ಭಾನುವಾರ, ಜೂನ್ 14, 2015

ಭಾರತದ ಇತಿಹಾಸ 2

ವಾಯವ್ಯದ ಸಮ್ಮಿಶ್ರ ಸಂಸ್ಕೃತಿಗಳುಸಂಪಾದಿಸಿ




ಗ್ರೀಕೊ-ಬ್ಯಾಕ್ಟ್ರಿಯನ್ ದೊರೆಯಾದ ಡಿಮೆಟ್ರಿಯಸ್ ಮುಖವನ್ನು ತೋರಿಸುವ ಬೆಳ್ಳಿ ನಾಣ್ಯ (ಕ್ರಿ.ಪೂ. ೨೦೫-೧೭೧ ಕಾಲ)
ಈಗಿನ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಪ್ರದೇಶಗಳಲ್ಲಿ ಪರ್ಷಿಯನ್ ಮತ್ತು ಗ್ರೀಕ್ ಆಕ್ರಮಣಕಾರರು ಮತ್ತಿ ಮಧ್ಯ ಏಷ್ಯಾದಿಂದ ಬಂದ ಅಲೆಮಾರಿ ಜನರಿಂದ ಸಮ್ಮಿಶ್ರ ಸಂಸ್ಕೃತಿಗಳು ಹುಟ್ಟಿಕೊಂಡವು. ಈ ಜನರು ರೇಷ್ಮೆ ವ್ಯಾಪಾರದ ಹಾದಿಯಲ್ಲಿ ಬೆಳೆದು ಭಾರತದ ಪ್ರಗತಿ ಪ್ರಪಂಚಾದ್ಯಂತ ಹರಡಲು ಕಾರಣರಾದರು. ಇವರ ರಾಜರು ಬೌದ್ಧ ಧರ್ಮ ಮತ್ತು ಹಿಂದೂ ಧರ್ಮವನ್ನು ಪಾಲಿಸಿ ಉತ್ತರ ಭಾರತದ ಸಂಸ್ಕೃತಿಯ ಮೇಲೆ ಬಹಳಷ್ಟು ಪ್ರಭಾವ ಮಾಡಿದರು.
ಇಂಡೊ-ಗ್ರೀಕ್ ಸಾಮ್ರಾಜ್ಯಸಂಪಾದಿಸಿ
ಈ ಸಾಮ್ರಾಜ್ಯವು ವಾಯವ್ಯ ಮತ್ತು ಉತ್ತರ ಭಾರತವನ್ನು ಕ್ರಿ.ಪೂ. ೧೮೦ ರಿಂದ ಕ್ರಿ.ಪೂ. ೧೦ ರ ತನಕ ಮೂವತ್ತಕ್ಕಿಂತ ಹೆಚ್ಚು ಗ್ರೀಕ್ ರಾಜರುಗಳಿಂದ ಆಳಿತು. ಗ್ರೀಕೊ-ಬ್ಯಾಕ್ಟ್ರಿಯನ್ ರಾಜನಾದ ಡಿಮೆಟ್ರಿಯಸ್ ಭಾರತವನ್ನು ಕ್ರಿ. ಪೂ. ೧೮೦ ರ ಕಾಲದಲ್ಲಿ ಆಕ್ರಮಣ ಮಾಡಿ ಇಂದಿನ ಉತ್ತರ ಅಫ್ಘಾನಿಸ್ತಾನದ ಪ್ರದೇಶದಲ್ಲಿ ಈ ಸಾಮ್ರಾಜ್ಯವನ್ನು ಸ್ಥಾಪಿಸಿದನು.
ಇಂಡೊ-ಸ್ಕೈಥಿಯನ್ನರುಸಂಪಾದಿಸಿ



ಇಂಡೊ-ಸ್ಕೈಥಿಯನ್ "ರಾಜಾಧಿರಾಜ" ಇಮ್ಮಡಿ ಅಜಿಸ್ ನಾಣ್ಯ (ಕ್ರಿ.ಪೂ. ೩೫-೧೨ ಕಾಲ)
ಇವರು ಇಂಡೊ-ಯೂರೋಪಿಯನ್ ಶಕರ ಗುಂಪಿಗೆ ಸೇರಿದವರಾಗಿದ್ದಾರೆ. ಇವರು ಮೂಲತಃ ಸೈಬೀರಿಯಾ ಪ್ರದೇಶದಿಂದ ಬ್ಯಾಕ್ಟ್ರಿಯಾ, ಕಾಶ್ಮೀರ, ಕೊನೆಗೆ ಭಾರತಕ್ಕೆ ವಲಸೆ ಬಂದರು. ಇವರು ಇಂಡೊ-ಗ್ರೀಕರನ್ನು ಹೊರದಬ್ಬಿ ಗಾಂಧಾರದಿಂದ ಮಥುರಾವರೆಗೆ ರಾಜ್ಯಭಾರ ಮಾಡಿದರು.
ಇಂಡೊ-ಪಾರ್ತಿಯನ್ನರುಸಂಪಾದಿಸಿ
ಕ್ರಿ.ಶ. ೧ನೇ ಶತಮಾನದ ಅವಧಿಯಲ್ಲಿ ಪಾರ್ಥಿಯನ್ನರ ನಾಯಕನಾದ ಗೊಂಡೊಫೆರಿಸ್ ಇಂದಿನ ಅಫ್ಘಾನಿಸ್ತಾನ, ಪಾಕಿಸ್ತಾನ, ಮತ್ತು ಉತ್ತರ ಭಾರತದ ಪ್ರದೇಶದಲ್ಲಿ ಆಳ್ವಿಕೆ ನಡೆಸಿದನು. ಇವರ ಭಾರತೀಯ ಹೆಸರು ಪಲ್ಲವರು ಎಂದು.
ಇಂಡೊ-ಸಸ್ಸಾನಿಯರುಸಂಪಾದಿಸಿ
ಗುಪ್ತ ಸಾಮ್ರಾಜ್ಯದ ಕಾಲದಲ್ಲಿ ಪರ್ಷಿಯಾದ ಸಸ್ಸಾನಿಯರು ವಾಯವ್ಯ ಭಾರತದತ್ತ ದಂಡೆತ್ತಿ ಆಳ್ವಿಕೆ ನಡೆಸಿದರು. ಭಾರತೀಯ ಮತ್ತು ಪರ್ಷಿಯನ್ ಸಂಸ್ಕೃತಿಯ ಮಿಶ್ರಣವಾಗಿ ಇಂಡೊ-ಸಸ್ಸಾನಿಯ ಸಂಸ್ಕೃತಿ ಜನ್ಮ ತಾಳಿ ಪಂಜಾಬ್ ಪ್ರಾಂತ್ಯದ ಪಶ್ಚಿಮ ಭಾಗದಲ್ಲಿ ನೆಲೆಯೂರಿದರು.

ಮಧ್ಯ ಯುಗದ ಅಂಚಿನ ಸಾಮ್ರಾಜ್ಯಗಳುಸಂಪಾದಿಸಿ



ತಂಜಾವೂರಿನ ಚೋಳರ ಕಾಲದ ದೇವಸ್ಥಾನ
ಮಧ್ಯಯುಗದ ನಂತರದ ಭಾಗದಲ್ಲಿ ಉತ್ತರ ತಮಿಳುನಾಡು ವಿನಲ್ಲಿ ಚೋಳ ಮತ್ತು ಕೇರಳ ದಲ್ಲಿ ಚೇರ ಸಾಮ್ರಾಜ್ಯಗಳು ಹುಟ್ಟಿದವು. ದಕ್ಷಿಣಭಾರತದ ಬಂದರುಗಳು ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಪಶ್ಚಿಮದ ರೋಮನ್ ಸಾಮ್ರಾಜ್ಯ ದಿಂದ ಪೂರ್ವದ ಆಗ್ನೇಯ ಏಷ್ಯಾ ತನಕ ಮುಖ್ಯವಾಗಿ ಮಸಾಲೆ ವ್ಯಾಪಾರದಲ್ಲಿ ಪಾತ್ರ ವಹಿಸಿದವು. ಉತ್ತರ ಭಾರತದಲ್ಲಿ ರಜಪೂತರು ನೆಲೆಯೂರಿ ಬ್ರಿಟಿಷರಿಂದ ಭಾರತ ಸ್ವತಂತ್ರವಗುವವರೆಗೂ ಈ ಪ್ರದೇಶವನ್ನು ಒಂದಲ್ಲ ಒಂದು ರೀತಿಯಲ್ಲಿ ಆಳಿದರು. ಈ ಕಾಲದಲ್ಲಿ ಭಾರತದ ಕಲೆ ಬೆಳೆಯಿತು. ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮಗಳು ಭಾರತದಲ್ಲಿ ಮುಖ್ಯವಾಗಿದ್ದವು. ಈ ಕಾಲವು ಉತ್ತರದಲ್ಲಿ ಹರ್ಷವರ್ಧನನ ೭ನೇ ಶತಮಾನದ ಆಕ್ರಮಣಗಳಿಂದ ಆರಂಭವಾಗಿ ಮತ್ತು ದಕ್ಷಿಣದಲ್ಲಿ ವಿಜಯನಗರ ಸಾಮ್ರಾಜ್ಯದ ಪತನದೊಂದಿಗೆ ಮುಕ್ತಾಯವಾಗುತ್ತದೆ.
ಹರ್ಷನ ಸಾಮ್ರಾಜ್ಯಸಂಪಾದಿಸಿ
ಗುಪ್ತ ಸಾಮ್ರಾಜ್ಯದ ಪತನವಾದ ನಂತರ, ಕನೋಜದ ರಾಜ ಹರ್ಷನು 7ನೆಯ ಶತಮಾನದಲ್ಲಿ ಸಂಪೂರ್ಣ ಉತ್ತರ ಭಾರತವನ್ನು ಮತ್ತೆ ಒಗ್ಗೂಡಿಸುವುದರಲ್ಲಿ ಯಶಸ್ವಿಯಾದನು. ಅವನ ಮರಣದ ನಂತರ ಅವನ ಸಾಮ್ರಾಜ್ಯವು ಅವನತಿ ಹೊಂದಿತು. 7ನೆಯ ಶತಮಾನದಿಂದ 9ನೆಯ ಶತಮಾನದವರೆಗೆ ಮೂರು ರಾಜವಂಶಗಳು ಉತ್ತರ ಭಾರತದ ನಿಯಂತ್ರಣಕ್ಕೆ ಪೈಪೋಟಿ ನಡೆಸಿದವು. ಅವು ಮಾಳವದ (ಮುಂದೆ ಕನೋಜಿನ)ಪ್ರತಿಹಾರರು, ಬಂಗಾಳದ ಪಾಲರು ಮತ್ತು ದಖ್ಖನಿಯ ರಾಷ್ಟ್ರಕೂಟರು.
ಚಾಲುಕ್ಯರು ಮತ್ತು ಪಲ್ಲವರುಸಂಪಾದಿಸಿ
ಕ್ರಿ.ಶ. ೬ನೆಯ ಶತಮಾನದಲ್ಲಿ ಕಳಿಂಗ ಅಥವಾ ಒರಿಸ್ಸಾದ ಸಮೀಪದ ಪ್ರದೇಶಗಳಲ್ಲಿ ರಾಜ್ಯಭಾರ ಮಾಡಿಕೊಂಡಿದ್ದ ವಿಷ್ಣುಕುಂಡಿನ ಸಾಮ್ರಾಜ್ಯವು ಮುಂದೆ ಚಾಲುಕ್ಯರ ಸಾಮ್ರಾಜ್ಯದ ಭಾಗವಾಯಿತು. ಚಾಲುಕ್ರ ಸಾಮ್ರಾಜ್ಯವು ಕ್ರಿ.ಶ. ೫೫೦ ರಿಂದ ೭೫೦ ರವರೆಗೆ ಕರ್ನಾಟಕದ ಬಾದಾಮಿಯಿಂದಲೂ, ಮುಂದೆ ೯೭೦ರಿಂದ ೧೧೯೦ರವರೆಗೆ ಕರ್ನಾಟಕದ ಕಲ್ಯಾಣಿಯಿಂದಲೂ, ದಕ್ಷಿಣ ಮತ್ತು ಮಧ್ಯಭಾರತದಲ್ಲಿ ಹಬ್ಬಿದ್ದ ರಾಜ್ಯವನ್ನು ಆಳಿತು. ಕಾಂಚಿಯ ಪಲ್ಲವರು ಅವರ ಸಮಕಾಲೀನರಾಗಿದ್ದರು. ಮುಂದೆ ಸುಮಾರು ಒಂದು ಶತಮಾನದವರೆಗೆ ಪರಸ್ಪರ ಕಿರು ಯುದ್ಧಗಳನ್ನು ಹೂಡಿದ ಈ ಎರಡು ರಾಜ್ಯಗಳು ಅನೇಕ ಬಾರಿ ಪರಸ್ಪರರ ರಾಜಧಾನಿಗಳನ್ನು ಕೈವಶ ಮಾಡಿಕೊಂಡದ್ದೂ ಉಂಟು.ಈ ಯುದ್ಧಗಳಲ್ಲಿ ಶ್ರೀಲಂಕಾದ ರಾಜರು ಮತ್ತು ಕೇರಳದ ಚೇರರು ಪಲ್ಲವರನ್ನು ಬೆಂಬಲಿಸಿದರೆ, ಪಾಂಡ್ಯರ ಬೆಂಬಲ ಚಾಲುಕ್ಯರ ಕಡೆಗಿತ್ತು. ಸಂಪೂರ್ಣ ಭಾರತದುದ್ದಕ್ಕೂ ಏಕಮೇವ ರಾಜ್ಯದ ಪರಿಕಲ್ಪನೆ , ಉತ್ತರಭಾರತದಲ್ಲಿ ಹರ್ಷವರ್ಧನನ ಸೋಲಿನೊಡನೆ ಕುಸಿದುಬಿದ್ದರೂ, ದಕ್ಷಿಣದಲ್ಲಿ ಅದು ಚಿಗುರೊಡೆಯುತ್ತಿತ್ತು. ದಕ್ಷಿಣ ಭಾರತದ ಕಲ್ಲಿನಲ್ಲಿ ಕಡೆದ ಹಾಗೂ ಕಟ್ಟಿದ ಅತ್ಯದ್ಭುತ ದೇವಾಲಯಗಳಲ್ಲಿ ಕೆಲವು ಈ ಎರಡು ಸಾಮ್ರಾಜ್ಯದ ಕಾಲದಲ್ಲಿ ಕಟ್ಟಲ್ಪಟ್ಟವು.
ಚೋಳ ಸಾಮ್ರಾಜ್ಯಸಂಪಾದಿಸಿ



ರಾಷ್ಟ್ರಕೂಟರ ಎಲ್ಲೋರ ಗುಹೆಗಳು
ಚೋಳ ಸಾಮ್ರಾಜ್ಯ ದಕ್ಷಿಣದಲ್ಲಿ ೯-೧೨ನೇ ಶತಮಾನಗಳಲ್ಲಿ ಪ್ರಮುಖ ಸಾಮ್ರಾಜ್ಯವಾಗಿ ಹೊಮ್ಮಿತು. ಮುಂಚಿನ ಮತ್ತು ನಂತರದ ಸಾಮ್ರಾಜ್ಯಗಳ ರೀತಿ ಇವರೂ ಕೂಡ ಭಾರತದ ಪ್ರಖ್ಯಾತ ಸ್ಮಾರಕಗಳನ್ನು ನಿರ್ಮಿಸಿದರು. ಭಾರತದ ದಕ್ಷಿಣ ತುದಿಯಲ್ಲಿ ನೆಲೆಸಿದ್ದ ಕಾರಣ ಇವರು ಶ್ರೀಲಂಕಾವನ್ನು ಆಳಿದರು ಮತ್ತು ಆಗ್ನೇಯ ಏಷ್ಯಾದ ಸಂಸ್ಕೃತಿಯನ್ನು ಬಹಳಷ್ಟು ಪ್ರಭಾವಗೊಳಿಸಿದರು. ಇವರ ನೌಕಾಪಡೆಯು ಆಗಿನ ಕಾಲದಲ್ಲಿ ಅತ್ಯಂತ ಬಲಿಷ್ಠವಾಗಿದ್ದ ಕಾರಣ ಶ್ರೀಲಂಕಾ ಮತ್ತು ಬಂಗಾಳ ಕೊಲ್ಲಿಯ ಪ್ರದೇಶಗಳ ಮೇಲೆ ಹಿಡಿತ ಸಾಧಿಸಿದ್ದರು. ರಾಜರಾಜ ಚೋಳನನ್ನು ಭಾರತದ ಸರ್ವೋತ್ತಮ ಸಾಮ್ರಾಟರ ಸಾಲಿನಲ್ಲಿ ಪರಿಗಣಿಸಲಾಗುತ್ತದೆ.
ಪ್ರತಿಹಾರರು, ಪಾಲರು ಮತ್ತು ರಾಷ್ಟ್ರಕೂಟರುಸಂಪಾದಿಸಿ
ಪ್ರತಿಹಾರರು (ಇವರಿಗೆ ಗುರ್ಜರ ಪ್ರತಿಹಾರರು ಎಂದೂ ಹೆಸರಿದೆ) ಆರನೆಯ ಶತಮಾನದಿಂದ ಹನ್ನೊಂದನೆಯ ಶತಮಾನದವರೆಗೆ ಇಂದಿನ ರಾಜಸ್ಥಾನ ಮತ್ತು ಉತ್ತರ ಭಾರತದ ಪ್ರದೇಶಗಳಲ್ಲಿ ರಾಜ್ಯವಾಳಿದರು. ಪಾಲರ ಸಾಮ್ರಾಜ್ಯವು ಬಿಹಾರ ಮತ್ತು ಬಂಗಾಳಗಳಲ್ಲಿ ಹಬ್ಬಿದ್ದು ೮ರಿಂದ ೧೨ನೆಯ ಶತಮಾನದವರೆಗೆ ಅಸ್ತಿತ್ವದಲ್ಲಿತ್ತು. ಕರ್ನಾಟಕದ ಮಳಖೇಡದ ರಾಷ್ಟ್ರಕೂಟರು ಚಾಲುಕ್ಯರ ನಂತರ ಪ್ರಬಲರಾಗಿ, ೮ರಿಂದ ೧೦ನೆಯ ಶತಮಾನದವರೆಗ ದಖ್ಖನಿ ಪ್ರದೇಶದಲ್ಲಿ ರಾಜ್ಯವಾಳಿದರು.ಈ ಮೂರೂ ರಾಜ್ಯಗಳೂ ಉತ್ತರಭಾರತದ ಪ್ರದೇಶಗಳ ಮೇಲೆ ನಿಯಂತ್ರಣಕ್ಕಾಗಿ ತಮ್ಮತಮ್ಮಲ್ಲಿಯೇ ಹೊಡೆದಾಡುತ್ತಿದ್ದ ಕಾಲದಲ್ಲಿಯೇ , ದಕ್ಷಿಣದಲ್ಲಿ ಚೋಳರ ಸಾಮ್ರಾಜ್ಯವು ವಿಜೃಂಭಿಸುತ್ತಿತ್ತು. ಪಾಲ ರಾಜ್ಯವು ಮುಂದೆ ಸೇನ ಸಾಮ್ರಾಜ್ಯದ ಪಾಲಾದರೆ, ಪ್ರತಿಹಾರರ ಸಾಮ್ರಾಜ್ಯವು ವಿವಿಧ ರಜಪೂತ ರಾಜ್ಯಗಳಾಗಿ ಹೋಳಾಯಿತು.
ರಜಪೂತರುಸಂಪಾದಿಸಿ



ಶಿವ ಮತ್ತು ಉಮೆಯರ ೧೪ನೇ ಶತಮಾನದ ಪ್ರತಿಮೆ
ದಾಖಲೆಗಳ ಪ್ರಕಾರ ,ರಜಪೂತರ ರಾಜ್ಯ ಸ್ಥಾಪನೆ ಆರನೆಯ ಶತಮಾನದಲ್ಲಿ ರಾಜಸ್ಥಾನದಲ್ಲಿ ಆಯಿತು. ರಜಪೂತ ರಾಜರುಗಳು, ಮೇವಾರ (ಸಿಸೋದಿಯ), ಗುಜರಾತ್ (ಸೋಲಂಕಿ), ಮಾಳವ (ಪರಮಾರರು) , ಬುಂದೇಲಖಂಡ (ಚಾಂಡೇಲರು) ಮತ್ತು ಹರಿಯಾಣ (ತೋಮರರು), ಸೇರಿದಂತೆ ಉತ್ತರಭಾರತದ , ಬಹುತೇಕ ಎಲ್ಲ ಪ್ರದೇಶಗಳನ್ನೂ ತಮ್ಮ ಅಧೀನಕ್ಕೆ ಒಳಪಡಿಸಿದ್ದರು. ಕಾಂಚೀಪುರ ರಾಜಧಾನಿಯಾಗಿದ್ದ ಪಲ್ಲವರು ಭಾರತದ ಆಗ್ನೇಯಭಾಗದಲ್ಲಿ ಕ್ರಿ.ಶ. ನಾಲ್ಕರಿಂದ ಒಂಭತ್ತನೆಯ ಶತಮಾನದವರೆಗೆ ಆಳಿದರು. ರಜಪೂತರಿಗಿಂತ ಮೊದಲು ಉತ್ತರಭಾರತವು ಪ್ರತೀಹಾರರ ಅಧೀನದಲ್ಲಿತ್ತು. ಸೇನರು, ಪಾಲರು ಇತ್ಯಾದಿ ಅನೇಕ ರಾಜವಂಶಗಳು ದೇಶದ ವಿವಿಧ ಭಾಗಗಳಲ್ಲಿ ರಾಜ್ಯಗಳನ್ನು ಕಟ್ಟಿ ರಾಜ್ಯಭಾರ ಮಾಡಿದರು. ಉತ್ತರ ಭಾರತದ ತಮ್ಮ ರಾಜ್ಯಗಳ ಆಯಕಟ್ಟಿನ ಸ್ಥಾನದ ಕಾರಣ, ರಜಪೂತ ರಾಜರುಗಳು, ಭಾರತಕ್ಕೆ ನುಗ್ಗುತ್ತಿದ್ದ ಮುಸ್ಲಿಮ್ ಸುಲ್ತಾನರುಗಳ ದಾಳಿಯನ್ನು ಸತತವಾಗಿ ಎದುರಿಸಬೇಕಾಗಿ ಬಂದು, ಬಹಳ ಕಾಲದವರೆಗೆ ಅವರನ್ನು ಹಿಮ್ಮೆಟ್ಟಿಸಿ ತಮ್ಮ ರಾಜ್ಯಗಳನ್ನು ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾದರು. ಚೌಹಾಣ ವಂಶದ ರಜಪೂತ ರಾಜ ಪೃಥ್ವೀರಾಜ ಚೌಹಾಣನು ಈ ಬಗ್ಯೆ ಹೆಸರಾಗಿದ್ದಾನೆ.
ಹೊಯ್ಸಳ, ಕಾಕತೀಯ, ದಕ್ಷಿಣ ಕಳಚೂರ್ಯ ಮತ್ತು ಸೇವುಣ ರಾಜ್ಯಗಳುಸಂಪಾದಿಸಿ
ಹನ್ನೆರಡನೆಯ ಶತಮಾನದ ಸುಮಾರು ಮಧ್ಯಭಾಗದಲ್ಲಿ ಕಲ್ಯಾಣಿ ಚಾಲುಕ್ಯರ ಅವನತಿಯೊಂದಿಗೆ, ಅವರ ರಾಜ್ಯವು, ಅವರ ಸಾಮಂತರಾಗಿದ್ದ ಹಳೇಬೀಡಿನ ಹೊಯ್ಸಳರು, ವಾರಂಗಲ್ಲಿನ ಕಾಕತೀಯರು, ದೇವಗಿರಿಯ ಸೇವುಣರು ಮತ್ತು ಕಳಚೂರ್ಯರ ದಕ್ಷಿಣ ಶಾಖೆ, ಇವರುಗಳ ರಾಜ್ಯಗಳಲ್ಲಿ ಹಂಚಿಹೋಯಿತು. ೧೪ನೆಯ ಶತಮಾನದ ಮೊದಲ ಭಾಗದಲ್ಲಿ , ದೆಹಲಿಯ ಸುಲ್ತಾನರುಗಳ ದಕ್ಷಿಣದ ದಂಡಯಾತ್ರೆಗಳು ಪ್ರಾರಂಭವಾಗಿ ಹಾಳುಗೆಡವುವವರೆಗೆ, ಸ್ಥಳೀಯ ಭಾಷೆಯಲ್ಲಿ ಸಾಹಿತ್ಯ ಮತ್ತು ವಾಸ್ತುಶಿಲ್ಪಗಳು ಪ್ರವರ್ಧಮಾನಕ್ಕೆ ಬಂದವು. ಕ್ರಿ.ಶ. ೧೩೪೩ರವರೆಗೆ ಈ ಎಲ್ಲಾ ರಾಜ್ಯಗಳ ಅವಸಾನ ವಾಗಿದ್ದು, ಹೊಯ್ಸಳ ಮತ್ತು ಕಾಕತೀಯರ ಆಳ್ವಿಕೆಯ ಪ್ರದೇಶಗಳಲ್ಲಿ ವಿಜಯನಗರ ಸಾಮ್ರಾಜ್ಯವು ತಲೆ ಎತ್ತಿತು.
ಶಾಹಿ ರಾಜ್ಯಸಂಪಾದಿಸಿ
ಏಳನೆಯ ಶತಮಾನದ ಮಧ್ಯಭಾಗದಿಂದ ಹನ್ನೊಂದನೆಯ ಶತಮಾನದ ಮೊದಲಿನವರೆಗೆ ಆಳಿದ ಶಾಹಿ ರಾಜ್ಯವು ಈಗಿನ ಅಫ್ಘಾನಿಸ್ತಾನದ ಪೂರ್ವ ಭಾಗ, ಪಾಕಿಸ್ತಾನದ ಉತ್ತರ ಭಾಗ ಮತ್ತು ಕಾಶ್ಮೀರವನ್ನು ಒಳಗೊಂಡಿತ್ತು. ಅವರ ರಾಜ್ಯಕಾಲವನ್ನು ಬೌದ್ಧ ತುರ್ಕ ಶಾಹಿ ಮತ್ತು ಹಿಂದೂ ಶಾಹಿ ಎಂದು ವಿಭಜಿಸಲಾಗಿದೆ. ಈ ಬದಲಾವಣೆಯು ಕ್ರಿ.ಶ.870ರ ಸುಮಾರಿಗೆ ಆಗಿರಬೇಕು. ಗಾಂಧಾರ ಅಥವಾ ಅಫ್ಘಾನಿಸ್ತಾನವನ್ನು ಆಳಿದ ಕೊನೆಯ ಬೌದ್ಧ ಅಥವಾ ಹಿಂದೂ ವಂಶ ಇದಾಗಿದ್ದು, ಇದರ ನಂತರ ಈ ಪ್ರದೇಶವು ಘಜ್ನವಿ ಮತ್ತಿತರ ಸುಲ್ತಾನೀ ಆಕ್ರಮಣಕಾರರ ಅಧೀನವಾಯಿತು
ವಿಜಯನಗರ ಸಾಮ್ರಾಜ್ಯ ಕ್ರಿ.ಶ ೧೩೩೬-೧೫೬೫ಸಂಪಾದಿಸಿ



ಕರ್ನಾಟಕದ ವಿಜಯನಗರದ ಶಿಲ್ಪಕಲೆಯನ್ನು ಬಿಂಬಿಸುವ ವಿಠ್ಠಲ ದೇವಸ್ಥಾನದಲ್ಲಿ ಕಲ್ಲಿನ ರಥ
ಹರಿಹರ (ಹಕ್ಕ) ಮತ್ತು ಬುಕ್ಕ ಸಹೋದರರು ವಿಜಯನಗರ ಸಾಮ್ರಾಜ್ಯವನ್ನು ೧೩೩೬ರಲ್ಲಿ ವಿಜಯನಗರ ವನ್ನು ರಾಜಧಾನಿಯಾಗಿ ಸ್ಥಾಪಿಸಿದರು. ಈ ವಿಜಯನಗರವು ಈಗಿನ ಕಾಲದ ಕರ್ನಾಟಕ ದ ಹಂಪೆ. ಕೃಷ್ಣದೇವರಾಯನ ಆಳ್ವಿಕೆಯಲ್ಲಿ ಈ ಸಾಮ್ರಾಜ್ಯದ ವೈಭವ ಉತ್ತುಂಗ ಸ್ಥಿತಿ ಮುಟ್ಟಿತು. ೧೫೬೫ರ ಯುದ್ಧದಲ್ಲಿ ತೀವ್ರ ಪರಾಭವಗೊಂಡರೂ, ಸಣ್ಣ ಪ್ರಮಾಣದಲ್ಲಿ ಇನ್ನೂ ಒಂದು ಶತಮಾನದ ವರೆಗೂ ಮುಂದುವರೆಯಿತು. ಆಗಿನ ಕಾಲದ ದಕ್ಷಿಣ ಭಾರತದ ರಾಜ್ಯಗಳು, ಇಂಡೋನೇಶಿಯದವರೆಗೂ , ತಮ್ಮಪ್ರಭಾವ ಬೀರಿ , ಆಗ್ನೇಯ ಏಶಿಯಾದ ಸಾಗರದಾಚೆಯ ವಿಶಾಲ ಪ್ರದೇಶಗಳನ್ನು ತಮ್ಮ ಅಂಕೆಯಲ್ಲಿಟ್ಟುಕೊಂಡಿದ್ದರು. ಮುಂದೆ ಈ ಹಿಂದೂ ಅರಸೊತ್ತಿಗೆಗೂ, ಮುಸ್ಲಿಮ್ ಬಹಮನಿ ಸುಲ್ತಾನರಿಗೂ ಚಕಮಕಿ ಪ್ರಾರಂಭವಾಯಿತು. ಇದರ ಪರಿಣಾಮವಾಗಿ, ಅಲ್ಲಿಯವರೆಗೂ, ಪ್ರತ್ಯೇಕವಾಗಿದ್ದ ಹಿಂದೂ, ಮುಸ್ಲಿಮ್ ಸಂಸ್ಕೃತಿಗಳು ಪರಸ್ಪರರ ಸಂಪರ್ಕಕ್ಕೆ ಬಂದು, ಪ್ರಭಾವಿತವಾದವು. ಈ ಪ್ರಭಾವ ಬಹಳ ಕಾಲ ಉಳಿಯಿತು. ಈ ಸಾಮ್ರಾಜ್ಯವು ಕಲೆ, ಶಿಲ್ಪಕಲೆ ಮತ್ತು ಕನ್ನಡ , ತೆಲುಗು ಹಾಗೂ ಸಂಸ್ಕೃತ ಸಾಹಿತ್ಯಗಳ ಅಭಿವೃದ್ಧಿಗೆ ಅಗಾಧ ಕೊಡುಗೆ ನೀಡಿತು. ಹಂಪೆಯಲ್ಲಿ ಕಾಣಸಿಗುವ ಸಮೃದ್ಧ ಅವಶೇಷಗಳು ಇದಕ್ಕೆ ಸಾಕ್ಷಿಯಾಗಿವೆ. ವಿಜಯನಗರ ಸಾಮ್ರಾಜ್ಯವು ಅಂತಿಮವಾಗಿ ಪತನವಾಗಲು ಕಾರಣ ಉತ್ತರದಲ್ಲಿ ಅಡಿಯೂರುತ್ತಿದ್ದ ದೆಹಲಿ ಸುಲ್ತಾನರು. ಇವರು ರಜಪೂತರ ಸ್ಥಾನವಾದ ದೆಹಲಿಯ ಆಸುಪಾಸಿನಲ್ಲಿ ನೆಲೆಯೂರಿದರು. ೨೦೦೦ ವರ್ಷಗಳಷ್ಟು ಹಳೆಯದಾದ ಭಾರತದ ಅಭಿಜಾತ ಸಂಸ್ಕೃತಿಯ ಅಂತ್ಯವಾದ ಇದು ಭಾರತ ಇತಿಹಾಸದ ಹೊಸ ಆರಂಭಕ್ಕೆ ನಾಂದಿಯಾಯಿತು.

ಇಸ್ಲಾಮೀಯ ಸುಲ್ತಾನಿಕೆಗಳುಸಂಪಾದಿಸಿ
ಭಾರತದ ನೆರೆ ಪ್ರದೇಶವಾದ ಪರ್ಷಿಯಾವನ್ನು ಆಕ್ರಮಿಸಿದ ನಂತರ ಅರಬ್-ತುರ್ಕರು ಸಂಪದ್ಭರಿತ ಭಾರತವನ್ನು ಆಕ್ರಮಿಸುವ ಯೋಜನೆ ಹೊಂದಿದ್ದರು. ಆಗಿನ ಕಾಲದಲ್ಲಿ ವಜ್ರದ ಗಣಿಗಳು ಕೇವಲ್ ಭಾರತದಲ್ಲಷ್ಟೇ ಇದ್ದವು. ಉತ್ತರ ಭಾರತದ ರಾಜ್ಯಗಳ ವಿರೋಧದ ಹೊರತಾಗಿಯೂ ಉತ್ತರ ಭಾರತದಲ್ಲಿ ಇಸ್ಲಾಮೀಯ ಸಾಮ್ರಾಜ್ಯ ಸ್ಥಾಪಿಸುವಲ್ಲಿ ಯಶಸ್ವಿಯಾದರು. ತುರ್ಕರು ದಂಡೆತ್ತಿ ಬರುವ ಮುಂಚೆ ಮುಸ್ಲಿಂ ವ್ಯಾಪಾರಿಗಳು ದಕ್ಷಿಣ ಭಾರತದ ಕರಾವಳಿ, ಅದರಲ್ಲೂ ಕೇರಳದಲ್ಲಿ ನೆಲೆಯೂರಿದ್ದರು. ಇದರಿಂದ ಪಶ್ಚಿಮದ ದಿಕ್ಕಿನಿಂದ ಇಸ್ಲಾಂ ಧರ್ಮವು ಭಾರತದ ಧಾರ್ಮಿಕ ಸಂಸ್ಕೃತಿಗೆ ಬಂದು ಸೇರಿತು.
ದೆಹಲಿ ಸುಲ್ತಾನಿಕೆಸಂಪಾದಿಸಿ
೧೨ನೇ ಮತ್ತು ೧೩ನೇ ಶತಮಾನಗಳಲ್ಲಿ ಅರಬ್ಬರು, ತುರ್ಕರು, ಮತ್ತು ಆಫ್ಘನ್ನರು ಉತ್ತರ ಭಾರತದ ಕೆಲವು ಪ್ರದೇಶಗಳನ್ನು ಆಕ್ರಮಿಸಿ ದೆಹಲಿ ಸುಲ್ತಾನಿಕೆಯನ್ನು ಸ್ಥಾಪಿಸಿದರು. ನಂತರ ಗುಲಾಮ ಸಾಮ್ರಾಜ್ಯ ಉತ್ತರ ಭಾರತದ ಬಹುತೇಕ ಪ್ರದೇಶಗಳನ್ನು ಆಕ್ರಮಿಸುವಲ್ಲಿ ಯಶಸ್ವಿಯಾಯಿತು. ನಂತರ ಖಿಲ್ಜಿ ಸಾಮ್ರಾಜ್ಯ ಮಧ್ಯ ಭಾರತವನ್ನು ಆಕ್ರಮಿಸಿದರೂ ಕೂಡ ಸಂಪೂರ್ಣ ಉಪಖಂಡವನ್ನು ವಶಪಡಿಸಿಕೊಳ್ಳುವುದರಲ್ಲಿ ಸೋತರು.

ಮೊಘಲರ ಕಾಲ ಕ್ರಿ.ಶ ೧೫೨೬-೧೭೦೭ಸಂಪಾದಿಸಿ
ಮುಖ್ಯ ಲೇಖನ: ಮೊಘಲ್ ಸಾಮ್ರಾಜ್ಯ
◾ತೈಮೂರನ ವಂಶದ ಬಾಬರನು ಖೈಬರ್ ಕಣಿವೆಯನ್ನು ದಾಟಿಬಂದು, ಮುಂದೆ ಎರಡು ಶತಮಾನಕ್ಕೂ ಹೆಚ್ಚು ಕಾಲ ಮೆರೆದ, ಮೊಘಲ್ ಸಾಮ್ರಾಜ್ಯವನ್ನು ೧೫೨೬ರಲ್ಲಿ ಸ್ಥಾಪಿಸಿದನು. ೧೬೦೦ರ ಹೊತ್ತಿಗಾಗಲೇ ಭಾರತ ಉಪಖಂಡದ ಬಹಳಷ್ಟು ಭಾಗ ಮೊಘಲರ ಆಳ್ವಿಕೆಗೆ ಒಳಪಟ್ಟಿತ್ತು. ೧೭೦೭ರ ನಂತರ ಕ್ರಮೇಣ ಅಧೋಗತಿ ಹಿಡಿದ ಮೊಘಲ್ ಸಾಮ್ರಾಜ್ಯ, ೧೮೫೭ರ ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮದ ವೇಳೆಗೆ ಸಂಪೂರ್ಣ ನೆಲಕಚ್ಚಿತು. ಈ ಕಾಲಾವಧಿಯಲ್ಲಿ ಭಾರತದ ಉಪಖಂಡದ ಸಾಮಾಜಿಕ ಜೀವನವು ಬಹಳಷ್ಟು ಬದಲಾವಣೆಗಳನ್ನು ಕಂಡಿತು. ಹಿಂದೂ ಬಹುಮತದ ಪ್ರದೇಶವನ್ನು ಆಳುತ್ತಿದ್ದ ಮೊಘಲ್ ರಾಜರುಗಳಲ್ಲಿ ಕೆಲವರು ಧಾರ್ಮಿಕ ಸಹಿಷ್ಣುತೆಯನ್ನು ತೋರಿದರೆ, ಇನ್ನು ಕೆಲವರು ಉದಾರವಾಗಿ ಹಿಂದೂ ಸಂಸ್ಕೃತಿಯನ್ನು ಪ್ರೋತ್ಸಾಹಿಸಿದರು.
◾ಇನ್ನೂ ಕೆಲವರು, ಹಿಂದೂ ದೇವಾಲಯಗಳನ್ನು ಹಾಳುಗೆಡವಿ, ಮುಸ್ಲಿಮರಲ್ಲದವರ ಮೇಲೆ ವಿಶೇಷ ತಲೆಗಂದಾಯವನ್ನು ಹೇರಿದರು. ತನ್ನ ಉತ್ತುಂಗ ಕಾಲದಲ್ಲಿ ಮೌರ್ಯ ಸಾಮ್ರಾಜ್ಯಕ್ಕಿಂತ ಸ್ವಲ್ಪ ದೊಡ್ಡದಾಗಿದ್ದ ಈ ರಾಜ್ಯವು, ಅಧೋಗತಿ ಹಿಡಿಯುತ್ತಿದ್ದಂತೆ, ಅನೇಕ ಸಣ್ಣಪುಟ್ಟ ರಾಜ್ಯಗಳು ಸ್ವತಂತ್ರವಾಗಿ ಅಧಿಕಾರಕ್ಕೆ ಬಂದವು. ಹಾಗೆ ನೋಡಿದರೆ, ಮೊಘಲರ ಅವನತಿಗೆ ಈ ರಾಜ್ಯಗಳ ತಲೆ ಎತ್ತುವಿಕೆಯೂ ಕಾರಣವಾಗಿತ್ತು ಎನ್ನಬಹುದು. ಮುಘಲ್ ಸಾಮ್ರಾಜ್ಯವು ಆವರೆಗೆ ಆಳಿದ ಸಾಮ್ರಾಜ್ಯಗಳಲ್ಲಿ ಬಹುಶಃ ಅತಿ ಶ್ರೀಮಂತವಾದುದಾಗಿತ್ತು.
◾ಮೊಘಲರು ತಮ್ಮ ಪ್ರಜೆಗಳನ್ನು ಆಳಲು ಅಮಾನುಷ ತಂತ್ರಗಳನ್ನು ಉಪಯೋಗಿಸಿದರೂ, ಭಾರತದ ಸಂಸ್ಕೃತಿಯ ಜೊತೆ ಒಗ್ಗೂಡುವ ಪ್ರಯತ್ನ ಮಾಡಿದ ಕಾರಣ ದೆಹಲಿ ಸುಲ್ತಾನರಿಗಿಂತ ಯಶಸ್ವಿಗಳಾದರು. ಈ ರೀತಿಯಾಗಿಯೇ ಮಂಗೋಲ ರು ಏಷ್ಯಾ ವನ್ನು ಗೆದ್ದು ಚೀನಾ ಆಗಲೀ ಅಥವಾ ಪರ್ಶಿಯಾ ಆಗಲೀ, ಸ್ಥಳೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡರು. ಅಕ್ಬರ್ ಇದಕ್ಕೆ ಪ್ರಖ್ಯಾತನಾಗಿದ್ದನು.
◾ಮುಘಲ್ ದೊರೆಗಳು ತ್ವರಿತವಾಗಿ ಸ್ಥಳೀಯ ರಾಜಪರಿವಾರದವರನ್ನು ವಿವಾಹವಾಗಿ, ಭಾರತೀಯ ಸಂತತಿಯನ್ನು ಹೊಂದಿದರು. ಈ ಸಂತತಿಯು ಸ್ಥಳೀಯ ರಾಜರುಗಳ ಜೊತೆ ಸೇರಿ ಮಂಗೋಲ-ಪರ್ಶಿಯನ್ ಸಂಸ್ಕೃತಿಯನ್ನು ಪ್ರಾಚೀನ ಭಾರತೀಯ ಶೈಲಿಗಳಿಗೆ ಸಮ್ಮಿಶ್ರಗೊಳಿಸಿ ಇಂಡೋ-ಸರ್ಸೆನಿಕ್ ಕಲೆಯನ್ನು ಹುಟ್ಟುಹಾಕಿದರು. ಈ ಸಂಸ್ಕೃತಿಯನ್ನು ತೊಡೆದು ಹಾಕಿದ ಔರಂಗಜೇಬ್ ತನ್ನ ನಿರ್ದಯತೆ ಮತ್ತು ಕೇಂದ್ರೀಕರಣದಿಂದ ಬಹುತತ್ವವಾದವನ್ನು ಅಳಿಸಿಹಾಕಿ ಬಹುಸಂಖ್ಯೆಯಲ್ಲಿದ್ದ ಹಿಂದೂ ಜನಾಂಗದವರ ಅವಕೃಪೆಗೊಳಗಾದನು. ಹೀಗೆ ಮುಘಲ್ ಸಾಮ್ರಾಜ್ಯದ ಪತನಕ್ಕೆ ಕಾರಣನಾದನು.
ಹೆಸರಾಂತ ಮೊಘಲ ಸಾಮ್ರಾಟರುಗಳು
ಚಕ್ರವರ್ತಿ
ಆಳ್ವಿಕೆ ಪ್ರಾರಂಭ
ಆಳ್ವಿಕೆ ಅಂತ್ಯ
ಬಾಬರ್ ೧೫೨೬ ೧೫೩೦
ಹುಮಾಯೂನ್ ೧೫೩೦ ೧೫೫೬
ಅಕ್ಬರ್ ೧೫೫೬ ೧೬೦೫
ಜಹಾಂಗೀರ್ ೧೬೦೫ ೧೬೨೭
ಶಹಜಹಾನ್ ೧೬೨೭ ೧೬೫೮
ಔರಂಗಜೇಬ ೧೬೫೮ ೧೭೦೭

ಮೊಘಲರ ನಂತರದ ಕಾಲಸಂಪಾದಿಸಿ
ಈ ಕಾಲದಲ್ಲಿ ಮರಾಠ ಮತ್ತಿನ್ನಿತರ ಪ್ರಾಂತೀಯ ರಾಜ್ಯಗಳ ಉಗಮ ಮತ್ತು ಐರೋಪ್ಯರ ಆಗಮನವಾಯಿತು.
ಮರಾಠರ ಒಕ್ಕೂಟ ೧೬೭೪-೧೭೬೧ಸಂಪಾದಿಸಿ
ಬಿಜಾಪುರ ಸುಲ್ತಾನನ ರಾಜ್ಯದ ಭಾಗವೊಂದನ್ನು ಆಕ್ರಮಿಸಿದ ಶಿವಾಜಿಯು ೧೬೭೪ರಲ್ಲಿ ಮರಾಠಾ ಅಧಿಪತ್ಯವನ್ನು ಸ್ಥಾಪಿಸಿದನು. ದಖ್ಖನಿ ಪ್ರದೇಶದ ಮೇಲೆ ತನ್ನ ಅಧಿಕಾರವನ್ನು ಸ್ಥಾಪಿಸಿದ ಮೇಲೆ ಶಿವಾಜಿಯು ಮೊಘಲರ ಔರಂಗಜೇಬನ ಮೇಲೆ ಯುದ್ಧ ಸಾರಿದನು. ೧೮ನೆಯ ಶತಮಾನದ ಹೊತ್ತಿಗೆ ಈ ಸಾಮ್ರಾಜ್ಯವು, ಪೇಶ್ವೆಗಳ ಆಡಳಿತದಲ್ಲಿ ಒಕ್ಕೂಟವಾಗಿ ಬದಲಾಗಿತ್ತು. ೧೭೬೦ರಲ್ಲಿ ಈ ರಾಜ್ಯವು ಉಪಖಂಡದ ಬಹುತೇಕ ಭಾಗವನ್ನು ಒಳಗೊಂಡಿತ್ತು. ಮೂರನೆಯ ಪಾಣಿಪತ್ ಯುದ್ಧ ೧೭೬೧ ದಲ್ಲಿ ಅಫಘಾನ ಅಹಮದ್ ಶಹಾ ಅಬ್ದಾಲಿಯಿಂದ ಸೋಲೊಪ್ಪುವುದರೊಂದಿಗೆ, ಮರಾಠರ ಏಳಿಗೆ ಕುಂಠಿತವಾಯಿತು. ಕೊಟ್ಟಕೊನೆಯ ಪೇಶ್ವೆ ಎರಡನೆಯ ಬಾಜೀರಾಯನು ಮೂರನೆಯ ಬ್ರಿಟಿಷ್ -ಮರಾಠಾ ಯುದ್ಧದಲ್ಲಿ ಬ್ರಿಟಿಷರಿಂದ ಪರಾಜಿತನಾದನು.
ಮೈಸೂರು ಸಂಸ್ಥಾನಸಂಪಾದಿಸಿ
ಒಡೆಯರ್ ವಂಶದವರಿಂದ ೧೪೦೦ರಲ್ಲಿ ಮೈಸೂರು ಸಂಸ್ಥಾನವು ಸ್ಥಾಪಿತವಾಯಿತು. ಹೈದರಾಲಿ ಮತ್ತು ನಂತರ ಅವನ ಮಗ ಟಿಪ್ಪುಸುಲ್ತಾನ್ ಕಾಲದಲ್ಲಿ ಒಡೆಯರ್ ಆಳ್ವಿಕೆಗೆ ಭಂಗ ಬಂದಿತು. ಈ ಕಾಲದಲ್ಲಿ ಮೈಸೂರು, ಒಂದಾದ ಮೇಲೊಂದು ಯುದ್ಧಗಳನ್ನು ಎದುರಿಸಿತು. ಇವುಗಳಲ್ಲಿ ಬಹುತೇಕ ಹೋರಾಟಗಳು ಫ್ರೆಂಚರ ಸಹಾಯ (ಅಥವಾ ಸಹಾಯದ ವಾಗ್ದಾನ)ದೊಂದಿಗೆ ಬ್ರಿಟಿಷರ ವಿರುದ್ಧವಾಗಿದ್ದು, ಕೆಲವೊಮ್ಮೆ ಬ್ರಿಟಿಷ್ ಮತ್ತು ಮರಾಠದ ಜಂಟಿ ಪಡೆಗಳ ವಿರುದ್ಧವೂ ಆಗಿತ್ತು. ೧೭೯೯ರ ನಾಲ್ಕನೆಯ ಮೈಸೂರು ಯುದ್ಧ ೧೭೯೯ ಮೇ ೪ದಲ್ಲಿ ಟಿಪ್ಪು ಮಡಿದ ಮೇಲೆ ಒಡೆಯರ್ ವಂಶಸ್ಥರು, ಬ್ರಿಟಿಷರ ಅಧೀನ ರಾಜರಾಗಿ ಸೀಮಿತ ರಾಜ್ಯಾಧಿಕಾರವನ್ನು ಮರಳಿ ಪಡೆದರು. ಮುಂದೆ ಮೈಸೂರು ಸಂಸ್ಥಾನವು, ರಾಜ್ಯಗಳ ಭಾಷಾವಾರು ವಿಂಗಡನೆಯ ಸಮಯದಲ್ಲಿ , ಇತರ ಕನ್ನಡ ಭಾಷಿಕ ಪ್ರದೇಶಗಳೊಂದಿಗೆ ಲೀನವಾಗಿ , ಮೈಸೂರು (ಇಂದಿನ ಕರ್ನಾಟಕ) ರಾಜ್ಯದ ಭಾಗವಾಯಿತು.
ಪಂಜಾಬ್ಸಂಪಾದಿಸಿ
ಸಿಖ್ ಪಂಥದ ದಶಗುರುಗಳಿಂದ ಸ್ಥಾಪಿತವಾದ ಈ ರಾಜ್ಯವು ಇಂದಿನ ಪಂಜಾಬಿನಲ್ಲಿತ್ತು. ಮಹಾರಾಜ ರಣಜಿತ್ ಸಿಂಗನ ಆಡಳಿತದಲ್ಲಿ , ಈ ರಾಜ್ಯವು ವಿಸ್ತರಿಸಿ, ಕಾಶ್ಮೀರ, ಪೇಶಾವರ, ಹರಿಯಾಣ ಮತ್ತು ಹಿಮಾಚಲ ಪ್ರದೇಶದವರೆಗೂ ಹಬ್ಬಿತ್ತು. ಮುಂದೆ ಬ್ರಿಟಿಷರು , ಭಾರತದಲ್ಲಿ ಬೇರು ಬಿಡುತ್ತಿದ್ದಾಗ, ಅವರ ಆಳ್ವಿಕೆಗೆ ಒಳಗಾದ ಕೊಟ್ಟಕೊನೆಯ ಪ್ರದೇಶಗಳಲ್ಲಿ , ಈ ರಾಜ್ಯವೂ ಒಂದು. ಬ್ರಿಟಿಷರೊಂದಿಗಿನ ಹೋರಾಟಗಳಲ್ಲಿ ಈ ರಾಜಸತ್ತೆಯು ಅಸ್ತಂಗತವಾಯಿತು.
ದುರಾನಿ ಸಾಮ್ರಾಜ್ಯಸಂಪಾದಿಸಿ
೧೭೪೮ ರಲ್ಲಿ ಅಫ್ಘಾನಿಸ್ತಾನ ನಾಯಕ ಅಹ್ಮದ್ ಷಾಹ್ ದುರಾನಿ " ಹಿಂದೂ "ಗಳ ಮೇಲೆ "ಜಿಹಾದ್" ಘೋಷಿಸಿ ಸಿಂಧೂ ನದಿ ಯನ್ನು ದಾಟಿದನು. ಅವನ ಪ್ರಥಮ ಭಾರತೀಯ ಗುರಿ ಲಾಹೋರ್ (ಈಗಿನ ಪಾಕಿಸ್ತಾನ) ಮೇಲೆ ೧೭೫೦ರಲ್ಲಿ ದಾಳಿ ಮಾಡಿದನು. ನಂತರ ಉಳಿದ ಪಂಜಾಬ್ , ಕಾಶ್ಮೀರ ಮತ್ತು ಅಂತಿಮವಾಗಿ ದೆಹಲಿ ಮೇಲೆ ದಂಡೆತ್ತಿದನು. ಅವನು ಮರಾಠ ರ ಮೇಲೆಯೂ ದಾಳಿ ಮಾಡಿದನು. ಭಾರತ ದಿಂದ ಹಲವಾರು ಹಲವಾರು ಅಮೂಲ್ಯ ವಸ್ತುಗಳನ್ನು ಕೊಂಡೊಯ್ದನು, ಅವುಗಳಲ್ಲಿ ಕೊಹಿನೂರ್ ವಜ್ರವೂ ಸೇರಿದೆ.
ಗೂರ್ಖರುಸಂಪಾದಿಸಿ
ಹಿಂದೆ ಮೌರ್ಯ ಸಾಮ್ರಾಜ್ಯದ ಭಾಗವಾಗಿದ್ದ ನೇಪಾಳವನ್ನು ೧೮ನೇ ಶತಮಾನದಲ್ಲಿ ಗೂರ್ಖರು ಕಠ್ಮಂಡು ಕಣಿವೆಯ ಮೂಲಕ ಆಕ್ರಮಿಸಿದರು. ನಂತರ ಬ್ರಿಟಿಷರ ವಸಾಹತುಶಾಹಿ ಆಡಳಿತದ ಕಾಲದಲ್ಲಿ ಗೂರ್ಖರು ಬ್ರಿಟಿಷರ ಸೇನೆಯನ್ನು ಕೂಡಿದ್ದರಿಂದ ನೇಪಾಳ ಬ್ರಿಟಿಷ್ ಸಾಮ್ರಾಜ್ಯದ ಪುತ್ಥಳಿ ರಾಜ್ಯವಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ