ಸೋಮವಾರ, ಏಪ್ರಿಲ್ 3, 2017

ಮೀನುಗಾರರನ್ನು ಬಂಧಮುಕ್ತಗೊಳಿಸಿದ ಇರಾನ್

ಭಾರತದ 15 ಮಂದಿ ಮೀನುಗಾರರನ್ನು ಬಂಧಮುಕ್ತಗೊಳಿಸಿದ ಇರಾನ್

ನವದೆಹಲಿ: ಇರಾನ್‍ನಲ್ಲಿ ಬಂಧಿಯಾಗಿದ್ದ ಭಾರತದ ಮೂಲದ 15 ಮಂದಿ ಮೀನುಗಾರರನ್ನು ಇರಾನ್ ಸರ್ಕಾರ ಬಂಧಮುಕ್ತಗೊಳಿಸಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್  ಟ್ವೀಟ್ ಮಾಡಿದ್ದಾರೆ.

ತಮಿಳುನಾಡು ಮೂಲದ 15 ಮಂದಿ ಮೀನುಗಾರರನ್ನು ಮತ್ತು ಅವರ ಮೂರು ಬಹರೈನಿ ಬೋಟ್‍ಗಳನ್ನು ಇರಾನ್ ವಶಪಡಿಸಿಕೊಂಡಿತ್ತು. ಆ ಮೀನುಗಾರರನ್ನು ಇರಾನ್ ಬಂಧಮುಕ್ತಗೊಳಿಸಿದೆ ಎಂದು ಸುಷ್ಮಾ ಅವರು ಹೇಳಿದ್ದಾರೆ.

ಬಹರೈನ್‍ನಾಗಿ ಕೆಲಸ ಮಾಡುತ್ತಿದ್ದ ಈ ಮೀನುಗಾರರು ಸೆಪ್ಟೆಂಬರ್ 22ರಂದು ಅನುಮತಿ ಪಡೆಯದೆಯೇ ಇರಾನ್ ಸಮುದ್ರಭಾಗಕ್ಕೆ ಪ್ರವೇಶಿಸಿದ್ದರಿಂದ ಇರಾನ್ ಮೀನುಗಾರರನ್ನು ವಶ ಪಡಿಸಿಕೊಂಡಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ