸಿಯಾಲ್ ಕೋಟ್
D) ಸೂರತ್
A)
14) ಸೂರ್ಯ ಪಶ್ಚಿಮದಲ್ಲಿ ಉದಯಿಸಿ ಪೂರ್ವದಲ್ಲಿ
ಅಸ್ತಂಗತವಾಗುವುದು ಕೆಳಗಿನ ಈ ಗ್ರಹದಲ್ಲಿ.
A) ಗುರು
B) ಬುಧ
C) ಶುಕ್ರ
D) ಶನಿ
C)
15) ಶೈವರ ಅಜಂತಾ ಎಂದು ಈ ಕೆಳಗಿನ ಯಾವ
ದೇವಾಲಯಕ್ಕೆ ಕರೆಯುತ್ತಾರೆ.
A) ಕಾರ್ಲೆ ದೇವಾಲಯ
B) ಲೇಪಾಕ್ಷಿ ದೇವಾಲಯ.
C) ಕೈಲಾಸನಾಥ ದೇವಾಲಯ
D) ಮೇಲಿನ ಯಾವುದು ಅಲ್ಲ
B)
16) ವಿಜಯನಗರ ಅರಸನಾದ ಶ್ರೀ ಕೃಷ್ಣ ದೇವರಾಯ
ಯಾರ ಸಮಕಾಲೀನ ಅರಸ .
A) ಬಾಬರ್
B) ಬಲ್ಬನ್
C) ಜಹಾಂಗೀರ್
D) ಅಲ್ಲವುದ್ದಿನ್ ಖಿಲ್ಜಿ.
A)
17) ಭಾರತದಲ್ಲಿ ಟೆಲಿಕೃಷಿ ಯನ್ನು ಮೊದಲ ಬಾರಿಗೆ
ಆರಂಭಿಸಿದ ರಾಜ್ಯ.
A) ಗುಜರಾತ
B) ಹರಿಯಾಣ
C) ತಮಿಳುನಾಡು
D) ಉತ್ತರ ಪ್ರದೇಶ
B)
18) ಭಾರತದ ಕಪ್ಪು ಎರೆಭೂಮಿಯನ್ನು ಹೀಗೂ
ಹೆಸರಿಸುತ್ತಾರೆ.
A) ಹ್ಯೂಮಸ್
B) ಲ್ಯಾಟ್ ರೈಟ್
C) ಅಲ್ಲುವಿಯಲ್
D) ರೆಗರ್
D)
19)ಸಿಂಧೂ ಗಂಗಾ ಬ್ರಹ್ಮ ಪುತ್ರ ಮೈದಾನದಲ್ಲಿ
ಕಂಡು ಬರುವ ಮುಖ್ಯ ಮಣ್ಣು ಯಾವುದು.
A) ಕೆಂಪು ಮಣ್ಣು
B) ಮೆಕ್ಕಲು ಮಣ್ಣು
C) ಜಂಬಿಟ್ಟಿಗೆ ಮಣ್ಣು
D) ಕಪ್ಪು ಮಣ್ಣು
B)
20) ಲೂನಿ ನದಿಯ ಉಗಮ ಸ್ಥಾನ .
A) ರತ್ನಾಕರ ಸಾಗರ
B) ಬನಾ ಸಾಗರ
C) ಗಂಗಾ ಸಾಗರ
D) ಅನು ಸಾಗರ
D)
21) ಕರ್ನಾಟಕದ ರಾಜ್ಯದ ಈ ಕೆಳಕಂಡ ಯಾವ ರೈಲು
ನಿಲ್ದಾಣವು ಸಂಪೂರ್ಣವಾಗಿ ಮೊಟ್ಟ
ಮೊದಲ ಕ್ಯಾಶ್ ಲೆಸ್ ರೈಲು ನಿಲ್ದಾಣ ಎಂಬ
ಖ್ಯಾತಿಗೆ ಬಾಜನವಾಗಿದೆ.
A) ಮೈಸೂರು ರೈಲ್ವೆ ನಿಲ್ದಾಣ
B) ರಾಯಚೂರು ರೈಲ್ವೆ ನಿಲ್ದಾಣ
C) ಬೆಂಗಳೂರು ರೈಲ್ವೆ ನಿಲ್ದಾಣ
D) ಹುಬ್ಬಳ್ಳಿ ರೈಲ್ವೆ ನಿಲ್ದಾಣ
B)
22) ಭಾರತ ದೇಶದಲ್ಲಿ ಇದೆ ಮೊದಲ ಬಾರಿಗೆ
ಕರ್ನಾಟಕವು ಈ ಕೆಳಕಂಡ ಯಾವ ಕ್ರೀಡೆಯ
ಆಟಗಾರರಿಗೆ ನೂತನ ಪಿಂಚನಿ ಯೋಜನೆಯಾದ ಸುರಕ್ಷಾ
ಯೋಜನೆಯನ್ನು ಜಾರಿಗೊಳಿಸಿದೆ.
A) ಕ್ರಿಕೆಟ್ ಆಟಗಾರರಿಗೆ
B) ಹಾಕಿ ಆಟಗಾರರಿಗೆ
C) ಪುಟ್ಬಾಲ್ ಆಟಗಾರರಿಗೆ
D) ಬಾಸ್ಕೆಟ್ ಬಾಲ್ ಆಟಗಾರರಿಗೆ
A)
23) 2018 ರ ವೇಳೆಗೆ ಭರತ ದೇಶಕ್ಕೆ
ಹೊಂದಿಕೊಂಡಿರುವ ಈ ಕೆಳಕಂಡ
ಯಾವ ಎರಡು ರಾಷ್ಟ್ರಗಳ ಅಂತರಾಷ್ಟ್ರಿಯ ಗಾಡಿಯನ್ನು
ಭದ್ರತೆಯ ದ್ರಷ್ಟಿಯಿಂದ ಸಂಪೂರ್ಣವಾಗಿ ಮುಚ್ಚಲು
ಕೇಂದ್ರ ಸರ್ಕಾರ ಘೋಷಿಸಿದೆ.
A) ಅಪ್ಘಾನಿಸ್ತಾನ್ ಮತ್ತು ಪಾಕಿಸ್ತಾನ.
B) ಪಾಕಿಸ್ತಾನ ಮತ್ತು ಭೂತಾನ್
C) ಪಾಕಿಸ್ತಾನ ಮತ್ತು ಚೈನಾ
D) ಪಾಕಿಸ್ತಾನ ಮತ್ತು ಬಾಂಗ್ಲಾದೇಶ
D)
24) ಭಾರತ ದೇಶದಲ್ಲಿ ಪ್ರಥಮ ಬಾರಿಗೆ ಈ ಕೆಳೆಕಂಡ ಯಾವ
ಗವರ್ನರ್ ಜನರಲ್ ಅಂಚೆ ಚೀಟಿಯನ್ನು ಬಳಸಿದನು
.
A) ಲಾರ್ಡ್ ವಿಲಿಯಂ ಬೆಂಟಿಂಕ್.
B) ಲಾರ್ಡ್ ಮೆಯೋ.
C) ಲಾರ್ಡ್ ಕರ್ನ್ ವಾಲಿಸ್
D) ಲಾರ್ಡ್ ಡಾಲ್ ಹೌಸಿ.
D)
25) 2018ರ ಪುರುಷರ ಹಾಕಿ ವಿಶ್ವ ಕಪ್ ಭಾರತದ ಯಾವ
ನಗರದಲ್ಲಿದೆ.
A) ಭುವನೇಶ್ವರ.
B) ಬೆಂಗಳೂರು
C) ನವದೆಹಲಿ
D) ರಾಂಚಿ.
A)