ಗುರುವಾರ, ಏಪ್ರಿಲ್ 6, 2017

ಸಾಮಾನ್ಯ ಜ್ಞಾನ ಪ್ರಶ್ನೊತ್ತರಗಳು

೧) *ಇತ್ತೀಚಿನ ಬೆಳವಣಿಗೆಯಲ್ಲಿ ಕನ್ನಡದ ಮೊದಲ ಶಾಸನ ಎಂದು ಪರಿಗಣಿಸಲಾದ "ತಾಳಗುಂದದ" ಶಾಸನದ ಅವಧಿ ಯಾವುದು?*

ಕ್ರಿ. ಶ.
ಅ)೩೭೦- ೪೫೦
ಆ)೩೬೦ -೪೩೦
ಇ)೩೬೫- ೪೨೫
ಈ)೪೫೦- ೫೦೦

ಅ✅✅

೨) *ನೌಕಾಪಡೆಯ ಯಾವ ವಿಭಾಗ ಡಿಸೆಂಬರ್ ನಲ್ಲಿ ೫೦ ವರ್ಷ ಪೂರೈಸಿತು?*

ಅ)ಶಸ್ತ್ರ ವಿಭಾಗ
ಆ)ಜಲಾಂತರ್ಗಾಮಿ ವಿಭಾಗ
ಇ)ಯುದ್ಧ ವಿಭಾಗ
ಈ)ಯಾವುದೂ ಅಲ್ಲ

ಆ✅✅
*ಅರ್ಧ ಶತಮಾನದ ಸಂಭ್ರಮ*
ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ವಿಭಾಗವು ಈ ವರ್ಷದ ಡಿಸೆಂಬರ್ 8ರಂದು 50 ವರ್ಷಗಳನ್ನು ಪೂರೈಸಲಿದೆ. 1967ರ ಡಿಸೆಂಬರ್‌ 8ರಂದು ನೌಕಾಪಡೆಗೆ ಐಎನ್‌ಎಸ್‌ ಕಲ್ವರಿ ಜಲಾಂತರ್ಗಾಮಿಯನ್ನು ಹಸ್ತಾಂತರಿಸಲಾಯಿತು. ಅಂದಿನಿಂದ ಪ್ರತಿವರ್ಷ ಡಿಸೆಂಬರ್‌ 8ರಂದು ಜಲಾಂತರ್ಗಾಮಿ ದಿನ ಆಚರಿಸಲಾಗುತ್ತಿದೆ.

೩) *೨೦೧೭ ನ್ನು ವಿಶ್ವಸಂಸ್ಥೆ ಸುಸ್ಥಿರ ಪ್ರವಾಸೋದ್ಯಮ ವರ್ಷ ಎಂದು ಅಳವಡಿಸಿಕೊಂಡಿದೆ. ಇದರ ಅವಧಿ_______*

ಅ)ಜನವರಿಯಿಂದ ಡಿಸೆಂಬರ್
ಆ)ಜನವರಿ ೪ ರಿಂದ ಒಂದು ವರ್ಷ
ಇ)ಡಿಸೆಂಬರ್ ೪ ರಿಂದ ಒಂದು ವರ್ಷ
ಈ) ಜನವರಿ ೧ ರಿಂದ ಒಂದು ವರ್ಷ

ಇ✅✅

೪) *ಶಸ್ತ್ರಾಸ್ತ್ರಗಳ ಖರೀದಿಯಲ್ಲಿ ಭಾರತ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. ಹಾಗದರೆ ಮೊದಲ ಸ್ಥಾನದಲ್ಲಿರುವ ದೇಶ ಯಾವುದು?*(ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ)

ಅ)ಅಮೆರಿಕ
ಆ)ಪಾಕಿಸ್ತಾನ
ಇ)ಇರಾನ್
ಈ)ಸೌದಿ ಅರೇಬಿಯಾ

ಈ✅✅

೫) *ಹಸಿರುಮನೆ ಪರಿಣಾಮ ಕುರಿತು ಅಧ್ಯಯನ ನಡೆಸಲು ಮೂರು ದೇಶಗಳು ಉಪಗ್ರಹ ಕಳಿಸಿವೆ. ಯಾವುದು ಗುಂಪಿಗೆ ಸೇರುವುದಿಲ್ಲ?*

ಅ)ಅಮೆರಿಕ
ಆ)ರಷ್ಯಾ
ಇ)ಚೀನ
ಈ)ಜಪಾನ್

ಆ✅✅ ಇನ್ನೂ ಕಳಿಸಿಲ್ಲ

೬) *ಬೋಳವಾರ ಮಹಮ್ಮದ್ ಕುಂಞ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ?*

ಅ)ಪಾಪು ಗಾಂಧಿ
ಆ) ಸ್ವಾತಂತ್ರ್ಯ ದ ಓಟ
ಇ)ಸ್ವಾತಂತ್ರ್ಯ ದ ಹೋರಾಟ
ಇ)ತಟ್ಟು ಚಪ್ಪಾಳೆ ಪುಟ್ಟ ಮಗು

ಆ✅✅

೭) *೨೦೧೬ರ ಮೂರ್ತಿದೇವಿ ಪ್ರಶಸ್ತಿ ಜ್ಞಪಡೆದವರು_______*

ಅ)ವೀರೇಂದ್ರ ಕುಮಾರ್
ಆ)ಪದ್ಮಾ ಸಚ್ ದೇವ್
ಇ)ತಿರುಮಲೇಶ್
ಈ)ಸುನೀತಾ ಜೈನ್

ಅ✅✅
ಮಲಯಾಳಂ ಲೇಖಕ. ಐಮಾವಥ ಭೂಮಿಯಿಲ್ ಕೃತಿಗೆ.

೮) *ಡಿ.ಎಸ್. ಸಿ ಪ್ರಶಸ್ತಿಯನ್ನು ಪಡೆದವರು______*

ಅ)ಸಲ್ಮಾನ್ ರಶ್ದಿ
ಆ)ಚೇತನ್ ಭಗತ್
ಇ)ಅರುಂಧತಿ ರಾಯ್
ಈ)ದೆಬೊರಾ ಸ್ಮಿತ್

ಇ✅✅
ದಕ್ಷಿಣ ಏಷ್ಯನ್ ಸಾಹಿತ್ಯಕ್ಕೆ ನೀಡುವ ಪ್ರಶಸ್ತಿ. ಸ್ಲೀಪಿಂಗ್ ಆನ್ ಜ್ಯುಪಿಟರ್ ಕೃತಿಗೆ.

೯) *ನವದೆಹಲಿಯಲ್ಲಿ ನಡೆದ ೧ ನೇ ಬ್ರಿಕ್ಸ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದ ಚಿತ್ರ______*

ಅ)ರೂಮ್
ಆ)ತಿಥಿ
ಇ)ಬಾಹುಬಲಿ
ಈ)ಪಿಕು

ಆ✅✅

೧೦) *ಜೈಲುಗಳಲ್ಲಿ ಇರುವವರನ್ನು ಸುಶಿಕ್ಷಿತರನ್ನಾಗಿಸುವ ಶಿಕ್ಷಣ ಯೋಜನೆಯಾದ ಜೈಲು ಜ್ಯೋತಿ ಯೋಜನೆಯನ್ನು ಯಾವ ರಾಜ್ಯ ಜಾರಿಗೆ ತಂದಿತು?*

ಅ) ಉತ್ತರ ಪ್ರದೇಶಳೂ
ಆ)ಗುಜರಾತ್
ಇ)ಕೇರಳ
ಈ)ಬಿಹಾರ

ಇ✅✅

೧೧) " *ಹೃದಯ ಸಂವಾದ ಭಾಜ: ಸಹೃದಯಾ" ಹೇಳಿಕೆಯ ಅಲಂಕಾರ ಗ್ರಂಥ ಯಾವುದು?*

ಅ)ಕಾವ್ಯಾದರ್ಶಿ
ಆ)ಧ್ವನ್ಯಾಲೋಕ
ಇ)ನಾಟ್ಯಶಾಸ್ತ್ರ
ಈ)ಧ್ವನ್ಯಾಲೋಕ ಲೋಚನ

ಆ✅✅

೧೨) *"ಮಹೋನ್ನತಿ" ತತ್ವ ಪ್ರತಿಪಾದಕ_____*

ಅ)ಮ್ಯಾಥ್ಯೂ ಆರ್ನಾಲ್ಡ್
ಆ)ಟಿ.ಎಸ್. ಎಲಿಯಟ್
ಇ)ಎ.ಸಿ.ಬ್ರಾಡ್ಲೆ
ಈ)ಲಾಂಜಿನಸ್

ಈ✅✅

೧೩) *"ರಸವು ಅನುಕಾರ್ಯ ಮತ್ತು ಅನುಕರ್ತರಲ್ಲಿದೆ " ಎಂದವರು______*

ಅ)ವಾಮನ
ಆ)ಭರತ
ಇ)ಆನಂದವರ್ಧನ
ಈ)ಭಟ್ಟಲೊಲ್ಲಟ

ಈ✅✅

೧೪) *"ಗದ್ಯಾಶ್ರಮ ಗುರುತು ಪ್ರತೀತಿಯಂ ಕೆಯ್ ಕೊಂಡರ್ " ವಾಕ್ಯ __ ಪುಸ್ತಕದಲ್ಲಿ ಬರುತ್ತದೆ.*

ಅ)ಶಬ್ದಮಣಿದರ್ಪಣ
ಆ)ಕಾವ್ಯಾವಲೋಕನ
ಇ)ಪಂಪಭಾರತ
ಈ)ಕವಿರಾಜಮಾರ್ಗ

ಈ✅✅

೧೫) *ಕ್ಷಾತ್ರಯುಗ ,ಮತಪ್ರಚಾರಯುಗ , ಸಾರ್ವಜನಿಕ ಯುಗ - ಎಂದು ಸಾಹಿತ್ಯ ಚರಿತ್ರೆಯನ್ನು ವಿಂಗಡಣೆ ಮಾಡಿದವರು______*

ಅ)ಆರ್. ನರಸಿಂಹಾಚಾರ್
ಆ)ಡಿ.ನರಸಿಂಹಾಚಾರ್
ಇ)ಕಿಟೆಲ್
ಈ)ಕನ್ನಡವಕ್ಕಿ

ಈ✅✅

೧೬) *"ಸಕಲ ಲಕ್ಷಣವು ವಸ್ತುಕತೆ ವರ್ಣಕಕಿಂತು ವಿಕಳವಾದರೂ ದೋಷವಿಲ್ಲ" - ಎಂದವರು_____*

ಅ)ಭರತ
ಆ)ಕೇಶಿರಾಜ
ಇ)ನಾಗವರ್ಮ
ಈ)ರಾಘವಾಂಕ

ಈ✅✅

೭) *"ಜ್ವಾಲಾಮುಖಿಯ ಮೇಲೆ " ಕಾದಂಬರಿಯ ಪ್ರಕಾರ-_______*

ಅ)ನವ್ಯ
ಆ)ನವೋದಯ
ಇ)ಪ್ರಗತಿಶೀಲ
ಈ)‌ಬಂಡಾಯ

ಇ✅✅

೧೮) *ಭಾಷೆಯ ಉಗಮಕ್ಕೆ ಅನುರಣನವಾದವೇ ಕಾರಣವೆಂದವನು-_____*

ಅ)ಎಂ.ಮರಿಯಪ್ಪ ಭಟ್ಟ
ಆ)ಕೆ.ಕೆಂಪೇಗೌಡ
ಇ)ವಿಲಿಯಂ ಬ್ರೈಟ್
ಈ)ಮ್ಯಾಕ್ಸ್ ಮುಲ್ಲರ್

ಈ✅✅

೧೯) *"ಪಳಗನ್ನಡಂ ಪೊಲಗೆಡಸಿ ನುಡಿವರ್" __ ಕೃತಿಯಲ್ಲಿ ಕಂಡುಬರುತ್ತದೆ.*

ಅ)ಶಬ್ದಮಣಿದರ್ಪಣ
ಆ)ಪಂಪಭಾರತ
ಇ)ಕಾವ್ಯಾವಲೋಕನ
ಈ)ಅಭಿಧಾನ ವಸ್ತುಕೋಶ

ಅ✅✅

೨೦) *ಕನ್ನಡದಲ್ಲಿ ಮೊದಲು ದರ್ಶನ ವಿಮರ್ಶೆಯನ್ನು ಬರೆದವರು ಯಾರು?*

ಅ)ಎಚ್. ತಿಪ್ಪೇರುದ್ರಸ್ವಾಮಿ
ಆ)ಕುವೆಂಪು
ಇ)ದ.ರಾ.ಬೇಂದ್ರೆ
ಈ)ತೀ.ನಂ.ಶ್ರೀ

ಅ✅✅

೨೧) *"ಕಟ್ಟಿಯುಮೆನೋ ಮಾಲೆಗಾರನ ಪೊಸಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿ ಪೋಗದೇ" - ಈ ವಾಕ್ಯದ ಅಂತರಾರ್ಥ _*

ಅ)ಹೂಹಾರದ ಸುವಾಸನೆ
ಆ)ಸಹೃದಯನ ಅಗತ್ಯತೆ
ಇ)ಹೂ ಮುಡಿವ ಹೆಣ್ಣು ಮಕ್ಕಳ ಅಗತ್ಯ
ಈ) ಯಾವುದೂ ಅಲ್ಲ

ಆ✅✅
ಅಂದರೆ ಕವಿ ಈ ವಾಕ್ಯದಲ್ಲಿ ಕವಿ ಎಷ್ಟು ಒಳ್ಳೆಯ ಸಾಹಿತ್ಯ ರಚನೆ ಮಾಡಿದರೂ ಸಹ ಅದನ್ನು ಓದಿ ಆಸ್ವಾದಿಸುವವರು (ಸಹೃದಯ) ಇಲ್ಲದಿದ್ದರೆ ಆ ಸಾಹಿತ್ಯ ವ್ಯರ್ಥ ಎಂಬರ್ಥದಲ್ಲಿ ಹೂವಿನ ಮಾಲೆಗೆ ಹೋಲಿಸಿ ತಿಳಿಸಿದ್ದಾರೆ. ಅನಂತನಾಥಪುರಾಣದಲ್ಲಿ.

೨೨) *ದಂಡಿಯ ಕೃತಿಗಳಲ್ಲಿ ತಪ್ಪಾದುದು ಯಾವುದು?*

ಅ)ಕಾವ್ಯಾದರ್ಶ
ಆ)ದಶಕುಮಾರ ಚರಿತೆ
ಇ)ಕಾವ್ಯಾಲಂಕಾರ
ಈ)ಅವಂತೀ ಸುಂದರೀ

ಇ✅✅ ಭಾಮಹ ಬರೆದಿದ್ದಾನೆ. ದಂಡಿಯ ಇನ್ನೊಂದು ಕೃತಿ - ತ್ರಯೋದಂಡಿ ಪ್ರಬಂಧಾ: .

೨೩) *"ಕವಿಗಳನ್ನು ಆದರಿಸಿ , ಪೂಜಿಸಿ , ಉಡುಗೊರೆ ನೀಡಿ .ಆದರೆ ರಾಜ್ಯದಿಂದ ಹೊರಗೆ ಕಳುಹಿಸಿ"- ಎಂದವರು_____*

ಅ)ಕಾರ್ಲ್ ಮಾರ್ಕ್ಸ್
ಆ)ಪ್ಲೇಟೊ
ಇ)ಅರಿಸ್ಟಾಟಲ್‌
ಈ)ಸಾಕ್ರಟೀಸ್

ಆ✅✅
ಆದರ್ಶ ಪ್ರಜಾರಾಜ್ಯದಲ್ಲಿ ಕವಿಯನ್ನು ಹೊರದೂಡಬೆಕೆಂದ. ಜನ ಕವಿಗಳ ಕೃತಿಗಳನ್ನು ಓದುವುದರಲ್ಲಿ ಸಮಯ ವ್ಯರ್ಥ ಮಾಡುತ್ತಾರೆಂದು ಈ ಮಾತನ್ನು ಹೇಳಿದ.

೨೪) *ಹ್ಯಾಮ್ಲೆಟ್ ನಾಟಕವನ್ನು "ಈಡಿಪಸ್ ಕಾಂಪ್ಲೆಕ್ಸ್" ನೆಲೆಯಲ್ಲಿ ವಿಮರ್ಶಿಸಿದ ವಿಮರ್ಶಕ_____*

ಅ)ಸಿಗ್ಮಂಡ್ ಫ್ರಾಯ್ಡ್‌
ಆ)ಐ.ಎ.ರಿಚರ್ಡ್
ಇ)ಸಿ.ಜಿ.ಯೂಂಗ್
ಈ)ಅರ್ನೆಸ್ಟ್ ಜೋನ್ಸ್

ಈ✅✅
ಈಡಿಪಸ್ ಕಾಂಪ್ಲೆಕ್ಸ್ ಎಂಬುದು ಒಂದು ಮನ:ಶಾಸ್ತ್ರೀಯ ವಿಮರ್ಶೆಯ  ವಿಧಾನವಾಗಿದೆ.

೨೫) *ಸೋಫೋಕ್ಲೀಸನ ಏಜಾಕ್ಸ್ ನಾಟಕವನ್ನು ಹಲವರು ಕನ್ನಡೀಕರಿಸಿದ್ದಾರೆ. ಅದರಲ್ಲಿ ತಪ್ಪಾದುದು ಯಾವುದು?*

ಅ)ಬಿ.ಎಂ.ಶ್ರೀ- ಅಶ್ವತ್ಥಾಮನ್
ಆ) ಎಚ್.ಎಂ.ಚೆನ್ನಯ್ಯ - ಆಯಾಸ್
ಇ)ಕುವೆಂಪು- ಬಿರುಗಾಳಿ
ಈ)ಸುಜನಾ- ಏಜಾಕ್ಸ್

ಇ✅✅
ಇದನ್ನು ಕುವೆಂಪು ಅವರು ಶೇಕ್ಸ್‌ಪಿಯರ್ ನ ಹ್ಯಾಮ್ಲೆಟ್ ಪ್ರಭಾವದಿಂದ ರಚಿಸಿದರು.

1 ಕಾಮೆಂಟ್‌: