ಭಾನುವಾರ, ಏಪ್ರಿಲ್ 30, 2017

ಬಲೂಚಿಸ್ತಾನ ಗುಲಾಮಗಿರಿ

ಬಲೂಚಿಸ್ತಾನ್ ಜನತೆ ಯಾವತ್ತೂ ಭಾರತದ ಗುಲಾಮರಾಗುವುದಿಲ್ಲ: ಬಲೂಚಿಸ್ತಾನ್ ಸಿಎಂ

ಬೆರಳೆಣಿಕೆಯಷ್ಟು ದುಷ್ಟಶಕ್ತಿಗಳ ಆಣತಿಯಂತೆ ಬಲೂಚಿಸ್ಥಾನ ಪ್ರಾಂತ್ಯದ ಜನತೆ ಭಾರತದ "ಗುಲಾಮರಾಗಲು ಎಂದಿಗೂ ಒಪ್ಪುವುದಿಲ್ಲ ಎಂದು ಬಲೂಚಿಸ್ತಾನ್ ಮುಖ್ಯಮಂತ್ರಿ ಹೇಳಿದ್ದಾರೆ. 

ಬಲೂಚಿಸ್ತಾನದ ಅಂಜೇರಾ ಕಾಲತ್ ಪ್ರದೇಶದಲ್ಲಿ ಆಯೋಜಿಸಲಾದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ನವಾಬ್ ಸನಾಉಲ್ಲಾ ಝೆಹ್ರಿ, ಬಲೂಚಿಸ್ತಾನ ಜನತೆ ಸಹೋದರರಂತೆ ಪಾಕಿಸ್ತಾನದಲ್ಲಿಯೇ ಜೀವನ ಸಾಗಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಶತ್ರುಗಳ ಅಜೆಂಡಾವನ್ನು ಪ್ರಚಾರ ಮಾಡುತ್ತಿರುವ ಬೆರಳೆಣಿಕೆಯಷ್ಟು ದುಷ್ಟಶಕ್ತಿಗಳ ಆಣತಿಯಂತೆ ಬಲೂಚಿಸ್ತಾನ್ ಜನತೆ "ಭಾರತದ ಗುಲಾಮರಾಗುವುದಿಲ್ಲ. ವಿದೇಶದಲ್ಲಿ ಕುಳಿತಿರುವ ಕೆಲ ವಿಚ್ಚಿದ್ರಕಾರಿ ಶಕ್ತಿಗಳು, ತಮ್ಮ ಮಹಾಪಾತಕದ ಕೃತ್ಯಗಳಿಗಾಗಿ ನಮ್ಮ ಯುವಕರನ್ನು ಬಳಸಲು ಪ್ರಯತ್ನಿಸುತ್ತಿವೆ ಎಂದು ಕಿಡಿಕಾರಿದರು.

ಸಾಮಾಜಿಕ ಮಾಧ್ಯಮ ವಿಮೋಚನೆಗೆ ಮಾನದಂಡವಲ್ಲ. ವಾಸ್ತವವಾಗಿ, ಬಲೊಚ್ ಜನರು ಶ್ರೀಮಂತ ಮತ್ತು ಶಾಂತಿಯುತ ಬಯಸುತ್ತಾರೆ ಎಂದು ಬಲೂಚಿಸ್ತಾನ್ ಮುಖ್ಯಮಂತ್ರಿ ನವಾಬ್ ಸನಾಉಲ್ಲಾ ಝೆಹ್ರಿ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ