ಸೋಮವಾರ, ಏಪ್ರಿಲ್ 3, 2017

ಬರಪರಿಹಾರ ಕರ್ನಾಟಕ ರಾಜ್ಯಕ್ಕೆ ₹1235.52 ಕೋಟಿ

ಬರ ಪರಿಹಾರ: ರಾಜ್ಯಕ್ಕೆ ₹1235.52 ಕೋಟಿ ಬಿಡುಗಡೆ ಮಾಡಿದ ಕೇಂದ್ರ

ನವದೆಹಲಿ: ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿದೆ.

ಉನ್ನತ ಮಟ್ಟದ ಸಮಿತಿ ಅನುಮೋದನೆ ಮೇರೆಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಕರ್ನಾಟಕಕ್ಕೆ ₹1235.52 ಕೋಟಿ ಹಾಗೂ ತಮಿಳುನಾಡಿಗೆ ₹1712.10 ಕೋಟಿ ಬಿಡುಗಡೆ ಮಾಡಿದೆ.

ಎರಡೂ ರಾಜ್ಯಗಳು ಬರ ಹಾಗೂ ಚಂಡಮಾರುತದಿಂದ ಆಗಿರುವ ನಷ್ಟಕ್ಕೆ ಪರಿಹಾರ ಕೋರಿದ್ದವು. ಬರಪೀಡಿತ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

ಕರ್ನಾಟಕದ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಲ್ಲಿ ₹96.92 ಕೋಟಿ ಬಾಕಿ ಉಳಿದಿದೆ. ಈ ಹಿಂದೆ ಬಿಡುಗಡೆ ಮಾಡಲಾಗಿರುವ ₹450 ಕೋಟಿ ಹಾಗೂ ಈಗಿನ ₹1235.52 ಕೋಟಿ ಸೇರಿ ರಾಜ್ಯಕ್ಕೆ ಒಟ್ಟು ₹1782.44 ಕೋಟಿ ನೆರವು ಸಿಕ್ಕಂತಾಗಿದೆ.

ರಾಜ್ಯದ 9 ಅಣೆಕಟ್ಟೆಗಳಲ್ಲಿ ಶೇ.20ಕ್ಕಿಂತ ಕಡಿಮೆ ನೀರಿದ್ದು, ಬೆಂಗಳೂರು ಸೇರಿದಂತೆ ಹಲವು ಪ್ರದೇಶಗಳಿಗೆ ಕುಡಿಯುವ ನೀರಿನ ಸಮಸ್ಯೆ  ಎದುರಾಗುವ ಸಂಭವ ಹೆಚ್ಚಿದೆ. ಮಳೆಯ ಅಭಾವದಿಂದ ಈಗಾಗಲೇ 160–176 ತಾಲ್ಲೂಕುಗಳು ಬರಪೀಡಿತ ಎಂದು ಘೋಷಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ