ಭಾನುವಾರ, ಏಪ್ರಿಲ್ 9, 2017

ಗೋವಿನ ವಿಚಾರಕ್ಕೆ ಗಲಾಟೆ : 5 ರಾಜ್ಯಗಳಿಗೆ ಸುಪ್ರೀಂ ನೊಟೀಸ್

ಗೋವಿನ ವಿಚಾರಕ್ಕೆ ಗಲಾಟೆ: 5 ರಾಜ್ಯಗಳಿಗೆ ಸುಪ್ರೀಂ ನೊಟೀಸ್

ಹೊಸದಿಲ್ಲಿ: ಗೋರಕ್ಷಣೆಯ ಹೆಸರಿನಲ್ಲಿ ಹತ್ಯೆ ಮತ್ತು ಹಲ್ಲೆಗಳನ್ನು ಪ್ರಶ್ನಿಸಿ ಕರ್ನಾಟಕ ಸೇರಿದಂತೆ 5 ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನೊಟೀಸ್ ನೀಡಿದೆ.

ಬಿಜೆಪಿ ಆಳ್ವಿಕೆಯಲ್ಲಿರುವ ಉತ್ತರಪ್ರದೇಶ, ಗುಜರಾತ್, ರಾಜಸ್ಥಾನ್ ಮತ್ತು  ಜಾರ್ಖಂಡ್ ರಾಜ್ಯಗಳಿಗೆ ನೊಟೀಸ್ ನೀಡಲಾಗಿದೆ.

ಗೋಸಂರಕ್ಷಕರ ಮೇಲೆ ನಿಯಂತ್ರಣ ಹೇರಲು ಕೋರಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ಕೋರ್ಟ್ ನೊಟೀಸ್ ನೀಡಿದ್ದು, ಅರ್ಜಿಯ ಮುಂದಿನ ವಿಚಾರಣೆಯನ್ನು ಮೇ 3 ಕ್ಕೆ ಮುಂದೂಡಿದೆ.

ರಾಜಸ್ಥಾನದ ಆಲ್ವಾರ್ ಜಿಲ್ಲೆಯಲ್ಲಿ ಗೋಸಾಗಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಗೋರಕ್ಷರೆನಿಸಿಕೊಂಡವರ ಸಮೂಹವೊಂದು ಹೊಡೆದು ಸಾಯಿಸಿದೆ. ಕರ್ನಾಟಕದ ಉಡುಪಿ ಕೆಂಜೂರಿನಲ್ಲೂ ಗೋಸಾಗಾಟ ನಡೆಸುತ್ತಿದ್ದ ವೇಳೆ ಪ್ರವೀಣ್ ಪೂಜಾರಿ ಎಂಬಾತನ ಹತ್ಯೆ ನಡೆದಿತ್ತು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ