ಭಾನುವಾರ, ಜೂನ್ 14, 2015

ಭಾರತದ ಇತಿಹಾಸ


ಭಾರತದ ಇತಿಹಾಸ
ಸಂಪಾದಿಸಿ

ಈ ಪುಟವನ್ನು ವೀಕ್ಷಿಸಿ






೧೭೬೦ರಲ್ಲಿ ಭಾರತ

Ancient india.png





ಭಾರತ ೧೯೪೭ರ ಮುಂಚೆ ಮತ್ತು ನಂತರ

ದಕ್ಷಿಣ ಏಷ್ಯಾದ ಇತಿಹಾಸಸಂಪಾದಿಸಿ
ಭಾರತದ ಇತಿಹಾಸವು ಆಧುನಿಕ ಮಾನವನ (ಹೋಮೋ ಸೇಪಿಯನ್ಸ್) ಪುರಾತತ್ವ ಪಳೆಯುಳಿಕೆಗಳ ಕಾಲದಿಂದ, ಎಂದರೆ ಸುಮಾರು ೩೪೦೦೦ ವರ್ಷಗಳಿಂದ, ಆರಂಭವಾಗುತ್ತದೆ. ಭಾರತದ ಕಂಚಿನ ಯುಗದ ಸಂಸ್ಕೃತಿಗಳು ಪ್ರಾಚೀನ ಮಧ್ಯ ಏಷ್ಯಾದ ಸಂಸ್ಕೃತಿಗಳಿಗೆ ಸಮಕಾಲೀನವಾದವು. ಭಾರತದ ಇತಿಹಾಸವೆನ್ನುವುದು ಸಂಪೂರ್ಣ ಭಾರತ ಉಪಖಂಡದ, ಎಂದರೆ ಇಂದಿನ ಭಾರತ, ಪಾಕಿಸ್ತಾನ, ಬಾಂಗ್ಲದೇಶ, ಶ್ರೀಲಂಕ, ನೇಪಾಳ, ಹಾಗೂ ಭೂತಾನ ದೇಶಗಳ ಇತಿಹಾಸಗಳನ್ನು ಒಳಗೊಂಡಿದೆ.

ಪಕ್ಷಿನೋಟಸಂಪಾದಿಸಿ
◾೫೦೦೦ ವರ್ಷಗಳ ಹಿಂದೆ ಇದ್ದ ಸಿಂಧೂ ನದಿ ನಾಗರಿಕತೆಯು ಜಗತ್ತಿನಲ್ಲೇ ಪುರಾತನವಾದ ಸಂಸ್ಕೃತಿಗಳಲ್ಲೊಂದು. ಈ ಸಮಯದ ಇತಿಹಾಸ ವಿವಾದಾತ್ಮಕವಾಗಿದೆ. ಇಂಡೋ-ಆರ್ಯನ್ನರ ವಲಸೆ ಸಿದ್ಧಾಂತದ ಪ್ರಕಾರ, ಅಲೆಮಾರಿ ಆರ್ಯನ್ನರು ಕ್ರಿ.ಪೂ ೨೦೦೦ -೧೫೦೦ರಲ್ಲಿ ಮಧ್ಯ ಏಷ್ಯಾದ (ಉತ್ತರ ಇರಾನ್) ಭಾಗಗಳಿಂದ, ಇಂದಿನ ಭಾರತೀಯ ಉಪಖಂಡದ ವಾಯುವ್ಯ ಭಾಗಗಳಲ್ಲಿ ಬಂದು ನೆಲೆಸಿದರು. ಸ್ಥಳೀಯ ದ್ರಾವಿಡರೊಂದಿಗಿನ ಇವರ ಸಂಪರ್ಕವು ಭಾರತದ ಶಾಸ್ತ್ರೀಯ ಸಂಸ್ಕೃತಿಯ ರಚನೆಗೆ ಕಾರಣವಾಯಿತು ಎಂದು ಪರಿಗಣಿಸಲಾಗುತ್ತದೆ.[೧] ಇತರ ಸಂಶೋಧಕರು ಸಿಂಧೂ ಸಂಸ್ಕೃತಿ ಆರ್ಯರದೆಂದೂ ಹಾಗು ಕ್ರಿ.ಪೂ. ೬ ನೇ ಶತಮಾನ ಹಾಗು ಕ್ರಿ.ಪೂ. ೨ನೇ ಶತಮಾನದ ಮಧ್ಯದಲ್ಲಿ ಇಲ್ಲಿಂದ ಆರ್ಯರು ಯೂರೋಪ್ ಹಾಗು ಇತರ ಜಾಗಗಳಿಗೆ ಹರಡಿದರೆಂದು ಅಭಿಪ್ರಾಯ ಪಟ್ಟಿದ್ದಾರೆ. [೨]
◾ಕ್ರಿ.ಪೂ. ೬ನೇ ಶತಮಾನದಲ್ಲಿ ಮಹಾವೀರ ಮತ್ತು ಗೌತಮ ಬುದ್ಧರ ಜನನವು ಭಾರತದ ದಾಖಲಿತ ಇತಿಹಾಸದ ಪ್ರಾರಂಭ. ಮುಂದಿನ ಸುಮಾರು ೧೫೦೦ ವರ್ಷಗಳಲ್ಲಿ ಭಾರತೀಯ ಸಂಸ್ಕೃತಿಯು ರೂಪುಗೊಂಡಿತು. ಕೆಲ ಐತಿಹಾಸ ತಜ್ಞರ ಅಭಿಪ್ರಾಯದಲ್ಲಿ, ಸುಮಾರು ಕ್ರಿ.ಶ. ೧ ರಿಂದ ೧೫ನೇ ಶತಮಾನದ ಕಾಲದಲ್ಲಿ ಪ್ರಪಂಚದಲ್ಲೇ ದೊಡ್ಡದಾದ ಅರ್ಥವ್ಯವಸ್ಥೆಯನ್ನು[೩] ಹೊಂದಿದ್ದ ಭಾರತ ಉಪಖಂಡವು ಜಗತ್ತಿನ ಆದಾಯ-ವ್ಯಯಗಳ ಮೂರನೆ ಒಂದು ಭಾಗವನ್ನು ನಿಯಂತ್ರಿಸುತ್ತಿತ್ತು [೪]. ನಂತರ ಮೊಘಲರ ಕಾಲದಲ್ಲಿ ನಾಲ್ಕನೇ ಒಂದಕ್ಕಿಳಿದ ಈ ಭಾಗ ಯುರೋಪಿಯನ್ನರ ಕಾಲದಲ್ಲಿ ಶೀಘ್ರವಾಗಿ ಕುಸಿಯಿತು.
◾೮ ರಿಂದ ೧೨ನೇ ಶತಮಾನದಲ್ಲಿ ನೆಡೆದ ಅರಬ್ ಮತ್ತು ಮಧ್ಯ ಏಷ್ಯಾದ ಸೈನ್ಯೆದಾಳಿಗಳಿಂದ ಪ್ರಾರಂಭವಾದ ಇಸ್ಲಾಮಿ ಆಕ್ರಮಣಗಳ ಪರಿಣಾಮದ ಸ್ವರೂಪವಾಗಿ ೧೬ನೇ ಶತಮಾನದೊಳಗೆ ಕ್ರಮೇಣ ಭಾರತದಲ್ಲಿ ಮೋಘಲ್ ಸಾಮ್ರಾಜ್ಯದ ಸ್ಥಾಪನೆಯಾಯಿತು. ಇದರೊಂದಿಗೆ ೧೫ನೇ ಶತಮಾನದಿಂದ ೧೬ನೇ ಶತಮಾನದ ಮಧ್ಯದವರೆಗೆ ನೆಡೆದ ಯುರೋಪಿಯನ್ ವ್ಯಾಪಾರಿಗಳ ಆಗಮನವು, ಕ್ರಮೇಣ ೧೮ನೇ ಶತಮಾನದ ಕೊನೆಯೊಳಗೆ ಭಾರತವನ್ನು ಬ್ರಿಟಿಷ್ ವಸಾಹತುಶಾಯಿಗೆ ಅನುವು ಮಾಡಿತು. ಭಾರತೀಯರ ಸಶಸ್ತ್ರಪಡೆಗಳು ಮತ್ತು ಬ್ರಿಟಿಷ್ ಪಡೆಗಳೂ ಮೊದಲನೆಯ ಮತ್ತು ಎರಡನೆಯ ಮಹಾಯುಧ್ಧದಲ್ಲಿ ಜೊತೆಯಾಗಿ ಹೋರಾಡಿದುವು.
◾ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ನೆಡೆದ ಅಹಿಂಸಾತ್ಮಕ ಚಳುವಳಿಯು ಭಾರತಕ್ಕೆ ೧೯೪೭ರಲ್ಲಿ ಬ್ರಿಟೀಷರಿಂದ ಮುಕ್ತಿಯನ್ನು ದೊರಕಿಸುವಲ್ಲಿ ಯಶಸ್ವಿಯಾಯಿತು. ಆದರೆ ಭಾರತೀಯ ಉಪಖಂಡವು ಇಬ್ಭಾಗವಾಗಿ, ಜಾತ್ಯಾತೀತ ಭಾರತ ಗಣತಂತ್ರವೂ ಮತ್ತು ಇಸ್ಲಾಮಿಕ್ ರಾಜ್ಯ ಪಾಕಿಸ್ತಾನಗಳೂ ರಚನೆಯಾದವು.
◾೧೯೭೧ರಲ್ಲಿ ಎರಡೂ ದೇಶಗಳ ನಡುವೆ ನಡೆದ ಯುದ್ಧದ ಪರಿಣಾಮವಾಗಿ ಪೂರ್ವ ಪಾಕಿಸ್ತಾನವು ಸ್ವತಂತ್ರವಾಗಿ ಬಾಂಗ್ಲಾದೇಶದ ಸೃಷ್ಟಿಯಾಯಿತು. ೨೧ನೇ ಶತಮಾನದಲ್ಲಿ ೧ ಬಿಲಿಯನ್ಗಿಂತ ಅಧಿಕ ಜನಸಂಖ್ಯೆ ಹೊಂದಿರುವ ಪ್ರಪಂಚದ ಅತೀ ದೊಡ್ಡ ಜನತಂತ್ರ. ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಸಾಮರ್ಥ್ಯದಿಂದ, ಪ್ರಪಂಚದ ನಾಲ್ಕನೇ ಅತಿದೊಡ್ಡ ಅರ್ಥ ವ್ಯವಸ್ಥೆಯಾಗಿದೆ.

ಶಿಲಾಯುಗ ಸಂಸ್ಕೃತಿ: ಕ್ರಿ.ಪೂ. ೭೦,೦೦೦ - ೫೦೦೦ಸಂಪಾದಿಸಿ
ಮುಖ್ಯ ಲೇಖನ: ದಕ್ಷಿಣ ಏಷ್ಯಾದ ಶಿಲಾಯುಗ



ಭಿಂಬೆಟ್ಕಾದಲ್ಲಿ ಶಿಲಾಮಾನವನ ಚಿತ್ರಕಲೆ◾೫೦೦,೦೦೦ ವರ್ಷಗಳಿಗಿಂತ ಹಳೆಯ ಹೋಮೊ ಎರೆಕ್ಟಸ್ ಜಾತಿಯ ಪೂರ್ವಮಾನವರ ಪಳೆಯುಳಿಕೆಗಳು ನರ್ಮದಾ ನದಿ ಕಣಿವೆಯಲ್ಲಿ ಸಿಕ್ಕಿವೆ [೫]. ಆಧುನಿಕ ಮಾನವ ಭರತ ಖಂಡಕ್ಕೆ ಸುಮಾರು ೭೦,೦೦೦ ದಿಂದ ೮೦,೦೦೦ ವರ್ಷಗಳ ಹಿಂದೆ ಆಗಮಿಸಿದನೆಂದು ಆಧುನಿಕ ವಿಜ್ಞಾನದ ಅಭಿಪ್ರಾಯ[೬]. ಮಧ್ಯ ಪ್ರದೇಶದ ಭಿಂಬೆಟ್ಕಾದಲ್ಲಿ ೯,೦೦೦ ವರ್ಷಗಳ ಹಳೆಯ ಗುಹೆಗಳಲ್ಲಿನ ಮಾನವನ ವಸತಿಗಳು ಮತ್ತು ಚಿತ್ರಕಲೆ ಆಧುನಿಕ ಮಾನವನ ಮೊದಲ ನಿಶ್ಚಿತ ಕುರುಹುಗಳಾಗಿವೆ.
◾ಸುಮಾರು ೭,೦೦೦ ವರ್ಷಗಳ ಹಳೆಯ ಪಳೆಯುಳಿಕೆಗಳು ಗುಜರಾತಿನ ಖಂಬತ್ ಕೊಲ್ಲಿಯಲ್ಲಿ ನೀರಿನಡಿಯಲ್ಲಿ ಸಿಕ್ಕಿವೆ. [೭].
◾ಇಂದಿನ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ೭,೦೦೦ ವರ್ಷಗಳಷ್ಟು ಹಳೆಯ ಕಲ್ಲುಮಣ್ಣುಗಳಿಂದ ನಿರ್ಮಿತ ವಸತಿಗಳು ದೊರಕಿವೆ. ಇದಕ್ಕೆ ಮೆಹರ್ಘರ್ ಸಂಸ್ಕೃತಿ ಎಂದು ಹೆಸರಿಡಲಾಗಿದೆ. ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಹಳೆಯ ಕೃಷಿಯ ಕುರುಹುಗಳು ಇಲ್ಲಿ ದೊರೆತಿವೆ. ಸುಮಾರು ಕ್ರಿ.ಪೂ. ೩,೫೦೦ಕ್ಕೆ ಇಲ್ಲಿನ ಅವಶೇಷಗಳು ಮುಕ್ತಾಯವಾಗುತ್ತವೆ. ಇದು ಸಿಂಧೂ ನಾಗರೀಕತೆಯೊದಿಂಗೆ ವಿಲಿನವಾಗಿರಬಹುದೆಂದು ನಂಬಲಾಗಿದೆ.

ಕಂಚಿನ ಯುಗಸಂಪಾದಿಸಿ
ಭಾರತೀಯ ಉಪಖಂಡದಲ್ಲಿನ ಕಂಚಿನ ಯುಗದ ನಾಗರೀಕತೆಗಳು ನಾಗರಿಕ ವಸತಿಗಳ ಮತ್ತು ಹಿಂದೂ ಧರ್ಮದ ತಿರುಳಾದ ವೈದಿಕ ನಂಬುಗೆಗಳ ಬೆಳವಣಿಗೆ ಸೇರಿದಂತೆ ಆಧುನಿಕ ಭಾರತೀಯ ನಾಗರೀಕತೆಗೆ ಅಡಿಪಾಯ ಹಾಕಿದವು. ಸಿಂಧೂ ಕಣಿವೆ ಸಂಸ್ಕೃತಿಯ ಬೆಳವಣಿಗೆ ಮತ್ತು ಕಾಲಾನುಸಾರ ಅವನತಿ ಮತ್ತು ಭಾರತ ಉಪಖಂಡಕ್ಕೆ ಮಧ್ಯ ಏಷಿಯಾದಿಂದ ಅಲೆಮಾರಿ ಜನರ ವಲಸೆ ಈ ಅವಧಿಯಲ್ಲಿ ಅದರ ಇತಿಹಾಸವನ್ನು ರೂಪಿಸಿತು ಎಂದು ಅನೇಕ ಇತಿಹಾಸಕಾರರು ಹೇಳುತ್ತಾರೆ .
ಸಿಂಧೂ ಕಣಿವೆಯ ನಾಗರೀಕತೆ ಕ್ರಿ.ಪೂ ೩೩೦೦-೧೫೦೦ಸಂಪಾದಿಸಿ



ಭಾರತೀಯ ಪುರಾತತ್ವ ಇಲಾಖೆಯ ಶೋಧನೆಯ ಆಧಾರದ ಮೇಲೆ ಸಿಂಧೂ ನಾಗರೀಕತೆಯ ಲೋಥಾಲ್ ನಗರದ ಪರಿಕಲ್ಪನೆ.


ಸಿಂಧೂ ನಾಗರೀಕತೆಯ ಲಿಪಿಯಲ್ಲಿ ಅಚ್ಚುಗಳು
ಮುಖ್ಯ ಲೇಖನ: ಸಿಂಧೂತಟದ ನಾಗರೀಕತೆ
◾ಸಿಂಧೂ ನದಿಯ ದಡದಲ್ಲಿ ಕ್ರಿ.ಪೂ. ೨೫೦೦ರ ಸುಮಾರಿನಲ್ಲಿ ನೀರಾವರಿ ಆರಂಭವಾಯಿತು. ಇದರೊಂದಿಗೆ ಪ್ರಗತಿಗೊಂಡ ನಾಗರೀಕತೆ ಸಿಂಧು ತಡದ ನಾಗರೀಕತೆ ಅಥವ ಸಿಂಧು ಕಣಿವೆ ನಾಗರೀಕತೆ (Indus Valley Civilization) ಎಂದು ಕರೆಯಲ್ಪಟ್ಟಿದೆ. ಈ ನಾಗರೀಕತೆ ಸುಮಾರು ಕ್ರಿ.ಪೂ. ೨೫೦೦ರಿಂದ ಕ್ರಿ.ಪೂ. ೧೯೦೦ರ ವರೆಗೆ ಪ್ರಗತಿಗೊಂಡಿತು. ಈ ನಾಗರೀಕತೆಯ ಮುಖ್ಯ ನಗರಿಗಳಾದ ಹರಪ್ಪ ಮತ್ತು ಮೋಹೆಂಜದಾರೊ ಭಾರತದ ಮೊದಲ ನಗರಗಳೆಂದು ಪರಿಗಣಿಸಲ್ಪಟ್ಟಿವೆ.
◾ಸಿಂಧೂ ನದಿ ಮತ್ತದರ ಉಪನದಿ ಗಳಾದ ಗಾಗ್ಗರ್ ನದಿ, ಹಾಕ್ರ ನದಿಗಳ ತಟಗಳಲ್ಲಿ ಕೇಂದ್ರೀಕೃತವಾಗಿದ್ದ ಈ ನಾಗರೀಕತೆ, ಮುಂದೆ ಪಶ್ಚಿಮಕ್ಕೆ ಗಂಗೆ-ಯಮುನೆ ನದಿಗಳ ಮಧ್ಯದ ದೊಆಬ್ ಪ್ರದೇಶದವರೆಗೆ, ದಕ್ಷಿಣಕ್ಕೆ ಈಗಿನ ಮಹಾರಾಷ್ಟ್ರದವರೆಗೆ, ಪೂರ್ವಕ್ಕೆ ಈಗಿನ ಇರಾನ್ ದೇಶದ ಸೀಮೆಯವರೆಗೆ ಮತ್ತು ಉತ್ತರಕ್ಕೆ ಅಫ್ಘಾನಿಸ್ತಾನದವರೆಗೆ ಹರಡಿತ್ತು [ಸಾಕ್ಷ್ಯಾಧಾರ ಬೇಕಾಗಿದೆ].
◾ಸಮಕಾಲೀನ ನಾಗರೀಕತೆಗಳಾದ ಪುರಾತನ ಈಜಿಪ್ಟ್ ಹಾಗು ಸುಮೇರಿಯಗಳಿಗಿಂತ ದೊಡ್ಡದಾಗಿದ್ದಲ್ಲದೆ, ಸಿಂಧೂ ನಾಗರೀಕತೆಯು ಉತ್ತಮ ನಗರ ರಚನಕ್ರಮಗಳನ್ನು ಹೊಂದಿತ್ತು. ಇಟ್ಟಿಗೆಗಳ ಉಪಯೋಗ, ರಸ್ತೆ ಬದಿಯ ಚರಂಡಿ ವ್ಯವಸ್ಥೆ, ಮತ್ತು ಬಹುಮಹಡಿ ಕಟ್ಟಡಗಳು ಈ ರಚನಕ್ರಮದ ವೈಶಿಷ್ಟ್ಯಗಳು. ಹರಪ್ಪ ಮತ್ತು ಮೊಹೆನ್ ಜೊದಾರೊಗಳಲ್ಲದೆ, ಲೋಥಾಲ್, ಗನ್ವೇರಿವಾಲ, ಧೋಲವೀರ, ಕಾಳಿಭಂಗ ಮತ್ತು ರಾಕಿಗರ್ಹಿ ಮುಂತಾದ ಜಾಗಗಳಲ್ಲೂ ಈ ಸಮಯದ ನಗರಗಳ ಅವಶೇಶಗಳು ದೊರೆತಿವೆ.
◾ಇಲ್ಲಿಯವರೆಗೆ ಒಟ್ಟಾಗಿ ಸುಮಾರು ೨,೫೦೦ ನೆಲೆಗಳು ದೊರೆತಿವೆ, ಮುಖ್ಯವಾಗಿ ಸಿಂಧೂ ನದಿಯ ಪೂರ್ವಕ್ಕೆ. ಈ ನಾಗರೀಕತೆಯ ಜನಸಂಖ್ಯೆ ೫೦ ಲಕ್ಷವಿದ್ದಿರಬಹುದೆಂದು ಕೆಲವು ತಜ್ಞರ ಅಭಿಪ್ರಾಯ. ಇದಲ್ಲದೆ, ಈ ಇಡೀ ನಾಗರೀಕತೆಯಲ್ಲಿ ಉಪಯೋಗಿಸಲ್ಪಟ್ಟ ಮೌಲ್ಯಮಾಪನ ಕ್ರಮ ಒಂದೆ ಆಗಿದ್ದರಿಂದ, ಈ ಇಡೀ ನಾಗರೀಕತೆ ಪ್ರಾಯಶಃ ಒಂದೇ ರಾಜ್ಯವಾಗಿರಬಹುದೆಂದು ಊಹಿಸಲಾಗಿದೆ. ಸುಮೇರಿಯಾದ ದಾಖಲೆಗಳಲ್ಲಿ ಉಲ್ಲೇಖಿತವಾಗಿರುವ 'ಮೆಲುಹ' ಇದೇ ನಾಗರೀಕತೆಯಿರಬಹುದೆಂದು ನಂಬಲಾಗಿದೆ.
◾ಕೆಲವು ಭೌಗೋಳಿಕ ಬದಲಾವಣೆಗಳು ಮತ್ತು ಹವಾಮಾನದ ವೈಪರೀತ್ಯಗಳು ಈ ನಾಗರಿಕತೆಯ ಪತನವಾಗಲು ಕಾರಣ ಎಂದು ನಂಬಲಾಗಿದೆ. ಕ್ರಿ.ಪೂ. ೨೬೦೦ರಷ್ಟರಲ್ಲಿ ನೀರಾವರಿ, ಆಹಾರ ಧಾನ್ಯಗಳನ್ನು ಸಂರಕ್ಷಿಸಲು ಉಗ್ರಾಣಗಳು, ಸಾರ್ವಜನಿಕ ರಸ್ತೆಗಳು ಮತ್ತು ಇಟ್ಟಿಗೆಯಿಂದ ನಿರ್ಮಿಸಲಾದ ಚರಂಡಿಗಳ ನಿರ್ಮಾಣ - ಇವೇ ಮುಂತಾದ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಿದ್ದರು. ಕ್ರಿ.ಪೂ. ಎರಡನೇ ಸಹಸ್ರಮಾನದ ಮಧ್ಯದಲ್ಲಿ ಸಿಂಧೂ ನದಿಯ ಕಣಿವೆಯಲ್ಲಿದ್ದ ಬಹುತೇಕ ಪ್ರದೇಶಗಳು ಜನರಹಿತವಾದವು.
ವೇದಕಾಲೀನ ಸಂಸ್ಕೃತಿ ಕ್ರಿ.ಪೂ ೧೯೦೦-೫೦೦ಸಂಪಾದಿಸಿ
◾ವೇದಗಳನ್ನು, ವೈದಿಕ ಸಂಸ್ಕೃತದಲ್ಲಿ ರಚಿಸಲಾಗಿದ್ದು, ಇವುಗಳನ್ನು ಇಲ್ಲಿಯವರೆಗೂ ತಿಳಿದಿರುವ ಅತಿ ಪ್ರಾಚೀನ ಗ್ರಂಥಗಳಲ್ಲಿ ಪರಿಗಣಿಸಲಾಗಿದೆ. ವೇದಗಳಿಗೆ ನಿಕಟ ಸಂಬಂಧದ ವೇದಕಾಲೀನ ಸಂಸ್ಕೃತಿಯು ಇಂಡೋ-ಆರ್ಯನ್ ಮೂಲದ್ದಾಗಿತ್ತು. ಒಂದು ಕಡೆ, ಈ ನಾಗರೀಕತೆ ಮತ್ತು ಸಿಂಧೂ ಕಣಿವೆಯ ನಾಗರೀಕತೆಗೂ ಇರುವ ಸಂಬಂಧ , ಮತ್ತೊಂದು ಕಡೆ ಇಂಡೋ-ಆರ್ಯರು ಭಾರತಕ್ಕೆ ಬಂದಿರಬಹುದಾದ ಸಾಧ್ಯತೆ, ಇವೆರಡೂ ವಿವಾದಾಸ್ಪದ ವಿಷಯಗಳಾಗಿವೆ. ಪ್ರಾರಂಭದ ವೇದಕಾಲದ ಸಮಾಜವು ಪಶುಪಾಲನೆಯನ್ನು ಪ್ರಧಾನವಾಗಿ ಅವಲಂಬಿಸಿತ್ತು. ಋಗ್ವೇದದ ನಂತರ, ಆರ್ಯರ ಸಮಾಜವು ಹೆಚ್ಚು ಹೆಚ್ಚು ಕೃಷಿಯತ್ತ ಗಮನ ಕೊಡತೊಡಗಿತು. ನಾಲ್ಕು ವರ್ಣ ಅಥವಾ ಜಾತಿಯಾಗಿ ವಿಂಗಡಿಸಿದ ವರ್ಣಾಶ್ರಮ ಪದ್ಧತಿ ರೂಢಿಯಲ್ಲಿತ್ತು. ಅನೇಕ ಸಣ್ಣ ರಾಜ್ಯಗಳು ವಿಲೀನವಾಗಿ, ಕುರು , ಪಾಂಚಾಲ ಮುಂತಾದ ಕೆಲವೇ ದೊಡ್ಡ ರಾಜ್ಯಗಳಾದವು. ಇವು ಆಗಾಗ ಪರಸ್ಪರ ಯುದ್ಧಗಳಲ್ಲಿ ತೊಡಗಿರುತ್ತಿದ್ದವು.
◾ಹಿಂದೂ ಧರ್ಮದ ಪ್ರಧಾನ ಗ್ರಂಥಗಳಾದ ವೇದಗಳಲ್ಲದೆ, ರಾಮಾಯಣ, ಮಹಾಭಾರತದಂತಹ, ಭಗವದ್ಗೀತೆಯೂ ಸೇರಿದಂತೆ, ಮಹಾಗ್ರಂಥಗಳ ರಚನೆಯೂ , ಮುಖೋಕ್ತ ರೂಪದಲ್ಲಿ, ಈ ಕಾಲದಲ್ಲಿಯೇ ಆಗಿರಬೇಕು ಎಂದು ಹೇಳಲಾಗಿದೆ.
ಉತ್ಖನನಗಳಲ್ಲಿ ದೊರಕಿದ ಕಂದು ಬಣ್ಣದ ಮಡಿಕೆ, ಕುಡಿಕೆಗಳು, ಪ್ರಾರಂಭ ಕಾಲದ ಇಂಡೋ-ಆರ್ಯರ ಕಾಲದ್ದಿರಬಹುದು ಎಂದು ಊಹಿಸಲಾಗಿದೆ. ಕ್ರಿ.ಪೂ ೧೦೦೦ ಸುಮಾರಿನ ಕುರುರಾಜ್ಯದ ಅವಧಿಯು ಕಪ್ಪು ಮತ್ತು ಕೆಂಪು ಬಣ್ಣದ ಪಾತ್ರೆ ಪಡಗಗಳ ಕಾಲವಾಗಿದ್ದು, ಈಶಾನ್ಯ ಭಾರತದಲ್ಲಿ ಕಬ್ಬಿಣದ ಯುಗದ ಆರಂಭದ ಕಾಲವಾಗಿತ್ತು. ಅಥರ್ವವೇದವೂ ಬಹುತೇಕ ಇದೇ ಕಾಲದಲ್ಲಿಯೇ (ಕ್ರಿ.ಪೂ ೧೦೦೦) ಸೃಷ್ಟಿಯಾಗಿದೆ.
◾ಉತ್ತರಭಾರತದ ಅನೇಕ ಕಡೆಗಳಲ್ಲಿ ಕಂಡುಬಂದ Painted Grey Ware ಮಧ್ಯ ವೈದಿಕ ಕಾಲದ ಕುರುಹಾಗಿದೆ. ಇದರ ನಂತರ , ಕ್ರಿ.ಪೂ ಆರನೆಯ ಶತಮಾನದಲ್ಲಿ ನಗರೀಕರಣದ ಅಲೆಯು ಅಫ್ಘಾನಿಸ್ತಾನದಿಂದ , ಬಂಗಾಳದವರೆಗಿನ ಉಪಖಂಡವನ್ನು ಆವರಿಸಿತು. ಅನೇಕ ರಾಜ್ಯಗಳು ಮತ್ತು ಗಣರಾಜ್ಯಗಳು ಗಂಗಾ ನದಿಯ ತಪ್ಪಲು ಪ್ರದೇಶದಲ್ಲಿ ಮತ್ತು ದಖ್ಖನಿ ಪ್ರದೇಶದ ಉತ್ತರಭಾಗದಲ್ಲಿ ತಲೆ ಎತ್ತಲಾರಂಭಿಸಿದವು. ಇವುಗಳಲ್ಲಿ ಹದಿನಾರನ್ನು ಮಹಾಜನಪದಗಳು ಎಂಬ ಹೆಸರಿನಿಂದ ಪುರಾತನ ಸಾಹಿತ್ಯದಲ್ಲಿ ಉಲ್ಲೇಖಿಸಲಾಗಿದೆ.

ಮಹಾ ಜನಪದಗಳು ಕ್ರಿ.ಪೂ ೭೦೦-೩೨೧ಸಂಪಾದಿಸಿ



ಪ್ರಾಚೀನ ಪ್ರದೇಶ ಗಾಂಧಾರದಲ್ಲಿ ಕಾಣುವ ನಿಂತಿರುವ ಬುದ್ಧ (ಕ್ರಿ.ಶ. ೧ನೇ ಶತಮಾನ).◾ಕಬ್ಬಿಣದ ಯುಗದ ಕಾಲದಲ್ಲಿ ಭಾರತೀಯ ಉಪಖಂಡದಲ್ಲಿ ಅನೇಕ ಸಣ್ಣಪುಟ್ಟ ರಾಜ್ಯಗಳು, ಸಂಸ್ಥಾನಗಳು ಹರಡಿಕೊಂಡಿದ್ದವು. ಸುಮಾರು ಕ್ರಿಪೂ. ೧೦೦೦ರಷ್ಟು ಹಿಂದಿನ ವೇದಕಾಲೀಯ ಸಾಹಿತ್ಯಗಳಲ್ಲಿಯೂ ಇವುಗಳ ಉಲ್ಲೇಖವಿದೆ. ಕ್ರಿ.ಪೂ ೫೦೦ರ ಸುಮಾರಿಗೆ, ಮಹಾ ಜನಪದಗಳೆಂದು ಕರೆಯಲಾಗುವ ಹದಿನಾರು ರಾಜ್ಯಗಳು ಮತ್ತು ‘ಗಣರಾಜ್ಯಗಳು’ ಅಫ್ಘಾನಿಸ್ತಾನದಿಂದ ಬಾಂಗ್ಲಾದೇಶದವರೆಗಿನ, ಗಂಗಾನದಿಯ ತಪ್ಪಲು ಪ್ರದೇಶವನ್ನೊಳಗೊಂಡಂತೆ ವಿಶಾಲ ಪ್ರದೇಶವನ್ನು ಆಳುತ್ತಿದ್ದವು.
◾ವೈದಿಕ ಸಾಹಿತ್ಯದಲ್ಲಿ ಉಲ್ಲೇಖವಾಗಿರುವ ಇನ್ನೂ ಅನೇಕ ಸಣ್ಣಪುಟ್ಟ ರಾಜ್ಯಗಳು ಉಪಖಂಡದ ಇತರ ಪ್ರದೇಶಗಳಲ್ಲಿ ರಾಜ್ಯವಾಳುತ್ತಿದ್ದಿರಬೇಕು ಎಂದು ಕಾಣುತ್ತದೆ. ಮಗಧ, ಕೋಸಲ, ಕುರು ಮತ್ತು ಗಾಂಧಾರ ಇವು ಮಹಾಜನಪದಗಳಲ್ಲಿ ಅತಿ ಶಕ್ತಿಶಾಲಿ ರಾಜ್ಯಗಳಾಗಿದ್ದವು (ಸಾಕ್ಶ್ಯಾ ಧಾರಗಳು ಬೇಕಾಗಿವೆ). ರಾಜನು ರಾಜ್ಯಾಧಿಕಾರವನ್ನು ಯಾವುದೇ ವಿಧಾನದಿಂದ ಗಳಿಸಿದ್ದರೂ, ವೈದಿಕ ವರ್ಗವು ಸೂಕ್ತ ವಂಶಪರಂಪರೆಯನ್ನೂ, ಧಾರ್ಮಿಕ ಅಧಿಕಾರವನ್ನೂ ಸೃಷ್ಟಿಸಿ, ಅವನಿಗೆ ದೈವಿಕ ಮೂಲವನ್ನು ಆರೋಪಿಸುತ್ತ , ರಾಜ್ಯಾಡಳಿತದ ಹಕ್ಕನ್ನು ಸಕ್ರಮವಾಗಿಸುತ್ತಿತ್ತು.
ಅಂದಿನ ರಾಜಕೀಯ ವ್ಯಕ್ತಿತ್ವಗಳ ಬಗ್ಗೆ ವೇದ ಮತ್ತು ಪುರಾಣಗಳಲ್ಲಿನ ಉಲ್ಲೇಖಗಳು ಎಷ್ಡರಮಟ್ಟಿಗೆ ಪ್ರಾತಿನಿಧಿಕವಾಗಿವೆ ಎಂಬುದು ವಿವಾದಾಸ್ಪದವಾಗಿದೆ.
◾ಉತ್ತರ ಭಾರತದ ಜನಸಾಮಾನ್ಯರ ಆಡುಭಾಷೆ ಪ್ರಾಕೃತವಾಗಿದ್ದರೆ, ವಿದ್ಯಾವಂತ ವರ್ಗ ಸಂಸ್ಕೃತವನ್ನು ಉಪಯೋಗಿಸುತ್ತಿತ್ತು. ಹಿಂದೂ ಧಾರ್ಮಿಕ ವಿಧಿವಿಧಾನಗಳು ಸಂಕೀರ್ಣವಾಗಿದ್ದು, ಅವುಗಳನ್ನು ನೆರವೇರಿಸುವುದು ಕೇವಲ ವೈದಿಕ ವರ್ಗದವರಿಗೆ ಮಾತ್ರ ಸಾಧ್ಯವಾಗಿತ್ತು.
ತತ್ತ್ವಶಾಸ್ತ್ರದ ಪ್ರಥಮಾವಸ್ಥೆ ಎಂದು ಪರಿಗಣಿಸಲಾದ ಉಪನಿಷತ್ತುಗಳ ರಚನೆಗೆ ಮೊದಲಾದದ್ದು ಇದೇ ಕಾಲದಲ್ಲಿ ಎಂದು ಊಹಿಸಲಾಗಿದೆ. ಭಾರತೀಯ ತತ್ತ್ವ ಶಾಸ್ತ್ರದ ಮೇಲೆ ಅಗಾಧ ಪರಿಣಾಮ ಬೀರಿದ ಈ ಗ್ರಂಥಗಳ ರಚನೆಯಾದ ಈ ಕಾಲದಲ್ಲಿಯೇ, ಬೌದ್ಧ ಧರ್ಮ ಮತ್ತು ಜೈನ ಧರ್ಮಗಳೂ ಬೆಳವಣಿಗೆಯಾಗುತ್ತಿದ್ದವು. ಪುರಾತನ ಗ್ರೀಸಿನಂತೆ, ಈ ಕಾಲವನ್ನೂ ವೈಚಾರಿಕತೆಯ ಸುವರ್ಣಯುಗ ಎಂದು ಕರೆಯಬಹುದಾಗಿದೆ.
◾ಬುದ್ಧನ ಜನನ ಕಿ.ಪು೧೮೮೭ರಲ್ಲಿ ಆಗಿ ಕಿ.ಪು೧೮೦೯ರಲ್ಲಿ ನಿಧನ ಹೊಂದಿದ. ಇವನಿಂದಬೌದ್ಧ ಧರ್ಮದ ಸ್ಥಾಪನೆಯಾಯಿತು. ಇದನ್ನು ಮೊದ ಮೊದಲು ವೈದಿಕ ಧರ್ಮದ ಅಂಗವೆಂದೇ ಉದ್ದೇಶಿಸಲಾಗಿತ್ತು. ಅದೇ ಸರಿ ಸುಮಾರಿಗೆ, ಕ್ರಿ.ಪೂ. ಆರನೆಯ ಶತಮಾನದಲ್ಲಿ ಮಹಾವೀರನು ಜೈನ ಧರ್ಮದ ಪ್ರಚಾರ ಮಾಡಿದನು (ಮಹಾವೀರನು ಜೈನ ಧರ್ಮವನ್ನು ಸ್ಥಾಪಿಸಲಿಲ್ಲ ಅವನು ಜೈನ ಧರ್ಮದ ೨೪ನೇ ತೀರ್ಥಂಕರ. ಈ ಎರಡೂ ಧರ್ಮಗಳ ತತ್ತ್ವಗಳು ಸರಳವಾಗಿದ್ದು, ಅವುಗಳನ್ನು ಪ್ರಾಕೃತದಲ್ಲಿ ಪ್ರಸಾರ ಮಾಡಿದ್ದರಿಂದ ಜನ ಸಾಮಾನ್ಯರ ಮನ್ನಣೆ ಪಡೆಯಲು ಸಾಧ್ಯವಾಯಿತು. ಜೈನ ಧರ್ಮದ ಪ್ರಭಾವ ಭೌಗೋಳಿಕವಾಗಿ ಸೀಮಿತವಾಗಿದ್ದರೂ, ಬೌದ್ಧ ಸನ್ಯಾಸಿ, ಸನ್ಯಾಸಿನಿಯರ ಪ್ರಚಾರದ ದೆಸೆಯಿಂದ, ಬೌದ್ಧ ಧರ್ಮವು ಮಧ್ಯ ಏಷಿಯಾ, ಪೂರ್ವ ಏಶಿಯಾ, ಟಿಬೆಟ್, ಶ್ರೀಲಂಕಾ ಮತ್ತು ಆಗ್ನೇಯ ಏಷಿಯಾದಷ್ಟು ದೂರದವರೆಗೂ ಹಬ್ಬಿತು.
◾ಜೈನ ಧರ್ಮ ಮತ್ತು ಬೌದ್ಧ ಧರ್ಮ ಸ್ಥಾಪನೆಯಾದ ಈ ಕಾಲದ ಇತಿಹಾಸದ ದಾಖಲೆಗಳು ವಿರಳವಾಗಿದ್ದರೂ, ಮಹಾಜನಪದಗಳನ್ನು ಅದೇ ಕಾಲದಲ್ಲಿ ಮೆಡಿಟರೇನಿಯನ್ ಪ್ರದೇಶದಲ್ಲಿದ್ದ ಪುರಾತನ ಗ್ರೀಕ್ ರಾಜ್ಯಗಳಿಗೆ ಹೋಲಿಸಬಹುದಾಗಿದೆ. ಮಹಾಜನಪದ ಗಳ ಕಾಲದಲ್ಲಿ ಪ್ರಾರಂಭವಾದ ತತ್ತ್ವಶಾಸ್ತ್ರವು ಸಂಪೂರ್ಣ ಪೂರ್ವ ಜಗತ್ತಿನ ನಂಬಿಕೆ, ಶ್ರದ್ಧೆಗಳಿಗೆ ತಳಹದಿಯಾದರೆ, ಅದೇ ಕಾಲದಲ್ಲಿ ಪುರಾತನ ಗ್ರೀಸಿನಲ್ಲಿ ಉಗಮವಾದ ತತ್ತ್ವಶಾಸ್ತ್ರವು ಸಂಪೂರ್ಣ ಪಶ್ಚಿಮ ಜಗತ್ತಿನ ನಂಬಿಕೆಗಳಿಗೆ ಅಡಿಗಲ್ಲಾಯಿತು. ಪರ್ಷಿಯಾ ಮತ್ತು ಗ್ರೀಸ್ ದೇಶ ಗಳಿಂದ ಆಕ್ರಮಣದೊಂದಿಗೆ ಮತ್ತು ಮಗಧದಲ್ಲಿ ಸಂಪೂರ್ಣ ಭಾರತದದುದ್ದಕ್ಕೂ ಹಬ್ಬಿದ ಮಹಾ ಸಾಮ್ರಾಜ್ಯದ ಉದಯದೊಂದಿಗೆ ಈ ಕಾಲದ ಸಮಾಪ್ತಿಯಾಯಿತು.
ಕುರುವಂಶ ಕ್ರಿ.ಪೂ ೧೨೦೦-೩೧೬ಸಂಪಾದಿಸಿ
ಇಂದ್ರಪ್ರಸ್ಥ ರಾಜಧಾನಿಯಾಗಿದ್ದ ಕುರು ರಾಜ್ಯವು ಇಂದಿನ ಹರಿಯಾಣ ರಾಜ್ಯದಲ್ಲಿತ್ತು. ಪಾಟಲೀಪುತ್ರದಲ್ಲಿ ಮಗಧ ಸಾಮ್ರಾಜ್ಯವು ತಲೆ ಎತ್ತುವ ಮುನ್ನ, ಇಂದ್ರಪ್ರಸ್ಥವು ಬಹುಶಃ ಭಾರತದ ಅತಿ ಬಲಿಷ್ಠ ನಗರವಾಗಿರಬೇಕು. ಮಹಾಜನಪದಗಳ ಪಟ್ಟಿಯಲ್ಲಿ ಕುರು ರಾಜ್ಯವು ಪ್ರಧಾನವಾಗಿ ಕಂಡು ಬರುತ್ತದೆ. ಬುದ್ಧನ ಕಾಲದ ಕುರು ರಾಜ್ಯವು ಕೇವಲ ಮುನ್ನೂರು ಹರದಾರಿಯಷ್ಟೇ ವಿಶಾಲವಾಗಿದ್ದರೂ ಸಾಂಸ್ಕೃತಿಕ ಕೇಂದ್ರವಾಗಿ ಹೆಸರಾಗಿತ್ತು. ಕುರು ರಾಜ್ಯ ಮತ್ತು ಮಹಾಭಾರತದಲ್ಲಿ ಉಲ್ಲೇಖಿತವಾಗಿರುವ ಇದೇ ಹೆಸರಿನ ರಾಜವಂಶಕ್ಕೆ ಹೆಸರಿನಲ್ಲಿ ಸಾಮ್ಯವಿದೆ.
ಗಾಂಧಾರ ರಾಜ್ಯಸಂಪಾದಿಸಿ
ಗಾಂಧಾರ ರಾಜ್ಯವು ಇಂದಿನ ಉತ್ತರ ಪಾಕಿಸ್ತಾನ ಮತ್ತು ದಕ್ಷಿಣ ಅಫ್ಘಾನಿಸ್ತಾನದ ಪ್ರದೇಶದಲ್ಲಿತ್ತು. ಪೇಶಾವರ ಮತ್ತು ತಕ್ಷಶಿಲೆ ಇಲ್ಲಿಯ ಪ್ರಮುಖ ನಗರಗಳಾಗಿದ್ದವು. ಕ್ರಿ.ಪೂ. ೫೦೦ರಲ್ಲಿ ಪಾಣಿನಿಯು ಸಂಸ್ಕೃತದ ಸಮಗ್ರ ವ್ಯಾಕರಣವನ್ನು ಬರೆದದ್ದು ತಕ್ಷಶಿಲೆ ಯಲ್ಲಿ. ಇದು ವೈದಿಕ ಸಂಸ್ಕೃತವು ಶಾಸ್ತ್ರೀಯ ಸಂಸ್ಕೃತಕ್ಕೆ ಬದಲಾಗಲು ಕಾರಣೀಭೂತವಾಯಿತು. ಅತಿ ಪ್ರಬಲ ಮಹಾಜನಪದಗಳಲ್ಲಿ ಒಂದಾಗಿದ್ದ ಗಾಂಧಾರವು, ಕುರು ರಾಜ್ಯದವರ ಬೆಂಬಲಿಗ ರಾಜ್ಯವಾಗಿ ಮಹಾಭಾರತದಲ್ಲೂ ಉಲ್ಲೇಖಿತವಾಗಿದೆ. ೧೫೦೦ ವರ್ಷಗಳ ನಂತರ ವಿವಾದಾತ್ಮಕ ಘಜನಿ ಮಹಮೂದನ ದಂಡಯಾತ್ರೆಗಳ ಫಲವಾಗಿ ಗಾಂಧಾರದ ಹೆಸರು ಕಣ್ಮರೆಯಾಯಿತು.
ಕೋಸಲ ರಾಜ್ಯಸಂಪಾದಿಸಿ
ಇಂದಿನ ಉತ್ತರ ಪ್ರದೇಶದ ಔಧ್ ಪ್ರದೇಶದಲ್ಲಿ ರಾಜ್ಯವಾಳಿದ ಕೋಸಲ ರಾಜರ ರಾಜಧಾನಿ ಅಯೋಧ್ಯೆಯಾಗಿತ್ತು. ಕುರು, ಮಗಧ ಮತ್ತು ಗಾಂಧಾರ ರಾಜ್ಯಗಳಂತೆಯೇ ವೇದೋತ್ತರ ಕಾಲದ ಅತಿ ಪ್ರಬಲ ರಾಜ್ಯಗಳಲ್ಲಿ ಕೋಸಲವೂ ಪರಿಗಣಿತವಾಗಿತ್ತು. ಹರ್ಯಂಕರ ಆಳ್ವಿಕೆ ಯ ಕಾಲದ ಮಗಧ ಸಾಮ್ರಾಜ್ಯದಿಂದ ಮತ್ತು ಅವರ ನಂತರದ ಇತರ ರಾಜ್ಯಗಳಿಂದ ಜರ್ಝರಿತವಾದ ಕೋಸಲವು ಮುಂದೆ ಇವುಗಳಲ್ಲಿ ಲೀನವಾಯಿತು. ರಾಮಾಯಣವೇ ಮುಂತಾದ ಸಂಸ್ಕೃತ ಗ್ರಂಥಗಳಲ್ಲಿ ಪ್ರಧಾನವಾಗಿ ಉಲ್ಲೇಖವಾಗಿರುವ ಕೋಸಲ ರಾಜ್ಯಕ್ಕೆ ಬುದ್ಧ ಮತ್ತು ಮಹಾವೀರರು ಭೇಟಿಯಿತ್ತಿದ್ದರು.
ಅಂಗ ರಾಜ್ಯಸಂಪಾದಿಸಿ
ಅಂಗರಾಜ್ಯವು ಇಂದಿನ ಬಿಹಾರದ ಭಾಗಲ್ಪುರ ಮತ್ತು ಮೊಂಘೀರ್ ಪ್ರದೇಶದಲ್ಲಿತ್ತು. ಪುರಾಣಗಳಲ್ಲಿ ಮಾಲಿನಿ ಎಂದು ಉಲ್ಲೇಖವಾಗಿರುವ, ಮುಂದೆ ಚಂಪಾ ಎಂದು ಹೆಸರಾದ ನಗರವು ಅವರ ರಾಜಧಾನಿಯಾಗಿತ್ತು. ಅವರ ರಾಜ್ಯವು ಒಂದು ಕಾಲದಲ್ಲಿ ಸಮುದ್ರತೀರದವರೆಗೂ ಹಬ್ಬಿ ರುವ ಸಾಧ್ಯತೆಗಳಿವೆ. ಚಂಪಾ ನಗರವು ವಾಣಿಜ್ಯ ಕೇಂದ್ರವೆಂದು ಖ್ಯಾತವಾಗಿ, ಇಂದಿನ ವಿಯಟ್ನಾಮಿನವರೆಗೂ ವ್ಯಾಪಾರ ಸಂಬಂಧವನ್ನು ಬೆಳೆಸಿತ್ತು.
ಕಳಿಂಗ ರಾಜ್ಯಸಂಪಾದಿಸಿ
ಮಹಾಜನಪದಗಳಲ್ಲಿ ಒಂದೆಂದು ಪರಿಗಣಿಸದೆಯೇ ಇದ್ದರೂ , ಪುರಾತನ ಭಾರತದ ಅತಿ ಮಹತ್ವದ ಘಟನೆಗಳಲ್ಲಿ ಮುಖ್ಯ ಪಾತ್ರ ವಹಿಸಿದ ರಾಜ್ಯಗಳಲ್ಲಿ ಕಳಿಂಗವೂ ಒಂದು - ಸಾಮ್ರಾಟ್ ಅಶೋಕನಿಂದ ಇವೆಲ್ಲವೂ ಪರಾಜಿತವಾದವು. ಭಾರತ ಮತ್ತು ಮುಂದೆ ಇಂಡೋನೇಶಿ ಯ ಎಂದು ಹೆಸರಾದ, ದ್ವೀಪ ಸಮೂಹದೊಡನೆ ಸಾಂಸ್ಕೃತಿಕ ಸಂಬಂಧದ ಪ್ರಾರಂಭವಾದದ್ದು ಇಂದಿನ ಒರಿಸ್ಸಾದಲ್ಲಿದ್ದ ಕಳಿಂಗ ರಾಜ್ಯದ ಕಾಲದಿಂದ ಈ ಸಂಬಂಧವು ಮುಂದೂ ಹಾಗೆಯೇ ಮುಂದುವರಿದುಕೊಂಡು ಬಂದಿತು.

ಪರ್ಷಿಯನ್ನರ ಮತ್ತು ಗ್ರೀಕರ ದಾಳಿಸಂಪಾದಿಸಿ
ಸುಮಾರು ಭಾರತ ಉಪಖಂಡವನ್ನು ಅಕೀಮೆನಿಡ್ ಸಾಮ್ರಾಜ್ಯ ಮತ್ತು ಅಲೆಕ್ಸಾಂಡರ್ ನ ಸೈನ್ಯಗಳು ಮುತ್ತಿಗೆ ಹಾಕಿದವು. ಇದರಿಂದ ಭಾರತದ ರಾಜಕೀಯ ವ್ಯವಸ್ಥೆ ಮತ್ತು ರಾಜಕೀಯ ದಾರ್ಶನಿಕತೆ ಬದಲಾದವು.
ಅಕೀಮೆನಿಡ್ ಸಾಮ್ರಾಜ್ಯಸಂಪಾದಿಸಿ



ಅಲೆಕ್ಸಾಂಡರನ ದಿಗ್ವಿಜಯ ಭಾರತದ ಉತ್ತರ ತುದಿಯಾದ ಸಿಂಧೂ ನದಿ ಪ್ರದೇಶದವರೆಗೂ ಹಬ್ಬಿತ್ತು.
ವಾಯವ್ಯ ಭಾರತವನ್ನು ಪರ್ಷಿಯಾದ ಅಕೀಮೆನಿಡ್ ಸಾಮ್ರಾಜ್ಯ ಆಳುತ್ತಿತ್ತು. ಇದನ್ನು ನಂತರ ಅಲೆಕ್ಸಾಂಡರನು ಆಕ್ರಮಿಸಿದನು. ಇಂದಿನ ಪಂಜಾಬ್, ಸಿಂಧೂ ನದಿಯ ಪ್ರದೇಶಗಳು ಅಲೆಕ್ಸಾಂಡರನ ಹತೋಟಿಗೆ ಬಂದವು. ಅಕೀಮೆನಿಡ್ ರಾಜ್ಯಭಾರ ೧೮೬ ವರ್ಷ ನಡೆಯಿತು. ಅವರು ಪರ್ಷಿಯನ್ ಭಾಷೆಯ ಅರಾಮಿಕ್ ಲಿಪಿಯನ್ನು ಬಳಸುತ್ತಿದ್ದರು.
ಅಲೆಗ್ಸಾಂಡರನ ಸಾಮ್ರಾಜ್ಯಸಂಪಾದಿಸಿ
ಹೆಲ್ಲೆನಿಸ್ಟಿಕ್ ಗ್ರೀಸ್ ಮತ್ತು ಬೌದ್ಧಧರ್ಮೀಯರ ನಡುವಣ ಸಂವಾದವು, ಅಲೆಗ್ಸಾಂಡರನು ಕ್ರಿ.ಪೂ. ೩೩೪ರಲ್ಲಿ ಏಷ್ಯಾದ ಕೆಲವು ಭಾಗಗಳನ್ನು ಮತ್ತು ಆಕೇಮೆನಿದ್ ಸಾಮ್ರಾಜ್ಯವನ್ನು ವಶಪಡಿಸಿಕೊಂಡು, ಭಾರತೀಯ ಉಪಖಂಡದ ಉತ್ತರ-ಪಶ್ಚಿಮ ಭಾಗಗಳನ್ನು ತಲುಪಿದಾಗ ನಡೆಯಿತು. ಅಲ್ಲಿ ಅವನು ರಾಜ ಪೋರಸ್‍ನನ್ನು ಹೈದಸ್ಪೆಸ್(ಈಗಿನ ಪಾಕಿಸ್ತಾನದಲ್ಲಿನ ಜೀಲಮ್ ನಗರದ ಬಳಿ) ಯುದ್ಧದಲ್ಲಿ ಸೋಲಿಸಿ, ಪಂಜಾಬಿನ ಬಹುತೇಕ ಭಾಗವನ್ನು ಆಕ್ರಮಿಸಿಕೊಂಡನು. ಅದಾಗ್ಯೂ, ಅಲೆಗ್ಸಾಂಡರಿನ ಪಡೆಗಳು ಬಿಯಸ್ ನದಿಯಿಂದಾಚೆಗೆ ಹೋಗಲು ಸಾಧ್ಯವಾಗಲಿಲ್ಲ ಕಾರಣ ಅಲೆಗ್ಸಾಂಡರನು ತನ್ನ ಸೇನೆಯನ್ನು ದಕ್ಷಿಣ-ಪಶ್ಚಿಮದೆಡೆಗೆ ನಡೆಸುವಂತಾಯಿತು.
ಗ್ರೀಕೊ-ಬೌದ್ಧ ಕಾಲಸಂಪಾದಿಸಿ
ಶಾಸ್ತ್ರೀಯ ಗ್ರೀಕ್ ಸಂಸ್ಕೃತಿ ಮತ್ತು ಬೌದ್ಧ ಧರ್ಮಗಳ ಸಾಂಸ್ಕೃತಿಕ ಮಿಶ್ರಣ ಈಗಿನ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳ ಪ್ರದೇಶದಲ್ಲಿ ಕ್ರಿ.ಪೂ.೪ ರಿಂದ ೫ನೇ ಶತಮಾನದಲ್ಲಿ ವ್ಯಾಪಿಸಿತ್ತು. ವಿಶೇಷತಃ ಮಹಾಯಾನವು ಇದರಿಂದ ಪ್ರಭಾವಗೊಂಡಿತು. ನಂತರ ಇದು ಚೀನ, ಕೊರಿಯ, ಮತ್ತು ಜಪಾನ್ ದೇಶಗಳ ವರೆಗೆ ಹಬ್ಬಿತು.

ಮಗಧ ಸಾಮ್ರಾಜ್ಯ ಕ್ರಿ.ಪೂ ೬೮೪-೩೨೧ಸಂಪಾದಿಸಿ
ಮುಖ್ಯ ಲೇಖನ: ಮಗಧ ಸಾಮ್ರಾಜ್ಯ



ಕಲಾವಿದನೊಬ್ಬನ ಅಚ್ಚಿನಲ್ಲಿ ಚಂದ್ರಗುಪ್ತ ಮೌರ್ಯ, ಭಾರತದ ಮೊದಲ ಚಕ್ರವರ್ತಿ, ಮೌರ್ಯ ಸಾಮ್ರಾಜ್ಯದ ಸಂಸ್ಥಾಪಕ
ಮೌರ್ಯ ರಾಜರುಗಳ ಆಳ್ವಿಕೆಯ ಅಂದಾಜು ಅವಧಿ
ಚಕ್ರವರ್ತಿ
ಆಳ್ವಿಕೆ ಆರಂಭ
ಆಳ್ವಿಕೆ ಅಂತ್ಯ
ಚಂದ್ರಗುಪ್ತ ಮೌರ್ಯ ಕ್ರಿ.ಪೂ.೩೨೨ ಕ್ರಿ.ಪೂ. ೨೯೮
ಬಿಂದುಸಾರ ಕ್ರಿ.ಪೂ. ೨೯೭ ಕ್ರಿ.ಪೂ. ೨೭೨
ಸಾಮ್ರಾಟ್ ಅಶೋಕ ಕ್ರಿ.ಪೂ. ೨೭೩ ಕ್ರಿ.ಪೂ. ೨೩೨
ದಶರಥ ಕ್ರಿ.ಪೂ. ೨೩೨ ಕ್ರಿ.ಪೂ. ೨೨೪
ಸಂಪ್ರತಿ ಕ್ರಿ.ಪೂ. ೨೨೪ ಕ್ರಿ.ಪೂ. ೨೧೫
ಶಾಲಿಸುಕ ಕ್ರಿ.ಪೂ. ೨೧೫ ಕ್ರಿ.ಪೂ. ೨೦೨
ದೇವವರ್ಮನ್ ಕ್ರಿ.ಪೂ. ೨೦೨ ಕ್ರಿ.ಪೂ. ೧೯೫
ಶತಧನ್ವನ್ ಕ್ರಿ.ಪೂ. ೧೯೫ ಕ್ರಿ.ಪೂ. ೧೮೭
ಬೃಹದ್ರಥ ಕ್ರಿ.ಪೂ. ೧೮೭ ಕ್ರಿ.ಪೂ ೧೮೫
ಹದಿನಾರು ಮಹಾಜನಪದಗಳಲ್ಲಿ, ಮಗಧ ಸಾಮ್ರಾಜ್ಯವು ಹಲವಾರು ವಂಶಗಳ ಆಳ್ವಿಕೆಯಲ್ಲಿ ಬೆಳೆಯುತ್ತಾ ಹೋಯಿತು. ಭಾರತದ ಅತ್ಯಂತ ಮೇರು ಚಕ್ರವರ್ತಿಗಳಲ್ಲೊಬ್ಬನಾದ ಅಶೋಕ ಮೌರ್ಯನ ಆಳ್ವಿಕೆಯಲ್ಲಿ ಮಗಧ ಸಾಮ್ರಾಜ್ಯವು ಉತ್ತುಂಗಕ್ಕೇರಿತು. ನೆರೆಹೊರೆಯ ಎರಡು ರಾಜ್ಯಗಳನ್ನು ಸೇರಿಸಿಕೊಂಡು ಬೃಹತ್ ಶಕ್ತಿಯಾಗಿ ರೂಪುಗೊಂಡ ಮಗಧ ಸಾಮ್ರಾಜ್ಯಕ್ಕೆ ಸರಿಸಾಟಿಯಾದ ಸೇನೆ ಯಾವುದೂ ಇಲ್ಲವೆಂಬತಾಗಿತ್ತು.
ಹರ್ಯಂಕ ರಾಜವಂಶಸಂಪಾದಿಸಿ
ಸಂಪ್ರದಾಯದ ಪ್ರಕಾರ, ಹರ್ಯಾಂಕ ರಾಜವಂಶವು ಮಗಧ ಸಾಮ್ರಾಜ್ಯವನ್ನು ಕ್ರಿ.ಪೂ.೬೮೪ರಲ್ಲಿ ಸಂಸ್ಥಾಪಿಸದ್ದೆಂದು ಹೇಳಲಾಗುತ್ತದೆ. ಆಗ ಅದರ ರಾಜಧಾನಿಯು ರಾಜಗೃಹ, ನಂತರ ಪಾಟಲೀಪುತ್ರವಾಯಿತು (ಈಗಿನ ಪಾಟ್ನ). ಈ ರಾಜವಂಶವು ಶಿಶುನಾಗ ರಾಜವಂಶದಿಂದ ಮುಂದುವರೆಯಿತು.ಮಹನ್
ಶಿಶುನಾಗ ಸಾಮ್ರಾಜ್ಯಸಂಪಾದಿಸಿ
ಈ ಕಾಲದಲ್ಲಿ ಭಾರತದ ಎರಡು ದೊಡ್ಡ ಧರ್ಮಗಳ ಬೆಳವಣಿಗೆಯಾಯಿತು. ೬ನೇ ಶತಮಾನದಲ್ಲಿ ಬುದ್ಧನು ಬೌದ್ಧ ಧರ್ಮವನ್ನು ಸ್ಥಾಪಿಸಿದನು . ಮಹಾವೀರ ಜೈನ ಧರ್ಮವನ್ನು ಪ್ರೋತ್ಸಾಯಿಸಿದನು. ಶಿಶುನಾಗ ಸಾಮ್ರಾಜ್ಯವು ಕ್ರಿ.ಪೂ. 424 ರ ತನಕ ನಂದ ಸಾಮ್ರಾಜ್ಯದಿಂದ ಉರುಳಿತು.
ನಂದ ಸಾಮ್ರಾಜ್ಯಸಂಪಾದಿಸಿ
ಶಿಶುನಾಗ ಸಾಮ್ರಾಜ್ಯದ ರಾಜ ಮಹಾನಂದಿಯ ಅವೈಧ ಪುತ್ರನೊಬ್ಬನು ನಂದ ಸಾಮ್ರಾಜ್ಯವನ್ನು ಸ್ಥಾಪಿಸಿದನು. ನೂರುವರ್ಷ ಬಾಳಿದ ಈ ಸಾಮ್ರಾಜ್ಯ ದ ಬಹುತೇಕ ಅವಧಿಯನ್ನು ಆಳಿದ ಮಹಾಪದ್ಮ ನಂದನು ತನ್ನ ೮೮ನೆಯ ವಯಸ್ಸಿನಲ್ಲಿ ಮರಣ ಹೊಂದಿದನು. ನಂದ ಸಾಮ್ರಾಜ್ಯದ ನಂತರ ಮೌರ್ಯ ಸಾಮ್ರಾಜ್ಯವು ತಲೆಯೆತ್ತಿತು. ಅಲೆಗ್ಸಾಂಡರನು ಭಾರತದಿಂದ ಕಾಲ್ತೆಗೆಯಲು ನಂದ ಸಾಮ್ರಾಜ್ಯದಲ್ಲಿ ಅಗಾಧ ಸೈನ್ಯಬಲವಿದೆ ಎಂಬ ಗುಸುಗುಸು ಸುದ್ದಿಯೂ ಕಾರಣವಾಯಿತು ಎನ್ನಲಾಗಿದೆ.
ಮೌರ್ಯ ಸಾಮ್ರಾಜ್ಯ ಕ್ರಿ.ಪೂ ೩೨೧-೧೮೪ಸಂಪಾದಿಸಿ
ಮುಖ್ಯ ಲೇಖನ: ಮೌರ್ಯ ಸಾಮ್ರಾಜ್ಯ



ಮೌರ್ಯರ ಕಾಲದಲ್ಲಿ ನಿರ್ಮಿತ ಸಾಂಚಿಯಲ್ಲಿನ ಬೌದ್ಧ ಸ್ತೂಪ


ಮೌರ್ಯ ಸಾಮ್ರಾಜ್ಯದ ವ್ಯಾಪ್ತಿಯನ್ನು ತೋರಿಸುವ ನಕ್ಷೆ - ಕಡುನೀಲಿ-ಮೌರ್ಯ ಸಾಮ್ರಾಜ್ಯ; ತಿಳಿನೀಲಿ-ಮಿತ್ರರಾಜ್ಯಗಳು◾ಹಿಂದೂ ಧರ್ಮ ಪ್ರೇಮಿಯಾಗಿದ್ದ ವೀರ ಸೇನಾಪತಿ ಚಂದ್ರಗುಪ್ತ ಮೌರ್ಯನು ಕ್ರಿ.ಪೂ. ೩೨೧ರಲ್ಲಿ ಆಗಿನ ರಾಜ ದೇಶಭ್ರಷ್ಟನಾದ, ಪ್ರಜಾಪೀಡಕನಾದ, ಧನನಂದನನ್ನು ಪದಚ್ಯುತನನ್ನಾಗಿ ಮಾಡಿ, ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದನು. ಇದೇ ಕಾಲದಲ್ಲಿ ಮೊಟ್ಟಮೊದಲ ಬಾರಿಗೆ, ಭಾರತೀಯ ಉಪಖಂಡದ ಬಹುತೇಕ ಎಲ್ಲಾ ಭಾಗಗಳೂ ಒಂದೇ ಅಧಿಪತ್ಯದ ಹಿಂದೂಧರ್ಮದ ಅಧೀನವಾಗಿದ್ದವು. ಚಂದ್ರಗುಪ್ತ ಸೆಲ್ಯೂಸಿಡ್ ಸಾಮ್ರಾಜ್ಯದ ಚಕ್ರವರ್ತಿ ಸೆಲ್ಯೂಕಸ್, ಭಾರತದ ಉತ್ತರಪಶ್ಚಿಮದಲ್ಲಿ ಕಳೆದುಕೊಂಡಿದ್ದ ಭಾಗಗಳನ್ನು ಮತ್ತೊಮ್ಮೆ ಗೆದ್ದುಕೊಳ್ಳಲು ಪ್ರಯತ್ನಿಸಿದ. ಸ್ಪಷ್ಟ ಫಲಿತಾಂಶ ಕಾಣದ ಯುದ್ಧದ ನಂತರ ಸೆಲ್ಯೂಕಸ್ ಮತ್ತು ಚಂದ್ರಗುಪ್ತ ಶಾಂತಿಯ ಒಪ್ಪಂದ ಮಾಡಿಕೊಂಡರು. ಸೆಲ್ಯೂಕಸ್ ನ ಮಗಳ(HELAN)ನ್ನು ಚಂದ್ರಗುಪ್ತ ವಿವಾಹವಾದದ್ದಲ್ಲದೆ, ಗಾಂಧಾರ ಮತ್ತು ಅರಕೋಸಿಯಾ ಪ್ರಾಂತ್ಯಗಳನ್ನು ಪಡೆದ. ಹಾಗೆಯೇ ಸೆಲ್ಯೂಕಸ್ ಚಂದ್ರ ಗುಪ್ತನ ಸೈನ್ಯದಿ೦ದ ೫೦೦ ಯುದ್ಧದ ಆನೆಗಳನ್ನು ಪಡೆದ ( ಗ್ರೀಕ್ ಅರಸರ ಮೇಲಿನ ಇಪ್ಸಸ್ ಯುದ್ಧದಲ್ಲಿ ಈ ಆನೆಗಳು ಸೆಲ್ಯೂಕಸ್ ನ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದವು). ರಾಜನೈತಿಕ ಸಂಬಂಧಗಳು ಏರ್ಪಟ್ಟ ನಂತರ ಅನೇಕ ಗ್ರೀಕರು ಚ೦ದ್ರಗುಪ್ತನ ಆಸ್ಥಾನಕ್ಕೆ ಬರಲಾ ರಂಭಿಸಿದರು (ಉದಾ: ಗ್ರೀಕ್ ಚರಿತ್ರಕಾರ ಮೆಗಾಸ್ತನೀಸ್).
◾ಪರ್ಷಿಯನ್ ಮತ್ತು ಗ್ರೀಕ್ ಪಡೆಗಳ ದಾಳಿಯಿಂದ ಉತ್ತರ ಭಾರತ ಜರ್ಝರಿತವಾಗಿದ್ದರ ಲಾಭ ಪಡೆದುಕೊಂಡ ಚಂದ್ರಗುಪ್ತನು, ತನ್ನ ರಾಜ್ಯವನ್ನು ಭಾರತೀಯ ಉಪಖಂಡದ ವಿವಿಧ ಭಾಗಗಳಿಗೆ ವಿಸ್ತರಿಸಿದ್ದಷ್ಟೇ ಅಲ್ಲದೆ, ಗಾಂಧಾರವನ್ನೂ ಗೆದ್ದು, ಪರ್ಷಿಯಾ ಮತ್ತು ಮಧ್ಯ ಏಷಿಯಾ ದವರೆಗೂ ಚಾಚಿದನು. ಚಾಣಕ್ಯನ ಮ೦ತ್ರಿತ್ವದ ಅಡಿಯಲ್ಲಿ ಚ೦ದ್ರಗುಪ್ತ ಕೇ೦ದ್ರೀಕೃತವಾದ ರಾಜ್ಯವ್ಯವಸ್ಥೆಯನ್ನು ಸ್ಥಾಪಿಸಿದ. ರಾಜಧಾನಿ ಪಾಟಲಿಪುತ್ರ (ಇ೦ದಿನ ಪಾಟ್ನಾ). ಮೆಗಾಸ್ತನೀಸ್ ವರ್ಣಿಸುವ೦ತೆ, ಮರದ ಕೋಟೆಯನ್ನು ಹೊ೦ದಿದ್ದ ನಗರ ಕೋಟೆಯಲ್ಲಿ ೬೪ ದ್ವಾರಗಳು ಮತ್ತು ೫೭೦ ಗೋಪುರಗಳನ್ನು ಹೊ೦ದಿದ್ದಿತು. ಚಾಣಕ್ಯನು ತಕ್ಷಶಿಲೆಯ ವಿಶ್ವ್ವವಿದ್ಯಾಲಯದ ಪ್ರಾಧ್ಯಾಪಕನಾಗಿದ್ದ. ಚಾಣಕ್ಯನು ಒಳ್ಳೆಯ ಅರ್ಥಶಾಸ್ತ್ರಜ್ಞನಾಗಿದ್ದ. ಮೌರ್ಯರ ಸಾಮ್ರಾಜ್ಯವನ್ನು ಚಾಣಕ್ಯನು ಕಟ್ಟಿದ್ದು ಭಾರತವನ್ನು ಯವನರ ದೌರ್ಜನ್ಯದಿನ್ದ ಕಾಪಾದಲು. ಚಂದ್ರಗುಪ್ತನು ಒಳ್ಳೆಯ ಆದಡಳಿತಗಾರನಾಗಿದ್ದ. ಅವನ ಉತ್ತರಾಧಿಕಾರಿಯಾದ ಬಿಂದುಸಾರನು, ದಕ್ಷಿಣ ಮತ್ತು ಪೂರ್ವದ ತುದಿಗಳನ್ನು ಹೊರತುಪಡಿಸಿ, ತನ್ನ ಸಾಮ್ರಾಜ್ಯವನ್ನು ಭಾರತದ ಬಹುತೇಕ ಎಲ್ಲಾ ಭಾಗಗಳಿಗೂ ವಿಸ್ತರಿಸಿದನು. ಈ ಎರಡು ತುದಿಗಳ ರಾಜ್ಯಗಳೂ ಕೂಡಾ ಬಹುಶಃ ಆಶ್ರಿತ ಸ್ಥಾನದಲ್ಲಿದ್ದವು.
ಬಿಂದುಸಾರನ ನಂತರ ಅವನ ಮಗ ಅಶೋಕನು ಪಟ್ಟಕ್ಕೆ ಬಂದನು. ಮೊದ ಮೊದಲಲ್ಲಿ ಅವನೂ ರಾಜ್ಯವಿಸ್ತಾರದಲ್ಲಿ ಮಗ್ನನಾದರೂ, ಕಳಿಂಗಯುದ್ಧದ ನರಮೇಧದ ನಂತರ ರಕ್ತಪಾತವನ್ನು ತ್ಯಜಿಸಿ, ಬೌದ್ಧಧರ್ಮೀಯನಾಗಿ ಅಹಿಂಸಾಮಾರ್ಗದ ಅನು ಯಾಯಿಯಾದನು. ಅಶೋಕನ ಶಿಲಾಶಾಸನಗಳು ಭಾರತೀಯ ಇತಿಹಾಸದ ಅತಿ ಹಳೆಯ ಕಾಪಿಟ್ಟ ದಾಖಲೆಗಳಾಗಿವೆ. ಈ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು, ಅಶೋಕನ ನಂತರದ ಸಾಮ್ರಾಜ್ಯಗಳ ಕಾಲಮಾನ ನಿರ್ಣಯ ಸಾಧ್ಯವಾಗಿದೆ. ಅಶೋಕನ ಕಾಲದಲ್ಲಿ ಮೌರ್ಯ ಸಾಮ್ರಾಜ್ಯವು ಪೂರ್ವ ಮತ್ತು ಆಗ್ನೇಯ ಏಷಿಯಾಗಳಲ್ಲಿ ಬೌದ್ಧಧರ್ಮದ ಪ್ರಸಾರಕ್ಕೆ ಕಾರಣವಾಗಿ, ಸಂಪೂರ್ಣ ಏಶಿಯಾದ ಇತಿಹಾಸ ಮತ್ತು ಬೆಳವಣಿಗೆಯಲ್ಲಿ ಮೂಲಭೂತ ಬದಲಾವಣೆಯನ್ನುಂಟುಮಾಡಿತು. ಪ್ರಪಂಚದ ಅತಿ ಶ್ರೇಷ್ಟ ರಾಜರುಗಳಲ್ಲಿ ಸಾಮ್ರಾಟ್ ಅಶೋಕನೂ ಪರಿಗಣಿತವಾಗಿದ್ದಾನೆ.
ಶುಂಗ/ಶೃಂಗ ಸಾಮ್ರಾಜ್ಯಸಂಪಾದಿಸಿ
ಮುಖ್ಯ ಲೇಖನ: ಶುಂಗ ಸಾಮ್ರಾಜ್ಯ
ಕ್ರಿ.ಪೂ. ೧೮೫ ರಲ್ಲಿ ಸಾಮ್ರಾಟ್ ಅಶೋಕನ ಮರಣದ ಐವತ್ತು ವರ್ಷಗಳ ನಂತರ, ಮೌರ್ಯವಂಶದ ಕೊನೆಯ ರಾಜ ಬೃಹದ್ರಥನು ತನ್ನ ಸೈನ್ಯದ ಗೌರವವನ್ನು ಸ್ವೀಕರಿಸುತ್ತಿದ್ದಾಗ, ಅವನ ಮಹಾದಂಡನಾಯಕನಾದ ಪುಷ್ಯಮಿತ್ರ ಶೃಂಗನು ಅವನನ್ನು ಅಮಾನುಷ ವಾಗಿ ಕೊಲೆಗೈದನು. ನಂತರ ಪಟ್ಟಕ್ಕೇರಿದ ಪುಷ್ಯಮಿತ್ರನು ಶೃಂಗ ಸಾಮ್ರಾಜ್ಯವನ್ನು ಸ್ಥಾಪಿಸಿದನು.
ಕಣ್ವ ರಾಜ್ಯಸಂಪಾದಿಸಿ
ಶುಂಗ ರಾಜ್ಯವನ್ನು ಸ್ಥಾನಪಲ್ಲಟ ಮಾಡಿ, ಕಣ್ವ ರಾಜವಂಶವು, ಭಾರತದ ಪೂರ್ವ ಭಾಗವನ್ನು ಕ್ರಿ.ಪೂ. ೭೧ ರಿಂದ ೨೬ ರವರೆಗೆ ಆಳಿತು. ಕ್ರಿ.ಪೂ. ೭೫ರಲ್ಲಿ ಕಣ್ವ ವಂಶದ ವಾಸುದೇವನು ಶುಂಗರ ಕೊನೆಯ ರಾಜನನ್ನು ಪದಚ್ಯುತಗೊಳಿಸಿದರೂ, ತದ ನಂತರದ ಶುಂಗ ರಾಜರು ತನ್ನ ರಾಜ್ಯದ ಮೂಲೆಯೊಂದರಲ್ಲಿ ರಾಜ್ಯಭಾರವನ್ನು ಮುಂದುವರಿಸಲು ಬಿಟ್ಟನು. ನಾಲ್ವರು ಕಣ್ವ ರಾಜರು ಮಗಧವನ್ನು ಆಳಿದರು. ಕ್ರಿ.ಪೂ ೩೦ ರಲ್ಲಿ ದಕ್ಷಿಣದ ರಾಜವಂಶಗಳ ದಾಳಿಯಲ್ಲಿ ಕಣ್ವ ಮತ್ತು ಶುಂಗ ಎರಡೂ ರಾಜ್ಯಗಳೂ ಕೊಚ್ಚಿ ಹೋಗಿ, ಪೂರ್ವ ಮಾಳವ ಪ್ರದೇಶವು ದಾಳಿ ಮಾಡಿದವರ ವಶವಾಯಿತು. ಕಣ್ವ ರಾಜ್ಯದ ಅವನತಿಯೊಂದಿಗೆ, ಮಗಧ ಸಾಮ್ರಾಜ್ಯವು ಅತಿ ಪ್ರಬಲ ಸಾಮ್ರಾಜ್ಯ ಎಂಬ ಹೆಗ್ಗಳಿಕೆಯನ್ನು ಆಂಧ್ರದ ಶಾತವಾಹನ ಸಾಮ್ರಾಜ್ಯಕ್ಕೆ ಬಿಟ್ಟುಕೊಟ್ಟಿತು.

ಪ್ರಾರಂಭದ ಮಧ್ಯಯುಗೀಯ ರಾಜ್ಯಗಳು - ಸುವರ್ಣ ಕಾಲಸಂಪಾದಿಸಿ



ಬುದ್ಧನ ಮೇಲೆ ಮಾರನ ಹಲ್ಲೆ, ೨ನೇ ಶತಮಾನ, ಅಮರಾವತಿ.◾ಮಧ್ಯಯುಗ, ಅದರಲ್ಲೂ ಮುಖ್ಯವಾಗಿ ಗುಪ್ತ ಸಾಮ್ರಾಜ್ಯದ ಕಾಲ, ಅಭೂತಪೂರ್ವ ಸಾಂಸ್ಕೃತಿಕ ಅಭಿವೃದ್ಧಿಯ ಕಾಲವಾಗಿದ್ದು, ಈ ಅವಧಿಯನ್ನು ಭಾರತದ ಸುವರ್ಣ ಕಾಲ ಎಂದು ಕರೆಯಲಾಗಿದೆ. ಸರಿ ಸುಮಾರು ಕ್ರಿ.ಶ. ೧ನೆಯ ಶತಮಾನದ ಮಧ್ಯಭಾಗದಲ್ಲಿ, ಮಧ್ಯ ಏಷಿಯಾ ದಿಂದ ಬಂದು ಈಶಾನ್ಯ ಭಾರತವನ್ನು ಆಕ್ರಮಿಸಿದ ಕುಶಾನರು, ತಮ್ಮದೇ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಈ ಸಾಮ್ರಾಜ್ಯವು ಮುಂದೆ, ಪೇಶಾವರದಿಂದ, ಗಂಗಾನದಿಯ ಹರವಿನ ಮಧ್ಯಭಾಗದವರೆಗೆ, ಅಷ್ಟೇ ಏಕೆ, ಬಹುಶಃ ಬಂಗಾಳ ಕೊಲ್ಲಿಯವರೆಗೂ, ವಿಸ್ತರಿಸಿತು. ಪುರಾತನ ಬ್ಯಾಕ್ಟ್ರಿಯಾ (ಇಂದಿನ ಅಫಘಾನಿಸ್ತಾನದ ಉತ್ತರದಲ್ಲಿದ್ದ ಪ್ರದೇಶ) ಮತ್ತು ದಕ್ಷಿಣ ತಾಜಿಕಿಸ್ತಾನಗಳನ್ನೂ ಈ ಸಾಮ್ರಾಜ್ಯವು ಒಳಗೊಂಡಿತ್ತು.
◾ಇವರ ಪ್ರಭಾವವು ತುರ್ಕಿಸ್ತಾನದವರೆಗೂ ಹಬ್ಬಿದ್ದು, ಚೀನಾ ದೇಶದಲ್ಲಿ ಬೌದ್ಧ ಧರ್ಮ ಪ್ರಸಾರಕ್ಕೆ ಅನುವು ಮಾಡಿಕೊಟ್ಟಿತು. ಇದೇ ಅವಧಿಯಲ್ಲಿ ದಕ್ಷಿಣ ಭಾರತದಲ್ಲಿ ಅನೇಕ ರಾಜವಂಶಗಳು ತಲೆ ಎತ್ತಿದ್ದವು. ಮಧುರೆಯನ್ನು ರಾಜಧಾನಿಯಾಗಿಟ್ಟುಕೊಂಡು, ದಕ್ಷಿಣ ತಮಿಳುನಾಡಿನಲ್ಲಿ ರಾಜ್ಯಭಾರ ಮಾಡುತ್ತಿದ್ದ ಪಾಂಡ್ಯ ರಾಜ್ಯವು ಇವುಗಳಲ್ಲಿ ಮೊದಲನೆಯದು ಪಾಂಡ್ಯ ರಾಜ್ಯದ ಕಾಲಮಾನದ ಭೂಶಾಸ್ತ್ರ ಮತ್ತು ಇತಿಹಾಸಗಳ ಒಂದು ಮುಖ್ಯ ಆಕರವೆಂದರೆ ಗ್ರೀಕ್ ಇತಿಹಾಸಜ್ಞ ಅರ್ರಿಯನ್. ಈ ಕಾಲಖಂಡವು ಮೌರ್ಯರು ಅಸ್ತಂಗತರಾಗಿ ಶಾತವಾಹನರು ಕ್ರಿ.ಪೂ.೨೦೦ರಲ್ಲಿ ಪ್ರವರ್ಧಮಾನಕ್ಕೆ ಬಂದಾಗಿನಿಂದ ಹಿಡಿದು, ಗುಪ್ತರ ಸಾಮ್ರಾಜ್ಯದ ಕೊನೆಯವರೆಗೂ, ಅಂದರೆ ಕ್ರಿ.ಶ. ಮೊದಲನೆಯ ಸಹಸ್ರಮಾನದ ಮಧ್ಯಭಾಗದವರೆಗೂ, ಸುಮಾರು ೭೦೦ ವರ್ಷಗಳವರೆಗೆ ವ್ಯಾಪಿಸಿದ್ದು, ಹೂಣರ ಆಕ್ರಮಣ ದೊಂದಿಗೆ ಕೊನೆಯಾಯಿತು.
ಶಾತವಾಹನ ಸಾಮ್ರಾಜ್ಯಸಂಪಾದಿಸಿ
ಶಾತವಾಹನರು (ಇವರಿಗೆ ಆಂಧ್ರರು ಎಂದೂ ಕರೆಯಲಾಗುತ್ತದೆ) ಸುಮಾರು ಕ್ರಿ.ಪೂ. ೨೩೦ ರಿಂದ ದಕ್ಷಿಣ ಮತ್ತು ಮಧ್ಯ ಭಾರತದ ಪ್ರದೇಶದಲ್ಲಿ ಆಳಿದ ರಾಜವಂಶ. ಇವರ ರಾಜ್ಯದ ಅಂತ್ಯದ ಬಗ್ಯೆ ವಿವಾದಗಳಿದ್ದರೂ, ಅತ್ಯಂತ ಉದಾರೀ ಅಂದಾಜಿನ ಪ್ರಕಾರ, ಸುಮಾರು ೪೫೦ ವರ್ಷ ಆಡಳಿತ ನಡೆಸಿರಬೇಕು. ಇದಕ್ಕಿಂತ ಮೊದಲೇ ಅವರ ಸಾಮ್ರಾಜ್ಯವು ದಾಯವಾದಿಗಳಲ್ಲಿ ಹರಿದು ಹಂಚಿಹೋಗಿತ್ತು. ಶಕರೊಂದಿಗೆ ಕಲಹ ಮತ್ತು ಸಾಮಂತರ ರಾಜರುಗಳ ಮಹತ್ವಾಕಾಂಕ್ಷೆ ಈ ರಾಜ್ಯದ ಅವನತಿಗೆ ಕಾರಣವಾಯಿತು. ಅನೇಕ ರಾಜವಂಶಗಳು ಶಾತವಾಹನರ ರಾಜ್ಯವನ್ನು ಹಂಚಿಕೊಂಡವು. ಕರ್ನಾಟಕವನ್ನಾಳಿದ ಮೊದಲ ಹಿರಿಯ ಐತಿಹಾಸಿಕ ಸಾಮ್ರಾಜ್ಯ - ಶಾತವಾಹನರದು. ಆರಂಭದಲ್ಲಿ ಶಾತವಾಹನರು ಮೌರ್ಯರ ಸಾಮಂತರಾಗಿದ್ದರು. ಶಾತವಾಹನರ ರಾಜಧಾನಿ - ಪೈಥಾನ್ ಅಥವಾ ಪ್ರತಿಷ್ಠಾನ್. ಶಾತವಾಹನರು ಸುಮಾರು - ೪೬೦ ವರ್ಷ ಸಾಮ್ರಾಜ್ಯ ಆಳಿದರು. ಶಾತವಾಹನರು ಆಂಧ್ರ ಮೂಲದವರು. ಪ್ರಸ್ತುತ ಪೈಥಾನ್ ಮಹಾರಾಷ್ಟ್ರ ಜೌರಂಗಬಾದ್ ಜಿಲ್ಲೆಯಲ್ಲಿದೆ.
ರಾಜಕೀಯ ಇತಿಹಾಸ ಶಾತವಾಹನ ವಂಶದ ಸ್ಥಾಪಕ ದೊರೆ - ಸಿಮುಖ. ಸಿಮುಖನ ರಾಜಧಾನಿ - ಪೈಥಾನ್. ಸಿಮುಖ ಮೌರ್ಯ ದೊರೆ ನಿಶಿರ್ಮನನ್ನು ಕೊಂದು ಸ್ವತಂತ್ರನಾದ. ಸಿಮುಖನನ್ನು “ ರಾಜ ಸಿಮುಖ ಶಾತವಾಹನ “ ಎಂದು ವರ್ಣಿಸಿರುವ ಶಾಸನ - ನಾನಾ ಘಾಟ್ ಶಾಸನ. ಸಿಮುಖನಿಗೆ “ ಶಾತವಾಹನ “ ಎಂಬ ಹೆಸರನ್ನು ಕೊಟ್ಟಿರುವ ಗ್ರಂಥ - ಜೈನ ಗ್ರಂಥ. ಸಿಮುಖನ ನಂತರ ಅಧಿಕಾರಕ್ಕೆ ಬಂದವರು - ಇವನ ತಮ್ಮ ಕೃಷ್ಣ. ಒಂದನೇ ಶಾತಕರ್ಣಿ ಈತ - ಸಿಮುಖನ ಮಗ. ನಾನಾ ಘಾಟ್ ಶಾಸನದ ಕರ್ತೃ - ನಾಗನೀಕ . “ ದಕ್ಷಿಣ ಪಥ ಸಾರ್ವಬೌಮ “ ಹಾಗೂ ಅಪ್ರತ್ರಿಹಿತ ಎಂಬ ಬಿರುದುಳ್ಳ ಅರಸ - ಒಂದನೇ ಶಾತಕರ್ಣಿ. ಶಾತವಾಹನರ ಏಳನೇ ದೊರೆ - ಹಾಲ. ಪ್ರಾಕೃತದ ಶೃಂಗಾರ ಕಾವ್ಯದ ಹೆಸರು - ಗಾಥಾಸಪ್ತಸತಿ. ಗಾಥಾಸಪ್ತಸತಿ ಕೃತಿಯ ಕರ್ತೃ - ಹಾಲರಾಜ. “ ಬೃಹತ್ ಕಥಾ ಅಥವಾ ವಡ್ಡ ಕಥಾ “ ಕೃತಿಯ ಕರ್ತೃ - ಗುಣಾಡ್ಯ. ಹಾಲನ ಪತ್ನಿಯ ಹೆಸರು - ಲೀಲಾವತಿ. ಹಾಲನ ರಾಜ್ಯ ಭಾಷೆ - ಪ್ರಾಕೃತ. ಶಾತವಾಹನರ ಪ್ರಸಿದ್ಧ ದೊರೆ - ಗೌತಮೀಪುತ್ರ ಶಾತಕರ್ಣಿ. ಗೌತಮೀಪುತ್ರ ಶಾತಕರ್ಣಿಯ ತಾಯಿಯ ಹೆಸರು - ಗೌತಮೀ ಬಾಲಾಶ್ರೀ. ಗುಹಾಂತರ ನಾಸಿಕ್ ಶಾಸನದ ಕರ್ತೃ -ಗೌತಮೀ ಬಾಲಾಶ್ರೀ. ತ್ರೈ ಸಮುದ್ರ ತೋಯಾ ಪಿತಾವಾಹನ ಹಾಗೂ ಶಾತವಾಹನ ಕುಲ ಪ್ರತಿಷ್ಠಾಪಿತ ಎಂಬ ಬಿರುದುಳ್ಳ ಅರಸ -ಗೌತಮೀಪುತ್ರ ಶಾತಕರ್ಣಿ. ದಕ್ಷಿಣ ಪಥೇಶ್ವರ ಎಂಬ ಬಿರುದನ್ನು ಹೊಂದಿದ್ದ ಶಾತವಾಹನ ದೊರೆ -ಪುಲುಮಾವಿ.
ಆಡಳಿತ ಶಾತವಾಹನರ ಆಡಳಿತದ ಮುಖ್ಯಸ್ಥ -ರಾಜ. ಪ್ರಾಂತ್ಯದ ರಾಜ್ಯಪಾಲ - ಅಮಾತ್ಯ. ರಾಜನ ಆಪ್ತ ಸಲಹೆಗಾರ ಹಾಗೂ ಸಹಾಯಕ -ರಾಜಮಾತ್ಯ. ಮುಖ್ಯಕಾರ್ಯದ ನಿರ್ವಾಹಕ ಅಧಿಕಾರಿ -ಮಹಾಮಾತ್ಯ. ಸರಕು ಸರಂಜಾಮುಗಳ ಮೇಲ್ವಚಾರಕ -ಬಂಡಾರಿಕ. ಕೋಶಾಧ್ಯಕ್ಷ - ಹೆರಾಣಿಕ. ವಿದೇಶಾಂಗ ವ್ಯವಹಾರದ ರಾಯಭಾರಿ -ಮಹಾಸಂಧಿ ವಿಗ್ರಾಹಿತ. ರಾಜನ ಆಜ್ಞೆಗಳನ್ನು ಬರೆಯುವವನು - ಲೇಖಕ. ಸಾಮ್ರಾಜ್ಯವನ್ನು ಅಹರ ,ವಿಷಯ,ನಿಗಮ ಮತ್ತು ಗ್ರಾಮಗಳಾಗಿ ವಿಂಗಡಿಸಲಾಗಿತ್ತು. ಅಹರದ ಮುಖ್ಯಸ್ಥ -ಅಮಾತ್ಯ. ಪಟ್ಟಣಗಳ ಆಡಳಿತ ವ್ಯವಸ್ಥೆ -ನಿಗಮದ ಅಧೀನದಲ್ಲಿ. ಗ್ರಾಮದ ಮೇಲ್ವಿಚಾರಕ -ಗ್ರಾಮೀಣಿ
ಸಾಮಾಜಿಕ ಸ್ಥಿತಿಗತಿ ಸಮಾಜದಲ್ಲಿದ್ದ ಕುಟುಂಬದ ಪದ್ದತಿ -ಅವಿಭಕ್ತ ಕುಟುಂಬ ಪದ್ದತಿ. ಸಮಾಜದಲ್ಲಿ ಮಹಿಳೆಯರು ಪಡೆಯುತ್ತಿದ್ದ ಬಿರುದುಗಳು - ಮಹಾಭೋಜ, ಮಹಾರತಿ, ಸೇನಾಪತಿ. ಶಾತವಾಹನರ ರಾಜವಂಶ -ಮಾತೃ ಪ್ರಧಾನ. ಸಮಾಜದ ವಿಭಾಗಗಳು -ಮಹಾರತಿ ,ಮಹಾಭೋಜಕ , ಸೇನಾಪತಿ ಹಾಗೂ ಸಾಮಾನ್ಯ ವರ್ಗ.
ಆರ್ಥಿಕ ಸ್ಥಿತಿಗತಿ ಶಾತವಾಹನರ ಮುಖ್ಯ ಕಸುಬು -ಕೃಷಿ. ರಾಜ್ಯದ ಆದಾಯದ ಮೂಲ - ಭೂಕಂದಾಯ. ಜನತೆ ರಾಜ್ಯಕ್ಕೆ ಕೊಡಬೇಕಾದ ಭಾಗ - 1/6. ಈ ದೇಶಗಳೊಂದಿಗೆ ವ್ಯಾಪಾರ ಸಂಬಂಧವನ್ನು ಹೊಂದಿದ್ದರು, - ಯುರೋಪ್ ಹಾಗೂ ರೋಮ್. ಇವರ ಕಾಲದ ವೃತ್ತಿ ಸಂಘಗಳನ್ನು ಈ ಹೆಸರಿನಿಂದ ಕರೆಯಲಾಗಿದೆ. - ಶ್ರೇಣಿ. ವೃತ್ತಿ ಸಂಘದ ಮುಖ್ಯಸ್ಥನನ್ನ ಈ ಹೆಸರಿನಿಂದ ಕರೆಯಲಾಗಿದೆ - ಶೇಠಿ . ಶಾತವಾಹನರ ಪ್ರಮುಖ ನಾಣ್ಯಗಳು - ದಿನಾರ , ಸುವರ್ಣ ( ಚಿನ್ನ ) ಕುಷಣ ( ಬೆಳ್ಳಿ ) ಹಾಗೂ ಕರ್ಪಣ , ದ್ರಮ್ಮ , ಪಣ ಗದ್ಯಾಣ . ಹಾಲನ ಗಾಥಸಪ್ತ ಸತಿಯು ಈ ದೇವರ ಸ್ತುತಿಯೊಂದಿಗೆ ಪ್ರಾರಂಭವಾಗುತ್ತದೆ - ಶಿವ . ಶಾತವಾಹನರ ಪೋಷಣಿಯಲ್ಲಿದ್ದ ಭಾಷೆ - ಪ್ರಾಕೃತ ಮತ್ತು ಸಂಸ್ಕೃತ . ಶಾತವಾಹನರ ಆಡಳಿತ ಭಾಷೆ - ಪ್ರಾಕೃತ . ಪ್ರಭೂತಸಾರ , ರಾಯನಸಾರ , ಸಮಯಸಾರ , ಪ್ರವಚನಸಾರ ಮತ್ತು ದ್ವಾದಶನು ಪ್ರೇಕ್ಷ ಕೃತಿಗಳ ಕರ್ತೃ - ಜೈನ ಪಂಡಿತ ಕಂದಾಚಾರ್ಯ . “ ಕವಿ ಪುಂಗವ “ ಎಂಬ ಬಿರುದು ಪಡೆದ ದೊರೆ - ಹಾಲ . ಹಾಲನ ಸಿಲೋನ್ ದಂಡೆ ಯಾತ್ರೆಗಳನ್ನು ತಿಳಿಸುವ ಕೃತಿ - ಲೀಲಾವತಿ . ಗುಣಾಡ್ಯನ ಬೃಹತ್ ಕಥಾ ಈ ಭಾಷೆಯಲ್ಲಿದೆ - ಪೈಶಾಚ . “ ಮಾಧ್ಯಮಿಕ ಸೂತ್ರ “ ಕೃತಿಯ ಕರ್ತೃ - ನಾಗಾರ್ಜುನ . “ಕಾತಂತ್ರ ಸಂಸಕೃತದ “ ವ್ಯಾಕರಣ ಕೃತಿಯ ಕರ್ತೃ - ಸರ್ವವರ್ಮ. “ ಅಮರಾವತಿಯ ಸ್ಥೂಪ “ ಇವರ ಕಾಲಕ್ಕೆ ಸೇರಿದ್ದು - ಶಾತವಾಹನರು . ಶಾತವಾಹನರ ನಿರ್ಮಿಸಿದ ಸ್ಥೂಪಗಳಲ್ಲಿ ಅತ್ಯಂತ ದೊಡ್ಡದ್ದು - ಅಮರಾವತಿ ಸ್ಥೂಪ . ಅಜಂತಾ ಗುಹಾಂತರ ದೇವಾಲಯ ಇವರ ಕಾಲದಿಂದ ಆರಂಭಗೊಂಡಿತು - ಶಾತವಾಹನರು .
ಇತರ ವಿಷಯ ಶಾತವಾಹನರನ್ನು “ ಕುಂತಲ ದೊರೆ “ ಎಂದು ಸಂಭೋದಿಸಿದ ಕೃತಿಯ ಹೆಸರೇನು - ರಾಜಶೇಖರ ಕವಿಯ “ಕಾವ್ಯ ಮಿಮಾಂಸೆ “ . ಹಾಲ ದೊರೆಯ ಇನ್ನೊಂದು ಹೆಸರು - ಹಾಲಾಯುಧ . ಬನವಾಸಿಯ ಪ್ರಾಚೀನ ಹೆಸರು - ವೈಜಯಂತಿ ಪುರ ( ವಿಜಯ ಪಕಾಕೆಪುರ ) . ಪುಲುಮಾಯಿಯ ರಾಜಧಾನಿ - ಬನವಾಸಿ . ಶಾತವಾಹನರ ರಾಜ್ಯದ ವಿಭಾಗಳಳು - ಜನಪದ ( ಡಿವಿಷನ್ ) ವಿಷಯ ( ಜಿಲ್ಲೆ ) ಸೀಮೆ ( ತಾಲ್ಲೂಕ್ ). ಶಾತವಾಹನರ ಸಾಗರೋತ್ತರ ವ್ಯಾಪಾರದ ಕುರಿತು ಬೆಳಕು ಚೆಲ್ಲುವ ಗ್ರೀಕ್ ಕೃತಿ - ಅನಾಮದೇಯ - Periples of the Erithriyan Sea . ಗುಪ್ತರು ಮತ್ತು ಚೋಳರ ಕಾಲದ “ ಬೃಹತ್ ಭಾರತದ “ ಸಾಧನೆಗೆ ನಾಂದಿ ಹಾಡಿದವರು - ಶಾತವಾಹನರು . “ ಬಾರತದ ಪ್ರಪ್ರಥಮ ಶಿವದೇವಾಲಯ “ ಎಂದು ಪ್ರಸಿದ್ದಿಯನ್ನು ಪಡೆದ ದೇವಾಲಯ - ತಾಳಗುಂದದ ಏಕ ಮಂಟಪದ ಶಿವ ದೇವಾಲಯ “ . - ತಾಳಗುಂದದ ಏಕ ಮಂಟಪದ ಶಿವ ದೇವಾಲಯ ಇವರ ಕಾಲಕ್ಕೆ ಸೇರಿದೆ - ಶಾತವಾಹನರು . ಶಾತವಾಹನರ ವರ್ತಕರನ್ನು ಈ ಹೆಸರಿನಿಂದ ಕರೆಯಲಾಗಿದೆ - ನೈಗಾಮ . ಆಂದ್ರ ಭೃತೃಗಳು ಎಂದು ಕರೆಯಲ್ಪಟ್ಟವರು - ಶಾತವಾಹನರು . ಶಾತವಾಹನ ಶಕೆಯ ಆರಂಭ - ಕ್ರಿ.ಶ.೭೮. ಶಾತವಾಹನ ಶಕೆಯನ್ನು ಆರಂಭಿಸಿದವರು - ಶಾತವಾಹನರು ( ಹಾಲ ) . ತ್ರೈಸಮುದ್ರತೋಯ ಪೀತವಾಹನದ ಅರ್ಥ - ಮೂರು ಸಮುದ್ರಗಳ ನೀರನ್ನು ಕುಡಿದು ಕುದುರೆಯನ್ನು ವಾಹನವಾಗಿ ಪಡೆದವ . ಶಾತವಾಹನರ ಪ್ರಸಿದ್ದ ಕಲಾ ಕೇಂದ್ರಗಳು - ಕರ್ಲೆ , ಅಜಂತ . ಅಮರಾವತಿ , ನಾಗರ್ಜುನ ಕೊಂಡ , ಘಂಟಸಾಲಾ ,ನಾಸಿಕ್ , ಪೈಟಾನ್ . ಮೌರ್ಯರ ಪತನಾ ನಂತರ ದಖನ್ ಪ್ರಸ್ಥಭೂಮಿಯಲ್ಲಿ ಪ್ರಪ್ರಥಮ ಐತಿಹಾಸಿಕ ಹಿರಿಯ ಸಾಮ್ರಾಜ್ಯ ವನ್ನು ಸ್ಥಾಪಿಸಿದವರು - ಶಾತವಾಹನರು . ಮೂರು ಸಾಗರಗಳ ಒಡೆಯರು ಎಂದು ಕರೆಯಲ್ಪಟ್ಟವರು - ಶಾತವಾಹನರು . ಶಾತವಾಹನರು ಪ್ರಾರಂಭದಲ್ಲಿ - ಮೌರ್ಯರ ಸಾಮಂತರಾಗಿದ್ದರು . ಎಲ್.ಡಿ.ಬಾರ್ನೆಟ್ ಪ್ರಕಾರ ಶಾತವಾಹನರ ಮೊದಲ ರಾಜಧಾನಿ ಶೀ ಕಾಕುಲು ಹಾಗೂ ನಂರದ ರಾಜಧಾನಿ - ಧನ್ಯ ಕಟಕ . ಶಾತವಾಹನರ ಲಾಂಛನ - ಕುದುರೆ
ಮೌರ್ಯರ ಸಾಮ್ರಾಜ್ಯದ ಪತನ ದಖನ್ ನಲ್ಲಿ ಉಂಟಾದ ಆರ್ಥಿಕ ಸಾಮಾಜಿಕ ಬದಲಾವಣಿ . ಮೌರ್ಯರ ಸಂಬಂಧದಿಂದಾಗಿ ಉಂಟಾದ ಕಬ್ಬಿಣದ ಬಳಕೆ ಹಾಗೂ ಅದರ ಪರಿಚಯ . ದಕ್ಷಿಣ ಭಾರತದಲ್ಲಿ ಹೆಚ್ಚಾದ ಕೃಷಿ ವಿಸ್ತರಣಿ . ಶಾತವಾಹನ ಎಂಬ ಪದವು “ ಆಸ್ಟ್ರೋ ಏಷ್ಯಾಟಿಕ್ “ ಭಾಷೆಯ ಪದವೆಂದೂ ಪರ್ಶಿಯ ಅಥವಾ ಸಾತ ಎಂದರೆ ಕುದುರೆ ಎಂದು ಹಾಗೂ ್ದರಿಂದ ಅವರು ವಾಹನವಾಗುಳ್ಳವರೆಂದು ಅಭಿಪ್ರಾಯ ಪಡಲಾಗಿದೆ . ಶಾತವಾಹನರ ಮೂಲ ನೆಲೆ - ಸಾತ ನಿಹಾರ ವಾಗಿತ್ತು ಎಂದು ತಿಳಿಸುವ ಶಾಸನಗಳು ಮಾಯಾಕಮೋನಿ ಮತ್ತು ಹಿರೇಹಡಗಲಿ ಶಾಸನ . ಪುರಾಣಗಳಲ್ಲಿ ಸಿಮುಖನನ್ನು ಈ ಹೆಸರಿನಿಂದ ಕರೆಯಲಾಗಿದೆ - ವೃಷಲ . ಸಿಮುಖನ್ನ “ಏಕ ಬ್ರಾಹ್ಮಣ “ ಎಂದು ಕರೆದ ಶಾಸನ - ನಾಸಿಕ್ ಶಾಸನ . ಗೌತಮಿ ಪುತ್ರ ಶಾತಕರ್ಣಿಯ ಕಾಲಾವಧಿ - ಕ್ರಿ.ಪೂ.೨೦೨ ಗಿಂದ ೧೮೬ ರವರೆಗೆ . ದಕ್ಷಿಣ ಪಥೇಶ್ವರ ಎಂಬ ಬಿರುದ್ದನ್ನು ತನ್ನ ಪ್ರಭುತ್ವದ ಸಂಕೇತವಾಗಿ ಧರಿಸಿದ್ದ ಶಾತವಾಹನ ದೊರೆ - ಗೌತಮಿಪುತ್ರ ಶಾತಕರ್ಣಿ . ಹಾಲನ ದಂಡ ನಾಯಕನ ಹೆಸರು - ವಿಜಯಾನಂದ . ತಾನೋಬ್ಬನೆ ಬ್ರಾಹ್ಮಣ ಎಂದು ಹೇಳಿಕೊಂಡ ಶಾತವಾಹನ ಅರಸ - ಗೌತಮಿ ಪುತ್ರ ಶಾತಕರ್ಣಿ . ಗೋವರ್ದನ ಜಿಲ್ಲೆಯಲ್ಲಿ “ ಬೆನಕಟಕ “ ಎಂಬ ಪಟ್ಟಣಕ್ಕೆ ತಳಹದಿಯನ್ನು ಹಾಕಿದವರು - ಗೌತಮಿ ಪುತ್ರ ಶಾತಕರ್ಣಿ . “ ನವನಗರ “ ಎಂಬ ಪಟ್ಟವನ್ನು ನಿರ್ಮಿಸಿದವರು - ಎರಡೆನೇ ಪುರುಮಾಯಿ . ‘ ನವನಗರ ಸ್ವಾಮಿ “ ಎಂದು ಬಿರುದನ್ನು ಪಡೆದವನು - 2 ನೇ ಪುಲುಮಾಯಿ .
ಶಾತವಾಹನರ ಪತನಕ್ಕೆ ಕಾರಣಗಳು ಶಕರ ದಾಳಿ, ಬುಡಕಟ್ಟಿನವರಿಂದ ಶಾತವಾಹನ ಪ್ರದೇಶಗಳ ಮೇಲೆ ಆಕ್ರಮಣ. ನಾಗಾಗಳ ದಾಳಿ. ಪಲ್ಲವರು ಮತ್ತು ವಾಕಾಟಕರ ಪ್ರಬಲತೆ .
ಶಾತವಾಹನರ ಆಡಳಿತ ವ್ಯವಸ್ಥೆ ಶಾತವಾಹನರ ಕಾಲದ ಅತ್ಯಂತ ಕಿರು ಆಡಳಿತದ ಘಟಕ - ಗ್ರಾಮ. ಶಾತವಾಹನರ ಕಾಲದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಸೇನಾ ನಿಯಂತ್ರಣ ವ್ಯವಸ್ಥೆ - ಗೌಲವೆಯಾ . ಶಾತವಾಹನರ ಪ್ರಮುಖ ತೆರಿಗೆಗಳು - ದೆಯ , ಮೆಯ , ಭಾಗ , ಕರ ರಾಜನನನ್ನು ತಾಯಿಯ ಹೆಸರಿನಿಂದ ಕರೆಯುವ ವಾಡಿಕೆಯನ್ನು ಇಟ್ಟು ಕೊಂಡಿದ್ದ ಅರಸರು - ಶಾತವಾಹನರು . ಗ್ರೀಕರು ಹಾಗೂ ಶಕರಿಂದ ಪ್ರಭಾವಿತವಾದ ಶಾತವಾಹನರು ಟಂಕಿಸಿದ ಬೆಳ್ಳಿಯ ನಾಣ್ಯದ ಹೆಸರು - ಕಾರ್ಪಣ. ಶಾತವಾಹನರ ರಾಜಕುಮಾರ ಗುರುವಾಗಿದ್ದ ಜೈನರು - ಕಂದಕಂದಚಾರ್ಯ . “ ಚತ್ಸುಸ್ಸ ಮಯ ಸಮುದ್ದರಣ “ ಎಂಬ ಕೀರ್ತಿಗೆ ಪಾತ್ರರಾದ ಅರಸರು - ಶಾತವಾಹನರು . ತಾಳಗುಂದ ಅಗ್ರಹಾರದ ನಿರ್ಮಾತೃಗಳು - ಶಾತವಾಹನರು . ಶಾತವಾಹನರ ಕಾಲದಲ್ಲಿ ಪ್ರಸಿದ್ದಿಯಲ್ಲಿದ್ದ ಲಿಪಿ - ಬ್ರಾಹ್ಮಿಲಿಪಿ . ಜನಪ್ರಿಯತೆಯಲ್ಲಿ ರಾಮಯಾಣ ಮತ್ತು ಮಹಾ ಭಾರತಗಳಿಗೆ ಸರಿಸಮಾನವಾಗಿ ನಿಲ್ಲ ಬಲ್ಲ ಶಾತವಾಹನರ ಕಾಲದ ಕೃತಿ - ಬೃಹತ್ ಕಥಾ . “ಕಾತಂತ್ರ “ ವ್ಯಾಕರಣ ಗ್ರಂಥದ ಕರ್ತೃ - ಸರ್ವಧರ್ಮ. ಶಾತವಾಹನರ ಕಾಲದ ಚೈತ್ಯಗಳು ವಿಹಾರಗಳು ಹಾಗೂ ಸ್ಥೂಪಗಳನ್ನು “ಶಿಲಾವಾಸ್ತುಶಿಲ್ಪ “ ಎಂದು ಕರೆದ ಯಾಂತ್ರಿಕ - ಪೆರ್ಸಿ ಬ್ರೌನ್ . ಚೈತ್ಯ ಎಂದರೆ - ಪ್ರಾರ್ಥನಾ ಗೃಹ . ಶಾತವಾಹನರ ಕಾಲದಲ್ಲಿ ಉಗಮವಾದ ಚಿತ್ರಕಲಾ ಶೈಲಿ - ಅಜಾಂತ ಚಿತ್ರ ಕಲಾ ಶೈಲಿ . ವಿಹಾರ ಎಂದರೆ - ಬೌದ್ಧ ಬಿಕ್ಷುಗಳ ನಿವಾಸ . ಸ್ಥೂಪ ಎಂದರೆ - ಬುದ್ಧನ ಯಾವುದಾದರೊಂದು ಅವಶೇಷಗಳ ಮೇಲೆ ನಿರ್ಮಾಣವಾದ ವೃತ್ತಾಕಾರದ ನಿರ್ಮಾಣ . ಸಿಮುಖನು ಯಾವ ಸಂತತಿಯ ದೊರೆ, ಯಾರನ್ನು ಸೋಲಿಸಿ ಸಾಮ್ರಾಜ್ಯ ಸ್ಥಾಪಿಸಿದ -ಕಣ್ವ ಸಂತತಿಯ ಕೊನೆಯ ಅರಸ , ಸುಶರ್ಮ. ಶಾತವಾಹನರು ಈ ಜಾತಿಗೆ ಸೇರಿದವರು - ಬ್ರಾಹ್ಮಣ. ಶಾತವಾಹನರ ಮೂಲದ ಕುರಿತು ಮಾಹಿತಿ ನೀಡಿರುವ ಪುರಾಣಗಳು - ಮತ್ಸ್ಯ ಪುರಾಣ, ವಿಷ್ಣು ಪುರಾಣ. ಶಾತವಾಹನರ ಕೊನೆಯ ಪ್ರಮುಖ ದೊರೆ - ಯಜ್ಞಶ್ರೀ ಶಾತಕರ್ಣಿ. ಶಾತವಾಹನರ ಕೊನೆಯ ದೊರೆ - ಎರಡನೇ ಪುಲಿಮಾಯಿ. ಸಿಮುಖನ ಆರಂಭದ ರಾಜಧಾನಿ - ಶ್ರೀ ಕಾಕುಲಂ. ಡಾ, ಭಂಡಾರ್ಕರ್ ರವರ ಪ್ರಕಾರ ಆಂಧ್ರದಲ್ಲಿನ ಶಾತವಾಹನರ ರಾಜಧಾನಿ - ಧಾನ್ಯಕಟಿಕಾ /ಧರಣಿಕೋಟೆ. ಶಾತವಾಹನರ ಸಾಹಿತಿ ದೊರೆ - ಹಾಲ. ದಖ್ಖನ್ ಭಾರತದಲ್ಲಿ ಮೊದಲು ನಾಣ್ಯಗಳನ್ನು ಟಂಕಿಸಿದ ಮನೆತನ - ಶಾತವಾಹನ. ಪ್ರೇಷ ಎಂಬ ಕೃತಿಯ ಕರ್ತೃ - ದ್ವಾದಸನ. ದಿ ಜಿಯೋಗ್ರಫಿ ಕೃತಿಯ ಕರ್ತೃ - ಟಾಲೆಮಿ. ಶಾತವಾಹನರ ಕುಲ ,ಯಶಸ್ಸು ಪ್ತತಿಷ್ಠಾಪನಾಕಾರ ಎಂಬ ಬಿರುದನ್ನು ಹೊಂದಿದ್ದ ದೊರೆ,- ಗೌತಮೀಪುತ್ರಶಾತಕರ್ಣಿ. ದಕ್ಷಿಣ ಪತಾಪತಿ ಎಂಬ ಬಿರುದನ್ನು ಹೊಂದಿದ್ದ ದೊರೆ - ೧ನೇ ಶಾತಕರ್ಣಿ. ಇವರ ಮೊದಲ ಆಡಳಿತ ವಿಭಾಗ - ಆಹಾರ /ಪ್ರಾಂತ್ಯ. ಆಹಾರವನ್ನು ನೋಡಿಕೊಳ್ಳುತ್ತಿದ್ದವರು - ಅಮಾತ್ಯ. ಶಾತವಾಹನರ ಅತ್ಯಂತ ಕಿರಿಯ ಆಡಳಿತ ಘಟಕ - ಗ್ರಾಮ. ಇವರ ಕಾಲದ ಮುಖ್ಯ ಬಂದರುಗಳು - ಕಲ್ಯಾಣ, ಸೋಪಾರ, ಬಲಿಗಜ ,ಠಣಕ, ವಿಹಾರವನ್ನು ಈ ಹೆಸರಿನಿಂದ ಕೆರೆಯುತ್ತಿದ್ದರು - ಸಂಘಾರಾಮ. ಕಾರ್ಲೇಯ ಚೈತ್ಯದ ನಿರ್ಮಾತೃ - ಭೂತಪಾಲಶೆಟ್ಟಿ ಆಂಧ್ರದ ನಾಗಾರ್ಜುನಕೊಂಡದ ಪ್ರಸ್ತುತ ಹೆಸರು - ವಿಜಯಪುರಿ. ಶಾತವಾಹನ ಸಾಮ್ರಾಜ್ಯದ ಸ್ಥಾಪನೆಯಾದ ವರ್ಷ - ಕ್ರಿ.ಪೂ. ೨೩೫. ಶಾತವಾಹನರ ನಂತರ ದ.ಭಾರತದಲ್ಲಿ ಪ್ರಸಿದ್ಧರಾದವರು - ಕದಂಬರು. ಇವರು ಈ ಧರ್ಮವನ್ನು ಅನುಸರಿಸಿದರು - ವೈದಿಕ ಧರ್ಮ. ಈ ಕಾಲದ ರಾಜ್ಯಗಳು ಇವರ ಆಡಳಿತದಲ್ಲಿತ್ತು - ಅಮಾತ್ಯ. ಮೊದಲ ಶಾತಕರ್ಣಿಯ ಪತ್ನಿಯ ಹೆಸರು - ನಾಗವಿಕ. ಮೊದಲ ಶಾತಕರ್ಣಿಯೊಂದಿಗೆ ಯುದ್ಧ ಮಾಡಿದ ಕಳಿಂಗ ಅರಸ - ಖಾರವೇಲ. ಗೌತಮೀಪುತ್ರ ಶಾತಕರ್ಣಿ ಶಾತವಾಹನರ - 23 ನೇ ಅರಸ. ಏಕಬ್ರಾಹ್ಮಣ , ಆಗಮನಿಲಯ ,ಏಕಶೂರ ,ಏಕಧನುರಾರ್ಧ ಎಂಬ ಬಿರುದನ್ನು ಹೊಂದಿದ ಶಾತವಾಹನ ದೊರೆ.- ಗೌತಮೀಪುತ್ರ ಶಾತಕರ್ಣಿ. ಕಾಂಬೋಜ ರಾಜ್ಯವನ್ನು ಸ್ಥಾಪಿಸಿದ ದೊರೆ - ಕೌಂಡಿನ್ಯ. ಮೌಕದಾನಿ ಶಾಸನದ ಕರ್ತೃ - ಮೂರನೇ ಪುಲುಮಾರು. ಇವರ ಕಾಲದಲ್ಲಿ ಚಿನ್ನದ ನಾಣ್ಯವನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಸುವರ್ಣ. ಕಾಮಸೂತ್ರದ ಕರ್ತೃ - ವಾತ್ಸಾಯನ ( ಸಂಸ್ಕೃತ ಕವಿ). ಪ್ರಾಕೃತ ಭಾಷಾ ಇತಿಹಾಸದಲ್ಲಿ ಇವರ ಕಾಲ ಸುವರ್ಣಯುಗವಾಗಿದೆ. - ಶಾತವಾಹನರ. ಇವರ ಕಾಲದ ಸೇನಾ ಶಿಬಿರಗಳನ್ನು ಈ ಹೆಸರಿನಿಂದ ಕರೆಯಲಾಗಿದೆ. - ಕಟಕ ಇವರ ಕಾಲದ ಪ್ರಮುಖ ಪ್ರಯಾಣಸಾಧನ - ಎತ್ತಿನಗಾಡಿ. ಈ ಕಾಲದಲ್ಲಿ ರಾಜ್ಯಾಡಳಿತದಲ್ಲಿ ಭಾಗವಹಿಸಿದ ಮಹಿಳೆಯರು -ಗೌತಮೀಬಾಲಶ್ರೀ, ನಾಗನಿಕ. ‘The Guide to Geography’ ಕೃತಿಯ ಕರ್ತೃ - ಟಾಲೆಮಿ. ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಭೂಮಿಯನ್ನು ದಾನವಾಗಿ ನೀಡಿದ ವಂಶ -ಶಾತವಾಹನರು. ಶಕಯವನ ಪಲ್ಲವ ನಿಸೂಧನ ಎಂಬ ಬಿರುದನ್ನು ಹೊಂದಿದವರು - ಗೌತಮೀಪುತ್ರ ಶಾತಕರ್ಣಿ. ಅಶೋಕನ ಈ ಶಾಸನದಲ್ಲಿ ಶಾತವಾಹನರು ಆಂಧ್ರ ಭೃತ್ಯರು ಎಂದು ಕರೆದಿದೆ. – 12 ನೇ ಶಾತವಾಹನ. ಅಶೋಕನ ಸಮಕಾಲೀನ ಶಾತವಾಹನ ದೊರೆ. - ಕೃಷಣ. ಇವರ ಕಾಲದ ಗ್ರಾಮಾಧಿಕಾರಿಗಳನ್ನು ಈ ಹೆಸರಿನಿಂದ ಕೆರಯುತ್ತಿದ್ದರು - ಮಹಾ ಆರ್ಯಕರು. ಶಾತವಾಹನ ಕಾಲದ ಉಗ್ರಾಣಾಧಿಕಾರಿಗಳು -ಭಂಡಾರಕರು. ಇವರ ಕಾಲದ ಹಣಕಾಸಿನ ಆಡಳಿತಾದಿಕಾರಿಗಳು - ಹಿರಣ್ಯಕರು. ಭೂ ದಾಖಲಾತಿ ಅಧಿಕಾರಿಗಳು -ನಿಬಂಧಕರು. ಇವರ ಸಮಾಜದಲ್ಲಿ ವಿಜೋತ್ತಮರೆಂದು ಕರೆಯಲ್ಪಡುತ್ತಿದ್ದವರು - ಬ್ರಾಹ್ಮಣರು . ವರ್ಣ ಸಂತರ ಎಂದರೆ - ಶೂದ್ರರ ನಡುವಿನ ವಿವಾಹ ಸಂಬಧ ಶಾತವಾಹನರ ಚಿತ್ರಕಲೆಗೆ ಬೆಳಕು ಚೆಲ್ಲುವ ಕೃತಿ - ಕುಲ್ಲವಗ
ಕುನಿಂದ ರಾಜ್ಯಸಂಪಾದಿಸಿ
ಈ ಹಿಮಾಲಯದ ತಪ್ಪಲಿನ ರಾಜವಂಶವು, ಸಣ್ಣದಾಗಿದ್ದರೂ, ಸುಮಾರು ೫೦೦ ವರ್ಷ ರಾಜ್ಯಭಾರ ಮಾಡಿ, ಉಲ್ಲೇಖನಾರ್ಹವಾಗಿದೆ. ಆಗಿನ ಅನೇಕ ಸಣ್ಣ ಪುಟ್ಟ ರಾಜ್ಯಗಳಂತೆ ಇದೂ ಸಹ, ಮಹಾಜನಪದಗಳ ಸಮಕಾಲೀನ ರಾಜ್ಯಗಳ ಸಂಬಂಧಿಯಾಗಿತ್ತು. ಈ ರಾಜ್ಯವು ಕ್ರಿ.ಪೂ ೨ನೆಯ ಶತಮಾನದಿಂದ ಕ್ರಿ.ಶ. ೩ ನೆಯ ಶತಮಾನದವರೆಗೆ ಆಳಿತು.
ಪಾಂಡ್ಯರು, ಚೋಳರು ಮತ್ತು ಚೇರರುಸಂಪಾದಿಸಿ
ಪಾಂಡ್ಯರು, ಚೋಳರು ಮತ್ತು ಚೇರರು ಭಾರತ ಉಪಖಂಡದ ದಕ್ಷಿಣ ತುದಿಯಲ್ಲಿ ನೆಲೆಯೂರಿದ್ದ ಮೂರು ರಾಜ್ಯಗಳು., ಪಶ್ಚಿಮ ಮತ್ತು ಮಧ್ಯ ಏಶಿಯಾದ ಕಡೆಯ ಸತತವಾದ ದಾಳಿಗಳಿಂದ ಉತ್ತರ ಭಾರತದ ಬೃಹತ್ ಸಾಮ್ರಾಜ್ಯಗಳು ಶಿಥಿಲವಾಗುತ್ತಿದ್ದಂತೆ, ಭಾರತದ ಕಲಾ ಮತ್ತು ಸಂಸ್ಕೃತಿಯ ಕೇಂದ್ರಸ್ಥಾನವು, ಫಲವತ್ತಾದ ಇಂಡೋ-ಗಂಗಾ ಪ್ರಸ್ಥಭೂಮಿಯಿಂದ, ಈ ಮೂರು ರಾಜ್ಯಗಳತ್ತ ಸರಿಯಲು ಮೊದಲಾಯಿತು. ಮೊದ ಮೊದಲು ಪ್ರಬಲರಾಗಿಲ್ಲದಿದ್ದರೂ, ತಮ್ಮತಮ್ಮಲ್ಲೇ ಕಚ್ಚಾಡುತ್ತಿದ್ದರೂ, ಈ ರಾಜರುಗಳು ಮುಂದೆ ಆಗ್ನೇಯ ಏಷ್ಯಾದಲ್ಲಿಯೂ ತಮ್ಮ ರಾಜ್ಯವನ್ನು ಸ್ಥಾಪಿಸಿದರು.
ಕುಶಾನರ ಸಾಮ್ರಾಜ್ಯಸಂಪಾದಿಸಿ



ಮಹಾಯಾನ ಬೌದ್ಧಧರ್ಮೀಯರು. ಎಡದಿಂದ ಬಲಕ್ಕೆ, ಕುಶಾನ ಭಕ್ತ, ಬೋಧಿಸತ್ತ್ವ ಮೈತ್ರೇಯ, ಬುದ್ಧ, ಬೋಧಿಸತ್ತ್ವ ಅವಲೋಕಿತೇಶ್ವರ, ಮತ್ತು ಬೌದ್ಧ ಗುರು, ಗಾಂಧಾರ.
ಕುಶಾನರ ಸಾಮ್ರಾಜ್ಯವು (ಕ್ರಿ.ಶ. ೧ರಿಂದ ೩ನೆಯ ಶತಮಾನ ) ತನ್ನ ಉತ್ತುಂಗ ಸ್ಥಿತಿಯಲ್ಲಿ, ಸುಮಾರು ಕ್ರಿ.ಶ. ೧೦೫ - ೨೫೦ರ ಕಾಲದಲ್ಲಿ, ತಾಜಿಕಿಸ್ತಾನದಿಂದ ಕ್ಯಾಸ್ಪಿಯನ್ ಸಮುದ್ರ ,ಅಫ್ಘಾನಿಸ್ತಾನ ಹಾಗೂ ಗಂಗಾನದಿಯ ಕಣಿವೆಯವರೆಗೂ ಹಬ್ಬಿತ್ತು. ಈ ಸಾಮ್ರಾಜ್ಯವನ್ನು ಈಗಿನ ಚೀನಾದ ಪೂರ್ವ ತುರ್ಕಿಸ್ತಾನದ ನಿವಾಸಿಗಳಾಗಿದ್ದ ಟೋಚಾರಿಯನ್ನರು ಸ್ಥಾಪಿಸಿದರೂ, ಅವರ ಸಾಮ್ರಾಜ್ಯದ ಸಂಸ್ಕೃತಿ ಉತ್ತರಭಾರತದಿಂದ ಪ್ರಭಾವಿತವಾಗಿತ್ತು. ರೋಮ್, ಸಸಾನೀಯ ಪರ್ಷಿಯಾ ಮತ್ತು ಚೀನಾದೊಂದಿಗೆ ಸೌಹಾರ್ದ ಸಂಬಂಧವಿಟ್ಟುಕೊಂಡು , ಈ ಸಾಮ್ರಾಜ್ಯವು ಅನೇಕ ಶತಮಾನಗಳವರೆಗೆ ಪೂರ್ವ ಮತ್ತು ಪಶ್ಚಿಮ ಜಗತ್ತಿನ ಕೊಡುಕೊಳ್ಳುವಿಕೆಯ ಕೇಂದ್ರವಾಗಿದ್ದು, ಚೀನಾ ದೇಶದೊಂದಿಗಿನ ವ್ಯವಹಾರದ ಮೂಲಕ , ಅಲ್ಲಿ ಬೌದ್ಧ ಧರ್ಮ ಬೇರುಬಿಡಲು ಕಾರಣವಾಯಿತು.
ಪಶ್ಚಿಮ ಕ್ಷತ್ರಪರುಸಂಪಾದಿಸಿ
ಪಶ್ಚಿಮ ಕ್ಷತ್ರಪರು ( ಅಥವಾ ಸತ್ರಪರು) , (ಕ್ರಿ.ಶ. ೩೫-೪೦೫ ) ಶಕ ವಂಶದವರಾಗಿದ್ದು ಭಾರತದ ಪಶ್ಚಿಮ ಮತ್ತು ಮಧ್ಯಭಾಗವನ್ನು ಆಳುತ್ತಿದ್ದರು ( ಸೌರಾಷ್ಟ್ರ ಮತ್ತು ಮಾಳವ : ಇಂದಿನ ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಮಧ್ಯ ಪ್ರದೇಶ ರಾಜ್ಯಗಳು). ಉತ್ತರಭಾರತವನ್ನು ಆಳುತ್ತಿದ್ದ ಕುಶಾನರು ಹಾಗೂ ಮಧ್ಯಭಾರತದ ಶಾತವಾಹನರು (ಆಂಧ್ರರು) ಇವರ ಸಮಕಾಲೀನರಾಗಿದ್ದರು. ಸುಮಾರು ೩೫೦ ವರ್ಷಗಳ ಇವರ ಆಳ್ವಿಕೆಯಲ್ಲಿ ೨೭ ಸ್ವತಂತ್ರ ರಾಜರುಗಳು ಆಗಿಹೋದರು. ಕ್ಷತ್ರಪ ಶಬ್ದದ ಮೂಲ ಸತ್ರಪ ಅಥವಾ ಪರ್ಷಿಯನ್ ಕ್ಸತ್ರಪವನ್ ಆಗಿದ್ದು, ಇದರರ್ಥ ಪ್ರಾಂತ ಮುಖಂಡ ಅಥವಾ ರಾಜಪ್ರತಿನಿಧಿ ಎಂದಾಗುತ್ತದೆ.
ಗುಪ್ತರ ಸಾಮ್ರಾಜ್ಯಸಂಪಾದಿಸಿ



ಕ್ರಿ.ಪೂ. ೪೦೦ರ ಕಾಲದಲ್ಲಿ ಗುಪ್ತ ಸಾಮ್ರಾಜ್ಯ (ಸಾಮಂತ ರಾಜ್ಯಗಳನ್ನು ಹೊರತುಪಡಿಸಿ)


ಗುಪ್ತರ ಕಾಲದ ನಾಣ್ಯಗಳು


ಗುಪ್ತರ ಕಾಲದಲ್ಲಿನ ಪ್ರಖ್ಯಾತ ಅಜಂತಾ ಗುಹೆಗಳಲ್ಲಿನ ಒಂದು ಚಿತ್ರ
ಕ್ರಿ.ಶ. ೪ರಿಂದ ೫ನೆಯ ಶತಮಾನದಲ್ಲಿ , ಗುಪ್ತರ ಆಡಳಿತದಲ್ಲಿ, ಸಂಪೂರ್ಣ ಉತ್ತರಭಾರತವು ಒಂದುಗೂಡಿತು. ಸುವರ್ಣ ಯುಗವೆಂದೇ ಹೆಸರಾದ ಈ ಕಾಲದಲ್ಲಿ, ಹಿಂದೂ ಸಂಸ್ಕೃತಿ, ವಿಜ್ಞಾನ ಮತ್ತು ರಾಜನೈತಿಕ ಆಡಳಿತಗಳು ಪ್ರವರ್ಧಮಾನವಾದವು. ಆರನೆಯ ಶತಮಾನದಲ್ಲಿ ಗುಪ್ತರ ಸಾಮ್ರಾಜ್ಯದ ಪತನದೊಂದಿಗೆ, ಭಾರತ ಮತ್ತೆ ಅನೇಕ ರಾಜರುಗಳಲ್ಲಿ ಹರಿದುಹಂಚಿ ಹೋಯಿತು. ಗುಪ್ತರ ಮೂಲ ಅಸ್ಪಷ್ಟವಾಗಿದ್ದರೂ, ಚೀನಾದ ಪ್ರವಾಸಿ ಇ ತ್ಸಿಂಗನ ದಾಖಲೆಗಳಲ್ಲಿ ಮಗಧದ ಗುಪ್ತ ರಾಜ್ಯದ ಬಗ್ಯೆ ಮೊದಲ ಕರುಹುಗಳು ಕಾಣಬರುತ್ತವೆ. ಪುರಾಣಗಳು ಈ ಕಾಲದಲ್ಲಿಯೇ ಬರೆಯಲ್ಪಟ್ಟವೆಂದು ನಂಬಲಾಗಿದೆ. ಮಧ್ಯ ಏಶಿಯಾದ ಹೂಣರ ಧಾಳಿಯಿಂದ ಗುಪ್ತರ ಸಾಮ್ರಾಜ್ಯ ಪತನವಾಯಿತು. ಇದರ ನಂತರವೂ, ಗುಪ್ತ ಕುಲದ ಸೋದರಸಂಬಂಧಿ ವಂಶವೊಂದು ಮಗಧವನ್ನು ಆಳುತ್ತಿದ್ದು, ಮುಂದೆ ಗುಪ್ತ ಸಾಮ್ರಾಜ್ಯದಷ್ಟೇ ವಿಶಾಲವಾದ ರಾಜ್ಯವನ್ನು ಕಟ್ಟಿ ಆಳಿದ , ಹರ್ಷ ವರ್ಧನನಿಂದ ಸೋಲಿಸಲ್ಪಟ್ಟು ಅವನತಿ ಹೊಂದಿತು.
ಗುಪ್ತ ಸಾಮ್ರಾಜ್ಯ
ಸಾಮ್ರಾಟರು
ಆಳ್ವಿಕೆ ಆರಂಭ
ಆಳ್ವಿಕೆ ಅಂತ್ಯ
ಚಂದ್ರ ಗುಪ್ತ I ೩೧೯ ೩೩೫
ಸಮುದ್ರ ಗುಪ್ತ ೩೩೫ ೩೮೦
ಚಂದ್ರ ಗುಪ್ತ II ೩೮೦ ೪೧೫
ಕುಮಾರ ಗುಪ್ತ I ೪೧೫ ೪೪೫
ಸ್ಕಂದ ಗುಪ್ತ ೪೪೫ ೪೮೦
ಬಿಳಿ ಹೂಣರ ಆಕ್ರಮಣಸಂಪಾದಿಸಿ
ಬಿಳಿ ಹೂಣರು ಐದನೆಯ ಶತಮಾನದ ಮೊದಲ ಭಾಗದಲ್ಲಿ ಆಫ್ಘಾನಿಸ್ತಾನದಲ್ಲಿ ನೆಲೆಯೂರಿ ಬಾಮಿಯಾನ್ ನಲ್ಲಿ ರಾಜಧಾನಿಯನ್ನು ಸ್ಥಾಪಿಸಿದರು. ಗುಪ್ತ ಸಾಮ್ರಾಜ್ಯದ ಪತನಕ್ಕೆ ಕಾರಣವಾಗಿ ಉತ್ತರ ಭಾರತದ ಸುವರ್ಣ ಅಧ್ಯಾಯಕ್ಕೆ ನಾಂದಿ ಹಾಡಿದರು. ಆದರೆ ದಖ್ಖಣ ಮತ್ತು ದಕ್ಷಿಣ ಭಾರತದಲ್ಲಿ ಈ ಬದಲಾವಣೆಯ ಪ್ರಭಾವ ಕಾಣಿಸಲಿಲ್ಲ. ಆರನೆಯ ಶತಮಾನದ ನಂತರ ಹೂಣರ ಬಗ್ಗೆ ಬಹಳಷ್ಟು ತಿಳಿದಿಲ್ಲ. ಕೆಲವು ಚರಿತ್ರಾಕಾರರ ಪ್ರಕಾರ ಅಳಿದುಳಿದ ಹೂಣರು ಉತ್ತರ ಭಾರತದ ಜನರಲ್ಲಿ ಲೀನರಾದರು.
ಕಳಭ್ರರುಸಂಪಾದಿಸಿ
ದಕ್ಷಿಣ ಭಾರತದಲ್ಲಿ ಚೋಳರು,ಚೇರರು ಮತ್ತು ಪಾಂಡ್ಯರುಗಳ ಪ್ರಾಬಲ್ಯವನ್ನು, ಕೆಲಕಾಲ ಮುರಿದು, ರಾಜ್ಯಸ್ಥಾಪನೆ ಮಾಡಿದ ಬೌದ್ಧಧರ್ಮೀಯ ಕಳಭ್ರರು, ದಕ್ಷಿಣ ಭಾರತವನ್ನು ಆಳಿದ ಏಕಮೇವ ಬೌದ್ಧ ರಾಜವಂಶ ಎಂಬ ಹೆಸರಿಗೆ ಪಾತ್ರರಾಗಿದ್ದಾರೆ. ಕ್ರಿ.ಶ. ೩ ನೆಯ ಮತ್ತು ೬ನೆಯ ಶತಮಾನದ ನಡುವಿನ ಕಾಲದಲ್ಲಿ ಸಂಪೂರ್ಣ ದಕ್ಷಿಣ ಭಾರತವನ್ನು ಒಗ್ಗೂಡಿಸುವುದರಲ್ಲಿ ಕಳಭ್ರರು ಯಶಸ್ವಿಯಾದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ