ಭಾನುವಾರ, ಏಪ್ರಿಲ್ 23, 2017

ಕಲ್ಯಾಣಿ ಚಾಲುಕ್ಯರ ಇತಿಹಾಸ


*🌏ಕಲ್ಯಾಣಿ ಚಾಲುಕ್ಯರು (ಕ್ರಿ.ಶ 973-1200)🌏*

👏ಮೂಲಪುರುಷ ಎರಡನೇ ತೈಲಪ
👍ರಾಜಧಾನಿ ಕಲ್ಯಾಣಿ
ನಾಣ್ಯಗಳು ಗದ್ಯಾಣ, ಕಳಂಜ, ಕಾಸು, ಮಂಜರಿ, ಅಕ್ಕ
ಲಾಂಛನ ವರಾಹ
ಕೊನೆಯ ಅರಸ ನಾಲ್ಕನೆಯ ಸೋಮೇಶ್ವರ (ಕ್ರಿ.ಶ 1184-89)
ಪ್ರಮುಖ ಅರಸರು ಇರಿವ ಬೆಡಂಗ ಸತ್ಯಾಶ್ರಯ, ಮೊದಲನೆಯ ಸೋಮೇಶ್ವರ, ಎರಡನೇ ಸೋಮೇಶ್ವರ, ಆರನೇ ವಿಕ್ರಮಾದಿತ್ಯ, ಮೂರನೇ ಸೋಮೇಶ್ವರ

# ಕಲ್ಯಾಣಿ ಚಾಲುಕ್ಯರ ಆಳ್ವಿಕೆಯ ಕಾಲವು ಭಾರತದ ಚರಿತ್ರೆಯಲ್ಲಿ ಮಹತ್ವವಾದ ಸ್ಥಾನವನ್ನು ಪಡೆದಿದೆ.

# ರನ್ನ, ನಾಗಚಂದ್ರ, ದುರ್ಗಸಿಂಹ ಮುಂತಾದ ಕನ್ನಡ ಕವಿಗಳಿಗೆ ಇವರು ಆಶ್ರಯ ನೀಡಿದ್ದರು.

# ವಚನ ಸಾಹಿತ್ಯವು ಇದೇ ಕಾಲ ಖಂಡದಲ್ಲಿ ಬೆಳೆಯಿತು.

# ಕಲ್ಯಾಣಿ ಚಾಲುಕ್ಯ ಶೈಲಿಯ ದೇವಾಲಯಗಳು ಬಳಪದ ಕಲ್ಲಿನಿಂದ ರಚಿತವಾಗಿ ಕುಸುರಿನ ಕೆಲಸಕ್ಕೆ ಖ್ಯಾತವಾಗಿದೆ.

# ರಾಷ್ಟ್ರಕೂಟರ ಸಾಮಂತರಾಗಿದ್ದ ಎರಡನೇ ತೈಲಪನು ಕ್ರಿ.ಶ 973 ರಲ್ಲಿ ರಾಷ್ಟ್ರಕೂಟ ಅರಸು ಎರಡನೆಯ ಕರ್ಕನನ್ನು ಪರಾಭವಗೊಳಿಸಿ ಮಾನ್ಯಖೇಟವನ್ನು ಗೆದ್ದುಕೊಂಡನು. ಸತ್ಯಾಶ್ರಯ ಕ್ರಿ.ಶ 997 ರಲ್ಲಿ ಪಟ್ಟಕ್ಕೆ ಬಂದನು. ಈತನು ಕವಿ ರನ್ನನ ಆಶ್ರಯದಾತನಾಗಿದ್ದಾನೆ.

# ನಾಲ್ಕನೆಯ ವಿಕ್ರಮಾದಿತ್ಯ (1076-1126) ಕಲ್ಯಾಣದ ಚಾಲುಕ್ಯ ವಂಶದಲ್ಲಿಯೇ ಶ್ರೇಷ್ಠನಾದವನಾಗಿದ್ದನು. ಕ್ರಿ.ಶ 1076 ರರಲ್ಲಿ ಚಾಲುಕ್ಯ ವಿಕ್ರಮ ಶಕೆಯನ್ನು ಆರಂಭಿಸಿದನು. ಶ್ರೀಲಂಕೆಯ ಅರಸ ವಿಜಯ ಬಾಹುವಿನಲ್ಲಿ ತನ್ನ ರಾಯಭಾರಿಯನ್ನು ಕಳುಹಿಸಿ ಅವರೊಂದಿಗೆ ಸಂಪರ್ಕ ಹೊಂದಿದ್ದನು.

# "ಮಿತಾಕ್ಷರ" ಎಂಬ ಹಿಂದೂ ನ್ಯಾಯ ಗ್ರಂಥವನ್ನು ವಿಜ್ಞಾನೇಶ್ವರನು ರಚಿಸಿದನು. ಇವನು ರಾಜಾ ವಿಕ್ರಮಾದಿತ್ಯನನ್ನು ಕುರಿತು "ಕ್ಷಿತ ತಲದಲ್ಲಿ ಕಲ್ಯಾಣದಂಥ ನಗರ ಹಿಂದಿರಲಿಲ್ಲ, ಮುಂದಿರಲಾರದು, ವಿಕ್ರಮಾಂಕನಂಥ ದೊರೆಯನ್ನು ಕಂಡಿಲ್ಲ, ಕೇಳಿಲ್ಲ" ಎಂದು ಬರೆದಿದ್ದಾನೆ.

# ಮೂರನೇ ಸೋಮೇಶ್ವರ ಹಾಗೂ ಜಗದೇಕಮಲ್ಲರು ಪಟ್ಟಕ್ಕೆ ಬಂದನಂತರ ಅವನತಿ ಪ್ರಾರಂಭವಾಯಿತು. ಕಲಚೂರಿ ಬಿಜ್ಜಳನು ಪ್ರಬಲನಾಗಿ ಕಲ್ಯಾಣವನ್ನು ಆಕ್ರಮಿಸಿದನು.

# 22 ವರ್ಷ ಕಲಚೂರಿ ವಂಶವು ಕಲ್ಯಾಣದಿಂದ ಆಡಳಿತ ನಡೆಸಿತು.

# 1184 ರಲ್ಲಿ ಚಾಲುಕ್ಯ ನಾಲ್ಕನೆಯ ಸೋಮೇಶ್ವರನು ಮತ್ತೆ ಕಲಚೂರಿಗಳಿಂದ ಅಧಿಕಾರ ಪಡೆದರೂ ಕ್ರಿ.ಶ 1189 ರಲ್ಲಿ ಈ ವಂಶವು ಕೊನೆಯಾಯಿತು.

*🌐ಆಡಳಿತ :-*

# ಕಲ್ಯಾಣಿ ಚಾಲುಕ್ಯರು ವಂಶ ಪರಂಪರಾನುಗತ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿದ್ದರು. ಅವರು ಸಾಮ್ರಾಜ್ಯವನ್ನು ಮಂಡಲಗಳಾಗಿ ವಿಂಗಡಿಸಿದರು.

# ಪ್ರಾಂತ - ನೊಳಂಬವಾಡಿ 32000 ರ ಒಂದು ದೊಡ್ದ ಪ್ರಾಂತ್ಯವಾಗಿತ್ತು.

# ನಾಡು - ಬೆಳ್ವೊಲ 300 ಗ್ರಾಮಗಳ ಒಂದು ನಾಡಾಗಿತ್ತು.

# ಕಂಪಣ - ಮುಗುಂದ 30 ಗ್ರಾಮಗಳ ಒಂದು ಕಂಪಣವಾಗಿತ್ತು.

# ಕಂಪಣ ಎಂದರೇ ಗ್ರಾಮಗಳ ಒಂದು ಗುಂಪಾಗಿತ್ತು.

# ರಾಜ್ಯದ ಮೂಲಾದಾಯ ಭೂಕಂದಾಯ ’ಕಡಿತವೆರ್ಗಡೆ’ ಎಂಬ ಅಧಿಕಾರಿ ಭೂಕಂದಾಯದ ಲೆಕ್ಕವಿಡುವ ಮುಖ್ಯಸ್ಥರಾಗಿದ್ದರು. ಪರನಾಡಿನೊಂದಿಗೆ ವ್ಯಾಪಾರ ಅಭಿವೃದ್ಧಿ ಹೊಂದಿದ್ದು, ಹಲವಾರು ವೃತ್ತಿ ಸಂಘಗಳು ಕಾರ್ಯನಿರ್ವಹಿಸುತ್ತಿದ್ದವು.

*🌐ಸಾಹಿತ್ಯ:-*

ಬಳ್ಳಿಗಾವೆ, ಡಂಬಳ, ಕೋಳಿವಾಡ ಬೌದ್ದರ ಕೇಂದ್ರಗಳಾಗಿದ್ದವು. ಇವರು ಮತ, ದೇವಾಲಯ, ಅಗ್ರಹಾರ, ಬ್ರಹ್ಮಪುರಿ, ಘಟಿಕಸ್ಥಾನ ಇತ್ಯಾದಿಗಳಲ್ಲಿ ವಿದ್ಯಾ ಕೇಂದ್ರಗಳನ್ನು ಸ್ಥಾಪಿಸಿದರು.

*🌐ಚಾಲುಕ್ಯ್ರರ ಕಾಲದ ಕೃತಿಗಳು:-*

ಕವಿ ಕೃತಿಗಳು
ರನ್ನ ಗದಾಯುದ್ಧ (ಸಾಹಸಭೀಮ ವಿಜಯ), ಅಜಿತನಾಥ ಪುರಾಣ
2 ನೇ ಚಾವುಂಡರಾಯ ಲೋಕೋಪಕಾರ (ವಿಶ್ವಕೋಶ)
ದುರ್ಗಸಿಂಹ ಪಂಚತಂತ್ರ
ಕೀರ್ತಿವರ್ಮ ಗೋವೈದ್ಯ
ವಾದಿರಾಜ ಯಶೋಧರ ಚರಿತೆ (ಸಂಸ್ಕೃತ)
ಬಿಲ್ಹಣ ವಿಕ್ರಮಾಂಕದೇವ ಚರಿತಂ
ವಿಜ್ಞಾನೇಶ್ವರ ಮಿತಾಕ್ಷರ
3 ನೇ ಸೋಮೇಶ್ವರ ಅಭಿಲಾಷಿತಾರ್ಥ ಚಿಂತಾಮಣಿ (ಮನಸೋಲ್ಲಾಸ)

ಬಸವಣ್ಣ. ಅಕ್ಕಮಹಾದೇವಿ, ಅಲ್ಲಮಪ್ರಭು ವಚನಗಳನ್ನು ರಚಿಸಿದರು.

*🌐ಕಲೆ ಮತ್ತು ವಾಸ್ತುಶಿಲ್ಪ:-*

ಇವರು ಕಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ವೈಶ್ಯರ ಶೈಲಿಯು ಇವರ ಕಾಲದಲ್ಲಿ ಅಭಿವೃದ್ಧಿ ಹೊಂದಿತು. ಕಲ್ಯಾಣಿ ಚಾಲುಕ್ಯರ ದೇವಾಲಯಗಳ ಪ್ರವೇಶ ದ್ವಾರಗಳು ಸಾಮಾನ್ಯವಾಗಿ ಗರ್ಭಗೃಹದ ಮುಂಭಾಗದ ಬದಲು ಪಾರ್ಶ್ವದಲ್ಲಿವೆ. ಗರ್ಭಗುಡಿಗೆ ಪ್ರದಕ್ಷಿಣೆ ಪಥವಿಲ್ಲ. ನಕ್ಷತ್ರಾಕಾರದ ಗರ್ಭಗುಡಿಯನ್ನು ಹೊಂದಿವೆ.

*🌐ಪ್ರಮುಖ ದೇವಾಲಯಗಳು ಎಂದರೇ:-*

# ಗದುಗಿನ - ಸರಸ್ವತಿ ದೇವಾಲಯ, ತ್ರಿಕೂಟೇಶ್ವರ ದೇವಾಲಯ

# ಇಟಗಿಯ - ಮಹಾದೇವ ದೇವಾಲಯ
# ಲಕ್ಕುಂಡಿಯ - ಕಾಶಿವಿಶ್ವೇಶ್ವರ ಮಂದಿರ ಹಾಗೂ ಬ್ರಹ್ಮಜಿನಾಲಯ

# ಕುಕ್ಕನೂರಿನ - ಕಲ್ಮೇಶ್ವರ ದೇವಾಲಯ

# ಡಂಬಳದ - ದೊಡ್ಡಬಸಪ್ಪ ದೇವಾಲಯ

# ಕುರುವತ್ತಿಯ - ಮಲ್ಲಿಕಾರ್ಜುನ ಮಂದಿರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ