ಗುರುವಾರ, ಏಪ್ರಿಲ್ 6, 2017

ಸಿಂಧುಗೆ ಒಲಿದ "ಇಂಡಿಯಾ ಒಪನ್ ಸೂಪರ್ ಸೀರೀಜ್"

ದೇಶ ಹೆಮ್ಮೆ ಪಡುವ ಸಾಧನೆ ಮಾಡಿದ ಸಿಂಧು: ಅಮಿತಾಭ್ ಬಚ್ಚನ್, ಶಾರುಕ್‌ ಪ್ರಶಂಸೆ

ಮುಂಬೈ:  ‘ಇಂಡಿಯಾ ಓಪನ್ ಸೂಪರ್ ಸರಣಿ’ಯ ಕಿರೀಟ ಮುಡಿಗೇರಿಸಿಕೊಂಡ ಪಿ.ವಿ.ಸಿಂಧು ಅವರನ್ನು  ಬಾಲಿವುಡ್‌ ನಟರಾದ ಅಮಿತಾಭ್ ಬಚ್ಚನ್ ಹಾಗೂ ಶಾರುಕ್‌ಖಾನ್‌ ಅಭಿನಂದಿಸಿದ್ದಾರೆ.

ಸಿರಿಪೋರ್ಟ್‌ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಪಿ.ವಿ. ಸಿಂಧು ಅವರು 21–19, 21–16ರ ನೇರ ಗೇಮ್‌ಗಳಿಂದ ಸ್ಪೇನ್‌ನ ಕ್ಯಾರೊಲಿನಾ ಮರಿನ್ ಅವರ ವಿರುದ್ಧ ಜಯಿಸಿ, ಸರಣಿಯ ಕಿರೀಟ ಮುಡಿಗೇರಿಸಿಕೊಂಡು ಸಾಧನೆ ತೋರಿದ್ದಾರೆ.

2016ರ ರಿಯೊ ಒಲಿಂಪಿಕ್ಸ್‌ ಫೈನಲ್‌ನಲ್ಲಿ ಸ್ಪೇನ್‌ನ ಕ್ಯಾರೊಲಿನಾ ಮರಿನ್ ಎದುರು 21–19, 21–16 ಸೆಟ್‌ಗಳ ಅಂತರದಲ್ಲಿ ಪಿ.ವಿ. ಸಿಂಧು ಸೋಲು ಕಂಡಿದ್ದರು.

ಈ ಕುರಿತು ಟ್ವೀಟ್‌ ಮಾಡಿರುವ ಅಮಿತಾಭ್ ಬಚ್ಚನ್ ‘ಇಂಡಿಯಾ ಓಪನ್ ಸೂಪರ್ ಸರಣಿ’ ಕಿರೀಟ ಮುಡಿಗೇರಿಸಿಕೊಂಡ ಪಿ.ವಿ.
ಸಿಂಧು ಅವರಿಗೆ ದೊಡ್ಡ ಅಭಿನಂದನೆ. ರಿಯೊ ಒಲಂಪಿಕ್ಸ್ ಸೋಲಿನ ಕಹಿಯನ್ನು ಸಿಹಿಯಾಗಿ ತೀರಿಸಿಕೊಂಡಿದ್ದೀರಿ’ ಎಂದಿದ್ದಾರೆ.

‘ದೇಶ ಹೆಮ್ಮ ಪಡುವಂತೆ ಪಿ.ವಿ. ಸಿಂಧು ಉತ್ತಮ ಆಟವಾಡಿದ್ದಾರೆ’ ಎಂದು ಶಾರುಕ್‌ ಖಾನ್‌ ಟ್ವೀಟ್‌ ಮಾಡಿ ಅಭಿನಂದನೆ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ